Homeಕರ್ನಾಟಕನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು

ನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು

- Advertisement -
- Advertisement -

ಭಾರತದ ಪುರಾಣಗಳಲ್ಲಿ ಹಾವುಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ನಾಗರ ಹಾವನ್ನು ದೇವರ ಅವತಾರವೆಂದು, ಅದರ ಹಣೆಯಲ್ಲಿ ವಜ್ರ (ನಾಗಮಣಿ) ಇದೆಯೆಂದು ಮತ್ತು ಅದನ್ನು ಆರಾಧನೆ ಮಾಡುವುದರಿಂದ ಹಲವಾರು ಕಾಯಿಲೆಗಳು ಗುಣವಾಗುತ್ತದೆ ಎಂದು ನಂಬಲಾಗುತ್ತದೆ.

ಒಮ್ಮೆ ಒಬ್ಬ ಹೆಂಗಸು ತನ್ನ ಮಗಳು, ಸುಂದರ ಮತ್ತು ಶ್ರೀಮಂತ ಹುಡಗನನ್ನು ಮದುವೆ ಆಗಬೇಕು, ಅದಕ್ಕಾಗಿ ಏನು ಮಾಡಬೇಕು ಎಂದು ಪುರೋಹಿತನ ಬಳಿ ಕೇಳುತ್ತಾಳೆ. ಆ ಪುರೋಹಿತ ಮಹಿಳೆಗೆ, “ನಿನ್ನ ಮಗಳು ನಾಗರ ಪಂಚಮಿಯ ದಿನ ಒಂದು ನಾಗರ ಹಾವನ್ನು ಮದುವೆ ಆಗಬೇಕು, ನಾಗರ ಪಂಚಮಿಯ ದಿನ ಮದುವೆ ಆದರೆ ಆ ಹಾವೇ ಒಂದು ಸುಂದರ ಯುವಕನಾಗಿ ಮತ್ತು ನಾಗಮಣಿ ಅದರ ಬಳಿ ಇರುವುದರಿಂದ ಶ್ರೀಮಂತನಾಗಿಯೂ ಬದಲಾಗುತ್ತಾನೆ” ಎಂದು ಸಲಹೆ ನೀಡುತ್ತಾನೆ.

ಅಂತೆಯೇ ಅವರು ಒಂದು ನಾಗರ ಹಾವನ್ನು ಹಿಡಿದು, ಪ್ರಜ್ಞೆ ತಪ್ಪಿಸಿ ’ಮದುವೆ’ ಮಾಡಿಸುತ್ತಾರೆ. ಮುಂದೇನಾಯಿತು ಎಂಬ ಕಾತರವೇ? ಅಂಥದ್ದೇನಿಲ್ಲ ಹಾವು ಎಚ್ಚರಗೊಂಡಮೇಲೆ ಒತ್ತಡ ಮತ್ತು ಗಾಬರಿಯಲ್ಲಿದ್ದ ಹಾವು ತನ್ನ ಆತ್ಮರಕ್ಷಣೆಗಾಗಿ ಆ ಹುಡುಗಿಯನ್ನು ಕಚ್ಚಿ ಓಡಿಹೋಯಿತು. ಇಂತಹ ನೂರಾರು ಘಟನೆಗಳು ನಮ್ಮ ದೇಶದಲ್ಲಿ ನಡೆದುಹೋಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಹಾವಿನ ಬಗ್ಗೆ ಆಪಾರವಾದ ತಪ್ಪು ಕಲ್ಪನೆಗಳು ಇದೆ ಮತ್ತು ಈ ಕಾರಣಕ್ಕೆ ಹಾವುಗಳ ಜೊತೆ ತಪ್ಪಾಗಿ ನಡೆದುಕೊಂಡು ಅವುಗಳ ಸಾವಿಗೂ ಕಾರಣವಾಗಿದೆ ಎಂಬುದು ಆತಂಕಕಾರಿ ವಿಚಾರ.

ಇದನ್ನೂ ಓದಿ: ನಾಗನ ಭಯದಲ್ಲಿ ಮೌಢ್ಯದ ಆಟಾಟೋಪ!

ಈ ನಾಗರ ಪಂಚಮಿಯ ದಿನ ಹಾವುಗಳ ಕುರಿತು ಇರುವ ಮಿಥ್ಯೆ ಮತ್ತು ಸತ್ಯಗಳನ್ನು ತಿಳಿದುಕೊಳ್ಳೋಣ

೧. ಹಾವುಗಳು ಹಾಲು ಕುಡಿಯುತ್ತವೆ:

ನಾಗರ ಪಂಚಮಿಯ ದಿನ ಜನರು ಹುತ್ತಗಳಿಗೆ, ಹಾವುಗಳಿಗೆ ಹಾಲುಣಿಸುವುದು ಹಬ್ಬದ ಬಹುಮುಖ್ಯ ಭಾಗವಾಗಿದೆ. ಮತ್ತು ಹಾಲು ಕುಡಿಯುತ್ತದೆ ಎನ್ನುವುದು ಹಾವುಗಳ ಕುರಿತು ಇರುವ ಅತ್ಯಂತ ದೊಡ್ಡ ಮಿಥ್ಯೆ. ವೈಜ್ಞಾನಿಕವಾಗಿ ಜೀವರಾಶಿಯಲ್ಲಿ ಹಾಲು ಕುಡಿಯುವ ಜೀವಿಗಳು ಎಂದರೆ ಸಸ್ತನಿಗಳು, ಹಾವುಗಳು ಸರಿಸೃಪಗಳು ಹಾಗಾಗಿ ಹಾವುಗಳು ಹಾಲು ಕುಡಿಯುದಿಲ್ಲ.

ಹಾಲು ಕುಡಿಯುವ ದೃಶ್ಯ ನಾನು ನೋಡಿದ್ದೇನಲ್ಲ..?

ಸಾಮಾನ್ಯವಾಗಿ ನಾಗರ ಪಂಚಮಿ ಅಥವಾ ಯಾವುದಾರು ವಿಶೇಷ ಸಂದರ್ಭದಲ್ಲಿ ಪೂಜಾರಿಗಳು ಹಾವುಗಳನ್ನು ಹಿಡಿದು ಅವುಗಳಿಗೆ ಆಹಾರ, ನೀರು ಏನೂ ಸಿಗದಂತೆ ಮಾಡಿ ತಿಂಗಳು ಗಟ್ಟಲೆ ಇಡಲಾಗುತ್ತದೆ. ಇದರಿಂದ ಹಾವುಗಳು ಬಳಲಿ ಡೀಹೈಡ್ರೇಟ್ ಆಗುತ್ತದೆ. ಅಂತ ಹಾವುಗಳಿಗೆ ಮಾತ್ರ ಬಲವಂತವಾಗಿ ಹಾಲು ಕುಡಿಸಲಾಗುತ್ತದೆ. ಹಾವುಗಳು ಶೀತ ರಕ್ತದ ಸರೀಸೃಪಗಳು ಅವುಗಳಿಗೆ ಬಲವಂತವಾಗಿ ಹಾಲು ಕುಡಿಸುವುದರಿಂದ ಅವಕ್ಕೆ ಸಾವು ಸಂಭವಿಸುತ್ತದೆ!

೨. ನಾಗರ ಹಾವುಗಳು ಕ್ರೂರ ಜೀವಿಗಳು, ಹಾವುಗಳಿಗೆ 12 ವರ್ಷ ದ್ವೇಷ ಇರುತ್ತದೆ:

ಸಿನೆಮಾದವರಿಗೆ ದೊಡ್ಡ ನಮಸ್ಕಾರ ಹೊಡಿಯಬೇಕು. ಇಂತಹದೊಂದು ತಪ್ಪು ಕಲ್ಪನೆಗೆ ಪುರಾಣಗಳ ಜೊತೆಜೊತೆಗೆ ಹೆಚ್ಚಿನ ಕೊಡುಗೆ ನೀಡಿದ್ದು ಸಿನೆಮಾ ರಂಗ. ದ್ವೇಷ ಎನ್ನುವುದು ಹೆಚ್ಚು ಅಭಿವೃದ್ದಿಗೊಂಡ ಮನುಷ್ಯರ ಮೆದಿಳಿನಲ್ಲಿ ಇರುತ್ತದೆಯೇ ಹೊರತು ಹಾವುಗಳಲ್ಲಿ ಇರುವುದೇ ಇಲ್ಲ. ಹಾವುಗಳು ದ್ವೇಷ ಮಾಡುವ ಜೀವಿಗಳಲ್ಲ, ಅವುಗಳಿಗೆ ಅಷ್ಟು ತೀಕ್ಷ್ಣವಾದ ನೆನಪಿನ ಶಕ್ತಿ ಇಲ್ಲ ಮತ್ತು ಅವುಗಳ ಮೆದಿಳು ಅಷ್ಟು ’ಅಭಿವೃದ್ಧಿಯೂ’ ಆಗಿಲ್ಲ. ದಶಕಗಳ ಕಾಲ ಮನುಷ್ಯರ ಮುಖವನ್ನು ನೆನಪಿನಲ್ಲಿಟ್ಟುಕೊಂಡು ಸಾಯಿಸಲು ಬರುತ್ತದೆ ಎನ್ನುವ ಮೂಢ ನಂಬಿಕೆ ಹುಟ್ಟಲು ಕಾರಣಕರ್ತರು ನಮ್ಮ ಸಿನೆಮಾದವರು.

Nag Panchami Festival In Bidar - YouTube

 

೩. ನಾಗರ ಹಾವಿನ ಬಳಿ ನಾಗಮಣಿ ಇದೆ, ಅದರಿಂದ ಸನ್ಮೋಹಿನಿ ಮಾಡುತ್ತದೆ.

ಇದು ತಮಾಷೆಯಾಗಿದೆಯಾದರೂ ಪುರಾಣ ಮತ್ತು ಸಿನೆಮಾ ಜುಗಲ್‌ಬಂದಿಯಿಂದಾಗಿ ಈ ನಂಬಿಕೆಯೂ ರೂಢಿಯಲ್ಲಿದೆ. ಹಾವುಗಳ ಹಣೆಯಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ವಜ್ರ(ನಾಗಮಣಿ) ಇದೆ ಎನ್ನುವ ಕಾರಣಕ್ಕೆ ಅದೆಷ್ಟೋ ನಾಗರಗಳನ್ನು ಹಿಡಿದು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ.

೪. ಹಾವುಗಳಿಗೆ ಏಳು ತಲೆಗಳು ಇರುತ್ತದೆ.

ಏಳು ತಲೆಯ ಹಾವು ಈ ದೇವಸ್ಥಾನದಲ್ಲಿ ಕಾವಲಿದೆ, ಆ ನಿಧಿಗೆ ಕಾವಲಿದೆ, ಅವನು ಏಳು ತಲೆಯ ಹಾವು ನೋಡಿದನಂತೆ ಹಾಗಾಗಿ ಸತ್ತುಹೋದ. ಇಂತಹ ಹಲವಾರು ಮಾತುಗಳನ್ನು ನಾವು ಕೇಳಿರುತ್ತೇವೆ. ಇನ್ನೂ ಕೆಲವರು ಈಗ ಇಲ್ಲ ಮುಂಚೆ ಇತ್ತು, ದೇವರುಗಳಿಗೆ ಏಳೆಡೆಯ ಹಾವು ಕಾವಲು ಇರುತ್ತಿತ್ತು ಎಂದು ಹೇಳುತ್ತಾರೆ. ಈಗ ಅಸ್ತಿತ್ವದಲ್ಲಿ ಇಲ್ಲದ ಡೈನಾಸಾರ್‌ಗಳ ಪಳೆಯುಳಿಕೆಗಳಿಂದ ಮತ್ತು ಹಲವಾರು ವೈಜ್ಞಾನಿಕ ಪರೀಕ್ಷೆಗಳ ಮೂಲಕ ಡೈನಾಸಾರ್ ಗಳು ಇದ್ದವು ಎನ್ನುವ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ಆದರೆ ಏಳು ತಲೆಯ ಹಾವುಗಳು ಇರುವ/ಇದ್ದ ಕುರಿತಾಗಿ ಯಾವುದೇ ಆಧಾರಗಳು ಲಭ್ಯವಿಲ್ಲ.

೫. ಹಾವುಗಳು ಹಾರುತ್ತವೆ.

ಹಾವುಗಳು ಹಾರುತ್ತದೆ ಎನ್ನುವುದನ್ನು ಕೆಲವೇ ಕೆಲವು ಜನರು ನಂಬುತ್ತಾರೆ, ಹಾರುವ ಕೆಲಸ ಏನಿದ್ದರು ಪಕ್ಷಿಗಳದ್ದು. ಸರೀಸೃಪಗಳು ತೆವಳುತ್ತವೆ. ಕೆಲವು ಸಂದರ್ಭದಲ್ಲಿ ಮತ್ತು ಕೆಲವು ಹಾವುಗಳು ಮಾತ್ರ ತಮ್ಮ ದೇಹ ರಚನೆ, ತೂಕ ಆಧಾರದ ಮೇಲೆ ಮರದ ರೆಂಬೆಯಿಂದ ಮತ್ತೊಂದು ರೆಂಬೆಗೆ ಅಥವಾ ಆಳದ ಜಾಗವನ್ನು ದಾಟುವಾಗ ಜಿಗಿಯುತ್ತದೆ ಆದರೆ ಹಾವುಗಳು ಹಾರುವುದಿಲ್ಲ.

ಹಾವುಗಳ ಕುರಿತು ಭಾರತದಲ್ಲಿ ಇಂತಹ ಇನ್ನೂ ಹತ್ತಾರು ಮೂಢ ನಂಬಿಕೆಗಳು ಆಚರಣೆಯಲ್ಲಿದೆ. ಕೆಲವನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ವಾಸುಕಿ, ಶೇಶನಾಗ ಮತ್ತು ಹಲವು ಪುರಾಣಗಳನ್ನು ಆಧರಿಸಿ ಹಾವುಗಳನ್ನು ಶತಮಾನಗಳನ್ನು ಹಿಂದೂ ಸಂಪ್ರದಾಯದ ಪ್ರಕಾರ ದೇವರೆಂದು ಆರಾಧಾನೆ ಮಾಡಲಾಗುತ್ತಿದೆ. ಅಲ್ಲದೇ ಬೇರೆ ಸಂಪ್ರದಾಯದಲ್ಲಿಯೂ ಆರಾಧನೆ ಇದೆ. ಈಜಿಪ್ಟ್ ಪುರಾಣದ ವಾಜೆಟ್ ನಲ್ಲಿಯೂ ನಾಗ ದೇವಿಯನ್ನು ಆರಾಧಾನೆ ಮಾಡಲಾಗುತ್ತದೆ. ಮತ್ತು (ಬೈಬಲ್ ನ ಸರ್ಪೆಂಟ್ ಸೈತಾನ್) ಹಾವುಗಳನ್ನು ಕೆಟ್ಟ ರಾಕ್ಷಸ ಎಂಬಂತೆಯೂ ನೋಡಲಾಗುತ್ತದೆ. ಆದರೆ ಹಿಂದೂ ಸಂಪ್ರದಾಯದ ಆಚರಣೆಯಲ್ಲಿ ಇಂದಿಗೂ ನಾಗರ ಹಾವುಗಳ ಆರಾಧನೆ ಮುಂದುವರೆದಿದೆ. ಒಟ್ಟಾರೆಯಲ್ಲಿ ಹಾವುಗಳ ಅತೀಯಾದ ಆರಾಧನೆ ಅಥವಾ ದ್ವೇಷ ಈ ಎರಡರಿಂದಲೂ ಹಾವುಗಳ ಅತ್ಯಂತ ತಪ್ಪಾಗಿ ಅರ್ಥ ಮಾಡಿಕೊಳ್ಳಲಾದ ಜೀವಿಯಾಗಿದೆ ಮತ್ತು ಇದರಿಂದಾಗಿ ನಿರಪರಾದಿ ಮುಗ್ದ ಹಾವಿನ ಜೀವಕ್ಕೂ ಅಪಾಯ ತಂದೊಡ್ಡಿದೆ.

ಆಧಾರ: PUGDUNDEE SAFARIS


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...