Homeಕರ್ನಾಟಕನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು

ನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು

- Advertisement -
- Advertisement -

ಭಾರತದ ಪುರಾಣಗಳಲ್ಲಿ ಹಾವುಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ನಾಗರ ಹಾವನ್ನು ದೇವರ ಅವತಾರವೆಂದು, ಅದರ ಹಣೆಯಲ್ಲಿ ವಜ್ರ (ನಾಗಮಣಿ) ಇದೆಯೆಂದು ಮತ್ತು ಅದನ್ನು ಆರಾಧನೆ ಮಾಡುವುದರಿಂದ ಹಲವಾರು ಕಾಯಿಲೆಗಳು ಗುಣವಾಗುತ್ತದೆ ಎಂದು ನಂಬಲಾಗುತ್ತದೆ.

ಒಮ್ಮೆ ಒಬ್ಬ ಹೆಂಗಸು ತನ್ನ ಮಗಳು, ಸುಂದರ ಮತ್ತು ಶ್ರೀಮಂತ ಹುಡಗನನ್ನು ಮದುವೆ ಆಗಬೇಕು, ಅದಕ್ಕಾಗಿ ಏನು ಮಾಡಬೇಕು ಎಂದು ಪುರೋಹಿತನ ಬಳಿ ಕೇಳುತ್ತಾಳೆ. ಆ ಪುರೋಹಿತ ಮಹಿಳೆಗೆ, “ನಿನ್ನ ಮಗಳು ನಾಗರ ಪಂಚಮಿಯ ದಿನ ಒಂದು ನಾಗರ ಹಾವನ್ನು ಮದುವೆ ಆಗಬೇಕು, ನಾಗರ ಪಂಚಮಿಯ ದಿನ ಮದುವೆ ಆದರೆ ಆ ಹಾವೇ ಒಂದು ಸುಂದರ ಯುವಕನಾಗಿ ಮತ್ತು ನಾಗಮಣಿ ಅದರ ಬಳಿ ಇರುವುದರಿಂದ ಶ್ರೀಮಂತನಾಗಿಯೂ ಬದಲಾಗುತ್ತಾನೆ” ಎಂದು ಸಲಹೆ ನೀಡುತ್ತಾನೆ.

ಅಂತೆಯೇ ಅವರು ಒಂದು ನಾಗರ ಹಾವನ್ನು ಹಿಡಿದು, ಪ್ರಜ್ಞೆ ತಪ್ಪಿಸಿ ’ಮದುವೆ’ ಮಾಡಿಸುತ್ತಾರೆ. ಮುಂದೇನಾಯಿತು ಎಂಬ ಕಾತರವೇ? ಅಂಥದ್ದೇನಿಲ್ಲ ಹಾವು ಎಚ್ಚರಗೊಂಡಮೇಲೆ ಒತ್ತಡ ಮತ್ತು ಗಾಬರಿಯಲ್ಲಿದ್ದ ಹಾವು ತನ್ನ ಆತ್ಮರಕ್ಷಣೆಗಾಗಿ ಆ ಹುಡುಗಿಯನ್ನು ಕಚ್ಚಿ ಓಡಿಹೋಯಿತು. ಇಂತಹ ನೂರಾರು ಘಟನೆಗಳು ನಮ್ಮ ದೇಶದಲ್ಲಿ ನಡೆದುಹೋಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಹಾವಿನ ಬಗ್ಗೆ ಆಪಾರವಾದ ತಪ್ಪು ಕಲ್ಪನೆಗಳು ಇದೆ ಮತ್ತು ಈ ಕಾರಣಕ್ಕೆ ಹಾವುಗಳ ಜೊತೆ ತಪ್ಪಾಗಿ ನಡೆದುಕೊಂಡು ಅವುಗಳ ಸಾವಿಗೂ ಕಾರಣವಾಗಿದೆ ಎಂಬುದು ಆತಂಕಕಾರಿ ವಿಚಾರ.

ಇದನ್ನೂ ಓದಿ: ನಾಗನ ಭಯದಲ್ಲಿ ಮೌಢ್ಯದ ಆಟಾಟೋಪ!

ಈ ನಾಗರ ಪಂಚಮಿಯ ದಿನ ಹಾವುಗಳ ಕುರಿತು ಇರುವ ಮಿಥ್ಯೆ ಮತ್ತು ಸತ್ಯಗಳನ್ನು ತಿಳಿದುಕೊಳ್ಳೋಣ

೧. ಹಾವುಗಳು ಹಾಲು ಕುಡಿಯುತ್ತವೆ:

ನಾಗರ ಪಂಚಮಿಯ ದಿನ ಜನರು ಹುತ್ತಗಳಿಗೆ, ಹಾವುಗಳಿಗೆ ಹಾಲುಣಿಸುವುದು ಹಬ್ಬದ ಬಹುಮುಖ್ಯ ಭಾಗವಾಗಿದೆ. ಮತ್ತು ಹಾಲು ಕುಡಿಯುತ್ತದೆ ಎನ್ನುವುದು ಹಾವುಗಳ ಕುರಿತು ಇರುವ ಅತ್ಯಂತ ದೊಡ್ಡ ಮಿಥ್ಯೆ. ವೈಜ್ಞಾನಿಕವಾಗಿ ಜೀವರಾಶಿಯಲ್ಲಿ ಹಾಲು ಕುಡಿಯುವ ಜೀವಿಗಳು ಎಂದರೆ ಸಸ್ತನಿಗಳು, ಹಾವುಗಳು ಸರಿಸೃಪಗಳು ಹಾಗಾಗಿ ಹಾವುಗಳು ಹಾಲು ಕುಡಿಯುದಿಲ್ಲ.

ಹಾಲು ಕುಡಿಯುವ ದೃಶ್ಯ ನಾನು ನೋಡಿದ್ದೇನಲ್ಲ..?

ಸಾಮಾನ್ಯವಾಗಿ ನಾಗರ ಪಂಚಮಿ ಅಥವಾ ಯಾವುದಾರು ವಿಶೇಷ ಸಂದರ್ಭದಲ್ಲಿ ಪೂಜಾರಿಗಳು ಹಾವುಗಳನ್ನು ಹಿಡಿದು ಅವುಗಳಿಗೆ ಆಹಾರ, ನೀರು ಏನೂ ಸಿಗದಂತೆ ಮಾಡಿ ತಿಂಗಳು ಗಟ್ಟಲೆ ಇಡಲಾಗುತ್ತದೆ. ಇದರಿಂದ ಹಾವುಗಳು ಬಳಲಿ ಡೀಹೈಡ್ರೇಟ್ ಆಗುತ್ತದೆ. ಅಂತ ಹಾವುಗಳಿಗೆ ಮಾತ್ರ ಬಲವಂತವಾಗಿ ಹಾಲು ಕುಡಿಸಲಾಗುತ್ತದೆ. ಹಾವುಗಳು ಶೀತ ರಕ್ತದ ಸರೀಸೃಪಗಳು ಅವುಗಳಿಗೆ ಬಲವಂತವಾಗಿ ಹಾಲು ಕುಡಿಸುವುದರಿಂದ ಅವಕ್ಕೆ ಸಾವು ಸಂಭವಿಸುತ್ತದೆ!

೨. ನಾಗರ ಹಾವುಗಳು ಕ್ರೂರ ಜೀವಿಗಳು, ಹಾವುಗಳಿಗೆ 12 ವರ್ಷ ದ್ವೇಷ ಇರುತ್ತದೆ:

ಸಿನೆಮಾದವರಿಗೆ ದೊಡ್ಡ ನಮಸ್ಕಾರ ಹೊಡಿಯಬೇಕು. ಇಂತಹದೊಂದು ತಪ್ಪು ಕಲ್ಪನೆಗೆ ಪುರಾಣಗಳ ಜೊತೆಜೊತೆಗೆ ಹೆಚ್ಚಿನ ಕೊಡುಗೆ ನೀಡಿದ್ದು ಸಿನೆಮಾ ರಂಗ. ದ್ವೇಷ ಎನ್ನುವುದು ಹೆಚ್ಚು ಅಭಿವೃದ್ದಿಗೊಂಡ ಮನುಷ್ಯರ ಮೆದಿಳಿನಲ್ಲಿ ಇರುತ್ತದೆಯೇ ಹೊರತು ಹಾವುಗಳಲ್ಲಿ ಇರುವುದೇ ಇಲ್ಲ. ಹಾವುಗಳು ದ್ವೇಷ ಮಾಡುವ ಜೀವಿಗಳಲ್ಲ, ಅವುಗಳಿಗೆ ಅಷ್ಟು ತೀಕ್ಷ್ಣವಾದ ನೆನಪಿನ ಶಕ್ತಿ ಇಲ್ಲ ಮತ್ತು ಅವುಗಳ ಮೆದಿಳು ಅಷ್ಟು ’ಅಭಿವೃದ್ಧಿಯೂ’ ಆಗಿಲ್ಲ. ದಶಕಗಳ ಕಾಲ ಮನುಷ್ಯರ ಮುಖವನ್ನು ನೆನಪಿನಲ್ಲಿಟ್ಟುಕೊಂಡು ಸಾಯಿಸಲು ಬರುತ್ತದೆ ಎನ್ನುವ ಮೂಢ ನಂಬಿಕೆ ಹುಟ್ಟಲು ಕಾರಣಕರ್ತರು ನಮ್ಮ ಸಿನೆಮಾದವರು.

Nag Panchami Festival In Bidar - YouTube

 

೩. ನಾಗರ ಹಾವಿನ ಬಳಿ ನಾಗಮಣಿ ಇದೆ, ಅದರಿಂದ ಸನ್ಮೋಹಿನಿ ಮಾಡುತ್ತದೆ.

ಇದು ತಮಾಷೆಯಾಗಿದೆಯಾದರೂ ಪುರಾಣ ಮತ್ತು ಸಿನೆಮಾ ಜುಗಲ್‌ಬಂದಿಯಿಂದಾಗಿ ಈ ನಂಬಿಕೆಯೂ ರೂಢಿಯಲ್ಲಿದೆ. ಹಾವುಗಳ ಹಣೆಯಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ವಜ್ರ(ನಾಗಮಣಿ) ಇದೆ ಎನ್ನುವ ಕಾರಣಕ್ಕೆ ಅದೆಷ್ಟೋ ನಾಗರಗಳನ್ನು ಹಿಡಿದು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ.

೪. ಹಾವುಗಳಿಗೆ ಏಳು ತಲೆಗಳು ಇರುತ್ತದೆ.

ಏಳು ತಲೆಯ ಹಾವು ಈ ದೇವಸ್ಥಾನದಲ್ಲಿ ಕಾವಲಿದೆ, ಆ ನಿಧಿಗೆ ಕಾವಲಿದೆ, ಅವನು ಏಳು ತಲೆಯ ಹಾವು ನೋಡಿದನಂತೆ ಹಾಗಾಗಿ ಸತ್ತುಹೋದ. ಇಂತಹ ಹಲವಾರು ಮಾತುಗಳನ್ನು ನಾವು ಕೇಳಿರುತ್ತೇವೆ. ಇನ್ನೂ ಕೆಲವರು ಈಗ ಇಲ್ಲ ಮುಂಚೆ ಇತ್ತು, ದೇವರುಗಳಿಗೆ ಏಳೆಡೆಯ ಹಾವು ಕಾವಲು ಇರುತ್ತಿತ್ತು ಎಂದು ಹೇಳುತ್ತಾರೆ. ಈಗ ಅಸ್ತಿತ್ವದಲ್ಲಿ ಇಲ್ಲದ ಡೈನಾಸಾರ್‌ಗಳ ಪಳೆಯುಳಿಕೆಗಳಿಂದ ಮತ್ತು ಹಲವಾರು ವೈಜ್ಞಾನಿಕ ಪರೀಕ್ಷೆಗಳ ಮೂಲಕ ಡೈನಾಸಾರ್ ಗಳು ಇದ್ದವು ಎನ್ನುವ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ಆದರೆ ಏಳು ತಲೆಯ ಹಾವುಗಳು ಇರುವ/ಇದ್ದ ಕುರಿತಾಗಿ ಯಾವುದೇ ಆಧಾರಗಳು ಲಭ್ಯವಿಲ್ಲ.

೫. ಹಾವುಗಳು ಹಾರುತ್ತವೆ.

ಹಾವುಗಳು ಹಾರುತ್ತದೆ ಎನ್ನುವುದನ್ನು ಕೆಲವೇ ಕೆಲವು ಜನರು ನಂಬುತ್ತಾರೆ, ಹಾರುವ ಕೆಲಸ ಏನಿದ್ದರು ಪಕ್ಷಿಗಳದ್ದು. ಸರೀಸೃಪಗಳು ತೆವಳುತ್ತವೆ. ಕೆಲವು ಸಂದರ್ಭದಲ್ಲಿ ಮತ್ತು ಕೆಲವು ಹಾವುಗಳು ಮಾತ್ರ ತಮ್ಮ ದೇಹ ರಚನೆ, ತೂಕ ಆಧಾರದ ಮೇಲೆ ಮರದ ರೆಂಬೆಯಿಂದ ಮತ್ತೊಂದು ರೆಂಬೆಗೆ ಅಥವಾ ಆಳದ ಜಾಗವನ್ನು ದಾಟುವಾಗ ಜಿಗಿಯುತ್ತದೆ ಆದರೆ ಹಾವುಗಳು ಹಾರುವುದಿಲ್ಲ.

ಹಾವುಗಳ ಕುರಿತು ಭಾರತದಲ್ಲಿ ಇಂತಹ ಇನ್ನೂ ಹತ್ತಾರು ಮೂಢ ನಂಬಿಕೆಗಳು ಆಚರಣೆಯಲ್ಲಿದೆ. ಕೆಲವನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ವಾಸುಕಿ, ಶೇಶನಾಗ ಮತ್ತು ಹಲವು ಪುರಾಣಗಳನ್ನು ಆಧರಿಸಿ ಹಾವುಗಳನ್ನು ಶತಮಾನಗಳನ್ನು ಹಿಂದೂ ಸಂಪ್ರದಾಯದ ಪ್ರಕಾರ ದೇವರೆಂದು ಆರಾಧಾನೆ ಮಾಡಲಾಗುತ್ತಿದೆ. ಅಲ್ಲದೇ ಬೇರೆ ಸಂಪ್ರದಾಯದಲ್ಲಿಯೂ ಆರಾಧನೆ ಇದೆ. ಈಜಿಪ್ಟ್ ಪುರಾಣದ ವಾಜೆಟ್ ನಲ್ಲಿಯೂ ನಾಗ ದೇವಿಯನ್ನು ಆರಾಧಾನೆ ಮಾಡಲಾಗುತ್ತದೆ. ಮತ್ತು (ಬೈಬಲ್ ನ ಸರ್ಪೆಂಟ್ ಸೈತಾನ್) ಹಾವುಗಳನ್ನು ಕೆಟ್ಟ ರಾಕ್ಷಸ ಎಂಬಂತೆಯೂ ನೋಡಲಾಗುತ್ತದೆ. ಆದರೆ ಹಿಂದೂ ಸಂಪ್ರದಾಯದ ಆಚರಣೆಯಲ್ಲಿ ಇಂದಿಗೂ ನಾಗರ ಹಾವುಗಳ ಆರಾಧನೆ ಮುಂದುವರೆದಿದೆ. ಒಟ್ಟಾರೆಯಲ್ಲಿ ಹಾವುಗಳ ಅತೀಯಾದ ಆರಾಧನೆ ಅಥವಾ ದ್ವೇಷ ಈ ಎರಡರಿಂದಲೂ ಹಾವುಗಳ ಅತ್ಯಂತ ತಪ್ಪಾಗಿ ಅರ್ಥ ಮಾಡಿಕೊಳ್ಳಲಾದ ಜೀವಿಯಾಗಿದೆ ಮತ್ತು ಇದರಿಂದಾಗಿ ನಿರಪರಾದಿ ಮುಗ್ದ ಹಾವಿನ ಜೀವಕ್ಕೂ ಅಪಾಯ ತಂದೊಡ್ಡಿದೆ.

ಆಧಾರ: PUGDUNDEE SAFARIS


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...