Homeಕರ್ನಾಟಕನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು

ನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು

- Advertisement -
- Advertisement -

ಭಾರತದ ಪುರಾಣಗಳಲ್ಲಿ ಹಾವುಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ನಾಗರ ಹಾವನ್ನು ದೇವರ ಅವತಾರವೆಂದು, ಅದರ ಹಣೆಯಲ್ಲಿ ವಜ್ರ (ನಾಗಮಣಿ) ಇದೆಯೆಂದು ಮತ್ತು ಅದನ್ನು ಆರಾಧನೆ ಮಾಡುವುದರಿಂದ ಹಲವಾರು ಕಾಯಿಲೆಗಳು ಗುಣವಾಗುತ್ತದೆ ಎಂದು ನಂಬಲಾಗುತ್ತದೆ.

ಒಮ್ಮೆ ಒಬ್ಬ ಹೆಂಗಸು ತನ್ನ ಮಗಳು, ಸುಂದರ ಮತ್ತು ಶ್ರೀಮಂತ ಹುಡಗನನ್ನು ಮದುವೆ ಆಗಬೇಕು, ಅದಕ್ಕಾಗಿ ಏನು ಮಾಡಬೇಕು ಎಂದು ಪುರೋಹಿತನ ಬಳಿ ಕೇಳುತ್ತಾಳೆ. ಆ ಪುರೋಹಿತ ಮಹಿಳೆಗೆ, “ನಿನ್ನ ಮಗಳು ನಾಗರ ಪಂಚಮಿಯ ದಿನ ಒಂದು ನಾಗರ ಹಾವನ್ನು ಮದುವೆ ಆಗಬೇಕು, ನಾಗರ ಪಂಚಮಿಯ ದಿನ ಮದುವೆ ಆದರೆ ಆ ಹಾವೇ ಒಂದು ಸುಂದರ ಯುವಕನಾಗಿ ಮತ್ತು ನಾಗಮಣಿ ಅದರ ಬಳಿ ಇರುವುದರಿಂದ ಶ್ರೀಮಂತನಾಗಿಯೂ ಬದಲಾಗುತ್ತಾನೆ” ಎಂದು ಸಲಹೆ ನೀಡುತ್ತಾನೆ.

ಅಂತೆಯೇ ಅವರು ಒಂದು ನಾಗರ ಹಾವನ್ನು ಹಿಡಿದು, ಪ್ರಜ್ಞೆ ತಪ್ಪಿಸಿ ’ಮದುವೆ’ ಮಾಡಿಸುತ್ತಾರೆ. ಮುಂದೇನಾಯಿತು ಎಂಬ ಕಾತರವೇ? ಅಂಥದ್ದೇನಿಲ್ಲ ಹಾವು ಎಚ್ಚರಗೊಂಡಮೇಲೆ ಒತ್ತಡ ಮತ್ತು ಗಾಬರಿಯಲ್ಲಿದ್ದ ಹಾವು ತನ್ನ ಆತ್ಮರಕ್ಷಣೆಗಾಗಿ ಆ ಹುಡುಗಿಯನ್ನು ಕಚ್ಚಿ ಓಡಿಹೋಯಿತು. ಇಂತಹ ನೂರಾರು ಘಟನೆಗಳು ನಮ್ಮ ದೇಶದಲ್ಲಿ ನಡೆದುಹೋಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಹಾವಿನ ಬಗ್ಗೆ ಆಪಾರವಾದ ತಪ್ಪು ಕಲ್ಪನೆಗಳು ಇದೆ ಮತ್ತು ಈ ಕಾರಣಕ್ಕೆ ಹಾವುಗಳ ಜೊತೆ ತಪ್ಪಾಗಿ ನಡೆದುಕೊಂಡು ಅವುಗಳ ಸಾವಿಗೂ ಕಾರಣವಾಗಿದೆ ಎಂಬುದು ಆತಂಕಕಾರಿ ವಿಚಾರ.

ಇದನ್ನೂ ಓದಿ: ನಾಗನ ಭಯದಲ್ಲಿ ಮೌಢ್ಯದ ಆಟಾಟೋಪ!

ಈ ನಾಗರ ಪಂಚಮಿಯ ದಿನ ಹಾವುಗಳ ಕುರಿತು ಇರುವ ಮಿಥ್ಯೆ ಮತ್ತು ಸತ್ಯಗಳನ್ನು ತಿಳಿದುಕೊಳ್ಳೋಣ

೧. ಹಾವುಗಳು ಹಾಲು ಕುಡಿಯುತ್ತವೆ:

ನಾಗರ ಪಂಚಮಿಯ ದಿನ ಜನರು ಹುತ್ತಗಳಿಗೆ, ಹಾವುಗಳಿಗೆ ಹಾಲುಣಿಸುವುದು ಹಬ್ಬದ ಬಹುಮುಖ್ಯ ಭಾಗವಾಗಿದೆ. ಮತ್ತು ಹಾಲು ಕುಡಿಯುತ್ತದೆ ಎನ್ನುವುದು ಹಾವುಗಳ ಕುರಿತು ಇರುವ ಅತ್ಯಂತ ದೊಡ್ಡ ಮಿಥ್ಯೆ. ವೈಜ್ಞಾನಿಕವಾಗಿ ಜೀವರಾಶಿಯಲ್ಲಿ ಹಾಲು ಕುಡಿಯುವ ಜೀವಿಗಳು ಎಂದರೆ ಸಸ್ತನಿಗಳು, ಹಾವುಗಳು ಸರಿಸೃಪಗಳು ಹಾಗಾಗಿ ಹಾವುಗಳು ಹಾಲು ಕುಡಿಯುದಿಲ್ಲ.

ಹಾಲು ಕುಡಿಯುವ ದೃಶ್ಯ ನಾನು ನೋಡಿದ್ದೇನಲ್ಲ..?

ಸಾಮಾನ್ಯವಾಗಿ ನಾಗರ ಪಂಚಮಿ ಅಥವಾ ಯಾವುದಾರು ವಿಶೇಷ ಸಂದರ್ಭದಲ್ಲಿ ಪೂಜಾರಿಗಳು ಹಾವುಗಳನ್ನು ಹಿಡಿದು ಅವುಗಳಿಗೆ ಆಹಾರ, ನೀರು ಏನೂ ಸಿಗದಂತೆ ಮಾಡಿ ತಿಂಗಳು ಗಟ್ಟಲೆ ಇಡಲಾಗುತ್ತದೆ. ಇದರಿಂದ ಹಾವುಗಳು ಬಳಲಿ ಡೀಹೈಡ್ರೇಟ್ ಆಗುತ್ತದೆ. ಅಂತ ಹಾವುಗಳಿಗೆ ಮಾತ್ರ ಬಲವಂತವಾಗಿ ಹಾಲು ಕುಡಿಸಲಾಗುತ್ತದೆ. ಹಾವುಗಳು ಶೀತ ರಕ್ತದ ಸರೀಸೃಪಗಳು ಅವುಗಳಿಗೆ ಬಲವಂತವಾಗಿ ಹಾಲು ಕುಡಿಸುವುದರಿಂದ ಅವಕ್ಕೆ ಸಾವು ಸಂಭವಿಸುತ್ತದೆ!

೨. ನಾಗರ ಹಾವುಗಳು ಕ್ರೂರ ಜೀವಿಗಳು, ಹಾವುಗಳಿಗೆ 12 ವರ್ಷ ದ್ವೇಷ ಇರುತ್ತದೆ:

ಸಿನೆಮಾದವರಿಗೆ ದೊಡ್ಡ ನಮಸ್ಕಾರ ಹೊಡಿಯಬೇಕು. ಇಂತಹದೊಂದು ತಪ್ಪು ಕಲ್ಪನೆಗೆ ಪುರಾಣಗಳ ಜೊತೆಜೊತೆಗೆ ಹೆಚ್ಚಿನ ಕೊಡುಗೆ ನೀಡಿದ್ದು ಸಿನೆಮಾ ರಂಗ. ದ್ವೇಷ ಎನ್ನುವುದು ಹೆಚ್ಚು ಅಭಿವೃದ್ದಿಗೊಂಡ ಮನುಷ್ಯರ ಮೆದಿಳಿನಲ್ಲಿ ಇರುತ್ತದೆಯೇ ಹೊರತು ಹಾವುಗಳಲ್ಲಿ ಇರುವುದೇ ಇಲ್ಲ. ಹಾವುಗಳು ದ್ವೇಷ ಮಾಡುವ ಜೀವಿಗಳಲ್ಲ, ಅವುಗಳಿಗೆ ಅಷ್ಟು ತೀಕ್ಷ್ಣವಾದ ನೆನಪಿನ ಶಕ್ತಿ ಇಲ್ಲ ಮತ್ತು ಅವುಗಳ ಮೆದಿಳು ಅಷ್ಟು ’ಅಭಿವೃದ್ಧಿಯೂ’ ಆಗಿಲ್ಲ. ದಶಕಗಳ ಕಾಲ ಮನುಷ್ಯರ ಮುಖವನ್ನು ನೆನಪಿನಲ್ಲಿಟ್ಟುಕೊಂಡು ಸಾಯಿಸಲು ಬರುತ್ತದೆ ಎನ್ನುವ ಮೂಢ ನಂಬಿಕೆ ಹುಟ್ಟಲು ಕಾರಣಕರ್ತರು ನಮ್ಮ ಸಿನೆಮಾದವರು.

Nag Panchami Festival In Bidar - YouTube

 

೩. ನಾಗರ ಹಾವಿನ ಬಳಿ ನಾಗಮಣಿ ಇದೆ, ಅದರಿಂದ ಸನ್ಮೋಹಿನಿ ಮಾಡುತ್ತದೆ.

ಇದು ತಮಾಷೆಯಾಗಿದೆಯಾದರೂ ಪುರಾಣ ಮತ್ತು ಸಿನೆಮಾ ಜುಗಲ್‌ಬಂದಿಯಿಂದಾಗಿ ಈ ನಂಬಿಕೆಯೂ ರೂಢಿಯಲ್ಲಿದೆ. ಹಾವುಗಳ ಹಣೆಯಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ವಜ್ರ(ನಾಗಮಣಿ) ಇದೆ ಎನ್ನುವ ಕಾರಣಕ್ಕೆ ಅದೆಷ್ಟೋ ನಾಗರಗಳನ್ನು ಹಿಡಿದು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ.

೪. ಹಾವುಗಳಿಗೆ ಏಳು ತಲೆಗಳು ಇರುತ್ತದೆ.

ಏಳು ತಲೆಯ ಹಾವು ಈ ದೇವಸ್ಥಾನದಲ್ಲಿ ಕಾವಲಿದೆ, ಆ ನಿಧಿಗೆ ಕಾವಲಿದೆ, ಅವನು ಏಳು ತಲೆಯ ಹಾವು ನೋಡಿದನಂತೆ ಹಾಗಾಗಿ ಸತ್ತುಹೋದ. ಇಂತಹ ಹಲವಾರು ಮಾತುಗಳನ್ನು ನಾವು ಕೇಳಿರುತ್ತೇವೆ. ಇನ್ನೂ ಕೆಲವರು ಈಗ ಇಲ್ಲ ಮುಂಚೆ ಇತ್ತು, ದೇವರುಗಳಿಗೆ ಏಳೆಡೆಯ ಹಾವು ಕಾವಲು ಇರುತ್ತಿತ್ತು ಎಂದು ಹೇಳುತ್ತಾರೆ. ಈಗ ಅಸ್ತಿತ್ವದಲ್ಲಿ ಇಲ್ಲದ ಡೈನಾಸಾರ್‌ಗಳ ಪಳೆಯುಳಿಕೆಗಳಿಂದ ಮತ್ತು ಹಲವಾರು ವೈಜ್ಞಾನಿಕ ಪರೀಕ್ಷೆಗಳ ಮೂಲಕ ಡೈನಾಸಾರ್ ಗಳು ಇದ್ದವು ಎನ್ನುವ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ಆದರೆ ಏಳು ತಲೆಯ ಹಾವುಗಳು ಇರುವ/ಇದ್ದ ಕುರಿತಾಗಿ ಯಾವುದೇ ಆಧಾರಗಳು ಲಭ್ಯವಿಲ್ಲ.

೫. ಹಾವುಗಳು ಹಾರುತ್ತವೆ.

ಹಾವುಗಳು ಹಾರುತ್ತದೆ ಎನ್ನುವುದನ್ನು ಕೆಲವೇ ಕೆಲವು ಜನರು ನಂಬುತ್ತಾರೆ, ಹಾರುವ ಕೆಲಸ ಏನಿದ್ದರು ಪಕ್ಷಿಗಳದ್ದು. ಸರೀಸೃಪಗಳು ತೆವಳುತ್ತವೆ. ಕೆಲವು ಸಂದರ್ಭದಲ್ಲಿ ಮತ್ತು ಕೆಲವು ಹಾವುಗಳು ಮಾತ್ರ ತಮ್ಮ ದೇಹ ರಚನೆ, ತೂಕ ಆಧಾರದ ಮೇಲೆ ಮರದ ರೆಂಬೆಯಿಂದ ಮತ್ತೊಂದು ರೆಂಬೆಗೆ ಅಥವಾ ಆಳದ ಜಾಗವನ್ನು ದಾಟುವಾಗ ಜಿಗಿಯುತ್ತದೆ ಆದರೆ ಹಾವುಗಳು ಹಾರುವುದಿಲ್ಲ.

ಹಾವುಗಳ ಕುರಿತು ಭಾರತದಲ್ಲಿ ಇಂತಹ ಇನ್ನೂ ಹತ್ತಾರು ಮೂಢ ನಂಬಿಕೆಗಳು ಆಚರಣೆಯಲ್ಲಿದೆ. ಕೆಲವನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ವಾಸುಕಿ, ಶೇಶನಾಗ ಮತ್ತು ಹಲವು ಪುರಾಣಗಳನ್ನು ಆಧರಿಸಿ ಹಾವುಗಳನ್ನು ಶತಮಾನಗಳನ್ನು ಹಿಂದೂ ಸಂಪ್ರದಾಯದ ಪ್ರಕಾರ ದೇವರೆಂದು ಆರಾಧಾನೆ ಮಾಡಲಾಗುತ್ತಿದೆ. ಅಲ್ಲದೇ ಬೇರೆ ಸಂಪ್ರದಾಯದಲ್ಲಿಯೂ ಆರಾಧನೆ ಇದೆ. ಈಜಿಪ್ಟ್ ಪುರಾಣದ ವಾಜೆಟ್ ನಲ್ಲಿಯೂ ನಾಗ ದೇವಿಯನ್ನು ಆರಾಧಾನೆ ಮಾಡಲಾಗುತ್ತದೆ. ಮತ್ತು (ಬೈಬಲ್ ನ ಸರ್ಪೆಂಟ್ ಸೈತಾನ್) ಹಾವುಗಳನ್ನು ಕೆಟ್ಟ ರಾಕ್ಷಸ ಎಂಬಂತೆಯೂ ನೋಡಲಾಗುತ್ತದೆ. ಆದರೆ ಹಿಂದೂ ಸಂಪ್ರದಾಯದ ಆಚರಣೆಯಲ್ಲಿ ಇಂದಿಗೂ ನಾಗರ ಹಾವುಗಳ ಆರಾಧನೆ ಮುಂದುವರೆದಿದೆ. ಒಟ್ಟಾರೆಯಲ್ಲಿ ಹಾವುಗಳ ಅತೀಯಾದ ಆರಾಧನೆ ಅಥವಾ ದ್ವೇಷ ಈ ಎರಡರಿಂದಲೂ ಹಾವುಗಳ ಅತ್ಯಂತ ತಪ್ಪಾಗಿ ಅರ್ಥ ಮಾಡಿಕೊಳ್ಳಲಾದ ಜೀವಿಯಾಗಿದೆ ಮತ್ತು ಇದರಿಂದಾಗಿ ನಿರಪರಾದಿ ಮುಗ್ದ ಹಾವಿನ ಜೀವಕ್ಕೂ ಅಪಾಯ ತಂದೊಡ್ಡಿದೆ.

ಆಧಾರ: PUGDUNDEE SAFARIS


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...