Homeಕರ್ನಾಟಕನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು

ನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು

- Advertisement -
- Advertisement -

ಭಾರತದ ಪುರಾಣಗಳಲ್ಲಿ ಹಾವುಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ನಾಗರ ಹಾವನ್ನು ದೇವರ ಅವತಾರವೆಂದು, ಅದರ ಹಣೆಯಲ್ಲಿ ವಜ್ರ (ನಾಗಮಣಿ) ಇದೆಯೆಂದು ಮತ್ತು ಅದನ್ನು ಆರಾಧನೆ ಮಾಡುವುದರಿಂದ ಹಲವಾರು ಕಾಯಿಲೆಗಳು ಗುಣವಾಗುತ್ತದೆ ಎಂದು ನಂಬಲಾಗುತ್ತದೆ.

ಒಮ್ಮೆ ಒಬ್ಬ ಹೆಂಗಸು ತನ್ನ ಮಗಳು, ಸುಂದರ ಮತ್ತು ಶ್ರೀಮಂತ ಹುಡಗನನ್ನು ಮದುವೆ ಆಗಬೇಕು, ಅದಕ್ಕಾಗಿ ಏನು ಮಾಡಬೇಕು ಎಂದು ಪುರೋಹಿತನ ಬಳಿ ಕೇಳುತ್ತಾಳೆ. ಆ ಪುರೋಹಿತ ಮಹಿಳೆಗೆ, “ನಿನ್ನ ಮಗಳು ನಾಗರ ಪಂಚಮಿಯ ದಿನ ಒಂದು ನಾಗರ ಹಾವನ್ನು ಮದುವೆ ಆಗಬೇಕು, ನಾಗರ ಪಂಚಮಿಯ ದಿನ ಮದುವೆ ಆದರೆ ಆ ಹಾವೇ ಒಂದು ಸುಂದರ ಯುವಕನಾಗಿ ಮತ್ತು ನಾಗಮಣಿ ಅದರ ಬಳಿ ಇರುವುದರಿಂದ ಶ್ರೀಮಂತನಾಗಿಯೂ ಬದಲಾಗುತ್ತಾನೆ” ಎಂದು ಸಲಹೆ ನೀಡುತ್ತಾನೆ.

ಅಂತೆಯೇ ಅವರು ಒಂದು ನಾಗರ ಹಾವನ್ನು ಹಿಡಿದು, ಪ್ರಜ್ಞೆ ತಪ್ಪಿಸಿ ’ಮದುವೆ’ ಮಾಡಿಸುತ್ತಾರೆ. ಮುಂದೇನಾಯಿತು ಎಂಬ ಕಾತರವೇ? ಅಂಥದ್ದೇನಿಲ್ಲ ಹಾವು ಎಚ್ಚರಗೊಂಡಮೇಲೆ ಒತ್ತಡ ಮತ್ತು ಗಾಬರಿಯಲ್ಲಿದ್ದ ಹಾವು ತನ್ನ ಆತ್ಮರಕ್ಷಣೆಗಾಗಿ ಆ ಹುಡುಗಿಯನ್ನು ಕಚ್ಚಿ ಓಡಿಹೋಯಿತು. ಇಂತಹ ನೂರಾರು ಘಟನೆಗಳು ನಮ್ಮ ದೇಶದಲ್ಲಿ ನಡೆದುಹೋಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಹಾವಿನ ಬಗ್ಗೆ ಆಪಾರವಾದ ತಪ್ಪು ಕಲ್ಪನೆಗಳು ಇದೆ ಮತ್ತು ಈ ಕಾರಣಕ್ಕೆ ಹಾವುಗಳ ಜೊತೆ ತಪ್ಪಾಗಿ ನಡೆದುಕೊಂಡು ಅವುಗಳ ಸಾವಿಗೂ ಕಾರಣವಾಗಿದೆ ಎಂಬುದು ಆತಂಕಕಾರಿ ವಿಚಾರ.

ಇದನ್ನೂ ಓದಿ: ನಾಗನ ಭಯದಲ್ಲಿ ಮೌಢ್ಯದ ಆಟಾಟೋಪ!

ಈ ನಾಗರ ಪಂಚಮಿಯ ದಿನ ಹಾವುಗಳ ಕುರಿತು ಇರುವ ಮಿಥ್ಯೆ ಮತ್ತು ಸತ್ಯಗಳನ್ನು ತಿಳಿದುಕೊಳ್ಳೋಣ

೧. ಹಾವುಗಳು ಹಾಲು ಕುಡಿಯುತ್ತವೆ:

ನಾಗರ ಪಂಚಮಿಯ ದಿನ ಜನರು ಹುತ್ತಗಳಿಗೆ, ಹಾವುಗಳಿಗೆ ಹಾಲುಣಿಸುವುದು ಹಬ್ಬದ ಬಹುಮುಖ್ಯ ಭಾಗವಾಗಿದೆ. ಮತ್ತು ಹಾಲು ಕುಡಿಯುತ್ತದೆ ಎನ್ನುವುದು ಹಾವುಗಳ ಕುರಿತು ಇರುವ ಅತ್ಯಂತ ದೊಡ್ಡ ಮಿಥ್ಯೆ. ವೈಜ್ಞಾನಿಕವಾಗಿ ಜೀವರಾಶಿಯಲ್ಲಿ ಹಾಲು ಕುಡಿಯುವ ಜೀವಿಗಳು ಎಂದರೆ ಸಸ್ತನಿಗಳು, ಹಾವುಗಳು ಸರಿಸೃಪಗಳು ಹಾಗಾಗಿ ಹಾವುಗಳು ಹಾಲು ಕುಡಿಯುದಿಲ್ಲ.

ಹಾಲು ಕುಡಿಯುವ ದೃಶ್ಯ ನಾನು ನೋಡಿದ್ದೇನಲ್ಲ..?

ಸಾಮಾನ್ಯವಾಗಿ ನಾಗರ ಪಂಚಮಿ ಅಥವಾ ಯಾವುದಾರು ವಿಶೇಷ ಸಂದರ್ಭದಲ್ಲಿ ಪೂಜಾರಿಗಳು ಹಾವುಗಳನ್ನು ಹಿಡಿದು ಅವುಗಳಿಗೆ ಆಹಾರ, ನೀರು ಏನೂ ಸಿಗದಂತೆ ಮಾಡಿ ತಿಂಗಳು ಗಟ್ಟಲೆ ಇಡಲಾಗುತ್ತದೆ. ಇದರಿಂದ ಹಾವುಗಳು ಬಳಲಿ ಡೀಹೈಡ್ರೇಟ್ ಆಗುತ್ತದೆ. ಅಂತ ಹಾವುಗಳಿಗೆ ಮಾತ್ರ ಬಲವಂತವಾಗಿ ಹಾಲು ಕುಡಿಸಲಾಗುತ್ತದೆ. ಹಾವುಗಳು ಶೀತ ರಕ್ತದ ಸರೀಸೃಪಗಳು ಅವುಗಳಿಗೆ ಬಲವಂತವಾಗಿ ಹಾಲು ಕುಡಿಸುವುದರಿಂದ ಅವಕ್ಕೆ ಸಾವು ಸಂಭವಿಸುತ್ತದೆ!

೨. ನಾಗರ ಹಾವುಗಳು ಕ್ರೂರ ಜೀವಿಗಳು, ಹಾವುಗಳಿಗೆ 12 ವರ್ಷ ದ್ವೇಷ ಇರುತ್ತದೆ:

ಸಿನೆಮಾದವರಿಗೆ ದೊಡ್ಡ ನಮಸ್ಕಾರ ಹೊಡಿಯಬೇಕು. ಇಂತಹದೊಂದು ತಪ್ಪು ಕಲ್ಪನೆಗೆ ಪುರಾಣಗಳ ಜೊತೆಜೊತೆಗೆ ಹೆಚ್ಚಿನ ಕೊಡುಗೆ ನೀಡಿದ್ದು ಸಿನೆಮಾ ರಂಗ. ದ್ವೇಷ ಎನ್ನುವುದು ಹೆಚ್ಚು ಅಭಿವೃದ್ದಿಗೊಂಡ ಮನುಷ್ಯರ ಮೆದಿಳಿನಲ್ಲಿ ಇರುತ್ತದೆಯೇ ಹೊರತು ಹಾವುಗಳಲ್ಲಿ ಇರುವುದೇ ಇಲ್ಲ. ಹಾವುಗಳು ದ್ವೇಷ ಮಾಡುವ ಜೀವಿಗಳಲ್ಲ, ಅವುಗಳಿಗೆ ಅಷ್ಟು ತೀಕ್ಷ್ಣವಾದ ನೆನಪಿನ ಶಕ್ತಿ ಇಲ್ಲ ಮತ್ತು ಅವುಗಳ ಮೆದಿಳು ಅಷ್ಟು ’ಅಭಿವೃದ್ಧಿಯೂ’ ಆಗಿಲ್ಲ. ದಶಕಗಳ ಕಾಲ ಮನುಷ್ಯರ ಮುಖವನ್ನು ನೆನಪಿನಲ್ಲಿಟ್ಟುಕೊಂಡು ಸಾಯಿಸಲು ಬರುತ್ತದೆ ಎನ್ನುವ ಮೂಢ ನಂಬಿಕೆ ಹುಟ್ಟಲು ಕಾರಣಕರ್ತರು ನಮ್ಮ ಸಿನೆಮಾದವರು.

Nag Panchami Festival In Bidar - YouTube

 

೩. ನಾಗರ ಹಾವಿನ ಬಳಿ ನಾಗಮಣಿ ಇದೆ, ಅದರಿಂದ ಸನ್ಮೋಹಿನಿ ಮಾಡುತ್ತದೆ.

ಇದು ತಮಾಷೆಯಾಗಿದೆಯಾದರೂ ಪುರಾಣ ಮತ್ತು ಸಿನೆಮಾ ಜುಗಲ್‌ಬಂದಿಯಿಂದಾಗಿ ಈ ನಂಬಿಕೆಯೂ ರೂಢಿಯಲ್ಲಿದೆ. ಹಾವುಗಳ ಹಣೆಯಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ವಜ್ರ(ನಾಗಮಣಿ) ಇದೆ ಎನ್ನುವ ಕಾರಣಕ್ಕೆ ಅದೆಷ್ಟೋ ನಾಗರಗಳನ್ನು ಹಿಡಿದು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ.

೪. ಹಾವುಗಳಿಗೆ ಏಳು ತಲೆಗಳು ಇರುತ್ತದೆ.

ಏಳು ತಲೆಯ ಹಾವು ಈ ದೇವಸ್ಥಾನದಲ್ಲಿ ಕಾವಲಿದೆ, ಆ ನಿಧಿಗೆ ಕಾವಲಿದೆ, ಅವನು ಏಳು ತಲೆಯ ಹಾವು ನೋಡಿದನಂತೆ ಹಾಗಾಗಿ ಸತ್ತುಹೋದ. ಇಂತಹ ಹಲವಾರು ಮಾತುಗಳನ್ನು ನಾವು ಕೇಳಿರುತ್ತೇವೆ. ಇನ್ನೂ ಕೆಲವರು ಈಗ ಇಲ್ಲ ಮುಂಚೆ ಇತ್ತು, ದೇವರುಗಳಿಗೆ ಏಳೆಡೆಯ ಹಾವು ಕಾವಲು ಇರುತ್ತಿತ್ತು ಎಂದು ಹೇಳುತ್ತಾರೆ. ಈಗ ಅಸ್ತಿತ್ವದಲ್ಲಿ ಇಲ್ಲದ ಡೈನಾಸಾರ್‌ಗಳ ಪಳೆಯುಳಿಕೆಗಳಿಂದ ಮತ್ತು ಹಲವಾರು ವೈಜ್ಞಾನಿಕ ಪರೀಕ್ಷೆಗಳ ಮೂಲಕ ಡೈನಾಸಾರ್ ಗಳು ಇದ್ದವು ಎನ್ನುವ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ಆದರೆ ಏಳು ತಲೆಯ ಹಾವುಗಳು ಇರುವ/ಇದ್ದ ಕುರಿತಾಗಿ ಯಾವುದೇ ಆಧಾರಗಳು ಲಭ್ಯವಿಲ್ಲ.

೫. ಹಾವುಗಳು ಹಾರುತ್ತವೆ.

ಹಾವುಗಳು ಹಾರುತ್ತದೆ ಎನ್ನುವುದನ್ನು ಕೆಲವೇ ಕೆಲವು ಜನರು ನಂಬುತ್ತಾರೆ, ಹಾರುವ ಕೆಲಸ ಏನಿದ್ದರು ಪಕ್ಷಿಗಳದ್ದು. ಸರೀಸೃಪಗಳು ತೆವಳುತ್ತವೆ. ಕೆಲವು ಸಂದರ್ಭದಲ್ಲಿ ಮತ್ತು ಕೆಲವು ಹಾವುಗಳು ಮಾತ್ರ ತಮ್ಮ ದೇಹ ರಚನೆ, ತೂಕ ಆಧಾರದ ಮೇಲೆ ಮರದ ರೆಂಬೆಯಿಂದ ಮತ್ತೊಂದು ರೆಂಬೆಗೆ ಅಥವಾ ಆಳದ ಜಾಗವನ್ನು ದಾಟುವಾಗ ಜಿಗಿಯುತ್ತದೆ ಆದರೆ ಹಾವುಗಳು ಹಾರುವುದಿಲ್ಲ.

ಹಾವುಗಳ ಕುರಿತು ಭಾರತದಲ್ಲಿ ಇಂತಹ ಇನ್ನೂ ಹತ್ತಾರು ಮೂಢ ನಂಬಿಕೆಗಳು ಆಚರಣೆಯಲ್ಲಿದೆ. ಕೆಲವನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ವಾಸುಕಿ, ಶೇಶನಾಗ ಮತ್ತು ಹಲವು ಪುರಾಣಗಳನ್ನು ಆಧರಿಸಿ ಹಾವುಗಳನ್ನು ಶತಮಾನಗಳನ್ನು ಹಿಂದೂ ಸಂಪ್ರದಾಯದ ಪ್ರಕಾರ ದೇವರೆಂದು ಆರಾಧಾನೆ ಮಾಡಲಾಗುತ್ತಿದೆ. ಅಲ್ಲದೇ ಬೇರೆ ಸಂಪ್ರದಾಯದಲ್ಲಿಯೂ ಆರಾಧನೆ ಇದೆ. ಈಜಿಪ್ಟ್ ಪುರಾಣದ ವಾಜೆಟ್ ನಲ್ಲಿಯೂ ನಾಗ ದೇವಿಯನ್ನು ಆರಾಧಾನೆ ಮಾಡಲಾಗುತ್ತದೆ. ಮತ್ತು (ಬೈಬಲ್ ನ ಸರ್ಪೆಂಟ್ ಸೈತಾನ್) ಹಾವುಗಳನ್ನು ಕೆಟ್ಟ ರಾಕ್ಷಸ ಎಂಬಂತೆಯೂ ನೋಡಲಾಗುತ್ತದೆ. ಆದರೆ ಹಿಂದೂ ಸಂಪ್ರದಾಯದ ಆಚರಣೆಯಲ್ಲಿ ಇಂದಿಗೂ ನಾಗರ ಹಾವುಗಳ ಆರಾಧನೆ ಮುಂದುವರೆದಿದೆ. ಒಟ್ಟಾರೆಯಲ್ಲಿ ಹಾವುಗಳ ಅತೀಯಾದ ಆರಾಧನೆ ಅಥವಾ ದ್ವೇಷ ಈ ಎರಡರಿಂದಲೂ ಹಾವುಗಳ ಅತ್ಯಂತ ತಪ್ಪಾಗಿ ಅರ್ಥ ಮಾಡಿಕೊಳ್ಳಲಾದ ಜೀವಿಯಾಗಿದೆ ಮತ್ತು ಇದರಿಂದಾಗಿ ನಿರಪರಾದಿ ಮುಗ್ದ ಹಾವಿನ ಜೀವಕ್ಕೂ ಅಪಾಯ ತಂದೊಡ್ಡಿದೆ.

ಆಧಾರ: PUGDUNDEE SAFARIS


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-7: ಬೇಲಿಯೆಂದರೆ ಹಸಿರ ಕಲೆ, ಇಲಿ, ಇಲಿಬುಲ್ಡೆ ಇತ್ಯಾದಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....