Homeಮುಖಪುಟಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

ಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

- Advertisement -
- Advertisement -

ಏಮ್ಸ್ ಕೊಠಡಿ ಅಂದ ತಕ್ಷಣ, ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯ ಯಾವುದೋ ಒಂದು ಕೊಠಡಿ ಬಗ್ಗೆ ಇರಬಹುದೇ? ಆ ಕೊಠಡಿ ಒಳಗೆ ಏನಿರಬಹುದು? ಯಾಕಿರಬಹುದು? ಅಂತೆಲ್ಲಾ ಊಹಿಸಿದಿರಾ! ಇದು ದೆಹಲಿಯ ಏಮ್ಸ್ ಕೊಠಡಿಯ ಬಗ್ಗೆ ಅಲ್ಲ. ಆದರೂ ಇದು ಏಮ್ಸ್ ಕೊಠಡಿ!

ಈ ಮೇಲಿನ ಎರಡು ಚಿತ್ರಗಳನ್ನು ಗಮನಿಸಿ. ಏನನ್ನಿಸಿತು? ಚಿತ್ರ (1)ರಲ್ಲಿ ಪುರುಷನು ಮಹಿಳೆಗಿಂತ ಎತ್ತರವಾಗಿದ್ದಾರೆ, ಅದೇ ಚಿತ್ರ (2)ರಲ್ಲಿ ಮಹಿಳೆ ಪುರುಷನಿಗಿಂತ ಎತ್ತರವಾಗಿದ್ದಾರೆ ಅಲ್ಲವೇ? ಆದರೆ, ಚಿತ್ರ (1) ಮತ್ತು (2)ಕ್ಕಿರುವ ಬದಲಾವಣೆಯೆಂದರೆ, ಇಬ್ಬರೂ ತಮ್ಮ ತಮ್ಮ ಸ್ಥಾನಗಳನ್ನು ಬದಲಾಯಿಸಿರುವರು ಅಷ್ಟೇ! ಅದೇ ಕೊಠಡಿ, ಅದೇ ಸ್ಥಳ! ಮತ್ತೊಮ್ಮೆ ಸೂಕ್ಷ್ಮವಾಗಿ ಚಿತ್ರಗಳನ್ನು ಗಮನಿಸಿ.

ಮೇಲಿನ ಚಿತ್ರಗಳಲ್ಲಿರುವ ಕೊಠಡಿಯು ಸಾಮಾನ್ಯ ಕೊಠಡಿಯಂತೆಯೇ ಕಾಣುತ್ತಿದೆ. ಹೇಳಿಕೊಳ್ಳುವಂತಹ ಯಾವ ಬದಲಾವಣೆಗಳೂ ಗೋಚರಿಸುತ್ತಿಲ್ಲ. ಅಲ್ಲದೆ, ವೀಕ್ಷಕರಿಂದ ಇಬ್ಬರೂ ಒಂದೇ ಅಂತರದಲ್ಲಿ ನಿಂತಿದ್ದಾರೆ. ಆದರೆ, ಒಂದು ಬದಿಯಲ್ಲಿ ನಿಂತಿರುವರು ಎತ್ತರವಾಗಿದ್ದಾರೆ. ಅವರೇ ಮತ್ತೊಂದು ಬದಿಗೆ ಹೋದರೆ ಅವರ ಎತ್ತರ ಕಡಿಮೆಯಾಗುತ್ತಿದೆ. ಅವರು ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದುಕೊಂಡು ಹೊಗುವ ವಿಡಿಯೋವನ್ನು ನೀವು ನೋಡಿದರೆ, ಎತ್ತರಗಳು ವ್ಯತ್ಯಾಸವಾಗುವುದನ್ನು ಗಮನಿಸಬಹುದು. ವಿಡಿಯೋ ನೋಡಲು QR ಕೋಡ್ ಸ್ಕ್ಯಾನ್ ಮಾಡಿ.

ಅರೆ, ಏನಿದು, ನಮ್ಮ ಕಣ್ಣಿಗೆ ಹೀಗೇಕೆ ಮೋಸವಾಗುತ್ತಿದೆ? ಇಂತಹ ಮೋಸಮಾಡುವ ಪ್ರಕ್ರಿಯೆಗಳನ್ನು ವೈಜ್ಞಾನಿಕವಾಗಿ ಭ್ರಮೆ (Illusion) ಎಂದು ಕರೆಯುತ್ತೇವೆ. ಮೇಲಿನ ಚಿತ್ರದಲ್ಲಿರುವ ಕೊಠಡಿಯು ಸಹ ಅಂತಹ ದೃಷ್ಟಿಭ್ರಮೆಗೆ ಒಂದು ಉದಾಹರಣೆ (Optical Illusion).

ಅಮೆರಿಕಾದ ಅಡೆಲ್ಬರ್ಟ್ ಏಮ್ಸ್ ಎಂಬ ಹೆಸರಿತ ನೇತ್ರ ತಜ್ಞ ಮೊದಲ ಬಾರಿಗೆ ಇಂತಹ ಕೊಠಡಿಯನ್ನು ವಿನ್ಯಾಸ ಮಾಡಿದರು. ಖ್ಯಾತ ಭೌತವಿಜ್ಞಾನಿಯಾದ ಹರ್ಮನ್ ಹೆಲ್ಮೋಲ್ಟ್ಸ್ (Hermann Helmholtz) ಅವರು ಮೊದಲ ಬಾರಿಗೆ ಇಂತಹ ಕೊಠಡಿಯ ಪರಿಕಲ್ಪನೆಯನ್ನು ವಿವರಿಸಿದ್ದರೂ, ಅದನ್ನು ಮೊಟ್ಟಮೊದಲ ಬಾರಿಗೆ ನಿರ್ಮಿಸಿದ್ದು ನೇತ್ರ ತಜ್ಞ ಏಮ್ಸ್. ಈ ಕೊಠಡಿಯಲ್ಲಿನ ವಿಶೇಷವೆಂದರೆ, ವಸ್ತುವು ನೋಡುಗರಿಂದ ಒಂದೇ ದೂರದಲ್ಲಿದ್ದರೂ, ಅದನ್ನು ಒಂದು ಬದಿಯಲ್ಲಿಟ್ಟರೆ ಅದು ದೈತ್ಯವಾಗಿ, ಮತ್ತೊಂದು ಬದಿಯಲ್ಲಿಟ್ಟರೆ ಕುಬ್ಜವಾಗಿರುವಂತೆ ಕಾಣುತ್ತದೆ.

ಏಮ್ಸ್ ಕೊಠಡಿಯ ವಿನ್ಯಾಸ

ಮೇಲಿನ ಚಿತ್ರಗಳು ಏಮ್ಸ್ ಕೊಠಡಿಯ ವಿನ್ಯಾಸದ top view ಮತ್ತು side viewಗಳನ್ನು ತೋರಿಸುತ್ತವೆ. ಸಾಮಾನ್ಯವಾಗಿ ನಾವು ಕೊಠಡಿ ಎಂದಾಕ್ಷಣಾ ಛಾವಣಿ ಮತ್ತು ನೆಲವು ಸಮಾನಾಂತರವಾಗಿದ್ದು, ಗೋಡೆಗಳು ನೇರವಾಗಿರುವಂತೆ ಗ್ರಹಿಸುತ್ತೇವೆ. ಹಾಗೆಯೇ, ಏಮ್ಸ್ ಕೊಠಡಿಯನ್ನು ಹೊರಗಿನಿಂದ ಕಂಡಾಗ, ಇದೇ ರೀತಿ ಗೋಚರಿಸುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಆ ಕೊಠಡಿಯನ್ನು ಒಂದು ವೀಕ್ಷಣಾ ಕಿಂಡಿಯಿಂದ ಕಂಡಾಗ ಮಾತ್ರ ಅದರ ಮ್ಯಾಜಿಕ್ ಅನಾವರಣಗೊಂಡು ನಮ್ಮನ್ನು ಚಕಿತಗೊಳಿಸುತ್ತದೆ.

ಏಮ್ಸ್ ಕೊಠಡಿ, ಹೊರಗಿನಿಂದ ಸಾಮಾನ್ಯ ಕೊಠಡಿಯಾಗಿದ್ದರೂ, ಅದನ್ನು trapezoidal shapeನಲ್ಲಿ (ವಿಷಮ ಸಮಾನಾಂತರ ಚತುರ್ಭುಜ) ವಿನ್ಯಾಸ ಮಾಡಿರುತ್ತಾರೆ. ಈ ಕೊಠಡಿಯಲ್ಲಿ ಯಾವ ಗೋಡೆಗಳೂ ಸಮಾನಾಂತರವಾಗಿರುವುದಿಲ್ಲ, ಎಲ್ಲವೂ ಒಂದಕ್ಕೊಂದು ಓರೆಯಾಗಿರುತ್ತದೆ. ನೆಲ ಮತ್ತು ಛಾವಣಿಯೂ ಕೂಡ ಸಮಾನಾಂತರವಾಗಿರದೆ, ಛಾವಣಿಯು ಇಳಿಜಾರಾಗಿರುತ್ತದೆ. ಏಮ್ಸ್ ಕೊಠಡಿಯ ಒಳಗೆ ವೀಕ್ಷಿಸಲು ನಿರ್ದಿಷ್ಟ ಜಾಗವನ್ನು ಅಥವಾ ವೀಕ್ಷಣಾ ಕಿಂಡಿಯನ್ನು ಕಲ್ಪಿಸಿರುತ್ತಾರೆ. ಅಲ್ಲಿಂದಲೇ ಒಳಗೆ ನಡೆಯುವ ಕ್ರಿಯೆಯನ್ನು ನೋಡಬೇಕು. ಈ ವೀಕ್ಷಣಾ ಕಿಂಡಿಯಿಂದ ನೋಡಿದಾಗ ಮಾತ್ರ ಒಂದು ಬದಿ ಹತ್ತಿರವಿರುವಂತೆ, ಮತ್ತೊಂದು ಬದಿ ದೂರವಿರುವಂತೆ ಕಾಣುತ್ತದೆ. ಮೇಲಿನ ಚಿತ್ರಗಳಲ್ಲಿ ಅದನ್ನು ನೋಡಬಹುದು. ಆದರೆ, ನೋಡುಗರಿಗೆ ಇದ್ಯಾವುದು ಗೊತ್ತಾಗದ ರೀತಿಯಲ್ಲಿ ಏಮ್ಸ್ ಕೊಠಡಿಯು ಒಳಗೆ ನೆಲ, ಛಾವಣಿ ಮತ್ತು ಗೋಡೆಗಳ ಮೇಲೆ ಚಿತ್ರ ಅಥವಾ ವಿನ್ಯಾಸಗಳನ್ನು ರಚಿಸಲಾಗಿರುತ್ತದೆ. ಈ ಚಿತ್ರಗಳು ಈ ಕೊಠಡಿ ಒಂದು ಸಾಮಾನ್ಯ ಕೊಠಡಿಯಂತೆಯೇ ಇದೆ ಎನ್ನುವ ಭ್ರಮೆಯನ್ನು ನಮ್ಮ ಕಣ್ಣಿನಲ್ಲಿ ಬಿಂಬಿಸುತ್ತಲೇ ಇರುತ್ತದೆ. ಆದರೆ, ಕೊಠಡಿಯೊಳಗೆ ಒಂದು ಬದಿಯಿಂದ ಇನ್ನೊಂದು ಬದಿಗೆ ಯಾರಾದರೂ ನಡೆದರೆ ಅಥವಾ ವಸ್ತುಗಳ ಸ್ಥಾನವನ್ನು ಬದಲಾಯಿಸಿದರೆ, ಅರೆ ಏನಿದು, ಏನಾಯಿತು, ಹೇಗೆ ಆ ವಸ್ತು ಚಿಕ್ಕದಾಯ್ತು, ದೊಡ್ಡದಾಯ್ತು ಎನ್ನುವ ಪ್ರಶ್ನೆಗಳು ಮೂಡುತ್ತವೆ. ಇದೇ ದೃಷ್ಟಿ ಭ್ರಮೆ! ಮನುಷ್ಯನ ಮೆದುಳು ವಸ್ತುವಿನ ಗಾತ್ರವನ್ನು ಹೇಗೆ ಕಂಡುಕೊಳ್ಳುತ್ತದೆ ಎನ್ನುವ ಆಂಶವನ್ನು ತಿಳಿಯಲು ಇಂತಹ ದೃಷ್ಟಿ ಭ್ರಮೆಯ ಪ್ರಯೋಗಗಳನ್ನು ಕೈಗೊಂಡು ಮನಶಾಸ್ತಜ್ಞರು ಅಧ್ಯಯನ ನಡೆಸುತ್ತಾರೆ.

ಅಂದಹಾಗೆ ಮೇಲಿನ ವಿನ್ಯಾಸದಂತೆ ಈ ಏಮ್ಸ್ ಕೊಠಡಿಯನ್ನು ನೀವು ಕಟ್ಟಿಸಬಹುದು, ಅಥವಾ ದೊಡ್ಡದಾದ ಕಾರ್ಡ್‌ಬೋರ್ಡ್‌ಗಳಲ್ಲಿ, ಗೋಡೆ, ಛಾವಣಿ ಮತ್ತು ನೆಲಹಾಸುಗಳನ್ನು ಮಾಡಿ, ಬಣ್ಣ ಬಳಿದು ಏಮ್ಸ್ ಕೊಠಡಿಯನ್ನು ಶಾಲೆ, ಕಾಲೇಜು ಅಥವಾ ಮ್ಯೂಸಿಯಂಗಳಲ್ಲಿ ನಿರ್ಮಿಸಬಹುದು. ಬೆಂಗಳೂರಿನ ಜವಾಹಾರಲಾಲ್ ನೆಹರೂ ತಾರಾಲಯದಲ್ಲಿ ದೊಡ್ಡದಾದ ಏಮ್ಸ್ ಕೊಠಡಿಯನ್ನೇ ನಿರ್ಮಿಸಿದ್ದಾರೆ. ಒಮ್ಮೆ ಅಲ್ಲಿಗೆ ಭೇಟಿ ನೀಡಿದಾಗ, ಖಗೋಳ ಪ್ರದರ್ಶನದ ಜೊತೆಗೆ, ಏಮ್ಸ್ ಕೊಠಡಿ ಒಳಗೂ ಒಂದು ವಾಕ್ ಮಾಡಿ ಬನ್ನಿ.


ಇದನ್ನೂ ಓದಿ: ಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...