Homeಮುಖಪುಟಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

ಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

- Advertisement -
- Advertisement -

ಏಮ್ಸ್ ಕೊಠಡಿ ಅಂದ ತಕ್ಷಣ, ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯ ಯಾವುದೋ ಒಂದು ಕೊಠಡಿ ಬಗ್ಗೆ ಇರಬಹುದೇ? ಆ ಕೊಠಡಿ ಒಳಗೆ ಏನಿರಬಹುದು? ಯಾಕಿರಬಹುದು? ಅಂತೆಲ್ಲಾ ಊಹಿಸಿದಿರಾ! ಇದು ದೆಹಲಿಯ ಏಮ್ಸ್ ಕೊಠಡಿಯ ಬಗ್ಗೆ ಅಲ್ಲ. ಆದರೂ ಇದು ಏಮ್ಸ್ ಕೊಠಡಿ!

ಈ ಮೇಲಿನ ಎರಡು ಚಿತ್ರಗಳನ್ನು ಗಮನಿಸಿ. ಏನನ್ನಿಸಿತು? ಚಿತ್ರ (1)ರಲ್ಲಿ ಪುರುಷನು ಮಹಿಳೆಗಿಂತ ಎತ್ತರವಾಗಿದ್ದಾರೆ, ಅದೇ ಚಿತ್ರ (2)ರಲ್ಲಿ ಮಹಿಳೆ ಪುರುಷನಿಗಿಂತ ಎತ್ತರವಾಗಿದ್ದಾರೆ ಅಲ್ಲವೇ? ಆದರೆ, ಚಿತ್ರ (1) ಮತ್ತು (2)ಕ್ಕಿರುವ ಬದಲಾವಣೆಯೆಂದರೆ, ಇಬ್ಬರೂ ತಮ್ಮ ತಮ್ಮ ಸ್ಥಾನಗಳನ್ನು ಬದಲಾಯಿಸಿರುವರು ಅಷ್ಟೇ! ಅದೇ ಕೊಠಡಿ, ಅದೇ ಸ್ಥಳ! ಮತ್ತೊಮ್ಮೆ ಸೂಕ್ಷ್ಮವಾಗಿ ಚಿತ್ರಗಳನ್ನು ಗಮನಿಸಿ.

ಮೇಲಿನ ಚಿತ್ರಗಳಲ್ಲಿರುವ ಕೊಠಡಿಯು ಸಾಮಾನ್ಯ ಕೊಠಡಿಯಂತೆಯೇ ಕಾಣುತ್ತಿದೆ. ಹೇಳಿಕೊಳ್ಳುವಂತಹ ಯಾವ ಬದಲಾವಣೆಗಳೂ ಗೋಚರಿಸುತ್ತಿಲ್ಲ. ಅಲ್ಲದೆ, ವೀಕ್ಷಕರಿಂದ ಇಬ್ಬರೂ ಒಂದೇ ಅಂತರದಲ್ಲಿ ನಿಂತಿದ್ದಾರೆ. ಆದರೆ, ಒಂದು ಬದಿಯಲ್ಲಿ ನಿಂತಿರುವರು ಎತ್ತರವಾಗಿದ್ದಾರೆ. ಅವರೇ ಮತ್ತೊಂದು ಬದಿಗೆ ಹೋದರೆ ಅವರ ಎತ್ತರ ಕಡಿಮೆಯಾಗುತ್ತಿದೆ. ಅವರು ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದುಕೊಂಡು ಹೊಗುವ ವಿಡಿಯೋವನ್ನು ನೀವು ನೋಡಿದರೆ, ಎತ್ತರಗಳು ವ್ಯತ್ಯಾಸವಾಗುವುದನ್ನು ಗಮನಿಸಬಹುದು. ವಿಡಿಯೋ ನೋಡಲು QR ಕೋಡ್ ಸ್ಕ್ಯಾನ್ ಮಾಡಿ.

ಅರೆ, ಏನಿದು, ನಮ್ಮ ಕಣ್ಣಿಗೆ ಹೀಗೇಕೆ ಮೋಸವಾಗುತ್ತಿದೆ? ಇಂತಹ ಮೋಸಮಾಡುವ ಪ್ರಕ್ರಿಯೆಗಳನ್ನು ವೈಜ್ಞಾನಿಕವಾಗಿ ಭ್ರಮೆ (Illusion) ಎಂದು ಕರೆಯುತ್ತೇವೆ. ಮೇಲಿನ ಚಿತ್ರದಲ್ಲಿರುವ ಕೊಠಡಿಯು ಸಹ ಅಂತಹ ದೃಷ್ಟಿಭ್ರಮೆಗೆ ಒಂದು ಉದಾಹರಣೆ (Optical Illusion).

ಅಮೆರಿಕಾದ ಅಡೆಲ್ಬರ್ಟ್ ಏಮ್ಸ್ ಎಂಬ ಹೆಸರಿತ ನೇತ್ರ ತಜ್ಞ ಮೊದಲ ಬಾರಿಗೆ ಇಂತಹ ಕೊಠಡಿಯನ್ನು ವಿನ್ಯಾಸ ಮಾಡಿದರು. ಖ್ಯಾತ ಭೌತವಿಜ್ಞಾನಿಯಾದ ಹರ್ಮನ್ ಹೆಲ್ಮೋಲ್ಟ್ಸ್ (Hermann Helmholtz) ಅವರು ಮೊದಲ ಬಾರಿಗೆ ಇಂತಹ ಕೊಠಡಿಯ ಪರಿಕಲ್ಪನೆಯನ್ನು ವಿವರಿಸಿದ್ದರೂ, ಅದನ್ನು ಮೊಟ್ಟಮೊದಲ ಬಾರಿಗೆ ನಿರ್ಮಿಸಿದ್ದು ನೇತ್ರ ತಜ್ಞ ಏಮ್ಸ್. ಈ ಕೊಠಡಿಯಲ್ಲಿನ ವಿಶೇಷವೆಂದರೆ, ವಸ್ತುವು ನೋಡುಗರಿಂದ ಒಂದೇ ದೂರದಲ್ಲಿದ್ದರೂ, ಅದನ್ನು ಒಂದು ಬದಿಯಲ್ಲಿಟ್ಟರೆ ಅದು ದೈತ್ಯವಾಗಿ, ಮತ್ತೊಂದು ಬದಿಯಲ್ಲಿಟ್ಟರೆ ಕುಬ್ಜವಾಗಿರುವಂತೆ ಕಾಣುತ್ತದೆ.

ಏಮ್ಸ್ ಕೊಠಡಿಯ ವಿನ್ಯಾಸ

ಮೇಲಿನ ಚಿತ್ರಗಳು ಏಮ್ಸ್ ಕೊಠಡಿಯ ವಿನ್ಯಾಸದ top view ಮತ್ತು side viewಗಳನ್ನು ತೋರಿಸುತ್ತವೆ. ಸಾಮಾನ್ಯವಾಗಿ ನಾವು ಕೊಠಡಿ ಎಂದಾಕ್ಷಣಾ ಛಾವಣಿ ಮತ್ತು ನೆಲವು ಸಮಾನಾಂತರವಾಗಿದ್ದು, ಗೋಡೆಗಳು ನೇರವಾಗಿರುವಂತೆ ಗ್ರಹಿಸುತ್ತೇವೆ. ಹಾಗೆಯೇ, ಏಮ್ಸ್ ಕೊಠಡಿಯನ್ನು ಹೊರಗಿನಿಂದ ಕಂಡಾಗ, ಇದೇ ರೀತಿ ಗೋಚರಿಸುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಆ ಕೊಠಡಿಯನ್ನು ಒಂದು ವೀಕ್ಷಣಾ ಕಿಂಡಿಯಿಂದ ಕಂಡಾಗ ಮಾತ್ರ ಅದರ ಮ್ಯಾಜಿಕ್ ಅನಾವರಣಗೊಂಡು ನಮ್ಮನ್ನು ಚಕಿತಗೊಳಿಸುತ್ತದೆ.

ಏಮ್ಸ್ ಕೊಠಡಿ, ಹೊರಗಿನಿಂದ ಸಾಮಾನ್ಯ ಕೊಠಡಿಯಾಗಿದ್ದರೂ, ಅದನ್ನು trapezoidal shapeನಲ್ಲಿ (ವಿಷಮ ಸಮಾನಾಂತರ ಚತುರ್ಭುಜ) ವಿನ್ಯಾಸ ಮಾಡಿರುತ್ತಾರೆ. ಈ ಕೊಠಡಿಯಲ್ಲಿ ಯಾವ ಗೋಡೆಗಳೂ ಸಮಾನಾಂತರವಾಗಿರುವುದಿಲ್ಲ, ಎಲ್ಲವೂ ಒಂದಕ್ಕೊಂದು ಓರೆಯಾಗಿರುತ್ತದೆ. ನೆಲ ಮತ್ತು ಛಾವಣಿಯೂ ಕೂಡ ಸಮಾನಾಂತರವಾಗಿರದೆ, ಛಾವಣಿಯು ಇಳಿಜಾರಾಗಿರುತ್ತದೆ. ಏಮ್ಸ್ ಕೊಠಡಿಯ ಒಳಗೆ ವೀಕ್ಷಿಸಲು ನಿರ್ದಿಷ್ಟ ಜಾಗವನ್ನು ಅಥವಾ ವೀಕ್ಷಣಾ ಕಿಂಡಿಯನ್ನು ಕಲ್ಪಿಸಿರುತ್ತಾರೆ. ಅಲ್ಲಿಂದಲೇ ಒಳಗೆ ನಡೆಯುವ ಕ್ರಿಯೆಯನ್ನು ನೋಡಬೇಕು. ಈ ವೀಕ್ಷಣಾ ಕಿಂಡಿಯಿಂದ ನೋಡಿದಾಗ ಮಾತ್ರ ಒಂದು ಬದಿ ಹತ್ತಿರವಿರುವಂತೆ, ಮತ್ತೊಂದು ಬದಿ ದೂರವಿರುವಂತೆ ಕಾಣುತ್ತದೆ. ಮೇಲಿನ ಚಿತ್ರಗಳಲ್ಲಿ ಅದನ್ನು ನೋಡಬಹುದು. ಆದರೆ, ನೋಡುಗರಿಗೆ ಇದ್ಯಾವುದು ಗೊತ್ತಾಗದ ರೀತಿಯಲ್ಲಿ ಏಮ್ಸ್ ಕೊಠಡಿಯು ಒಳಗೆ ನೆಲ, ಛಾವಣಿ ಮತ್ತು ಗೋಡೆಗಳ ಮೇಲೆ ಚಿತ್ರ ಅಥವಾ ವಿನ್ಯಾಸಗಳನ್ನು ರಚಿಸಲಾಗಿರುತ್ತದೆ. ಈ ಚಿತ್ರಗಳು ಈ ಕೊಠಡಿ ಒಂದು ಸಾಮಾನ್ಯ ಕೊಠಡಿಯಂತೆಯೇ ಇದೆ ಎನ್ನುವ ಭ್ರಮೆಯನ್ನು ನಮ್ಮ ಕಣ್ಣಿನಲ್ಲಿ ಬಿಂಬಿಸುತ್ತಲೇ ಇರುತ್ತದೆ. ಆದರೆ, ಕೊಠಡಿಯೊಳಗೆ ಒಂದು ಬದಿಯಿಂದ ಇನ್ನೊಂದು ಬದಿಗೆ ಯಾರಾದರೂ ನಡೆದರೆ ಅಥವಾ ವಸ್ತುಗಳ ಸ್ಥಾನವನ್ನು ಬದಲಾಯಿಸಿದರೆ, ಅರೆ ಏನಿದು, ಏನಾಯಿತು, ಹೇಗೆ ಆ ವಸ್ತು ಚಿಕ್ಕದಾಯ್ತು, ದೊಡ್ಡದಾಯ್ತು ಎನ್ನುವ ಪ್ರಶ್ನೆಗಳು ಮೂಡುತ್ತವೆ. ಇದೇ ದೃಷ್ಟಿ ಭ್ರಮೆ! ಮನುಷ್ಯನ ಮೆದುಳು ವಸ್ತುವಿನ ಗಾತ್ರವನ್ನು ಹೇಗೆ ಕಂಡುಕೊಳ್ಳುತ್ತದೆ ಎನ್ನುವ ಆಂಶವನ್ನು ತಿಳಿಯಲು ಇಂತಹ ದೃಷ್ಟಿ ಭ್ರಮೆಯ ಪ್ರಯೋಗಗಳನ್ನು ಕೈಗೊಂಡು ಮನಶಾಸ್ತಜ್ಞರು ಅಧ್ಯಯನ ನಡೆಸುತ್ತಾರೆ.

ಅಂದಹಾಗೆ ಮೇಲಿನ ವಿನ್ಯಾಸದಂತೆ ಈ ಏಮ್ಸ್ ಕೊಠಡಿಯನ್ನು ನೀವು ಕಟ್ಟಿಸಬಹುದು, ಅಥವಾ ದೊಡ್ಡದಾದ ಕಾರ್ಡ್‌ಬೋರ್ಡ್‌ಗಳಲ್ಲಿ, ಗೋಡೆ, ಛಾವಣಿ ಮತ್ತು ನೆಲಹಾಸುಗಳನ್ನು ಮಾಡಿ, ಬಣ್ಣ ಬಳಿದು ಏಮ್ಸ್ ಕೊಠಡಿಯನ್ನು ಶಾಲೆ, ಕಾಲೇಜು ಅಥವಾ ಮ್ಯೂಸಿಯಂಗಳಲ್ಲಿ ನಿರ್ಮಿಸಬಹುದು. ಬೆಂಗಳೂರಿನ ಜವಾಹಾರಲಾಲ್ ನೆಹರೂ ತಾರಾಲಯದಲ್ಲಿ ದೊಡ್ಡದಾದ ಏಮ್ಸ್ ಕೊಠಡಿಯನ್ನೇ ನಿರ್ಮಿಸಿದ್ದಾರೆ. ಒಮ್ಮೆ ಅಲ್ಲಿಗೆ ಭೇಟಿ ನೀಡಿದಾಗ, ಖಗೋಳ ಪ್ರದರ್ಶನದ ಜೊತೆಗೆ, ಏಮ್ಸ್ ಕೊಠಡಿ ಒಳಗೂ ಒಂದು ವಾಕ್ ಮಾಡಿ ಬನ್ನಿ.


ಇದನ್ನೂ ಓದಿ: ಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...