Homeಮುಖಪುಟಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

ಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

- Advertisement -
- Advertisement -

ಏಮ್ಸ್ ಕೊಠಡಿ ಅಂದ ತಕ್ಷಣ, ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯ ಯಾವುದೋ ಒಂದು ಕೊಠಡಿ ಬಗ್ಗೆ ಇರಬಹುದೇ? ಆ ಕೊಠಡಿ ಒಳಗೆ ಏನಿರಬಹುದು? ಯಾಕಿರಬಹುದು? ಅಂತೆಲ್ಲಾ ಊಹಿಸಿದಿರಾ! ಇದು ದೆಹಲಿಯ ಏಮ್ಸ್ ಕೊಠಡಿಯ ಬಗ್ಗೆ ಅಲ್ಲ. ಆದರೂ ಇದು ಏಮ್ಸ್ ಕೊಠಡಿ!

ಈ ಮೇಲಿನ ಎರಡು ಚಿತ್ರಗಳನ್ನು ಗಮನಿಸಿ. ಏನನ್ನಿಸಿತು? ಚಿತ್ರ (1)ರಲ್ಲಿ ಪುರುಷನು ಮಹಿಳೆಗಿಂತ ಎತ್ತರವಾಗಿದ್ದಾರೆ, ಅದೇ ಚಿತ್ರ (2)ರಲ್ಲಿ ಮಹಿಳೆ ಪುರುಷನಿಗಿಂತ ಎತ್ತರವಾಗಿದ್ದಾರೆ ಅಲ್ಲವೇ? ಆದರೆ, ಚಿತ್ರ (1) ಮತ್ತು (2)ಕ್ಕಿರುವ ಬದಲಾವಣೆಯೆಂದರೆ, ಇಬ್ಬರೂ ತಮ್ಮ ತಮ್ಮ ಸ್ಥಾನಗಳನ್ನು ಬದಲಾಯಿಸಿರುವರು ಅಷ್ಟೇ! ಅದೇ ಕೊಠಡಿ, ಅದೇ ಸ್ಥಳ! ಮತ್ತೊಮ್ಮೆ ಸೂಕ್ಷ್ಮವಾಗಿ ಚಿತ್ರಗಳನ್ನು ಗಮನಿಸಿ.

ಮೇಲಿನ ಚಿತ್ರಗಳಲ್ಲಿರುವ ಕೊಠಡಿಯು ಸಾಮಾನ್ಯ ಕೊಠಡಿಯಂತೆಯೇ ಕಾಣುತ್ತಿದೆ. ಹೇಳಿಕೊಳ್ಳುವಂತಹ ಯಾವ ಬದಲಾವಣೆಗಳೂ ಗೋಚರಿಸುತ್ತಿಲ್ಲ. ಅಲ್ಲದೆ, ವೀಕ್ಷಕರಿಂದ ಇಬ್ಬರೂ ಒಂದೇ ಅಂತರದಲ್ಲಿ ನಿಂತಿದ್ದಾರೆ. ಆದರೆ, ಒಂದು ಬದಿಯಲ್ಲಿ ನಿಂತಿರುವರು ಎತ್ತರವಾಗಿದ್ದಾರೆ. ಅವರೇ ಮತ್ತೊಂದು ಬದಿಗೆ ಹೋದರೆ ಅವರ ಎತ್ತರ ಕಡಿಮೆಯಾಗುತ್ತಿದೆ. ಅವರು ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದುಕೊಂಡು ಹೊಗುವ ವಿಡಿಯೋವನ್ನು ನೀವು ನೋಡಿದರೆ, ಎತ್ತರಗಳು ವ್ಯತ್ಯಾಸವಾಗುವುದನ್ನು ಗಮನಿಸಬಹುದು. ವಿಡಿಯೋ ನೋಡಲು QR ಕೋಡ್ ಸ್ಕ್ಯಾನ್ ಮಾಡಿ.

ಅರೆ, ಏನಿದು, ನಮ್ಮ ಕಣ್ಣಿಗೆ ಹೀಗೇಕೆ ಮೋಸವಾಗುತ್ತಿದೆ? ಇಂತಹ ಮೋಸಮಾಡುವ ಪ್ರಕ್ರಿಯೆಗಳನ್ನು ವೈಜ್ಞಾನಿಕವಾಗಿ ಭ್ರಮೆ (Illusion) ಎಂದು ಕರೆಯುತ್ತೇವೆ. ಮೇಲಿನ ಚಿತ್ರದಲ್ಲಿರುವ ಕೊಠಡಿಯು ಸಹ ಅಂತಹ ದೃಷ್ಟಿಭ್ರಮೆಗೆ ಒಂದು ಉದಾಹರಣೆ (Optical Illusion).

ಅಮೆರಿಕಾದ ಅಡೆಲ್ಬರ್ಟ್ ಏಮ್ಸ್ ಎಂಬ ಹೆಸರಿತ ನೇತ್ರ ತಜ್ಞ ಮೊದಲ ಬಾರಿಗೆ ಇಂತಹ ಕೊಠಡಿಯನ್ನು ವಿನ್ಯಾಸ ಮಾಡಿದರು. ಖ್ಯಾತ ಭೌತವಿಜ್ಞಾನಿಯಾದ ಹರ್ಮನ್ ಹೆಲ್ಮೋಲ್ಟ್ಸ್ (Hermann Helmholtz) ಅವರು ಮೊದಲ ಬಾರಿಗೆ ಇಂತಹ ಕೊಠಡಿಯ ಪರಿಕಲ್ಪನೆಯನ್ನು ವಿವರಿಸಿದ್ದರೂ, ಅದನ್ನು ಮೊಟ್ಟಮೊದಲ ಬಾರಿಗೆ ನಿರ್ಮಿಸಿದ್ದು ನೇತ್ರ ತಜ್ಞ ಏಮ್ಸ್. ಈ ಕೊಠಡಿಯಲ್ಲಿನ ವಿಶೇಷವೆಂದರೆ, ವಸ್ತುವು ನೋಡುಗರಿಂದ ಒಂದೇ ದೂರದಲ್ಲಿದ್ದರೂ, ಅದನ್ನು ಒಂದು ಬದಿಯಲ್ಲಿಟ್ಟರೆ ಅದು ದೈತ್ಯವಾಗಿ, ಮತ್ತೊಂದು ಬದಿಯಲ್ಲಿಟ್ಟರೆ ಕುಬ್ಜವಾಗಿರುವಂತೆ ಕಾಣುತ್ತದೆ.

ಏಮ್ಸ್ ಕೊಠಡಿಯ ವಿನ್ಯಾಸ

ಮೇಲಿನ ಚಿತ್ರಗಳು ಏಮ್ಸ್ ಕೊಠಡಿಯ ವಿನ್ಯಾಸದ top view ಮತ್ತು side viewಗಳನ್ನು ತೋರಿಸುತ್ತವೆ. ಸಾಮಾನ್ಯವಾಗಿ ನಾವು ಕೊಠಡಿ ಎಂದಾಕ್ಷಣಾ ಛಾವಣಿ ಮತ್ತು ನೆಲವು ಸಮಾನಾಂತರವಾಗಿದ್ದು, ಗೋಡೆಗಳು ನೇರವಾಗಿರುವಂತೆ ಗ್ರಹಿಸುತ್ತೇವೆ. ಹಾಗೆಯೇ, ಏಮ್ಸ್ ಕೊಠಡಿಯನ್ನು ಹೊರಗಿನಿಂದ ಕಂಡಾಗ, ಇದೇ ರೀತಿ ಗೋಚರಿಸುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಆ ಕೊಠಡಿಯನ್ನು ಒಂದು ವೀಕ್ಷಣಾ ಕಿಂಡಿಯಿಂದ ಕಂಡಾಗ ಮಾತ್ರ ಅದರ ಮ್ಯಾಜಿಕ್ ಅನಾವರಣಗೊಂಡು ನಮ್ಮನ್ನು ಚಕಿತಗೊಳಿಸುತ್ತದೆ.

ಏಮ್ಸ್ ಕೊಠಡಿ, ಹೊರಗಿನಿಂದ ಸಾಮಾನ್ಯ ಕೊಠಡಿಯಾಗಿದ್ದರೂ, ಅದನ್ನು trapezoidal shapeನಲ್ಲಿ (ವಿಷಮ ಸಮಾನಾಂತರ ಚತುರ್ಭುಜ) ವಿನ್ಯಾಸ ಮಾಡಿರುತ್ತಾರೆ. ಈ ಕೊಠಡಿಯಲ್ಲಿ ಯಾವ ಗೋಡೆಗಳೂ ಸಮಾನಾಂತರವಾಗಿರುವುದಿಲ್ಲ, ಎಲ್ಲವೂ ಒಂದಕ್ಕೊಂದು ಓರೆಯಾಗಿರುತ್ತದೆ. ನೆಲ ಮತ್ತು ಛಾವಣಿಯೂ ಕೂಡ ಸಮಾನಾಂತರವಾಗಿರದೆ, ಛಾವಣಿಯು ಇಳಿಜಾರಾಗಿರುತ್ತದೆ. ಏಮ್ಸ್ ಕೊಠಡಿಯ ಒಳಗೆ ವೀಕ್ಷಿಸಲು ನಿರ್ದಿಷ್ಟ ಜಾಗವನ್ನು ಅಥವಾ ವೀಕ್ಷಣಾ ಕಿಂಡಿಯನ್ನು ಕಲ್ಪಿಸಿರುತ್ತಾರೆ. ಅಲ್ಲಿಂದಲೇ ಒಳಗೆ ನಡೆಯುವ ಕ್ರಿಯೆಯನ್ನು ನೋಡಬೇಕು. ಈ ವೀಕ್ಷಣಾ ಕಿಂಡಿಯಿಂದ ನೋಡಿದಾಗ ಮಾತ್ರ ಒಂದು ಬದಿ ಹತ್ತಿರವಿರುವಂತೆ, ಮತ್ತೊಂದು ಬದಿ ದೂರವಿರುವಂತೆ ಕಾಣುತ್ತದೆ. ಮೇಲಿನ ಚಿತ್ರಗಳಲ್ಲಿ ಅದನ್ನು ನೋಡಬಹುದು. ಆದರೆ, ನೋಡುಗರಿಗೆ ಇದ್ಯಾವುದು ಗೊತ್ತಾಗದ ರೀತಿಯಲ್ಲಿ ಏಮ್ಸ್ ಕೊಠಡಿಯು ಒಳಗೆ ನೆಲ, ಛಾವಣಿ ಮತ್ತು ಗೋಡೆಗಳ ಮೇಲೆ ಚಿತ್ರ ಅಥವಾ ವಿನ್ಯಾಸಗಳನ್ನು ರಚಿಸಲಾಗಿರುತ್ತದೆ. ಈ ಚಿತ್ರಗಳು ಈ ಕೊಠಡಿ ಒಂದು ಸಾಮಾನ್ಯ ಕೊಠಡಿಯಂತೆಯೇ ಇದೆ ಎನ್ನುವ ಭ್ರಮೆಯನ್ನು ನಮ್ಮ ಕಣ್ಣಿನಲ್ಲಿ ಬಿಂಬಿಸುತ್ತಲೇ ಇರುತ್ತದೆ. ಆದರೆ, ಕೊಠಡಿಯೊಳಗೆ ಒಂದು ಬದಿಯಿಂದ ಇನ್ನೊಂದು ಬದಿಗೆ ಯಾರಾದರೂ ನಡೆದರೆ ಅಥವಾ ವಸ್ತುಗಳ ಸ್ಥಾನವನ್ನು ಬದಲಾಯಿಸಿದರೆ, ಅರೆ ಏನಿದು, ಏನಾಯಿತು, ಹೇಗೆ ಆ ವಸ್ತು ಚಿಕ್ಕದಾಯ್ತು, ದೊಡ್ಡದಾಯ್ತು ಎನ್ನುವ ಪ್ರಶ್ನೆಗಳು ಮೂಡುತ್ತವೆ. ಇದೇ ದೃಷ್ಟಿ ಭ್ರಮೆ! ಮನುಷ್ಯನ ಮೆದುಳು ವಸ್ತುವಿನ ಗಾತ್ರವನ್ನು ಹೇಗೆ ಕಂಡುಕೊಳ್ಳುತ್ತದೆ ಎನ್ನುವ ಆಂಶವನ್ನು ತಿಳಿಯಲು ಇಂತಹ ದೃಷ್ಟಿ ಭ್ರಮೆಯ ಪ್ರಯೋಗಗಳನ್ನು ಕೈಗೊಂಡು ಮನಶಾಸ್ತಜ್ಞರು ಅಧ್ಯಯನ ನಡೆಸುತ್ತಾರೆ.

ಅಂದಹಾಗೆ ಮೇಲಿನ ವಿನ್ಯಾಸದಂತೆ ಈ ಏಮ್ಸ್ ಕೊಠಡಿಯನ್ನು ನೀವು ಕಟ್ಟಿಸಬಹುದು, ಅಥವಾ ದೊಡ್ಡದಾದ ಕಾರ್ಡ್‌ಬೋರ್ಡ್‌ಗಳಲ್ಲಿ, ಗೋಡೆ, ಛಾವಣಿ ಮತ್ತು ನೆಲಹಾಸುಗಳನ್ನು ಮಾಡಿ, ಬಣ್ಣ ಬಳಿದು ಏಮ್ಸ್ ಕೊಠಡಿಯನ್ನು ಶಾಲೆ, ಕಾಲೇಜು ಅಥವಾ ಮ್ಯೂಸಿಯಂಗಳಲ್ಲಿ ನಿರ್ಮಿಸಬಹುದು. ಬೆಂಗಳೂರಿನ ಜವಾಹಾರಲಾಲ್ ನೆಹರೂ ತಾರಾಲಯದಲ್ಲಿ ದೊಡ್ಡದಾದ ಏಮ್ಸ್ ಕೊಠಡಿಯನ್ನೇ ನಿರ್ಮಿಸಿದ್ದಾರೆ. ಒಮ್ಮೆ ಅಲ್ಲಿಗೆ ಭೇಟಿ ನೀಡಿದಾಗ, ಖಗೋಳ ಪ್ರದರ್ಶನದ ಜೊತೆಗೆ, ಏಮ್ಸ್ ಕೊಠಡಿ ಒಳಗೂ ಒಂದು ವಾಕ್ ಮಾಡಿ ಬನ್ನಿ.


ಇದನ್ನೂ ಓದಿ: ಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...