Homeಮುಖಪುಟಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

ಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

- Advertisement -
- Advertisement -

ಏಮ್ಸ್ ಕೊಠಡಿ ಅಂದ ತಕ್ಷಣ, ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯ ಯಾವುದೋ ಒಂದು ಕೊಠಡಿ ಬಗ್ಗೆ ಇರಬಹುದೇ? ಆ ಕೊಠಡಿ ಒಳಗೆ ಏನಿರಬಹುದು? ಯಾಕಿರಬಹುದು? ಅಂತೆಲ್ಲಾ ಊಹಿಸಿದಿರಾ! ಇದು ದೆಹಲಿಯ ಏಮ್ಸ್ ಕೊಠಡಿಯ ಬಗ್ಗೆ ಅಲ್ಲ. ಆದರೂ ಇದು ಏಮ್ಸ್ ಕೊಠಡಿ!

ಈ ಮೇಲಿನ ಎರಡು ಚಿತ್ರಗಳನ್ನು ಗಮನಿಸಿ. ಏನನ್ನಿಸಿತು? ಚಿತ್ರ (1)ರಲ್ಲಿ ಪುರುಷನು ಮಹಿಳೆಗಿಂತ ಎತ್ತರವಾಗಿದ್ದಾರೆ, ಅದೇ ಚಿತ್ರ (2)ರಲ್ಲಿ ಮಹಿಳೆ ಪುರುಷನಿಗಿಂತ ಎತ್ತರವಾಗಿದ್ದಾರೆ ಅಲ್ಲವೇ? ಆದರೆ, ಚಿತ್ರ (1) ಮತ್ತು (2)ಕ್ಕಿರುವ ಬದಲಾವಣೆಯೆಂದರೆ, ಇಬ್ಬರೂ ತಮ್ಮ ತಮ್ಮ ಸ್ಥಾನಗಳನ್ನು ಬದಲಾಯಿಸಿರುವರು ಅಷ್ಟೇ! ಅದೇ ಕೊಠಡಿ, ಅದೇ ಸ್ಥಳ! ಮತ್ತೊಮ್ಮೆ ಸೂಕ್ಷ್ಮವಾಗಿ ಚಿತ್ರಗಳನ್ನು ಗಮನಿಸಿ.

ಮೇಲಿನ ಚಿತ್ರಗಳಲ್ಲಿರುವ ಕೊಠಡಿಯು ಸಾಮಾನ್ಯ ಕೊಠಡಿಯಂತೆಯೇ ಕಾಣುತ್ತಿದೆ. ಹೇಳಿಕೊಳ್ಳುವಂತಹ ಯಾವ ಬದಲಾವಣೆಗಳೂ ಗೋಚರಿಸುತ್ತಿಲ್ಲ. ಅಲ್ಲದೆ, ವೀಕ್ಷಕರಿಂದ ಇಬ್ಬರೂ ಒಂದೇ ಅಂತರದಲ್ಲಿ ನಿಂತಿದ್ದಾರೆ. ಆದರೆ, ಒಂದು ಬದಿಯಲ್ಲಿ ನಿಂತಿರುವರು ಎತ್ತರವಾಗಿದ್ದಾರೆ. ಅವರೇ ಮತ್ತೊಂದು ಬದಿಗೆ ಹೋದರೆ ಅವರ ಎತ್ತರ ಕಡಿಮೆಯಾಗುತ್ತಿದೆ. ಅವರು ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದುಕೊಂಡು ಹೊಗುವ ವಿಡಿಯೋವನ್ನು ನೀವು ನೋಡಿದರೆ, ಎತ್ತರಗಳು ವ್ಯತ್ಯಾಸವಾಗುವುದನ್ನು ಗಮನಿಸಬಹುದು. ವಿಡಿಯೋ ನೋಡಲು QR ಕೋಡ್ ಸ್ಕ್ಯಾನ್ ಮಾಡಿ.

ಅರೆ, ಏನಿದು, ನಮ್ಮ ಕಣ್ಣಿಗೆ ಹೀಗೇಕೆ ಮೋಸವಾಗುತ್ತಿದೆ? ಇಂತಹ ಮೋಸಮಾಡುವ ಪ್ರಕ್ರಿಯೆಗಳನ್ನು ವೈಜ್ಞಾನಿಕವಾಗಿ ಭ್ರಮೆ (Illusion) ಎಂದು ಕರೆಯುತ್ತೇವೆ. ಮೇಲಿನ ಚಿತ್ರದಲ್ಲಿರುವ ಕೊಠಡಿಯು ಸಹ ಅಂತಹ ದೃಷ್ಟಿಭ್ರಮೆಗೆ ಒಂದು ಉದಾಹರಣೆ (Optical Illusion).

ಅಮೆರಿಕಾದ ಅಡೆಲ್ಬರ್ಟ್ ಏಮ್ಸ್ ಎಂಬ ಹೆಸರಿತ ನೇತ್ರ ತಜ್ಞ ಮೊದಲ ಬಾರಿಗೆ ಇಂತಹ ಕೊಠಡಿಯನ್ನು ವಿನ್ಯಾಸ ಮಾಡಿದರು. ಖ್ಯಾತ ಭೌತವಿಜ್ಞಾನಿಯಾದ ಹರ್ಮನ್ ಹೆಲ್ಮೋಲ್ಟ್ಸ್ (Hermann Helmholtz) ಅವರು ಮೊದಲ ಬಾರಿಗೆ ಇಂತಹ ಕೊಠಡಿಯ ಪರಿಕಲ್ಪನೆಯನ್ನು ವಿವರಿಸಿದ್ದರೂ, ಅದನ್ನು ಮೊಟ್ಟಮೊದಲ ಬಾರಿಗೆ ನಿರ್ಮಿಸಿದ್ದು ನೇತ್ರ ತಜ್ಞ ಏಮ್ಸ್. ಈ ಕೊಠಡಿಯಲ್ಲಿನ ವಿಶೇಷವೆಂದರೆ, ವಸ್ತುವು ನೋಡುಗರಿಂದ ಒಂದೇ ದೂರದಲ್ಲಿದ್ದರೂ, ಅದನ್ನು ಒಂದು ಬದಿಯಲ್ಲಿಟ್ಟರೆ ಅದು ದೈತ್ಯವಾಗಿ, ಮತ್ತೊಂದು ಬದಿಯಲ್ಲಿಟ್ಟರೆ ಕುಬ್ಜವಾಗಿರುವಂತೆ ಕಾಣುತ್ತದೆ.

ಏಮ್ಸ್ ಕೊಠಡಿಯ ವಿನ್ಯಾಸ

ಮೇಲಿನ ಚಿತ್ರಗಳು ಏಮ್ಸ್ ಕೊಠಡಿಯ ವಿನ್ಯಾಸದ top view ಮತ್ತು side viewಗಳನ್ನು ತೋರಿಸುತ್ತವೆ. ಸಾಮಾನ್ಯವಾಗಿ ನಾವು ಕೊಠಡಿ ಎಂದಾಕ್ಷಣಾ ಛಾವಣಿ ಮತ್ತು ನೆಲವು ಸಮಾನಾಂತರವಾಗಿದ್ದು, ಗೋಡೆಗಳು ನೇರವಾಗಿರುವಂತೆ ಗ್ರಹಿಸುತ್ತೇವೆ. ಹಾಗೆಯೇ, ಏಮ್ಸ್ ಕೊಠಡಿಯನ್ನು ಹೊರಗಿನಿಂದ ಕಂಡಾಗ, ಇದೇ ರೀತಿ ಗೋಚರಿಸುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಆ ಕೊಠಡಿಯನ್ನು ಒಂದು ವೀಕ್ಷಣಾ ಕಿಂಡಿಯಿಂದ ಕಂಡಾಗ ಮಾತ್ರ ಅದರ ಮ್ಯಾಜಿಕ್ ಅನಾವರಣಗೊಂಡು ನಮ್ಮನ್ನು ಚಕಿತಗೊಳಿಸುತ್ತದೆ.

ಏಮ್ಸ್ ಕೊಠಡಿ, ಹೊರಗಿನಿಂದ ಸಾಮಾನ್ಯ ಕೊಠಡಿಯಾಗಿದ್ದರೂ, ಅದನ್ನು trapezoidal shapeನಲ್ಲಿ (ವಿಷಮ ಸಮಾನಾಂತರ ಚತುರ್ಭುಜ) ವಿನ್ಯಾಸ ಮಾಡಿರುತ್ತಾರೆ. ಈ ಕೊಠಡಿಯಲ್ಲಿ ಯಾವ ಗೋಡೆಗಳೂ ಸಮಾನಾಂತರವಾಗಿರುವುದಿಲ್ಲ, ಎಲ್ಲವೂ ಒಂದಕ್ಕೊಂದು ಓರೆಯಾಗಿರುತ್ತದೆ. ನೆಲ ಮತ್ತು ಛಾವಣಿಯೂ ಕೂಡ ಸಮಾನಾಂತರವಾಗಿರದೆ, ಛಾವಣಿಯು ಇಳಿಜಾರಾಗಿರುತ್ತದೆ. ಏಮ್ಸ್ ಕೊಠಡಿಯ ಒಳಗೆ ವೀಕ್ಷಿಸಲು ನಿರ್ದಿಷ್ಟ ಜಾಗವನ್ನು ಅಥವಾ ವೀಕ್ಷಣಾ ಕಿಂಡಿಯನ್ನು ಕಲ್ಪಿಸಿರುತ್ತಾರೆ. ಅಲ್ಲಿಂದಲೇ ಒಳಗೆ ನಡೆಯುವ ಕ್ರಿಯೆಯನ್ನು ನೋಡಬೇಕು. ಈ ವೀಕ್ಷಣಾ ಕಿಂಡಿಯಿಂದ ನೋಡಿದಾಗ ಮಾತ್ರ ಒಂದು ಬದಿ ಹತ್ತಿರವಿರುವಂತೆ, ಮತ್ತೊಂದು ಬದಿ ದೂರವಿರುವಂತೆ ಕಾಣುತ್ತದೆ. ಮೇಲಿನ ಚಿತ್ರಗಳಲ್ಲಿ ಅದನ್ನು ನೋಡಬಹುದು. ಆದರೆ, ನೋಡುಗರಿಗೆ ಇದ್ಯಾವುದು ಗೊತ್ತಾಗದ ರೀತಿಯಲ್ಲಿ ಏಮ್ಸ್ ಕೊಠಡಿಯು ಒಳಗೆ ನೆಲ, ಛಾವಣಿ ಮತ್ತು ಗೋಡೆಗಳ ಮೇಲೆ ಚಿತ್ರ ಅಥವಾ ವಿನ್ಯಾಸಗಳನ್ನು ರಚಿಸಲಾಗಿರುತ್ತದೆ. ಈ ಚಿತ್ರಗಳು ಈ ಕೊಠಡಿ ಒಂದು ಸಾಮಾನ್ಯ ಕೊಠಡಿಯಂತೆಯೇ ಇದೆ ಎನ್ನುವ ಭ್ರಮೆಯನ್ನು ನಮ್ಮ ಕಣ್ಣಿನಲ್ಲಿ ಬಿಂಬಿಸುತ್ತಲೇ ಇರುತ್ತದೆ. ಆದರೆ, ಕೊಠಡಿಯೊಳಗೆ ಒಂದು ಬದಿಯಿಂದ ಇನ್ನೊಂದು ಬದಿಗೆ ಯಾರಾದರೂ ನಡೆದರೆ ಅಥವಾ ವಸ್ತುಗಳ ಸ್ಥಾನವನ್ನು ಬದಲಾಯಿಸಿದರೆ, ಅರೆ ಏನಿದು, ಏನಾಯಿತು, ಹೇಗೆ ಆ ವಸ್ತು ಚಿಕ್ಕದಾಯ್ತು, ದೊಡ್ಡದಾಯ್ತು ಎನ್ನುವ ಪ್ರಶ್ನೆಗಳು ಮೂಡುತ್ತವೆ. ಇದೇ ದೃಷ್ಟಿ ಭ್ರಮೆ! ಮನುಷ್ಯನ ಮೆದುಳು ವಸ್ತುವಿನ ಗಾತ್ರವನ್ನು ಹೇಗೆ ಕಂಡುಕೊಳ್ಳುತ್ತದೆ ಎನ್ನುವ ಆಂಶವನ್ನು ತಿಳಿಯಲು ಇಂತಹ ದೃಷ್ಟಿ ಭ್ರಮೆಯ ಪ್ರಯೋಗಗಳನ್ನು ಕೈಗೊಂಡು ಮನಶಾಸ್ತಜ್ಞರು ಅಧ್ಯಯನ ನಡೆಸುತ್ತಾರೆ.

ಅಂದಹಾಗೆ ಮೇಲಿನ ವಿನ್ಯಾಸದಂತೆ ಈ ಏಮ್ಸ್ ಕೊಠಡಿಯನ್ನು ನೀವು ಕಟ್ಟಿಸಬಹುದು, ಅಥವಾ ದೊಡ್ಡದಾದ ಕಾರ್ಡ್‌ಬೋರ್ಡ್‌ಗಳಲ್ಲಿ, ಗೋಡೆ, ಛಾವಣಿ ಮತ್ತು ನೆಲಹಾಸುಗಳನ್ನು ಮಾಡಿ, ಬಣ್ಣ ಬಳಿದು ಏಮ್ಸ್ ಕೊಠಡಿಯನ್ನು ಶಾಲೆ, ಕಾಲೇಜು ಅಥವಾ ಮ್ಯೂಸಿಯಂಗಳಲ್ಲಿ ನಿರ್ಮಿಸಬಹುದು. ಬೆಂಗಳೂರಿನ ಜವಾಹಾರಲಾಲ್ ನೆಹರೂ ತಾರಾಲಯದಲ್ಲಿ ದೊಡ್ಡದಾದ ಏಮ್ಸ್ ಕೊಠಡಿಯನ್ನೇ ನಿರ್ಮಿಸಿದ್ದಾರೆ. ಒಮ್ಮೆ ಅಲ್ಲಿಗೆ ಭೇಟಿ ನೀಡಿದಾಗ, ಖಗೋಳ ಪ್ರದರ್ಶನದ ಜೊತೆಗೆ, ಏಮ್ಸ್ ಕೊಠಡಿ ಒಳಗೂ ಒಂದು ವಾಕ್ ಮಾಡಿ ಬನ್ನಿ.


ಇದನ್ನೂ ಓದಿ: ಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...