Homeಅಂಕಣಗಳುಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

ಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

- Advertisement -
- Advertisement -

ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಮಹಾಸ್ಫೋಟಕ್ಕೆ ಭೂಮಂಡಲ ಸಾಕ್ಷಿಯಾಗಿದೆ. ಮಾಹಿತಿ ಅಥವಾ ಡೇಟಾವನ್ನು ಹೊಸ ಪ್ರಬಲ ಅಸ್ತ್ರ ಎಂದು ಬಣ್ಣಿಸಲಾಗುತ್ತಿದೆ. ಡೇಟಾವನ್ನು ನಿಯಂತ್ರಿಸುವಾತನೇ ಸರ್ವಶಕ್ತ ಎಂಬುದು ಈ ಯುಗದ ಹೊಸ ಸತ್ಯ.

ಚಿಂತಕರು, ತಂತ್ರಜ್ಞನಿಪುಣರು ಕೆಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ ಈ ಅಂಶ ದಿನಗಳೆದಂತೆ ಮತ್ತಷ್ಟು ಗಟ್ಟಿಯಾಗಿ ಸ್ಫುಟವಾಗಿ ಹರಳುಗಟ್ಟತೊಡಗಿದೆ. ಜೊತೆಜೊತೆಗೆ ಸರ್ವಾಧಿಕಾರಗಳು, ಧ್ರುವೀಕರಣ ರಾಜಕಾರಣ ಬೇರಿಳಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ತಮ್ಮ ಮೇಲೆ ಪ್ರಯೋಗಿಸಲಾಗಿರುವ ಮಂಕುಬೂದಿಯನ್ನು ಜನಸಮುದಾಯಗಳು ಕೊಡವಿಕೊಳ್ಳದಿದ್ದರೆ ಈ ಅಪಾಯ ಕೈಮೀರಲಿದೆ ಮತ್ತು ಗಹಗಹಿಸಲಿದೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ಸನ್ನಿವೇಶದಲ್ಲಿ ಇಸ್ರೇಲಿ ಮೂಲದ ಜಗತ್ಪ್ರಸಿದ್ಧ ಯುವ ಚಿಂತಕ ಯುವಾಲ್ ನೋವಾ ಹರಾರಿ ಅವರ ಕೆಳಕಂಡ ಚಿಂತನೆಗೆ ಕಿವಿಗೊಟ್ಟು ಧೇನಿಸಬೇಕಿದೆ.

ಹರಾರಿ ಹೇಳುತ್ತಾರೆ… ಆರಂಭದಲ್ಲಿ ಭೂವಿಸ್ತಾರ, ಆನಂತರ ಯಂತ್ರಗಳು, ಇದೀಗ ಡೇಟಾ ಬಹುದೊಡ್ಡ ಆಸ್ತಿಯೆಂದು ಪರಿಗಣಿಸಲಾಗಿದೆ. ಡೇಟಾವನ್ನು ನಿಯಂತ್ರಿಸುವವರು ಭಾರೀ ಜನಸಮೂಹಗಳನ್ನು ಮತ್ತು ಆ ಮೂಲಕ ಅಧಿಕಾರವನ್ನು ನಿಯಂತ್ರಿಸುತ್ತಾರೆ ಎನ್ನುವ ವಾದ ಊರ್ಜಿತಗೊಂಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗಿರುವ ಕ್ರಾಂತಿಯೇ ಉದಾರವಾದಿ ಜನತಂತ್ರದ ಪಾಲಿಗೆ ಬಲು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಮಾಹಿತಿ ತಂತ್ರಜ್ಞಾನವು ಕಟಾವು ಮಾಡಿರುವ ಡೇಟಾದ ಮಹಾ ಇಳುವರಿಯು ಜನತಂತ್ರಗಳಿಗೆ ಶಕ್ತಿ ತುಂಬುವ ಬದಲು ಸರ್ವಾಧಿಕಾರಗಳ ಕೈ ಬಲಪಡಿಸಲಿದೆ

ಸರ್ವಾಧಿಕಾರಗಳು ತಮ್ಮ ಲಾಭಕ್ಕಾಗಿ ಎಲ್ಲ ಡೇಟಾವನ್ನು ಒಂದೆಡೆ ಕೇಂದ್ರೀಕರಿಸುವಲ್ಲಿ ಯಶಸ್ವಿಯಾಗಿವೆ. ತಂತ್ರಜ್ಞಾನ ಬೆಳೆದಂತೆಲ್ಲ ಅಪಾರ ಡೇಟಾವನ್ನು ಒಂದೆಡೆ ಸಂಸ್ಕರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಲೀಸಾಗಿ ಹೋಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಜೀವತಂತ್ರಜ್ಞಾನ (ಐಟಿ ಮತ್ತು ಬಿಟಿ) ಒಂದರೊಡನೆ ಮತ್ತೊಂದು ವಿಲೀನಗೊಳ್ಳುವ ವಿದ್ಯಮಾನವು ’ಆಲ್ಗರಿದಮ್’ಗಳನ್ನು ಸೃಷ್ಟಿಸಿದೆ. ಈ ’ಆಲ್ಗರಿದಮ್’ಗಳು ವ್ಯಕ್ತಿಗಳ ಅನಿಸಿಕೆ ಆಶಯ ಆಯ್ಕೆಗಳನ್ನು ಖುದ್ದು ಅವರೇ ಅರಿತಿರುವುದಕ್ಕಿಂತ ಹೆಚ್ಚು ನಿಖರವಾಗಿ ನಿಚ್ಚಳವಾಗಿ ಅರಿಯಬಲ್ಲವು. ಸರ್ಕಾರದಂತಹ ಸಂಸ್ಥೆಗಳು ಈ ತಂತ್ರಜ್ಞಾನದ ಲಾಭ ಪಡೆದು ಜನಸಮುದಾಯಗಳ ಒಲವು ನಿಲುವುಗಳನ್ನು ಮುಂದಾಗಿಯೇ ಕಂಡುಕೊಳ್ಳಬಲ್ಲವು. ಆವರ ಭಾವನೆಗಳನ್ನು ತಮಗೆ ಬೇಕಾದಂತೆ ತಿದ್ದಿ ತೀಡಬಲ್ಲವು. ಉದಾಹರಣೆಗೆ ತನ್ನ ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಲಾರದ ಸರ್ವಾಧಿಕಾರಿಯೊಬ್ಬನು ತನ್ನ ಜನರು ತನ್ನನ್ನು ಪ್ರೀತಿಸುವಂತೆಯೂ ಪ್ರತಿಪಕ್ಷಗಳನ್ನು ದ್ವೇಷಿಸುವಂತೆಯೂ ಮಾಡಬಲ್ಲ. ಅಂತಹ ವಿರೋಧಾಭಾಸದ ಪರಿಸ್ಥಿತಿಯಲ್ಲಿ ಜನತಂತ್ರ ಉಳಿದು ಬೆಳೆಯಲಾರದು. ಅಂತಹ ವಾತಾವರಣದಲ್ಲಿ ಜನತಂತ್ರವು ಸರಿತಪ್ಪುಗಳನ್ನು ವಿವೇಚಿಸುವ ಮಾನವ ಆಲೋಚನಾ ಶಕ್ತಿಯ ಆಧಾರವನ್ನು ಕಳೆದುಕೊಳ್ಳುತ್ತದೆ. ಬುದ್ಧಿಯ ಜಾಗವನ್ನು ಭಾವುಕತೆ ಆವರಿಸುತ್ತದೆ. ನಮ್ಮ ಭಾವನೆಗಳನ್ನು ಹ್ಯಾಕ್ ಮಾಡಿ ಧ್ರುವೀಕರಣ ಮಾಡಿ ಜನತಂತ್ರವನ್ನು ನಾಶ ಮಾಡಲು ಬಳಸಿಕೊಳ್ಳಲಾಗುತ್ತದೆ. ಜನತಂತ್ರವು ಕೇವಲ ಒಂದು ಭಾವನಾತ್ಮಕ ಗೊಂಬೆಯಾಟ ಆಗಿಬಿಡುತ್ತದೆ.

ಇಂತಹ ಅಪಾಯವನ್ನು ತಪ್ಪಿಸಲು ಭಾರೀ ಡೇಟಾ ಒಂದೇ ಕಡೆ ಕೇಂದ್ರೀಕೃತ ಆಗುವುದನ್ನು ತಪ್ಪಿಸಬೇಕು. ಡೇಟಾ ನಿಯಂತ್ರಿಸುವವರು ನಮ್ಮ ಭಾವನೆಗಳನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ತಿದ್ದಿ ತೀಡಿಕೊಳ್ಳುವುದಕ್ಕೆ ಆಗ ಸಾಧ್ಯವಾಗುವುದಿಲ್ಲ.

ದೈನಂದಿನ ಗ್ರಾಹಕ ಸರಕು ಸರಂಜಾಮುಗಳನ್ನು ನಮಗೆ ಮಾರಾಟ ಮಾಡಲು ಮಾಹಿತಿ ತಂತ್ರಜ್ಞಾನದ ಆಲ್ಗರಿದಂ ವಿಧಾನದ ಪ್ರಯೋಗ ಈಗಾಗಲೆ ಜಾರಿಯಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜನತಂತ್ರದ ಶತ್ರುಗಳು ಇದೇ ವಿಧಾನವನ್ನು ಅನುಸರಿಸಿ ಭಯ, ದ್ವೇಷ ಹಾಗೂ ಒಣಪ್ರತಿಷ್ಠೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವುಗಳ ಮಾರಾಟ ಶೂನ್ಯದಲ್ಲಿ ಸಾಧ್ಯವಿಲ್ಲ. ಅವರು ಜನಸಮೂಹಗಳ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ತಮ್ಮ ದೌರ್ಬಲ್ಯಗಳು ಜನತಂತ್ರದ ಶತ್ರುಗಳ ಕೈಯಲ್ಲಿನ ಅಸ್ತ್ರವಾಗದಂತೆ ಜನಸಮೂಹಗಳು ಜಾಗ್ರತೆ ವಹಿಸಬೇಕು. ದೌರ್ಬಲ್ಯಗಳನ್ನು ಅರಿತು ಇಂತಹ ಎಚ್ಚರಿಕೆ ವಹಿಸುವುದು ಜನರನ್ನು ಫ್ಯಾಸಿಸ್ಟ್ ಕನ್ನಡಿಯಿಂದಲೂ ಕಾಪಾಡುತ್ತದೆ. ಫ್ಯಾಸಿಸಮ್ ನಮ್ಮ ಒಣಪ್ರತಿಷ್ಠೆಯಂತಹ ದೌರ್ಬಲ್ಯಗಳನ್ನು ಬಳಸಿಕೊಂಡು ಬೇರೂರುತ್ತದೆ. ನಾವು ಇರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ನಮ್ಮನ್ನು ತೋರುತ್ತದೆ. ನಮ್ಮನ್ನು ನಾವು ಚೆನ್ನಾಗಿ ಬಲ್ಲೆವಾದರೆ ಈ ಮೋಹಪರವಶತೆಗೆ ಬಲಿ ಬೀಳುವುದು ಸಾಧ್ಯವಿಲ್ಲ. ಸರ್ವಾಧಿಕಾರಿಗಳು ನಿಮ್ಮ ಕಣ್ಣೆದುರಿಗೆ ಫ್ಯಾಸಿಸ್ಟ್ ಕನ್ನಡಿಯೊಂದನ್ನು ಇಡುತ್ತಾರೆ. ಆ ಕನ್ನಡಿಯು ನಿಮ್ಮ ಎಲ್ಲ ಕುರೂಪವನ್ನು ಅಡಗಿಸಿಟ್ಟು ನೀವು ಇರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ತೋರಿಸುತ್ತದೆ. ನಿಮಗೆ ವಾಸ್ತವದಲ್ಲಿ ಇಲ್ಲದಸಲ್ಲದ ಪ್ರಾಮುಖ್ಯತೆಯನ್ನು ತೊಡಿಸುತ್ತದೆ. ಈ ಅವಾಸ್ತವಿಕ ಕನ್ನಡಿಯನ್ನು ಒಡೆಯಿರಿ….


ಇದನ್ನೂ ಓದಿ: ಬಹುಜನ ಭಾರತ; ಜನತಂತ್ರದ ಸ್ತಂಭಗಳ ಮೇಲೆ ನಡೆದ ಕರಾಳ ದಾಳಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...