Homeಕರ್ನಾಟಕಅಪರೂಪದ ಇರುವೆಗಳನ್ನು ಪತ್ತೆ ಮಾಡಿದ ’ಏಟ್ರಿ’: ಇರುವೆಗೆ ಬರಹಗಾರ ಗಣೇಶಯ್ಯ ಹೆಸರು

ಅಪರೂಪದ ಇರುವೆಗಳನ್ನು ಪತ್ತೆ ಮಾಡಿದ ’ಏಟ್ರಿ’: ಇರುವೆಗೆ ಬರಹಗಾರ ಗಣೇಶಯ್ಯ ಹೆಸರು

- Advertisement -
- Advertisement -

“ಅಶೋಕ ಟ್ರಸ್ಟ್ ಫಾರ್‌ ರೀಸರ್ಚ್‌ ಇನ್‌ ಇಕಾಲಜಿ ಆ್ಯಂಡ್‌ ಎನ್ವಿರಾನ್‌ಮೆಂಟ್‌” (ATREE ) ಎಂಬ ಬೆಂಗಳೂರಿನ ಸಂಶೋಧನ ಕೇಂದ್ರದ ಕೀಟಶಾಸ್ತ್ರಜ್ಞರು ಎರಡು ಹೊಸ ಅಪರೂಪದ ಇರುವೆಗಳನ್ನು Eaglenest wild life santuary (EWS) ಎಂಬ ವನ್ಯಜೀವಿ ಅಭಯಾರಣ್ಯದಿಂದ ಕಂಡುಹಿಡಿದ್ದಾರೆ.

ಏಟ್ರಿ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು ಹಾಗೂ ATREE ಸಂಶೋಧನ ಕೇಂದ್ರದಲ್ಲಿ ಕೀಟವರ್ಗಿಕರಣ ಮತ್ತು ಸಂರಕ್ಷಣ (Insect taxonomy and conservation) ಪ್ರಯೋಗಲಾಯ ತೆರೆಯುವುದರಲ್ಲಿ ಮುಖ್ಯ ಕಾರಣಕರ್ತರಾದ ಪ್ರೊ. ಕೆ. ಎನ್.ಗಣೇಶಯ್ಯರವರ ಹೆಸರನ್ನು ಒಂದು ಇರುವೆಗೆ ಇಡಲಾಗಿದೆ.

ಎರಡು ಹೊಸ ಇರುವೆಯಲ್ಲಿ ಒಂದು ಇರುವೆಗೆ “ಪ್ಯಾರಸಿಸ್ಸಿಯ ಗಣೇಶಯ್ಯಯಿ” ಎಂದು ಇಡಲಾಗಿದೆ. ಮತ್ತೊಂದು ಇರುವೆಯು ಭಾರತ ದೇಶದಲ್ಲಿ ಮೊದಲು ದಾಖಲಾಗಿರುವ ಕಾರಣ ಭಾರತದೇಶವನ್ನು ಉಲ್ಲೇಖಿಸಿ “ಸಿಸ್ಸಿಯ ಇಂಡಿಕ’ ಎಂದು ಹೆಸರಿಸಲಾಗಿದೆ.

ಈಗಾಗಲೇ ಅಂಡಮಾನ್‌ಲ್ಲಿನ ಒಂದು ಸಸ್ಯಕ್ಕೆ centotheca ganeshaiahiana ಎಂದು ಆಂಧ್ರ ಪ್ರದೇಶದ ಒಂದು ಸಸ್ಯಕ್ಕೆ Tripogan umaganeshii ಎಂದು ಹೆಸರಾದ ಕೃಷಿ ವಿಜ್ಞಾನಿ ಹಾಗೂ ಸಸ್ಯ ಪ್ರಪಂಚದಲ್ಲಿ ಅಪಾರ ಸಂಶೋಧನೆ ನಡೆಸಿರುವ ಅಂತರರಾಷ್ಟ್ರೀಯ ಮಟ್ಟದ ಪರಿಸರ ವಿಜ್ಞಾನಿ, ಚಿಂತಕ ಮತ್ತು ಬರಹಗಾರರು ಗಣೇಶಯ್ಯ.

ಇದನ್ನೂ ಓದಿ: ದಲಿತರಿಗೆ ವಸತಿ ಮಂಜೂರು ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಗಣಪಯ್ಯನವರ ಕುಟುಂಬ

ಅರುಣಾಚಲಪ್ರದೇಶದ ವೆಸ್ಟ್ ಕಾಮೆಂಗ್ ಜಿಲ್ಲೆಯ ಹಿಮಾಚಲದ ತಪ್ಪಲಿನಲ್ಲಿ ಪಕ್ಕೆ ಟೈಗರ್ ರಿಸರ್ವ್ ಮತ್ತು ಟೆಂಗ್ ಆರ್ಮಿ ಕಂಟೋನ್ಮೆಂಟ್ ಪ್ರದೇಶಗಳ ಮರೆಯಲ್ಲಿರುವ ಈಗಲ್‍ನೆಸ್ಟ್ ವನ್ಯಜೀವಿ ಅಭಯಾರಣ್ಯವು ಪರಿಸರ ವಿಜ್ಞಾನಿಗಳಿಗೆ ಮತ್ತು ಪ್ರಕೃತಿ ಉತ್ಸಾಹಿಗಳಿಗೆ ಸ್ವರ್ಗವಾಸಿಯಾಗಿದೆ. 218 ಚದರ ಕಿಲೋಮೀಟರ್‍ಗಳಷ್ಟು ವ್ಯಾಪಿಸಿರುವ ಅರಣ್ಯಪ್ರದೇಶವು ಸಮುದ್ರಮಟ್ಟದಿಂದ 500 ಮೀ ನಿಂದ 3250 ಮೀ ಎತ್ತರದ ನಡುವೆ ಅನೇಕ ಅಚ್ಚರಿಗಳನ್ನು ಒಳಗೊಂಡಿದೆ.

ಅಶೋಕ ಸಂಶೋಧನ ಕೇಂದ್ರದ ಕೀಟಶಾಸ್ರಜ್ಞರು ಈಗಲ್‍ನೆಸ್ಟ್ ಅಭಯಾರಣ್ಯದಿಂದ 200 ಕ್ಕೂ ಹೆಚ್ಚು ಜಾತಿಯ (Species) ಇರುವೆಗಳು ಒಟ್ಟಾರೆ ಭಾರತದ ಇರುವೆಗಳ ಸರಾಸರಿ 25% ರಷ್ಟು ಇರುವೆಗಳನ್ನು ಸಂಗ್ರಹಿಸಿದ್ದಾರೆ.  ಸಂಶೋಧಕರ ತಂಡ ಡಾ. ಪ್ರಿಯದರ್ಶನನ್ ಧರ್ಮರಾಜನ್ (Senior fellow ) ಅಸ್ವಜ್ ಪುನ್ನಥ್ ಸಹನಶ್ರೀ (ATREE Bangalore ) ಹಾಗೂ ಡಾ. ಅನಿರುದ್ದ ಮರಾತೆ (IISC Bangalore) ಅವರುಗಳು ಆಸಕ್ತಿದಾಯಕ ಇರುವೆಗಳನ್ನು ಸಂಗ್ರಹಿಸಿದ್ದಾರೆ.

“ಪ್ಯಾರಸಿಸ್ಸಿಯ ಗಣೇಶಯ್ಯಯಿ” ಇರುವೆಯು ಹಳದಿ ಮಿಶ್ರಿತ ಕಂದು ಬಣ್ಣದ ಸಣ್ಣ ಗಾತ್ರದ ಇರುವೆ ಮತ್ತು ಮೇಲ್ಮೈ ಭಾಗವು ಮೈಕ್ರೂಪಂಕ್ಚರ್ಸ್‍ಗಳಿಂದ ಕೂಡಿರುವ ಈ ಇರುವೆಯು ತನ್ನ ಗೂಡನ್ನು ಕೊಳೆತ ದಿಂಬಿಗಳಲ್ಲಿ ಅಥವಾ ಕಲ್ಲುಗಳ ಅಡಿಯಲ್ಲಿ ನಿರ್ಮಿಸುತ್ತದೆ. ಇದನ್ನು ದಟ್ಟ ಅರಣ್ಯದ ಜನನಿಬಿಡ ಪ್ರದೇಶದಲ್ಲಿ ಸಮುದ್ರಮಟ್ಟದಿಂದ 1400ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ. ಭಾರತದಲ್ಲಿ ಒಟ್ಟು ಏಳು ಪ್ಯಾರಸಿಸ್ಸಿಯ ಇರುವೆಗಳಿದ್ದು ಅದರಲ್ಲಿ ಆರು ಇರುವೆಗಳು ಸ್ಥಳೀಯ (Endemic ) ಎಂದು ಗುರುತಿಸಲಾಗಿದೆ.

ಸಿಸ್ಸಿಯ ಜೀನಸ್ ಇರುವೆಗಳು ಕೂಡ ಅಪರೂಪದ ಇರುವೆಗಳು ಎಲೆಯ ತರಗು (leaf litter ) ಕೊಳೆತಮರ ಹಾಗೂ ಮಣ್ಣಿನಲ್ಲಿ ವಾಸಿಸುವ ಇರುವೆಗಳಾಗಿವೆ ಈ ಮೊದಲು ಚೀನಾ, ಜಪಾನ್ ಶ್ರೀಲಂಕ ಹಾಗೂ ಥೈಲಾಂಡ್ ದೇಶಗಳಲ್ಲಿ ದಾಖಲೆಗೊಂಡಿದ್ದು ಭಾರತದಲ್ಲಿ ಸೂಕ್ತವಾದ ದಾಖಲೆಯ ಕೊರತೆಯಿಂದ ಪ್ರಸ್ತುತ ದಾಖಲೆಯನ್ನು ಭಾರತಕ್ಕೆ ಮೊದಲ ದಾಖಲೆಯಾಗಿ ಪರಿಗಣಿಸಲಾಗಿದೆ.

“ಸಿಸ್ಸಿಯ ಇಂಡಿಕ” ಇರುವೆಯು ಕೆಂಪುಮಿಶ್ರಿತ ಕಂದು ಬಣ್ಣಹೊಂದಿದ್ದು ಮೇಲ್ಮೈ ಭಾಗವು ಚಿಕ್ಕ ಚಿಕ್ಕ ಪಂಕ್ಚರ್ಸ್ ಇದ್ದು ಕುರುಡು ಇರುವೆಯಾಗಿದೆ ಈ ಇರುವೆಯನ್ನು ಅರಣ್ಯದ ಒಳಭಾಗದಲ್ಲಿ ಸಮುದ್ರ ಮಟ್ಟದಿಂದ 1600 ಮೀ ಎತ್ತರದಲ್ಲಿ ಸಂಗ್ರಹಿಸಲಾಗಿದೆ.

ಬಹಸಂಖ್ಯಾ ಇರುವೆಗಳು ಕ್ರಿಪ್ಟೋ ಬಯೋಟಿಕ್ ಜೀವನ ಶೈಲಿಯನ್ನು ಒಳಗೂಡಿಸಿಕೊಂಡು ದಟ್ಟಅರಣ್ಯದಲ್ಲಿ ಉದುರಿರುವ ಎಲೆಗಳಲ್ಲಿ ಮಣ್ಣಿನ ಅಡಿಯಲ್ಲಿ ಮರೆಯಾಗಿ ಜೀವಿಸುತ್ತಿರುತ್ತವೆ. ಇದರಲ್ಲಿ ಬಹಳಷ್ಟು ವಿಜ್ಞಾನಕ್ಕೆ ಅಪರಿಚತವಾಗಿರುವ ಇರುವೆಗಳಿದ್ದಾವೆ ಹೊಸ ದಾಖಲೆಯಾದ ಪ್ಯಾರಸಿಸ್ಸಿಯ ಹಾಗೂ ಸಿಸ್ಸಿಯ ಇರುವೆಗಳು ಕೂಡ ಬಹುಅಪರೂಪದ ಸುಲಭವಾಗಿ ದೊರಕದ ಇರುವೆಗಳಾಗಿದೆ ಆದ್ದರಿಂದ ಈ ರೀತಿಯ ಇರುವೆಗಳನ್ನು ಸಂಗ್ರಹಿಸಲು Non-conventional ವಿಧಾನವಾದ Winkler extraction ಅನ್ನು ಬಳಸಲಾಗುತ್ತದೆ. ಮುಂಬರುವ ಸಂಶೋಧನೆಯಲ್ಲಿ ಈಸ್ಟ್ರನ್ ಹಿಮಾಲಯದ ಪ್ರದೇಶಗಳನ್ನು ವ್ಯಾಪಕವಾಗಿ ಅನ್ವೇಷಿಸಿದರೆ ಅದರಲ್ಲೂ Non-conventional ವಿಧಾನಗಳ ಕೀಟ ಸಂಗ್ರಹಣ ಬಳಕೆಯಿಂದ ಇನ್ನು ಅಪರೂಪವಾದ ವಿಭಿನ್ನವಾದ ಹೊಸ ಹೊಸ ಇರುವೆಗಳು ದೊರೆಯಬಹುದು ಎಂದು ತಿಳಿಸಿದೆ.

ಈ ಸಂಶೋಧನೆಯನ್ನು Department of biotechnology (DBT Government of India) and National Mission on Himalayan Studies (MOEF & CC, Government of India) and the John D and Catherine T.Mac Arthur ಫೌಂಡೆಶನ್ ಬೆಂಬಲಿಸಿದ್ದಾರೆ.

* ಚಿದಾನಂದ್, ಯುವ ಸಂಚಲನ


ಇದನ್ನೂ ಓದಿ: ಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...