HomeUncategorizedಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ...

ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ

- Advertisement -
- Advertisement -

ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಬಹುಚರ್ಚಿತವಾದ ಲಿಂಗಾಯಿತ ಧರ್ಮದ ವಿಚಾರವು ಮತ್ತೆ ಮುನ್ನೆಲೆಗೆ ಬಂದಿರುವುದು ಪೇಜಾವರರ ಪಂಥಾಹ್ವಾನದ ಕಾರಣಕ್ಕೆ. ಅದರ ಕುರಿತು ಲಿಂಗಾಯಿತ ಧರ್ಮದ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯರಾದ ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಅವರನ್ನು ನಾನುಗೌರಿ.ಕಾಂ ಮಾತಾಡಿಸಿತು.

ಪ್ರಶ್ನೆ: ಪೇಜಾವರ ಸ್ವಾಮಿಗಳು ಲಿಂಗಾಯತ ಧರ್ಮದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಯಾಕಿರಬಹುದು?
ಬಸವಲಿಂಗ ಪಟ್ಟದೇವರು ಸ್ವಾಮೀಜಿ: ಅವರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ಆಳವಾದ ತತ್ವಜ್ಞಾನದ ಕೊರತೆಯಿರಬಹದು ಅಥವಾ ತತ್ವಜ್ಞಾನ ಗೊತ್ತಿದ್ದರು ಅದು ಸ್ವತಂತ್ರ ಧರ್ಮ ಆಗಬಾರದೆಂಬ ಅಭಿಲಾಷೆಯೂ ಇರಬಹುದು. ಆದರೆ ಒಂದು ಮಾತ್ರ ಸತ್ಯ. ಲಿಂಗಾಯತ ಧರ್ಮ ಅದು ಸ್ವತಂತ್ರವಾದ ಧರ್ಮ. ಅದರದೇ ಆದ ಒಂದು ಸಿದ್ಧಾಂತ, ಗುರಿ, ಸಾಧನೆ, ದರ್ಶನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ ಇದೆ. ಹೀಗಾಗಿ ಲಿಂಗಾಯತ ಧರ್ಮ ಯಾವತ್ತಿಗೂ ಪರಿಪೂರ್ಣ ಮತ್ತು ಸ್ವತಂತ್ರ ಧರ್ಮ. ಅದರಲ್ಲಿ ಎರಡು ಮಾತಿಲ್ಲ. ಚರ್ಚೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕೊರತೆಯಿದ್ದರೆ ಮಾತ್ರ ಚರ್ಚೆಗೆ ಹೋಗಬೇಕು. ನಮ್ಮದು ಪ್ರತ್ಯೇಕ ಧರ್ಮ. ಹಿಂದೆಯೂ ಹೀಗೆ ಇತ್ತು. ಮುಂದೆಯೂ ಹೀಗೆಯೇ ಇರುತ್ತದೆ.

ಒಂದು ವಿಷಯ ಸ್ಪಷ್ಟೀಕರಣ ಮಾಡುತ್ತೇನೆ. ಹಿಂದೂ ಎನ್ನುವುದು ಒಂದು ಸಂಸ್ಕೃತಿ. ಯಾವಾಗ ಜೈನರು, ಬುದ್ಧರು, ಸಿಖ್ಖರು ಮುಂತಾದವರು ಹಿಂದೂ ಕಕ್ಷೆಯೊಳಗೆ ಬರುತ್ತಾರೋ ಆಗ ನಾವು ಸಹ ಹಿಂದೂ ಕಕ್ಷೆಯೊಳಗೆ ಬರುತ್ತೀವಿ. ಬೌದ್ಧ ಧರ್ಮ, ಜೈನಧರ್ಮ, ಸಿಖ್ ಧರ್ಮ ಹೆಂಗಿದೆಯೋ ಹಾಗೆಯೇ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮ. ನಮ್ಮ ಸಂಸ್ಕೃತಿ ಬಿಟ್ಟು ಹೋಗುವುದಿಲ್ಲ. ಹಿಂದೂ ಎನ್ನುವುದು ಒಂದು ಸ್ವತಂತ್ರ ಧರ್ಮವಲ್ಲ. ಅದೊಂದು ಸಮಾಜ, ಸಂಸ್ಕೃತಿ.

ಪ್ರಶ್ನೆ: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಈ ಚಳವಳಿ ಬಿರುಸಿನಿಂದ ನಡೆದಿತ್ತು. ಆನಂತರ ಇದು ಸ್ತಬ್ಧಗೊಂಡು ನಿಂತಿದೆ ಅನ್ನಿಸುತ್ತಿದೆ. ಹಾಗಾಗಿ ಇದು ರಾಜಕೀಯಪ್ರೇರಿತ ಅಂತ ಏಕೆ ಅನ್ನಿಸಲ್ಲ?
ಇದು ರಾಜಕೀಯ ಪ್ರೇರಿತ ಅಲ್ಲ. ಗಾಂಧೀಜಿಯವರ ಸ್ವತಂತ್ರ ಚಳವಳಿಯೂ ಒಂದೇಸಮನೇ ಎತ್ತರದಲ್ಲಿರಲಿಲ್ಲ. ಚಳವಳಿಗಳು ಯಾವಾಗಲೂ ಏರಿಕೆ ಇಳಿಕೆ, ಏರಿಕೆ ಇಳಿಕೆ ರೀತಿಯಲ್ಲಿಯೇ ಇರುತ್ತವೆ. ಆದರೆ ಚಟುವಟಿಕೆ ಮಾತ್ರ ಪೂರ್ಣ ಸ್ತಬ್ಧಗೊಂಡಿಲ್ಲ. ಸಣ್ಣ ಪ್ರಮಾಣದಲ್ಲಿ ನಮಗೇನು ಬೇಕು ಆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ಪ್ರಶ್ನೆ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, 12ನೇ ಶತಮಾನದಲ್ಲಿಯೇ ಅಸ್ತಿತ್ವಕ್ಕೆ ಬಂತು ಎನ್ನುತ್ತೀರಿ, ಹಾಗಾದರೆ ಇದು ಯಾವಾಗ ವೈದಿಕೀಕರಣಗೊಂಡಿತು?
ಕಲ್ಯಾಣಕ್ರಾಂತಿ ಆದಮೇಲೆ ಇದಕ್ಕೆ ಸ್ವಲ್ಪ ಕತ್ತಲು ಆವರಿಸಿತು. ಬಸವಣ್ಣನವರ ಕ್ರಾಂತಿ, ಅಂತರ್ಜಾತಿವಿವಾಹ ಆದಮೇಲೆ ವೈದಿಕಶಾಹಿ ಮತ್ತು ರಾಜಶಾಹಿ ಎರಡು ಒಂದಾಗಿ ಇದರ ಮೇಲೆ ಆಕ್ರಮಣ ನಡೆಸಿದರಿಂದ 200-300 ವರ್ಷ ಅದು ಕತ್ತಲೆಯಲ್ಲಿಳಿಯಿತು. ಆನಂತರ ನಿಧಾನವಾಗಿ ವೈದಿಕೀಕರಣಗೊಳ್ಳಲಿಕ್ಕೆ ಪ್ರಾರಂಭವಾಯಿತು.

ಆಮೇಲೆ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಪ್ರೌಢದೇವರಾಯನ ಕಾಲಕ್ಕೆ ಮತ್ತದು ಸ್ವಲ್ಪ ಚೇತರಿಕೆ ಕಂಡು ನೂರೊಂದು ವಿರಕ್ತರು, ಯಡಿಯೂರು ಸಿದ್ಧಲಿಂಗೇಶ್ವರರ ಕಾಲಕ್ಕೆ ಇದು ಪುನರುಜ್ಜೀವನಗೊಂಡಿತು. ಮತ್ತೆ ಸ್ವಲ್ಪ 100 ವರ್ಷ ಇಳಿಮುಖವಾಯಿತು. ನಂತರ ಹಳಕಟ್ಟಿ ಶರಣರು ಬಂದಮೇಲೆ, ವಚನಸಾಹಿತ್ಯ ಎಲ್ಲಾ ಹೊರಗೆ ತಂದಮೇಲೆ ಇದು ನಮ್ಮತನ ಏನು ಎಂಬುದು ನಮಗೆ ಗೊತ್ತಾಯಿತು. ವಚನಸಾಹಿತ್ಯವೇ ನಮಗೆ ಮಹತ್ವ. ಅದನ್ನು ಅಧ್ಯಯನ ಮಾಡುತ್ತಾ ಹೋದಂಗೆ ನಾವು ನಿಜವಾಗಿ ಯಾರು ಎಂಬುದು ತಿಳಿಯಿತು.

ಪ್ರಶ್ನೆ: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕೇವಲ ಮೀಸಲಾತಿಗಾಗಿಯೋ ಅಥವಾ ಮೂಲ ಅಸ್ಮಿತೆಗಾಗಿಯೋ?
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿಯೇ ಈ ಹೋರಾಟ. ಇದೇ ನಮ್ಮ ಗಟ್ಟಿ ನಿಲುವು. ಮೀಸಲಾತಿದು ಎರಡನೇ ಪ್ರಶ್ನೆ. ಧರ್ಮಕ್ಕೆ ಮಾನ್ಯತೆ ಸಿಕ್ಕಿದ ಮೇಲೆ ಮೀಸಲಾತಿ ಸಿಗಬಹುದು, ಬಿಡಬಹುದು. ಆ ಪ್ರಶ್ನೆ ಬೇರೆ. ಆದರೆ ನಮಗೆ ಮಾನ್ಯತೆಯೇ ಮಹತ್ವದ್ದು.

ಪ್ರಶ್ನೆ: ಲಿಂಗಾಯತ ಧರ್ಮದ ಹೋರಾಟದ ನೇತೃತ್ವ ರಾಜಕಾರಣಿಗಳ ಕೈಯಲ್ಲಿರಬೇಕೊ ಅಥವಾ ಸ್ವಾಮಿಜೀಗಳ ಕೈಯಲ್ಲಿರಬೇಕೊ? ಅಥವಾ ಮಾಸ್ ಚಳವಳಿಯಾಗಿ ಜನಸಾಮಾನ್ಯರ ಕೈಯಲ್ಲಿರಬೇಕೊ?

ಹೋರಾಟಕ್ಕೆ ಎಲ್ಲರೂ ಬೇಕು. ಇವರೇ ಬೇಕು ಅವರಿರಬಾರದು ಎಂಬ ಪ್ರಶ್ನೆಯೇ ಹೋರಾಟದಲ್ಲಿ ಉದ್ಭವಿಸುವುದಿಲ್ಲ. ಹೋರಾಟದಾಗೆ ಎಲ್ಲರೂ ಇದ್ರೆ ಶಕ್ತಿ ಇರುತ್ತದೆ. ರಥ ಎಳೆಯಬೇಕಾದರೆ ಎಲ್ಲರ ಕೈಗೂಡಬೇಕು. ಒಬ್ಬರೇ ರಥ ಎಳೆಯಲಾಗುವುದಿಲ್ಲ.

ಪ್ರಶ್ನೆ: ಲಿಂಗಾಯತ ಚಳವಳಿಯು ಮಂಟೇಸ್ವಾಮಿ, ಮಲೆ ಮಹದೇಶ್ವರ ಪರಂಪರೆಯನ್ನು ಹೇಗೆ ನೋಡುತ್ತದೆ? ಆ ಪರಂಪರೆ ಯಾಕೆ ಮುನ್ನೆಲೆಗೆ ಬರಲಿಲ್ಲ?
ಮೈಸೂರು ಭಾಗದಲ್ಲಿ ಅವರ ಕೊಡುಗೆ ಮಹತ್ವದ್ದು. ಆ ಭಾಗದಲ್ಲಿ ಬಸವ ತತ್ವ, ಲಿಂಗತತ್ವ ಉಳಿದು ಬೆಳೆಯಲ್ಲಿಕ್ಕೆ ಅವರ ಅಪಾರ ಕೊಡುಗೆ ಇದೆ. ಮಂಟೇಸ್ವಾಮಿ, ಮಲೆ ಮಹದೇಶ್ವರರು ಸಹ ಶರಣ ಪರಂಪರೆಯವರೆ ಅಲ್ಲವೇ? ಆದರೆ ಅದನ್ನು ಪೌರಾಣೀಕರಿಸಲಾಗಿದೆ. ಈ ಭಾಗದಲ್ಲಿ ಷಣ್ಮುಗ ಶಿವಯೋಗಿಗಳು ಬಂದು ಈ ಸುತ್ತಾಮುತ್ತಾ ಜಾಗೃತಿ ಹೇಗೆ ಮಾಡಿದರೋ ಹಾಗೆಯೇ ಮೈಸೂರು ಭಾಗಕ್ಕೆ ಅವರು ಜಾಗೃತಿ ಮಾಡಿದ್ದಾರೆ. ಅವರು ಶರಣ ಪರಂಪರೆಯ ಭಾಗವೇ ಹೊರತು ಬೇರೆ ಅಲ್ಲ.

ಪ್ರಶ್ನೆ: ಲಿಂಗಾಯತ ತತ್ವ. ಜೀವಪರ ಮತ್ತು ಜನಪರ ತತ್ವ. ಎಲ್ಲರನ್ನು ಒಳಗೊಳ್ಳುತ್ತದೆ. ಮೌಢ್ಯಾಚರಣೆಯ ಬಗ್ಗೆಯೂ, ಜಾತ್ಯತೀತತೆಯ ಬಗ್ಗೆಯೂ ಮಾತಾಡುತ್ತೀರಿ. ಆದರೆ ಇದು ಬೋಧನೆ ಮಟ್ಟದಲ್ಲಿ ಜಾಸ್ತಿಯಿದ್ದು ಆಚರಣೆಯಲ್ಲಿ ಕಡಿಮೆ ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೇ?
ತತ್ವ ತಿಳಿದವರು ಆಚರಣೆಯಲ್ಲಿ ನಿಧಾನ ಮಾಡುತ್ತಿದ್ದಾರೆ ನಿಜ. ಒಂದೇದಿನ ಒಂದೇ ಸಮಯದಲ್ಲಿ ಬದಲಾವಣೆಯಾಗುವುದಿಲ್ಲ. ಮೊದಲು ಜಾಗೃತಿ ಬೇಕು. ಒಂದೇ ದಿನದಲ್ಲಿ ಶರಣ ತತ್ವ ಆಚರಣೆಗೆ ಬರಲು ಸಾಧ್ಯವಿಲ್ಲ. ಕ್ರಮವಾಗಿ ನಡೆದು ಬಸವತತ್ವ ಪಾಲಕರು ಆಗುತ್ತಾರೆ.

ಪ್ರಶ್ನೆ: ಮುಂದಿನ ಹೋರಾಟದ ರೂಪುರೇಷೆಯೇನು?
ಮೊದಲು ಜಾಗೃತಿ ಮಾಡುವುದು. ಅಲ್ಲಲ್ಲಿ ಸಮಾವೇಶ ನಡೆಸುವುದು ಸಮಾವೇಶದ ಗುರಿಯಾಗಿದೆ. ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ ತೌಡು ಕುಟ್ಟುವ ಉದ್ದೇಶ ನಮಗಿಲ್ಲ. ನಮ್ಮ ತತ್ವ ಸಿದ್ದಾಂತ ಇದೆ. ಅದರ ಪ್ರಕಾರ ನಾವು ಹೋಗುತ್ತೇವೆ.

ಪ್ರಶ್ನೆ: 99 ಪಂಗಡಗಳು ನಿಮ್ಮ ಜೊತೆಗಿದ್ದಾವೆಯೇ?
ಎಲ್ಲರೂ ಜೊತೆಗಿದ್ದಾರೆ. ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ ಎಲ್ಲರೂ ನಮ್ಮ ಜೊತೆಗಿದ್ದಾರೆ.

ಸಂದರ್ಶನ: ಸಿದ್ದಪ್ಪ ಮೂಲಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...