HomeUncategorizedಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ...

ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ

- Advertisement -
- Advertisement -

ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಬಹುಚರ್ಚಿತವಾದ ಲಿಂಗಾಯಿತ ಧರ್ಮದ ವಿಚಾರವು ಮತ್ತೆ ಮುನ್ನೆಲೆಗೆ ಬಂದಿರುವುದು ಪೇಜಾವರರ ಪಂಥಾಹ್ವಾನದ ಕಾರಣಕ್ಕೆ. ಅದರ ಕುರಿತು ಲಿಂಗಾಯಿತ ಧರ್ಮದ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯರಾದ ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಅವರನ್ನು ನಾನುಗೌರಿ.ಕಾಂ ಮಾತಾಡಿಸಿತು.

ಪ್ರಶ್ನೆ: ಪೇಜಾವರ ಸ್ವಾಮಿಗಳು ಲಿಂಗಾಯತ ಧರ್ಮದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಯಾಕಿರಬಹುದು?
ಬಸವಲಿಂಗ ಪಟ್ಟದೇವರು ಸ್ವಾಮೀಜಿ: ಅವರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ಆಳವಾದ ತತ್ವಜ್ಞಾನದ ಕೊರತೆಯಿರಬಹದು ಅಥವಾ ತತ್ವಜ್ಞಾನ ಗೊತ್ತಿದ್ದರು ಅದು ಸ್ವತಂತ್ರ ಧರ್ಮ ಆಗಬಾರದೆಂಬ ಅಭಿಲಾಷೆಯೂ ಇರಬಹುದು. ಆದರೆ ಒಂದು ಮಾತ್ರ ಸತ್ಯ. ಲಿಂಗಾಯತ ಧರ್ಮ ಅದು ಸ್ವತಂತ್ರವಾದ ಧರ್ಮ. ಅದರದೇ ಆದ ಒಂದು ಸಿದ್ಧಾಂತ, ಗುರಿ, ಸಾಧನೆ, ದರ್ಶನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ ಇದೆ. ಹೀಗಾಗಿ ಲಿಂಗಾಯತ ಧರ್ಮ ಯಾವತ್ತಿಗೂ ಪರಿಪೂರ್ಣ ಮತ್ತು ಸ್ವತಂತ್ರ ಧರ್ಮ. ಅದರಲ್ಲಿ ಎರಡು ಮಾತಿಲ್ಲ. ಚರ್ಚೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕೊರತೆಯಿದ್ದರೆ ಮಾತ್ರ ಚರ್ಚೆಗೆ ಹೋಗಬೇಕು. ನಮ್ಮದು ಪ್ರತ್ಯೇಕ ಧರ್ಮ. ಹಿಂದೆಯೂ ಹೀಗೆ ಇತ್ತು. ಮುಂದೆಯೂ ಹೀಗೆಯೇ ಇರುತ್ತದೆ.

ಒಂದು ವಿಷಯ ಸ್ಪಷ್ಟೀಕರಣ ಮಾಡುತ್ತೇನೆ. ಹಿಂದೂ ಎನ್ನುವುದು ಒಂದು ಸಂಸ್ಕೃತಿ. ಯಾವಾಗ ಜೈನರು, ಬುದ್ಧರು, ಸಿಖ್ಖರು ಮುಂತಾದವರು ಹಿಂದೂ ಕಕ್ಷೆಯೊಳಗೆ ಬರುತ್ತಾರೋ ಆಗ ನಾವು ಸಹ ಹಿಂದೂ ಕಕ್ಷೆಯೊಳಗೆ ಬರುತ್ತೀವಿ. ಬೌದ್ಧ ಧರ್ಮ, ಜೈನಧರ್ಮ, ಸಿಖ್ ಧರ್ಮ ಹೆಂಗಿದೆಯೋ ಹಾಗೆಯೇ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮ. ನಮ್ಮ ಸಂಸ್ಕೃತಿ ಬಿಟ್ಟು ಹೋಗುವುದಿಲ್ಲ. ಹಿಂದೂ ಎನ್ನುವುದು ಒಂದು ಸ್ವತಂತ್ರ ಧರ್ಮವಲ್ಲ. ಅದೊಂದು ಸಮಾಜ, ಸಂಸ್ಕೃತಿ.

ಪ್ರಶ್ನೆ: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಈ ಚಳವಳಿ ಬಿರುಸಿನಿಂದ ನಡೆದಿತ್ತು. ಆನಂತರ ಇದು ಸ್ತಬ್ಧಗೊಂಡು ನಿಂತಿದೆ ಅನ್ನಿಸುತ್ತಿದೆ. ಹಾಗಾಗಿ ಇದು ರಾಜಕೀಯಪ್ರೇರಿತ ಅಂತ ಏಕೆ ಅನ್ನಿಸಲ್ಲ?
ಇದು ರಾಜಕೀಯ ಪ್ರೇರಿತ ಅಲ್ಲ. ಗಾಂಧೀಜಿಯವರ ಸ್ವತಂತ್ರ ಚಳವಳಿಯೂ ಒಂದೇಸಮನೇ ಎತ್ತರದಲ್ಲಿರಲಿಲ್ಲ. ಚಳವಳಿಗಳು ಯಾವಾಗಲೂ ಏರಿಕೆ ಇಳಿಕೆ, ಏರಿಕೆ ಇಳಿಕೆ ರೀತಿಯಲ್ಲಿಯೇ ಇರುತ್ತವೆ. ಆದರೆ ಚಟುವಟಿಕೆ ಮಾತ್ರ ಪೂರ್ಣ ಸ್ತಬ್ಧಗೊಂಡಿಲ್ಲ. ಸಣ್ಣ ಪ್ರಮಾಣದಲ್ಲಿ ನಮಗೇನು ಬೇಕು ಆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ಪ್ರಶ್ನೆ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, 12ನೇ ಶತಮಾನದಲ್ಲಿಯೇ ಅಸ್ತಿತ್ವಕ್ಕೆ ಬಂತು ಎನ್ನುತ್ತೀರಿ, ಹಾಗಾದರೆ ಇದು ಯಾವಾಗ ವೈದಿಕೀಕರಣಗೊಂಡಿತು?
ಕಲ್ಯಾಣಕ್ರಾಂತಿ ಆದಮೇಲೆ ಇದಕ್ಕೆ ಸ್ವಲ್ಪ ಕತ್ತಲು ಆವರಿಸಿತು. ಬಸವಣ್ಣನವರ ಕ್ರಾಂತಿ, ಅಂತರ್ಜಾತಿವಿವಾಹ ಆದಮೇಲೆ ವೈದಿಕಶಾಹಿ ಮತ್ತು ರಾಜಶಾಹಿ ಎರಡು ಒಂದಾಗಿ ಇದರ ಮೇಲೆ ಆಕ್ರಮಣ ನಡೆಸಿದರಿಂದ 200-300 ವರ್ಷ ಅದು ಕತ್ತಲೆಯಲ್ಲಿಳಿಯಿತು. ಆನಂತರ ನಿಧಾನವಾಗಿ ವೈದಿಕೀಕರಣಗೊಳ್ಳಲಿಕ್ಕೆ ಪ್ರಾರಂಭವಾಯಿತು.

ಆಮೇಲೆ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಪ್ರೌಢದೇವರಾಯನ ಕಾಲಕ್ಕೆ ಮತ್ತದು ಸ್ವಲ್ಪ ಚೇತರಿಕೆ ಕಂಡು ನೂರೊಂದು ವಿರಕ್ತರು, ಯಡಿಯೂರು ಸಿದ್ಧಲಿಂಗೇಶ್ವರರ ಕಾಲಕ್ಕೆ ಇದು ಪುನರುಜ್ಜೀವನಗೊಂಡಿತು. ಮತ್ತೆ ಸ್ವಲ್ಪ 100 ವರ್ಷ ಇಳಿಮುಖವಾಯಿತು. ನಂತರ ಹಳಕಟ್ಟಿ ಶರಣರು ಬಂದಮೇಲೆ, ವಚನಸಾಹಿತ್ಯ ಎಲ್ಲಾ ಹೊರಗೆ ತಂದಮೇಲೆ ಇದು ನಮ್ಮತನ ಏನು ಎಂಬುದು ನಮಗೆ ಗೊತ್ತಾಯಿತು. ವಚನಸಾಹಿತ್ಯವೇ ನಮಗೆ ಮಹತ್ವ. ಅದನ್ನು ಅಧ್ಯಯನ ಮಾಡುತ್ತಾ ಹೋದಂಗೆ ನಾವು ನಿಜವಾಗಿ ಯಾರು ಎಂಬುದು ತಿಳಿಯಿತು.

ಪ್ರಶ್ನೆ: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕೇವಲ ಮೀಸಲಾತಿಗಾಗಿಯೋ ಅಥವಾ ಮೂಲ ಅಸ್ಮಿತೆಗಾಗಿಯೋ?
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿಯೇ ಈ ಹೋರಾಟ. ಇದೇ ನಮ್ಮ ಗಟ್ಟಿ ನಿಲುವು. ಮೀಸಲಾತಿದು ಎರಡನೇ ಪ್ರಶ್ನೆ. ಧರ್ಮಕ್ಕೆ ಮಾನ್ಯತೆ ಸಿಕ್ಕಿದ ಮೇಲೆ ಮೀಸಲಾತಿ ಸಿಗಬಹುದು, ಬಿಡಬಹುದು. ಆ ಪ್ರಶ್ನೆ ಬೇರೆ. ಆದರೆ ನಮಗೆ ಮಾನ್ಯತೆಯೇ ಮಹತ್ವದ್ದು.

ಪ್ರಶ್ನೆ: ಲಿಂಗಾಯತ ಧರ್ಮದ ಹೋರಾಟದ ನೇತೃತ್ವ ರಾಜಕಾರಣಿಗಳ ಕೈಯಲ್ಲಿರಬೇಕೊ ಅಥವಾ ಸ್ವಾಮಿಜೀಗಳ ಕೈಯಲ್ಲಿರಬೇಕೊ? ಅಥವಾ ಮಾಸ್ ಚಳವಳಿಯಾಗಿ ಜನಸಾಮಾನ್ಯರ ಕೈಯಲ್ಲಿರಬೇಕೊ?

ಹೋರಾಟಕ್ಕೆ ಎಲ್ಲರೂ ಬೇಕು. ಇವರೇ ಬೇಕು ಅವರಿರಬಾರದು ಎಂಬ ಪ್ರಶ್ನೆಯೇ ಹೋರಾಟದಲ್ಲಿ ಉದ್ಭವಿಸುವುದಿಲ್ಲ. ಹೋರಾಟದಾಗೆ ಎಲ್ಲರೂ ಇದ್ರೆ ಶಕ್ತಿ ಇರುತ್ತದೆ. ರಥ ಎಳೆಯಬೇಕಾದರೆ ಎಲ್ಲರ ಕೈಗೂಡಬೇಕು. ಒಬ್ಬರೇ ರಥ ಎಳೆಯಲಾಗುವುದಿಲ್ಲ.

ಪ್ರಶ್ನೆ: ಲಿಂಗಾಯತ ಚಳವಳಿಯು ಮಂಟೇಸ್ವಾಮಿ, ಮಲೆ ಮಹದೇಶ್ವರ ಪರಂಪರೆಯನ್ನು ಹೇಗೆ ನೋಡುತ್ತದೆ? ಆ ಪರಂಪರೆ ಯಾಕೆ ಮುನ್ನೆಲೆಗೆ ಬರಲಿಲ್ಲ?
ಮೈಸೂರು ಭಾಗದಲ್ಲಿ ಅವರ ಕೊಡುಗೆ ಮಹತ್ವದ್ದು. ಆ ಭಾಗದಲ್ಲಿ ಬಸವ ತತ್ವ, ಲಿಂಗತತ್ವ ಉಳಿದು ಬೆಳೆಯಲ್ಲಿಕ್ಕೆ ಅವರ ಅಪಾರ ಕೊಡುಗೆ ಇದೆ. ಮಂಟೇಸ್ವಾಮಿ, ಮಲೆ ಮಹದೇಶ್ವರರು ಸಹ ಶರಣ ಪರಂಪರೆಯವರೆ ಅಲ್ಲವೇ? ಆದರೆ ಅದನ್ನು ಪೌರಾಣೀಕರಿಸಲಾಗಿದೆ. ಈ ಭಾಗದಲ್ಲಿ ಷಣ್ಮುಗ ಶಿವಯೋಗಿಗಳು ಬಂದು ಈ ಸುತ್ತಾಮುತ್ತಾ ಜಾಗೃತಿ ಹೇಗೆ ಮಾಡಿದರೋ ಹಾಗೆಯೇ ಮೈಸೂರು ಭಾಗಕ್ಕೆ ಅವರು ಜಾಗೃತಿ ಮಾಡಿದ್ದಾರೆ. ಅವರು ಶರಣ ಪರಂಪರೆಯ ಭಾಗವೇ ಹೊರತು ಬೇರೆ ಅಲ್ಲ.

ಪ್ರಶ್ನೆ: ಲಿಂಗಾಯತ ತತ್ವ. ಜೀವಪರ ಮತ್ತು ಜನಪರ ತತ್ವ. ಎಲ್ಲರನ್ನು ಒಳಗೊಳ್ಳುತ್ತದೆ. ಮೌಢ್ಯಾಚರಣೆಯ ಬಗ್ಗೆಯೂ, ಜಾತ್ಯತೀತತೆಯ ಬಗ್ಗೆಯೂ ಮಾತಾಡುತ್ತೀರಿ. ಆದರೆ ಇದು ಬೋಧನೆ ಮಟ್ಟದಲ್ಲಿ ಜಾಸ್ತಿಯಿದ್ದು ಆಚರಣೆಯಲ್ಲಿ ಕಡಿಮೆ ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೇ?
ತತ್ವ ತಿಳಿದವರು ಆಚರಣೆಯಲ್ಲಿ ನಿಧಾನ ಮಾಡುತ್ತಿದ್ದಾರೆ ನಿಜ. ಒಂದೇದಿನ ಒಂದೇ ಸಮಯದಲ್ಲಿ ಬದಲಾವಣೆಯಾಗುವುದಿಲ್ಲ. ಮೊದಲು ಜಾಗೃತಿ ಬೇಕು. ಒಂದೇ ದಿನದಲ್ಲಿ ಶರಣ ತತ್ವ ಆಚರಣೆಗೆ ಬರಲು ಸಾಧ್ಯವಿಲ್ಲ. ಕ್ರಮವಾಗಿ ನಡೆದು ಬಸವತತ್ವ ಪಾಲಕರು ಆಗುತ್ತಾರೆ.

ಪ್ರಶ್ನೆ: ಮುಂದಿನ ಹೋರಾಟದ ರೂಪುರೇಷೆಯೇನು?
ಮೊದಲು ಜಾಗೃತಿ ಮಾಡುವುದು. ಅಲ್ಲಲ್ಲಿ ಸಮಾವೇಶ ನಡೆಸುವುದು ಸಮಾವೇಶದ ಗುರಿಯಾಗಿದೆ. ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ ತೌಡು ಕುಟ್ಟುವ ಉದ್ದೇಶ ನಮಗಿಲ್ಲ. ನಮ್ಮ ತತ್ವ ಸಿದ್ದಾಂತ ಇದೆ. ಅದರ ಪ್ರಕಾರ ನಾವು ಹೋಗುತ್ತೇವೆ.

ಪ್ರಶ್ನೆ: 99 ಪಂಗಡಗಳು ನಿಮ್ಮ ಜೊತೆಗಿದ್ದಾವೆಯೇ?
ಎಲ್ಲರೂ ಜೊತೆಗಿದ್ದಾರೆ. ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ ಎಲ್ಲರೂ ನಮ್ಮ ಜೊತೆಗಿದ್ದಾರೆ.

ಸಂದರ್ಶನ: ಸಿದ್ದಪ್ಪ ಮೂಲಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆ ಪ್ರಶ್ನಿಸಿ ಸಿಬಿಐ ಅರ್ಜಿ; ಪ್ರತಿಕ್ರಿಯಿಸಲು ಕೇಜ್ರಿವಾಲ್-ಸಿಸೋಡಿಯಾಗೆ ಸಮಯ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರ ತಮ್ಮ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ ಅರ್ಜಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ದೆಹಲಿ...

ಪ್ರಶ್ನೆಗಳಿಗೆ ಉತ್ತರಿಸದ ಸಚಿವರು: ಸದನ ಮುಂದೂಡಿದ ಸ್ಪೀಕರ್ ಯು.ಟಿ ಖಾದರ್

ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಸೋಮವಾರ (ಮಾ.16) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಮುಂದೂಡಿಕೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ವಿಧಾನಸಭೆಯಲ್ಲಿ...

‘ಆಪರೇಷನ್ ಸಿಂಧೂರ್’ ಕುರಿತ ಪೋಸ್ಟ್: ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಹರಿಯಾಣ ಸರ್ಕಾರ

'ಆಪರೇಷನ್ ಸಿಂಧೂರ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧದ ಈ ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಹರಿಯಾಣ...

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...

ಉತ್ತರ ಪ್ರದೇಶ| ಪಾಕ್ ಸಂಪರ್ಕದ ಆರೋಪ; ಮಹಿಳೆ ಸೇರಿದಂತೆ 6 ಜನರ ಬಂಧನ

ಪಾಕಿಸ್ತಾನದ ದೇಶದ ಕೋಡ್‌ನಲ್ಲಿ ನೋಂದಾಯಿಸಲಾದ ವಿದೇಶಿ ಸಂಖ್ಯೆಯೊಂದಿಗೆ ಭದ್ರತಾ ಕಚೇರಿಗಳು, ತನಿಖಾ ಸಂಸ್ಥೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದ ಮೇಲೆ ಗಾಜಿಯಾಬಾದ್‌ನಲ್ಲಿ ಮಹಿಳೆ...

ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ : ಚಿನ್ಮಯಿ ಶ್ರೀಪಾದ, ಟಿಎಂ ಕೃಷ್ಣ ಸೇರಿ ಹಲವರಿಂದ ಟೀಕೆ

ಲಿಂಗತಾರತಮ್ಯ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ತಮಿಳು ಸಾಹಿತಿ ವೈರಮುತ್ತು ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.  ಸಾಹಿತ್ಯ ಕ್ಷೇತ್ರದಲ್ಲಿನ ಅವರ ಕೊಡುಗೆಯನ್ನು ಪರಿಗಣಿಸಿ...

ಡ್ರೋನ್ ದಾಳಿಯ ನಂತರ ದುಬೈ ವಿಮಾನ ನಿಲ್ದಾಣದ ಬಳಿ ಬೆಂಕಿ ಅವಘಡ; ವಿಮಾನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ

ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ, ದುಬೈ ಅಧಿಕಾರಿಗಳ ಪ್ರಕಾರ, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ."ದುಬೈ ಅಂತರಾಷ್ಟ್ರೀಯ ವಿಮಾನ...

ಕಾನ್ಶಿ ರಾಮ್‌ಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ರಾಹುಲ್ ಗಾಂಧಿ

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸ್ಥಾಪಿಸಿದ ದಲಿತ ಐಕಾನ್ ಕಾನ್ಶಿ ರಾಮ್‌ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ...

ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಹತ್ತು ರಾಜ್ಯಗಳ 37 ಸ್ಥಾನಗಳನ್ನು ಒಳಗೊಂಡ ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ಸೋಮವಾರ (ಮಾ.16) ಮತದಾನ ನಡೆಯುತ್ತಿದೆ. ಬಿಹಾರ, ಒಡಿಶಾ ಮತ್ತು ಹರಿಯಾಣದಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, 26 ಅಭ್ಯರ್ಥಿಗಳು ಈಗಾಗಲೇ...