HomeUncategorizedಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ...

ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ

- Advertisement -
- Advertisement -

ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಬಹುಚರ್ಚಿತವಾದ ಲಿಂಗಾಯಿತ ಧರ್ಮದ ವಿಚಾರವು ಮತ್ತೆ ಮುನ್ನೆಲೆಗೆ ಬಂದಿರುವುದು ಪೇಜಾವರರ ಪಂಥಾಹ್ವಾನದ ಕಾರಣಕ್ಕೆ. ಅದರ ಕುರಿತು ಲಿಂಗಾಯಿತ ಧರ್ಮದ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯರಾದ ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಅವರನ್ನು ನಾನುಗೌರಿ.ಕಾಂ ಮಾತಾಡಿಸಿತು.

ಪ್ರಶ್ನೆ: ಪೇಜಾವರ ಸ್ವಾಮಿಗಳು ಲಿಂಗಾಯತ ಧರ್ಮದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಯಾಕಿರಬಹುದು?
ಬಸವಲಿಂಗ ಪಟ್ಟದೇವರು ಸ್ವಾಮೀಜಿ: ಅವರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ಆಳವಾದ ತತ್ವಜ್ಞಾನದ ಕೊರತೆಯಿರಬಹದು ಅಥವಾ ತತ್ವಜ್ಞಾನ ಗೊತ್ತಿದ್ದರು ಅದು ಸ್ವತಂತ್ರ ಧರ್ಮ ಆಗಬಾರದೆಂಬ ಅಭಿಲಾಷೆಯೂ ಇರಬಹುದು. ಆದರೆ ಒಂದು ಮಾತ್ರ ಸತ್ಯ. ಲಿಂಗಾಯತ ಧರ್ಮ ಅದು ಸ್ವತಂತ್ರವಾದ ಧರ್ಮ. ಅದರದೇ ಆದ ಒಂದು ಸಿದ್ಧಾಂತ, ಗುರಿ, ಸಾಧನೆ, ದರ್ಶನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ ಇದೆ. ಹೀಗಾಗಿ ಲಿಂಗಾಯತ ಧರ್ಮ ಯಾವತ್ತಿಗೂ ಪರಿಪೂರ್ಣ ಮತ್ತು ಸ್ವತಂತ್ರ ಧರ್ಮ. ಅದರಲ್ಲಿ ಎರಡು ಮಾತಿಲ್ಲ. ಚರ್ಚೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕೊರತೆಯಿದ್ದರೆ ಮಾತ್ರ ಚರ್ಚೆಗೆ ಹೋಗಬೇಕು. ನಮ್ಮದು ಪ್ರತ್ಯೇಕ ಧರ್ಮ. ಹಿಂದೆಯೂ ಹೀಗೆ ಇತ್ತು. ಮುಂದೆಯೂ ಹೀಗೆಯೇ ಇರುತ್ತದೆ.

ಒಂದು ವಿಷಯ ಸ್ಪಷ್ಟೀಕರಣ ಮಾಡುತ್ತೇನೆ. ಹಿಂದೂ ಎನ್ನುವುದು ಒಂದು ಸಂಸ್ಕೃತಿ. ಯಾವಾಗ ಜೈನರು, ಬುದ್ಧರು, ಸಿಖ್ಖರು ಮುಂತಾದವರು ಹಿಂದೂ ಕಕ್ಷೆಯೊಳಗೆ ಬರುತ್ತಾರೋ ಆಗ ನಾವು ಸಹ ಹಿಂದೂ ಕಕ್ಷೆಯೊಳಗೆ ಬರುತ್ತೀವಿ. ಬೌದ್ಧ ಧರ್ಮ, ಜೈನಧರ್ಮ, ಸಿಖ್ ಧರ್ಮ ಹೆಂಗಿದೆಯೋ ಹಾಗೆಯೇ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮ. ನಮ್ಮ ಸಂಸ್ಕೃತಿ ಬಿಟ್ಟು ಹೋಗುವುದಿಲ್ಲ. ಹಿಂದೂ ಎನ್ನುವುದು ಒಂದು ಸ್ವತಂತ್ರ ಧರ್ಮವಲ್ಲ. ಅದೊಂದು ಸಮಾಜ, ಸಂಸ್ಕೃತಿ.

ಪ್ರಶ್ನೆ: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಈ ಚಳವಳಿ ಬಿರುಸಿನಿಂದ ನಡೆದಿತ್ತು. ಆನಂತರ ಇದು ಸ್ತಬ್ಧಗೊಂಡು ನಿಂತಿದೆ ಅನ್ನಿಸುತ್ತಿದೆ. ಹಾಗಾಗಿ ಇದು ರಾಜಕೀಯಪ್ರೇರಿತ ಅಂತ ಏಕೆ ಅನ್ನಿಸಲ್ಲ?
ಇದು ರಾಜಕೀಯ ಪ್ರೇರಿತ ಅಲ್ಲ. ಗಾಂಧೀಜಿಯವರ ಸ್ವತಂತ್ರ ಚಳವಳಿಯೂ ಒಂದೇಸಮನೇ ಎತ್ತರದಲ್ಲಿರಲಿಲ್ಲ. ಚಳವಳಿಗಳು ಯಾವಾಗಲೂ ಏರಿಕೆ ಇಳಿಕೆ, ಏರಿಕೆ ಇಳಿಕೆ ರೀತಿಯಲ್ಲಿಯೇ ಇರುತ್ತವೆ. ಆದರೆ ಚಟುವಟಿಕೆ ಮಾತ್ರ ಪೂರ್ಣ ಸ್ತಬ್ಧಗೊಂಡಿಲ್ಲ. ಸಣ್ಣ ಪ್ರಮಾಣದಲ್ಲಿ ನಮಗೇನು ಬೇಕು ಆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ಪ್ರಶ್ನೆ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, 12ನೇ ಶತಮಾನದಲ್ಲಿಯೇ ಅಸ್ತಿತ್ವಕ್ಕೆ ಬಂತು ಎನ್ನುತ್ತೀರಿ, ಹಾಗಾದರೆ ಇದು ಯಾವಾಗ ವೈದಿಕೀಕರಣಗೊಂಡಿತು?
ಕಲ್ಯಾಣಕ್ರಾಂತಿ ಆದಮೇಲೆ ಇದಕ್ಕೆ ಸ್ವಲ್ಪ ಕತ್ತಲು ಆವರಿಸಿತು. ಬಸವಣ್ಣನವರ ಕ್ರಾಂತಿ, ಅಂತರ್ಜಾತಿವಿವಾಹ ಆದಮೇಲೆ ವೈದಿಕಶಾಹಿ ಮತ್ತು ರಾಜಶಾಹಿ ಎರಡು ಒಂದಾಗಿ ಇದರ ಮೇಲೆ ಆಕ್ರಮಣ ನಡೆಸಿದರಿಂದ 200-300 ವರ್ಷ ಅದು ಕತ್ತಲೆಯಲ್ಲಿಳಿಯಿತು. ಆನಂತರ ನಿಧಾನವಾಗಿ ವೈದಿಕೀಕರಣಗೊಳ್ಳಲಿಕ್ಕೆ ಪ್ರಾರಂಭವಾಯಿತು.

ಆಮೇಲೆ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಪ್ರೌಢದೇವರಾಯನ ಕಾಲಕ್ಕೆ ಮತ್ತದು ಸ್ವಲ್ಪ ಚೇತರಿಕೆ ಕಂಡು ನೂರೊಂದು ವಿರಕ್ತರು, ಯಡಿಯೂರು ಸಿದ್ಧಲಿಂಗೇಶ್ವರರ ಕಾಲಕ್ಕೆ ಇದು ಪುನರುಜ್ಜೀವನಗೊಂಡಿತು. ಮತ್ತೆ ಸ್ವಲ್ಪ 100 ವರ್ಷ ಇಳಿಮುಖವಾಯಿತು. ನಂತರ ಹಳಕಟ್ಟಿ ಶರಣರು ಬಂದಮೇಲೆ, ವಚನಸಾಹಿತ್ಯ ಎಲ್ಲಾ ಹೊರಗೆ ತಂದಮೇಲೆ ಇದು ನಮ್ಮತನ ಏನು ಎಂಬುದು ನಮಗೆ ಗೊತ್ತಾಯಿತು. ವಚನಸಾಹಿತ್ಯವೇ ನಮಗೆ ಮಹತ್ವ. ಅದನ್ನು ಅಧ್ಯಯನ ಮಾಡುತ್ತಾ ಹೋದಂಗೆ ನಾವು ನಿಜವಾಗಿ ಯಾರು ಎಂಬುದು ತಿಳಿಯಿತು.

ಪ್ರಶ್ನೆ: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕೇವಲ ಮೀಸಲಾತಿಗಾಗಿಯೋ ಅಥವಾ ಮೂಲ ಅಸ್ಮಿತೆಗಾಗಿಯೋ?
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿಯೇ ಈ ಹೋರಾಟ. ಇದೇ ನಮ್ಮ ಗಟ್ಟಿ ನಿಲುವು. ಮೀಸಲಾತಿದು ಎರಡನೇ ಪ್ರಶ್ನೆ. ಧರ್ಮಕ್ಕೆ ಮಾನ್ಯತೆ ಸಿಕ್ಕಿದ ಮೇಲೆ ಮೀಸಲಾತಿ ಸಿಗಬಹುದು, ಬಿಡಬಹುದು. ಆ ಪ್ರಶ್ನೆ ಬೇರೆ. ಆದರೆ ನಮಗೆ ಮಾನ್ಯತೆಯೇ ಮಹತ್ವದ್ದು.

ಪ್ರಶ್ನೆ: ಲಿಂಗಾಯತ ಧರ್ಮದ ಹೋರಾಟದ ನೇತೃತ್ವ ರಾಜಕಾರಣಿಗಳ ಕೈಯಲ್ಲಿರಬೇಕೊ ಅಥವಾ ಸ್ವಾಮಿಜೀಗಳ ಕೈಯಲ್ಲಿರಬೇಕೊ? ಅಥವಾ ಮಾಸ್ ಚಳವಳಿಯಾಗಿ ಜನಸಾಮಾನ್ಯರ ಕೈಯಲ್ಲಿರಬೇಕೊ?

ಹೋರಾಟಕ್ಕೆ ಎಲ್ಲರೂ ಬೇಕು. ಇವರೇ ಬೇಕು ಅವರಿರಬಾರದು ಎಂಬ ಪ್ರಶ್ನೆಯೇ ಹೋರಾಟದಲ್ಲಿ ಉದ್ಭವಿಸುವುದಿಲ್ಲ. ಹೋರಾಟದಾಗೆ ಎಲ್ಲರೂ ಇದ್ರೆ ಶಕ್ತಿ ಇರುತ್ತದೆ. ರಥ ಎಳೆಯಬೇಕಾದರೆ ಎಲ್ಲರ ಕೈಗೂಡಬೇಕು. ಒಬ್ಬರೇ ರಥ ಎಳೆಯಲಾಗುವುದಿಲ್ಲ.

ಪ್ರಶ್ನೆ: ಲಿಂಗಾಯತ ಚಳವಳಿಯು ಮಂಟೇಸ್ವಾಮಿ, ಮಲೆ ಮಹದೇಶ್ವರ ಪರಂಪರೆಯನ್ನು ಹೇಗೆ ನೋಡುತ್ತದೆ? ಆ ಪರಂಪರೆ ಯಾಕೆ ಮುನ್ನೆಲೆಗೆ ಬರಲಿಲ್ಲ?
ಮೈಸೂರು ಭಾಗದಲ್ಲಿ ಅವರ ಕೊಡುಗೆ ಮಹತ್ವದ್ದು. ಆ ಭಾಗದಲ್ಲಿ ಬಸವ ತತ್ವ, ಲಿಂಗತತ್ವ ಉಳಿದು ಬೆಳೆಯಲ್ಲಿಕ್ಕೆ ಅವರ ಅಪಾರ ಕೊಡುಗೆ ಇದೆ. ಮಂಟೇಸ್ವಾಮಿ, ಮಲೆ ಮಹದೇಶ್ವರರು ಸಹ ಶರಣ ಪರಂಪರೆಯವರೆ ಅಲ್ಲವೇ? ಆದರೆ ಅದನ್ನು ಪೌರಾಣೀಕರಿಸಲಾಗಿದೆ. ಈ ಭಾಗದಲ್ಲಿ ಷಣ್ಮುಗ ಶಿವಯೋಗಿಗಳು ಬಂದು ಈ ಸುತ್ತಾಮುತ್ತಾ ಜಾಗೃತಿ ಹೇಗೆ ಮಾಡಿದರೋ ಹಾಗೆಯೇ ಮೈಸೂರು ಭಾಗಕ್ಕೆ ಅವರು ಜಾಗೃತಿ ಮಾಡಿದ್ದಾರೆ. ಅವರು ಶರಣ ಪರಂಪರೆಯ ಭಾಗವೇ ಹೊರತು ಬೇರೆ ಅಲ್ಲ.

ಪ್ರಶ್ನೆ: ಲಿಂಗಾಯತ ತತ್ವ. ಜೀವಪರ ಮತ್ತು ಜನಪರ ತತ್ವ. ಎಲ್ಲರನ್ನು ಒಳಗೊಳ್ಳುತ್ತದೆ. ಮೌಢ್ಯಾಚರಣೆಯ ಬಗ್ಗೆಯೂ, ಜಾತ್ಯತೀತತೆಯ ಬಗ್ಗೆಯೂ ಮಾತಾಡುತ್ತೀರಿ. ಆದರೆ ಇದು ಬೋಧನೆ ಮಟ್ಟದಲ್ಲಿ ಜಾಸ್ತಿಯಿದ್ದು ಆಚರಣೆಯಲ್ಲಿ ಕಡಿಮೆ ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೇ?
ತತ್ವ ತಿಳಿದವರು ಆಚರಣೆಯಲ್ಲಿ ನಿಧಾನ ಮಾಡುತ್ತಿದ್ದಾರೆ ನಿಜ. ಒಂದೇದಿನ ಒಂದೇ ಸಮಯದಲ್ಲಿ ಬದಲಾವಣೆಯಾಗುವುದಿಲ್ಲ. ಮೊದಲು ಜಾಗೃತಿ ಬೇಕು. ಒಂದೇ ದಿನದಲ್ಲಿ ಶರಣ ತತ್ವ ಆಚರಣೆಗೆ ಬರಲು ಸಾಧ್ಯವಿಲ್ಲ. ಕ್ರಮವಾಗಿ ನಡೆದು ಬಸವತತ್ವ ಪಾಲಕರು ಆಗುತ್ತಾರೆ.

ಪ್ರಶ್ನೆ: ಮುಂದಿನ ಹೋರಾಟದ ರೂಪುರೇಷೆಯೇನು?
ಮೊದಲು ಜಾಗೃತಿ ಮಾಡುವುದು. ಅಲ್ಲಲ್ಲಿ ಸಮಾವೇಶ ನಡೆಸುವುದು ಸಮಾವೇಶದ ಗುರಿಯಾಗಿದೆ. ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ ತೌಡು ಕುಟ್ಟುವ ಉದ್ದೇಶ ನಮಗಿಲ್ಲ. ನಮ್ಮ ತತ್ವ ಸಿದ್ದಾಂತ ಇದೆ. ಅದರ ಪ್ರಕಾರ ನಾವು ಹೋಗುತ್ತೇವೆ.

ಪ್ರಶ್ನೆ: 99 ಪಂಗಡಗಳು ನಿಮ್ಮ ಜೊತೆಗಿದ್ದಾವೆಯೇ?
ಎಲ್ಲರೂ ಜೊತೆಗಿದ್ದಾರೆ. ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ ಎಲ್ಲರೂ ನಮ್ಮ ಜೊತೆಗಿದ್ದಾರೆ.

ಸಂದರ್ಶನ: ಸಿದ್ದಪ್ಪ ಮೂಲಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...

ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ : ಕಳೆದ ಆರು ವರ್ಷಗಳಿಂದ ಕಾಗದದ ಮೇಲೆಯೇ ಕಾರ್ಯ ನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಮಧ್ಯ ಪ್ರದೇಶದ ಇಂದೋರ್‌ನ ಖಜರಾನಾದಲ್ಲಿ ಮಂಜೂರಾದ 100 ಹಾಸಿಗೆಗಳ ಸಿವಿಲ್ ಆಸ್ಪತ್ರೆಯು ಕಳೆದ 6 ವರ್ಷಗಳಿಂದ ಕೇವಲ ಕಾಗದದ ಮೇಲಷ್ಟೇ (ದಾಖಲೆಗಳಲ್ಲಿ) ಅಸ್ತಿತ್ವದಲ್ಲಿರುವುದು ವರದಿಯಾಗಿದೆ. ಈ ವಿಲಕ್ಷಣ ಮತ್ತು ಆಘಾತಕಾರಿ ಆಡಳಿತಾತ್ಮಕ ವೈಫಲ್ಯದ ಪ್ರಕರಣವು...

ವೋಟ್‌ಯಿಂದ ಹಿಡಿದು ಮಂದಿರದ ಚಂದಾದವರೆಗೆ ಬಿಜೆಪಿಯದ್ದು ಬರೀ ‘ಚೋರಿ’ ಎಂದ ಕಾಂಗ್ರೆಸ್

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಪಕ್ಷವು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಅವರದೇ ಆದ ಇಕೋ ಸಿಸ್ಟಮ್‌ನ ದೊಡ್ಡ "ಹಗರಣ"ವಾಗಿದ್ದು, ಈ...

ಮುಸ್ಲಿಮರನ್ನು ಮಾದಕ ದ್ರವ್ಯ, ಭಯೋತ್ಪಾದನೆಗೆ ಲಿಂಕ್ ಮಾಡಿ ಪೋಸ್ಟ್: ಕೇರಳ ಹಿಂದೂ ಐಕ್ಯ ವೇದಿಕೆ ಮುಖ್ಯಸ್ಥ ಆರ್‌ವಿ ಬಾಬು ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮುಸ್ಲಿಂ ಸಮುದಾಯ ಮತ್ತು ಅದರ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ವಿ. ಬಾಬು...

ಇರಾನ್ ಜನರು ಅವರನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ: ಖಮೇನಿ ಅಂತ್ಯಕ್ರಿಯೆಯ ಜನಸಾಗರ ನೋಡಿ ಶಾಕ್ ಆದ ಟ್ರಂಪ್

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ತೀವ್ರ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....

‘ನಿಮ್ಮ ಮೌನ ಯುವಜನರನ್ನು ಕೇವಲ ಕೀಟಗಳಂತೆ ನೋಡುತ್ತೀರಿ ಎಂಬುದಕ್ಕೆ ಒಪ್ಪಿಗೆಯಾಗಿದೆ’: ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ

"ಈ ದೇಶದ ಯುವಜನರನ್ನು ನೀವು ಕೇವಲ ನಿರ್ಲಕ್ಷಿಸಬೇಕಾದ ಕೀಟಗಳಂತೆ ನೋಡುತ್ತಿದ್ದೀರಾ?" ಎಂದು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ (ಜುಲೈ 4) ಬಹಿರಂಗ ಪತ್ರ ಬರೆದಿದೆ. ದೇಶದ...

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...