HomeUncategorizedಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ...

ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ, ತೌಡು ಕುಟ್ಟುವ ಉದ್ದೇಶ ನಮಗಿಲ್ಲ : ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ

- Advertisement -
- Advertisement -

ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಬಹುಚರ್ಚಿತವಾದ ಲಿಂಗಾಯಿತ ಧರ್ಮದ ವಿಚಾರವು ಮತ್ತೆ ಮುನ್ನೆಲೆಗೆ ಬಂದಿರುವುದು ಪೇಜಾವರರ ಪಂಥಾಹ್ವಾನದ ಕಾರಣಕ್ಕೆ. ಅದರ ಕುರಿತು ಲಿಂಗಾಯಿತ ಧರ್ಮದ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯರಾದ ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಅವರನ್ನು ನಾನುಗೌರಿ.ಕಾಂ ಮಾತಾಡಿಸಿತು.

ಪ್ರಶ್ನೆ: ಪೇಜಾವರ ಸ್ವಾಮಿಗಳು ಲಿಂಗಾಯತ ಧರ್ಮದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಯಾಕಿರಬಹುದು?
ಬಸವಲಿಂಗ ಪಟ್ಟದೇವರು ಸ್ವಾಮೀಜಿ: ಅವರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ಆಳವಾದ ತತ್ವಜ್ಞಾನದ ಕೊರತೆಯಿರಬಹದು ಅಥವಾ ತತ್ವಜ್ಞಾನ ಗೊತ್ತಿದ್ದರು ಅದು ಸ್ವತಂತ್ರ ಧರ್ಮ ಆಗಬಾರದೆಂಬ ಅಭಿಲಾಷೆಯೂ ಇರಬಹುದು. ಆದರೆ ಒಂದು ಮಾತ್ರ ಸತ್ಯ. ಲಿಂಗಾಯತ ಧರ್ಮ ಅದು ಸ್ವತಂತ್ರವಾದ ಧರ್ಮ. ಅದರದೇ ಆದ ಒಂದು ಸಿದ್ಧಾಂತ, ಗುರಿ, ಸಾಧನೆ, ದರ್ಶನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ ಇದೆ. ಹೀಗಾಗಿ ಲಿಂಗಾಯತ ಧರ್ಮ ಯಾವತ್ತಿಗೂ ಪರಿಪೂರ್ಣ ಮತ್ತು ಸ್ವತಂತ್ರ ಧರ್ಮ. ಅದರಲ್ಲಿ ಎರಡು ಮಾತಿಲ್ಲ. ಚರ್ಚೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕೊರತೆಯಿದ್ದರೆ ಮಾತ್ರ ಚರ್ಚೆಗೆ ಹೋಗಬೇಕು. ನಮ್ಮದು ಪ್ರತ್ಯೇಕ ಧರ್ಮ. ಹಿಂದೆಯೂ ಹೀಗೆ ಇತ್ತು. ಮುಂದೆಯೂ ಹೀಗೆಯೇ ಇರುತ್ತದೆ.

ಒಂದು ವಿಷಯ ಸ್ಪಷ್ಟೀಕರಣ ಮಾಡುತ್ತೇನೆ. ಹಿಂದೂ ಎನ್ನುವುದು ಒಂದು ಸಂಸ್ಕೃತಿ. ಯಾವಾಗ ಜೈನರು, ಬುದ್ಧರು, ಸಿಖ್ಖರು ಮುಂತಾದವರು ಹಿಂದೂ ಕಕ್ಷೆಯೊಳಗೆ ಬರುತ್ತಾರೋ ಆಗ ನಾವು ಸಹ ಹಿಂದೂ ಕಕ್ಷೆಯೊಳಗೆ ಬರುತ್ತೀವಿ. ಬೌದ್ಧ ಧರ್ಮ, ಜೈನಧರ್ಮ, ಸಿಖ್ ಧರ್ಮ ಹೆಂಗಿದೆಯೋ ಹಾಗೆಯೇ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮ. ನಮ್ಮ ಸಂಸ್ಕೃತಿ ಬಿಟ್ಟು ಹೋಗುವುದಿಲ್ಲ. ಹಿಂದೂ ಎನ್ನುವುದು ಒಂದು ಸ್ವತಂತ್ರ ಧರ್ಮವಲ್ಲ. ಅದೊಂದು ಸಮಾಜ, ಸಂಸ್ಕೃತಿ.

ಪ್ರಶ್ನೆ: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಈ ಚಳವಳಿ ಬಿರುಸಿನಿಂದ ನಡೆದಿತ್ತು. ಆನಂತರ ಇದು ಸ್ತಬ್ಧಗೊಂಡು ನಿಂತಿದೆ ಅನ್ನಿಸುತ್ತಿದೆ. ಹಾಗಾಗಿ ಇದು ರಾಜಕೀಯಪ್ರೇರಿತ ಅಂತ ಏಕೆ ಅನ್ನಿಸಲ್ಲ?
ಇದು ರಾಜಕೀಯ ಪ್ರೇರಿತ ಅಲ್ಲ. ಗಾಂಧೀಜಿಯವರ ಸ್ವತಂತ್ರ ಚಳವಳಿಯೂ ಒಂದೇಸಮನೇ ಎತ್ತರದಲ್ಲಿರಲಿಲ್ಲ. ಚಳವಳಿಗಳು ಯಾವಾಗಲೂ ಏರಿಕೆ ಇಳಿಕೆ, ಏರಿಕೆ ಇಳಿಕೆ ರೀತಿಯಲ್ಲಿಯೇ ಇರುತ್ತವೆ. ಆದರೆ ಚಟುವಟಿಕೆ ಮಾತ್ರ ಪೂರ್ಣ ಸ್ತಬ್ಧಗೊಂಡಿಲ್ಲ. ಸಣ್ಣ ಪ್ರಮಾಣದಲ್ಲಿ ನಮಗೇನು ಬೇಕು ಆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ಪ್ರಶ್ನೆ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, 12ನೇ ಶತಮಾನದಲ್ಲಿಯೇ ಅಸ್ತಿತ್ವಕ್ಕೆ ಬಂತು ಎನ್ನುತ್ತೀರಿ, ಹಾಗಾದರೆ ಇದು ಯಾವಾಗ ವೈದಿಕೀಕರಣಗೊಂಡಿತು?
ಕಲ್ಯಾಣಕ್ರಾಂತಿ ಆದಮೇಲೆ ಇದಕ್ಕೆ ಸ್ವಲ್ಪ ಕತ್ತಲು ಆವರಿಸಿತು. ಬಸವಣ್ಣನವರ ಕ್ರಾಂತಿ, ಅಂತರ್ಜಾತಿವಿವಾಹ ಆದಮೇಲೆ ವೈದಿಕಶಾಹಿ ಮತ್ತು ರಾಜಶಾಹಿ ಎರಡು ಒಂದಾಗಿ ಇದರ ಮೇಲೆ ಆಕ್ರಮಣ ನಡೆಸಿದರಿಂದ 200-300 ವರ್ಷ ಅದು ಕತ್ತಲೆಯಲ್ಲಿಳಿಯಿತು. ಆನಂತರ ನಿಧಾನವಾಗಿ ವೈದಿಕೀಕರಣಗೊಳ್ಳಲಿಕ್ಕೆ ಪ್ರಾರಂಭವಾಯಿತು.

ಆಮೇಲೆ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಪ್ರೌಢದೇವರಾಯನ ಕಾಲಕ್ಕೆ ಮತ್ತದು ಸ್ವಲ್ಪ ಚೇತರಿಕೆ ಕಂಡು ನೂರೊಂದು ವಿರಕ್ತರು, ಯಡಿಯೂರು ಸಿದ್ಧಲಿಂಗೇಶ್ವರರ ಕಾಲಕ್ಕೆ ಇದು ಪುನರುಜ್ಜೀವನಗೊಂಡಿತು. ಮತ್ತೆ ಸ್ವಲ್ಪ 100 ವರ್ಷ ಇಳಿಮುಖವಾಯಿತು. ನಂತರ ಹಳಕಟ್ಟಿ ಶರಣರು ಬಂದಮೇಲೆ, ವಚನಸಾಹಿತ್ಯ ಎಲ್ಲಾ ಹೊರಗೆ ತಂದಮೇಲೆ ಇದು ನಮ್ಮತನ ಏನು ಎಂಬುದು ನಮಗೆ ಗೊತ್ತಾಯಿತು. ವಚನಸಾಹಿತ್ಯವೇ ನಮಗೆ ಮಹತ್ವ. ಅದನ್ನು ಅಧ್ಯಯನ ಮಾಡುತ್ತಾ ಹೋದಂಗೆ ನಾವು ನಿಜವಾಗಿ ಯಾರು ಎಂಬುದು ತಿಳಿಯಿತು.

ಪ್ರಶ್ನೆ: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕೇವಲ ಮೀಸಲಾತಿಗಾಗಿಯೋ ಅಥವಾ ಮೂಲ ಅಸ್ಮಿತೆಗಾಗಿಯೋ?
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿಯೇ ಈ ಹೋರಾಟ. ಇದೇ ನಮ್ಮ ಗಟ್ಟಿ ನಿಲುವು. ಮೀಸಲಾತಿದು ಎರಡನೇ ಪ್ರಶ್ನೆ. ಧರ್ಮಕ್ಕೆ ಮಾನ್ಯತೆ ಸಿಕ್ಕಿದ ಮೇಲೆ ಮೀಸಲಾತಿ ಸಿಗಬಹುದು, ಬಿಡಬಹುದು. ಆ ಪ್ರಶ್ನೆ ಬೇರೆ. ಆದರೆ ನಮಗೆ ಮಾನ್ಯತೆಯೇ ಮಹತ್ವದ್ದು.

ಪ್ರಶ್ನೆ: ಲಿಂಗಾಯತ ಧರ್ಮದ ಹೋರಾಟದ ನೇತೃತ್ವ ರಾಜಕಾರಣಿಗಳ ಕೈಯಲ್ಲಿರಬೇಕೊ ಅಥವಾ ಸ್ವಾಮಿಜೀಗಳ ಕೈಯಲ್ಲಿರಬೇಕೊ? ಅಥವಾ ಮಾಸ್ ಚಳವಳಿಯಾಗಿ ಜನಸಾಮಾನ್ಯರ ಕೈಯಲ್ಲಿರಬೇಕೊ?

ಹೋರಾಟಕ್ಕೆ ಎಲ್ಲರೂ ಬೇಕು. ಇವರೇ ಬೇಕು ಅವರಿರಬಾರದು ಎಂಬ ಪ್ರಶ್ನೆಯೇ ಹೋರಾಟದಲ್ಲಿ ಉದ್ಭವಿಸುವುದಿಲ್ಲ. ಹೋರಾಟದಾಗೆ ಎಲ್ಲರೂ ಇದ್ರೆ ಶಕ್ತಿ ಇರುತ್ತದೆ. ರಥ ಎಳೆಯಬೇಕಾದರೆ ಎಲ್ಲರ ಕೈಗೂಡಬೇಕು. ಒಬ್ಬರೇ ರಥ ಎಳೆಯಲಾಗುವುದಿಲ್ಲ.

ಪ್ರಶ್ನೆ: ಲಿಂಗಾಯತ ಚಳವಳಿಯು ಮಂಟೇಸ್ವಾಮಿ, ಮಲೆ ಮಹದೇಶ್ವರ ಪರಂಪರೆಯನ್ನು ಹೇಗೆ ನೋಡುತ್ತದೆ? ಆ ಪರಂಪರೆ ಯಾಕೆ ಮುನ್ನೆಲೆಗೆ ಬರಲಿಲ್ಲ?
ಮೈಸೂರು ಭಾಗದಲ್ಲಿ ಅವರ ಕೊಡುಗೆ ಮಹತ್ವದ್ದು. ಆ ಭಾಗದಲ್ಲಿ ಬಸವ ತತ್ವ, ಲಿಂಗತತ್ವ ಉಳಿದು ಬೆಳೆಯಲ್ಲಿಕ್ಕೆ ಅವರ ಅಪಾರ ಕೊಡುಗೆ ಇದೆ. ಮಂಟೇಸ್ವಾಮಿ, ಮಲೆ ಮಹದೇಶ್ವರರು ಸಹ ಶರಣ ಪರಂಪರೆಯವರೆ ಅಲ್ಲವೇ? ಆದರೆ ಅದನ್ನು ಪೌರಾಣೀಕರಿಸಲಾಗಿದೆ. ಈ ಭಾಗದಲ್ಲಿ ಷಣ್ಮುಗ ಶಿವಯೋಗಿಗಳು ಬಂದು ಈ ಸುತ್ತಾಮುತ್ತಾ ಜಾಗೃತಿ ಹೇಗೆ ಮಾಡಿದರೋ ಹಾಗೆಯೇ ಮೈಸೂರು ಭಾಗಕ್ಕೆ ಅವರು ಜಾಗೃತಿ ಮಾಡಿದ್ದಾರೆ. ಅವರು ಶರಣ ಪರಂಪರೆಯ ಭಾಗವೇ ಹೊರತು ಬೇರೆ ಅಲ್ಲ.

ಪ್ರಶ್ನೆ: ಲಿಂಗಾಯತ ತತ್ವ. ಜೀವಪರ ಮತ್ತು ಜನಪರ ತತ್ವ. ಎಲ್ಲರನ್ನು ಒಳಗೊಳ್ಳುತ್ತದೆ. ಮೌಢ್ಯಾಚರಣೆಯ ಬಗ್ಗೆಯೂ, ಜಾತ್ಯತೀತತೆಯ ಬಗ್ಗೆಯೂ ಮಾತಾಡುತ್ತೀರಿ. ಆದರೆ ಇದು ಬೋಧನೆ ಮಟ್ಟದಲ್ಲಿ ಜಾಸ್ತಿಯಿದ್ದು ಆಚರಣೆಯಲ್ಲಿ ಕಡಿಮೆ ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೇ?
ತತ್ವ ತಿಳಿದವರು ಆಚರಣೆಯಲ್ಲಿ ನಿಧಾನ ಮಾಡುತ್ತಿದ್ದಾರೆ ನಿಜ. ಒಂದೇದಿನ ಒಂದೇ ಸಮಯದಲ್ಲಿ ಬದಲಾವಣೆಯಾಗುವುದಿಲ್ಲ. ಮೊದಲು ಜಾಗೃತಿ ಬೇಕು. ಒಂದೇ ದಿನದಲ್ಲಿ ಶರಣ ತತ್ವ ಆಚರಣೆಗೆ ಬರಲು ಸಾಧ್ಯವಿಲ್ಲ. ಕ್ರಮವಾಗಿ ನಡೆದು ಬಸವತತ್ವ ಪಾಲಕರು ಆಗುತ್ತಾರೆ.

ಪ್ರಶ್ನೆ: ಮುಂದಿನ ಹೋರಾಟದ ರೂಪುರೇಷೆಯೇನು?
ಮೊದಲು ಜಾಗೃತಿ ಮಾಡುವುದು. ಅಲ್ಲಲ್ಲಿ ಸಮಾವೇಶ ನಡೆಸುವುದು ಸಮಾವೇಶದ ಗುರಿಯಾಗಿದೆ. ಪೇಜಾವರ ಸ್ವಾಮಿಗಳಂತೆ ಒಣಚರ್ಚೆ ಮಾಡಿ ತೌಡು ಕುಟ್ಟುವ ಉದ್ದೇಶ ನಮಗಿಲ್ಲ. ನಮ್ಮ ತತ್ವ ಸಿದ್ದಾಂತ ಇದೆ. ಅದರ ಪ್ರಕಾರ ನಾವು ಹೋಗುತ್ತೇವೆ.

ಪ್ರಶ್ನೆ: 99 ಪಂಗಡಗಳು ನಿಮ್ಮ ಜೊತೆಗಿದ್ದಾವೆಯೇ?
ಎಲ್ಲರೂ ಜೊತೆಗಿದ್ದಾರೆ. ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ ಎಲ್ಲರೂ ನಮ್ಮ ಜೊತೆಗಿದ್ದಾರೆ.

ಸಂದರ್ಶನ: ಸಿದ್ದಪ್ಪ ಮೂಲಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್ | ಏರ್ ಆಂಬ್ಯುಲೆನ್ಸ್ ಪತನ : ರೋಗಿ, ವೈದ್ಯ ಸೇರಿ 7 ಮಂದಿ ಸಾವು

ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ಸೋಮವಾರ (ಫೆ.24) ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ರೆಡ್‌ಬರ್ಡ್‌ ಏರ್ವೇಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಣೆ...

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...