Homeಕರ್ನಾಟಕಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯರ ಕೆಲಸವನ್ನು ಮಾಧ್ಯಮಗಳೇ ಮಾಡುತ್ತಿವೆ: ಜುಬೇರ್‌

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯರ ಕೆಲಸವನ್ನು ಮಾಧ್ಯಮಗಳೇ ಮಾಡುತ್ತಿವೆ: ಜುಬೇರ್‌

‘ಈದಿನ.ಕಾಂ’ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಟ್ವೀಟ್‌ ಕಾರಣಕ್ಕೆ ನನ್ನ ಮೇಲೆ ಎಫ್‌ಐಆರ್ ಹಾಕಲಾಯಿತಾದರೂ ವಿಚಾರಣೆಯಲ್ಲಿ ಕೇಳಿದ್ದು ಬೇರೆಯದೇ ಪ್ರಶ್ನೆಗಳನ್ನು” ಎಂದಿದ್ದಾರೆ.

- Advertisement -
- Advertisement -

“ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥರಾದ ಅಮಿತ್ ಮಾಳವೀಯ ಅವರ ಕೆಲಸವನ್ನು ಸುದ್ದಿವಾಹಿನಿಗಳೇ ಮಾಡುತ್ತಿವೆ” ಎಂದು ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ, ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್‌ ತಿಳಿಸಿದ್ದಾರೆ.

ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಪಡೆದು ಹೊರಗೆ ಬಂದಿರುವ ಅವರು, ಕನ್ನಡದ ಸುದ್ದಿ ಜಾಲತಾಣ ‘ಈ ದಿನ’ಕ್ಕೆ ವಿಶೇಷ ಸಂದರ್ಶನ ನೀಡಿದ್ದು, ಮುಖ್ಯವಾಹಿನಿ ಮಾಧ್ಯಮಗಳ ವರ್ತನೆಗಳನ್ನು ವಿಶ್ಲೇಷಿಸಿದ್ದಾರೆ.

ಪತ್ರಕರ್ತ ಎಸ್.ಕುಮಾರ್‌ ಅವರು ನಡೆಸಿರುವ ಸಂದರ್ಶನದಲ್ಲಿ, “ದ್ವೇಷವನ್ನು ಬಯಲು ಮಾಡುವವರನ್ನು ಬೇಟೆಯಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ, ಬಾಬಿ ಘೋಷ್‌ ಹೇಟ್‌ ಟ್ರ್ಯಾಕ್‌ ಮಾಡಿದ್ದಕ್ಕೆ ಕೆಲಸ ಕಳೆದುಕೊಂಡರು, ಹಿಂದುಸ್ತಾನ್ ಟೈಮ್ಸ್ ಅವರನ್ನು ಕೆಲಸದಿಂದ ತೆಗೆದು ಹಾಕಿತು. ನಿಮ್ಮಂತಹ ಫ್ಯಾಕ್ಟ್‌ಚೆಕರ್‌‌ಗಳು ಕೂಡ ವಿನಾ ಕಾರಣ ವಿವಿಧ ರೀತಿಯ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಹೊತ್ತಲ್ಲಿ ಮಾಧ್ಯಮಗಳು ಹೇಗಿರಬೇಕು? ಈ ವಿದ್ಯಮಾನವನ್ನು ಹೇಗೆ ನೋಡ್ತೀರಿ?” ಎಂದು ಕೇಳಿರುವ ಪ್ರಶ್ನೆಗೆ ಜುಬೇರ್‌ ಪ್ರತಿಕ್ರಿಯೆ ನೀಡಿ ಮಾಧ್ಯಮಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಾವು ಇಂದು ನೋಡುತ್ತಿರುವ ದ್ವೇಷದ ವಾತಾವರಣಕ್ಕೆ ಟಿವಿ ಚಾನೆಲ್‌ಗಳೇ ಕಾರಣ. 2014ರ ನಂತರವೂ ಎರಡು ಮೂರು ವರ್ಷ ಕಾಲ ಬಿಜೆಪಿ ಐಟಿ ಸೆಲ್ ಕ್ಯಾಂಪೇನ್‌ಗಳನ್ನು ಮಾಡುತ್ತಿತ್ತು. ಆಗ ಮಾಧ್ಯಮ ವಿರೋಧಿಸದೇ, ಸುಮ್ಮನಿದ್ದು ಬಿಡುತ್ತಿತ್ತು. ಯಾವುದೇ ಪ್ರೊಪಗಾಂಡ ಪ್ರಚಾರಕ್ಕೆ ಅಮಿತ್ ಮಾಳವೀಯಾ ಮತ್ತವರ ತಂಡ ಕೆಲಸ ಮಾಡುತ್ತಿತ್ತು. ಹ್ಯಾ‌ಷ್‌ಟ್ಯಾಗ್‌, ಮೋದಿ ಹೊಗಳಿಕೆ ಇತ್ಯಾದಿ ನಡೆಸುತ್ತಿದ್ದರು. ಗಮನಿಸಬೇಕಾದ ಸಂಗತಿಯೆಂದರೆ, ಕಳೆದ ಎರಡು ವರ್ಷಗಳಿಂದ ಅವರು ಈ ರೀತಿಯ ಕ್ಯಾಂಪೇನ್ ನಡೆಸುತ್ತಿಲ್ಲ. ಈಗ ಈ ಕೆಲಸವನ್ನು ಸುದ್ದಿವಾಹಿನಿಗಳಿಗೆ ಮತ್ತು ಅದರ ಆಂಕರ್‌ಗಳಿಗೆ ನೀಡಲಾಗಿದೆ” ಎಂದಿದ್ದಾರೆ.

“ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸ್ವತಃ ತಾವೇ ಟ್ವಿಟ್ ಮಾಡುವುದಿಲ್ಲ ಬದಲಿಗೆ ಸುದ್ದಿವಾಹಿನಿಯೊಂದರ ಅಂಕರ್‌ಗಳು ಮಾಡಿದ ಟ್ವೀಟನ್ನು ರೀಟ್ವೀಟ್‌ ಮಾಡುತ್ತಾರೆ. ಸುಧೀಶ್‌ ಚೌಧರಿ, ಚಿತ್ರಾ ಹೀಗೆ ಹಲವರಿದ್ದಾರೆ, ಮೊದಲು ಸುದ್ದಿಯಾಗುತ್ತದೆ. ಆಮೇಲೆ ಬಿಜೆಪಿ ಐಟಿ ಸೆಲ್‌ ನಿಂದ ವೈರಲ್ ಆಗುತ್ತದೆ. ಬಿಜೆಪಿ ಐಟಿ ಸೆಲ್ ಮಾಡುತ್ತಿದ್ದ ಕೆಲಸವನ್ನು ಈಗ ಮುಖ್ಯವಾಹಿನಿ ಸುದ್ದಿ ವಾಹಿನಿಗಳು ಮಾಡಲಾರಂಭಿಸಿವೆ. ಹಾಗಾಗಿ ಜನ ನಂಬುತ್ತಿದ್ದಾರೆ” ಎಂದು ವಿಷಾದಿಸಿದ್ದಾರೆ.

“ನಮ್ಮ ಕೆಲಸ ಸತ್ಯವನ್ನು ಹೇಳುವುದು. 90% ಸರಿ ಇದ್ದರೂ, ಶೇ. 10 ತಪ್ಪು ಏನು ಎಂಬುದನ್ನು ಬಯಲು ಮಾಡುವುದು. ಆದರೆ ಪ್ರಸ್ತುತ ಪ್ರತಿಯೊಂದನ್ನು ಸಂಪೂರ್ಣವಾಗಿ ಮರೆಮಾಚಲಾಗುತ್ತಿದೆ. ಸುದ್ದಿ ವಾಹಿನಿಗಳು ರಾಜಿಯಾಗಿವೆ. ಬಹುಶಃ, ಇಡಿ, ಐಟಿಗೆ ಹೆದರಿರಬಹುದು. ಕೆಲವರು ಸೈದ್ಧಾಂತಿಕವಾಗಿ ಅವರ ಜೊತೆಗೆ ಇರುವ ಕಾರಣಕ್ಕೂ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

“2 ಕೋಟಿ ರೂ.ಗೆ ಟ್ವೀಟ್‌ ಮಾಡಿ ದೇಣಿಗೆಯನ್ನು ಸ್ವಂತ ಖಾತೆಗೆ ಪಡೆದುಕೊಂಡಿದ್ದಾರೆ” ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ನನಗೆ 2 ರೂ. ಕೋಟಿ ವಿಚಾರ ಗೊತ್ತೇ ಇರಲಿಲ್ಲ. ಬಿಡುಗಡೆಯಾಗಿ ಹೊರಬರುತ್ತಿರುವಾಗ ಪೊಲೀಸ್ ಅಧಿಕಾರಿಯೊಬ್ಬರು ತಮಾಷೆ ಮಾಡುತ್ತಾ, ‘ಇನ್ನು ಮೇಲೆ 2 ಕೋಟಿ ರೂ. ಸಂಪಾದಿಸುತ್ತೀರಿ’ ಎಂದರು. ಆಗಲೂ ಅರ್ಥವಾಗಲಿಲ್ಲ. ಉತ್ತರ ಪ್ರದೇಶ ಗರಿಮಾ ಪ್ರಸಾದ್ ಈ ಆರೋಪ ಮಾಡಿದ್ದರು. ಟ್ವೀಟ್‌ ಮಾಡುವುದಕ್ಕೆ ಯಾರು 2 ರೂ. ಕೋಟಿ ಕೊಡುತ್ತಾರೆ? ಅಂತಾರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿಯೊಬ್ಬರು ಯಾವುದಾದರೂ ಕಮರ್ಷಿಯಲ್ ವಸ್ತುವಿನ ಪ್ರಚಾರಕ್ಕೆ ಅಷ್ಟು ಪಡೆಯಬಹುದೇನೊ! ಅದಲ್ಲದೆ, ಪಾಕಿಸ್ತಾನ, ಸಿರಿಯಾದಿಂದ ದೇಣಿಗೆ ಪಡೆದಿದ್ದೇನೆ ಎಂಬ ಆರೋಪವೂ ಬಂತು” ಎಂದಿದ್ದಾರೆ.

ಇದನ್ನೂ ಓದಿರಿ: ಜುಬೇರ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌; ನ್ಯಾಯಾಲಯದಲ್ಲಿ ಏನಾಯಿತು? | ಸಂಕ್ಷಿಪ್ತ ವಿವರಣೆ

ಪೊಲೀಸ್ ವಿಚಾರಣೆಯ ಕುರಿತು ಮಾತನಾಡಿರುವ ಅವರು, “ಟ್ವೀಟ್‌ ಕಾರಣಕ್ಕೆ ನನ್ನ ಮೇಲೆ ಎಫ್‌ಐಆರ್ ಹಾಕಲಾಯಿತಾದರೂ ವಿಚಾರಣೆಯಲ್ಲಿ ಕೇಳಿದ್ದು ಬೇರೆಯದೇ ಪ್ರಶ್ನೆಗಳನ್ನು! ಹತ್ತು ಪರ್ಸೆಂಟ್‌ನಷ್ಟು ನನ್ನ ಟ್ವೀಟ್‌ಗಳ ಬಗ್ಗೆ ಕೇಳಲಿಲ್ಲ. ಹೆಚ್ಚು ಆಸಕ್ತಿ ಇದ್ದಿದ್ದು ಅಲ್ಟ್‌ ನ್ಯೂಸ್, ಅದಕ್ಕಿರುವ ಆರ್ಥಿಕ ಬೆಂಬಲ, ಹೇಗೆ ಶುರುವಾಯಿತು, ಪ್ರತೀಕ್ ಹೇಗೆ ಪರಿಚಯವಾದರು, ಪ್ರತೀಕ್‌ ತಂದೆಯ ಬಗ್ಗೆ ಮೊದಲಾಗಿ ಹೆಚ್ಚು ಪ್ರಶ್ನೆಗಳನ್ನು ಕೇಳಿದರು. ಮಾಧ್ಯಮಗಳಲ್ಲಿ ಟ್ವೀಟ್‌ ಕಾರಣಕ್ಕೆ ಎಂದು ಸುದ್ದಿಯಾಗುತ್ತಿದ್ದರೆ, ವಿಚಾರಣೆಯಲ್ಲಿ ಬೇರೆಯದೇ ಪ್ರಶ್ನೆಗಳು ನನ್ನ ಮುಂದೆ ಬರುತ್ತಿದ್ದವು. ವಿಚಾರಣೆ ಮಾಡುತ್ತಿದ್ದ ಅಧಿಕಾರಿಗಳಿಗೆ ವಾಟ್ಸ್‌ ಆಪ್ ಮೂಲಕ ಪ್ರಶ್ನೆಗಳು ಬರುತ್ತಿದ್ದವು. ನಾನು ಗಮನಿಸಿದ್ದೇನೆ. ಲಿಂಕ್‌ಗಳು ಬರುತ್ತಿದ್ದವು. ಒಪಿಇಂಡಿಯಾ ರೀತಿಯ ಲಿಂಕ್‌ಗಳು. ಅವುಗಳನ್ನು ಓಪನ್ ಮಾಡಿ, ನನ್ನನ್ನು ಪ್ರಶ್ನಿಸುತ್ತಿದ್ದರು” ಎಂದಿದ್ದಾರೆ.

ತಮ್ಮ ಜೀವನದ ಕುರಿತು ವಿಸ್ತೃತವಾಗಿ ‘ಈ ದಿನ.ಕಾಂ’ ಜೊತೆ ಜುಬೇ‌ರ್‌ ಮಾತನಾಡಿದ್ದಾರೆ. ತಮ್ಮ ಪತ್ರಿಕೋದ್ಯಮದ ಜೀವನದ ಸ್ವಾರಸ್ಯಕರ ಸಂಗತಿಗಳನ್ನು ಅವರು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಕನ್ನಡ ಮಾಧ್ಯಮವೊಂದಕ್ಕೆ ನೀಡಿದ ಮೊದಲ ಸಂದರ್ಶನವೂ ಇದಾಗಿದೆ. (ಸಂದರ್ಶನದ ಪೂರ್ಣ ಪಠ್ಯ ‘ಇಲ್ಲಿ’ ನೋಡಿ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿನ್ನಂಥ ದೇಶ ದ್ರೋಹಿಯ ಮರಣ ಶಾಸನ ಬರೆಯುವ ಕೆಲಸವನ್ನು ಅವರೇ ಮಾಡಬಹುದೇ !

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...