Homeಕರ್ನಾಟಕಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯರ ಕೆಲಸವನ್ನು ಮಾಧ್ಯಮಗಳೇ ಮಾಡುತ್ತಿವೆ: ಜುಬೇರ್‌

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯರ ಕೆಲಸವನ್ನು ಮಾಧ್ಯಮಗಳೇ ಮಾಡುತ್ತಿವೆ: ಜುಬೇರ್‌

‘ಈದಿನ.ಕಾಂ’ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಟ್ವೀಟ್‌ ಕಾರಣಕ್ಕೆ ನನ್ನ ಮೇಲೆ ಎಫ್‌ಐಆರ್ ಹಾಕಲಾಯಿತಾದರೂ ವಿಚಾರಣೆಯಲ್ಲಿ ಕೇಳಿದ್ದು ಬೇರೆಯದೇ ಪ್ರಶ್ನೆಗಳನ್ನು” ಎಂದಿದ್ದಾರೆ.

- Advertisement -
- Advertisement -

“ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥರಾದ ಅಮಿತ್ ಮಾಳವೀಯ ಅವರ ಕೆಲಸವನ್ನು ಸುದ್ದಿವಾಹಿನಿಗಳೇ ಮಾಡುತ್ತಿವೆ” ಎಂದು ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ, ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್‌ ತಿಳಿಸಿದ್ದಾರೆ.

ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಪಡೆದು ಹೊರಗೆ ಬಂದಿರುವ ಅವರು, ಕನ್ನಡದ ಸುದ್ದಿ ಜಾಲತಾಣ ‘ಈ ದಿನ’ಕ್ಕೆ ವಿಶೇಷ ಸಂದರ್ಶನ ನೀಡಿದ್ದು, ಮುಖ್ಯವಾಹಿನಿ ಮಾಧ್ಯಮಗಳ ವರ್ತನೆಗಳನ್ನು ವಿಶ್ಲೇಷಿಸಿದ್ದಾರೆ.

ಪತ್ರಕರ್ತ ಎಸ್.ಕುಮಾರ್‌ ಅವರು ನಡೆಸಿರುವ ಸಂದರ್ಶನದಲ್ಲಿ, “ದ್ವೇಷವನ್ನು ಬಯಲು ಮಾಡುವವರನ್ನು ಬೇಟೆಯಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ, ಬಾಬಿ ಘೋಷ್‌ ಹೇಟ್‌ ಟ್ರ್ಯಾಕ್‌ ಮಾಡಿದ್ದಕ್ಕೆ ಕೆಲಸ ಕಳೆದುಕೊಂಡರು, ಹಿಂದುಸ್ತಾನ್ ಟೈಮ್ಸ್ ಅವರನ್ನು ಕೆಲಸದಿಂದ ತೆಗೆದು ಹಾಕಿತು. ನಿಮ್ಮಂತಹ ಫ್ಯಾಕ್ಟ್‌ಚೆಕರ್‌‌ಗಳು ಕೂಡ ವಿನಾ ಕಾರಣ ವಿವಿಧ ರೀತಿಯ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಹೊತ್ತಲ್ಲಿ ಮಾಧ್ಯಮಗಳು ಹೇಗಿರಬೇಕು? ಈ ವಿದ್ಯಮಾನವನ್ನು ಹೇಗೆ ನೋಡ್ತೀರಿ?” ಎಂದು ಕೇಳಿರುವ ಪ್ರಶ್ನೆಗೆ ಜುಬೇರ್‌ ಪ್ರತಿಕ್ರಿಯೆ ನೀಡಿ ಮಾಧ್ಯಮಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಾವು ಇಂದು ನೋಡುತ್ತಿರುವ ದ್ವೇಷದ ವಾತಾವರಣಕ್ಕೆ ಟಿವಿ ಚಾನೆಲ್‌ಗಳೇ ಕಾರಣ. 2014ರ ನಂತರವೂ ಎರಡು ಮೂರು ವರ್ಷ ಕಾಲ ಬಿಜೆಪಿ ಐಟಿ ಸೆಲ್ ಕ್ಯಾಂಪೇನ್‌ಗಳನ್ನು ಮಾಡುತ್ತಿತ್ತು. ಆಗ ಮಾಧ್ಯಮ ವಿರೋಧಿಸದೇ, ಸುಮ್ಮನಿದ್ದು ಬಿಡುತ್ತಿತ್ತು. ಯಾವುದೇ ಪ್ರೊಪಗಾಂಡ ಪ್ರಚಾರಕ್ಕೆ ಅಮಿತ್ ಮಾಳವೀಯಾ ಮತ್ತವರ ತಂಡ ಕೆಲಸ ಮಾಡುತ್ತಿತ್ತು. ಹ್ಯಾ‌ಷ್‌ಟ್ಯಾಗ್‌, ಮೋದಿ ಹೊಗಳಿಕೆ ಇತ್ಯಾದಿ ನಡೆಸುತ್ತಿದ್ದರು. ಗಮನಿಸಬೇಕಾದ ಸಂಗತಿಯೆಂದರೆ, ಕಳೆದ ಎರಡು ವರ್ಷಗಳಿಂದ ಅವರು ಈ ರೀತಿಯ ಕ್ಯಾಂಪೇನ್ ನಡೆಸುತ್ತಿಲ್ಲ. ಈಗ ಈ ಕೆಲಸವನ್ನು ಸುದ್ದಿವಾಹಿನಿಗಳಿಗೆ ಮತ್ತು ಅದರ ಆಂಕರ್‌ಗಳಿಗೆ ನೀಡಲಾಗಿದೆ” ಎಂದಿದ್ದಾರೆ.

“ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸ್ವತಃ ತಾವೇ ಟ್ವಿಟ್ ಮಾಡುವುದಿಲ್ಲ ಬದಲಿಗೆ ಸುದ್ದಿವಾಹಿನಿಯೊಂದರ ಅಂಕರ್‌ಗಳು ಮಾಡಿದ ಟ್ವೀಟನ್ನು ರೀಟ್ವೀಟ್‌ ಮಾಡುತ್ತಾರೆ. ಸುಧೀಶ್‌ ಚೌಧರಿ, ಚಿತ್ರಾ ಹೀಗೆ ಹಲವರಿದ್ದಾರೆ, ಮೊದಲು ಸುದ್ದಿಯಾಗುತ್ತದೆ. ಆಮೇಲೆ ಬಿಜೆಪಿ ಐಟಿ ಸೆಲ್‌ ನಿಂದ ವೈರಲ್ ಆಗುತ್ತದೆ. ಬಿಜೆಪಿ ಐಟಿ ಸೆಲ್ ಮಾಡುತ್ತಿದ್ದ ಕೆಲಸವನ್ನು ಈಗ ಮುಖ್ಯವಾಹಿನಿ ಸುದ್ದಿ ವಾಹಿನಿಗಳು ಮಾಡಲಾರಂಭಿಸಿವೆ. ಹಾಗಾಗಿ ಜನ ನಂಬುತ್ತಿದ್ದಾರೆ” ಎಂದು ವಿಷಾದಿಸಿದ್ದಾರೆ.

“ನಮ್ಮ ಕೆಲಸ ಸತ್ಯವನ್ನು ಹೇಳುವುದು. 90% ಸರಿ ಇದ್ದರೂ, ಶೇ. 10 ತಪ್ಪು ಏನು ಎಂಬುದನ್ನು ಬಯಲು ಮಾಡುವುದು. ಆದರೆ ಪ್ರಸ್ತುತ ಪ್ರತಿಯೊಂದನ್ನು ಸಂಪೂರ್ಣವಾಗಿ ಮರೆಮಾಚಲಾಗುತ್ತಿದೆ. ಸುದ್ದಿ ವಾಹಿನಿಗಳು ರಾಜಿಯಾಗಿವೆ. ಬಹುಶಃ, ಇಡಿ, ಐಟಿಗೆ ಹೆದರಿರಬಹುದು. ಕೆಲವರು ಸೈದ್ಧಾಂತಿಕವಾಗಿ ಅವರ ಜೊತೆಗೆ ಇರುವ ಕಾರಣಕ್ಕೂ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

“2 ಕೋಟಿ ರೂ.ಗೆ ಟ್ವೀಟ್‌ ಮಾಡಿ ದೇಣಿಗೆಯನ್ನು ಸ್ವಂತ ಖಾತೆಗೆ ಪಡೆದುಕೊಂಡಿದ್ದಾರೆ” ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ನನಗೆ 2 ರೂ. ಕೋಟಿ ವಿಚಾರ ಗೊತ್ತೇ ಇರಲಿಲ್ಲ. ಬಿಡುಗಡೆಯಾಗಿ ಹೊರಬರುತ್ತಿರುವಾಗ ಪೊಲೀಸ್ ಅಧಿಕಾರಿಯೊಬ್ಬರು ತಮಾಷೆ ಮಾಡುತ್ತಾ, ‘ಇನ್ನು ಮೇಲೆ 2 ಕೋಟಿ ರೂ. ಸಂಪಾದಿಸುತ್ತೀರಿ’ ಎಂದರು. ಆಗಲೂ ಅರ್ಥವಾಗಲಿಲ್ಲ. ಉತ್ತರ ಪ್ರದೇಶ ಗರಿಮಾ ಪ್ರಸಾದ್ ಈ ಆರೋಪ ಮಾಡಿದ್ದರು. ಟ್ವೀಟ್‌ ಮಾಡುವುದಕ್ಕೆ ಯಾರು 2 ರೂ. ಕೋಟಿ ಕೊಡುತ್ತಾರೆ? ಅಂತಾರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿಯೊಬ್ಬರು ಯಾವುದಾದರೂ ಕಮರ್ಷಿಯಲ್ ವಸ್ತುವಿನ ಪ್ರಚಾರಕ್ಕೆ ಅಷ್ಟು ಪಡೆಯಬಹುದೇನೊ! ಅದಲ್ಲದೆ, ಪಾಕಿಸ್ತಾನ, ಸಿರಿಯಾದಿಂದ ದೇಣಿಗೆ ಪಡೆದಿದ್ದೇನೆ ಎಂಬ ಆರೋಪವೂ ಬಂತು” ಎಂದಿದ್ದಾರೆ.

ಇದನ್ನೂ ಓದಿರಿ: ಜುಬೇರ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌; ನ್ಯಾಯಾಲಯದಲ್ಲಿ ಏನಾಯಿತು? | ಸಂಕ್ಷಿಪ್ತ ವಿವರಣೆ

ಪೊಲೀಸ್ ವಿಚಾರಣೆಯ ಕುರಿತು ಮಾತನಾಡಿರುವ ಅವರು, “ಟ್ವೀಟ್‌ ಕಾರಣಕ್ಕೆ ನನ್ನ ಮೇಲೆ ಎಫ್‌ಐಆರ್ ಹಾಕಲಾಯಿತಾದರೂ ವಿಚಾರಣೆಯಲ್ಲಿ ಕೇಳಿದ್ದು ಬೇರೆಯದೇ ಪ್ರಶ್ನೆಗಳನ್ನು! ಹತ್ತು ಪರ್ಸೆಂಟ್‌ನಷ್ಟು ನನ್ನ ಟ್ವೀಟ್‌ಗಳ ಬಗ್ಗೆ ಕೇಳಲಿಲ್ಲ. ಹೆಚ್ಚು ಆಸಕ್ತಿ ಇದ್ದಿದ್ದು ಅಲ್ಟ್‌ ನ್ಯೂಸ್, ಅದಕ್ಕಿರುವ ಆರ್ಥಿಕ ಬೆಂಬಲ, ಹೇಗೆ ಶುರುವಾಯಿತು, ಪ್ರತೀಕ್ ಹೇಗೆ ಪರಿಚಯವಾದರು, ಪ್ರತೀಕ್‌ ತಂದೆಯ ಬಗ್ಗೆ ಮೊದಲಾಗಿ ಹೆಚ್ಚು ಪ್ರಶ್ನೆಗಳನ್ನು ಕೇಳಿದರು. ಮಾಧ್ಯಮಗಳಲ್ಲಿ ಟ್ವೀಟ್‌ ಕಾರಣಕ್ಕೆ ಎಂದು ಸುದ್ದಿಯಾಗುತ್ತಿದ್ದರೆ, ವಿಚಾರಣೆಯಲ್ಲಿ ಬೇರೆಯದೇ ಪ್ರಶ್ನೆಗಳು ನನ್ನ ಮುಂದೆ ಬರುತ್ತಿದ್ದವು. ವಿಚಾರಣೆ ಮಾಡುತ್ತಿದ್ದ ಅಧಿಕಾರಿಗಳಿಗೆ ವಾಟ್ಸ್‌ ಆಪ್ ಮೂಲಕ ಪ್ರಶ್ನೆಗಳು ಬರುತ್ತಿದ್ದವು. ನಾನು ಗಮನಿಸಿದ್ದೇನೆ. ಲಿಂಕ್‌ಗಳು ಬರುತ್ತಿದ್ದವು. ಒಪಿಇಂಡಿಯಾ ರೀತಿಯ ಲಿಂಕ್‌ಗಳು. ಅವುಗಳನ್ನು ಓಪನ್ ಮಾಡಿ, ನನ್ನನ್ನು ಪ್ರಶ್ನಿಸುತ್ತಿದ್ದರು” ಎಂದಿದ್ದಾರೆ.

ತಮ್ಮ ಜೀವನದ ಕುರಿತು ವಿಸ್ತೃತವಾಗಿ ‘ಈ ದಿನ.ಕಾಂ’ ಜೊತೆ ಜುಬೇ‌ರ್‌ ಮಾತನಾಡಿದ್ದಾರೆ. ತಮ್ಮ ಪತ್ರಿಕೋದ್ಯಮದ ಜೀವನದ ಸ್ವಾರಸ್ಯಕರ ಸಂಗತಿಗಳನ್ನು ಅವರು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಕನ್ನಡ ಮಾಧ್ಯಮವೊಂದಕ್ಕೆ ನೀಡಿದ ಮೊದಲ ಸಂದರ್ಶನವೂ ಇದಾಗಿದೆ. (ಸಂದರ್ಶನದ ಪೂರ್ಣ ಪಠ್ಯ ‘ಇಲ್ಲಿ’ ನೋಡಿ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿನ್ನಂಥ ದೇಶ ದ್ರೋಹಿಯ ಮರಣ ಶಾಸನ ಬರೆಯುವ ಕೆಲಸವನ್ನು ಅವರೇ ಮಾಡಬಹುದೇ !

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...