Homeಮುಖಪುಟಜುಬೇರ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌; ನ್ಯಾಯಾಲಯದಲ್ಲಿ ಏನಾಯಿತು? | ಸಂಕ್ಷಿಪ್ತ ವಿವರಣೆ

ಜುಬೇರ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌; ನ್ಯಾಯಾಲಯದಲ್ಲಿ ಏನಾಯಿತು? | ಸಂಕ್ಷಿಪ್ತ ವಿವರಣೆ

- Advertisement -
- Advertisement -

ಅಂತಾರಾಷ್ಟ್ರೀಯ ಖ್ಯಾತಿ ಫ್ಯಾಕ್ಟ್‌ಚೆಕ್ಕರ್‌ ಮೊಹಮ್ಮದ್ ಜುಬೇ‌ರ್‌ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಿಗೆ ಸುಪ್ರೀಕೋರ್ಟ್‌ ಬುಧವಾರ ಜಾಮೀನು ನೀಡಿದ್ದು, ಸಂಜೆ 6 ಗಂಟೆಯ ಒಳಗಡೆ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.

ಮೊಹಮ್ಮದ್ ಜುಬೇರ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತ್ತು. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಜುಲೈ 18 ರಂದು ಯುಪಿ ಪೊಲೀಸರಿಗೆ ಈ ಪ್ರಕರಣಗಳಲ್ಲಿ ಇಂದಿನ ದಿನದವರೆಗೂ ಜುಬೈರ್ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಕೇಳಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಮಯದಲ್ಲಿ ಏನಾಯಿತು?

ನ್ಯಾಯಮೂರ್ತಿ ಚಂದ್ರಚೂಡ್ ಅವರ ಪೀಠದ ಮುಂದೆ ಹಾಜರಾದ ಜುಬೇರ್ ಪರ ವಕೀಲರಾದ ವೃಂದಾ ಗ್ರೋವರ್ ಅವರು, ಅವರ ವಿರುದ್ಧ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನು ಉಲ್ಲೇಖಿಸುತ್ತಾರೆ. ಎಲ್ಲವೂ ಒಂದೇ ವಿಷಯಗಳ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳಾಗಿವೆ ಎಂದು ಅವರು ನ್ಯಾಯಾಲಯದ ಮುಂದೆ ಹೇಳುತ್ತಾರೆ.

ನ್ಯಾಯಮೂರ್ತಿ ಚಂದ್ರಚೂಡ್: ಅವರನ್ನು ದೆಹಲಿ ಎಫ್‌ಐಆರ್‌ನಲ್ಲಿ ಬಂಧಿಸಲಾಯಿತು ಮತ್ತು ಅವರಿಗೆ ಜಾಮೀನು ನೀಡಲಾಗಿದೆ. ಸೀತಾಪುರ ಎಫ್‌ಐಆರ್ ನಾವು ಜಾಮೀನು ನೀಡಿದ್ದೇವೆ. ಹತ್ರಾಸ್ ಪ್ರಕರಣದಲ್ಲಿ..

ಗ್ರೋವರ್: ಹತ್ರಾಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಂದು ಲಖಿಂಪುರ ಖೇರಿ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿ ಅರ್ಜಿ ವಿಚಾರಣೆ ನಡೆಯಲಿದೆ. ದಯವಿಟ್ಟು ಟ್ವೀಟ್‌ಗಳನ್ನು ನೋಡಿ, ಯಾವುದೇ ಪ್ರಚೋದನೆ ಇಲ್ಲ. ಸುದರ್ಶನ್ ಟಿವಿಯ ಗ್ರಾಫಿಕ್‌ನಲ್ಲಿ ಬಳಸಲಾದ ಮಸೀದಿಯ ಚಿತ್ರವು ತಪ್ಪಾದ ಮಸೀದಿ ಎಂದು ಅವರು ಫ್ಯಾಕ್ಟ್‌‌ಚೆಕ್ ಮಾಡಿ ತೋರಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಪೊಲೀಸರಿಗೆ ಟ್ಯಾಗ್ ಮಾಡುತ್ತೇನೆ.

ಗ್ರೋವರ್: ಯಾರು ನಿಜವಾಗಿಯೂ ಪ್ರಚೋದಿಸುತ್ತಿದ್ದಾರೆ? ಸುದರ್ಶನ್ ಟಿವಿ ಚಾನೆಲ್ ಹಂಚಿಕೊಂಡ ಗ್ರಾಫಿಕ್. ನಾನು ಫ್ಯಾಕ್ಟ್‌ಚೆಕ್ಕರ್‌ ಆಗಿ, ಗಾಜಾ ಬಾಂಬ್ ದಾಳಿಯ ನೈಜ ಚಿತ್ರ ಮತ್ತು ನಿಜವಾದ ಮಸೀದಿಯ ಚಿತ್ರವನ್ನು ಇರಿಸುತ್ತೇನೆ. ಇದಕ್ಕಾಗಿ, 153A, 295A ಗೆ ಎಫ್‌ಐಆರ್ ದಾಖಲಿಸಲಾಗಿದೆ. ಇದು ನನ್ನ ಧ್ವನಿಯನ್ನು ಅಡಗಿಸುವುದಕ್ಕಾಗಿ ಮಾಡಲಾಗಿದೆ. ಮೇಲ್ನೋಟಕ್ಕೆ ನಾನು ಯಾವುದೇ ಅಪರಾಧ ಮಾಡಲಾಗಿಲ್ಲ. ಎಫ್‌ಐಆರ್‌ಗಳನ್ನು ಈ ಸುದರ್ಶನ್‌ ಚಾನೆಲ್‌ ಮೂಲಕ ವರದಿಗಾರರು ದಾಖಲಿಸಿದ್ದಾರೆ.

ಗ್ರೋವರ್: ನನ್ನ ಟ್ವೀಟ್‌ಗಳಲ್ಲಿನ ಭಾಷೆ ಕೂಡ ಹದ್ದು ಮೀರುವುದಿಲ್ಲ. ನಾನು ಅವರ ವಿರುದ್ಧ ಕ್ರಮ ಕೈಗೊಳ್ಳವುದಕ್ಕೆ ಪೊಲೀಸರನ್ನು ಟ್ಯಾಗ್ ಮಾಡುತ್ತಿದ್ದೇನೆ. ಆದರೆ ಎಫ್ಐಆರ್ ಹೇಳುವುದು, ‘ನಾನು ಜಾಗತಿಕ ಮುಸ್ಲಿಮರನ್ನು ಪ್ರಚೋದಿಸಿದ್ದೇನೆ ಎಂದು. ನಾಗರಿಕ ಎಂಬ ನೆಲೆಯಲ್ಲಿ ನಾನು ಪೊಲೀಸರನ್ನು ಟ್ಯಾಗ್ ಮಾಡುತ್ತಿದ್ದೆ.

ಇದನ್ನೂ ಓದಿ: ‘ಯಾರಿಗೂ ಹೇಳಬೇಡಿ’: ಖ್ಯಾತ ಪತ್ರಕರ್ತ ಮೊಹಮ್ಮದ್‌ ಜುಬೇರ್‌ ಬಂಧನಕ್ಕೆ ಕಾರಣ!

ಗ್ರೋವರ್: ಎಲ್ಲಾ ಎಫ್‌ಐಆರ್‌ಗಳ ವಿಷಯ ಒಂದೇ ಆಗಿದೆ. ನನಗೆ ಕಿರುಕುಳ ನೀಡಲು ಬೇಕಾಗಿ ಕ್ರಿಮಿನಲ್ ಕಾನೂನನ್ನು ಸಾಧನವಾಗಿ ಬಳಸುತ್ತಿರುವುದನ್ನು ತಡೆಯಲು ನಾನು ಪರಿಚ್ಛೇದ 32 ರ ಅಡಿಯಲ್ಲಿ ರಕ್ಷಣೆ ಕೋರುತ್ತಿದ್ದೇನೆ.

ಗ್ರೋವರ್: ಅವರು ಈಗ ಎಸ್‌ಐಟಿ ರಚಿಸಿದ್ದಾರೆ. ಸೀತಾಪುರ ಪ್ರಕರಣದಲ್ಲಿ ನ್ಯಾಯಾಲಯವು ನನಗೆ ರಕ್ಷಣೆ ನೀಡಿದ ನಂತರ ಜುಲೈ 10 ರಂದು ಅದು ರಚನೆಯಾಗಿದೆ. ಅಲ್ಲದೆ ಈಗಾಗಲೆ ನನ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಾನು ದೆಹಲಿ ಪೊಲೀಸ್ ವಿಶೇಷ ಸೆಲ್‌ನ ತನಿಖೆಯಲ್ಲಿದ್ದಾಗ ಈ ಎಸ್‌ಐಟಿಯನ್ನು ರಚಿಸಲಾಗಿದೆ.

ಗ್ರೋವರ್: ಅವರು 153A, 295A ಇತ್ಯಾದಿಗಳ ಅಡಿಯಲ್ಲಿ ಅಪರಾಧಕ್ಕಾಗಿ 14 ದಿನಗಳ ಪೊಲೀಸ್ ಕಸ್ಟಡಿಗೆ ಕೋರುತ್ತಿದ್ದಾರೆ, ಈ ಯಾವುದೇ ಅಪರಾಧಗಳು 3 ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಾಗುವುದಿಲ್ಲ. ನನ್ನ ಟ್ವೀಟ್‌ಗಳೊಂದಿಗೆ ಸಂಪರ್ಕವಿಲ್ಲದ ನನ್ನ ಸಾಧನಗಳು ಅವರ ವಶದಲ್ಲಿವೆ. ಅವರು ಅಹಮದಾಬಾದ್‌ನ ಆಲ್ಟ್‌ನ್ಯೂಸ್ ಕಚೇರಿಯಿಂದ Apple Imac ಅನ್ನು ವಶಕ್ಕೆ ಪಡೆಯಬೇಕು ಎಂದು ಹೇಳುತ್ತಾರೆ. ಪ್ರಕರಣದ ವ್ಯಾಪ್ತಿಯನ್ನು ವಿಸ್ತರಿಸಿದ ರೀತಿಯನ್ನು ನೋಡಿ.

ಗ್ರೋವರ್: ನಮಗೆ ಬರುವ ಫಂಡ್‌‌ ವಿಚಾರದಲ್ಲಿ ದೆಹಲಿ ಪೊಲೀಸರ ಎಫ್‌ಐಆರ್‌ನ ಪರಿಶೀಲನೆಯಲ್ಲಿದೆ. ನನಗೆ ಜಾಮೀನು ಸಿಕ್ಕಿದೆ. AltNews ಗಾಗಿ ಕೇವಲ ದೇಶದ ಒಳಗಡೆ ಮಾತ್ರ ಪಾವತಿಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು Razorpay CEO ಹೇಳಿಕೆ ನೀಡಿದ್ದಾರೆ.

ಗ್ರೋವರ್: ಇದು ಯಾವ ರೀತಿಯ ಪೊಲೀಸ್ ರಿಮಾಂಡ್ ಅರ್ಜಿ? ಅವರು ನನ್ನನ್ನು ಕಸ್ಟಡಿಗೆ ತೆಗೆದುಕೊಳ್ಳುತ್ತಾರೆ. ಎಲ್ಲಾ ಸಾಧನಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲು ಅವರು 2014 ರಿಂದ ಟ್ವೀಟ್‌ಗಳನ್ನು ತನಿಖೆ ಮಾಡಲು ಬಯಸುವ ಸ್ಥಳಕ್ಕೆ ನನ್ನನ್ನು ಕರೆದೊಯ್ಯುತ್ತಾರೆ. ಇದು ತನಿಖಾ ಅಧಿಕಾರದ ಶಾಸನಬದ್ಧ ದುರುಪಯೋಗವಲ್ಲವೇ?

ಇದನ್ನೂ ಓದಿ: ಜುಬೇರ್‌ ಬಂಧನ: ಬರವಣಿಗೆ, ಟ್ವೀಟ್ ಆಧಾರದಲ್ಲಿ ಪತ್ರಕರ್ತರನ್ನು ಜೈಲಿಗೆ ಹಾಕಬಾರದು- ವಿಶ್ವಸಂಸ್ಥೆ

ಗ್ರೋವರ್: ಜುಬೇರ್‌ ಅವರ ವಿರುದ್ಧ ನೇರ ಬೆದರಿಕೆಗಳಿವೆ. ಅವರ ತಲೆಗೆ ಇನಾಮು ಘೋಷಿಸಲಾಗಿದೆ. ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದ್ದು, ಅಲ್ಲಿಂದಿಲಿಗೆ- ಇಲ್ಲಿಂದಲ್ಲಿಗೆ ಕರೆದೊಯ್ಯಲಾಗುತ್ತದೆ.

ಗ್ರೋವರ್: ಇದು ವ್ಯವಸ್ಥಿತ ತನಿಖೆ ಎಂದು ನಾನು ಏಕೆ ಹೇಳುತ್ತಿದ್ದೇನೆಂದರೆ ವಿವಿಧ ಪ್ರಕರಣಗಳ ತನಿಖೆಗಾಗಿ 14 ದಿನಗಳ ಕಸ್ಟಡಿಗೆ ಕೋರಲಾಗಿದೆ. ಮೂರು ಪೊಲೀಸ್ ಠಾಣೆಗಳಿಂದ ನಮ್ಮ ಸಂಪೂರ್ಣ ದಾಖಲೆಗಳು, ಖಾತೆಗಳನ್ನು ಕೇಳಿ ಆಲ್ಟ್‌ನ್ಯೂಸ್‌ಗೆ 91 ನೋಟಿಸ್‌ಗಳನ್ನು ನೀಡಲಾಗಿದೆ. ಇನ್ನು ತನಿಖೆಯ ವ್ಯಾಪ್ತಿ ಒಂದೇ ಆಗಿಲ್ಲ.

ಗ್ರೋವರ್: ನಾನು ಇದನ್ನು ಎದುರಿಸಲು ಹೋದರೆ, ನಾನು ಬದುಕುಳಿಯುವುದಿಲ್ಲ. ನನ್ನ ಬಳಿ ಸಂಪನ್ಮೂಲಗಳಿಲ್ಲ. ಈ ಪ್ರಕರಣಗಳಲ್ಲಿ ಪ್ರತಿನಿಧಿಸಲು ವಕೀಲರನ್ನು ನೇಮಿಸಲೇ ನನಗೆ ಹೆಚ್ಚು ಕಷ್ಟಕರವಾಗುತ್ತಿದೆ. ನಾನು ಇದನ್ನು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತೇನೆ.

ಈ ಮಧ್ಯೆ ವಕೀಲೆ ಗ್ರೋವರ್ ಅವರು ಜಗಿಶಾ ಅರೋರಾ ಮತ್ತು ಮೋನಿಕಾ ಅಗರ್ವಾಲ್ ಪ್ರಕರಣಗಳನ್ನು ಉಲ್ಲೇಖಿಸುತ್ತಾ, ಅಲ್ಲಿ ಆರ್ಟಿಕಲ್ 142 ರ ಅಡಿಯಲ್ಲಿ ಪರಿಹಾರವನ್ನು ನೀಡಲಾಗಿದೆ. ಈ ಪ್ರಕರಣದಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆನ್‌ಲೈನ್ ಕಮೆಂಟ್‌ ಮಾಡಿದ್ದಕ್ಕಾಗಿ ಪತ್ರಕರ್ತನನ್ನು ಯುಪಿ ಪೊಲೀಸರು ಬಂಧಿಸಿದ್ದರು.

ಗ್ರೋವರ್ ಅವರು ಭಜನ್ ಲಾಲ್ ಪ್ರಕರಣವನ್ನು ಉಲ್ಲೇಖಿಸುತ್ತಾ, ಕ್ರಿಮಿನಲ್ ಮೊಕದ್ದಮೆಗಳು ದುರುದ್ದೇಶಪೂರಿತವಾಗಿದ್ದರೆ ಅಥವಾ ಸೇಡು ತೀರಿಸಿಕೊಳ್ಳಲು ದಾಖಲಿಸಿದ್ದರೆ ಅವುಗಳನ್ನು ರದ್ದುಗೊಳಿಸಬಹುದು ಎಂದು ನೆನಪಿಸುತ್ತಾರೆ.

ಇದನ್ನೂ ಓದಿ: ತೀಸ್ತಾ, ಜುಬೇರ್‌‌ ಬಂಧನ ಆತಂಕಕಾರಿ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಮಾರಿಯಾ ಪ್ರತಿಕ್ರಿಯೆ

ನ್ಯಾಯಮೂರ್ತಿ ಚಂದ್ರಚೂಡ್: ಗ್ರೋವರ್, ದೆಹಲಿ ಎಫ್‌ಐಆರ್‌ ವಿರುದ್ಧ ನೀವು ನಮ್ಮ ಮುಂದೆ ಬಂದಿಲ್ಲ. ದೆಹಲಿ ಪ್ರಕರಣ ಮತ್ತು ಇತರ ಪ್ರಕರಣಗಳ ನಡುವೆ ಸಾಕಷ್ಟು ಅತಿಕ್ರಮಣವಿದೆ ಎಂದು ಒಪ್ಪಿಕೊಳ್ಳಬಹುದು. ಒಮ್ಮೆ ನೀವು ದೆಹಲಿ ಪೊಲೀಸರ ಎಫ್‌ಐಆರ್ ರದ್ದುಪಡಿಸಲು ನಮ್ಮ ಬಂದಿಲ್ಲದೆ ಇದ್ದರೆ, ನಾವು ಇದಕ್ಕೆ ಸೂಕ್ಷ್ಮವಾದ ವಿಧಾನವನ್ನು ಒಪ್ಪಿಕೊಳ್ಳಬೇಕಾಗಬಹುದು.

ಯುಪಿಯ ಎಲ್ಲಾ ಪ್ರಕರಣಗಳಲ್ಲಿ ದೆಹಲಿ ಎಫ್‌ಐಆರ್ ಮತ್ತು ಮಧ್ಯಂತರ ಜಾಮೀನಿಗೆ ತಾನು ಸೇರಿಸಲು ಬಯಸುತ್ತಿದ್ದೇನೆ ಎಂದು ವಕೀಲೆ ಗ್ರೋವರ್ ಹೇಳುತ್ತಾರೆ.

ಗ್ರೋವರ್ ಅವರು ಅರ್ನಾಬ್ ಗೋಸ್ವಾಮಿ ತೀರ್ಪನ್ನು ಉಲ್ಲೇಖಿಸುತ್ತಾರೆ.

ಗ್ರೋವರ್(ಜುಬೇರ್‌ ಪರವಾಗಿ): ನಾನು ಯಾವುದೇ ಪ್ರಕರಣದಲ್ಲಿ ಜಾಮೀನು ಪಡೆಯುವ ಕ್ಷಣದಲ್ಲಿ, ಈ ಹಿಮದೆ ನಿಷ್ಕ್ರಿಯಗೊಂಡಿದ್ದ ಎಫ್‌ಐಆರ್‌ಗಳು ಸಕ್ರಿಯಗೊಳ್ಳುತ್ತವೆ. ನಿಷ್ಕ್ರಿಯ ಎಫ್‌ಐಆರ್ ಇದ್ದಕ್ಕಿದ್ದಂತೆ ಸಕ್ರಿಯಗೊಳ್ಳುತ್ತದೆ. ಅದಕ್ಕಾಗಿಯೇ ನಾನು ಇದರಲ್ಲಿ ಷಡ್ಯಂತ್ರ ಇದೆ ಎಂದು ಹೇಳುತ್ತೇನೆ. ನನ್ನನ್ನು ಸುತ್ತುವರಿಯುವ ಸನ್ನಿವೇಶವಿದೆ.

ಗ್ರೋವರ್: ಡಿಜಿಟಲ್ ಯುಗದ ಈ ಕಾಲದಲ್ಲಿ, ಸುಳ್ಳು ಮಾಹಿತಿಯನ್ನು ಬಹಿರಂಗಪಡಿಸುವವರ ಕೆಲಸವು ಇತರರ ವಿರೋಧಕ್ಕೆ ಕಾರಣವಾಗಬಹುದು. ಆದರೆ ಅದಕ್ಕಾಗಿ ಅವರ ವಿರುದ್ಧ ಕಾನೂನನ್ನು ಆಯುಧವನ್ನಾಗಿ ಮಾಡುವುದು ಸರಿಯಲ್ಲ.

ಇದನ್ನೂ ಓದಿ: ಜುಬೇರ್‌‌‌ ಬಂಧನ: ಕೋರ್ಟ್‌ ತೀರ್ಪು ಪ್ರಕಟಿಸುವ ಮೊದಲೇ ‘ಆದೇಶ’ ಸೋರಿಕೆ ಮಾಡಿದ ದೆಹಲಿ ಪೊಲೀಸ್!

ಉತ್ತರ ಪ್ರದೇಶದ ಪರವಾಗಿ ಸಹಾಯಕ ಅಡ್ವೊಕೇಟ್ ಜನರಲ್‌(ಎಎಜಿ)ಗರಿಮಾ ಪ್ರಸಾದ್ ಅವರು ಹಾಜರಾಗುತ್ತಾರೆ.

ಗರಿಮಾ: ಆರೋಪಿಯನ್ನು ಪತ್ರಕರ್ತ ಎಂದು ಪದೇ ಪದೇ ಹೇಳಲಾಗುತ್ತದೆ. ಆದರೆ ಅವರು ಪತ್ರಕರ್ತ ಅಲ್ಲ. ಅವನು ತನ್ನನ್ನು ತಾನು ಫ್ಯಾಕ್ಟ್‌ಚೆಕ್ಕರ್‌ ಎಂದು ಕರೆದುಕೊಳ್ಳುತ್ತಾರೆ. ಫ್ಯಾಕ್ಟ್‌ಚೆಕಿಂಗ್‌ ನೆಪದಲ್ಲಿ ದುರುದ್ದೇಶಪೂರಿತ ಹಾಗೂ ಪ್ರಚೋದನಕಾರಿ ವಿಷಯವನ್ನು ಪ್ರಚಾರ ಮಾಡುತ್ತಿದ್ದಾರೆ.

ಗರಿಮಾ: ಅಷ್ಟೆ ಅಲ್ಲದೆ ಅವರು ತಮ್ಮ ಟ್ವೀಟ್‌ಗಳಿಗೆ ಹಣ ಪಡೆಯುತ್ತಾರೆ. ಹೆಚ್ಚು ದುರುದ್ದೇಶಪೂರಿತ ಟ್ವೀಟ್‌ಗಳು ಇದ್ದಂತೆ ಅವರು ಹೆಚ್ಚೆಚ್ಚು ಹಣವನ್ನು ಪಡೆಯುತ್ತಾರೆ. 2 ಕೋಟಿಗೂ ಅಧಿಕ ಹಣ ಪಡೆದಿದ್ದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಅವರು ಜರ್ನಲಿಸ್ಟ್ ಅಲ್ಲ.

ಗರಿಮಾ: ಅವರು ಪೊಲೀಸರಿಗೆ ಕಾನೂನುಬಾಹಿರ ಭಾಷಣ ಅಥವಾ ದ್ವೇಷದ ಬಗ್ಗೆ ತಿಳಿಸುವ ಬದಲು ಕೋಮು ವಿಭಜನೆಯನ್ನು ಉಂಟುಮಾಡುವ ಸಾಮರ್ಥ್ಯವಿರುವ ಭಾಷಣಗಳು ಮತ್ತು ವೀಡಿಯೊಗಳ ಲಾಭವನ್ನು ಪಡೆದುಕೊಳ್ಳುತ್ತಾರೆ. ಅದನ್ನು ಅವರು ಪದೇ ಪದೇ ಹಂಚಿಕೊಳ್ಳುತ್ತಾರೆ. ಅವರು ಟ್ವೀಟ್ ಮಾಡಿದ ನಂತರವೇ ಹಿಂಸಾಚಾರ ನಡೆದಿದೆ.

ಗರಿಮಾ ಅವರು ಗಾಜಿಯಾಬಾದ್-ಲೋನಿ ಘಟನೆಯ ಟ್ವೀಟ್‌ಗಳನ್ನು ಉಲ್ಲೇಖಿಸುತ್ತಾರೆ.

ಗರಿಮಾ: ಇದು ಕೆಲವರಿಂದ ಥಳಿಸಲ್ಪಟ್ಟ ವೃದ್ಧರೊಬ್ಬರ ವಿಡಿಯೋ. ಆದರೆ ಏನು ವರದಿಯಾಗಿದೆ ಎಂಬುವುದನ್ನು ನೀವೇ ಓದಿ? ನಾನು ಅದನ್ನು ಓದಲು ಬಯಸುವುದಿಲ್ಲ. ಅವರು ಈ ವಿಡಿಯೊದ ಲಾಭವನ್ನು ಪಡೆಡು, ಅದನ್ನು ತನ್ನ ಲಕ್ಷಗಟ್ಟಲೆ ಅನುಯಾಯಿಗಳಿಗೆ ಟ್ವೀಟ್ ಮಾಡಿ, ಹಿಂಸೆಯನ್ನು ಪ್ರಚೋದಿಸುವ ವಾಕ್ಯಗಳನ್ನು ಹಾಕುತ್ತಾನೆ.

ಇದನ್ನೂ ಓದಿ: ಜುಬೇರ್‌ ಪ್ರಕರಣ: ಜಾಮೀನು ನೀಡಲು ನ್ಯಾಯಾಧೀಶರು ಹೆದರುತ್ತಿದ್ದಾರೆ- ಜಸ್ಟೀಸ್‌ ದೀಪಕ್‌ ಗುಪ್ತಾ

ನ್ಯಾಯಮೂರ್ತಿ ಚಂದ್ರಚೂಡ್: ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅವರು ಸೆಕ್ಷನ್ 35 ಎಫ್‌ಸಿಆರ್‌ಎಯನ್ನು ಸಹ ಅನ್ವಯಿಸಿದ್ದಾರೆ. ದೆಹಲಿಯ ಸೆಷನ್ಸ್ ನ್ಯಾಯಾಧೀಶರು ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಚಂಡೋಲಿ, ಮುಝಾಫರ್‌ನಗರ, ಹತ್ರಾಸ್‌ನಲ್ಲಿ ತನಿಖೆಗಳು ನಡೆಯಬೇಕೆಂದು ನೀವು ಬಯಸುತ್ತೀರಾ… ಮತ್ತು ದೆಹಲಿಯ ತನಿಖೆ ಮೊದಲ ಹಂತದಲ್ಲಿ ನಡೆದಿದೆ.

ಗರಿಮಾ: ದೆಹಲಿ ಮೊದಲಲ್ಲ. ವಾಸ್ತವವಾಗಿ, ಅವರು ತಮ್ಮ ದ್ವೇಷದ ವಿಚಾರದಲ್ಲಿ ಎಷ್ಟು ಸಕ್ರಿಯರಾಗಿದ್ದಾರೆಂದರೆ, ಅವರು 10 ವರ್ಷದ ಹುಡುಗಿಯನ್ನು ಸಹ ಬಿಡಲಿಲ್ಲ, POCSO ಕೇಸ್ ಇದೆ. ಸೀತಾಪುರ ಪ್ರಕರಣವನ್ನು ನೋಡಿ. ಭಜರಂಗ ಮುನಿಯ ಒಂದು ಭಾಷಣವಿತ್ತು, ಅಲ್ಲಿ ಅವರು ಬಹಳಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ. ಏಪ್ರಿಲ್ 2 ರಂದು ಅವರು ಆಕ್ಷೇಪಾರ್ಹ ಭಾಷಣಗಳನ್ನು ಮಾಡುತ್ತಾರೆ. ಯಾರೂ ದೂರು ನೀಡಲು ಮುಂದೆ ಬರುತ್ತಿಲ್ಲ. ಎಪ್ರಿಲ್ 7 ರಂದು ಅವರು ಅದ್ನು ಸೀತಾಪುರ ಪೊಲೀಸರನ್ನು ಟ್ಯಾಗ್ ಮಾಡದೆ, ವೈರಲ್ ಮಾಡುತ್ತಾರೆ.

ಗರಿಮಾ: ಭಾಷಣವು ನಿರ್ದಿಷ್ಟ ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರದ ಬಗ್ಗೆ ಇತ್ತು. ಸೀತಾಪುರ ಪ್ರದೇಶದಲ್ಲಿ ದೊಡ್ಡ ಕೋಮು ಉದ್ವಿಗ್ನತೆ ಇತ್ತು.

ಗರಿಮಾ: ಮೇ 27 ರಂದು, ಅವರು ಬಜರಂಗ ಮುನಿಯೊಂದಿಗೆ ಟಿವಿ ಸುದ್ದಿ ಚರ್ಚೆಯನ್ನು ಟ್ಯಾಗ್ ಮಾಡುತ್ತಾರೆ. ಆದರೂ ಚರ್ಚೆಗೂ ಬಾಬಾ ಬಜರಂಗ ಮುನಿಗೂ ಯಾವುದೇ ಸಂಬಂಧವಿಲ್ಲ. ಜೂನ್ 6 ರಂದು ಮಾಡಿದ್ದ ಟಿವಿ ಡಿಬೇಟ್‌ಗಳಲ್ಲಿನ ಟ್ವೀಟ್‌ಗಳ ನಂತರ ಜನರು ಪ್ರಾರ್ಥನೆ ಸಲ್ಲಿಸಿ ಹೊರಬಂದ ಕೂಡಲೇ ಈ ಟ್ವೀಟ್‌ಗಳ ಪ್ರಿಂಟ್‌ಔಟ್‌ಗಳನ್ನು ಪ್ರಸಾರ ಮಾಡಲಾಯಿತು.

ಗರಿಮಾ: ಜುಬೈರ್‌ ಅವರ ಟ್ವೀಟ್‌ಗಳನ್ನು ಪ್ರಸಾರ ಮಾಡಲಾಗಿದೆ ಎಂದು ಹಿಂಸಾಚಾರದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರು ಹೇಳಿಕೆ ನೀಡಿದ್ದಾರೆ. ಸರ್ಕಾರವು ಕೋಮು ಸೌಹಾರ್ದತೆ ಕಾಪಾಡಲು ಆದ್ಯತೆ ನೀಡಬೇಕು. ಮಧ್ಯಂತರ ಜಾಮೀನು ನೀಡುವ ಸಂದರ್ಭದಲ್ಲಿ ಅವರು ಯಾವುದೇ ಟ್ವೀಟ್‌ಗಳನ್ನು ಪೋಸ್ಟ್ ಮಾಡಬಾರದು ಎಂದು ಈ ನ್ಯಾಯಾಲಯ ಹೇಳಿದೆ. ನಮ್ಮದು ವಿವಿಧ ಸಮುದಾಯಗಳು ವಾಸಿಸುವ ಸಮಾಜವಾಗಿದ್ದು, ನಾವು ದ್ವೇಷವನ್ನು ಪ್ರಚಾರ ಮಾಡಬಾರದು. ಸರ್ಕಾರವು ಕೋಮು ಸೌಹಾರ್ದತೆಯನ್ನು ತಡೆಯಬೇಕು.

ಇದನ್ನೂ ಓದಿ: ದೆಹಲಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಖ್ಯಾತ ಫ್ಯಾಕ್ಟ್‌ಚೆಕ್ಕರ್‌‌ ಮೊಹಮ್ಮದ್ ಜುಬೇರ್‌ಗೆ ಜಾಮೀನು

ಗರಿಮಾ: ಪ್ರಕರಣಗಳ ಬಗ್ಗೆ ತನಿಖೆಗೆ ರೂಪಿಸಿರುವ ಎಸ್‌ಐಟಿಯು ಐಜಿ ಶ್ರೇಣಿಯ ಸಮರ್ಥ ಅಧಿಕಾರಿಯ ನೇತೃತ್ವದಲ್ಲಿದೆ.

ಗರಿಮಾ: ಅರ್ಜಿದಾರರ ವಿರುದ್ಧ ಯಾವುದೇ ದುಷ್ಟತನದಿಂದ ಕ್ರಮಗಳನ್ನು ತಗೆದುಕೊಂಡಿಲ್ಲ. ಕೋಮು ಉದ್ವಿಗ್ನತೆಯನ್ನು ತಡೆಯುವುದೊಂದೇ ಉದ್ದೇಶ. ಕಳೆದ ಎರಡು ವರ್ಷಗಳಲ್ಲಿ, ಅವರ ಅನುಯಾಯಿಗಳು 2.5 ಲಕ್ಷದಿಂದ ಐದು ಲಕ್ಷಗಳಿಗೆ ಏರಿದೆ.

ಊಟದ ಬ್ರೇಕ್

ಗ್ರೋವರ್(ಜುಬೇರ್‌ ಪರ): ಪೋಕ್ಸೋ ಪ್ರಕರಣದಲ್ಲಿ ಯಾವುದೇ ಕಾಗ್ನಿಜಬಲ್ ಅಪರಾಧವನ್ನು ಮಾಡಲಾಗಿಲ್ಲ ಎಂಬುವುದನ್ನು ನಾನು ನಿರೂಪಿಸಬಲ್ಲೆ.

ವಿಚಾರಣೆಯನ್ನು ಆಲಿಸಿದ ಪೀಠವೂ ಆದೇಶ ನೀಡಲು ಪ್ರಾರಂಭಿಸುತ್ತದೆ

“ಅರ್ಜಿದಾರ ಜುಬೇರ್‌ ಅವರು ಪ್ರಾವ್ಡಾ ಮೀಡಿಯಾ ಫೌಂಡೇಶನ್ ಅಡಿಯಲ್ಲಿ ತನ್ನ ಚಟುವಟಿಕೆಗಳನ್ನು ನಡೆಸುವ ಫ್ಯಾಕ್ಟ್‌ಚೆಕ್‌ ಮಾಡುವ ಪೋರ್ಟಲ್ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಆಲ್ಟ್‌‌ ನ್ಯೂಸ್‌‌ ಅನ್ನು ಫೆಬ್ರವರಿ 2017 ರಲ್ಲಿ ಪ್ರಾರಂಭಿಸಲಾಗಿದೆ. Pravda Media ಎಂಬುದು ಸೆಕ್ಷನ್ 8 ಕಂಪನಿಗಳ ಕಾಯಿದೆ

ಆದೇಶ: “ಮೂಲಭೂತವಾಗಿ, ಎಫ್‌ಐಆರ್‌ಗಳ ಗಂಭೀರತೆ ಟ್ವೀಟ್‌ಗಳಿಗೆ ಸಂಬಂಧಿಸಿದೆ. ಅರ್ಜಿದಾರರನ್ನು ದೆಹಲಿ ಪೊಲೀಸರು ಸಮಗ್ರ ತನಿಖೆಗೆ ಒಳಪಡಿಸಿದ್ದಾರೆ ಎಂಬ ಅಂಶಕ್ಕೆ ಸಂಬಂಧಿಸಿದಂತೆ, ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ತಡೆಯಲು ನಮಗೆ ಯಾವುದೇ ಕಾರಣವಿಲ್ಲ. ಬಂಧನದ ಅಧಿಕಾರದ ಅಸ್ತಿತ್ವವನ್ನು ಮಿತವಾಗಿ ಅನುಸರಿಸಬೇಕು”

ಇದನ್ನೂ ಓದಿ: ಜುಬೇರ್‌ ಪ್ರಕರಣಗಳ ‘ವಿಷ ವರ್ತುಲ’ದಲ್ಲಿ ಸಿಲುಕಿದ್ದಾರೆ: ಸುಪ್ರೀಂಕೋರ್ಟ್‌ ಹೇಳಿಕೆ

ಉತ್ತರ ಪ್ರದೇಶದಲ್ಲಿ ದಾಖಲಾದ ಎಲ್ಲಾ ಪೊಲೀಸ್ ಎಫ್‌ಐಆರ್‌ಗಳಲ್ಲಿ ಮೊಹಮ್ಮದ್ ಜುಬೇರ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡುತ್ತದೆ.

ಆದೇಶ: “ಎಲ್ಲಾ ಪ್ರಕರಣಗಳಲ್ಲಿನ ಎಫ್‌ಐಆರ್‌ಗಳನ್ನು ಒಟ್ಟಿಗೆ ಸೇರಿಸಬೇಕು ಮತ್ತು ಅದನ್ನು ಒಂದು ತನಿಖಾ ಪ್ರಾಧಿಕಾರದಿಂದ ನಿರ್ವಹಿಸಬೇಕು. ಅರ್ಜಿದಾರರ ಮಾಡಿದ್ದ ಪರ್ಯಾಯ ಮನವಿಯನ್ನು ನಾವು ಸ್ವೀಕರಿಸಬೇಕು ಎಂದು ನಾವು ಭಾವಿಸುತ್ತೇವೆ. ಮೇಲೆ ತಿಳಿಸಲಾದ 6 ಎಫ್‌ಐಆರ್‌ಗಳು ಸೇರಿದಂತೆ ಅರ್ಜಿದಾರರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರು ತನಿಖೆಗೆ ವರ್ಗಾಯಿಸಬೇಕು”

ಮೊಹಮ್ಮದ್ ಜುಬೈರ್ ವಿರುದ್ಧದ ಎಫ್‌ಐಆರ್‌ಗಳ ತನಿಖೆಗಾಗಿ ಯುಪಿ ಪೊಲೀಸರು ರಚಿಸಿದ್ದ ಎಸ್‌ಐಟಿಯನ್ನು ವಿಸರ್ಜಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡುತ್ತದೆ.

ದೆಹಲಿ ಹೈಕೋರ್ಟ್‌ನಲ್ಲಿ ಎಫ್‌ಐಆರ್‌ಗಳನ್ನು ರದ್ದುಪಡಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ.

ಆದೇಶ: “ಎಲ್ಲಾ ಯುಪಿ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸ್ ವಿಶೇಷ ಸೆಲ್‌ಗೆ ವರ್ಗಾಯಿಸುವ ಈ ನಿರ್ದೇಶನವು ಭವಿಷ್ಯದಲ್ಲಿ ಅವರ ವಿರುದ್ಧ ದಾಖಲಾಗುವ ಎಫ್‌ಐಆರ್‌ಗಳಿಗೆ ಅನ್ವಯಿಸುತ್ತದೆ. ಅದನ್ನು ಭವಿಷ್ಯದಲ್ಲಿ ಟ್ವೀಟ್‌ಗಳ ಆಧಾರದ ಮೇಲೆ ನೋಂದಾಯಿಸಬಹುದು”

7 ಯುಪಿ ಎಫ್‌ಐಆರ್‌ಗಳನ್ನು ಉಲ್ಲೇಖಿಸಿ ಆದೇಶ: (1) ಅರ್ಜಿದಾರ ಈ ಕೆಳಗಿನ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ 20 ಸಾವಿರ ರೂ. ವೈಯಕ್ತಿಕ ಬಾಂಡ್ ಅನ್ನು ಸಲ್ಲಿಸುವ ಮೂಲಕ ಮಧ್ಯಂತರ ಜಾಮೀನನ್ನು ವಿಸ್ತರಿಸಬೇಕು.

ಆದೇಶ: (2) ಮೇಲಿನ ಎಫ್‌ಐಆರ್‌ಗಳ ತನಿಖೆಯನ್ನು ಉತ್ತರ ಪ್ರದೇಶ ಪೊಲೀಸರಿಂದ ದೆಹಲಿ ಪೊಲೀಸ್‌ನ ವಿಶೇಷ ಸೆಲ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ ಯುಪಿ ಪೊಲೀಸ್ ಡಿಜಿಪಿ ರಚಿಸಿದ ಎಸ್‌ಐಟಿ ವಿಸರ್ಜಿಸಲ್ಪಡುತ್ತದೆ.

ಆದೇಶ: (3) ಮೇಲಿನ (1) ಮತ್ತು (2) ರಲ್ಲಿ ಒಳಗೊಂಡಿರುವ ನಿರ್ದೇಶನಗಳು ಯಾವುದೇ ಇತರ ಎಫ್‌ಐಆರ್‌ಗೆ ವಿಸ್ತರಿಸಬಹುದು. ಇನ್ನು ಮುಂದೆ ಅರ್ಜಿದಾರರ ವಿರುದ್ಧ ಇದೇ ವಿಷಯದ ಬಗ್ಗೆ ದಾಖಲಾಗಬಹುದಾದ ಸಂದರ್ಭದಲ್ಲಿ, ಎಫ್‌ಐಆರ್‌ನ ತನಿಖೆಯನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗುತ್ತದೆ. ಜೊತೆಗೆ ಅವುಗಳಿಗೆ ಅವರು ಜಾಮೀನು ಪಡೆಯಲು ಅರ್ಹರಾಗಿರುತ್ತಾರೆ.

ಆದೇಶ: (4) ಅರ್ಜಿದಾರರು ದೆಹಲಿ ಹೈಕೋರ್ಟ್‌ ಮುಂದೆ ತನ್ನ ವಿರುದ್ಧ ದಾಖಲಾದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ವಿಧಿ 226/482 CrpC ಅಡಿಯಲ್ಲಿ ಪರಿಹಾರಗಳನ್ನು ಅನುಸರಿಸಲು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ.

ಇದನ್ನೂ ಓದಿ: ಒಬ್ಬ ಪತ್ರಕರ್ತನಿಗೆ ಬರೆಯಬಾರದು ಎಂದು ಹೇಳಲು ಸಾಧ್ಯವಿಲ್ಲ: ಜುಬೇರ್‌ಗೆ ಜಾಮೀನು ನೀಡುವಾಗ ಜಸ್ಟೀಸ್ ಚಂದ್ರಚೂಡ್ ಹೇಳಿಕೆ

ಆದೇಶ: ಅವರು 20 ಸಾವಿರ ಮೊತ್ತದ ಜಾಮೀನು ಬಾಂಡ್‌ಗಳನ್ನು ಸಿಎಮ್‌ಎಂ, ಪಟಿಯಾಲಾ ಹೌಸ್‌ನಲ್ಲಿ ಸಲ್ಲಿಸಬೇಕು. ಅದನ್ನು ಸಲ್ಲಿಸಿದ ತಕ್ಷಣ ತಿಹಾರ್ ಜೈಲಿನ ಅಧೀಕ್ಷಕರು ಅವರನ್ನು ಇಂದು ಸಂಜೆ 6:00 ಗಂಟೆಗೆ ಮೊದಲು ಬಿಡುಗಡೆ ಮಾಡುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು.

ಮುಜಾಫರ್‌ನಗರ ಎಫ್‌‌ಐಆರ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಸಹಾಯಕ ಅಡ್ವೊಕೇಟ್‌ ಜನರಲ್‌ ಹೇಳಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ದೆಹಲಿಯ ಪಟಿಯಾಲ ಹೌಸ್‌‌ನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ಗೆ ವರ್ಗಾಯಿಸಲು ಸುಪ್ರೀಂ ಆದೇಶಿಸಿತು.

ಉತ್ತರ ಪ್ರದೇಶ ಸರ್ಕಾರವು, ಮೊಹಮ್ಮದ್ ಜುಬೇ‌ರ್‌‌‌ ಅವರು ಟ್ವೀಟ್‌ಗಳನ್ನು ಪೋಸ್ಟ್ ಮಾಡಬಾರದು ಎಂದು ನ್ಯಾಯಾಲಯ ಈ ಹಿಂದೆ ನಿರ್ದೇಶಿಸಿತ್ತು ಎಂದು ನೆನಪಿಸುತ್ತಾರೆ.

ಇದಕ್ಕೆ ಪ್ರತಿಕ್ರಿಯಿಸಿರುದ ನ್ಯಾಯಮೂರ್ತಿ ಚಂದ್ರಚೂಡ್, “ಇದು ವಕೀಲರಿಗೆ ವಾದ ಮಾಡಬೇಡಿ ಎಂದು ಹೇಳಿದಂತಿದೆ. ಪತ್ರಕರ್ತನಿಗೆ ನೀವು ಬರೆಯಬೇಡ ಎಂದು ಹೇಳುವುದು ಹೇಗೆ? ಇದಕ್ಕೆ ಉತ್ತರ ಪ್ರದೇಶ ಸರ್ಕಾರವು, “ಅವರು ಪತ್ರಕರ್ತರಲ್ಲ” ಎಂದು ಹೇಳುತ್ತಾರೆ.

ನ್ಯಾಯಮೂರ್ತಿ ಚಂದ್ರಚೂಡ್: ಕಾನೂನಿಗೆ ವಿರುದ್ಧವಾಗಿ ಯಾವುದೇ ಟ್ವೀಟ್‌ಗಳು ಮಾಡಿದರೆ, ಅದಕ್ಕೆ ಅವರು ಜವಾಬ್ದಾರನಾಗಿರುತ್ತಾರೆ. ಆದರೆ ನಾಗರಿಕನ ವಿರುದ್ಧ ಅವರು ಮಾತನಾಡದೆ ನಾವು ನಿರೀಕ್ಷಿತ ಕ್ರಮವನ್ನು ತೆಗೆದುಕೊಳ್ಳುವುದು ಹೇಗೆ?

ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಸಹಾಯಕ ಅಡ್ವೊಕೇಟ್‌ ಜನರಲ್‌: ಸಾಕ್ಷ್ಯವನ್ನು ಹಾಳು ಮಾಡಬಾರದು ಎಂಬ ಷರತ್ತು ಇದೆ.

ನ್ಯಾಯಮೂರ್ತಿ ಚಂದ್ರಚೂಡ್: ಸಾಕ್ಷ್ಯಗಳು ಸಾರ್ವಜನಿಕ ಡೊಮೇನ್‌ನಲ್ಲಿವೆ. ಅವರು ಮತ್ತೆ ಟ್ವೀಟ್ ಮಾಡಬಾರುದು ಎಂದು ಹೇಳಲು ಸಾಧ್ಯವಿಲ್ಲ.

ಆಧಾರ: ಲೈವ್‌ ಲಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೇಶದ್ರೋಹಿಗಳ ಪರ ನಿಲ್ಲೋ ದೇಶ ದ್ರೋಹಿಗಳೇ ನಿಮ್ಮ ಆಟ ದೇಶದಲ್ಲಿ ನಡೆಯೋಲ್ಲಾ ,ದೇಶದಿಂದ ಬೇಗ ದ್ರೋಹಿಗಳೆಲ್ಲಾ ಬೇಗ ತೊಲಗಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...