Homeಮುಖಪುಟಜುಬೇರ್‌ ಪ್ರಕರಣ: ಜಾಮೀನು ನೀಡಲು ನ್ಯಾಯಾಧೀಶರು ಹೆದರುತ್ತಿದ್ದಾರೆ- ಜಸ್ಟೀಸ್‌ ದೀಪಕ್‌ ಗುಪ್ತಾ

ಜುಬೇರ್‌ ಪ್ರಕರಣ: ಜಾಮೀನು ನೀಡಲು ನ್ಯಾಯಾಧೀಶರು ಹೆದರುತ್ತಿದ್ದಾರೆ- ಜಸ್ಟೀಸ್‌ ದೀಪಕ್‌ ಗುಪ್ತಾ

- Advertisement -
- Advertisement -

ಆಲ್ಟ್‌ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್‌ ಜುಬೇರ್ ಪ್ರಕರಣದಲ್ಲಿ ಏನೋ ತಪ್ಪಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಕಾನೂನು ವಿದ್ಯಮಾನಗಳ ವರದಿಗಳನ್ನು ಮಾಡುವ ‘ಲೈವ್‌ ಲಾ’ ಜಾಲತಾಣದೊಂದಿಗೆ ಮಾತನಾಡಿರುವ ಅವರು, ಜುಬೇರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸಂಗತಿಗಳ ಕುರಿತು ಪ್ರಸ್ತಾಪ ಮಾಡಿದ್ದಾರೆ.

“ಈ ಟ್ವೀಟ್‌ ಮಾಡಿ ನಾಲ್ಕು ವರ್ಷಗಳಾಯಿತು. ಪೋಸ್ಟ್‌ ಮಾಡಲಾಗಿರುವ ಚಲನಚಿತ್ರದ ದೃಶ್ಯವನ್ನು ನಿರ್ಮಿಸಿ 40 ವರ್ಷಗಳಾಗಿದೆ. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿಲ್ಲ. ಯಾರೂ ದೂರು ನೀಡಿಲ್ಲ. ಪೊಲೀಸರು ಇದ್ದಕ್ಕಿದ್ದಂತೆ ಹೇಗೆ ಎಚ್ಚರಗೊಂಡರು?” ಎಂದು ಅವರು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಾರ್ವಜನಿಕ ಅಭಿಪ್ರಾಯಕ್ಕೆ ಭಯಬಿದ್ದು ಅನೇಕ ನ್ಯಾಯಾಧೀಶರು ಜಾಮೀನು ನೀಡಲು ಹೆದರುತ್ತಿದ್ದಾರೆ ಎಂದು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ನಮ್ಮ ಜೈಲುಗಳು ವಿಚಾರಣಾಧೀನ ಕೈದಿಗಳಿಂದ ತುಂಬಿವೆ. ಅವರಲ್ಲಿ 70-80% ಜನರು ಖುಲಾಸೆಯಾಗಿದ್ದಾರೆ. ನ್ಯಾಯಾಧೀಶರು ಮನಸ್ಥಿತಿಯನ್ನು ಬದಲಿಸಿ ದೇಶದ ನಿಯಮವನ್ನು ಅನುಸರಿಸಬೇಕು. ದೇಶದ ನಿಯಮ ಜಾಮೀನು ನೀಡುವುದಾಗಿದೆಯೇ ಹೊರತು ಜೈಲಲ್ಲ ಎಂದು ಜಸ್ಟೀಸ್‌ ದೀಪಕ್‌ ಗುಪ್ತಾ ತಿಳಿಸಿದ್ದಾರೆ.

ಜನರ ಹಕ್ಕುಗಳ ಪಾಲಕರಾಗಿ ಉನ್ನತ ನ್ಯಾಯಾಲಯಗಳು ವಿವಾದಗಳ ತೀರ್ಪುಗಾರರಾಗಿ ಉತ್ತಮ ಕೆಲಸ ಮಾಡುತ್ತಿದ್ದರೂ, ಸುಧಾರಣೆಗೆ ಅವಕಾಶವಿದೆ ಎಂದಿದ್ದಾರೆ.

ಸರಿಯಾದ ಪರೀಕ್ಷೆ ನಡೆಸದೆ ನ್ಯಾಯಾಲಯಗಳು ಜಾಮೀನು ನಿರಾಕರಿಸುವ ಆತಂಕಕಾರಿ ಪ್ರವೃತ್ತಿಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಅಭಿಪ್ರಾಯದ ಭಯದಿಂದ ಅನೇಕ ನ್ಯಾಯಾಧೀಶರು ಜಾಮೀನು ನೀಡಲು ಹೆದರುತ್ತಾರೆ. ಮ್ಯಾಜಿಸ್ಟ್ರೇಟ್‌ಗಳಿಗೆ ತರಬೇತಿ ನೀಡುವ ನ್ಯಾಯಾಂಗ ಅಕಾಡೆಮಿಗಳು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾವಿದ್ದೇವೆ ಎಂಬುದನ್ನು ಅವರ ಮನಸ್ಸಿನಲ್ಲಿ ತುಂಬಬೇಕು ಎಂದಿದ್ದಾರೆ.

“ನಾನು ‘ದುರುದ್ದೇಶಪೂರಿತ’ ಎಂದು ಹೇಳುವ ಮಟ್ಟಕ್ಕೆ ಹೋಗುವುದಿಲ್ಲ. ಕಾನೂನಿನಲ್ಲಿನ ದುರುದ್ದೇಶವು ತುಂಬಾ ವಿಭಿನ್ನವಾಗಿದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೋ ತಪ್ಪಾಗಿದೆ ಎಂದು ನಾನು ಖಂಡಿತವಾಗಿ ಭಾವಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ಧಾರ್ಮಿಕ ಸಮುದಾಯಗಳ ನಡುವೆ ದೊಡ್ಡ ಅಸಮಾಧಾನವನ್ನು ಉಂಟುಮಾಡುವ ಸಾಧ್ಯತೆಯಿರುವ ಯಾವುದೋ ವಿಷಯದ ವ್ಯಾಪ್ತಿಯಲ್ಲಿ ಈ ಟ್ವೀಟ್‌ ಬರುತ್ತದೆಯೇ? ಏನಾದರೂ ಅಪರಾಧವಾಗಬೇಕಾದರೆ, ಅದು ಧಾರ್ಮಿಕ ಭಾವನೆಗಳನ್ನು ನೋಯಿಸುವ ಪ್ರವೃತ್ತಿಯನ್ನು ಹೊಂದಿರಬೇಕು. ಈ ಟ್ವೀಟ್‌ ಮಾಡಿ ನಾಲ್ಕು ವರ್ಷಗಳ ನಂತರ ಮತ್ತು ಈ ಚಲನಚಿತ್ರವು ತಯಾರಾಗಿ 40 ವರ್ಷಗಳ ನಂತರ ವಿವಾದ ಸೃಷ್ಟಿಯಾಗಿದೆ. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿಲ್ಲ. ಯಾರೂ ಈ ಟ್ವೀಟ್‌ಗೆ ದೂರು ನೀಡಿಲ್ಲ. ಪೊಲೀಸರು ಏಕಾಏಕಿ ಎಚ್ಚೆತ್ತುಕೊಂಡು ನಮಗೆ ಅನಾಮಧೇಯ ದೂರು ಬಂದಿದೆ ಎಂದು ಹೇಗೆ ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಜಾಮೀನು ನಿರಾಕರಣೆ; ಹೊಸ ಆರೋಪಗಳನ್ನು ಸೇರಿಸಿದ ಪೊಲೀಸರು!

ಇಂದು ನೀವು ದೂರು ನೀಡಲು ಹೋದರೆ, ಬಡವರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ, ತುಂಬಾ ಗಂಭೀರವಾದ ಅಪರಾಧದಲ್ಲೂ ದೂರು ದಾಖಲಿಸುವುದು ತುಂಬಾ ಕಷ್ಟ. ಅವರು ‘ಲಿಖಿತ ದೂರು ಸಲ್ಲಿಸಿ, ಅಫಿಡವಿಟ್ ಸಲ್ಲಿಸಿ’ ಎಂದು ಹೇಳುತ್ತಾರೆ. ಈಗ ಟ್ವೀಟ್‌ ಸಂಬಂಧ ದೂರು ನೀಡಲಾಗಿದೆ ಎಂದು ಅವರು ಹೇಳುತ್ತಾರೆ. ಇದು ಕಾನೂನುಬಾಹಿರ ಎಂದು ನಾನು ಹೇಳುತ್ತಿಲ್ಲ – ಅವರು ಅದನ್ನು ಮಾಡಬಹುದು. ಆದರೆ ಸಾಮಾನ್ಯ ಪ್ರಕರಣಗಳಲ್ಲಿ ಅವರು ಹೀಗೆಯೇ ಮಾಡುತ್ತಾರೆಯೇ? ಸುಪ್ರೀಂ ಕೋರ್ಟ್‌ನಲ್ಲಿ ಮಹಿಳೆಯರು ಹೋಗಿ ಅತ್ಯಾಚಾರದ ದೂರು ನೀಡಿದರೂ ಪ್ರಕರಣ ದಾಖಲಾಗದ ಪ್ರಕರಣಗಳನ್ನು ನಾವು ಪ್ರತಿದಿನ ನೋಡುತ್ತೇವೆ. ನಾವು ಕಳೆದ ವರ್ಷ ಹತ್ರಾಸ್‌ ಪ್ರಕರಣ ಹಾಗೂ ಇತರ ಹಲವು ನಿದರ್ಶನ ಕಂಡಿದ್ದೇವೆ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...