ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಸಚಿವ ಕೆ.ಎಸ್ ಈಶ್ವರಪ್ಪ 40% ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಪೊಲೀಸರು ಕೆ.ಎಸ್ ಈಶ್ವರಪ್ಪರಿಗೆ ಕ್ಲಿನ್ ಚಿಟ್ ನೀಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ನನ್ನ ಸಾವಿಗೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪನವರೆ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಇದೀಗ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸುವ ಮಾಜಿ ಸಚಿವ ಈಶ್ವರಪ್ಪನವರು, “ನಮ್ಮ ಎಲ್ಲಾ ಹಿರಿಯರು, ನಮ್ಮ ಕಾರ್ಯಕರ್ತರು ನೋವಿನಿಂದ ಫೋನ್ ಮಾಡಿ ಮಾತನಾಡುತ್ತಿದ್ದರು. ಹೊರಬರುತ್ತೀರಿ ಎಂದು ಧೈರ್ಯ ತುಂಬುತ್ತಿದ್ದರು. ಇಡೀ ರಾಜ್ಯದ ಎಲ್ಲಾ ಸಾಧು-ಸಂತರು ನಮ್ಮ ಮನೆಗೆ ಬಂದು ಆರ್ಶಿವಾದ ಮಾಡಿ ನಿಮಗೆ ಏನೂ ತೊಂದರೆ ಆಗುವುದಿಲ್ಲ, ಇದರಿಂದ ನೀವು ಹೊರಬರುತ್ತೀರಿ ಎಂದು ಹೇಳಿದ್ದರು. ಅವರಿಗೆ ಧನ್ಯವಾದಗಳು” ಎಂದಿದ್ದಾರೆ.
#Udupi police filed B report in contractor Santosh Suicide case wherein former rural RDPR minister #Eeshwarappa was accused by Santosh in his death note of demanding bribe to release his money. It needs to be seen whether he will be reinducted in the cabinet. #Karnataka pic.twitter.com/asLV1530Wy
— Imran Khan (@KeypadGuerilla) July 20, 2022
ನನ್ನಿಂದ ನನ್ನ ಪಕ್ಷದ ಮತ್ತು ನಮ್ಮ ಸರ್ಕಾರದ, ಕೇಂದ್ರದ ನಮ್ಮ ನಾಯಕರು ಒಂದು ರೀತಿಯ ಮುಜುಗರದಲ್ಲಿದ್ದರು. ಇವತ್ತಿನ ಈ ವರದಿಯಿಂದ ಅವರು ಮುಜುಗರದಿಂದ ಮುಕ್ತರಾಗಿದ್ದಾರೆ. ಇದೇ ರೀತಿಯ ವರದಿ ಬರುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು, ಇದರಿಂದ ನನಗೆ ಸಂತಸವಾಗಿದೆ ಎಂದು ಈಶ್ವರಪ್ಪನವರು ತಿಳಿಸಿದ್ದಾರೆ.
ಸದ್ಯ ಪೊಲೀಸರು ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಿರುವುದರಿಂದ ಅವರು ಮತ್ತೆ ಸಚಿವ ಸಂಪುಟಕ್ಕೆ ಸೇರುತ್ತಾರೆ ಎಂಬು ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಅಗತ್ಯವಿದ್ದರಷ್ಟೆ ಈಶ್ವರಪ್ಪರನ್ನು ಪೊಲೀಸರು ಬಂಧಿಸಲಿದ್ದಾರೆ: ಸಿಎಂ ಬೊಮ್ಮಾಯಿ
CLEAN CHEAT
Chor machaye shor.