“ಹಿಂದುತ್ವವು ಇಸ್ಲಾಮಿಕ್ ಮಸೀದಿಗಳ ಮೇಲೆ ಹಸ್ತಕ್ಷೇಪ ಮಾಡಿದರೆ, ಬೌದ್ಧರು ಅನೇಕ ಹಿಂದೂ ದೇವಾಲಯಗಳ ಮೇಲೆ ಹಕ್ಕು ಸಾಧಿಸಬಹುದು” ಎಂದು ಸಾಮಾಜಿಕ ಹೋರಾಟಗಾರ, ನಟ ಚೇತನ್ ಅಹಿಂಸಾ ತಿಳಿಸಿದ್ದಾರೆ.
ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, “ವೇದಕಾಲದ ಸಾವಿರ ವರ್ಷಗಳ ಕಾಲ (1500-500 BCE), ಯಾವುದೇ ದೇವಾಲಯಗಳು ಇರಲಿಲ್ಲ. ಬುದ್ಧ ಮತ್ತು ಬೌದ್ಧ ಸ್ತೂಪಗಳು/ಪಗೋಡಗಳನ್ನು ಸಹಸ್ರಮಾನದವರೆಗೆ ಶಾಶ್ವತಗೊಳಿಸಿದ ನಂತರ, ಹಿಂದೂ ದೇವಾಲಯಗಳು ಅಸ್ತಿತ್ವಕ್ಕೆ ಬಂದವು” ಎಂದಿದ್ದಾರೆ.
ಮುಂದುವರಿದು, “ಹಿಂದುತ್ವವು ಇಸ್ಲಾಮಿಕ್ ಮಸೀದಿಗಳ ಮೇಲೆ ಹಸ್ತಕ್ಷೇಪ ಮಾಡಿದರೆ, ಬೌದ್ಧರು ಅನೇಕ ಹಿಂದೂ ದೇವಾಲಯಗಳ ಮೇಲೆ ಹಕ್ಕು ಸಾಧಿಸಬಹುದು’’ ಎಂದು ಅವರು ಪ್ರತಿಪಾದಿಸಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, “ಬುಧವಾರ ದಕ್ಷಿಣ ಕನ್ನಡದಲ್ಲಿ ‘ಕಾಂತಾರ’ ಚಿತ್ರವನ್ನು ವೀಕ್ಷಿಸುತ್ತಿದ್ದ ಮುಸ್ಲಿಂ ದಂಪತಿಗಳನ್ನು, ಧರ್ಮಾಂಧ ಮುಸ್ಲಿಂ ಯುವಕರು ಬೆದರಿಸಿ ಅವರ ಮೇಲೆ ಹಲ್ಲೆ ನಡೆಸಿದರು. ಈ ಚಲನಚಿತ್ರವು ‘ಹಿಂದೂ ಸಂಸ್ಕೃತಿ’ಯನ್ನು ಬೆಂಬಲಿಸುತ್ತದೆ” ಎಂದಿದ್ದಾರೆ.
“ಸಾಂಸ್ಕೃತಿಕ/ಸೈದ್ಧಾಂತಿಕ ಬಹುತ್ವವೇ ನಮ್ಮ ರಾಷ್ಟ್ರದ ತಳಹದಿ. ಇಂತಹ ಅಸಹಿಷ್ಣುತೆ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಗಳನ್ನು ನಾವು ಖಂಡಿಸುತ್ತೇವೆ” ಎಂದು ಚೇತನ್ ಹೇಳಿದ್ದಾರೆ.
ಇತ್ತೀಚೆಗೆ ಕಾಂತಾರ ಸಿನಿಮಾ ಕುರಿತು ಮಾತನಾಡಿ ಚೇತನ್ ಚರ್ಚೆಯಲ್ಲಿದ್ದರು. “ನಮ್ಮ ಕನ್ನಡ ಚಿತ್ರ ‘ಕಾಂತಾರ’ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಭೂತಕೋಲ ಹಿಂದೂ ಸಂಸ್ಕೃತಿ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಇದು ನಿಜವಲ್ಲ” ಎಂದು ಪೋಸ್ಟ್ ಮಾಡಿದ್ದರು.
“ನಮ್ಮ ಪಂಬದ/ನಲಿಕೆ/ಪರವ ಬಹುಜನ ಸಂಪ್ರದಾಯಗಳಾಗಿವೆ. ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಇವು ಹಿಂದಿನವುಗಳಾಗಿವೆ. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲೀ, ಅದರಾಚೆಯಾಗಲೀ ಸತ್ಯಸಂಗತಿಗಳೊಂದಿಗೆ ತೋರಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದರು.
ಹಿಂದೂ ದೇವಾಲಯವಲ್ಲ: ಮದ್ರಾಸ್ ಕೋರ್ಟ್ ತೀರ್ಪು
ಹಿಂದೂ ದೇವಾಲಯಗಳ ಇತಿಹಾಸ ಕೆದಕಿದರೆ ಬೌದ್ಧಸ್ತೂಪಗಳು ದೊರಕುತ್ತವೆ ಎಂಬ ಚರ್ಚೆ ಮೊದಲಿನಿಂದಲೂ ಇದ್ದು, “ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯೇರಿ ಗ್ರಾಮದ ಕೊಟ್ಟೈ ರಸ್ತೆಯಲ್ಲಿರುವ ದೇವಾಲಯದೊಳಗಿನ ವಿಗ್ರಹ ಬುದ್ಧನದ್ದಾಗಿದೆ” ಎಂದು ಮದ್ರಾಸ್ ಹೈಕೋರ್ಟ್ ಕೆಲವು ತಿಂಗಳ ಹಿಂದೆ ಹೇಳಿತ್ತು.
ದೇವಾಲಯದಲ್ಲಿರುವ ವಿಗ್ರಹವನ್ನು ಈಗ ‘ತಲೈವೆಟ್ಟಿ ಮುನಿಯಪ್ಪನ್’ ಎಂದು ಪೂಜಿಸಲಾಗುತ್ತಿದೆ. ಸೇಲಂ ಮೂಲದ ಬುದ್ಧ ಟ್ರಸ್ಟ್ನ ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಈ ವಿಗ್ರಹವು ಬುದ್ಧನ ವಿಗ್ರಹವಾಗಿದೆ ಎಂದು 2017ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಜುಲೈ 28, 2021ರಂದು ಪುರಾತತ್ತ್ವ ಶಾಸ್ತ್ರದ ತಂಡವು ವಿಗ್ರಹವನ್ನು ಪರಿಶೀಲಿಸಿತು. ವಿಗ್ರಹವನ್ನು ಶುಚಿಗೊಳಿಸಿದ ನಂತರ ವಿಗ್ರಹದ ಮೇಲಿನ ಹಲವು ಚಿಹ್ನೆಗಳು ಕಂಡುಬಂದಿದ್ದವು.
“ಅಂತಹ ವರದಿಯನ್ನು ಸ್ವೀಕರಿಸಿದ ನಂತರ, ಈ ಶಿಲ್ಪವನ್ನು ತಲೈವೆಟ್ಟಿ ಮುನಿಯಪ್ಪನ್ ಎಂದು ಪರಿಗಣಿಸಲು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಅನುಮತಿ ನೀಡುವುದು ಸೂಕ್ತವಲ್ಲ” ಎಂದು ನ್ಯಾಯಮೂರ್ತಿ ವೆಂಕಟೇಶ್ ಆದೇಶದಲ್ಲಿ ಬರೆದಿದ್ದರು. “ಶಿಲ್ಪವು ಬುದ್ಧನದು ಎಂಬ ತೀರ್ಮಾನಕ್ಕೆ ಬಂದ ನಂತರವೂ ಇದು ಹಿಂದೂ ದೇವರೆಂದು ಮುಂದುವರಿಯಲು ಅನುಮತಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದರು.
“ವಿಗ್ರಹವನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಬೇಕು” ಎಂದು ಧಾರ್ಮಿಕ ದತ್ತಿ ಇಲಾಖೆಗೆ ಹೈಕೋರ್ಟ್ ಆದೇಶಿಸಿದ್ದು, ಈ ದೇವಾಲಯದ ಒಳಗೆ ಬುದ್ಧನ ವಿಗ್ರಹ ಎಂದು ಬೋರ್ಡ್ ಹಾಕಬೇಕು ಎಂದು ಸೂಚಿಸಿದೆ.
ಬೌದ್ದರು ಹಿಂದೂ ದೇವಾಲಯಗಳ ಮೇಲೆ ಹಕ್ಕು ಸಾಧಿಸಬಹುದು ಎನ್ನುವ ಪ್ರತಿಪಾದನೆ ಸರಿ ಇದೆ. ಆ ದಿಕ್ಕಿನಲ್ಲಿ ಯೋಚಿಸಬೇಕು.👍💐
Naanu Ghori
ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ವಿಙ್ನಾನದಿಂದ ಅವರ ಕಸ್ಸೇಸ್ ಪರೀಕ್ಷೆಗೆ ಅವರ ದುಡ್ಡು ತೇಗೆದುಕೊಂಡು ಸರ್ಟೀಪಿಕೇಟ್ ಹೊಂದಿದವರು ಪೂಜೆ ಮಾಡಲು ಅರ್ಹತೆ ಹೊದಿರುವರು ಎಂದು ಗುರುತಿಸಬಹುದು ಮಾಂತ್ರಿಕ ರಿಂದ ಆಗುವ ಶೋಷಣೆ ತಡೆಯಬಹುದು ಜೀವವುಳ್ಳ ದೇವರನ್ನು ಆರಾಧಿಸುವ