Homeಕರ್ನಾಟಕಉದ್ಯಮ ಸಾಮ್ರಾಟ ಬಿ.ಆರ್.ಶೆಟ್ಟಿ ಪತನ ಪ್ರಾರಂಭವಾಯ್ತಾ?!

ಉದ್ಯಮ ಸಾಮ್ರಾಟ ಬಿ.ಆರ್.ಶೆಟ್ಟಿ ಪತನ ಪ್ರಾರಂಭವಾಯ್ತಾ?!

- Advertisement -
- Advertisement -

ಉಡುಪಿಯ ಅನಿವಾಸಿ ಭಾರತೀಯ ಉದ್ಯಮ ದೊರೆ ಬಿ.ಆರ್ ಶೆಟ್ಟಿ ಸಾಮ್ರಾಜ್ಯ ಮಕಾಡೆ ಮಲಗಿಬಿಟ್ಟಿತಾ? ಕೋಟಿ ಕೋಟಿ ಮೊತ್ತದ ವಾಣಿಜ್ಯ ಶೋಗಳ ಮೂಲಕ ಪ್ರವರ್ಧಮಾನಕ್ಕೆ ಬಂದ ಇವರಿಂದ ಇದ್ದಕ್ಕಿದ್ದಂತೆ ದಿವಾಳಿ ಸಂಕೇತಗಳೇಕೆ ಹೊರ ಬರಲಾರಂಭಿಸಿದೆ? ಜಗತ್ತಿನ ಕಣ್ಣುಕುಕ್ಕುವಂತೆ ತಾನೆ ಕಟ್ಟಿಬೆಳೆಸಿದ್ದ ದೈತ್ಯ ಎನ್‍ಎಂಸಿ ಕಂಪನಿಯಿಂದ ತೊಲಗಬೇಕಾಗಿ ಬಂದಿದ್ದಾದರೂ ಯಾಕೆ? ಅಬುದಾಬಿಯನ್ನು ತನ್ನ ವಾಣಿಜ್ಯ ವ್ಯವಹಾರದ ಹೆಡ್‍ಕ್ವಾರ್ಟರ್ಸ್ ಮಾಡಿಕೊಂಡಿದ್ದರೂ ಬೃಹತ್ ದಂಧೆಗಳನ್ನು ಭಾರತದಲ್ಲಿ ಅದರಲ್ಲೂ ಹುಟ್ಟೂರು ಉಡುಪಿ ಮತ್ತದರ ಆಚೀಚೆಯ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸ್ಥಾಪಿಸುತ್ತಿರುವ ಬಿ.ಆರ್.ಶೆಟ್ಟೆ ಭೋಂಗು ಭೂಪನಾ? ಇಂಥ ಚರ್ಚೆಗಳೀಗ ಕರಾವಳಿಯ ಪಟ್ಟಾಂಗ ಕಟ್ಟೆಯಲ್ಲಿ ಜೋರಾಗುತ್ತಿದೆ….

ಎಂಬತ್ತರ ಇಳಿವಯಸ್ಸಿನಲ್ಲೂ ನವತರುಣನಂತೆ ಮಿಂಚುವ ಗೆಟಪ್ಪಿನಲ್ಲಿ ಬಿ.ಆರ್.ಶೆಟ್ಟಿ ಆರೋಗ್ಯ ಹಾಗೂ ವಿದೇಶಿ ಹಣ ವರ್ಗಾವಣೆಯ ದೈತ್ಯ ಕಂಪನಿಗಳ ಒಡೆಯ. ದುರ್ಬಲರಿಗೆ ಕೈಗೆಟಕುವ ಆರೋಗ್ಯ ಸೇವೆಯೇ ತನ್ನ ದಂಧೆಯ ಧ್ಯೇಯವೆನ್ನುವ ಈತ ಕರಾವಳಿಯಲ್ಲಿ ದಾನ ದೇಣಿಗೆ ಆಸ್ಪತ್ರೆ ನಡೆಸುವಿಕೆಯಿಂದ ಒಂಥರಾ ಕುಬೇರನ ಇಮೇಜು ಬೆಳೆಸಿಕೊಂಡಿದ್ದರು. ಆದರೆ ಇತ್ತೀಚಿನ ವರ್ಷದಲ್ಲಿ ಆತನ ಭರವಸೆ ಆಶ್ವಾಸನೆ ಉದ್ಯಮ ಸ್ಥಾಪನೆಯ ಹೇಳಿಕೆಗಳೆಲ್ಲಾ ಅದ್ಯಾಕೋ ಬೌನ್ಸ್ ಆಗತೊಡಗಿವೆ. ಸ್ವಜಾತಿ ಬಂಟರ ಸಂಘಗಳಿಗೆ ಕೊಟ್ಟ ಮಾತೇ ಉಳಿಸಿಕೊಳ್ಳಲಾಗುತ್ತಿಲ್ಲ! ಶೆಟ್ಟಿ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಈ ಸಂದಿಗ್ಧ ಕಾಲದಲ್ಲೇ ಆತ ದೊಡ್ಡ ಸಂಕಷ್ಟಕ್ಕೆ ಬಿದ್ದಿದ್ದಾರೆ. ಬಿಆರ್ ಶೆಟ್ಟಿಯ ವ್ಯವಹಾರಗಳು ನಂಬಿಕೆಗೆ ಅರ್ಹವಲ್ಲವೆಂದು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ “ಮುಡ್ಡಿ ವಾಟರ್ಸ್” ವರದಿ ಕೊಟ್ಟಿದೆ.

ಈ ತನಿಖಾ ವರದಿ ಹೊರಬರುತ್ತಿದ್ದಂತೆಯೇ ಶೆಟ್ಟಿಯ ಉದ್ಯಮಗಳ ಕೇಂದ್ರ ಅಬುದಾಬಿಯ ವಾಣಿಜ್ಯ ವಲಯದಲ್ಲಿ ಅಲ್ಲೋಲಕಲ್ಲೋಲವಾಗಿದೆ. ಅದರ ಅಡ್ಡ ಪರಿಣಾಮ ಇಂಡಿಯಾದಲ್ಲಿ ಎಲ್ಲೆಲ್ಲಿ ಶೆಟ್ಟಿ ದಂಧೆ ನಡೆಸುತ್ತಿದ್ದಾರೆ ಅಥವಾ ಜನಹಿತ ಬಿಸಿನೆಸ್ ಶುರು ಮಾಡುವುದಾಗಿ ಹೇಳಿದ್ದಾರೋ ಅಲ್ಲೆಲ್ಲಾ ಒಂದರ ಹಿಂದೊಂದರಂತೆ ಆಗುವ ಸೂಚನೆ ಗೋಚರಿಸಲಾರಂಭಿಸಿದೆ. ಎಪ್ಪತ್ತರ ದಶಕದಲ್ಲಿ ಹೊಟ್ಟೆಪಾಡಿನ ಚಾಕರಿಗಾಗಿ ದುಬೈ ಸೇರಿಕೊಂಡಿದ್ದ ಶೆಟ್ಟಿ ಅಲ್ಲಿಯ ವೈದ್ಯಕೀಯ ವಾಣಿಜ್ಯ ವ್ಯವಹಾರ ನಡೆಸಿ ಸಂಪತ್ತು ಗಳಿಸುತ್ತಾರೆ. ಆ ಬಂಡವಾಳದಿಂದ ಸ್ವಂತ ಉದ್ಯಮ ಆರಂಭಿಸುತ್ತಾರೆ. ದುಬೈನ ದುಡ್ಡಿನ ಕುಳಗಳ ಜೊತೆಗೆ ಇಟ್ಟುಕೊಂಡಿದ್ದ ಶೆಟ್ರು ಅಭಿವೃದ್ಧಿಯಾಗುತ್ತಲೇ ಹೋದರು. ದುಡ್ಡಿನ ಫಲದಲ್ಲಿ ಭಾರತದಲ್ಲಿ ಬಿರುದು-ಬಾವುಲಿಗಳು- ಪ್ರಶಸ್ತಿಗಳನ್ನು ಕೊಂಡುಕೊಂಡರು. ಮಹಾನ್ ದಾನಿ ಎನಿಸಿಕೊಂಡರು. ಆನಂತರ ಅಬುದಾಬಿಯ ಅತ್ಯುನ್ನತ ಪುರಸ್ಕಾರ, ಭಾರತದ ಪದ್ಮಪ್ರಶಸ್ತಿಗಳೂ ಹಣವಂತ ಉದ್ಯಮಪತಿಗಳು ನಿರಾಯಾಸವಾಗಿ ಒಲಿಯಿತು.

ಜಗತ್ತಿನಲ್ಲೇ ಎತ್ತರದ ಬುರ್ಜ್ ಖಲೀಫಾ ಕಟ್ಟಡದಲ್ಲಿ ಒಂದು ಅಂತಸ್ತು ಖರೀದಿಸಿರುವ ಶೆಟ್ರು ಜಗತ್ತಿನಾದ್ಯಂತ 270 ಆಸ್ಪತ್ರೆ ಸ್ಥಾಪಿಸಿದ್ದೇನೆಂದು ಹೇಳುತ್ತಿದ್ದಾರೆ. ಆದರೆ ಅಲ್ಲೆಲ್ಲ ಬಡವರಿಗೆ ಉಚಿತ ಚಿಕಿತ್ಸೆ ಸಿಕ್ಕಿರುವುದು ಅನುಮಾನವೆಂದರೆ ಸಾಹಸ ಬಲ್ಲ ಉದ್ಯಮಿಗಳು ತಮಾಷೆಯೂ ಮಾಡುತ್ತಾರೆ. ಶೆಟ್ಟರ ವ್ಯವಹಾರದಲ್ಲಿ ಹೊರಗೆಲ್ಲ ಥಳುಕು – ಒಳಗೆಲ್ಲಾ ಹುಳುಕು ಎಂಬ ಸಾಮಾನ್ಯ ಅಭಿಪ್ರಾಯವಿತ್ತು. ಅದೀಗ ನಿಜವಾಗಿದೆ. ಶೆಟ್ರ ಮಾಲಿಕತ್ವದ ಕಂಪನಿಗಳು ತಮ್ಮ ಷೇರುಗಳ ಮೌಲ್ಯ ಮುಚ್ಚಿಟ್ಟು ಆಟವಾಡುತ್ತಿವೆ. ಅವುಗಳ ಲೆಕ್ಕಾಚಾರ ಅದ್ಯಾಕೋ ತಾಳೆಯಾಗುತ್ತಿಲ್ಲ. ಇದೊಂದು ಸುಳ್ಳಿನ ಸಾಮ್ರಾಜ್ಯ ಎಂಬರ್ಥದ ಅಮೆರಿಕೆಯ ಮುಡ್ಡಿ ವಾಟರ್ಸ್ ವರದಿ ಹೊರಬರುತ್ತಲೇ ಮೋದಿ ಮಾಮನ ಸಖ್ಯದ ಉದ್ಯಮಿಯ ಕಂಪನಿಗಳು ಶೇರುಪೇಟೆಯಲ್ಲಿ ಸೊಂಟ ಮುರಕೊಂಡು ಬಿದ್ದಿವೆ. ಲಂಡನ್ ಶೇರು ಮಾರುಕಟ್ಟೆಯಲ್ಲಿ ಶೆಟ್ರ ಷೇರುಗಳ ಮೌಲ್ಯ ಪ್ರಪಾತಕ್ಕೆ ಬಿದ್ದಿದೆ!!

ಶೆಟ್ರ ಉದ್ಯಮ ಸಾಮ್ರಾಜ್ಯವೀಗ ತತ್ತರಿಸುತ್ತಿದೆ. ಡ್ಯಾಮೇಜ್ ಕಂಟ್ರೋಲ್‍ಗೆ ಆತ ತಿಪ್ಪರಲಾಗ ಹಾಕುತ್ತಿದ್ದಾರೆ. ತನ್ನ ಎಂಎನ್‍ಸಿ ಕಂಪನಿ ಅಧ್ಯಕ್ಷತೆಗೆ ಅನಿವಾರ್ಯವಾಗಿ ಶೆಟ್ರು ರಾಜೀನಾಮೆ ಕೊಡಬೇಕಾಗಿ ಬಂದಿದೆ. ಉಪಾಧ್ಯಕ್ಷ ಖಲೀಫಾ ಬುಟ್ಟಿ ಮತ್ತಿತರರು ಕಂಪನಿಯಿಂದ ಹೊರಬಿದ್ದಿದ್ದಾರೆ! ಅಲ್ಲಿಗೆ ಶೆಟ್ಟರ ದೌಲತ್ತಿನ ಅಸಲಿ ಅವತಾರವು ಅನಾವರಣ ಆಗಿಹೋಗಿದೆ!! ಬಿ.ಆರ್ ಶೆಟ್ಟಿ ಉಡುಪಿ ಸರ್ಕಾರಿ ಆಸ್ಪತ್ರೆಯ ಸುಮಾರು 150 ಕೋಟಿ ಬೆಲೆಯ ಜಾಗದ ಮೇಲೆ ಕಣ್ಣು ಹಾಕಿರುವುದು ದೊಡ್ಡ ವಿವಾದವಾಗಿದೆ. ಅಲ್ಲಿಯ ಶಾಸಕ ರಘುಪತಿ ಭಟ್ಟರಿಗೆ ಶೆಟ್ರ ಕಂಡರಾಗದು. ಹಿಂದೆ ಉಡುಪಿ ಆಳಿದ್ದ ಪ್ರಮೋದ್ ಮಧ್ವರಾಜ್ ತನ್ನ ಮಂತ್ರಿಗಿರಿ ದರ್ಬಾರಿನಲ್ಲಿ ಶೆಟ್ಟರಿಗೆ ರತ್ನಗಂಬಳಿ ಹಾಸಿದ್ದರು. ಉಡುಪಿಯ ಹಾಜೀ ಅಬ್ದುಲ್ಲಾ ಆಸ್ಪತ್ರೆ ರಾಜ್ಯಸರ್ಕಾರದಿಂದ ಶೆಟ್ಟರಿಗೆ ಬಳುವಳಿಯಾಗಿ ಕೊಡಿಸಿದ್ದರು.

ಸದ್ರಿ ಸರ್ಕಾರಿ ಆಸ್ಪತ್ರೆ ನವೀಕರಿಸಿ ಬಡವರಿಗೆ ಉಚಿತ ಸೇವೆ ಕೊಡುತ್ತೇನೆಂದು ಶೆಟ್ಟಿ ಹೇಳಿದರು. ಆದರೆ ಈ ಪುಣ್ಯಾತ್ಮ ಜಾಗ ದಾನ ಕೊಟ್ಟು ಆಸ್ಪತ್ರೆ ಸ್ಥಾಪನೆಗೆ ಕಾರಣರಾಗಿದ್ದ ಅಬ್ದುಲ್ಲಾರ ಹೆಸರು ತೆಗೆದು ತನ್ನ ಹೆತ್ತ ಕೂಸಮ್ಮ-ಶಂಭು ಶೆಟ್ಟಿ ಹೆಸರಿಡಲು ಹವಣಿಸಿದ್ದ. ಜನವಿರೋಧಿ ಎದುರಾದಾಗ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆ ಎಂದು ಹೆಸರಿಡಬೇಕಾಗಿ ಬಂತು. ಈ ಮಹಾನ್ ಉದ್ಯಮಿ ಜನಸೇವೆಯ ಪೋಸು ಕೊಡುತ್ತಲೇ ಉಲ್ಟಾ ಹೊಡೆದದ್ದೇ ಹೆಚ್ಚು. ದೇಶಪಾಂಡೆ ಪ್ರವಾಸೋದ್ಯಮ ಮಂತ್ರಿಯಾಗಿದ್ದಾಗ ಜಗತ್ಪ್ರಸಿದ್ಧ ಜೋಗ ಜಲಪಾತದ ನಿರ್ವಹಣೆ ಮಾಡುವೆನಾಗಿ ಹೇಳಿದ್ದರು ಶೆಟ್ರು. 400 ಕೋಟಿ ರೂ ಪ್ರಾಜೆಕ್ಟ್ ಘೋಷಿಸಿ ಬೇಸಿಗೆಯಲ್ಲೂ ಜೋಗದ ಜಲಪಾತ ಧುಮ್ಮಿಕ್ಕುವಂತೆ ಮಾಡುವ ಕಾರ್ಯಸಾಧುವಲ್ಲದ ಮಾತನಾಡಿದ್ದರು.

ಕಾಶ್ಮೀರದಲ್ಲಿ ನೂರು ಎಕರೆ ಜಾಗ ಖರೀದಿಸಿ ಭರ್ಜರಿ ಫಿಲಂ ಸಿಟಿ ಮಾಡಿದ್ದರು. 1000 ಕೋಟಿ ಮಹಾಭಾರತ ಸಿನಿಮಾ ನಿರ್ಮಿಸುವೆನೆಂದು ಜಂಬ ಕೊಚ್ಚಿಕೊಂಡಿದ್ದರು. ಕುಮಟಾದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕಟ್ಟುವೆನೆಂದು ಪ್ರಚಾರ ಪಡೆದಿದ್ದರು. ಕರಾವಳಿಯ ಬಂಟರ ಸಂಘಗಳು ಇನ್ನಿತರ ಜನಪರ ಯೋಜನೆಗಳಿಗೆ ಎಲ್ಲ ಫೈನಾನ್ಸ್ ಮಾಡುವೆನೆಂದು ಮಾತು ಕೊಟ್ಟು ಶೆಟ್ರು ಕಾಣೆಯಾಗಿದ್ದೇ ಹೆಚ್ಚು. ಒಂದರ ಮಾತೃಸಂಘದ ಕಾಂಪ್ಲೆಕ್ಸ್ ಹಾಲ್ ಕಟ್ಟುವುದಕ್ಕೆ ನೆರವು ಕೊಡುವೆನೆಂದು ಶೆಟ್ರು ಹೇಳಿದ್ದು ಬರೀ ಬಾಯಿಮಾತಿನ ಉಪಚಾರಷ್ಟೇ ಆಗಿತ್ತು. ವರ್ಣ ಪ್ರತಿಷ್ಠೆ ಪ್ರಚಾರದ ಬೆವರಿನಲ್ಲಿ ಶೆಟ್ರು ಎಡವಿದರಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...