Homeಅಂಕಣಗಳುಭಾರತಕ್ಕೆ ಚೀತಾಗಳು ಬಂದಿವೆ ಇನ್ನು ಭಯವಿಲ್ಲ!

ಭಾರತಕ್ಕೆ ಚೀತಾಗಳು ಬಂದಿವೆ ಇನ್ನು ಭಯವಿಲ್ಲ!

- Advertisement -
- Advertisement -

ಸಂತೆಗೆ ಹೋದ ಮಾದಣ್ಣ ಮಡದಿ ಹೇಳಿದ ಸಾಮಾನುಗಳನ್ನ ಬಿಟ್ಟು ಬೆಕ್ಕಿನ ಮರಿ ತಂದನಂತಲ್ಲಾ. ಅದನ್ನು ನೋಡಿದ ಮದಡಿ, “ಅಯ್ಯೊ ನಿನ್ನ ಮನಿಮಾರತ್ತ, ಮನಿಗೆ ಬೇಕಾದ ಸಾಮಾನು ತರದು ಬುಟ್ಟು ಕೊತ್ತಿಮರಿ ತಂದಿದ್ದಿಯಲ್ಲಾ, ನಿನ್ನ ಮರುಳು ಬುದ್ದಿಗೇನೆಳನಾ” ಎಂದು ಜಗಳಾ ತೆಗೆದಳಂತಲ್ಲಾ. ಆಗ ಬೆಕ್ಕಿನ ತಲೆ ಸವರಿದ ಮಾದಣ್ಣ, “ಮನೆಲಿ ಇಲಿ ಜಾಸ್ತಿಯಾಗ್ಯವೆ” ಅಂತ ನೀನೆ ಹೇಳಿದಲ್ಲಾ ಎಂದಾಗ, “ಇಲಿ ಜಾಸ್ತಿಯಾಗ್ಯವೆ ಸರಿ ಇಲಿ ಅವುಸ್ತಿ ತರಕ್ಕೇನಾಗಿತ್ತು? ಈ ಬೆಕ್ಕಿನ ಮರಿ ಸಾಕಕ್ಕೆ ಹಾಲು ಬೇಕು, ಹಾಲು ಬೇಕಾದ್ರೆ ಹಸ ತರಬೇಕು, ಅದಕೆ ಹುಲ್ಲು ಹಾಕಬೇಕು, ಸಗಣಿ ತಗಿಬೇಕು, ಗಂಜಲ ಬಳಿಬೇಕು, ಇದನ್ಯಲ್ಲ ಮಾಡೋಳು ನಾನು” ಎಂದು ಗೊಣಗುತ್ತಿರುವಾಗ ಮಾದಣ್ಣ, ಬೆಕ್ಕಿನ ಮರಿಯನ್ನ ವಿವಿಧ ಭಂಗಿಯಲ್ಲಿ ನಿಲ್ಲಿಸಿ ’ವಾಹ್ ಏನು ಭಂಗಿ, ಆ ಕಣ್ಣೇನು, ಆ ಮೀಸೆಯೇನು’ ಎಂದು ವರ್ಣಿಸುತ್ತ ಕಣ್ಣಿನಲ್ಲೇ ಫೋಟೋ ಕ್ಲಿಕ್ಕಿಸುತ್ತಿದ್ದನಂತಲ್ಲಾ, ಥೊತ್ತೇರಿ.

*****

ಈ ಬೆಕ್ಕಿನ ಕತೆ ಟೈಮಿನಲ್ಲೇ ನೆನಪಿಗೆ ಬಂದಿದ್ದೇನೆಂದರೆ, ಮುಸ್ಲಿಮ್ ದೊರೆಗಳು ಈ ದೇಶಕ್ಕೆ ದಾಳಿಯ ಮುಖಾಂತರ ಬಂದವರು; ಧನ ಕನಕ ವಸ್ತುಗಳನ್ನು ಲೂಟಿ ಮಾಡುವ ಮನಸ್ಸಿನಿಂದ ರೂಪುಗೊಂಡದ್ದು ದಾಳಿ. ಹಾಗೆ ಬಂದ ಮುಸ್ಲಿಮರು ದಾಳಿ ಮಾಡಿಕೊಂಡು ಓಡಲಿಲ್ಲ, ಬದಲಿಗೆ ಇಲ್ಲೇ ನಿಂತರು. ಆಗ ನಮ್ಮ ಪುರೋಹಿತಶಾಹಿಗಳು ದೇವಸ್ಥಾನದ ಗರ್ಭಗುಡಿಯಲ್ಲಿ ಭದ್ರವಾಗಿ ಕುಳಿತು ಭಜನೆ ಮಾಡುತ್ತಿದ್ದರು. ನಂತರ ಪ್ರಸಾದ ಪಾನಕ ಪಡೆಯುತ್ತಿದ್ದರು. ಹೊರಬಂದು ನೋಡಿದಾಗ ಮುಸಲ್ಮಾನ ದೊರೆಗಳು ಊರನ್ನೇ ಅಕ್ರಮಿಸಿ ರಾಜರುಗಳಾಗಿ ಮೆರೆಯುತ್ತಿದ್ದರು. ತಡಮಾಡದೆ ಪುರೋಹಿತಶಾಹಿಗಳು ಮುಸ್ಲಿಂ ರಾಜರ ಆಸ್ಥಾನಕ್ಕೆ ನುಗ್ಗಿ ಕರಣಿಕರಾದರು, ಮಂತ್ರಿಗಳಾದರು, ರಾಜನನ್ನು ನಗಿಸುವ ವಿಧೂಷಕರಾದರು, ಸಂಗೀತಗಾರರಾದರು. ಇದು ಸುಮಾರು ಆರುನೂರು ವರ್ಷಗಳು ಸತತವಾಗಿ ನಡೆಯಿತು. ಈ ಪುರೋಹಿತರು ತಮ್ಮ ಬುದ್ಧಿಯನ್ನು ಶೂದ್ರರಿಗೂ ಅಂಟಿಸಿದ ಫಲವಾಗಿ, ಅವರನ್ನಾಳುತ್ತಿರುವ ನಾಯಕ, ಪ್ರವಾಹದಿಂದ ಉತ್ತರ ಭಾರತವೇ ನಲುಗಿಹೋಗುತ್ತಿರುವ ಸಮಯದಲ್ಲಿ ತಲೆಕೆಡಿಸಿಕೊಳ್ಳದೆ, ನಮೀಬಿಯಾದಿಂದ ಚೀತಾ ತಂದು, ಬೋನಿನಿಂದ ಹೊರಬಿಟ್ಟು, ಎಲ್ಲರೂ ಕೈ ಎತ್ತಿ ಚಿರತೆಗಳನ್ನು ಸ್ವಾಗತಿಸಿ ಚಪ್ಪಾಳೆ ಹೊಡೆಯಿರಿ ಎಂದರಂತಲ್ಲಾ. ಆ ಕೂಡಲೇ ಜನಸ್ತೋಮ ಅಂಗೈ ಉರಿಯುವಂತೆ ಚಪ್ಪಾಳೆ ತಟ್ಟಿ ಗಾಳಿ ಹಾಕಿಕೊಂಡವಂತಲ್ಲಾ, ಥೂತ್ತೇರಿ

*****

ಭಾರತದಿಂದ ಚೀತಾ ಕಣ್ಮರೆಯಾದ ನಂತರ ಹುಟ್ಟಿದ ಮೋದಿಯವರು, ಹಾಗೆಯೇ ವಿರಳವಾಗುತ್ತಿರುವ ಗುಳ್ಳೆ ನರಿಗಳ ಬಗ್ಗೆ ತಲೆಕೆಡಿಸಿಕೊಳ್ಳುವರೆಂದು ಆಶಿಸುವ ಸಮಯದಲ್ಲೇ ಕಿಡಿಗೇಡಿಗಳು, ಗುಳ್ಳೆನರಿಗಳ ಗುಣವನ್ನು ವಿಶ್ಲೇಷಣೆ ಮಾಡಿದ್ದಾರಲ್ಲಾ. ಗುಳ್ಳೆ ನರಿ ಎಂದೂ ಶ್ರಮವಹಿಸಿ ಭೇಟೆಯಾಡಿದ್ದಿಲ್ಲ. ದೊಡ್ಡಪ್ರಾಣಿ ಮಾಡುವ ಬೇಟೆಯನ್ನು ಕದಿಯುವ ಸಂಚುರೂಪಿಸುತ್ತದೆ. ಬಲಿಯಾದ ನಂತರ ಪೊದೆಮರೆಯಿಂದ ಓಡಿಬಂದು ಬೇಕಾದ ಖಂಡವನ್ನು ಬಾಯಿಗಾಕಿಕೊಂಡು ಹೊಟ್ಟೆಹೊರಿಯುತ್ತದೆ. ಈ ಪ್ರಾಣಿಗೆ ಹೋಲುವ ಮನುಷ್ಯರು ಹೇರಳವಾಗಿದ್ದು, ಅದೂ ಮೋದಿ ಸುತ್ತಲೂ ಇರುವುದರಿಂದ, ಗುಳ್ಳೆನರಿ ತರುವುದು ಬೇಡವೆಂದು ಬುದ್ಧೀಜೀವಿಗಳು ವಾದಿಸುತ್ತಿದ್ದಾರಲ್ಲಾ, ಥೂತ್ತೇರಿ

*****

ಮೋದಿ ತಂದಿರುವ ಚೀತಾಗಳು ಒಂದು ಕಾಲದಲ್ಲಿ ನಾಯಿಗಳಂತಿದ್ದವು ಎಂದು ಭಾರತಕ್ಕೆ ಬಂದ ಪ್ರವಾಸಿಗರು ದಾಖಲಿಸಿ ಹೋಗಿದ್ದಾರೆ. ಇವುಗಳ ಸಂಖ್ಯೆಯ ಹೆಚ್ಚಳದಿಂದ ಕಾಡಿನಲ್ಲಿ ಜಿಂಕೆ, ಕಡವೆ, ಮೊಲ ಮತ್ತು ಹಂದಿಗಳ ಸಂಖ್ಯೆ ನಿರ್ನಾಮವಾಗುತ್ತದೆಂದು ಕಾಡಿನ ಮಾಂಸ ಪ್ರಿಯರು ಇದರ ನಿರ್ನಾಮಕ್ಕೆ ಕಾರಣರಾದರು. ಇದನ್ನ ಮರಳಿ ತರಬೇಕಾದರೆ ಎಪ್ಪತ್ತು ವರ್ಷಗಳ ಹಿಂದಿದ್ದ ಕಾಡು ಈಗಿದೆಯೆ? ಅಂದಿನ ಪ್ರಾಣಿಗಳು ಈಗಿವೆಯೇ? ಎಂಟು ಚೀತಾಗಳು ಮುಂದೆ ಸಂತಾನೋತ್ಪತ್ತಿ ಮಾಡಿ, ಪ್ರತಿದಿನ ಅವುಗಳು ಬೇಟಿಯಾಡಿದರೆ ಇನ್ಯಾವ ಪ್ರಾಣಿ ಸಂಕುಲ ನಿರ್ನಾಮವಾಗುತ್ತದೊ ಹೇಳಲು ಬರುವುದಿಲ್ಲ. ಯಾವ ಮುಂದಾಲೋಚನೆಯೂ ಇಲ್ಲದ ಜನ ನಾಯಕರು ಮತ್ತು ಚೀತಾಗಳು ಬಂದ ಕೂಡಲೇ ಮೋದಿ ಆಜ್ಞೆಯಂತೆ ಚಪ್ಪಾಳೆ ಹೊಡೆದ ಜನಸ್ತೋಮದ ಸಂಭ್ರಮ ನೋಡಿದ ಕಾಂಗೈಗಳು, ಚೀತಾಗಳನ್ನ ಮತ್ತೆ ತಂದು ನಮ್ಮ ಕಾಡಿಲ್ಲದ ನಾಡಿಗೆ ಬಿಡುವ ಯೋಜನೆ ನಮ್ಮದು. ಈಗ ಬಂದಿರುವ ಚೀತಾಗಳು ನಮಗೆ ಕೃತಜ್ಞತೆ ಸಲ್ಲಿಸಬೇಕೆಂದು ಹೇಳಿದ್ದಾರಂತಲ್ಲಾ, ಥೂತ್ತೇರಿ.

*****

ಅಂಬೇಡ್ಕರ್‌ರವರ ನಿಜವಾದ ಅನುಯಾಯಿ ಮೋದೀಜಿಯವರು ಎಂದು ಮಾಜಿ ರಾಷ್ಟಪತಿಗಳಾದ ಕೋವಿಂದಣ್ಣನವರು ಹೇಳಿ ಸಾಮಾನ್ಯ ಜನರನ್ನ ದಂಗುಬಡಿಸಿದ್ದಾರಲ್ಲಾ. ಈ ಶತಮಾನದ ತಮಾಷೆಯೆಂದರೆ ಇದೇ. ಕೋವಿಂದ್ ಅವರು ರಾಷ್ಟಪತಿ ಸ್ಥಾನ ಅಲಂಕರಿಸಬೇಕಾದರೆ, ಆ ಪರಂಪರೆಯನ್ನ ತಿಳಿದವರು, ನಮ್ಮ ಗ್ರಹಿಕೆಗೆ ನಿಲುಕದ ಯಾವುದೋ ವಿದ್ವತ್ತು ಕೋವಿಂದರಲ್ಲಿರಬಹುದೆಂದು ಭಾವಿಸಿದ್ದರು. ಏಕೆಂದರೆ ಭಾರತದ ಹಿಂದಿನ ಹಲವು ರಾಷ್ಟ್ರಪತಿಗಳು ವಿದ್ವತ್ತಿನ ಪಂಡಿತರಾಗಿದ್ದರು. ಬಾಬು ರಾಜೇಂದ್ರ ಪ್ರಸಾದ್, ಡಾ. ಸರ್ವಪಲ್ಲಿ ರಾಥಾಕೃಷ್ಣ, ವಿ.ವಿ ಗಿರಿ ಇವರೆಲ್ಲಾ ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವದ ದೇಶಕ್ಕೆ ಕಳಸವಿಟ್ಟಂತೆ ಕಂಡರು. ಆ ಸ್ಥಾನ ಕೆಳಗಿಳಿದದ್ದು ಫಕ್ರುದ್ದೀನ್ ಆಲಿ ಅಹಮದ್ ಕಾಲದಲ್ಲಿ. ಯಾಕೆಂದರೆ ಅವರು ತುರ್ತುಪರಿಸ್ಥಿತಿ ಬಿಲ್ಲಿಗೆ ಸಹಿಮಾಡಿದರು. ಆದರೂ ಆ ನಂತರ ಬಂದವರೆಲ್ಲಾ ಆ ಸ್ಥಾನಕ್ಕೆ ಗೌರವ ತಂದಿದ್ದರು. ಈಗಿನ ವಿಪರ್ಯಾಸವೆಂದರೆ ಅಂಬೇಡ್ಕರ್ ಮತ್ತು ಮೋದಿಯನ್ನು ಒಂದೇ ತಕ್ಕಡಿಯಲ್ಲಿ ತೂಗಿ ನೋಡಿರುವ ಕೋವಿಂದಣ್ಣ ಮುಂದೆ ಯಾರ್‍ಯಾರನ್ನು ಹೋಲಿಕೆ ಮಾಡುತ್ತಾರೆಂದು ಜನಕ್ಕೆ ದಿಗಿಲಾಗಿದೆಯಂತಲ್ಲಾ. ಏಕೆಂದರೆ ಕೋವಿಂದ್ ಅವರು ಅಡಿರುವ ಮಾತು ಆದಿತ್ಯನಾಥರಿಂದಲೋ ಚಕ್ರವರ್ತಿ ಸೂಲಿಬೆಲೆ ಅಥವಾ ಸಿ.ಟಿ ರವಿ ಬಾಯಿಂದಲೊ ಬರುವ ಮಾತು. ಸಂವಿಧಾನ ರಚನೆ ಮಾಡಿದ ಅಂಬೇಡ್ಕರನ್ನ ಸಂವಿಧಾನವನ್ನೇ ಮೂಲೆಗುಂಪು ಮಾಡ ಹೊರಟ ಮೋದಿಗೆ ಹೋಲಿಸಿದ್ದು ಅಜ್ಞಾನದ ಪರಮಾವಧಿ ಎಂದು ಹೇಳಲು ಭಯವಾಗುತ್ತಿದೆಯಲ್ಲಾ, ಥೂತ್ತೇರಿ..


ಇದನ್ನೂ ಓದಿ: ಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...