Homeಅಂಕಣಗಳುಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..

ಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..

- Advertisement -
- Advertisement -

ಚಕ್ರತೀರ್ಥನ ಕಾಯಿಲೆ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಷಿಗೂ ಬಡಿದುಕೊಂಡಿದೆಯಂತಲ್ಲಾ. ಈ ಬಿಜೆಪಿಗಳದ್ದು ಅಂಟು ರೋಗ. ಈ ರೋಗದ ವಿಶೇಷ ಏನೆಂದರೆ ಎಲ್ಲವೂ ಒಂದೇ ತರಹ ಮಾತನಾಡುತ್ತವೆ ಮತ್ತು ಆಡಿದ್ದನ್ನು ಮಾಡಲು ಹೋಗುತ್ತವೆ. ಇದಕ್ಕೆ ನೂರಾರು ಉದಾಹರಣೆಗಳಿವೆ. ಈ ಸಾಹಿತ್ಯ ಪರಿಷತ್ ಜೋಷಿಯವರನ್ನೇ ನೋಡಿ; ಈತ ಆಯ್ಕೆಯಾಗಿ ಬಂದಾಗ ಬಡಿದುಕೊಂಡ ರೋಗ ಯಾವುದೆಂದರೆ ಜನರನ್ನು ಶುದ್ಧ ಕನ್ನಡದಲ್ಲಿ ಮಾತನಾಡುವಂತೆ ಮಾಡಬೇಕೆಂಬುದು; ಶುದ್ಧ ಕನ್ನಡ ಅಂದರೆ ಏನು ಎಂಬುದು ಆತನಿಗೇ ಗೊತ್ತಿರಲಿಲ್ಲ. ಹಲವು ಕನ್ನಡಗಳಲ್ಲಿ ಅದ್ಲಿಸಿದಾಗ ಸುಮ್ಮನಾದರು. ಆದರೆ ಕಾಯಿಲೆ ಜನಕ್ಕೆ ಹಲವು ಕಾಯಿಲೆಗಳು ಅಂಟುವುದು ಸಾಮಾನ್ಯ. ಈಗ ಜೋಷಿಗೆ ಪಂಪ ಮಹಾಕವಿಯ ರಸ್ತೆ ಹೆಸರು ಬದಲಿಸುವ ಕಾಯಿಲೆ ಕಾಣಿಸಿಕೊಂಡಿದೆ. ಅದಕ್ಕಾಗಿ ಆತನ ಅಣ್ಣನಂತಿರುವ ಬೊಮ್ಮಾಯಿಗೆ ಪರಮಿಷನ್ ಕೇಳಿದ್ದಾರಂತೆ! ಇಂಗ್ಲಿಷ್ ಭಾಷೆಯನ್ನ ಮಾತನಾಡುವ ಜನಗಳು ತೊಗಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ನಾಗರಿಕ ಜಗತ್ತಿನೆಡೆಗೆ ನಡೆಯಲು ಯತ್ನಿಸುತ್ತಿದ್ದಾನೆ ಇಲ್ಲಿ ಕನ್ನಡದ ಆದಿಕವಿ ಪಂಪ ಮಹಾಕಾವ್ಯವನ್ನೆ ಬರೆದಿದ್ದ ಎಂದು ಕುವೆಂಪು ಹೇಳಿದ್ದಾರೆ. ಜೋಷಿ ಆ ಮಹಾಕಾವ್ಯವನ್ನು ಓದಿ ಜೀರ್ಣಿಸಿಕೊಂಡು ಮಾತನಾಡುವುದಬಿಟ್ಟು ರಸ್ತೆ ಹೆಸರನ್ನೇ ಬದಲಿಸಹೊರಟಿರುವುದು ಶುದ್ದ ಮೂರ್ಖತನ. ಪಂಪನ ಮಾರ್ಗದಿಂದಲೇ ಸಾಹಿತ್ಯ ಪರಿಷತ್ ಪ್ರವೇಶ ನಡೆಯುತ್ತ ಬಂದಿದೆ ಎಂಬುದೇ ಜೋಷಿಗೆ ಗೊತ್ತಿಲ್ಲವಂತಲ್ಲಾ, ಥೂತ್ತೇರಿ.

******

ತೇಜಸ್ವಿ ಸೂರ್ಯ ಎಂಬ ಸಂಸದ ಹೋಟಲಿಗೆ ಹೋಗಿ ದೋಸೆ ತಿನ್ನುವುದನ್ನು ಆಡಿಕೊಂಡ ಕೆಲವರು ದೋಸೆ ಸೂರ್ಯ ಎಂದು ನಾಮಕರಣ ಮಾಡಿದ್ದಾರಲ್ಲಾ. ಇಂತಹ ಹೆಸರನ್ನು ಸಂಪಾದಿಸುವುದು ಸಾಮಾನ್ಯವಲ್ಲ. ಬೊಂಡ ರಮೇಶ ಮುದ್ದೇಗೌಡರು, ಬಿರಿಯಾನಿ ಜಮೀರು, ಉಪ್ಪೆಸಾರಿನ ಪುಟ್ಟಸ್ವಾಮಿ, ತೂತುವಡೆ ಶ್ರೀಕಂಠಯ್ಯ, ಬಾಡೂಟದ ಕೃಷ್ಣಪ್ಪ ಇವೆಲ್ಲ ನಮ್ಮ ರಾಜಕಾರಣದಲ್ಲಿ ಹಿಂದೆ ನಮ್ಮ ನಾಯಕರು ಸಂಪಾದಿಸಿದ ಹೆಸರುಗಳು. ಅದರೊಳಕ್ಕೆ ಈಗ ದೋಸೆ ಸೂರ್ಯ ಸೇರಿಕೊಂಡಿದ್ದಾರೆ ಅಷ್ಟೇ. ಮುಖ್ಯವಾಗಿ ಆತನ ಕಡೆಯವರಿಗೆ ದೋಸೆ ಅಂದರೆ ಪ್ರಾಣ. ಮೂರು ದೋಸೆ ಕೊಟ್ಟರೆ ಈ ಕಡೆ ಬರುತ್ತವೆ ಆರು ದೋಸೆ ಕೊಟ್ಟರೆ ಈ ಕಡೆ ಹೋಗುತ್ತವೆ. ಅದರಲ್ಲೂ ಮಸಾಲದೋಸೆ ಎಂದರೆ ಮುಗಿದೇ ಹೋಯ್ತು, ಮೈ ಮರೆತು ತಿನ್ನುತ್ತವೆ. ಹಾಗೇ ತೇಜಸ್ವಿಸೂರ್ಯ ಇಡೀ ಬೆಂಗಳೂರು ಸೊಂಟಮಟ ಮುಳುಗಿರುವಾಗ ಬಿಸಿಬಿಸಿ ದೋಸೆ ತಿನ್ನುತ್ತ ನೀವು ಬಂದು ತಿನ್ನಿ ಎಂದು ಹೋಟೆಲ್ ಅಡ್ರೆಸ್ ಹೇಳಿದ್ದಕ್ಕೆ ಜನಗಳು ನಖಶಿಖಾಂತ ಕೆರಳಿ ಕ್ಯಾಕರಿಸಿದ್ದಾರೆ. ಸಿಟ್ಟಾಗಿರುವ ಆತನ ಸಂಬಂಧಿ ಭಗವಾನ್ ಎಂಬ ದೋಸೆ ಪ್ರಿಯ, ನಮ್ಮ ಸೂರ್ಯ ಸುಮ್ಮಸುಮ್ಮನೆ ದೋಸೆ ತಿಂದಿಲ್ಲ; ಕೆರೆಯಂತಾಗಿರುವ ಬೆಂಗಳೂರು ನೀರನ್ನು ಹೊರಗೆ ಹಾಕಲು ಏನು ಮಾಡಬೇಕೆಂದು ಯೋಚಿಸುತ್ತ ದೋಸೆ ಅಗಿದಿದ್ದಾರೆ; ಸಾರ್ವಜನಿಕರೊಂದಿಗೆ ಸೇರಲು ದೋಸೆಗಿಂತ ತಿನಿಸೇ ಇಲ್ಲ ಎಂದು ಕೂಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಕರ್ನಾಟಕಕ್ಕೆ ಇದು ಕೆಟ್ಟ ಕಾಲ. ಏಕೆಂದರೆ ಜನಾಭಿಪ್ರಾಯವಿಲ್ಲದ ಮತ್ತು ಶಾಸಕರ ಬೆಂಬಲವೂ ಇಲ್ಲದ ಮುಖ್ಯಮಂತ್ರಿಯೊಬ್ಬರು ಅಕಸ್ಮಾತ್ ವಕ್ಕರಿಸಿ ಅಬ್ಬರಿಸಿದ್ದಾರಂತಲ್ಲಾ. ಈ ಅಬ್ಬರದ ಹೆಸರು ’ಜನೋತ್ಸವ’. ಈ ಸರಕಾರದ ಸಾಧನೆಯ ಪಟ್ಟಿ ಮಾಡುವುದಾದರೆ ಜೋಗದಲ್ಲಿ ಜನರೇಟರ್ ಆನ್ ಆದ ಕೂಡಲೆ ಅರ್ಧ ನಾಡಿನ ಲೈಟ್ ಹಚ್ಚಿಕೊಳ್ಳುವಂತೆ, ಮುಸ್ಲಿಂ ಹೆಣ್ಣು ಮಕ್ಕಳ ಹಿಜಾಬ್ ಪ್ರತಿಭಟನೆ ಉಡುಪಿಯಿಂದ ಬೇರೆ ಕಡೆಗೆ ಹರಡಿಸಿದ್ದು. ನಂತರ ಮುಸ್ಲಿಮರ ಅಂಗಡಿಗೆ ಹೋಗದಂತೆ ಮಾಡಿ ಎಂದದ್ದು, ಮುಸ್ಲಿಂ ಹಣ್ಣಿನ ಅಂಗಡಿ ಧ್ವಂಸ ಮಾಡಿದ್ದು, ಅವರ ಆಜಾನ್ ಶಬ್ದ ನಿಲ್ಲಿಸಲು ಹೋರಾಡಿದ್ದು ಇತ್ಯಾದಿ. ಸುದೈವಕ್ಕೆ ನಲವತ್ತು ಪರಸೆಂಟ್ ಲಂಚ, ಪಿಎಸ್‌ಐ ಹಗರಣ, ಶಿಕ್ಷಣ ಇಲಾಖೆಯಲ್ಲಿನ ಹಗರಣ ಎಲ್ಲವೂ ಮುಸ್ಲಿಮರ ವಿರುದ್ಧದ ಹೋರಾಟಗಳು ಹಿನ್ನಡೆಯಾಗುವಂತೆ ಮಾಡಿದವು. ಇದರ ಜೊತೆಗೆ ಬೆಂಗಳೂರು ಹಿಂದೆಂದೂ ಕಂಡರಿಯದ ಜಲಪ್ರಳಯಕ್ಕೆ ಸಿಕ್ಕಿ ಮುಳುಗಿತು. ಇಂತಹ ಸಮಯದಲ್ಲಿ ಸಾಧನೆಯ ಸಮಾವೇಶ ಮಾಡಿ ನಿಮಗೆ ತಾಕತ್ತಿದ್ದರೆ ತಡೆಯಿರಿ ಎಂದು ಕೀರಲು ಗಂಟಲಲ್ಲಿ ಕಿರುಚಿದ ಬೊಮ್ಮಯಿ ಮಾತಿಗೆ ಜಾಕ್ಸನ್ ಮತ್ತು ಪ್ರಭುದೇವನೆ ನಾಚಿಕೊಳ್ಳುವಂತೆ ಎಂಟಿಬಿ ಫ್ರೆಂಡ್ಸ್ ಕುಣಿದರಂತಲ್ಲಾ. ಇತ್ತ ಕಾಂಗೈನ ಕಿಡಿಗೇಡಿಗಳು ಬೊಮ್ಮಾಯಿಯ ಮಾತಿಗೆ ಬಿದ್ದುಬಿದ್ದು ನಗುತ್ತ ನಮ್ಮ ಸಿದ್ದರಾಮಯ್ಯನ ತಾಕತ್ತಿನ ಬಗ್ಗೆ ಮಾತಾಡ್ತೀರಾ, ನಿಮಗೆ ತಾಕತ್ತಿದ್ದರೆ ಸಂಪುಟ ವಿಸ್ತರಿಸಿ ಸರಿಯಾಗಿ ನಡೆಯಿರಿ ನೋಡೋಣ ಎಂದವಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ‘ನಿಮ್ಮ ಪಾರ್ಟಿಲಿ ಶೀಲವಂತ್ರೆ ಇಲ್ಲವಲ್ಲ ಸಾರ್?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...