HomeUncategorizedಬಿಜೆಪಿಯ ‘ಸಶಕ್ತ ಭಾರತ’ ಕೈಪಿಡಿ ಹೊರತು ಪ್ರಣಾಳಿಕೆಯಲ್ಲ

ಬಿಜೆಪಿಯ ‘ಸಶಕ್ತ ಭಾರತ’ ಕೈಪಿಡಿ ಹೊರತು ಪ್ರಣಾಳಿಕೆಯಲ್ಲ

- Advertisement -
- Advertisement -

| ಚೈತ್ರಿಕಾ ನಾಯ್ಕ ಹರ್ಗಿ |

ಯಾವಾಗಲೂ ಆಡಳಿತ ಪಕ್ಷದ ಪ್ರಣಾಳಿಕೆ ಹೇಗಿರಬೇಕೆಂದರೆ, ಈಗಾಗಲೇ ಐದು ವರ್ಷ ಮಾಡಿದ ಕೆಲಸವನ್ನು ಪರಿಚಯಿಸಿ, ಇಷ್ಟನ್ನು ಪೂರೈಸಿದ್ದೇವೆ, ಇಷ್ಟು ಬಾಕಿ ಉಳಿದಿದೆ, ಇದು ಮುಂದಿನ ಅವಧಿಗೆ ನಮ್ಮ ಯೋಜನೆಗಳು ಎಂಬುದಾಗಿ ಪ್ರಸ್ತುತ ಮತ್ತು ಭವಿಷ್ಯತ್ತಿನ ಯೋಜನೆಯ ಮುನ್ನೋಟವನ್ನು ಜನರ ಮುಂದಿಟ್ಟು ಓಟು ಕೇಳಬೇಕು. ಹಾಗೆಯೇ ಪ್ರಣಾಳಿಕೆಯಲ್ಲಿ ಮುಂದಿನ ಯೋಜನೆಯ ಹಂಚಿಕೆ ಕುರಿತು ನಿರ್ದಿಷ್ಟ ಅಂಕಿ-ಅಂಶಗಳನ್ನು ನಮೂದಿಸಬೇಕಾಗುತ್ತದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಎಲ್ಲವನ್ನೂ ಯಾದೃಚ್ಛಿಕವಾಗಿ ಹೇಳಲಾಗಿದೆ ಹೊರತು ಯಾವುದೂ ನಿಶ್ವಿತವಾಗಿ ಹೇಳಲಾಗಿಲ್ಲ.

ಬಿಜೆಪಿ ಸಂಕಲ್ಪ ಪತ್ರದಲ್ಲಿ ಪ್ರಸ್ತುತ ಪಡಿಸಿದ ಮುಖ್ಯಾಂಶಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯೊಂದಿಗೆ ಹೋಲಿಸಿ ನೋಡುವುದಾದರೆ,
ಸೈನ್ಯ
ಭಯೋತ್ಪಾದನೆ ಮೇಲೆ ಶೂನ್ಯ ಸಹಿಷ್ಣುತೆ ಎಂಬುದು ಯಾವತ್ತೂ ಭಾರತ ಪಾಲಿಸಿಕೊಂಡ ಬಂದ ನಡೆಯಾದರೂ, ಬಿಜೆಪಿ ಓಟು ಸೆಳೆಯಲು ಕಿರುಚಿ ಹೇಳಬೇಕಾದುದ್ದು ಅವರ ಅಗತ್ಯ. ಆದರೆ ವಾಸ್ತವ ಏನೆಂದರೆ 2014-18 ರ ಬಜೆಟ್ ನಲ್ಲಿ ಮಿಲಿಟರಿ ಬಜೆಟನ್ನು ಬಿಜೆಪಿ ಕಡಿತಗೊಳಿಸಿತ್ತು. ಹಿಂದಿನ ಯುಪಿಎ ಸರ್ಕಾರ ಜಿಡಿಪಿಯ 26% ವನ್ನು ಮಿಲಿಟರಿ ಆಧುನೀಕರಣಕ್ಕೆ ನೀಡಿದ್ದರೆ, ಬಿಜೆಪಿಯು ಶೇ. 18% ಕ್ಕೆ ಇದನ್ನು ಕಡಿತಗೊಳಿಸಿತ್ತು. ಭಯೋತ್ಪಾದನೆ ವಿರುದ್ಧ ವಾಸ್ತವದಲ್ಲಿ ಹೋರಾಡುವ ಸೈನಿಕರ ಸಂಬಳ ಮತ್ತು ಸುರಕ್ಷತೆಯ ವೆಚ್ಚವನ್ನು ಕಡಿತಗೊಳಿಸಿ ಭಯೋತ್ಪಾದನೆ ವಿರುದ್ಧ ಮಾತನಾಡುವುದು ಓಟು ಗಿಟ್ಟಿಸುವ ತಂತ್ರವಷ್ಟೆ. ಬಿಜೆಪಿ ಸಂಕಲ್ಪ ಪತ್ರದಲ್ಲೂ ಸೈನಿಕರ ವೇತನ, ಆಧುನಿಕ ಯುದ್ಧಾಸ್ತ್ರ, ಸೈನಿಕರ ಸ್ಥಾನಮಾನದ ಬಗ್ಗೆ ಯಾವುದೇ ನಿರ್ದಿಷ್ಟತೆ ಇಲ್ಲ. ಆದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದರ ಬಗ್ಗೆ ನಿರ್ದಿಷ್ಟವಾಗಿ ನಮೂದಿಸಿದೆ. BSF CRPF ಈ ಸಿಬ್ಬಂದಿಗಳು ಹುತಾತ್ಮರಾದಾಗ ಅವರಿಗೆ ಶಹೀದ್ ಗೌರವ ನೀಡುವುದು, ಸಂಬಳ ಹೆಚ್ಚಿಸುವುದು, ಆಧುನಿಕ ಯುದ್ಧಾಸ್ತ್ರ ನೀಡುವುದು ಇತ್ಯಾದಿ.

ಉದ್ಯೋಗ ಸೃಷ್ಟಿ
ಹಿಂದಿನ ಬಾರಿ ಪ್ರಣಾಳಿಕೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಬಿಜೆಪಿ ಈಬಾರಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಷ್ಟೆ ಹೇಳಿದೆ ಹೊರತು ಯಾವುದೇ ನಿರ್ದಿಷ್ಟ ಅಂಕಿಯನ್ನು ನಮೂದಿಸಿಲ್ಲ. ಇದು ಮುಂದೆ ಎದುರಾಗುವ ಪ್ರಶ್ನೆಯಿಂದ ನುಣುಚಿಕೊಳ್ಳುವ ತಂತ್ರ. ಡಿಮೊನಿಟೈಸೇಷನ್ ನಂತಹ ನಿರ್ಧಾರದಿಂದ 2018ರಲ್ಲಿ 11 ಮಿಲಿಯನ್ ಉದ್ಯೋಗ ನಾಶಕ್ಕೆ ಬಿಜೆಪಿ ಕಾರಣವಾಗಿತ್ತು. 45 ವರ್ಷಗಳ ಬಳಿಕ ನಿರುದ್ಯೋಗ ಪ್ರಮಾಣ ದರ ಅತ್ಯಂತ ಹೆಚ್ಚಾಗಿದ್ದು ಬಿಜೆಪಿ ಅಧಿಕಾರದಲ್ಲಿ. ಇಂತಹ ಜ್ವಲಂತ ಸಮಸ್ಯೆಗೆ ಪರಿಹಾರದ ಬಗ್ಗೆ ಸಂಕಲ್ಪ ಪತ್ರದಲ್ಲಿ ಯಾವುದೇ ನಿರ್ದಿಷ್ಟತೆ ಇಲ್ಲ. ಇನ್ನು ಯುಪಿಎ ಪ್ರಣಾಳಿಕೆ ನೋಡಿದರೆ ಸಾರ್ವಜನಿಕ ವಲಯದಲ್ಲಿ 24 ಲಕ್ಷ ಉದ್ಯೋಗ ಭರ್ತಿ ಮತ್ತು ಇದರ ಹೊರತಾಗಿ ಇತರೆ 10 ಲಕ್ಷ ಉದ್ಯೋಗ ಸೃಷ್ಟಿ ಎಂಬುದಾಗಿ ಹೇಳಿದೆ.

ಕೃಷಿ
25 ಲಕ್ಷ ಕೋಟಿ ಬಂಡವಾಳವನ್ನು ಕೃಷಿ ಕ್ಷೇತ್ರದಲ್ಲಿ ವಿನಿಯೋಗಿಸುತ್ತೇವೆ ಎಂದು ಬಿಜೆಪಿಯ ಸಂಕಲ್ಪ ಪತ್ರದಲ್ಲಿ ನಮೂದಿಲಸಲಾಗಿದೆ. ಬಿಜೆಪಿಯ 2014-2018 ಬಜೆಟ್ ನೋಡಿದರೆ ಕೃಷಿಗೆ 1.7 ಲಕ್ಷ ಕೋಟಿ ನೀಡಲಾಗಿತ್ತು. ಹೌದು ಕೃಷಿಕರು ಸಮಸ್ಯೆಯಲ್ಲಿದ್ದಾರೆ ಅವರ ಅಗತ್ಯತೆ ಪೂರೈಸಬೇಕು. ಆದರೆ ಇಷ್ಟು ಹಣ ಎಲ್ಲಿಂದ ಬರಬೇಕು ? ಹಾಗೆಯೇ ಯಾವುದೇ ಹೊಸ ಯೋಜನೆಯನ್ನು ಕೃಷಿಕರಿಗಾಗಿ ನೀಡಲಾಗಿಲ್ಲ. 2022 ರೈತರ ಆದಾಯ ದ್ವಿಗುಣಗೊಳಿಸುವುದು ಎಂಬುದು ಹಿಂದಿನ ಭರವಸೆಯಾಗಿದ್ದು ಈಗಲೂ ಅದನ್ನೇ ಹೇಳಲಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ರೈತರಿಗಾಗಿ ಪ್ರತ್ಯೇಕ ಬಜೆಟನ್ನು ನೀಡುತ್ತೇವೆ ಎಂದು ಹೇಳಿದೆ. ಬೆಳೆಗೆ ಉತ್ತಮ ಬೆಲೆ ನೀಡುವುದಾಗಿ ಹೇಳಿದೆ.

ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ಹೊಸ ವರಸೆ
2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಕನಸಿನಂತೆ 2047 ರಲ್ಲಿ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಅದಕ್ಕೆ ಭದ್ರ ಬುನಾದಿ ನಾವು ಹಾಕುತ್ತೇವೆ ಎಂದು ಮೋದಿ ಹೇಳಿದ್ದಾರೆ. ಇಲ್ಲಿ ಗುರಿ ಸಾಧನೆ ಕಾಲ ಮಿತಿ 5 ವರ್ಷಕ್ಕಿಂತ ಜಾಸ್ತಿ (ಸುಮಾರು 28 ವರ್ಷ) ಮುಂದೂಡಿ ಭಾವನಾತ್ಮಕವಾಗಿ ಮತದಾರರ ಹಾದಿ ತಪ್ಪಿಸಲಾಗುತ್ತಿದೆ.

ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನಿರ್ಮಾಣ
ದೇಶದ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತೇವೆ ಎಂಬುದಾಗಿ ಬಿಜೆಪಿ ಸಂಕಲ್ಪ ಪತ್ರದಲ್ಲಿ ಹೇಳಲಾಗಿದೆ. 2016 ರಲ್ಲಿ ದೇಶದಲ್ಲಿ 707 ಜಿಲ್ಲೆಗಳಿವೆ. 2017 ರಂತೆ ದೇಶದಲ್ಲಿ 460 ಮೆಡಿಕಲ್ ಕಾಲೇಜುಗಳಿದ್ದು 63,985 ವಿದ್ಯಾರ್ಥಿಗಳಿದ್ದರು. ವರ್ಷಕ್ಕೆ ಅಂದಾಜು 10,000 ಜಾಬ್ ಕೂಡ ವೈದ್ಯಕೀಯ ವಲಯದಲ್ಲಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಅಂದ ಮೇಲೆ 2024 ರ ಹೊತ್ತಿಗೆ ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿಸುವ ಅಗತ್ಯ ಇದೆಯೆ ಎಂಬ ಪ್ರಶ್ನೆ ಮೂಡುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಾಕಿ ಉಳಿದ ಶಿಕ್ಷಣ ಸಾಲದ ಬಡ್ಡಿಯನ್ನು ಮನ್ನಾ ಮಾಡುವುದು ಮತ್ತು ವಿದ್ಯಾರ್ಥಿ ಹಕ್ಕಿನ ಕಾಯಿದೆ, ಅರ್ಹ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ಒದಗಿಸುವುದಾಗಿ ತಿಳಿಸಿದೆ. ಇದಕ್ಕಿಂತ ಮುಖ್ಯವಾಗಿ, ವಿದ್ಯಾರ್ಥಿಗೆ ಉದ್ಯೋಗ ಸಿಗುವವರೆಗೆ ಶಿಕ್ಷಣ ಸಾಲದ ಮೇಲೆ ಬಡ್ಡಿ ವಿಧಿಸಲಾಗುವುದಿಲ್ಲ ಎಂಬುದು ಪ್ರಮುಖ ಅಂಶ.

ಸಂಕಲ್ಪ ಪತ್ರದಲ್ಲಿ ದೇಶದ ಆರ್ಥಿಕತೆಯನ್ನು 2032 ರ ಹೊತ್ತಿಗೆ ರೂ. 700 ಲಕ್ಷ ಕೋಟಿಗೆ ಏರಿಸುವುದರ ಬಗ್ಗೆ ಹೇಳಲಾಗಿದೆ. ಆದರೆ ಅದಕ್ಕೆ ಯಾವುದೇ ಕಾರ್ಯನೀತಿಯನ್ನು ತಿಳಿಸಿಲ್ಲ.
ಮುಖ್ಯವಾಗಿ ಉದ್ಯೋಗ ಸೃಷ್ಟಿ, ಜನಸಂಖ್ಯೆ ನಿಯಂತ್ರಣ, ಬಡತನ ನಿರ್ಮೂಲನೆ, ಮಾಬ್ ಲಿಂಚಿಂಗ್ ತಡೆ, ಪರಿಸರ, ಜಾಗತಿಕ ತಾಪಮಾನದ ನಿಯಂತ್ರಣಕ್ಕೆ ಯಾವುದೇ ಯೋಜನೆ ಮತ್ತು ಮುನ್ನೋಟವನ್ನು ಬಿಜೆಪಿ ಜನರ ಮುಂದಿಟ್ಟಿಲ್ಲ.

ಬದಲಾಗಿ, ಎಡಪಂಥೀಯ ವಿಚಾರ ಹತ್ತಿಕ್ಕುವುದು, 371 ವಿಧಿ ತೆಗೆದು ಹಾಕುವುದು, ರಾಮ ಮಂದಿರ ನಿರ್ಮಾಣ, ಶಬರಿ ಮಲೆ ಅಯ್ಯಪ್ಪ ದೇವಾಲಯ, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಎತ್ತುತ್ತಿರುವುದು ಬಿಜೆಪಿ ಮತದಾರರನ್ನು ಸೆಳೆಯುವ, ಮತದಾರರನ್ನು ಬೇರ್ಪಡಿಸಿ ಮತ್ತೆ ಅಧಿಕಾರಕ್ಕೆ ಬರುವ ತಂತ್ರವೇ ಹೊರತು, ಹಿಂದಿನ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಹುಸಿ ಘೋಷಣೆ ಈಗ ಸಂಪೂರ್ಣ ಮಾಯವಾಗಿದೆ.
ಕೊನೆಯ ಬಾರಿ ಹೇಳಿದ ಭರವಸೆಯನ್ನೆ ಈಗಲೂ ಹೇಳುತ್ತಿದ್ದಾರೆ. ಉದಾ- ಮಹಿಳಾ ಮೀಸಲಾತಿ. ಈ ಬಾರಿ ಬಿಜೆಪಿಗೆ ಬಹುಮತ ಇದ್ದಾಗ್ಯೂ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಿಲ್ಲ. ಮತ್ತೆ ಅದೇ ಹಳಸನ್ನು ಹೊಸ ಪಾತ್ರೆಯಲ್ಲಿ ಹೊತ್ತು ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...