Homeಅಂಕಣಗಳುಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ.

ಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ.

- Advertisement -
- Advertisement -

| ಕೆ.ಪಿ ಸುರೇಶ್ |

ಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ. ಬರೆದಿದ್ದು ನೋಡಿ ಶೀಟ್ ಎತ್ತಿದರೆ ಖಾಲಿ ಶೀಟ್!!

ಈ ದೇಶದ ಯಾವ ಸಮಸ್ಯೆಯನ್ನೂ ಬಿಡದೇ ಅದರ ಪರಿಹಾರಕ್ಕೆ ತನ್ನಲ್ಲಿ ಮೂಲಿಕೆ ಇದೆ ಎಂಬಂತೆ ಪ್ರಣಾಳಿಕೆಯ ಆರಂಭದಲ್ಲಿ ಹೇಳಲಾಗಿದೆ. ಕೆಲವು ವಿವರ ನೋಡಿ:
ರಕ್ಷಣಾ ವಿಷಯದಲ್ಲಿ ಸ್ವಾವಲಂಬಿ ಆಗಲು ಎಕೆ 203ನ್ನು ನಮ್ಮ ದೇಶದಲ್ಲೇ ತಯಾರು ಮಾಡುತ್ತಿದ್ದೇವೆ ಎಂಬ ಹೇಳಿಕೆ ಇದೆ. ಇದರ ಹಿಂದೆ ರಾಫೇಲ್ ಯವಾರದ ವ್ಯಂಗ್ಯ ಹಲ್ಲು ಕಿರಿದರೆ ಮೋದಿಯ ತಪ್ಪೆಂದು ಹೇಳಬೇಡಿ!! ಮಾತು ವೈಯ್ಯಾರವಾಗುವುದು ಹೀಗೆ.
ರೈತರಿಗೆ ಒಂದು ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಎನ್ನಲಾಗಿದೆ. ಅದರ ಜೊತೆಗೆ ‘ಅಸಲು ಕಟ್ಟಿದರೆ’ ಎಂಬ ಕುಂಟು ಪಂಕ್ತಿ..

2022ರ ಒಳಗೆ ಎಲ್ಲರಿಗೂ ಮನೆ, 2024ರ ಒಳಗೆ ಎಲ್ಲರಿಗೂ ನಲ್ಲಿ ನೀರು ಎಂಬ ಆಶ್ವಾಸನೆ ಇದೆ. ಇದೇ ಮೋದಿ ಸರ್ಕಾರ ಕುಡಿಯುವ ನೀರಿನ ಅನುದಾನಕ್ಕೆ ಕತ್ತರಿ ಹಾಕಿದ್ದು ಈ ಪ್ರಣಾಳಿಕೆಯಲ್ಲಿ ಇಲ್ಲ! ಮನೆ ಕಟ್ಟಿಸುವ ಪ್ರಗತಿ ಉತ್ತರದ ಭಾರತದ ರಾಜ್ಯಗಳಲ್ಲಿ ಶೇ.10ರಷ್ಟೂ ಪ್ರಗತಿಯಾಗಿಲ್ಲ ಎಂಬ ವರದಿ ಇತ್ತೀಚೆಗೆ ಬಂದಿತ್ತು. ಅದು ಈ ಪ್ರಣಾಳಿಕೆಯಲ್ಲಿ ಇಲ್ಲ!!

ಸಾವಯವ ಕೃಷಿಗೆ ಒತ್ತು ಎಂಬಲ್ಲಿ ಇಕೋ ಟೂರಿಸಂ ಮೂಲಕ ರೈತರ ಆದಾಯ ವೃದ್ಧಿಗೆ ಕ್ರಮ ಎಂಬ ವಾಕ್ಯ ಇದೆ. ಮಜಾ ಎಂದರೆ ಇದು ಹತ್ತು ವರ್ಷ ಹಿಂದಿನ ಕಾರ್ಯಕ್ರಮ. ಕರ್ನಾಟಕದ ಸಾವಯವ ಮಿಷನ್ ಮೂಲಕ ಇದನ್ನು ಜಾರಿ ಮಾಡುವ ಯತ್ನ ನಡೆದಿತ್ತು. ಮೋದಿ ಮತ್ತೆ ಯುಪಿಎ ಕಾರ್ಯಕ್ರಮವನ್ನು ಕದ್ದು ಹೆಸರು ಅಳಿಸಿ ಮಾರುವ ಯತ್ನ ಮುಂದುವರೆಸಿರುವುದಕ್ಕೆ ಇದು ಒಂದು ಉದಾಹರಣೆ.

ಪ್ರಣಾಳಿಕೆಯ ಆಷಾಡಭೂತಿತನ ಮುಖಕ್ಕೆ ರಾಚುವುದು ‘ಪಾರದರ್ಶಕ ಆರ್ಥಿಕತೆ ‘ ಎಂಬ ಸೆಕ್ಷನ್ನಿನಲ್ಲಿ. ಬೇನಾಮಿ ಆಸ್ತಿ ಮೇಲೆ ಪ್ರಹಾರ ಮಾಡುತ್ತೇವೆ, ಓಡಿ ಹೋಗಿರುವ ಆರ್ಥಿಕ ಅಪರಾಧಿಗಳನ್ನು ವಾಪಾಸು ತರಿಸುತ್ತೇವೆ’ ಎಂಬ ಆಶ್ವಾಸನೆ ಬೇರೆ ಇದೆ. ನೋಟು ರದ್ಧತಿ ಆದಾಗಲೇ ಐನೂರು ಕೋಟಿ ವೆಚ್ಚ ಮಾಡಿದ ರೆಡ್ಡಿಯಂಥವರು ದೇಶ ಬಿಟ್ಟು ಓಡಿ ಹೊಗುವ ಅಗತ್ಯವೇ ಇಲ್ಲದಷ್ಟು ನಿರಾಮಯವಾಗಿದ್ದಾರೆ. ಸಾಕಲ್ಲ!!

ಮುಖ್ಯತಃ ಗ್ರಾಮೀಣ, ಆದಿವಾಸಿ ಬದುಕು ಹಸನು ಮಾಡುವ ಕಾರ್ಯಕ್ರಮಗಳೆಲ್ಲಾ ಕೇವಲ ಹೇಳಿಕೆಯ ಮಟ್ಟದಲ್ಲಿವೆ. ತೋರಿಸಿರುವ ಗುರಿಯೂ ಪುಗಸಟ್ಟೆ ಕಿವಿಗೆ ಹೂವು.

ಅದೇ ಮೂಲ ಸಂರಚನೆ ಅಭಿವೃದ್ಧಿಗೆ 100 ಲಕ್ಷ ಕೋಟಿ ಮುಂದಿನ ವರ್ಷಗಳಲ್ಲಿ ಮೀಸಲಿಡಲಾಗುವುದು ಎನ್ನುತ್ತದೆ ಈ ಪ್ರಣಾಳಿಕೆ. ಕೋಟಿ ಕೋಟಿಗೆ ಎಷ್ಟು ಸೊನ್ನೆ ಅಂತ ಸ್ವತಃ ಮೋದಿಯವರಲ್ಲಿ ಕೇಳಬೇಕೇನೋ. ಭಾರತ ಸರ್ಕಾರದ ಆದಾಯ 25 ಲಕ್ಷ ಕೋಟಿ. ಅದರಲ್ಲೂ ಒಂದು ಭಾಗ ಸಾಲ!! ಅಂಥಾದ್ದರಲ್ಲಿ 100 ಲಕ್ಷ ಕೋಟಿ ಅಂತ ಹೇಳಲು ಯಮಗುಂಡಿಗೆ ಬೇಕು.

1.5 ಲಕ್ಷ ಆರೊಗ್ಯ ಕೇಂದ್ರಗಳನ್ನು ಮುಂದಿನ ಐದು ವರ್ಷಗಳಲ್ಲಿ ಸ್ಥಾಪಿಸಲಾಗುವುದು ಎನ್ನುವ ಈ ಪ್ರಣಾಳಿಕೆ ಈ ವರೆಗೆ ಕೇವಲ 17 ಸಾವಿರ ಇಂಥಾ ಕೇಂದ್ರಗಳನ್ನು ಸ್ಥಾಪಿಸಿರುವುದನ್ನೂ ದಾಖಲಿಸಿದೆ. ಅಂದರೆ ಈ ಟ್ರಾಕ್ ರೆಕಾರ್ಡ್ ಹೊಂದಿರುವ ಸರ್ಕಾರ ಇನ್ನು ಮುಂದೆ ಪ್ರತಿ ವರ್ಷ 30 ಸಾವಿರ ಇಂಥಾ ಕೇಂದ್ರ ಸ್ಥಾಪಿಸುವ ಭರವಸೆಯನ್ನು ನಾವು ನಂಬಬೇಕು.

ಭಾರತದಲ್ಲಿ ವರ್ಷಕ್ಕೆ 25 ಲಕ್ಷ ಜನ ಕ್ಷಯ ರೋಗಕ್ಕೆ ತುತ್ತಾಗಿ 3 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ಜಗತ್ತಿನಲ್ಲೇ ಇದು ಅತ್ಯಂತ ಹೆಚ್ಚು. ಈಗ ಪ್ರಣಾಳಿಕೆ 2015ರ ಒಳಗೆ ಕ್ಷಯರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ಹೇಳಿದೆ. ಹೇಗೆಂದು ಕೇಳುವಂತಿಲ್ಲ!!

ಯುಪಿಎ ಕಾರ್ಯಕ್ರಮವನ್ನು ಕಾಪಿಚೀಟಿ ಮಾಡುವ ಚಾಳಿ ಎಷ್ಟರ ಮಟ್ಟಿಗೆ ಎಂದರೆ ಶಿಕ್ಷಣದಲ್ಲಿ ಜ್ಞಾನ ಪ್ರಸರಣಕ್ಕೆ ಅನುವಾದ ಮಿಷನ್ ಒಂದನ್ನು ಸ್ಥಾಪಿಸಲಾಗುವುದು ಎಂದು ಈ ಪ್ರಣಾಳಿಕೆ ಹೇಳಿದೆ. ಮೂಲತಃ ಏನನ್ನೂ ಈ ಭಾಜಪ ಮಂದಿ ಓದಿರುವ ದಾಖಲೆ ಇಲ್ಲದ ಕಾರಣ ಇದು ಸ್ವಾಗತಾರ್ಹ. ಆದರೆ ಈ ಮಿಷನ್ ಈಗಾಗಲೇ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿ ವರ್ಷಗಳೇ ಕಳೆದಿವೆ.

ಉದ್ಯೋಗ ಸೃಷ್ಟಿ ಬಗ್ಗೆ ಎರಡೇ ವಾಕ್ಯದಲ್ಲಿ ಕೌಶಲ್ಯ ವೃದ್ಧಿ ಬಗ್ಗೆ ನಿವಾಳಿಸಿ ಉದ್ಯಮಪತಿಗಳಿಗೆ ಸಾಲ ಯೋಜನೆ ವಿಸ್ತರಿಸಲಾಗುವುದು ಎನ್ನುತ್ತೆ ಈ ಪ್ರಣಾಳಿಕೆ. ಅದಕ್ಕೆ ಅಡಿಗೆರೆಯಾಗಿ ಮುದ್ರಾ ಯೋಜನೆಯಲ್ಲಿ 17 ಕೋಟಿ ಮಂದಿ ಸಾಲ ಪಡೆದಿದ್ದಾರೆ ಎನ್ನುತ್ತೆ. ಇದೇ ರೀತಿ ಮುಂದುವರಿದರೆ ಇನ್ನೈದು ವರ್ಷದಲ್ಲಿ ನೂರು ಕೋಟಿ ಮಂದಿ ಉದ್ಯಮಪತಿಗಳಾಗುವುದು ಖಚಿತ. ಅಲ್ಲಿಗೆ ಬಡತನ ನಿರ್ಮೂಲನವಾದಂತೆ.

ಜನಕಲ್ಯಾಣದ ಕಾಳಜಿ ಕುರಿತಂತೆ ಮೋದಿಯ ಅಸೀಮ ಉಡಾಫೆ ಕಾಣಿಸುವುದು ಅಪೌಷ್ಟಿಕತೆಯ ನಿವಾರಣೆಯ ಘೋಷಣೆಯಲ್ಲಿ. ಈ ದೇಶದ ಅರ್ಧಕ್ಕರ್ಧ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕಾಲಕಾಲದ ಅಧ್ಯಯನಗಳು ಹೇಳುತ್ತಲೇ ಬಂದಿವೆ. ಈ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಇರ ಪ್ರಮಾಣವನ್ನು ಶೇ.10ರಷ್ಟು ಇಳಿಸಲಾಗುವುದು ಎಂಬ ಬರೋಬ್ಬರಿ ಹೇಳಿಕೆ ಇದೆ. ಇದರಿಂದಾಚೆ ಮಾತಾಡಲು ಏನೂ ಇಲ್ಲ!!

ರಾಮಮಂದಿರದಿಂದ ಹಿಡಿದು ನೂರಾರು ‘ಕಟ್ಟುವ ಮಾಡುವ’ ಮಾತುಗಳಿವೆ. ಇದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳುವ ಪ್ರಮೇಯ ಇಲ್ಲ ಅನ್ನಿಸುತ್ತೆ . ಯಾಕೆಂದರೆ ಸ್ವತಃ ಭಾಜಪಕ್ಕೇ ಈ ಬಗ್ಗೆ ನಂಬಿಕೆ ಇದ್ದಂತಿಲ್ಲ!!
ಇಡೀ ಪ್ರಣಾಳಿಕೆಯ ಕಳಶಪ್ರಾಯ ವಾಕ್ಯವೆಂದರೆ ಭ್ರಷ್ಟಾಚಾರ ಮುಕ್ತ ಭಾರತ ಎಂಬ ವಾಕ್ಯ!! ಕರ್ನಾಟಕದ ಆಪರೇಷನ್ ಕಮಲ, ಪಂಕಜಾ ಮುಂದೆಯವರ ಹಗರಣಗಳೆಲ್ಲಾ ಇದರಡಿ ಬರುವುದಿಲ್ಲ!!

ಗಮನಿಸಬೇಕಾದ್ದು ಈ ಪ್ರಣಾಳಿಕೆಯ ಒಳ ವಿವರಗಳನ್ನಲ್ಲ. ಪ್ರಣಾಲಿಕೆಯ ಮುಖ ಪುಟವನ್ನು ಗಮನಿಸಿದರೆ ಭಾಜಪ ತಲುಪಿರುವ ರಸಾತಳ ಗೊತ್ತಾಗುತ್ತದೆ. ಗಡದ್ದಾಗಿ ಪೋಸು ಕೊಟ್ಟಿರುವ ಮೋದಿ ಬಿಟ್ಟರೆ ಇನ್ನೇನು ಇಲ್ಲ! ಕಾಮ್ ಚೋರ್ ಪಕ್ಷವೊಂದು ಢಾಳಾಗಿ ಸಾಧನೆಯ ಸುಳ್ಳುಗಳನ್ನು ಕಣ್ಣು ಕೋರೈಸುವಂತೆ ಬಿತ್ತರಿಸುತ್ತಾ ಇರುವುದೇ ತನ್ನ ಕುಸಿದ ಆತ್ಮವಿಶ್ವಾಸದ ಕುರುಹು. ಈ ಪ್ರಣಾಳಿಕೆ ಅದರ ತಪ್ಪೊಪ್ಪಿಗೆಯಂತೆ ಇದೆ.

ಈ ಪ್ರಣಾಳಿಕೆಯನ್ನು ಹಾಳೆಯ ಎರಡೂ ಬದಿ ಮುದ್ರಿಸಿರುವ ಬಗ್ಗೆ ನನ್ನ ಆಕ್ಷೇಪ ಇದೆ. ಒಂದೇ ಪುಟ ಮುದ್ರಿಸಿದ್ದರೆ ನೋಟ್ ಬುಕ್ಕಾಗಿ ಬಳಸಬಹುದಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....