Homeಅಂಕಣಗಳುಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ.

ಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ.

- Advertisement -
- Advertisement -

| ಕೆ.ಪಿ ಸುರೇಶ್ |

ಭಾಜಪದ ಪ್ರಣಾಳಿಕೆ ನೋಡಿದರೆ ಮ್ಯಾಜಿಕ್ ಸ್ಲೇಟ್ ನೆನಪಾಗುತ್ತೆ. ಬರೆದಿದ್ದು ನೋಡಿ ಶೀಟ್ ಎತ್ತಿದರೆ ಖಾಲಿ ಶೀಟ್!!

ಈ ದೇಶದ ಯಾವ ಸಮಸ್ಯೆಯನ್ನೂ ಬಿಡದೇ ಅದರ ಪರಿಹಾರಕ್ಕೆ ತನ್ನಲ್ಲಿ ಮೂಲಿಕೆ ಇದೆ ಎಂಬಂತೆ ಪ್ರಣಾಳಿಕೆಯ ಆರಂಭದಲ್ಲಿ ಹೇಳಲಾಗಿದೆ. ಕೆಲವು ವಿವರ ನೋಡಿ:
ರಕ್ಷಣಾ ವಿಷಯದಲ್ಲಿ ಸ್ವಾವಲಂಬಿ ಆಗಲು ಎಕೆ 203ನ್ನು ನಮ್ಮ ದೇಶದಲ್ಲೇ ತಯಾರು ಮಾಡುತ್ತಿದ್ದೇವೆ ಎಂಬ ಹೇಳಿಕೆ ಇದೆ. ಇದರ ಹಿಂದೆ ರಾಫೇಲ್ ಯವಾರದ ವ್ಯಂಗ್ಯ ಹಲ್ಲು ಕಿರಿದರೆ ಮೋದಿಯ ತಪ್ಪೆಂದು ಹೇಳಬೇಡಿ!! ಮಾತು ವೈಯ್ಯಾರವಾಗುವುದು ಹೀಗೆ.
ರೈತರಿಗೆ ಒಂದು ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ಎನ್ನಲಾಗಿದೆ. ಅದರ ಜೊತೆಗೆ ‘ಅಸಲು ಕಟ್ಟಿದರೆ’ ಎಂಬ ಕುಂಟು ಪಂಕ್ತಿ..

2022ರ ಒಳಗೆ ಎಲ್ಲರಿಗೂ ಮನೆ, 2024ರ ಒಳಗೆ ಎಲ್ಲರಿಗೂ ನಲ್ಲಿ ನೀರು ಎಂಬ ಆಶ್ವಾಸನೆ ಇದೆ. ಇದೇ ಮೋದಿ ಸರ್ಕಾರ ಕುಡಿಯುವ ನೀರಿನ ಅನುದಾನಕ್ಕೆ ಕತ್ತರಿ ಹಾಕಿದ್ದು ಈ ಪ್ರಣಾಳಿಕೆಯಲ್ಲಿ ಇಲ್ಲ! ಮನೆ ಕಟ್ಟಿಸುವ ಪ್ರಗತಿ ಉತ್ತರದ ಭಾರತದ ರಾಜ್ಯಗಳಲ್ಲಿ ಶೇ.10ರಷ್ಟೂ ಪ್ರಗತಿಯಾಗಿಲ್ಲ ಎಂಬ ವರದಿ ಇತ್ತೀಚೆಗೆ ಬಂದಿತ್ತು. ಅದು ಈ ಪ್ರಣಾಳಿಕೆಯಲ್ಲಿ ಇಲ್ಲ!!

ಸಾವಯವ ಕೃಷಿಗೆ ಒತ್ತು ಎಂಬಲ್ಲಿ ಇಕೋ ಟೂರಿಸಂ ಮೂಲಕ ರೈತರ ಆದಾಯ ವೃದ್ಧಿಗೆ ಕ್ರಮ ಎಂಬ ವಾಕ್ಯ ಇದೆ. ಮಜಾ ಎಂದರೆ ಇದು ಹತ್ತು ವರ್ಷ ಹಿಂದಿನ ಕಾರ್ಯಕ್ರಮ. ಕರ್ನಾಟಕದ ಸಾವಯವ ಮಿಷನ್ ಮೂಲಕ ಇದನ್ನು ಜಾರಿ ಮಾಡುವ ಯತ್ನ ನಡೆದಿತ್ತು. ಮೋದಿ ಮತ್ತೆ ಯುಪಿಎ ಕಾರ್ಯಕ್ರಮವನ್ನು ಕದ್ದು ಹೆಸರು ಅಳಿಸಿ ಮಾರುವ ಯತ್ನ ಮುಂದುವರೆಸಿರುವುದಕ್ಕೆ ಇದು ಒಂದು ಉದಾಹರಣೆ.

ಪ್ರಣಾಳಿಕೆಯ ಆಷಾಡಭೂತಿತನ ಮುಖಕ್ಕೆ ರಾಚುವುದು ‘ಪಾರದರ್ಶಕ ಆರ್ಥಿಕತೆ ‘ ಎಂಬ ಸೆಕ್ಷನ್ನಿನಲ್ಲಿ. ಬೇನಾಮಿ ಆಸ್ತಿ ಮೇಲೆ ಪ್ರಹಾರ ಮಾಡುತ್ತೇವೆ, ಓಡಿ ಹೋಗಿರುವ ಆರ್ಥಿಕ ಅಪರಾಧಿಗಳನ್ನು ವಾಪಾಸು ತರಿಸುತ್ತೇವೆ’ ಎಂಬ ಆಶ್ವಾಸನೆ ಬೇರೆ ಇದೆ. ನೋಟು ರದ್ಧತಿ ಆದಾಗಲೇ ಐನೂರು ಕೋಟಿ ವೆಚ್ಚ ಮಾಡಿದ ರೆಡ್ಡಿಯಂಥವರು ದೇಶ ಬಿಟ್ಟು ಓಡಿ ಹೊಗುವ ಅಗತ್ಯವೇ ಇಲ್ಲದಷ್ಟು ನಿರಾಮಯವಾಗಿದ್ದಾರೆ. ಸಾಕಲ್ಲ!!

ಮುಖ್ಯತಃ ಗ್ರಾಮೀಣ, ಆದಿವಾಸಿ ಬದುಕು ಹಸನು ಮಾಡುವ ಕಾರ್ಯಕ್ರಮಗಳೆಲ್ಲಾ ಕೇವಲ ಹೇಳಿಕೆಯ ಮಟ್ಟದಲ್ಲಿವೆ. ತೋರಿಸಿರುವ ಗುರಿಯೂ ಪುಗಸಟ್ಟೆ ಕಿವಿಗೆ ಹೂವು.

ಅದೇ ಮೂಲ ಸಂರಚನೆ ಅಭಿವೃದ್ಧಿಗೆ 100 ಲಕ್ಷ ಕೋಟಿ ಮುಂದಿನ ವರ್ಷಗಳಲ್ಲಿ ಮೀಸಲಿಡಲಾಗುವುದು ಎನ್ನುತ್ತದೆ ಈ ಪ್ರಣಾಳಿಕೆ. ಕೋಟಿ ಕೋಟಿಗೆ ಎಷ್ಟು ಸೊನ್ನೆ ಅಂತ ಸ್ವತಃ ಮೋದಿಯವರಲ್ಲಿ ಕೇಳಬೇಕೇನೋ. ಭಾರತ ಸರ್ಕಾರದ ಆದಾಯ 25 ಲಕ್ಷ ಕೋಟಿ. ಅದರಲ್ಲೂ ಒಂದು ಭಾಗ ಸಾಲ!! ಅಂಥಾದ್ದರಲ್ಲಿ 100 ಲಕ್ಷ ಕೋಟಿ ಅಂತ ಹೇಳಲು ಯಮಗುಂಡಿಗೆ ಬೇಕು.

1.5 ಲಕ್ಷ ಆರೊಗ್ಯ ಕೇಂದ್ರಗಳನ್ನು ಮುಂದಿನ ಐದು ವರ್ಷಗಳಲ್ಲಿ ಸ್ಥಾಪಿಸಲಾಗುವುದು ಎನ್ನುವ ಈ ಪ್ರಣಾಳಿಕೆ ಈ ವರೆಗೆ ಕೇವಲ 17 ಸಾವಿರ ಇಂಥಾ ಕೇಂದ್ರಗಳನ್ನು ಸ್ಥಾಪಿಸಿರುವುದನ್ನೂ ದಾಖಲಿಸಿದೆ. ಅಂದರೆ ಈ ಟ್ರಾಕ್ ರೆಕಾರ್ಡ್ ಹೊಂದಿರುವ ಸರ್ಕಾರ ಇನ್ನು ಮುಂದೆ ಪ್ರತಿ ವರ್ಷ 30 ಸಾವಿರ ಇಂಥಾ ಕೇಂದ್ರ ಸ್ಥಾಪಿಸುವ ಭರವಸೆಯನ್ನು ನಾವು ನಂಬಬೇಕು.

ಭಾರತದಲ್ಲಿ ವರ್ಷಕ್ಕೆ 25 ಲಕ್ಷ ಜನ ಕ್ಷಯ ರೋಗಕ್ಕೆ ತುತ್ತಾಗಿ 3 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ಜಗತ್ತಿನಲ್ಲೇ ಇದು ಅತ್ಯಂತ ಹೆಚ್ಚು. ಈಗ ಪ್ರಣಾಳಿಕೆ 2015ರ ಒಳಗೆ ಕ್ಷಯರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ಹೇಳಿದೆ. ಹೇಗೆಂದು ಕೇಳುವಂತಿಲ್ಲ!!

ಯುಪಿಎ ಕಾರ್ಯಕ್ರಮವನ್ನು ಕಾಪಿಚೀಟಿ ಮಾಡುವ ಚಾಳಿ ಎಷ್ಟರ ಮಟ್ಟಿಗೆ ಎಂದರೆ ಶಿಕ್ಷಣದಲ್ಲಿ ಜ್ಞಾನ ಪ್ರಸರಣಕ್ಕೆ ಅನುವಾದ ಮಿಷನ್ ಒಂದನ್ನು ಸ್ಥಾಪಿಸಲಾಗುವುದು ಎಂದು ಈ ಪ್ರಣಾಳಿಕೆ ಹೇಳಿದೆ. ಮೂಲತಃ ಏನನ್ನೂ ಈ ಭಾಜಪ ಮಂದಿ ಓದಿರುವ ದಾಖಲೆ ಇಲ್ಲದ ಕಾರಣ ಇದು ಸ್ವಾಗತಾರ್ಹ. ಆದರೆ ಈ ಮಿಷನ್ ಈಗಾಗಲೇ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿ ವರ್ಷಗಳೇ ಕಳೆದಿವೆ.

ಉದ್ಯೋಗ ಸೃಷ್ಟಿ ಬಗ್ಗೆ ಎರಡೇ ವಾಕ್ಯದಲ್ಲಿ ಕೌಶಲ್ಯ ವೃದ್ಧಿ ಬಗ್ಗೆ ನಿವಾಳಿಸಿ ಉದ್ಯಮಪತಿಗಳಿಗೆ ಸಾಲ ಯೋಜನೆ ವಿಸ್ತರಿಸಲಾಗುವುದು ಎನ್ನುತ್ತೆ ಈ ಪ್ರಣಾಳಿಕೆ. ಅದಕ್ಕೆ ಅಡಿಗೆರೆಯಾಗಿ ಮುದ್ರಾ ಯೋಜನೆಯಲ್ಲಿ 17 ಕೋಟಿ ಮಂದಿ ಸಾಲ ಪಡೆದಿದ್ದಾರೆ ಎನ್ನುತ್ತೆ. ಇದೇ ರೀತಿ ಮುಂದುವರಿದರೆ ಇನ್ನೈದು ವರ್ಷದಲ್ಲಿ ನೂರು ಕೋಟಿ ಮಂದಿ ಉದ್ಯಮಪತಿಗಳಾಗುವುದು ಖಚಿತ. ಅಲ್ಲಿಗೆ ಬಡತನ ನಿರ್ಮೂಲನವಾದಂತೆ.

ಜನಕಲ್ಯಾಣದ ಕಾಳಜಿ ಕುರಿತಂತೆ ಮೋದಿಯ ಅಸೀಮ ಉಡಾಫೆ ಕಾಣಿಸುವುದು ಅಪೌಷ್ಟಿಕತೆಯ ನಿವಾರಣೆಯ ಘೋಷಣೆಯಲ್ಲಿ. ಈ ದೇಶದ ಅರ್ಧಕ್ಕರ್ಧ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕಾಲಕಾಲದ ಅಧ್ಯಯನಗಳು ಹೇಳುತ್ತಲೇ ಬಂದಿವೆ. ಈ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಇರ ಪ್ರಮಾಣವನ್ನು ಶೇ.10ರಷ್ಟು ಇಳಿಸಲಾಗುವುದು ಎಂಬ ಬರೋಬ್ಬರಿ ಹೇಳಿಕೆ ಇದೆ. ಇದರಿಂದಾಚೆ ಮಾತಾಡಲು ಏನೂ ಇಲ್ಲ!!

ರಾಮಮಂದಿರದಿಂದ ಹಿಡಿದು ನೂರಾರು ‘ಕಟ್ಟುವ ಮಾಡುವ’ ಮಾತುಗಳಿವೆ. ಇದನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳುವ ಪ್ರಮೇಯ ಇಲ್ಲ ಅನ್ನಿಸುತ್ತೆ . ಯಾಕೆಂದರೆ ಸ್ವತಃ ಭಾಜಪಕ್ಕೇ ಈ ಬಗ್ಗೆ ನಂಬಿಕೆ ಇದ್ದಂತಿಲ್ಲ!!
ಇಡೀ ಪ್ರಣಾಳಿಕೆಯ ಕಳಶಪ್ರಾಯ ವಾಕ್ಯವೆಂದರೆ ಭ್ರಷ್ಟಾಚಾರ ಮುಕ್ತ ಭಾರತ ಎಂಬ ವಾಕ್ಯ!! ಕರ್ನಾಟಕದ ಆಪರೇಷನ್ ಕಮಲ, ಪಂಕಜಾ ಮುಂದೆಯವರ ಹಗರಣಗಳೆಲ್ಲಾ ಇದರಡಿ ಬರುವುದಿಲ್ಲ!!

ಗಮನಿಸಬೇಕಾದ್ದು ಈ ಪ್ರಣಾಳಿಕೆಯ ಒಳ ವಿವರಗಳನ್ನಲ್ಲ. ಪ್ರಣಾಲಿಕೆಯ ಮುಖ ಪುಟವನ್ನು ಗಮನಿಸಿದರೆ ಭಾಜಪ ತಲುಪಿರುವ ರಸಾತಳ ಗೊತ್ತಾಗುತ್ತದೆ. ಗಡದ್ದಾಗಿ ಪೋಸು ಕೊಟ್ಟಿರುವ ಮೋದಿ ಬಿಟ್ಟರೆ ಇನ್ನೇನು ಇಲ್ಲ! ಕಾಮ್ ಚೋರ್ ಪಕ್ಷವೊಂದು ಢಾಳಾಗಿ ಸಾಧನೆಯ ಸುಳ್ಳುಗಳನ್ನು ಕಣ್ಣು ಕೋರೈಸುವಂತೆ ಬಿತ್ತರಿಸುತ್ತಾ ಇರುವುದೇ ತನ್ನ ಕುಸಿದ ಆತ್ಮವಿಶ್ವಾಸದ ಕುರುಹು. ಈ ಪ್ರಣಾಳಿಕೆ ಅದರ ತಪ್ಪೊಪ್ಪಿಗೆಯಂತೆ ಇದೆ.

ಈ ಪ್ರಣಾಳಿಕೆಯನ್ನು ಹಾಳೆಯ ಎರಡೂ ಬದಿ ಮುದ್ರಿಸಿರುವ ಬಗ್ಗೆ ನನ್ನ ಆಕ್ಷೇಪ ಇದೆ. ಒಂದೇ ಪುಟ ಮುದ್ರಿಸಿದ್ದರೆ ನೋಟ್ ಬುಕ್ಕಾಗಿ ಬಳಸಬಹುದಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...