HomeUncategorizedಬಿಜೆಪಿಯ ‘ಸಶಕ್ತ ಭಾರತ’ ಕೈಪಿಡಿ ಹೊರತು ಪ್ರಣಾಳಿಕೆಯಲ್ಲ

ಬಿಜೆಪಿಯ ‘ಸಶಕ್ತ ಭಾರತ’ ಕೈಪಿಡಿ ಹೊರತು ಪ್ರಣಾಳಿಕೆಯಲ್ಲ

- Advertisement -
- Advertisement -

| ಚೈತ್ರಿಕಾ ನಾಯ್ಕ ಹರ್ಗಿ |

ಯಾವಾಗಲೂ ಆಡಳಿತ ಪಕ್ಷದ ಪ್ರಣಾಳಿಕೆ ಹೇಗಿರಬೇಕೆಂದರೆ, ಈಗಾಗಲೇ ಐದು ವರ್ಷ ಮಾಡಿದ ಕೆಲಸವನ್ನು ಪರಿಚಯಿಸಿ, ಇಷ್ಟನ್ನು ಪೂರೈಸಿದ್ದೇವೆ, ಇಷ್ಟು ಬಾಕಿ ಉಳಿದಿದೆ, ಇದು ಮುಂದಿನ ಅವಧಿಗೆ ನಮ್ಮ ಯೋಜನೆಗಳು ಎಂಬುದಾಗಿ ಪ್ರಸ್ತುತ ಮತ್ತು ಭವಿಷ್ಯತ್ತಿನ ಯೋಜನೆಯ ಮುನ್ನೋಟವನ್ನು ಜನರ ಮುಂದಿಟ್ಟು ಓಟು ಕೇಳಬೇಕು. ಹಾಗೆಯೇ ಪ್ರಣಾಳಿಕೆಯಲ್ಲಿ ಮುಂದಿನ ಯೋಜನೆಯ ಹಂಚಿಕೆ ಕುರಿತು ನಿರ್ದಿಷ್ಟ ಅಂಕಿ-ಅಂಶಗಳನ್ನು ನಮೂದಿಸಬೇಕಾಗುತ್ತದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಎಲ್ಲವನ್ನೂ ಯಾದೃಚ್ಛಿಕವಾಗಿ ಹೇಳಲಾಗಿದೆ ಹೊರತು ಯಾವುದೂ ನಿಶ್ವಿತವಾಗಿ ಹೇಳಲಾಗಿಲ್ಲ.

ಬಿಜೆಪಿ ಸಂಕಲ್ಪ ಪತ್ರದಲ್ಲಿ ಪ್ರಸ್ತುತ ಪಡಿಸಿದ ಮುಖ್ಯಾಂಶಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯೊಂದಿಗೆ ಹೋಲಿಸಿ ನೋಡುವುದಾದರೆ,
ಸೈನ್ಯ
ಭಯೋತ್ಪಾದನೆ ಮೇಲೆ ಶೂನ್ಯ ಸಹಿಷ್ಣುತೆ ಎಂಬುದು ಯಾವತ್ತೂ ಭಾರತ ಪಾಲಿಸಿಕೊಂಡ ಬಂದ ನಡೆಯಾದರೂ, ಬಿಜೆಪಿ ಓಟು ಸೆಳೆಯಲು ಕಿರುಚಿ ಹೇಳಬೇಕಾದುದ್ದು ಅವರ ಅಗತ್ಯ. ಆದರೆ ವಾಸ್ತವ ಏನೆಂದರೆ 2014-18 ರ ಬಜೆಟ್ ನಲ್ಲಿ ಮಿಲಿಟರಿ ಬಜೆಟನ್ನು ಬಿಜೆಪಿ ಕಡಿತಗೊಳಿಸಿತ್ತು. ಹಿಂದಿನ ಯುಪಿಎ ಸರ್ಕಾರ ಜಿಡಿಪಿಯ 26% ವನ್ನು ಮಿಲಿಟರಿ ಆಧುನೀಕರಣಕ್ಕೆ ನೀಡಿದ್ದರೆ, ಬಿಜೆಪಿಯು ಶೇ. 18% ಕ್ಕೆ ಇದನ್ನು ಕಡಿತಗೊಳಿಸಿತ್ತು. ಭಯೋತ್ಪಾದನೆ ವಿರುದ್ಧ ವಾಸ್ತವದಲ್ಲಿ ಹೋರಾಡುವ ಸೈನಿಕರ ಸಂಬಳ ಮತ್ತು ಸುರಕ್ಷತೆಯ ವೆಚ್ಚವನ್ನು ಕಡಿತಗೊಳಿಸಿ ಭಯೋತ್ಪಾದನೆ ವಿರುದ್ಧ ಮಾತನಾಡುವುದು ಓಟು ಗಿಟ್ಟಿಸುವ ತಂತ್ರವಷ್ಟೆ. ಬಿಜೆಪಿ ಸಂಕಲ್ಪ ಪತ್ರದಲ್ಲೂ ಸೈನಿಕರ ವೇತನ, ಆಧುನಿಕ ಯುದ್ಧಾಸ್ತ್ರ, ಸೈನಿಕರ ಸ್ಥಾನಮಾನದ ಬಗ್ಗೆ ಯಾವುದೇ ನಿರ್ದಿಷ್ಟತೆ ಇಲ್ಲ. ಆದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದರ ಬಗ್ಗೆ ನಿರ್ದಿಷ್ಟವಾಗಿ ನಮೂದಿಸಿದೆ. BSF CRPF ಈ ಸಿಬ್ಬಂದಿಗಳು ಹುತಾತ್ಮರಾದಾಗ ಅವರಿಗೆ ಶಹೀದ್ ಗೌರವ ನೀಡುವುದು, ಸಂಬಳ ಹೆಚ್ಚಿಸುವುದು, ಆಧುನಿಕ ಯುದ್ಧಾಸ್ತ್ರ ನೀಡುವುದು ಇತ್ಯಾದಿ.

ಉದ್ಯೋಗ ಸೃಷ್ಟಿ
ಹಿಂದಿನ ಬಾರಿ ಪ್ರಣಾಳಿಕೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಬಿಜೆಪಿ ಈಬಾರಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಷ್ಟೆ ಹೇಳಿದೆ ಹೊರತು ಯಾವುದೇ ನಿರ್ದಿಷ್ಟ ಅಂಕಿಯನ್ನು ನಮೂದಿಸಿಲ್ಲ. ಇದು ಮುಂದೆ ಎದುರಾಗುವ ಪ್ರಶ್ನೆಯಿಂದ ನುಣುಚಿಕೊಳ್ಳುವ ತಂತ್ರ. ಡಿಮೊನಿಟೈಸೇಷನ್ ನಂತಹ ನಿರ್ಧಾರದಿಂದ 2018ರಲ್ಲಿ 11 ಮಿಲಿಯನ್ ಉದ್ಯೋಗ ನಾಶಕ್ಕೆ ಬಿಜೆಪಿ ಕಾರಣವಾಗಿತ್ತು. 45 ವರ್ಷಗಳ ಬಳಿಕ ನಿರುದ್ಯೋಗ ಪ್ರಮಾಣ ದರ ಅತ್ಯಂತ ಹೆಚ್ಚಾಗಿದ್ದು ಬಿಜೆಪಿ ಅಧಿಕಾರದಲ್ಲಿ. ಇಂತಹ ಜ್ವಲಂತ ಸಮಸ್ಯೆಗೆ ಪರಿಹಾರದ ಬಗ್ಗೆ ಸಂಕಲ್ಪ ಪತ್ರದಲ್ಲಿ ಯಾವುದೇ ನಿರ್ದಿಷ್ಟತೆ ಇಲ್ಲ. ಇನ್ನು ಯುಪಿಎ ಪ್ರಣಾಳಿಕೆ ನೋಡಿದರೆ ಸಾರ್ವಜನಿಕ ವಲಯದಲ್ಲಿ 24 ಲಕ್ಷ ಉದ್ಯೋಗ ಭರ್ತಿ ಮತ್ತು ಇದರ ಹೊರತಾಗಿ ಇತರೆ 10 ಲಕ್ಷ ಉದ್ಯೋಗ ಸೃಷ್ಟಿ ಎಂಬುದಾಗಿ ಹೇಳಿದೆ.

ಕೃಷಿ
25 ಲಕ್ಷ ಕೋಟಿ ಬಂಡವಾಳವನ್ನು ಕೃಷಿ ಕ್ಷೇತ್ರದಲ್ಲಿ ವಿನಿಯೋಗಿಸುತ್ತೇವೆ ಎಂದು ಬಿಜೆಪಿಯ ಸಂಕಲ್ಪ ಪತ್ರದಲ್ಲಿ ನಮೂದಿಲಸಲಾಗಿದೆ. ಬಿಜೆಪಿಯ 2014-2018 ಬಜೆಟ್ ನೋಡಿದರೆ ಕೃಷಿಗೆ 1.7 ಲಕ್ಷ ಕೋಟಿ ನೀಡಲಾಗಿತ್ತು. ಹೌದು ಕೃಷಿಕರು ಸಮಸ್ಯೆಯಲ್ಲಿದ್ದಾರೆ ಅವರ ಅಗತ್ಯತೆ ಪೂರೈಸಬೇಕು. ಆದರೆ ಇಷ್ಟು ಹಣ ಎಲ್ಲಿಂದ ಬರಬೇಕು ? ಹಾಗೆಯೇ ಯಾವುದೇ ಹೊಸ ಯೋಜನೆಯನ್ನು ಕೃಷಿಕರಿಗಾಗಿ ನೀಡಲಾಗಿಲ್ಲ. 2022 ರೈತರ ಆದಾಯ ದ್ವಿಗುಣಗೊಳಿಸುವುದು ಎಂಬುದು ಹಿಂದಿನ ಭರವಸೆಯಾಗಿದ್ದು ಈಗಲೂ ಅದನ್ನೇ ಹೇಳಲಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ರೈತರಿಗಾಗಿ ಪ್ರತ್ಯೇಕ ಬಜೆಟನ್ನು ನೀಡುತ್ತೇವೆ ಎಂದು ಹೇಳಿದೆ. ಬೆಳೆಗೆ ಉತ್ತಮ ಬೆಲೆ ನೀಡುವುದಾಗಿ ಹೇಳಿದೆ.

ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ಹೊಸ ವರಸೆ
2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಕನಸಿನಂತೆ 2047 ರಲ್ಲಿ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಅದಕ್ಕೆ ಭದ್ರ ಬುನಾದಿ ನಾವು ಹಾಕುತ್ತೇವೆ ಎಂದು ಮೋದಿ ಹೇಳಿದ್ದಾರೆ. ಇಲ್ಲಿ ಗುರಿ ಸಾಧನೆ ಕಾಲ ಮಿತಿ 5 ವರ್ಷಕ್ಕಿಂತ ಜಾಸ್ತಿ (ಸುಮಾರು 28 ವರ್ಷ) ಮುಂದೂಡಿ ಭಾವನಾತ್ಮಕವಾಗಿ ಮತದಾರರ ಹಾದಿ ತಪ್ಪಿಸಲಾಗುತ್ತಿದೆ.

ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನಿರ್ಮಾಣ
ದೇಶದ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತೇವೆ ಎಂಬುದಾಗಿ ಬಿಜೆಪಿ ಸಂಕಲ್ಪ ಪತ್ರದಲ್ಲಿ ಹೇಳಲಾಗಿದೆ. 2016 ರಲ್ಲಿ ದೇಶದಲ್ಲಿ 707 ಜಿಲ್ಲೆಗಳಿವೆ. 2017 ರಂತೆ ದೇಶದಲ್ಲಿ 460 ಮೆಡಿಕಲ್ ಕಾಲೇಜುಗಳಿದ್ದು 63,985 ವಿದ್ಯಾರ್ಥಿಗಳಿದ್ದರು. ವರ್ಷಕ್ಕೆ ಅಂದಾಜು 10,000 ಜಾಬ್ ಕೂಡ ವೈದ್ಯಕೀಯ ವಲಯದಲ್ಲಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಅಂದ ಮೇಲೆ 2024 ರ ಹೊತ್ತಿಗೆ ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿಸುವ ಅಗತ್ಯ ಇದೆಯೆ ಎಂಬ ಪ್ರಶ್ನೆ ಮೂಡುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಾಕಿ ಉಳಿದ ಶಿಕ್ಷಣ ಸಾಲದ ಬಡ್ಡಿಯನ್ನು ಮನ್ನಾ ಮಾಡುವುದು ಮತ್ತು ವಿದ್ಯಾರ್ಥಿ ಹಕ್ಕಿನ ಕಾಯಿದೆ, ಅರ್ಹ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ಒದಗಿಸುವುದಾಗಿ ತಿಳಿಸಿದೆ. ಇದಕ್ಕಿಂತ ಮುಖ್ಯವಾಗಿ, ವಿದ್ಯಾರ್ಥಿಗೆ ಉದ್ಯೋಗ ಸಿಗುವವರೆಗೆ ಶಿಕ್ಷಣ ಸಾಲದ ಮೇಲೆ ಬಡ್ಡಿ ವಿಧಿಸಲಾಗುವುದಿಲ್ಲ ಎಂಬುದು ಪ್ರಮುಖ ಅಂಶ.

ಸಂಕಲ್ಪ ಪತ್ರದಲ್ಲಿ ದೇಶದ ಆರ್ಥಿಕತೆಯನ್ನು 2032 ರ ಹೊತ್ತಿಗೆ ರೂ. 700 ಲಕ್ಷ ಕೋಟಿಗೆ ಏರಿಸುವುದರ ಬಗ್ಗೆ ಹೇಳಲಾಗಿದೆ. ಆದರೆ ಅದಕ್ಕೆ ಯಾವುದೇ ಕಾರ್ಯನೀತಿಯನ್ನು ತಿಳಿಸಿಲ್ಲ.
ಮುಖ್ಯವಾಗಿ ಉದ್ಯೋಗ ಸೃಷ್ಟಿ, ಜನಸಂಖ್ಯೆ ನಿಯಂತ್ರಣ, ಬಡತನ ನಿರ್ಮೂಲನೆ, ಮಾಬ್ ಲಿಂಚಿಂಗ್ ತಡೆ, ಪರಿಸರ, ಜಾಗತಿಕ ತಾಪಮಾನದ ನಿಯಂತ್ರಣಕ್ಕೆ ಯಾವುದೇ ಯೋಜನೆ ಮತ್ತು ಮುನ್ನೋಟವನ್ನು ಬಿಜೆಪಿ ಜನರ ಮುಂದಿಟ್ಟಿಲ್ಲ.

ಬದಲಾಗಿ, ಎಡಪಂಥೀಯ ವಿಚಾರ ಹತ್ತಿಕ್ಕುವುದು, 371 ವಿಧಿ ತೆಗೆದು ಹಾಕುವುದು, ರಾಮ ಮಂದಿರ ನಿರ್ಮಾಣ, ಶಬರಿ ಮಲೆ ಅಯ್ಯಪ್ಪ ದೇವಾಲಯ, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಎತ್ತುತ್ತಿರುವುದು ಬಿಜೆಪಿ ಮತದಾರರನ್ನು ಸೆಳೆಯುವ, ಮತದಾರರನ್ನು ಬೇರ್ಪಡಿಸಿ ಮತ್ತೆ ಅಧಿಕಾರಕ್ಕೆ ಬರುವ ತಂತ್ರವೇ ಹೊರತು, ಹಿಂದಿನ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಹುಸಿ ಘೋಷಣೆ ಈಗ ಸಂಪೂರ್ಣ ಮಾಯವಾಗಿದೆ.
ಕೊನೆಯ ಬಾರಿ ಹೇಳಿದ ಭರವಸೆಯನ್ನೆ ಈಗಲೂ ಹೇಳುತ್ತಿದ್ದಾರೆ. ಉದಾ- ಮಹಿಳಾ ಮೀಸಲಾತಿ. ಈ ಬಾರಿ ಬಿಜೆಪಿಗೆ ಬಹುಮತ ಇದ್ದಾಗ್ಯೂ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಿಲ್ಲ. ಮತ್ತೆ ಅದೇ ಹಳಸನ್ನು ಹೊಸ ಪಾತ್ರೆಯಲ್ಲಿ ಹೊತ್ತು ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...