HomeUncategorizedಬಿಜೆಪಿಯ ‘ಸಶಕ್ತ ಭಾರತ’ ಕೈಪಿಡಿ ಹೊರತು ಪ್ರಣಾಳಿಕೆಯಲ್ಲ

ಬಿಜೆಪಿಯ ‘ಸಶಕ್ತ ಭಾರತ’ ಕೈಪಿಡಿ ಹೊರತು ಪ್ರಣಾಳಿಕೆಯಲ್ಲ

- Advertisement -
- Advertisement -

| ಚೈತ್ರಿಕಾ ನಾಯ್ಕ ಹರ್ಗಿ |

ಯಾವಾಗಲೂ ಆಡಳಿತ ಪಕ್ಷದ ಪ್ರಣಾಳಿಕೆ ಹೇಗಿರಬೇಕೆಂದರೆ, ಈಗಾಗಲೇ ಐದು ವರ್ಷ ಮಾಡಿದ ಕೆಲಸವನ್ನು ಪರಿಚಯಿಸಿ, ಇಷ್ಟನ್ನು ಪೂರೈಸಿದ್ದೇವೆ, ಇಷ್ಟು ಬಾಕಿ ಉಳಿದಿದೆ, ಇದು ಮುಂದಿನ ಅವಧಿಗೆ ನಮ್ಮ ಯೋಜನೆಗಳು ಎಂಬುದಾಗಿ ಪ್ರಸ್ತುತ ಮತ್ತು ಭವಿಷ್ಯತ್ತಿನ ಯೋಜನೆಯ ಮುನ್ನೋಟವನ್ನು ಜನರ ಮುಂದಿಟ್ಟು ಓಟು ಕೇಳಬೇಕು. ಹಾಗೆಯೇ ಪ್ರಣಾಳಿಕೆಯಲ್ಲಿ ಮುಂದಿನ ಯೋಜನೆಯ ಹಂಚಿಕೆ ಕುರಿತು ನಿರ್ದಿಷ್ಟ ಅಂಕಿ-ಅಂಶಗಳನ್ನು ನಮೂದಿಸಬೇಕಾಗುತ್ತದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಎಲ್ಲವನ್ನೂ ಯಾದೃಚ್ಛಿಕವಾಗಿ ಹೇಳಲಾಗಿದೆ ಹೊರತು ಯಾವುದೂ ನಿಶ್ವಿತವಾಗಿ ಹೇಳಲಾಗಿಲ್ಲ.

ಬಿಜೆಪಿ ಸಂಕಲ್ಪ ಪತ್ರದಲ್ಲಿ ಪ್ರಸ್ತುತ ಪಡಿಸಿದ ಮುಖ್ಯಾಂಶಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯೊಂದಿಗೆ ಹೋಲಿಸಿ ನೋಡುವುದಾದರೆ,
ಸೈನ್ಯ
ಭಯೋತ್ಪಾದನೆ ಮೇಲೆ ಶೂನ್ಯ ಸಹಿಷ್ಣುತೆ ಎಂಬುದು ಯಾವತ್ತೂ ಭಾರತ ಪಾಲಿಸಿಕೊಂಡ ಬಂದ ನಡೆಯಾದರೂ, ಬಿಜೆಪಿ ಓಟು ಸೆಳೆಯಲು ಕಿರುಚಿ ಹೇಳಬೇಕಾದುದ್ದು ಅವರ ಅಗತ್ಯ. ಆದರೆ ವಾಸ್ತವ ಏನೆಂದರೆ 2014-18 ರ ಬಜೆಟ್ ನಲ್ಲಿ ಮಿಲಿಟರಿ ಬಜೆಟನ್ನು ಬಿಜೆಪಿ ಕಡಿತಗೊಳಿಸಿತ್ತು. ಹಿಂದಿನ ಯುಪಿಎ ಸರ್ಕಾರ ಜಿಡಿಪಿಯ 26% ವನ್ನು ಮಿಲಿಟರಿ ಆಧುನೀಕರಣಕ್ಕೆ ನೀಡಿದ್ದರೆ, ಬಿಜೆಪಿಯು ಶೇ. 18% ಕ್ಕೆ ಇದನ್ನು ಕಡಿತಗೊಳಿಸಿತ್ತು. ಭಯೋತ್ಪಾದನೆ ವಿರುದ್ಧ ವಾಸ್ತವದಲ್ಲಿ ಹೋರಾಡುವ ಸೈನಿಕರ ಸಂಬಳ ಮತ್ತು ಸುರಕ್ಷತೆಯ ವೆಚ್ಚವನ್ನು ಕಡಿತಗೊಳಿಸಿ ಭಯೋತ್ಪಾದನೆ ವಿರುದ್ಧ ಮಾತನಾಡುವುದು ಓಟು ಗಿಟ್ಟಿಸುವ ತಂತ್ರವಷ್ಟೆ. ಬಿಜೆಪಿ ಸಂಕಲ್ಪ ಪತ್ರದಲ್ಲೂ ಸೈನಿಕರ ವೇತನ, ಆಧುನಿಕ ಯುದ್ಧಾಸ್ತ್ರ, ಸೈನಿಕರ ಸ್ಥಾನಮಾನದ ಬಗ್ಗೆ ಯಾವುದೇ ನಿರ್ದಿಷ್ಟತೆ ಇಲ್ಲ. ಆದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದರ ಬಗ್ಗೆ ನಿರ್ದಿಷ್ಟವಾಗಿ ನಮೂದಿಸಿದೆ. BSF CRPF ಈ ಸಿಬ್ಬಂದಿಗಳು ಹುತಾತ್ಮರಾದಾಗ ಅವರಿಗೆ ಶಹೀದ್ ಗೌರವ ನೀಡುವುದು, ಸಂಬಳ ಹೆಚ್ಚಿಸುವುದು, ಆಧುನಿಕ ಯುದ್ಧಾಸ್ತ್ರ ನೀಡುವುದು ಇತ್ಯಾದಿ.

ಉದ್ಯೋಗ ಸೃಷ್ಟಿ
ಹಿಂದಿನ ಬಾರಿ ಪ್ರಣಾಳಿಕೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಬಿಜೆಪಿ ಈಬಾರಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಷ್ಟೆ ಹೇಳಿದೆ ಹೊರತು ಯಾವುದೇ ನಿರ್ದಿಷ್ಟ ಅಂಕಿಯನ್ನು ನಮೂದಿಸಿಲ್ಲ. ಇದು ಮುಂದೆ ಎದುರಾಗುವ ಪ್ರಶ್ನೆಯಿಂದ ನುಣುಚಿಕೊಳ್ಳುವ ತಂತ್ರ. ಡಿಮೊನಿಟೈಸೇಷನ್ ನಂತಹ ನಿರ್ಧಾರದಿಂದ 2018ರಲ್ಲಿ 11 ಮಿಲಿಯನ್ ಉದ್ಯೋಗ ನಾಶಕ್ಕೆ ಬಿಜೆಪಿ ಕಾರಣವಾಗಿತ್ತು. 45 ವರ್ಷಗಳ ಬಳಿಕ ನಿರುದ್ಯೋಗ ಪ್ರಮಾಣ ದರ ಅತ್ಯಂತ ಹೆಚ್ಚಾಗಿದ್ದು ಬಿಜೆಪಿ ಅಧಿಕಾರದಲ್ಲಿ. ಇಂತಹ ಜ್ವಲಂತ ಸಮಸ್ಯೆಗೆ ಪರಿಹಾರದ ಬಗ್ಗೆ ಸಂಕಲ್ಪ ಪತ್ರದಲ್ಲಿ ಯಾವುದೇ ನಿರ್ದಿಷ್ಟತೆ ಇಲ್ಲ. ಇನ್ನು ಯುಪಿಎ ಪ್ರಣಾಳಿಕೆ ನೋಡಿದರೆ ಸಾರ್ವಜನಿಕ ವಲಯದಲ್ಲಿ 24 ಲಕ್ಷ ಉದ್ಯೋಗ ಭರ್ತಿ ಮತ್ತು ಇದರ ಹೊರತಾಗಿ ಇತರೆ 10 ಲಕ್ಷ ಉದ್ಯೋಗ ಸೃಷ್ಟಿ ಎಂಬುದಾಗಿ ಹೇಳಿದೆ.

ಕೃಷಿ
25 ಲಕ್ಷ ಕೋಟಿ ಬಂಡವಾಳವನ್ನು ಕೃಷಿ ಕ್ಷೇತ್ರದಲ್ಲಿ ವಿನಿಯೋಗಿಸುತ್ತೇವೆ ಎಂದು ಬಿಜೆಪಿಯ ಸಂಕಲ್ಪ ಪತ್ರದಲ್ಲಿ ನಮೂದಿಲಸಲಾಗಿದೆ. ಬಿಜೆಪಿಯ 2014-2018 ಬಜೆಟ್ ನೋಡಿದರೆ ಕೃಷಿಗೆ 1.7 ಲಕ್ಷ ಕೋಟಿ ನೀಡಲಾಗಿತ್ತು. ಹೌದು ಕೃಷಿಕರು ಸಮಸ್ಯೆಯಲ್ಲಿದ್ದಾರೆ ಅವರ ಅಗತ್ಯತೆ ಪೂರೈಸಬೇಕು. ಆದರೆ ಇಷ್ಟು ಹಣ ಎಲ್ಲಿಂದ ಬರಬೇಕು ? ಹಾಗೆಯೇ ಯಾವುದೇ ಹೊಸ ಯೋಜನೆಯನ್ನು ಕೃಷಿಕರಿಗಾಗಿ ನೀಡಲಾಗಿಲ್ಲ. 2022 ರೈತರ ಆದಾಯ ದ್ವಿಗುಣಗೊಳಿಸುವುದು ಎಂಬುದು ಹಿಂದಿನ ಭರವಸೆಯಾಗಿದ್ದು ಈಗಲೂ ಅದನ್ನೇ ಹೇಳಲಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ರೈತರಿಗಾಗಿ ಪ್ರತ್ಯೇಕ ಬಜೆಟನ್ನು ನೀಡುತ್ತೇವೆ ಎಂದು ಹೇಳಿದೆ. ಬೆಳೆಗೆ ಉತ್ತಮ ಬೆಲೆ ನೀಡುವುದಾಗಿ ಹೇಳಿದೆ.

ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ಹೊಸ ವರಸೆ
2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಕನಸಿನಂತೆ 2047 ರಲ್ಲಿ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಅದಕ್ಕೆ ಭದ್ರ ಬುನಾದಿ ನಾವು ಹಾಕುತ್ತೇವೆ ಎಂದು ಮೋದಿ ಹೇಳಿದ್ದಾರೆ. ಇಲ್ಲಿ ಗುರಿ ಸಾಧನೆ ಕಾಲ ಮಿತಿ 5 ವರ್ಷಕ್ಕಿಂತ ಜಾಸ್ತಿ (ಸುಮಾರು 28 ವರ್ಷ) ಮುಂದೂಡಿ ಭಾವನಾತ್ಮಕವಾಗಿ ಮತದಾರರ ಹಾದಿ ತಪ್ಪಿಸಲಾಗುತ್ತಿದೆ.

ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನಿರ್ಮಾಣ
ದೇಶದ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತೇವೆ ಎಂಬುದಾಗಿ ಬಿಜೆಪಿ ಸಂಕಲ್ಪ ಪತ್ರದಲ್ಲಿ ಹೇಳಲಾಗಿದೆ. 2016 ರಲ್ಲಿ ದೇಶದಲ್ಲಿ 707 ಜಿಲ್ಲೆಗಳಿವೆ. 2017 ರಂತೆ ದೇಶದಲ್ಲಿ 460 ಮೆಡಿಕಲ್ ಕಾಲೇಜುಗಳಿದ್ದು 63,985 ವಿದ್ಯಾರ್ಥಿಗಳಿದ್ದರು. ವರ್ಷಕ್ಕೆ ಅಂದಾಜು 10,000 ಜಾಬ್ ಕೂಡ ವೈದ್ಯಕೀಯ ವಲಯದಲ್ಲಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಅಂದ ಮೇಲೆ 2024 ರ ಹೊತ್ತಿಗೆ ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿಸುವ ಅಗತ್ಯ ಇದೆಯೆ ಎಂಬ ಪ್ರಶ್ನೆ ಮೂಡುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಾಕಿ ಉಳಿದ ಶಿಕ್ಷಣ ಸಾಲದ ಬಡ್ಡಿಯನ್ನು ಮನ್ನಾ ಮಾಡುವುದು ಮತ್ತು ವಿದ್ಯಾರ್ಥಿ ಹಕ್ಕಿನ ಕಾಯಿದೆ, ಅರ್ಹ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ಒದಗಿಸುವುದಾಗಿ ತಿಳಿಸಿದೆ. ಇದಕ್ಕಿಂತ ಮುಖ್ಯವಾಗಿ, ವಿದ್ಯಾರ್ಥಿಗೆ ಉದ್ಯೋಗ ಸಿಗುವವರೆಗೆ ಶಿಕ್ಷಣ ಸಾಲದ ಮೇಲೆ ಬಡ್ಡಿ ವಿಧಿಸಲಾಗುವುದಿಲ್ಲ ಎಂಬುದು ಪ್ರಮುಖ ಅಂಶ.

ಸಂಕಲ್ಪ ಪತ್ರದಲ್ಲಿ ದೇಶದ ಆರ್ಥಿಕತೆಯನ್ನು 2032 ರ ಹೊತ್ತಿಗೆ ರೂ. 700 ಲಕ್ಷ ಕೋಟಿಗೆ ಏರಿಸುವುದರ ಬಗ್ಗೆ ಹೇಳಲಾಗಿದೆ. ಆದರೆ ಅದಕ್ಕೆ ಯಾವುದೇ ಕಾರ್ಯನೀತಿಯನ್ನು ತಿಳಿಸಿಲ್ಲ.
ಮುಖ್ಯವಾಗಿ ಉದ್ಯೋಗ ಸೃಷ್ಟಿ, ಜನಸಂಖ್ಯೆ ನಿಯಂತ್ರಣ, ಬಡತನ ನಿರ್ಮೂಲನೆ, ಮಾಬ್ ಲಿಂಚಿಂಗ್ ತಡೆ, ಪರಿಸರ, ಜಾಗತಿಕ ತಾಪಮಾನದ ನಿಯಂತ್ರಣಕ್ಕೆ ಯಾವುದೇ ಯೋಜನೆ ಮತ್ತು ಮುನ್ನೋಟವನ್ನು ಬಿಜೆಪಿ ಜನರ ಮುಂದಿಟ್ಟಿಲ್ಲ.

ಬದಲಾಗಿ, ಎಡಪಂಥೀಯ ವಿಚಾರ ಹತ್ತಿಕ್ಕುವುದು, 371 ವಿಧಿ ತೆಗೆದು ಹಾಕುವುದು, ರಾಮ ಮಂದಿರ ನಿರ್ಮಾಣ, ಶಬರಿ ಮಲೆ ಅಯ್ಯಪ್ಪ ದೇವಾಲಯ, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಎತ್ತುತ್ತಿರುವುದು ಬಿಜೆಪಿ ಮತದಾರರನ್ನು ಸೆಳೆಯುವ, ಮತದಾರರನ್ನು ಬೇರ್ಪಡಿಸಿ ಮತ್ತೆ ಅಧಿಕಾರಕ್ಕೆ ಬರುವ ತಂತ್ರವೇ ಹೊರತು, ಹಿಂದಿನ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಹುಸಿ ಘೋಷಣೆ ಈಗ ಸಂಪೂರ್ಣ ಮಾಯವಾಗಿದೆ.
ಕೊನೆಯ ಬಾರಿ ಹೇಳಿದ ಭರವಸೆಯನ್ನೆ ಈಗಲೂ ಹೇಳುತ್ತಿದ್ದಾರೆ. ಉದಾ- ಮಹಿಳಾ ಮೀಸಲಾತಿ. ಈ ಬಾರಿ ಬಿಜೆಪಿಗೆ ಬಹುಮತ ಇದ್ದಾಗ್ಯೂ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಿಲ್ಲ. ಮತ್ತೆ ಅದೇ ಹಳಸನ್ನು ಹೊಸ ಪಾತ್ರೆಯಲ್ಲಿ ಹೊತ್ತು ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...