Homeಮುಖಪುಟ‘ಹಿಂದೂ ರಾಷ್ಟ್ರದಲ್ಲಿ ದಲಿತ-ಶೂದ್ರರಿಗೆ ಮತದಾನದ ಹಕ್ಕಿರುತ್ತದೆಯೇ?’

‘ಹಿಂದೂ ರಾಷ್ಟ್ರದಲ್ಲಿ ದಲಿತ-ಶೂದ್ರರಿಗೆ ಮತದಾನದ ಹಕ್ಕಿರುತ್ತದೆಯೇ?’

ಮೀಸಲಾತಿಯ ಕುರಿತು ದಲಿತ ಸಮುದಾಯದ ಕುರಿತು ಭಾರತದ ಮೇಲ್ಜಾತಿಗಳಿಗೆ ಇರುವ ಅಸಹನೆಯ ಕುರಿತು ಯಾವುದೇ ಪುರಾವೆ ಒದಗಿಸುವ ಅಗತ್ಯವಿಲ್ಲ.

- Advertisement -
- Advertisement -

ಲೇಖನದ ಶೀರ್ಷಿಕೆಯು ಹಿಂದೂ ರಾಷ್ಟ್ರ ಎಂಬುದೊಂದು ಅಸ್ತಿತ್ವಕ್ಕೆ ಬರಲಿದೆ ಎಂಬ ಸಾಧ್ಯತೆಯನ್ನು ಧ್ವನಿಸುತ್ತದೆ. ಇಂದು ಅಂತಹ ಸಾಧ್ಯತೆಯನ್ನು ಖಡಾಖಂಡಿತವಾಗಿ ಯಾರಾದರೂ ಅಲ್ಲಗಳೆದರೆ ಅಂತಹವರನ್ನು ಒಂದು ಮಾತು ಕೇಳಬೇಕಾಗುತ್ತದೆ. ಈ ದೇಶದಲ್ಲಿ ಮುಸ್ಲಿಮರಾಗಿರುವ ಏಕೈಕ ಕಾರಣಕ್ಕೆ ವ್ಯಕ್ತಿಗಳನ್ನು, ಕೆಲವೊಮ್ಮೆ ಅಪರಿಚಿತರನ್ನೂ ಕೊಲ್ಲಬಹುದು ಎಂದು ನೀವು ಊಹಿಸಿದ್ದೀರಾ? ದೇಶದ ಪ್ರಧಾನಮಂತ್ರಿಯು ಧರ್ಮವನ್ನು ಎಳೆದುತಂದು ಕೆಲವರ ಪರ ಅಥವಾ ವಿರುದ್ಧ ನೇರವಾಗಿ ಮಾತಾಡಬಹುದು ಎಂದು ಭಾವಿಸಿದ್ದೀರಾ? ಭಾರತ ದೇಶದ ಪೌರತ್ವವನ್ನು ಧರ್ಮಾಧಾರಿತವಾಗಿ ನಿರ್ಧರಿಸುವ ಕಾನೂನೊಂದು ಬರುತ್ತದೆ ಎಂದು ನಿರೀಕ್ಷಿಸಿದ್ದಿರಾ? ಭಾರತದ ಪ್ರಧಾನಿಯು ಪತ್ರಕರ್ತೆಯೊಬ್ಬರ ಕೊಲೆಯನ್ನು ಸಂಭ್ರಮಿಸುವ ವ್ಯಕ್ತಿಗಳನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಾರಷ್ಟೇ ಅಲ್ಲದೇ, ಅದನ್ನು ಬಯಲಿಗೆ ತಂದರೂ ಅದನ್ನು ಬದಲಿಸದೇ ಸೂಚನೆಯೊಂದನ್ನು ನೀಡಬಹುದು ಎಂದುಕೊಂಡಿದ್ದಿರಾ?

ಪ್ರಶ್ನೆಗಳ ಪಟ್ಟಿ ಇನ್ನೂ ದೀರ್ಘವಿದೆ ಎಂಬುದು ನಿಮಗೆ ಗೊತ್ತು. ಹಾಗಾಗಿ ಹಿಂದೂ ರಾಷ್ಟ್ರವೆಂಬುದೊಂದು ಬರುವುದೇ ಇಲ್ಲ ಎಂದು ಅಂದುಕೊಳ್ಳಲಾಗದು. ಪ್ರಧಾನಿ ಹಾಗೂ ಆಳುವ ಪಕ್ಷವು ಸದಾ ಪೂಜಿಸುವ ಭಾರತ ಮಾತೆಯ ಫೋಟೋದಲ್ಲಿ ರಾಷ್ಟ್ರಧ್ವಜ ಇರುವುದಿಲ್ಲ; ಕೇಸರಿ ಧ್ವಜ ಮಾತ್ರ ಇರುತ್ತದೆ ಎಂಬುದನ್ನು ಗಮನಿಸಿ. ಈ ಪರಿವಾರವು ಬಳಸುವ ಸಂಕೇತಗಳು, ದೀರ್ಘಕಾಲದಿಂದ ಮುಂದಿಡುತ್ತಾ ಬಂದಿರುವ ಯೋಜನೆಗಳು, ಡಿಮ್ಯಾಂಡ್‍ಗಳು ಒಂದೊಂದೇ ನಿಜವಾಗುತ್ತಿರುವುದನ್ನೂ ಗಮನಿಸಿ. ಮುಂದಿನ ಎರಡು ವರ್ಷಗಳಲ್ಲಿ ಗೋಡ್ಸೆಯನ್ನು ಬಹಿರಂಗವಾಗಿ ಆರಾಧಿಸುವ (ಆ ಚಿಂತನೆಯು ಸಾಕಷ್ಟು ಕಾಲದಿಂದ ಸಾಕಷ್ಟು ವ್ಯಾಪಕವಾಗಿಯೇ ಚಾಲನೆಯಲ್ಲಿದೆ ಎಂಬುದು ತಿಳಿದಿಲ್ಲವಾದರೆ, ಆರೆಸ್ಸೆಸ್‍ನ ಯಾವುದೇ ಸ್ವಯಂಸೇವಕನನ್ನು ಖಾಸಗಿಯಾಗಿ ಮಾತನಾಡಿಸಿ) ಕಾರ್ಯಕ್ರಮಗಳು ನಡೆಯಲು ಎಲ್ಲಾ ತಯಾರಿಗಳು ನಡೆದಿಲ್ಲವೇ?

ಪ್ರಗ್ಯಾ ಠಾಕೂರ್ ಎಂಬ ಸಂಸದೆ ಈಗಾಗಲೇ ಗೋಡ್ಸೆ ಒಬ್ಬ ದೇಶಭಕ್ತ ಎಂದು ದೇಶದ ಸಂಸತ್ತಿನಲ್ಲೇ ಹೇಳಿಯಾಗಿದೆ. ಅಂತಹ ಹಲವು ಹೇಳಿಕೆಗಳ ನಂತರ ಬಿಜೆಪಿ ಪಕ್ಷವು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂಬುದು ಸ್ಪಷ್ಟ ಸೂಚನೆಯನ್ನು ನೀಡುತ್ತಿದೆ. ಅಂದರೆ ಹಿಂದೂ ರಾಷ್ಟ್ರದ ಕಲ್ಪನೆ ಏನಿತ್ತೋ, ಅದು ಸಾಕಾರವಾಗುವ ದಿಕ್ಕಿನಲ್ಲಿ ದೇಶ ನಡೆದಿದೆ. ಗಾಂಧಿ ಕೊಲೆಯನ್ನು ಆರೆಸ್ಸೆಸ್ಸಿನವರೇ ಮಾಡಿದ್ದು ಮತ್ತು ಅದನ್ನು ಅವರು ಸಂಭ್ರಮಿಸಿದರು ಎಂಬುದಕ್ಕೆ ದಾಖಲೆಗಳಿವೆ. ಗಾಂಧಿ ದ್ವೇಷ ಮಾತ್ರವಲ್ಲದೇ ಅಂಬೇಡ್ಕರ್‍ಗೆ ವಿರೋಧ, ಮಂಡಲ್ ವರದಿಗೆ ವಿರೋಧ ಇತ್ಯಾದಿಗಳು ಬಹಿರಂಗವಾಗಿ ವ್ಯಕ್ತವಾಗಿವೆ. ಮೀಸಲಾತಿಯ ಕುರಿತು ದಲಿತ ಸಮುದಾಯದ ಕುರಿತು ಭಾರತದ ಮೇಲ್ಜಾತಿಗಳಿಗೆ ಇರುವ ಅಸಹನೆಯ ಕುರಿತು ಯಾವುದೇ ಪುರಾವೆ ಒದಗಿಸುವ ಅಗತ್ಯವಿಲ್ಲ.

ಅದೇ ರೀತಿ ಬಡವರು, ಅನಕ್ಷರಸ್ಥರು, ‘ಕೀಳು’ ಜಾತಿಯವರು (ಕೀಳು ಜಾತಿ ಎಂಬ ಪದ ಇಂದಿಗೂ ಬಳಕೆಯಲ್ಲಿದೆ ಎಂಬುದನ್ನು ಮರೆಯಲಾಗುತ್ತದೆಯೇ?) ಚುನಾವಣೆಯಲ್ಲಿ ಸರಿಯಾದ ಆಯ್ಕೆ ಮಾಡುವುದಿಲ್ಲ; ಸ್ಲಂ ಜನರಂತಹವರು ಸೇರಿಕೊಂಡು ದೇಶ ಹಾಳು ಮಾಡುತ್ತಿದ್ದಾರೆ ಎಂಬ ಭಾವವೂ ‘ಕುಲೀನ’ರಲ್ಲಿ ಗಾಢವಾಗಿಯೇ ಇದೆ. ವಿದ್ಯಾವಂತರಲ್ಲದವರಿಗೆ ಮತದಾನದ ಹಕ್ಕು ಇರಬಾರದು ಎಂದು ಪ್ರತಿಪಾದಿಸುವವರೂ ಇದ್ದಾರೆ.

ಪೌರತ್ವವೆಂಬುದು ಹಕ್ಕುಗಳನ್ನು ಪಡೆಯಲು ಇರುವ ಹಕ್ಕಾಗಿದೆ. ಇಂದು ದಾಖಲಾತಿಗಳ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸುವ ಪ್ರಕ್ರಿಯೆಯೊಂದು ದೇಶದಲ್ಲಿ ಚಾಲ್ತಿಗೆ ಬಂದಿದೆ. ಅಂತಹ ಹಕ್ಕುಗಳಲ್ಲಿ ಒಂದು ಮತದಾನದ ಹಕ್ಕೂ ಆಗಿದೆ. ದೇಶದ ಬಡವರಿಗೆ, ದಲಿತರಿಗೆ ಏನಾದರೂ ಹಕ್ಕುಗಳು ಸಿಕ್ಕಿದ್ದರೆ ಅದಕ್ಕೆ ಓಟೂ ಒಂದು ಕಾರಣವಾಗಿದೆ. ಆದರೆ, ದಾಖಲಾತಿಗಳ ಮೇಲೆ ನಿರ್ಧರಿಸಲಾಗುವ ಪೌರತ್ವವು ಮುಂದೊಂದು ದಿನ ಈ ಬಡವರ, ದಲಿತರ, ಹಿಂದುಳಿದವರ ಓಟಿನ ಹಕ್ಕನ್ನೂ ಕಸಿಯುವ ಅಸ್ತ್ರವಾಗುವುದಿಲ್ಲ ಎಂದು ಸುಮ್ಮನೇ ಕೂರುವ ಹಾಗಿಲ್ಲ. ಈಗ ಮೈಮರೆತರೆ ಮುಂದೊಂದು ದಿನ ಬಹಳ ದುಬಾರಿ ಬೆಲೆ ತೆರಬೇಕಾಗಿ ಬರಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...