Homeಮುಖಪುಟವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

ವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

- Advertisement -
- Advertisement -

[ದೆಹಲಿ ರೈತ ಹೋರಾಟವನ್ನು ವರದಿ ಮಾಡಲು ತೆರಳಿದ್ದ ನಾನುಗೌರಿ-ನ್ಯಾಯಪಥ ತಂಡದ ಮಮತ, ಈ ಹೋರಾಟ ತಮಗೆ ಮೂಡಿಸಿದ ಬೆರಗಿನ ಬಗ್ಗೆ ಇಲ್ಲಿ ಬಣ್ಣಿಸಿದ್ದಾರೆ]

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ರೈತ ಹೋರಾಟಕ್ಕೆ 60 ದಿನಗಳು ತುಂಬುತ್ತಿವೆ. ಇಷ್ಟು ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಮೊದಲ ದಿನವಿದ್ದ ಉತ್ಸಾಹ ಇನ್ನೂ ಹಾಗೆ ಉಳಿಸಿಕೊಂಡಿರುವುದಷ್ಟೇ ಅಲ್ಲ ಅದು ದಿನೇದಿನೇ ವೃದ್ಧಿಸುತ್ತಿರುವುದು, ಪ್ರತಿಭಟನಾನಿರತ ರೈತರ ಕುರಿತ ಆಸಕ್ತಿ ಇಮ್ಮಡಿಸುವಂತೆ ಮಾಡುತ್ತದೆ.

ಯಾವುದೇ ಸರ್ಕಾರದ ಅಥವಾ ಖಾಸಗಿ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸುವಾಗ, ಆ ಹೋರಾಟಕ್ಕೆ ಇಳಿಯಲು ಕಾರಣವೇನು ಎಂಬುದು ಪ್ರತಿಭಟನಾನಿರತ ಎಲ್ಲರಿಗೂ ತಿಳಿದಿದ್ದರೆ, ಆ ಹೋರಾಟಕ್ಕೆ ಗಟ್ಟಿ ಅಡಿಪಾಯವೊಂದು ದೊರೆತಂತೆ. ಹೋರಾಟಕ್ಕೆ ಅಣಿಯಾಗಲು ಅಂತಹ ಉದ್ದೇಶ, ತಿಳಿವಳಿಕೆ ಮತ್ತು ಆಲೋಚನೆ ಅಗತ್ಯವಾಗಿ ಬೇಕು. ಆಗ ಆ ಹೋರಾಟ ಎಷ್ಟು ಧೀರ್ಘವಾದರೂ ಜನರು ಅಂಜುವುದಿಲ್ಲ. ಅಂತಹ ಒಂದು ಭದ್ರ ಬುನಾದಿ ಈ ಐತಿಹಾಸಿಕ ರೈತ ಹೋರಾಟಕ್ಕಿದೆ ಎಂಬುದು ದೆಹಲಿ ಗಡಿಗೆ ಭೇಟಿ ನೀಡಿದ ಯಾರಿಗಾದರೂ ಸುಲಭವಾಗಿ ತಿಳಿಯುತ್ತದೆ.

PC : Free Press journal

ಈ ಹೋರಾಟದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ತಾವು ಯಾವುದಕ್ಕಾಗಿ, ಯಾರಿಗಾಗಿ, ಏಕೆ ಈ ದೆಹಲಿಯ ಗಡಿಗಳಲ್ಲಿ ಇದ್ದೇವೆ ಎಂಬ ತಿಳಿವಿದೆ. ಇಂತಹ ತಿಳಿವಿಲ್ಲದೆ ಪ್ರತಿಭಟನೆಗಿಳಿದು, ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಬಂದ 2-3 ದಿನಗಳಲ್ಲೇ, ಕಾರಣಗಳನ್ನು ತಿಳಿಸುವ ಕೆಲಸವನ್ನು ಹೋರಾಟನಿರತ ರೈತರು, ರೈತ ಮುಖಂಡರು ಮಾಡುತ್ತಾರೆ. ಈ ಕೆಲಸಕ್ಕಾಗಿಯೇ ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್, ಚಿಲ್ಲಾ, ಶಹಜಾನ್‌ಪುರ್, ದಾರೂಹೇರಾ ಗಡಿಗಳಲ್ಲಿ ಅನೇಕ ವೇದಿಕೆಗಳಿವೆ. ಕೃಷಿ ಕಾನೂನಿನ ಸಾಧಕ-ಬಾಧಕಗಳ ಕುರಿತು ಅನೇಕ ತಜ್ಞರು, ರೈತರು, ರೈತ ಮುಖಂಡರು ಇಲ್ಲಿ ಇಡೀ ದಿನ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಅನೇಕ ಸಂಘ ಸಂಸ್ಥೆಗಳು ಕೃಷಿ ಕಾನೂನಿನ ಪ್ರತಿಗಳನ್ನು ವಿವಿಧ ಭಾಷೆಗಳಲ್ಲಿ ಅಚ್ಚು ಹಾಕಿಸಿ ಎಲ್ಲರಿಗೂ ಹಂಚುವ ಕೆಲಸ ಮಾಡುತ್ತಿವೆ.

ಒಂದು ಹೋರಾಟ ಇಷ್ಟು ದಿನಗಳ ಕಾಲ ಉಳಿಯಲು ಮತ್ತು ಯಾವುದೇ ಅಡ್ಡಿಆತಂಕಗಳು ಕಾಣಿಸಿಕೊಳ್ಳದಿರಲು, ಜನ ತಾವಾಗಿಯೇ ಇಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು, ಅಲ್ಲಿ ಆಹಾರ ಪೂರೈಕೆಯ ಅಚ್ಚುಕಟ್ಟುತನವೂ ಕಾರಣ. ಹೆಚ್ಚಾಗಿ ಪ್ರತಿಭಟನೆಯೆಂದರೆ ಹಸಿದುಕೊಂಡು, ಬಿಸಿಲಿನಲ್ಲಿ ಕುಳಿತು ಕಷ್ಟಪಟ್ಟು ಪ್ರತಿಭಟನೆ ನಡೆಸುವುದನ್ನು ನೋಡಿರುವ ನಮಗೆ ಈ ಹೋರಾಟ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಇಡೀ ದಿನ ಸಿಖ್ಖರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾ ನಿರತರಿಗೆ ಅನ್ನ-ಆಹಾರಗಳ ವ್ಯವಸ್ಥೆಯ ಸೇವೆ ಮಾಡುತ್ತಾರೆ. ಹಸಿವಿಗೆ ಇಲ್ಲಿ ಜಾಗವಿಲ್ಲ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ರೈತರ ಈ ಪ್ರೀತಿಯ ಮತ್ತು ಕಾಳಜಿಯ ನಡೆ, ದೇಶದ ಹಲವು ಧರಣಿಗಳಲ್ಲಿ ಹಸಿವಿನಿಂದ, ಸುಸ್ತಿನಿಂದ ಬೀಳುವ ಪ್ರತಿಭಟನಾನಿರತರನ್ನು ಒಮ್ಮೆ ಕಣ್ಣ ಮುಂದೆ ಹಾಯುವಂತೆ ಮಾಡುತ್ತದೆ. ಸಿಖ್ ಸಮುದಾಯದ ಮತ್ತು ಪ್ರತಿಭಟನಾ ರೈತರ ಭ್ರಾತೃತ್ವ ನಿಜಕ್ಕೂ ಅನುಕರಣೀಯ ಅನ್ನಿಸದೆ ಇರದು.

ರೈತ ಹೋರಾಟ ಮೊದಮೊದಲು ಸುದ್ದಿಯಾಗಿದ್ದು ಅಲ್ಲಿನ ಊಟ ಉಪಚಾರದ ಕಾರಣಕ್ಕಾಗಿಯೇ ನಿಜ. ಏಕೆಂದರೆ ಪಂಜಾಬ್ ಮತ್ತು ಹರಿಯಾಣದ ರೈತರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾನಿರತರಿಗೆ ನೀಡುವ ಆಹಾರ ಕೂಡ ಅಷ್ಟು ಉತ್ತಮವಾಗಿರುತ್ತದೆ. ಶುದ್ಧ ದೇಸಿ ತುಪ್ಪ, ಶಕ್ತಿವರ್ಧಕವಾಗಿರುವ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ಅವರ ಅಡುಗೆ ಅಂತಹ ಚಳಿಯಲ್ಲೂ ಶಕ್ತಿ ನೀಡಬಲ್ಲದು. ಜಿಲೇಬಿ, ರಸಗುಲ್ಲ, ಹಲ್ವಾ, ಖೀರು, ಪಿಜ್ಜಾ, ಬರ್ಗರ್‌ಗಳನ್ನು ನೀಡುವ ಲಂಗರ್‌ಗಳು, ಜ್ಯೂಸ್, ಹಾಲು, ಟೀ ನೀಡುವ ಲಂಗರ್‌ಗಳು, ಕಡಲೇಕಾಯಿ, ಮೊಸಂಬಿ, ಪೇರಲೆ ಹಣ್ಣುಗಳನ್ನು ಹಂಚಲು ಬರುವ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿವೆ. ಮೊದಲು ಹೊಟ್ಟೆ ತುಂಬಾ ಊಟ ಮಾಡಿ ಆಮೇಲೆ ಪ್ರತಿಭಟನೆಗೆ ಕುಳಿತುಕೊಳ್ಳಿ ಎನ್ನುವ ಈ ಹೋರಾಟ ನಾವು ಓದಿರುವ, ನೋಡಿರುವ ಆಂದೋಲನಗಳಿಗಿಂತ ತುಂಬಾ ವಿಭಿನ್ನವಾದದ್ದು. ಇವರ ಆಹಾರದ ಬಗ್ಗೆ ಅಪಹಾಸ್ಯ ಮಾಡಿ ವಿಕೃತ ಮೆರೆದ ಜನರು ಇಲ್ಲಿಗೆ ತೆರಳಿ ಒಮ್ಮೆ ರೈತರ ಪ್ರೀತಿಯ ಆತಿಥ್ಯವನ್ನು ಸವಿದರೆ ಅವರ ಮನಸ್ಸು ಬದಲಾಗಬಹುದೇನೋ!

ರೈತ ಹೋರಾಟ
PC: Business Standard

ರೈತ ಹೋರಾಟದಲ್ಲಿ ಎಲ್ಲಾ ಗಡಿಗಳನ್ನು ಸುತ್ತಿದ ಮೇಲೂ ನಿಮಗೆ ಮತ್ತೆ ಮತ್ತೆ ಕಾಣಿಸುವುದು, ಮತ್ತೆ ಮತ್ತೆ ಕಾಡುವುದು ರೈತರ ಒಗ್ಗಟ್ಟು. ಇಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಜಮ್ಮು-ಕಾಶ್ಮೀರ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ, ವಿಭಿನ್ನ ಮನಸ್ಥಿತಿಯ ಜನರು ಇದ್ದಾರೆ. ಈ ವೈವಿಧ್ಯತೆಯ ಜನರ ಧ್ಯೇಯ ಮಾತ್ರ ಒಂದೇ ಅಗಿದೆ. ಆಂದೋಲನದಲ್ಲಿರುವ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಒಂದೇ ಮಾತು. ಕೇಂದ್ರ ಸರ್ಕಾರ ಕರಾಳ ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು ಎಂಬುದು. ಈ ವಿಚಾರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಯಾವ ಗಡಿಯಲ್ಲಿ ಹೋಗಿ ಯಾರನ್ನು ಪ್ರಶ್ನಿಸಿದರೂ ಇದೇ ಉತ್ತರವಾಗಿರುತ್ತದೆ.

ಈ ಮೊದಲು ನಾವು ನೋಡಿರುವ ಹೋರಾಟಗಳ ಹಿಂದೆ ಒಂದು ಪಕ್ಷ ಅಥವಾ ಒಂದು ಸಂಘಟನೆ ಇರುವುದು ಸಾಮಾನ್ಯವಾಗಿತ್ತು. ಅವುಗಳು ಎಷ್ಟೇ ನೈಜವಾಗಿದ್ದರೂ, ನೈಜ ಕಾಳಜಿಗಳನ್ನು ಹೊಂದಿದ್ದರೂ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ಆಳುವ ಸರ್ಕಾರಗಳಿಗೆ ಸುಲಭವಾಗಿರುತ್ತಿತ್ತು. ಆದರೆ ಈ ಬಾರಿ ಅದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇದು ಪೂರ್ತಿಯಾಗಿ ರೈತರೇ ಮುನ್ನಡೆಸುತ್ತಿರುವ ಆಂದೋಲನ ಎಂಬುದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವವರ ಗಮನಕ್ಕೆ ಬಂದೆ ಬರುತ್ತದೆ.

ಸಿಖ್ ಸಮುದಾಯದ ಯುವಕರ ಸೇವಾ ಮನೋಭಾವ ಕೂಡ ರೈತ ಹೋರಾಟ ಇಲ್ಲಿಯವರೆಗೆ ಯಶಸ್ವಿಯಾಗಿರುವುದಕ್ಕೆ ಮತ್ತೊಂದು ಕಾರಣವಾಗಿದೆ. ಯಾವುದೇ ಇರಿಸು-ಮುರುಸು ಇಲ್ಲದೆ, ಎಂತಹ ಸಿರಿವಂತನಾದರೂ ಇನ್ನೊಬ್ಬರ ಬೂಟ್ ಪಾಲಿಶ್ ಮಾಡಲು ಮುಂದಾಗುವ ಇವರ ಹೃದಯ ಶ್ರೀಮಂತಿಕೆ ನಿಜಕ್ಕೂ ಅನುಕರಣೀಯ. ಅವಿಸ್ಮರಣೀಯ ಕೂಡ. ವಿದೇಶಿ ಕೆಲಸಗಳನ್ನು ಬಿಟ್ಟು ಬಂದು ಇಲ್ಲಿ ಹೊಲಿಗೆ ಸೇವೆ ನೀಡುವವರು, ಪಂಜಾಬ್‌ನಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಯುವಕ ಇಲ್ಲಿ ರೈತರ ಬಟ್ಟೆ ತೊಳೆಯಲು, ಚಪ್ಪಲಿ ಜೋಡಿಸಲು, ಶೂ ಪಾಲಿಶ್ ಮಾಡಲು, ತಲೆಗೆ ಎಣ್ಣೆ ಹಚ್ಚಲು ಕೂರುವುದು ನಿಜಕ್ಕೂ ಎಂಥವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ. ಇಂತಹ ವಿಚಾರಗಳನ್ನು ನೋಡಲು ಮತ್ತು ಚಿಂತಿಸಲು ನಮ್ಮಲ್ಲಿನ ಪೂರ್ವಾಗ್ರಹಪೀಡಿತ ಭಾವನೆಗಳನ್ನು ಬಿಟ್ಟು ಪ್ರತಿಭಟನಾ ಸ್ಥಳಕ್ಕೆ ಹೋಗಬೇಕಾಗುತ್ತದೆ ಎಂಬುದು ಅಷ್ಟೇ ಸತ್ಯ.

PC : Malyala Manorama

ದೆಹಲಿ ಒಂದು ನಗರ ಎಂದು ಎಲ್ಲರಿಗೂ ತಿಳಿದಿರುವುದೇ, ಆದರೆ ಈ ಗಡಿಗಳಲ್ಲಿ ಸೃಷ್ಟಿಯಾಗಿರುವ ನಗರಗಳದ್ದು ಬೇರೆಯೇ ಮಾದರಿ. ದೆಹಲಿ ಮತ್ತು ಸುತ್ತಮುತ್ತಲಿನ ಜನ ಇಲ್ಲಿಗೆ ಪ್ರವಾಸಿಗರಾಗಿ ಬರುತ್ತಿದ್ದಾರೆ. ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ಭೇಟಿ ನೀಡುವ ಜನ, ರೈತರ ಜೊತೆಗೆ ಹೋರಾಟದ ಬಗ್ಗೆ ಮಾತುಕತೆ ನಡೆಸುತ್ತಾರೆ. ಇಲ್ಲಿ ತಲೆಯೆತ್ತಿರುವ ಪುಸ್ತಕಭಂಡಾರಗಳಿಂದ ಪುಸ್ತಕಗಳನ್ನು ಖರೀದಿಸುತ್ತಾರೆ. ಅಲ್ಲಯೇ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ತಮ್ಮ ಮಕ್ಕಳ ಜನ್ಮ ದಿನವನ್ನೂ ಆಚರಿಸಲು ಇಲ್ಲಿಗೆ ಬರುವವರ ಸಂಖ್ಯೆ ಅಧಿಕವಾಗಿದೆ. ಚಳವಳಿಯಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬುವ ಗೀತೆಗಳನ್ನು, ಕವಿತೆಗಳನ್ನು ವಾಚಿಸುತ್ತಾರೆ. ಇಂತಹ ಒಂದು ಐತಿಹಾಸಿಕ, ವಿಭಿನ್ನ ಪ್ರತಿಭಟನೆ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿದುಕೊಳ್ಳುತ್ತದೆ ಎಂಬ ಮಾತುಗಳು ಇಲ್ಲಿಗೆ ಭೇಟಿ ನೀಡುವವರು ಹೇಳುತ್ತಾರೆ.

ರೈತ ಹೋರಾಟದಲ್ಲಿ ಇನ್ನೂ ಹೆಚ್ಚು ಗಮನ ಸೆಳೆಯುವುದು ರಾಜಕೀಯ ನಾಯಕರಿಗೆ ನೀಡಿರುವ ಸ್ಥಾನಮಾನ. ಇಲ್ಲಿರುವ ವೇದಿಕೆಗಳನ್ನು ರಾಜಕೀಯ ಪಕ್ಷದ ಮುಖಂಡರು ಹತ್ತುವಂತಿಲ್ಲ. ಅಲ್ಲಿಯೇ ನಿಂತು ಮಾಧ್ಯಮಗಳಿಗೆ ಉತ್ತರ ಹೇಳುವಂತಿಲ್ಲ. ಮುಖ್ಯವಾಗಿ ತಮ್ಮ ಪಕ್ಷದ ಧ್ವಜ ತರುವಂತಿಲ್ಲ. ಹೋರಾಟಕ್ಕೆ ಬೆಂಬಲ ನೀಡುವವರು ಇಲ್ಲಿ ಬಂದು ಅವರ ಜೊತೆ ಕೂರಬಹುದು. ರಾಜಕೀಯ ಪಕ್ಷಗಳನ್ನು ತಮ್ಮ ಆಂದೋಲನದಿಂದ ದೂರವಿರಿಸಿರುವುದು ಈ ಹೋರಟದ ಮತ್ತೊಂದು ವಿಶೇಷ. ಯಾವುದೇ ಪ್ರತಿರೋಧಕ್ಕೆ ಯಾವ ರಾಜಕೀಯ ಮುಖಂಡನ ಅಗತ್ಯ ಇಲ್ಲ ಎಂಬುದನ್ನು ರೈತರು ಸಾಬೀತುಮಾಡಿದ್ದಾರಲ್ಲದೇ, ಜನರಿಂದಲೇ ನಿಜವಾದ ಪ್ರಜಾತಂತ್ರ ಎಂಬ ತತ್ವವನ್ನು ಎತ್ತಿಹಿಡಿದಿದ್ದಾರೆ.

ದೆಹಲಿ ಚಲೋ ಶುರುವಾಗಿ 60 ದಿನಗಳು ಆಗಿರಬಹುದು. ಆದರೆ ದೆಹಲಿ ಚಲೋ ಶುರುವಾಗಿ, ಇಂದು ಬೃಹತ್ ಮಟ್ಟದ ರೈತ ಹೋರಾಟಕ್ಕೆ ಕಾರಣವಾಗಿರುವ ಪಂಜಾಬ್‌ನಲ್ಲಿ ಈ ಆಂದೋಲನ ಪ್ರಾರಂಭವಾಗಿ ಐದು ತಿಂಗಳು ಸರಿದಿವೆ. ಇಂದಿಗೂ ಅಲ್ಲಿ ರೈಲ್ ರೋಖೋ ಚಳವಳಿ ನಡೆಯುತ್ತಲೆ ಇದೆ. ರೈತರೇ ಹೇಳುವಂತೆ ನಮ್ಮ ಹೋರಾಟ ಯಾವ ಪಕ್ಷದ ವಿರುದ್ಧವೂ ಅಲ್ಲ. ಕಾಯ್ದೆಗಳನ್ನು ಜಾರಿ ಮಾಡಿರುವ ಸರ್ಕಾರದ ವಿರುದ್ಧ. ಅಲ್ಲಿ ಯಾವ ಪಕ್ಷವಿದ್ದರೂ ನಾವು ಇದೇ ರೀತಿಯ ಪ್ರತಿಭಟನೆ ನಡೆಸುತ್ತಿದ್ದೆವು ಎನ್ನುತ್ತಾರೆ.

ಪ್ರತಿಭಟನೆಯೊಂದು ಇಷ್ಟೊಂದು ವಿಭಿನ್ನವಾಗಿ, ವಿಚಾರ ಕ್ರಾಂತಿಗೆ ಆಹ್ವಾನವಾಗಿಯೂ ನಡೆಸಬಹುದು ಎಂಬುದನ್ನು ದೇಶದ ರೈತರು ತೋರಿಸಿಕೊಟ್ಟಿದ್ದಾರೆ. ಈಗಾಗಲೇ ಲೋಹ್ರಿ ಹಬ್ಬವನ್ನು ಕಿಸಾನ್ ಲೋಹ್ರಿ ಎಂದು ರೈತರು ಆಚರಿಸಿದ್ದಾರೆ. ಆ ಹಬ್ಬಕ್ಕೆ ಹಾಕುವ ಸಾಂಪ್ರದಾಯಿಕ ಬೆಂಕಿ ಕೊಂಡದಲ್ಲಿ ಈ ರೈತವಿರೋಧಿ ಕಾಯ್ದೆಗಳ ಪ್ರತಿಗಳನ್ನು ಸಾಂಕೇತಿಕವಾಗಿ ಸುಟ್ಟಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವವನ್ನು ಕಿಸಾನ್ ಗಣರಾಜ್ಯೋತ್ಸವವನ್ನಾಗಿಸಿ, ಶಾಂತಿಯುತ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಮುಂದಾಗಿದ್ದಾರೆ. ಅಂದು ದೆಹಲಿಯ ಗಡಿಗಳಲ್ಲಿರುವ ಟ್ರ್ಯಾಕ್ಟರ್‌ಗಳ ಜೊತೆಗೆ ಪಂಜಾಬ್, ರಾಜಸ್ಥಾನ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಂದಲೂ ಟ್ರ್ಯಾಕ್ಟರ್‌ಗಳು ದೆಹಲಿಗೆ ಬಂದುಸೇರಲಿವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಈ ಬಾರಿಯ ಗಣರಾಜ್ಯೋತ್ಸವದಂದು ಕಿಸಾನ್ ಗಣರಾಜ್ಯೋತ್ಸವ ನಡೆಯುವುದು ನಿಶ್ಚಿತ ಎನ್ನುವ ವಿಶ್ವಾಸ ಈ ದೇಶದ ರೈತರದ್ದು.


ಇದನ್ನೂ ಓದಿ: ಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ – ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...