Homeಮುಖಪುಟಈ ಸಲ ಎಕ್ಸಿಟ್ ಪೋಲ್ಸ್ ಯಾಕೆ ಫೇಲಾಗಲಿವೆ? ಉತ್ತರಪ್ರದೇಶದ ಈ ಉದಾಹರಣೆಯೊಂದೇ ಸಾಕು....

ಈ ಸಲ ಎಕ್ಸಿಟ್ ಪೋಲ್ಸ್ ಯಾಕೆ ಫೇಲಾಗಲಿವೆ? ಉತ್ತರಪ್ರದೇಶದ ಈ ಉದಾಹರಣೆಯೊಂದೇ ಸಾಕು….

‘ಆಯಾ ಪಾರ್ಟಿಗಳ ಜನಪ್ರಿಯತೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಡಿದ್ದೇವೆ ಹೊರತು ಅಭ್ಯರ್ಥಿಯ ಸಾಮರ್ಥ್ಯವನ್ನಲ್ಲ' ಎಂದು ಸಮೀಕ್ಷೆ ನಡೆಸಿದ ಏಜೆನ್ಸಿಗಳು ಹೇಳುತ್ತಿರುವುದೇ ಹಾಸ್ಯಾಸ್ಪದ

- Advertisement -
- Advertisement -

| ದಿ ಕ್ವಿಂಟ್ ನಲ್ಲಿ ಆದಿತ್ಯ ಮೆನನ್ |

ಇಲ್ಲಿ ಮತ್ತೆ ಎನ್‍ಡಿಎ ಅಧಿಕಾರಕ್ಕೆ ಬರಬಹುದು ಅಷ್ಟೇ. ಬಂದೇ ಬರುತ್ತದೆ ಎಂದು ಹೇಳುವ ಬಹುಪಾಲು ಎಕ್ಸಿಟ್ ಪೋಲ್ಸ್ ಫೇಲಾಗುವ ಸಾಧ್ಯತೆಗಳು ದಟ್ಟವಾಗಿವೆ. ಉತ್ತರಪ್ರದೇಶದ ಸಮೀಕ್ಷೆ ಕುರಿತಂತೆ ಇಲ್ಲಿ ನೀಡಿರುವ ಎಡ ವಟ್ಟು, ಭಾನಗಡಿಗಳ ವಿವರ ಓದಿದರೆ, ಈ ಬಾರಿ ಎಕ್ಸಿಟ್ ಪೋಲ್ಸ್ ಯಾಕೆ ವಿಫಲವಾಗಬಹುದು ಎಂಬುದಕ್ಕೆ ಉತ್ತರ ಸಿಗುತ್ತವೆ…..

ಅತ್ಯಂತ ಪ್ರಮುಖ ಎನಿಸಿದ ಉತ್ತರಪ್ರದೇಶದ ಕುರಿತಂತೆ ಎಕ್ಸಿಟ್ ಪೋಲ್‍ಗಳು ನೀಡಿರುವ ಸಂಖ್ಯೆಗಳು ಅನುಮಾನಾಸ್ಪದವಾಗಿವೆ. ಮತ್ತೆ ಮೋದಿ ಪ್ರಧಾನಿ ಎಂದು ಈ ಎಲ್ಲ ಪೋಲ್‍ಗಳು ಹೇಳಿದರೂ ಉತ್ತರಪ್ರದೇಶದ ಕುರಿತು ನೀಡಿರುವ ಸಂಖ್ಯೆಗಳಲ್ಲಿ ಸಾಕಷ್ಟು ‘ವೈವಿಧ್ಯತೆ’ ಇದೆ! ಒಂದೇ ರಾಜ್ಯ, ಹಲವು ಅಂದಾಜು!

ಎಕ್ಸಿಟ್ ಪೋಲ್‍ಗಳು ಮೂರು ಬಗೆಯ ಫಲಿತಾಂಶ ಅಂದಾಜು ಮಾಡಿವೆ:
1. ಎನ್‍ಡಿಎ, ಘಟಬಂಧನ್ ಸಮ-ಸಮ
2. ಎನ್‍ಡಿಎ ಸ್ವೀಪ್
3. ಘಟಬಂಧನ್ ಸ್ವೀಪ್

1. ಎನ್‍ಡಿಎ, ಘಟಬಂಧನ್ ಸಮ ಸಮ
ಮೂರು ಸಮೀಕ್ಷೆಗಳು ಈ ತರಹ ವರದಿ ಮಾಡಿವೆ. ಇಂಡಿಯಾ ಟಿವಿ-ಸಿಎನ್‍ಎಕ್ಸ್ ಸಮೀಕ್ಷೆ ಪ್ರಕಾರ, ಸಮ-ಸಮ ಅಲ್ಲದಿದ್ದರೂ, ಅದು ಎನ್‍ಡಿಎಗೆ 50, ಘಟಬಂಧನ್‍ಗೆ 28 ಕೊಟ್ಟಿದೆ. ಸಿ-ವೋಟರ್ ಘಟಬಂಧನ್‍ಗೆ 40, ಎನ್‍ಡಿಎಗೆ 38 ನೀಡಿದೆ. ಎಬಿಪಿ-ನೆಲ್ಸನ್ ಘಟಬಂಧನ್‍ಗೆ 45, ಎನ್‍ಡಿಎಗೆ 33 ಸೀಟು ನೀಡಿದೆ. ಈ ಮೂರೂ ಸಮೀಕ್ಷೆಗಳು ಕಾಂಗ್ರೆಸ್‍ಗೆ 2 ಸ್ಥಾನ ಕೊಟ್ಟಿವೆ.

2014ರಲ್ಲಿ ಘಟಬಂಧನ್ (ಆಗ ಅವು ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದವು) ಎನ್‍ಡಿಎಗಿಂತ 42 ಕ್ಷೇತ್ರಗಳಲ್ಲಿ ಶೇಕಡಾವಾರು ಮತ ಪ್ರಮಾಣದಲ್ಲಿ ಮುಂದೆ ಇತ್ತು, 36 ಸೀಟುಗಳಲ್ಲಿ ಹಿಂದೆ ಇತ್ತು.
ಈಗ ಯಾವುದೇ ಪಾಸಿಟಿವ್ ಅಥವಾ ನೆಗೆಟಿವ್ ವೋಟ್ ಸ್ವಿಂಗ್ ಇಲ್ಲದೇ ಇದ್ದರೆ, ಈ ಘಟಬಂಧನ್ ನಡುವೆ ಪರಿಪೂರ್ಣ ‘ಮತ ವರ್ಗಾವಣೆ’ (ವೋಟ್ ಟ್ರಾನ್ಸ್‍ಫರ್) ನಡೆದರೆ, ಎನ್‍ಡಿಎಗೆ ಸಿಗುವುದು 36 ಸೀಟು (ಕಳೆದ ಸಲ 73) ಮಾತ್ರ!

ಇದನ್ನು ಓದಿ: 75-80 ಸೀಟು ನಷ್ಟ! ಉತ್ತರ ಭಾರತದಲ್ಲಿ ಬಿಜೆಪಿ ಪಾತಾಳಕ್ಕೆ….

ಆದರೆ, ಬಹುಪಾಲು ಸಮೀಕ್ಷೆಗಳು ಈ ವಿಷಯದಿಂದ ಒಂದು ಸಣ್ಣ ವಿಚಲನೆ ( ವಿಷಯಾಂತರ ಅನ್ನಬಹುದು, deviation) ಮಾಡಿವೆ. ಸಿ-ವೋಟರ್ ಸರ್ವೆ, ಘಟಬಂಧನ್ ಪಕ್ಷಗಳ ನಡುವೆ ಮತ ವರ್ಗಾವಣೆ ಸರಿಯಾಗಿದೆ ಎಂದು ತೋರಿಸುತ್ತಲೇ, ಬಿಜೆಪಿ ವಿರುದ್ಧ ಯಾವುದೇ ನೆಗೆಟಿವ್ ಸ್ವಿಂಗ್ ಇಲ್ಲ ಎಂದು ಸೂಚಿಸುತ್ತದೆ!

ಸಿಎನ್‍ಎಕ್ಸ್ ಸಮೀಕ್ಷೆ, ಘಟಬಂಧನ್ ಪಕ್ಷಗಳ ನಡುವೆ ಮತ ವರ್ಗಾವಣೆಯಲ್ಲಿ ಕೊಂಚ ಹಿನ್ನಡೆ ಆಗುವುದನ್ನು ಸೂಚಿಸುತ್ತಲೇ, ಒಂದು ಸಣ್ಣ ಪಾಸಿಟಿವ್ ಸ್ವಿಂಗ್ ಇದೆ ಎನ್ನುತ್ತದೆ. ನೆಲ್ಸನ್ ಸಮೀಕ್ಷೆ ಇದಕ್ಕೆ ವಿರುದ್ಧವಾಗಿದ್ದು, ಅದು ಘಟಬಂಧನ್ ನಡುವೆ ಪರಿಪೂರ್ಣ ಮತ ವರ್ಗಾವಣೆಯನ್ನು ಹೇಳುತ್ತಲೇ, ಎನ್‍ಡಿಎಯಿಂದ ಒಂದು ಅತಿ ಸಣ್ಣ ಸ್ವಿಂಗ್ ಆಗಲಿದೆ ಎನ್ನುತ್ತದೆ. ವಿಚಿತ್ರ ಎಂದರೆ, ಈ ನೆಲ್ಸನ್ ಸರ್ವೆ ಮೇ 19ರ ಸಂಜೆ ಎನ್‍ಡಿಎಗೆ 22 ಸೀಟು ಕೊಟ್ಟಿತ್ತು, ಆದರೆ ನಂತರ ಅದನ್ನು ಸಡನ್ನಾಗಿ 33ಕ್ಕೆ ಅಡ್ಜಸ್ಟ್ ಮಾಡಿಕೊಂಡಿತು!

2. ಎನ್‍ಡಿಎ ಸ್ವೀಪ್
ಈ ವಿಭಾಗದಲ್ಲಿ 3 ಬಗೆಯಿವೆ. ಒಂದು, ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆ ಎನ್‍ಡಿಎಗೆ 62-68 ಸೀಟುಗಳನ್ನು, ಘಟಬಂಧನ್‍ಗೆ 10-16 ಸೀಟುಗಳನ್ನು ದಯಪಾಲಿಸಿದೆ. ಟುಡೆ’ಸ್ ಚಾಣಕ್ಯ ಎನ್‍ಡಿಎಗೆ 65 ಮತ್ತು ಘಟಬಂಧನ್‍ಗೆ 13 ಸೀಟುಗಳನ್ನು ನೀಡಿದೆ. ನ್ಯೂಸ್-18-ಇಪ್ಸೊಸಿಸ್ ಎನ್‍ಡಿಎಗೆ 60 ಸೀಟು ಮತ್ತು ಘಟಬಂಧನ್‍ಗೆ 18 ಸೀಟು ಎಂದು ಹೇಳಿದೆ.
ಇಲ್ಲಿ ಪ್ರಸ್ತಾಪಿಸಲ್ಪಟ್ಟ ಮೂರೂ ಸಮೀಕ್ಷೆಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಜಾತಿ, ಲಿಂಗ, ವಯಸ್ಸು- ಈ ಎಲ್ಲ ಪರಿಗಣನೆ ಇಲ್ಲದೇ ಮೋದಿ ಅಲೆ ಎಲ್ಲ ಕಡೆಯಿದೆ ಎಂದಾಯ್ತು!

3 ಘಟಬಂಧನ್ ಸ್ವೀಪ್
ಮೇಲಿನ ಸಮೀಕ್ಷೆಗಳಿಗಿಂತ ಭಿನ್ನ ಎನಿಸುವ ಎರಡು ಸರ್ವೆಗಳು ಮಹಾ ಘಟಬಂಧನ್‍ಗೆ ಸ್ವೀಪ್ ಎಂದು ತೋರಿಸುತ್ತಿವೆ. ನ್ಯೂಸ್ ಚಾನೆಲ್ ನ್ಯಾಷನಲ್ ವಾಯಿಸ್ ಪ್ರಕಾರ, ಘಟಬಂಧನ್‍ಗೆ 48, ಎನ್‍ಡಿಎಗೆ 28 ಸೀಟು ದಕ್ಕಲಿವೆ.
ಕೃತಕ ಬುದ್ಧಿಮತ್ತೆ ( artificial intelligence) ನೆರವು ಪಡೆದು ಸಮೀಕ್ಷೆ ಮಾಡುವ Anthro.ai ಸಂಸ್ಥೆಯ ಸಮೀಕ್ಷೆ ಪ್ರಕಾರ, ಘಟಬಂಧನ್‍ಗೆ 54 ಸೀಟು ಸಿಗಲಿವೆ. ಎನ್‍ಡಿಎ 50 ಸೀಟು ಕಳೆದುಕೊಂಡು 22 ಸೀಟನ್ನಷ್ಟೇ ಗಳಿಸಲಿದೆ…

ಸೀಟ್ ಟು ಸೀಟ್ ಮತ್ತು ರಾತ್ರೋರಾತ್ರಿ ಡಿಲೀಟ್!
ಮೂರು ಸಂಸ್ಥೆಗಳು ಉತ್ತರಪ್ರದೇಶದಲ್ಲಿ ಸೀಟ್-ಟು-ಸೀಟ್ ಸಮೀಕ್ಷೆ ಮಾಡಿವೆ ಎಂದು ಹೇಳಿಕೊಂಡಿವೆ- ಆಕ್ಸಿಸ್, ಂಟಿಣhಡಿo.ಚಿi, ನ್ಯಾಷನಲ್ ವೈಸ್. ಆದರೆ, ರಾತ್ರೋರಾತ್ರಿ ಆಕ್ಸಿಸ್‍ನವರು ತಮ್ಮ ವೆಬ್‍ಸೈಟಿನಿಂದ ತಮ್ಮ ಪ್ರೆಡಿಕ್ಷನ್ ಅನ್ನು ಡಿಲೀಟ್ ಮಾಡಿದ್ದು ಸಂಶಯಾಸ್ಪದವಾಗಿದೆ! ಆದರೆ, ಈ ಪ್ರೆಡಿಕ್ಷನ್‍ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿ, ಆಕ್ಸಿಸ್ ಸಹಭಾಗಿ ಚಾನೆಲ್ ಇಂಡಿಯಾ ಟುಡೇಯ ವೆಬ್‍ಸೈಟಿನಲ್ಲಿ ಹಾಕಲಾಗಿದೆ.

ಆಕ್ಸಿಸ್‍ನ ಸೀಟ್-ಟು-ಸೀಟ್ ವಿಶ್ಲೇಷಣೆಯಲ್ಲಿ ಅಖಿಲೇಶ್ ಪತ್ನಿ ಡಿಂಪಲ್ ಸೊಲು ಎಂದು ಹೇಳಲಾಗಿತ್ತು. 2014ರಲ್ಲಿ ಮೋದಿ ಅಲೆಯಲ್ಲಿ, ಬಿಎಸ್‍ಪಿ ಬೆಂಬಲವೂ ಇಲ್ಲದೇ ಗೆದ್ದಿದ್ದ ಡಿಂಪಲ್‍ಗೆ ಮೋದಿ ಅಲೆ ಇಲ್ಲದ, ಬಿಎಸ್‍ಪಿ ಬೆಂಬಲ ಬೇರೆ ಇರುವ ಹೊತ್ತಿನಲ್ಲಿ ಸೋಲು ಹೇಗೆ ಸಾಧ್ಯ ಎಂಬ ಸರಳ ಪ್ರಶ್ನೆಗೆ ಆಕ್ಸಿಸ್ ಬಳಿ ಉತ್ತರವಿರಲಿಲ್ಲ. ಇಂತಹ ಹಲವು ಎಡವಟ್ಟುಗಳ ಕಾರಣದಿಂದ ಅದು ತನ್ನ ವೆಬ್‍ಸೈಟಿನಿಂದಲೇ ತನ್ನದೇ ಪ್ರೆಡಿಕ್ಷನ್ ಅನ್ನು ತೆಗೆದು ಹಾಕಬೇಕಾಗಿತು! ಮುಲಾಯಂ ಸಿಂಗ್ ಕ್ಷೇತ್ರದ ವಿಚಾರದಲ್ಲೂ ಆಕ್ಸಿಸ್ ಎಡವಟ್ಟು ರಿಸಲ್ಟ್ ಕೊಟ್ಟಿತ್ತು.
ಇತರ ರಾಜ್ಯಗಳಲ್ಲೂ ಈ ಸಂಸ್ಥೆ ಮಾಡಿದ ಸೀಟ್-ಟು-ಸೀಟ್ ಎಕ್ಸಿಟ್ ಪೋಲ್‍ಗಳು ಸಂಶಯಾತ್ಮಕವಾಗಿಯೇ ಇವೆ.

ವಿಚಿತ್ರ ಅಂದರೆ, ಸೀಟ್-ಟು-ಸೀಟ್ ಪೋಲ್‍ನಲ್ಲಿ, ‘ಆಯಾ ಪಾರ್ಟಿಗಳ ಜನಪ್ರಿಯತೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಡಿದ್ದೇವೆ ಹೊರತು ಅಭ್ಯರ್ಥಿಯ ಸಾಮಥ್ರ್ಯವನ್ನಲ್ಲ, ಇದರಲ್ಲಿ ಏರುಪೇರಾದರೆ ನಾವು ಜವಾಬ್ದಾರ ಅಲ್ಲ’ ಎಂದು ಆಕ್ಸಿಸ್ ಮೊದಲೇ ಘೋಷಿಸಿತ್ತು!
ಅಭ್ಯರ್ಥಿಯ ವಿಷಯವನ್ನೇ ಡ್ರಾಪ್ ಮಾಡಿದರೆ ಅದ್ಹೇಗೆ ಸೀಟ್-ಟು-ಸೀಟ್ ಸಮೀಕ್ಷೆ ಆಗುತ್ತದೆ? ಹೀಗಾಗಿ, ಒಟ್ಟಿನಲ್ಲಿ ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆಯೇ ನಂಬಿಕೆಗೆ ಅರ್ಹವಲ್ಲ ಅನಿಸತೊಡಗಬಹುದು.

ಸೀಟ್-ಟು-ಸೀಟ್ ಲೆಕ್ಕದ ಸರ್ವೆಯಲ್ಲಿ ನ್ಯಾಷನಲ್ ವೈಸ್ ಸಮೀಕ್ಷೆಯೇ ವಿಶ್ವಾಸಾರ್ಹ. ಅದು ಘಟಬಂಧನ್‍ಗೆ ಉತ್ತರಪ್ರದೇಶದಲ್ಲಿ 48 ಸೀಟು ಎಂದು ಹೇಳಿದೆ.
(ಆಧಾರ: ದಿ ಕ್ವಿಂಟ್)

ಇದನ್ನು ಓದಿ : ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಾದಿದೆ ಭೂಕಂಪ! – ಇದು ಡಾಟಾ ಅನಲಿಟಿಕಲ್ ಸಮೀಕ್ಷೆ ಬಿಚ್ಚಿಟ್ಟ ಸತ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...