HomeUncategorized75-80 ಸೀಟು ನಷ್ಟ! ಉತ್ತರ ಭಾರತದಲ್ಲಿ ಬಿಜೆಪಿ ಪಾತಾಳಕ್ಕೆ....

75-80 ಸೀಟು ನಷ್ಟ! ಉತ್ತರ ಭಾರತದಲ್ಲಿ ಬಿಜೆಪಿ ಪಾತಾಳಕ್ಕೆ….

40ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲ್ಲಿರುವ ಉತ್ತರಪ್ರದೇಶದ ನಷ್ಟ ಅಂದರೆ, ಅಧಿಕಾರದ ನಷ್ಟವೆಂದೇ ಅರ್ಥ

- Advertisement -
- Advertisement -

ಕಳೆದ ಸಲ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಉತ್ತರ ಭಾರತದ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಅದ್ಭುತ ವಿಜಯ ಸಾಧಿಸುವುದರ ಮೂಲಕ. ಈ ಸಲ ಉತ್ತರ ಭಾರತದಲ್ಲಿ ಅದರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನುತ್ತಾರೆ ಖ್ಯಾತ ವಿಶ್ಲೇಷಕ ದೀಪಂಕರ್ ಬಸು ನತ್ತು ಅವರ ತಂಡದ ಸದಸ್ಯರು. ವಿವಿಧ ಚುನಾವಣಾ ಶಾಸ್ತ್ರಗಳನ್ನು ಬಲ್ಲ ಈ ತಂಡ, ಎರಡು-ಮೂರು ಮಾನದಂಡಗಳಲ್ಲಿ ವಿಶ್ಲೇಷಣೆ ಮಾಡಿದಾಗಲೂ, ಅಂತಿಮ ಫಲಿತಾಂಶ: ಉತ್ತರ ಭಾರತದಲ್ಲಿ ಬಿಜೆಪಿ ಪಾತಾಳಕ್ಕೆ ಎಂಬುದೇ ಆಗಿದೆ….. ಪಶ್ಚಿಮ ಬಂಗಾಳದಲ್ಲೂ ಅದಕ್ಕೆ ಸಿಗುವ ಲಾಭ ಅಷ್ಟಕ್ಕಷ್ಟೇ …ಈ ಅಧ್ಯಯನವನ್ನು ಓದಿ ಅದರ ಸಂಕ್ಷಿಪ್ತ ರೂಪವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ…

ಹಿಂದಿ ಬೆಲ್ಟ್: ಬಿಜೆಪಿಗೆ 75 ಸೀಟು ನಷ್ಟ
ಕಳೆದ ಸಲ 2014ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇ ಹಿಂದಿ ಬೆಲ್ಟ್ ಎಂದು ಕರೆಯಲ್ಪಡುವ 10 ರಾಜ್ಯಗಳಾದ ಬಿಹಾರ್, ಛತ್ತೀಸ್‍ಘಡ್, ದೆಹಲಿ, ಹಿಮಾಚಲ ಪ್ರದೇಶ, ಹರ್ಯಾಣ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ್, ಉತ್ತರಾಖಂಡ, ಮತ್ತು ಉತ್ತರ ಪ್ರದೇಶಗಳಲ್ಲಿ ಅದು ಸಾಧಿಸಿದ ಅಭೂತಪೂರ್ವ ಗೆಲುವು. ಈ 10 ರಾಜ್ಯಗಳ ಒಟ್ಟು 225 ಸೀಟುಗಳಲ್ಲಿ ಬಿಜೆಪಿ 190 ಸೀಟುಗಳನ್ನು ಗೆದ್ದಿತ್ತು!
2019ರಲ್ಲಿ ಅದರ ಭವಿಷ್ಯವನ್ನು ಇದೇ ರಾಜ್ಯಗಳು ಬರೆಯಲಿವೆ. ಅದರಲ್ಲೂ ಉತ್ತರ ಪ್ರದೇಶ ರಾಜ್ಯದ ಫಲಿತಾಂಶವೇ ಈ ಇತರ ಹಿಂದಿ ರಾಜ್ಯಗಳ ಮೇಲೂ ಪ್ರಭಾವ ಹೊಂದಿರುತ್ತದೆ.

ಮೊದಲ ಏಟೇ ಯು.ಪಿ.ಯಿಂದ!
ಇಲ್ಲಿ ಈ ಅಧ್ಯಯನದಲ್ಲಿ ಎರಡು ವಿಧಾನ ಆಯ್ದು ಕೊಳ್ಳಲಾಗಿದೆ. ಮೊದಲ ವಿಧಾನದಲ್ಲಿ 2017ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳನ್ನು ಮತ್ತು ಎರಡನೇ ವಿಧಾನದಲ್ಲಿ 2014ರ ಸಂಸತ್ ಚುನಾವಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಮೊದಲ ವಿಧಾನದ ಪ್ರಕಾರ, ಅದರ ಶೇಕಡಾವಾರು ಮತಗಳಿಕೆ ಶೇ.42.3ರಿಂದ 39.3ಕ್ಕೆ ಇಳಿಯಲಿದೆ. ಅಂದರೆ, ಈಗಿರುವ ಅದರ 71 ಸಂಸದರ ಸಂಖ್ಯೆ 27ಕ್ಕೆ ಕುಸಿಯಲಿದೆ. ಇದರರ್ಥ 44 ಸೀಟುಗಳ ನಷ್ಟ.

ಎರಡನೆ ವಿಧಾನದಲ್ಲಿ, ಅದರ ಶೇಕಡಾವಾರು ಮತಗಳಿಕೆ ಹೆಚ್ಚೂಕಡಿಮೆ 2014ರಲ್ಲಿ ಇದ್ದಷ್ಟೇ ಇರಲಿದ್ದು, ಸೀಟುಗಳ ಸಂಖ್ಯೆಯಲ್ಲಿ 71ರಿಂದ 30ಕ್ಕೆ ಇಳಿಯಲಿದೆ. ಅಂದರೆ 41 ಸೀಟುಗಳ ನಷ್ಟ.

40ರ ಕೊರತೆ ಎಲ್ಲಿ ತುಂಬುವುದು?
2014ರಲ್ಲಿ ಬಿಜೆಪಿ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಸ್ವೀಪ್ ಎನ್ನುವ ಮಟ್ಟಿಗೆ ವಿಜಯ ಸಾಧಿಸಿತ್ತು. ಇದರರ್ಥ ಈಗದು ಉತ್ತರ ಪ್ರದೇಶದ 40 ಸೀಟುಗಳ ಕೊರತೆಯನ್ನು ಈ ಭಾಗದಿಂದಲೇ ತುಂಬಿಕೊಳ್ಳಬೇಕು. ಏಕೆಂದರೆ, ಉಳಿದೆಡೆ ಅಂತಹ ವಾತಾವರಣ ಇಲ್ಲ. ಪೂರ್ವ ಮತ್ತು ದಕ್ಷಿಣದಲ್ಲಿ ಅದಕ್ಕೆ ಗಮನಾರ್ಹ ಲಾಭ ತಂದುಕೊಡುವ ಪರಿಸ್ಥಿತಿ ಇಲ್ಲವೇ ಇಲ್ಲ.
ಅಂತಿಮವಾಗಿ ಉತ್ತರಪ್ರದೇಶದ ನಷ್ಟ ಅಂದರೆ, ಅಧಿಕಾರದ ನಷ್ಟವೆಂದೇ ಅರ್ಥ.

ಇದನ್ನು ಓದಿ: ಡಾಟಾ ಅನಾಲಿಕಲ್ ವರದಿ ಹೇಳುತ್ತಿವೆ ಬಿಜೆಪಿಗೆ ಸೋಲು ಖಚಿತ

ಮಮತಾ ಮುಂದೆ ಮಂಡಿಯೂರಿತೇ?
ಪೂರ್ವ ಭಾರತದ ಪ್ರಮುಖ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಸಲ ಪುಶ್ ಪಡೆಯಲಿದೆ ಎನ್ನುವ ಲೆಕ್ಕಾಚಾರಗಳೂ ಉಲ್ಟಾ ಆಗತೊಡಗಿವೆ. ಇಲ್ಲಿ ಒಟ್ಟು 42 ಸೀಟುಗಳಿದ್ದು 2014ರಲ್ಲಿ ಬಿಜೆಪಿ 2 ಸೀಟು ಗೆದ್ದಿತ್ತು. ಈ ಸಲ 8 ಗೆಲ್ಲಲಿದೆ ಎಂಬ ಲೆಕ್ಕಾಚಾರವನ್ನು ಮಮತಾ ದೀದಿ ಹೊಡೆದು ಹಾಕಿದ್ದಾರೆ. ಇಲ್ಲಿ ಬಿಜೆಪಿ ತನ್ನ ಸಂಖ್ಯೆಯನ್ನು 2ರಿಂದ 6ಕ್ಕೆ ಹೆಚ್ಚಿಸಕೊಳ್ಳಬಹುದು. ಅಂದರೆ 4 ಸೀಟು ಲಾಭ. ಇನ್ನೊಂದು ಲೆಕ್ಕದಲ್ಲಿ ಅದು 2ರಿಂದ ಒಂದಕ್ಕೂ ಕುಸಿಯಬಹುದು….

75 ಸೀಟು ಕೊರತೆಯೇ ಹೊಡೆತ!
ಉತ್ತರದಲ್ಲಿ ಬಿಜೆಪಿಗೆ ಕಳೆದ ಸಲಕ್ಕಿಂತ ಈ ಸಲ 75 ಸೀಟು ಕಡಿಮೆ ಬರಲಿವೆ. ಇದನ್ನು ತುಂಬಿಕೊಂಡರಷ್ಟೇ ಅದು ಮೊದಲಿನ ಸ್ಥಾನಕ್ಕೆ ಬರಬಹುದು. ಎಲ್ಲಿಂದ ತುಂಬಿಕೊಳ್ಳಲಿದೆ? ಪಶ್ಚಿಮದಲ್ಲಿಯಾ? ಅಷ್ಟು ಸುಲಭವಲ್ಲ… ದಕ್ಷಿಣದಲ್ಲಿ? ಬಿಜೆಪಿಗೇ ಗೊತ್ತಿರುವಂತೆ ಇದೂ ಅಸಾಧ್ಯ….
(ಆಧಾರ: ದೀಪಂಕರ್ ಬಸು ಮತ್ತು ತಂಡ, ದಿ ವೈರ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...