Homeಮುಖಪುಟಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

ಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

- Advertisement -
- Advertisement -

ಇತ್ತೀಚಿಗೆ ಸಾಮಾಜಿಕ ಜಾಲತಾಣದ ದೈತ್ಯ ಟೆಕ್ ಕಂಪನಿ ಫೇಸ್‌ಬುಕ್ ತನ್ನ ಬ್ರಾಂಡ್ ಹೆಸರನ್ನು ’ಮೆಟಾ’ ಎಂದು ಬದಲಾಯಿಸಿಕೊಂಡಾಗ, ಅದೊಂದು ರಿಬ್ರಾಂಡಿಂಗ್ ಎಕ್ಸರ್‌ಸೈಸ್ ಎಂಬಂತೆ ಹಲವು ಮಾಧ್ಯಮಗಳು ಉಪೇಕ್ಷಿಸಿದ್ದಿದೆ. ಎಲ್ಲೋ ಕೆಲವು ಮಾಧ್ಯಮಗಳು ಫೇಸ್‌ಬುಕ್ ಸಂಸ್ಥೆ ಇಲ್ಲಿಯವರೆಗೂ ಸೃಷ್ಟಿಸಿರುವ ಅಪಸವ್ಯಗಳ ಹಿನ್ನೆಲೆಯಲ್ಲಿ ಮತ್ತು ಆ ಸಂಸ್ಥೆಯ ಮಾಜಿ ನೌಕರರು ಸೋರಿಕೆ ಮಾಡಿದ ದಾಖಲೆಗಳ ಬೆಳಕಿನಲ್ಲಿ ತಂತ್ರಜ್ಞಾನ ಆಧಾರಿತ, ಡೇಟಾ ಆಧಾರಿತ ಸಾಮಾಜಿಕ ಮಾಧ್ಯಮಗಳು ಜನಸಮೂಹಗಳಲ್ಲಿ ಸೃಷ್ಟಿಸಿರುವ ಒಡಕನ್ನು, ಧ್ರುವೀಕರಣವನ್ನು, ಪ್ರಭುತ್ವಗಳು ಅದನ್ನು ಬಳಸಿಕೊಂಡ ಬಗೆಯನ್ನು ಅವಲೋಕಿಸಿ ಚರ್ಚಿಸಿದ್ದು ಕೂಡ ನಡೆಯಿತು. ಈ ಚರ್ಚೆಯ ಸಮಯದಲ್ಲಿ ಮುಖ್ಯವಾಗಿ ಗೋಚರಿಸಿದ್ದು: ಒಂದು ಸಮಯದಲ್ಲಿ ಹೆಚ್ಚು ಪ್ರಜಾಸತ್ತಾತ್ಮಕಗೊಳಿಸುವ ನಿಟ್ಟಿನಲ್ಲಿ ಬೆಳೆಯುತ್ತದೆ ಎಂದು ನಂಬಿದ್ದ ಇಂಟರ್‌ನೆಟ್, ಈ ದೈತ್ಯ ಟೆಕ್ ಸಂಸ್ಥೆಗಳ ಹಿಡಿತದಲ್ಲಿ ಸಿಕ್ಕಿ, ನೋಡನೋಡುತ್ತಿದ್ದಂತೆಯೇ ಅದು ಸರ್ವಾಧಿಕಾರಿಯ ರೀತಿಯಲ್ಲಿ ಬೆಳೆಯಿತೆಲ್ಲಾ ಎಂಬ ಅಚ್ಚರಿ ಮತ್ತು ಆತಂಕ. ಎಷ್ಟೋ ದೇಶಗಳಲ್ಲಿ ಅವು, ತನ್ನಂತಹ ವ್ಯವಸ್ಥೆಯನ್ನೇ ಬೆಂಬಲಿಸುವ ರಾಜಕೀಯ ಪಕ್ಷಗಳಿಗೆ ಚುನಾವಣೆಗಳನ್ನು ಗೆಲ್ಲಲು ಸಹಕರಿಸಿದರೆ ಮತ್ತೆ ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರ, ಅವಕಾಶವಂಚಿತರ, ವಲಸಿಗರ ವಿರೋಧಿ ವೇದಿಕೆಯಾಗಿ ಹೆಚ್ಚು ಕಾರ್ಯನಿರ್ವಹಿಸುತ್ತಾ ಸಾಗಿತು ಎಂಬುದೂ ಕೂಡ ವಿದಿತವೇ.

ಈಗ ಇಂಟರ್‌ನೆಟ್ ವೆಬ್3ಯತ್ತ ಹೆಜ್ಜೆ ಹಾಕುತ್ತಿದೆ. ಹಿಂದೊಮ್ಮೆ ಪ್ರೋಗ್ರಾಮ್ ಮಾಡಿದಷ್ಟು ಮಾತ್ರ ಕೆಲಸ ಮಾಡುತ್ತಿದ್ದ ತಂತ್ರಜ್ಞಾನ, ತಾನು ಬೆಳೆದಂತೆ ತಾನೇ ಕಲಿಯುವ ‘ಮೆಶಿನ್ ಲರ್ನಿಂಗ್‌’ಗೆ ಮುಂದಾಯಿತು. ಈ ಯಂತ್ರ ಕಲಿಕೆ ಇಂದು ಹಿಂದೆಂದಿಗಿಂತಲೂ ಅಗಾಧವಾಗಿ ಬೆಳೆದಿದೆ. ಈ ಯಂತ್ರ ಕಲಿಕೆ ಎಷ್ಟು ಮುಂದುವರಿದಿದೆ ಎಂದರೆ, ಪ್ರೋಗ್ರಾಮ್‌ಗಳ ಮೂಲಕ ಏನನ್ನು ಮಾಡಬೇಕು ಎಂಬ ನಿರ್ದೇಶನಗಳ ತತ್ವವನ್ನು ಮೀರಿ ತಾನೇ ಹೊಸ ಕೆಲಸ ನಿರ್ವಹಿಸುವ, ನಿರೀಕ್ಷೆ ಮಾಡಲಾರದ ನಿರ್ಣಯ ತೆಗೆದುಕೊಳ್ಳುವ ಕೃತಕ ಬುದ್ಧಿಮತ್ತೆ ಅದಕ್ಕೆ ಬೆಳೆಯುತ್ತದೆ. ಇದಕ್ಕೆ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಆಗಿರುವ ಮಹತ್ತರ ವಿದ್ಯಮಾನಗಳು ಸಹಕರಿಸಿವೆ. ಈ ಯಂತ್ರ ಕಲಿಕೆಗೆ ಬಿಗ್‌ಡೇಟಾ ಎಂಬ ಮಾಹಿತಿಯನ್ನು ಕ್ರೋಢೀಕರಿಸಿ ಅದನ್ನು ಅವಲೋಕಿಸಿ ಬಳಸುವ ತಂತ್ರಜ್ಞಾನ ಕೂಡ ಒಂದು ದೊಡ್ಡ ಕೊಡುಗೆಯನ್ನು ನೀಡಿದೆ. ಈಗ ಈ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಪತ್ರಿಕೋದ್ಯಮವನ್ನೂ ಒಳಗೊಂಡಂತೆ, ಆರೋಗ್ಯ, ಶಿಕ್ಷಣ, ಪೊಲೀಸಿಂಗ್, ಉತ್ಪಾದನೆ, ಎಚ್‌ಆರ್, ಸಾಗಣೆ, ಸಂಚಾರ ಮುಂತಾದ ಕ್ಷೇತ್ರಗಳಿಗೆ ಲಗ್ಗೆ ಇಟ್ಟಿದೆ. ಇದು ಹಲವು ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲದು ಎಂದು ಇದರ ಮೇಲೆ ಹೂಡಿಕೆ ಮಾಡಿದವರು ಪ್ರತಿಪಾದಿಸುತ್ತಿದ್ದರಾದರೂ, ಈ ಕ್ರಾಂತಿ ಒಡ್ಡಬಹುದಾದ ಅಪಾಯಗಳ ಮೇಲೆ ನಿರೀಕ್ಷಿತ ಮಟ್ಟದ ಚರ್ಚೆಗಳಾಗುತ್ತಿಲ್ಲ. ಸಾಮಾಜಿಕ ಮಾಧ್ಯಮಗಳು ಮಾಹಿತಿ/ಜ್ಞಾನ ಉತ್ಪಾದನೆಯಿಂದ ಹಿಡಿದು ಹಂಚಿಕೆಯವರೆಗೂ ಹೇಗೆ ಅವನ್ನು ಪ್ರಜಾಸತ್ತಾತ್ಮಗೊಳಿಸಲಿವೆ ಎಂಬ ಮೊದಲಿನ ನಂಬಿಕೆಗೆ ವ್ಯತಿರಿಕ್ತವಾಗಿ ಮೂರೋ ನಾಲ್ಕೋ ಕಂಪನಿಗಳು ಸ್ವಾಮ್ಯ ಸಾಧಿಸಿರುವಂತೆಯೇ, ಈ ಕ್ರಾಂತಿ ಕೂಡ ಎಂಬ ಚರ್ಚೆಗಳಿವೆ.


ಅಕ್ಟೋಬರ್ ಕೊನೆಯಲ್ಲಿ ಫೇಸ್‌ಬುಕ್, ’ಮೆಟಾ’ ಎಂದು ರಿಬ್ರಾಂಡ್ ಮಾಡಿಕೊಂಡ ನಂತರ ಅದರ ಸಿಇಒ ಮಾರ್ಕ್ ಝುಕರ್ಬಗ್, ಮುಂದೆ ಆ ಸಂಸ್ಥೆ ತೆರೆದುಕೊಳ್ಳಲಿರುವ ’ಮೆಟಾವರ್ಸ್’ಗೆ ಪ್ರಚಾರ ಎಂಬಂತೆ ಸುಮಾರು ಎರಡು ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಿದರು. ಝುಕರ್ಬಗ್ ತನ್ನ ಪ್ರತಿಕೃತಿಯನ್ನು ಸೃಷ್ಟಿಸಿಕೊಂಡು, ಬಾಹ್ಯಾಕಾಶದಲ್ಲಿ ತನ್ನ ಗೆಳೆಯರೊಂದಿಗೆ (ಅವುಗಳೂ ಪ್ರತಿಕೃತಿಗಳೇ) ಮತ್ತು ರೊಬೋಟ್ ಒಂದರೊಂದಿಗೆ ಇಸ್ಪೀಟ್ ಆಡುವುದು, ನಡುವೆ ನಿಜ ಲೋಕದ ತನ್ನ ಗೆಳೆಯರೊಂದಿಗೆ ಸಂಭಾಷಿಸುವುದು ಹೀಗೆ ಮುಂದುವರೆಯುತ್ತದೆ. ಮುಂದಿನ ಸಾಮಾಜಿಕ ಮಾಧ್ಯಮದಲ್ಲಿ/ಮೆಟಾವರ್ಸ್‌ನಲ್ಲಿ ನಾವೆಲ್ಲಾ ಹೀಗೆ ಸೋಶಿಯಲೈಸ್ ಮಾಡುತ್ತೇವೆ ಅಥವಾ ಕನೆಕ್ಟ್ ಆಗುತ್ತೇವೆ ಎಂಬ ಸಂದೇಶದೊಂದಿಗೆ ಆ ವಿಡಿಯೋ ಮುಕ್ತಾಯವಾಗುತ್ತದೆ. ಇದು ’ವರ್ಚುಯಲ್ ರಿಯಾಲಿಟಿ’ ಲೋಕ. ಇಲ್ಲಿ ಕೂಡ ಎಐ ಅಪಾರ ಬಗೆಗಳಲ್ಲಿ ಬಳಕೆಯಾಗಲಿದೆ. ಒಂದು ಕನ್ನಡಕದ ರೀತಿಯ ಸಾಧನವನ್ನು ಹಾಕಿಕೊಂಡು, ನಮ್ಮ ಪ್ರತಿಕೃತಿಯನ್ನು ಸೃಷ್ಟಿಸಿಕೊಂಡು, ನಮ್ಮ ಮಾತುಗಳನ್ನು ಅರ್ಥ ಮಾಡಿಕೊಂಡು, ಆ ಮಾತುಗಳ ಅರ್ಥದ ರೀತಿಯಲ್ಲಿ ಬೇಕಾದ ಜಗತ್ತನ್ನು ಸೃಷ್ಟಿ ಮಾಡಿ, ಅದಕ್ಕೆ ಸ್ಪಂದಿಸಿ ವ್ಯವಹರಿಸುವ ಈ ವರ್ಚುಯಲ್ ಲೋಕದ ಸೃಷ್ಟಿಗೆ ಕೃತಕ ಬುದ್ಧಿಮತ್ತೆ ಅನನ್ಯವಾಗಿ ಜತೆಗೂಡಲಿದೆ.

ಇಂತಹ ವರ್ಚುಯಲ್ ಲೋಕದಲ್ಲಿ ಸೃಷ್ಟಿಯಾಗುವ ಭ್ರಾಮುಕ ಜಗತ್ತಿನಲ್ಲಿ ಇಂದು ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಇರಬಲ್ಲುದೇ? ಇಂದು ಜಗತ್ತನ್ನು ಬಾಧಿಸುತ್ತಿರುವ ತೀವ್ರ ಧ್ರುವೀಕರಣವನ್ನು ಆ ಜಗತ್ತಿನಲ್ಲಿ ಸರಿಪಡಿಸುವ ಶಕ್ತಿ ಇದೆಯೇ? ಇಂದಿನ ತೀವ್ರ ಅಸಮಾನತೆಯನ್ನು ಹೋಗಲಾಡಿಸುವ ಶಕ್ತಿ ಅಲ್ಲಿದೆಯೇ? ಇದಕ್ಕೆ ಉತ್ತರ ಕಂಡುಕೊಳ್ಳುವುದು ಅಲ್ಲಿ ಹೂಡಿಕೆ ಮಾಡುತ್ತಿರುವ ದೈತ್ಯ ಕಾರ್ಪೊರೆಟ್ ಶಕ್ತಿಗಳಿಗೆ ಬೇಕಾಗಿಲ್ಲ. ಭೂಮಿಯ ಡಿಜಿಟಲ್ ರೂಪವನ್ನು ಹಂಚಿ ಟ್ರೇಡ್ ಮಾಡುವ, ಒಡೆತನ ನೀಡುವ ಬಗ್ಗೆ ಆ ಕಂಪನಿಗಳು ಚಿಂತೆ ಮಾಡುತ್ತಿವೆ. ಅದೆಲ್ಲಾ ಇರಲಿ, ಇಂತಹ ವರ್ಚುಯಲ್ ಜಗತ್ತಿನ ಸೃಷ್ಟಿಗೆ ಬಳಕೆಯಾಗುವ ಬಳಕೆದಾರನ ಮಾಹಿತಿಯ ರಕ್ಷಣೆ ಬಗ್ಗೆ, ಗೌಪ್ಯತೆಯ ಬಗ್ಗೆ ನೀತಿ ನಿಯಮಗಳನ್ನು ರೂಪಿಸುವ ನಿಟ್ಟಿನಲ್ಲಿ ಜಗತ್ತಿನ ಹಲವು ದೇಶಗಳ ಆಡಳಿತ ವ್ಯವಸ್ಥೆಗಳು ಚಿಂತನೆ ನಡೆಸಿವೆಯೇ? ನಮ್ಮ ಭಾರತದಲ್ಲಂತೂ ಇದರ ಬಗ್ಗೆ ಪ್ರಭುತ್ವ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡಿಲ್ಲ. ಸದ್ಯದ ಸಾಮಾಜಿಕ ಜಾಲತಾಣ ಸಂಸ್ಥೆಗಳು ತನ್ನ ರಾಜಕೀಯಕ್ಕೆ ಸಹಕರಿಸುತ್ತಿರುವಾಗ, ಅದರ ಮುಂದುವರೆದ ತಂತ್ರಜ್ಞಾನ ಕೂಡ ತನ್ನತ್ತಲೇ ವಾಲಬಹುದೆಂಬ ಲೆಕ್ಕಾಚಾರ ಇರಬಹುದೇ ಅದಕ್ಕೆ?

1997ರಲ್ಲಿ ಐಬಿಎಂ ಸಂಸ್ಥೆಯ ಡೀಪ್ ಬ್ಲೂ ಸೂಪರ್ ಕಂಪ್ಯೂಟರ್ ಅಂದಿನ ಚೆಸ್ ವಿಶ್ವ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಸೋಲಿಸಿದಾಗ ಬಹುಷಃ ಈ ಕೃತಕ ಬುದ್ಧಿಮತ್ತೆ ಈ ಮಟ್ಟಕ್ಕೆ ಬೆಳೆಯುತ್ತದೆ ಎಂಬುದನ್ನು ಊಹಿಸಿದವರು ಕಡಿಮೆ ಇದ್ದಾರು. ಆದರೆ ಈಗ ಕನಿಷ್ಠ ಪಶ್ಚಿಮದ ದೇಶದ ಚಿಂತಕರು, ತಜ್ಞರು, ತತ್ವ ಶಾಸ್ತ್ರಜ್ಞರು ಇದರ ಬಗ್ಗೆ ಹೆಚ್ಚುಹೆಚ್ಚು ಮಾತನಾಡಲು ಪ್ರಾರಂಭಿಸಿದ್ದಾರೆ. ಉದಾಹರಣೆಗೆ, ಇಸ್ರೇಲ್‌ನ ಇತಿಹಾಸದ ಪ್ರೊಫೆಸರ್ ಮತ್ತು ಸಾರ್ವಜನಿಕ ಬುದ್ಧಿಜೀವಿ ಯುವಲ್ ಹರಾರಿ ಅವರು, ಎಐ ತಂತ್ರಜ್ಞಾನ ಒಡ್ಡಬಹುದಾದ ಸಮಸ್ಯೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಒಂದು ಹಂತದಲ್ಲಿ ಉತ್ಪಾದನೆ ಯಾಂತ್ರೀಕೃತವಾದಾಗ, ಹಲವು ಉದ್ಯೋಗಗಳು ನಷ್ಟವಾದರೂ, ಆ ಯಂತ್ರಗಳನ್ನು ಮುನ್ನಡೆಸಬೇಕಾದ ಒಂದು ಪಡೆ ಅಗತ್ಯವಿದ್ದರಿಂದ ಅದಕ್ಕಾಗಿ ಹೊಸ ನೌಕರಪಡೆಯನ್ನು ಸೃಷ್ಟಿಮಾಡಬೇಕಾಗಿ ಬಂತು. ಆ ನಿಟ್ಟಿನಲ್ಲಿ ಕಡಿತಗೊಂಡ ಉದ್ಯೋಗಗಳ ಪ್ರಮಾಣ ಆತಂಕಕಾರಿಯಾಗಿರಲಿಲ್ಲ. ಆದರೆ ಎಐ ಸೃಷ್ಟಿಸುವ ಆಟೋಮೇಷನ್ ಬೇರೆ ತೆರನಾದದ್ದು. ಇದು ಊಹಿಸಲೂ ಕಷ್ಟವಾದಷ್ಟು ಜನರ ಉದ್ಯೋಗವನ್ನು ಕಡಿತಗೊಳಿಸುತ್ತದೆ. ಇದಕ್ಕೆ ಸರ್ಕಾರಗಳು ಯಾವ ರೀತಿಯಲ್ಲಿ ಸಿದ್ಧವಾಗಿವೆ ಎಂಬುದು ಹರಾರಿ ಅವರ ಚಿಂತನೆಯ ಸಾರ. ಉದಾಹರಣೆಗೆ ಚಾಲಕರಿಲ್ಲದ ಕಾರು ಸಾಕಾರವಾಗುವುದರತ್ತ ದಾಪುಗಾಲಿಟ್ಟಿದೆ. ಇದು ಎಷ್ಟು ಜನರನ್ನು ಚಾಲಕ ವೃತ್ತಿಯಿಂದ ಹೊರದಬ್ಬಬಹುದು ಎಂಬ ಊಹೆಯೇ ಭಯಂಕರವಾಗಿದೆ. ಹಿಂದಿನ ಕೈಗಾರೀಕರಣ ಕಾರ್ಮಿಕರನ್ನು ’ರಿಸ್ಟ್ರಕ್ಚರ್’ ಮಾಡಿ ಬೇರೆ ಉದ್ಯೋಗ ನೀಡಬಹುದಾದ ರೀತಿಯಲ್ಲಿತ್ತು. ಆದರೆ ಈ ಎಐ ಕ್ರಾಂತಿ ಬೇರೆಯೇ ರೀತಿಯದ್ದು. ಈಗಾಗಲೇ ಅಮೆಜಾನ್ ಕಂಪನಿ ಮನುಷ್ಯರ ಜೊತೆಗೆ ವ್ಯವಹರಿಸಬಲ್ಲ ಕೃತಕ ಬುದ್ಧಿಮತ್ತೆಯ ಡ್ರೋಣ್ ಮೂಲಕ ವಸ್ತುಗಳನ್ನು ಡೆಲಿವರಿ ಮಾಡುವ ಪೇಟೆಂಟ್ ತೆಗೆದುಕೊಂಡಿದೆ. ಇಲ್ಲಿ ಸಾವಿರಾರು ಡ್ರೋನ್‌ಗಳನ್ನು ಚಲಾಯಿಸಲು ಬಹುಷಃ ಬೇಕಾಗಿರುವುದು ಕೆಲವೇ ಕೆಲವರು. ಈ ನಿಟ್ಟಿನಲ್ಲಿ ಸಾಗಾಣೆ ಸರಪಳಿಯಲ್ಲಿ ನಷ್ಟವಾಗಬಹುದಾದ ಉದ್ಯೋಗಗಳ ಬಗ್ಗೆ ಸರ್ಕಾರಗಳಿಗೆ ಯೋಜನೆಯೇನಾದರೂ ಇದೆಯೇ?

ಇನ್ನು ಈ ಎಐ ಬಳಕೆ ಹಲವು ನೈತಿಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿರುವುದು ಕೂಡ ಈಗಾಗಲೇ ದಾಖಲಾಗಿದೆ. ಉದಾಹರಣೆಗೆ ಅಮೆರಿಕದ ಕೆಲವು ಕಡೆ ಜೈಲಿನಲ್ಲಿರುವ ಕೈದಿಗಳಿಗೆ ’ಪೆರೋಲ್’ ನೀಡುವುದಕ್ಕೆ ಪ್ರಾಯೋಗಿಕವಾಗಿ ಬಳಸಲಾದ ಎಐ ತಂತ್ರಜ್ಞಾನ. ಕೈದಿಗಳಿಗೆ ಜೈಲಿನಿಂದ ಕೆಲವು ವರ್ಷಗಳ ಕಾಲ ತಾತ್ಕಾಲಿಕ ಬಿಡುಗಡೆ ಮಾಡಲು ಅಥವಾ ಜೈಲಿನಲ್ಲಿನ ಅವರ ನಡವಳಿಕೆಯ ಪ್ರಕಾರ ಅವರ ಕಾರಾಗೃಹ ಅವಧಿಗೂ ಮುಂಚಿತವಾಗಿ ಬಿಡುಗಡೆ ಮಾಡಲು ನಿರ್ಧರಿಸಲು ಹಲವು ಪುಟಗಳ ದಾಖಲೆಗಳನ್ನು ಓದಿ, ಅದರ ಪ್ರಕಾರ ಮುಂದಿನ ನಿರ್ಣಯ ಕೈಗೊಳ್ಳಬೇಕಿದೆ. ಇದು ಮನುಷ್ಯರು ಅವಲೋಕಿಸಿ ಮಾಡಬೇಕಾದ ಕರ್ತವ್ಯವಾಗಿದ್ದರೂ ಇದಕ್ಕೆ ಅಗತ್ಯ ಮಾನವ ಸಂಪನ್ಮೂಲಗಳು ಇಲ್ಲ. ಮನುಷ್ಯನ ರೀತಿಯಲ್ಲಿಯೇ ಆದರೆ ಅವನಿಗಿಂತಲೂ ದಾಖಲೆಗಳನ್ನು ವೇಗವಾಗಿ ಓದುವ, ನೂರಾರು ಪ್ಯಾರಾಮೀಟರ್‌ಗಳನ್ನು ಮನುಷ್ಯರಂತೆಯೇ ಅಥವಾ ಅವನಿಗಿಂತಲೂ ಚುರುಕಾಗಿ ಅವಲೋಕಿಸುವ ಮತ್ತು ನಿರ್ಣಯ ಕೈಗೊಳ್ಳುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಪ್ರಯೋಗ ಮಾಡಲಾಯಿತು. ಎಷ್ಟೋ ಬಾರಿ ಮನುಷ್ಯರು ಜನಾಂಗ ಮತ್ತು ವ್ಯಕ್ತಿಗಳ ಬಗ್ಗೆ ಪೂರ್ವಾಗ್ರಹಪೀಡಿತರಾಗಿರಲು ಸಾಧ್ಯವಿದ್ದು, ಪೆರೋಲ್ ನಿರ್ಣಯಗಳಲ್ಲಿ ಅದು ರಿಫ್ಲೆಕ್ಟ್ ಆಗುವ ಸಾಧ್ಯತೆಯಿರುತ್ತದೆ. ಆದುದರಿಂದ ಕೃತಕ ಬುದ್ಧಿಮತ್ತೆಯ ಯಂತ್ರ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಕೂಡ ಬಣ್ಣಿಸಲಾಗಿತ್ತು. ಈ ಪ್ರಯೋಗದ ನಂತರ ಮಾಡಿದ ಅಧ್ಯಯನ ತಿಳಿಸಿದ ಸತ್ಯ ಅಘಾತಕಾರಿಯಾಗಿತ್ತು. ಈ ಮೆಶಿನ್ ಕಲಿಕೆಗೆ ಯಾವ ಡೇಟಾ ಬಳಕೆ ಮಾಡಲಾಗಿತ್ತೋ ಅದು ಕೂಡ ಪೂರ್ವಾಗ್ರಹಗಳಿಂದ ಕೂಡಿದ್ದರಿಂದ ಮೆಶಿನ್ ಕಲಿಕೆ ಕೂಡ ಅದೇ ನಿಟ್ಟಿನಲ್ಲಿತ್ತು. ಎಷ್ಟೋ ಜನ ಅರ್ಹ ಬ್ಲಾಕ್ ಸಮುದಾಯದ ವ್ಯಕ್ತಿಗಳಿಗೆ ಈ ಯಂತ್ರ ಪೆರೋಲ್ ನಿರಾಕರಿಸಿದ್ದು ಈ ಅಧ್ಯಯನದಿಂದ ತಿಳಿದುಬಂತು. ಇದೇ ರೀತಿಯ ಮತ್ತೊಂದು ಉದಾಹರಣೆಯಲ್ಲಿ, ಹಲವು ಕಾರಣಗಳಿಂದ ಪುನರ್ವಸತಿ ಶಿಬಿರಗಳಲ್ಲಿ ಇರುವ ತಾಯಂದಿರು ಹಡೆದಾಗ, ಮಗುವಿಗೆ ಮುಂದೆ ಅವರು ಅಪಾಯಕಾರಿಯಾಗಬಲ್ಲರೇ ಎಂಬುದನ್ನು ಪತ್ತೆ ಹಚ್ಚಿ ಮಗುವನ್ನು ಬೇರೆ ಕಡೆಗೆ ಆರೈಕೆಗೆ ವರ್ಗಾಯಿಸುವುದಕ್ಕೆ ಕೂಡ ಎಐ ತಂತ್ರಜ್ಞಾನವನ್ನು ಬಳಸಲಾಗಿತ್ತು. ಅಲ್ಲಿ ಕೂಡ ಆ ಯಂತ್ರ ಬ್ಲಾಕ್ ಸಮುದಾಯದ ತಾಯಂದಿರ ಮೇಲೆ ತಾರತಮ್ಯ ಎಸಗಿದ್ದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ರೀತಿ ಎಐ ತಂತ್ರಜ್ಞಾನ ಈಗಿರುವ ತಾರತಮ್ಯವನ್ನು ಬಲಪಡಿಸದಂತೆ, ಅಸಮಾನತೆಯನ್ನು ತೀವ್ರಗೊಳಿಸದಂತೆ ಸರಿ ದಿಕ್ಕಿನಲ್ಲಿ ಸಾಗಬೇಕಿರುವಂತೆ ಮಾಡುವ ನೈತಿಕ ಬಿಕ್ಕಟ್ಟುಗಳು ಕೂಡ ತಲೆದೋರಿವೆ.

ಫೋಟೋ ಹೊಡೆದು ಪತ್ತೆ ಹಚ್ಚಿ ಕಣ್ಗಾವಲು ನಡೆಸುವ, ಫೋಟೋಗಳನ್ನು ಮ್ಯಾಚ್ ಮಾಡುವ, ನಕಲಿ ವಿಡಿಯೋಗಳನ್ನು ಸೃಷ್ಟಿಸುವ ಡೀಪ್ ಫೇಕ್, ಹೀಗೆ ಕೃತಕ ಬುದ್ಧಿಮತ್ತೆ ಸೃಷ್ಟಿಸುತ್ತಿರುವ ಸವಾಲುಗಳು, ಈ ಸದ್ಯಕ್ಕೆ ಅದು ನಮಗೆ ನೀಡುತ್ತಿರುವ ಒಳ್ಳೆಯ ಭವಿಷ್ಯದಭರವಸೆಯನ್ನು ಮೀರಿಸುತ್ತಿರುವುದಕ್ಕೆ ಅನೇಕ ಉದಾಹರಣೆಗಳಿವೆ. ಕಥೆ-ಕವಿತೆ ಬರೆದು, ರಿಪೋರ್ಟ್‌ಗಳನ್ನು ಬರೆದು ಸೃಜನಶೀಲ ಕೆಲಸದ ಮಹತ್ವವನ್ನು ಅಲ್ಲಗಳೆಯುವ ಅಪಾಯ, ಉಳಿದೆಲ್ಲಾ ಕಳವಳಕಾರಿ ಆತಂಕಗಳಿಗೆ ಹೋಲಿಸಿದರೆ, ನಿಜಕ್ಕೂ ಅತಿ ಸಣ್ಣಸಂಗತಿಯಂತೆ ಕಾಣುತ್ತದೆ.

ಈ ನಿಟ್ಟಿನಲ್ಲಿ ಎಐ ಬಗ್ಗೆ ಕೆಲವು ಆಯಾಮಗಳಲ್ಲಿ ಚರ್ಚೆಗಳನ್ನು ಈ ಸಂಚಿಕೆಯಲ್ಲಿ ಪ್ರಾರಂಭಿಸಿದ್ದೇವೆ. ಈ ತಂತ್ರಜ್ಞಾನದ ತಿಳಿವಳಿಕೆ ದೃಷ್ಟಿ ಮತ್ತು ಇದರ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸ್ಟೇಕ್ ಕೂಡ ಇರಬೇಕೆಂಬ ಕಾಳಜಿ ಪತ್ರಿಕೆಯದ್ದು. ಆ ನಿಟ್ಟಿನಲ್ಲಿ ಇದರ ಬಗ್ಗೆ ಸರಣಿ ಲೇಖನಗಳು ಮುಂದುವರೆಯಲಿವೆ.

  • – ಗುರುಪ್ರಸಾದ್ ಡಿ ಎನ್

ಇದನ್ನೂ ಓದಿ: ಪಾವ್ಲೊ ಫ್ರೆಯರೆಗೆ ನೂರು; ಮಾನವೀಕರಣ ಮತ್ತು ಪ್ರಜಾತಾಂತ್ರಿಕ ಶಿಕ್ಷಣಕ್ಕೆ ಮರುಚಿಂತನೆ ಅಗತ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...