HomeUncategorizedಮಿಲಿಟೆಂಟ್‌ ಸ್ಟುಡೆಂಟ್‌ ಲೀಡರ್‌ ’ಜಾರ್ಜ್ ರೆಡ್ಡಿ’ ಕುರಿತ ಸಿನಿಮಾ 'ಅಭಿಮಾನಿ'ಯೊಬ್ಬರ ಕಣ್ಣಲ್ಲಿ

ಮಿಲಿಟೆಂಟ್‌ ಸ್ಟುಡೆಂಟ್‌ ಲೀಡರ್‌ ’ಜಾರ್ಜ್ ರೆಡ್ಡಿ’ ಕುರಿತ ಸಿನಿಮಾ ‘ಅಭಿಮಾನಿ’ಯೊಬ್ಬರ ಕಣ್ಣಲ್ಲಿ

ವಿದ್ಯಾರ್ಥಿಗಳು ಕೇವಲ ತನ್ನ ಸಮಸ್ಯೆಗಳಿಗಾಗಿ ಮಾತ್ರವಲ್ಲದೆ ರೈತರು, ದಲಿತ ದಮನಿತರ ಕಷ್ಟಗಳಿಗೆ ಬೀದಿಗಿಳಿಯುವಂತೆ ಜಾರ್ಜ್ ರೆಡ್ಡಿ ಪ್ರೇರೇಪಿಸುತ್ತಾನೆ.

- Advertisement -
- Advertisement -

ಭಾರತ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಭಗತ್‌ಸಿಂಗ್‌ ಲಕ್ಷಾಂತರ ಜನರಿಗೆ ಸ್ಫೂರ್ತಿ. ಅವರನ್ನು ಆದರ್ಶವಾಗಿಟ್ಟುಕೊಂಡು ಹೋರಾಟಕ್ಕಿಳಿದವರು ಸಾವಿರಾರು ಜನ. ತನ್ನ ಸಹಪಾಠಿಗಳಿಗೆ ಅನ್ಯಾಯವನ್ನು ಅಸಮಾನತೆಯನ್ನು ಎದುರಿಸುವ ಧೈರ್ಯಕೊಟ್ಟು, ದಿಟ್ಟ ಹೋರಾಟ ಮುನ್ನಡೆಸಿದ ವಿದ್ಯಾರ್ಥಿ ಯುವಜನ ನಾಯಕ ಜಾರ್ಜ್ ರೆಡ್ಡಿ ಕೂಡ ಅಂಥವರಲ್ಲಿ ಒಬ್ಬರು.

ಇಂತಹ ಹೋರಾಟಗಾರನ ಜೀವನದ ಹಲವು ಘಟನೆಗಳ ಎಳೆಗಳನ್ನು ಇಟ್ಟುಕೊಂಡು ತೆಲುಗಿನಲ್ಲಿ ಜಾರ್ಜ್ ರೆಡ್ಡಿ ಸಿನೆಮಾ ನಿರ್ಮಾಣವಾಗಿದೆ. ಆದರೆ ಸಿನೆಮಾದಲ್ಲಿ ತೋರಿಸಿದ್ದಷ್ಟೇ ಜಾರ್ಜ್ ರೆಡ್ಡಿಯಲ್ಲ ಎಂದು ಸಿನೆಮಾ ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಿನೆಮಾ ಕಮರ್ಷಿಯಲ್ ನೋಟದಲ್ಲಿ ಯಶಸ್ವಿಯಾಗಿ ಮಾಡಿಬಂದಿದೆ. ಈ ಸಿನೆಮಾ 60/70ರ ದಶಕದ ಕಾಲಕ್ಕೆ ವೀಕ್ಷಕರನ್ನು ಕರೆದುಕೊಂಡು ಹೋಗುವದರಲ್ಲಿ ಸಂದೇಹವೇ ಇಲ್ಲ.

ಜಾರ್ಜ್ ರೆಡ್ಡಿ ಜೀವನವನ್ನು ತಿಳಿಯಲು ಹೊರಟ ನಿರೂಪಕಿ ಜಾರ್ಜ್ ಜೊತೆ ಒಡನಾಟವಿದ್ದವರನ್ನು ಮಾತನಾಡಿಸುತ್ತ ಸಿನೆಮಾ ತೆರೆದುಕೊಳ್ಳುತ್ತದೆ. ಇನ್ನು ಸಿನೆಮಾದಲ್ಲಿ ಬರುವ ಸಂಭಾಷಣೆಗಳು ಕೂಡ ಸಿನೆಮಾವನ್ನು ಹತ್ತಿರವಾಗಿಸುತ್ತವೆ ಮತ್ತು ಪಾತ್ರಗಳನ್ನ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಆದರೆ ಜಾರ್ಜ್ ರೆಡ್ಡಿ ಮಾಡುವ ಫೈಟ್ಸ್ ತೆಲುಗು ಸಿನೆಮಾಗಳ ಫ್ಯಾಕ್ಷನ್ ಫೈಟ್‌ಗಳಂತೆಯೂ ತೋರುತ್ತವೆ. ಹಾಗಾಗಿ ಕೆಲವು ಕಡೆ ಜಾರ್ಜ್ ರೆಡ್ಡಿ ಕೂಡ ಒಬ್ಬ ರೌಡಿಯಂತೆ ಕಂಡರೂ ಸಹ ಅಚ್ಚರಿ ಇಲ್ಲ.

ಇಲ್ಲಿ ಜಾರ್ಜ್ ರೆಡ್ಡಿ (ಸಂದೀಪ್ ಮಾದವ್) ಜೊತೆ ಅವನ ಸ್ನೇಹಿತ ದೌರ್ಜನ್ಯವನ್ನು ಸಹಿಸದೆ ತಿರುಗಿ ಬೀಳುವ ರಾಜನ್ನನ (ಅಭಯ್) ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ತೆಲುಗಿನ ಹೊಸ ಪೀಳಿಗೆಗೆ ಜಾರ್ಜ್ ರೆಡ್ಡಿಯನ್ನು ಪರಿಚಯಿಸುವ ಕೆಲಸವನ್ನು ಸಿನೆಮಾ ತಂಡ ಮಾಡಿದೆ. ಈ ಸಿನಿಮಾವನ್ನು ಜೀವನ್ ರೆಡ್ಡಿ ನಿರ್ದೇಶಿಸಿದ್ದು, ಸುರೇಶ್ ಬೊಬ್ಬಿಲಿಯವರ ಸಂಗೀತ, ಜೆ.ಪ್ರತಾಪ್ ಕುಮಾರ್ ಸಂಕಲನ, ಛಾಯಾಗ್ರಹಣ ಸೈರಾಟ್ ಸಿನೆಮಾದ ಯಾಕಂಟಿ ಮತ್ತು ಸುಧಾಕರ್ ರೆಡ್ಡಿ ಮಾಡಿದ್ದಾರೆ. ಈ ಸಿನೆಮಾವನ್ನು ಮಿಕ್ ಮೂವಿಸ್ ಕಂಪನಿ ನಿರ್ಮಾಣ ಮಾಡಿದೆ. ತಾರಾಗಣದಲ್ಲಿ ಸಂದೀಪ್ ಮಾದವ್ (ಜಾರ್ಜ್ ರೆಡ್ಡಿ), ಮುಸ್ಕುನ್ ಕುಬಚಂದಿನಿ(ಮಾಯ), ದೇವಿಕಾ( ಜಾರ್ಜ್ ತಾಯಿ), ಅಭಯ್ ಮುಖ್ಯ ಪಾತ್ರಗಳಲ್ಲಿ ಇದ್ದಾರೆ.

ಸಿನೆಮಾದ ಕಥೆ

ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ಕೂಸಾದ ಎಬಿವಿಪಿ (ಎಬಿಸಿಡಿ) ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ (ಎನ್.ಎಸ್.ಎಲ್) ತಮ್ಮ ಪ್ರಾಬಲ್ಯಕ್ಕಾಗಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಯತ್ನ ಮಾಡುತ್ತಿರುತ್ತವೆ. ಎಬಿವಿಪಿ ಸಂಘಟನೆ ತನ್ನ ಭಾವನಾತ್ಮಕ ಭಾಷಣಗಳಿಂದ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳನ್ನು ಮರೆಮಾಚಿ ದೇಶಭಕ್ತಿ, ಪಾಕಿಸ್ತಾನ ಎಂಬಂತಹ ವಿಚಾರಗಳನ್ನು ಹೇಳುತ್ತಿರುತ್ತದೆ. ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳನ್ನು ಪ್ರಶ್ನಿಸಲು ಸ್ವತಹ ಜಾರ್ಜ್ ರೆಡ್ಡಿ ಪಿ.ಡಿ.ಎಸ್.ಯು(ಪಿಎಸ್) ಎಂಬ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಿ, ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದು ಬರುತ್ತಾರೆ.

ವಿದ್ಯಾರ್ಥಿಗಳು ಕೇವಲ ತನ್ನ ಸಮಸ್ಯೆಗಳಿಗಾಗಿ ಮಾತ್ರವಲ್ಲದೆ ರೈತರು, ದಲಿತ ದಮನಿತರ ಕಷ್ಟಗಳಿಗೆ ಬೀದಿಗಿಳಿಯುವಂತೆ ಜಾರ್ಜ್ ರೆಡ್ಡಿ ಪ್ರೇರೇಪಿಸುತ್ತಾನೆ. ಕೊನೆಗೆ ರಾಜಕಾರಣಿಗಳು, ಸ್ಥಳೀಯ ಪಟ್ಟಭದ್ರ ಸಂಘಟನೆಗಳ ಕೈಯಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿಯೇ ಕೊಲೆಯಾಗಿ ಜಾರ್ಜ್ ರೆಡ್ಡಿ ಹುತಾತ್ಮರಾಗುತ್ತಾರೆ.

ಯಾರು ಈ ಜಾರ್ಜ್ ರೆಡ್ಡಿ?

ಕೇರಳದ ಪಾಲಕ್ಕಾಡ್‌ನಲ್ಲಿ ಹುಟ್ಟಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಬಂದು ಭೌತಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ವಿದ್ಯಾರ್ಥಿ ಜಾರ್ಜ್ ರೆಡ್ಡಿ. ಬಾಕ್ಸಿಂಗ್‌ಪಟುವಾಗಿದ್ದ ಜಾರ್ಜ್ ರೆಡ್ಡಿ ಭಗತ್‌ಸಿಂಗ್, ಚೆಗುವೆರಾರಂತಹವರ ಹುತಾತ್ಮರ ಸ್ಫೂರ್ತಿಯಿಂದ ಉಸ್ಮಾನಿಯದಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸುವ ಹೋರಾಟಕ್ಕೆ ಧುಮುಕುತ್ತಾರೆ.

ಸಮಾನ ಓದುವ ಅವಕಾಶಗಳ ಸೃಷ್ಟಿಗಾಗಿ ವಿದ್ಯಾರ್ಥಿ ಸಂಘಟನೆಯನ್ನು ಸ್ಥಾಪಿಸಿ, ವಿದ್ಯಾರ್ಥಿಗಳನ್ನು ಜನಸಾಮಾನ್ಯರ ಸಮಸ್ಯೆಗಳಿಗಾಗಿ ದನಿ ಎತ್ತುವಂತೆ ಮಾಡಿದ್ದು ಆತನ ಸಾಧನೆ. ಆ ಕಾಲದಲ್ಲಿ ಎಷ್ಟೋ ಜನ ವಿದ್ಯಾರ್ಥಿ ಯುವಜನರಿಗೆ ಸ್ಪೂರ್ತಿದಾಯಕ. ಈತನನ್ನು ಸೆಳೆಯಲು ರಾಜಕೀಯ ಪಕ್ಷಗಳ ಮುಖಂಡರು ಸಹ ಪ್ರಯತ್ನಿಸಿದ್ದರು. ಆದರೆ ಯಾರ ಜೊತೆಗೆ ರಾಜಿ ಮಾಡಿಕೊಳ್ಳದೆ, ತಾನು ನಂಬಿದ್ದ ಸಿದ್ದಾಂತಕ್ಕಾಗಿ ಹೋರಾಟವನ್ನು ಮುನ್ನಡೆಸಿ, ಚರಿತ್ರೆ ಮರೆತರು ಜನ ಮರೆಯಾದ ನಾಯಕನಾದರು ಜಾರ್ಜ್ ರೆಡ್ಡಿ. ಈಗಲೂ ಸಹ ಆತ ಸ್ಥಾಪಿಸಿದ ಮತ್ತು ಆತನಿಂದ ಪ್ರಭಾವಿತವಾದ ವಿದ್ಯಾರ್ಥಿ ಸಂಘಟನೆಗಳು ಆಂಧ್ರ, ತೆಲಂಗಾಣದಲ್ಲಿ ಉತ್ತಮ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...