HomeUncategorizedಮಿಲಿಟೆಂಟ್‌ ಸ್ಟುಡೆಂಟ್‌ ಲೀಡರ್‌ ’ಜಾರ್ಜ್ ರೆಡ್ಡಿ’ ಕುರಿತ ಸಿನಿಮಾ 'ಅಭಿಮಾನಿ'ಯೊಬ್ಬರ ಕಣ್ಣಲ್ಲಿ

ಮಿಲಿಟೆಂಟ್‌ ಸ್ಟುಡೆಂಟ್‌ ಲೀಡರ್‌ ’ಜಾರ್ಜ್ ರೆಡ್ಡಿ’ ಕುರಿತ ಸಿನಿಮಾ ‘ಅಭಿಮಾನಿ’ಯೊಬ್ಬರ ಕಣ್ಣಲ್ಲಿ

ವಿದ್ಯಾರ್ಥಿಗಳು ಕೇವಲ ತನ್ನ ಸಮಸ್ಯೆಗಳಿಗಾಗಿ ಮಾತ್ರವಲ್ಲದೆ ರೈತರು, ದಲಿತ ದಮನಿತರ ಕಷ್ಟಗಳಿಗೆ ಬೀದಿಗಿಳಿಯುವಂತೆ ಜಾರ್ಜ್ ರೆಡ್ಡಿ ಪ್ರೇರೇಪಿಸುತ್ತಾನೆ.

- Advertisement -
- Advertisement -

ಭಾರತ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಭಗತ್‌ಸಿಂಗ್‌ ಲಕ್ಷಾಂತರ ಜನರಿಗೆ ಸ್ಫೂರ್ತಿ. ಅವರನ್ನು ಆದರ್ಶವಾಗಿಟ್ಟುಕೊಂಡು ಹೋರಾಟಕ್ಕಿಳಿದವರು ಸಾವಿರಾರು ಜನ. ತನ್ನ ಸಹಪಾಠಿಗಳಿಗೆ ಅನ್ಯಾಯವನ್ನು ಅಸಮಾನತೆಯನ್ನು ಎದುರಿಸುವ ಧೈರ್ಯಕೊಟ್ಟು, ದಿಟ್ಟ ಹೋರಾಟ ಮುನ್ನಡೆಸಿದ ವಿದ್ಯಾರ್ಥಿ ಯುವಜನ ನಾಯಕ ಜಾರ್ಜ್ ರೆಡ್ಡಿ ಕೂಡ ಅಂಥವರಲ್ಲಿ ಒಬ್ಬರು.

ಇಂತಹ ಹೋರಾಟಗಾರನ ಜೀವನದ ಹಲವು ಘಟನೆಗಳ ಎಳೆಗಳನ್ನು ಇಟ್ಟುಕೊಂಡು ತೆಲುಗಿನಲ್ಲಿ ಜಾರ್ಜ್ ರೆಡ್ಡಿ ಸಿನೆಮಾ ನಿರ್ಮಾಣವಾಗಿದೆ. ಆದರೆ ಸಿನೆಮಾದಲ್ಲಿ ತೋರಿಸಿದ್ದಷ್ಟೇ ಜಾರ್ಜ್ ರೆಡ್ಡಿಯಲ್ಲ ಎಂದು ಸಿನೆಮಾ ನಿರ್ದೇಶಕರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಿನೆಮಾ ಕಮರ್ಷಿಯಲ್ ನೋಟದಲ್ಲಿ ಯಶಸ್ವಿಯಾಗಿ ಮಾಡಿಬಂದಿದೆ. ಈ ಸಿನೆಮಾ 60/70ರ ದಶಕದ ಕಾಲಕ್ಕೆ ವೀಕ್ಷಕರನ್ನು ಕರೆದುಕೊಂಡು ಹೋಗುವದರಲ್ಲಿ ಸಂದೇಹವೇ ಇಲ್ಲ.

ಜಾರ್ಜ್ ರೆಡ್ಡಿ ಜೀವನವನ್ನು ತಿಳಿಯಲು ಹೊರಟ ನಿರೂಪಕಿ ಜಾರ್ಜ್ ಜೊತೆ ಒಡನಾಟವಿದ್ದವರನ್ನು ಮಾತನಾಡಿಸುತ್ತ ಸಿನೆಮಾ ತೆರೆದುಕೊಳ್ಳುತ್ತದೆ. ಇನ್ನು ಸಿನೆಮಾದಲ್ಲಿ ಬರುವ ಸಂಭಾಷಣೆಗಳು ಕೂಡ ಸಿನೆಮಾವನ್ನು ಹತ್ತಿರವಾಗಿಸುತ್ತವೆ ಮತ್ತು ಪಾತ್ರಗಳನ್ನ ಮನಸ್ಸಿನಲ್ಲಿ ನಿಲ್ಲಿಸುತ್ತವೆ. ಆದರೆ ಜಾರ್ಜ್ ರೆಡ್ಡಿ ಮಾಡುವ ಫೈಟ್ಸ್ ತೆಲುಗು ಸಿನೆಮಾಗಳ ಫ್ಯಾಕ್ಷನ್ ಫೈಟ್‌ಗಳಂತೆಯೂ ತೋರುತ್ತವೆ. ಹಾಗಾಗಿ ಕೆಲವು ಕಡೆ ಜಾರ್ಜ್ ರೆಡ್ಡಿ ಕೂಡ ಒಬ್ಬ ರೌಡಿಯಂತೆ ಕಂಡರೂ ಸಹ ಅಚ್ಚರಿ ಇಲ್ಲ.

ಇಲ್ಲಿ ಜಾರ್ಜ್ ರೆಡ್ಡಿ (ಸಂದೀಪ್ ಮಾದವ್) ಜೊತೆ ಅವನ ಸ್ನೇಹಿತ ದೌರ್ಜನ್ಯವನ್ನು ಸಹಿಸದೆ ತಿರುಗಿ ಬೀಳುವ ರಾಜನ್ನನ (ಅಭಯ್) ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ತೆಲುಗಿನ ಹೊಸ ಪೀಳಿಗೆಗೆ ಜಾರ್ಜ್ ರೆಡ್ಡಿಯನ್ನು ಪರಿಚಯಿಸುವ ಕೆಲಸವನ್ನು ಸಿನೆಮಾ ತಂಡ ಮಾಡಿದೆ. ಈ ಸಿನಿಮಾವನ್ನು ಜೀವನ್ ರೆಡ್ಡಿ ನಿರ್ದೇಶಿಸಿದ್ದು, ಸುರೇಶ್ ಬೊಬ್ಬಿಲಿಯವರ ಸಂಗೀತ, ಜೆ.ಪ್ರತಾಪ್ ಕುಮಾರ್ ಸಂಕಲನ, ಛಾಯಾಗ್ರಹಣ ಸೈರಾಟ್ ಸಿನೆಮಾದ ಯಾಕಂಟಿ ಮತ್ತು ಸುಧಾಕರ್ ರೆಡ್ಡಿ ಮಾಡಿದ್ದಾರೆ. ಈ ಸಿನೆಮಾವನ್ನು ಮಿಕ್ ಮೂವಿಸ್ ಕಂಪನಿ ನಿರ್ಮಾಣ ಮಾಡಿದೆ. ತಾರಾಗಣದಲ್ಲಿ ಸಂದೀಪ್ ಮಾದವ್ (ಜಾರ್ಜ್ ರೆಡ್ಡಿ), ಮುಸ್ಕುನ್ ಕುಬಚಂದಿನಿ(ಮಾಯ), ದೇವಿಕಾ( ಜಾರ್ಜ್ ತಾಯಿ), ಅಭಯ್ ಮುಖ್ಯ ಪಾತ್ರಗಳಲ್ಲಿ ಇದ್ದಾರೆ.

ಸಿನೆಮಾದ ಕಥೆ

ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ಕೂಸಾದ ಎಬಿವಿಪಿ (ಎಬಿಸಿಡಿ) ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ (ಎನ್.ಎಸ್.ಎಲ್) ತಮ್ಮ ಪ್ರಾಬಲ್ಯಕ್ಕಾಗಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಯತ್ನ ಮಾಡುತ್ತಿರುತ್ತವೆ. ಎಬಿವಿಪಿ ಸಂಘಟನೆ ತನ್ನ ಭಾವನಾತ್ಮಕ ಭಾಷಣಗಳಿಂದ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳನ್ನು ಮರೆಮಾಚಿ ದೇಶಭಕ್ತಿ, ಪಾಕಿಸ್ತಾನ ಎಂಬಂತಹ ವಿಚಾರಗಳನ್ನು ಹೇಳುತ್ತಿರುತ್ತದೆ. ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳನ್ನು ಪ್ರಶ್ನಿಸಲು ಸ್ವತಹ ಜಾರ್ಜ್ ರೆಡ್ಡಿ ಪಿ.ಡಿ.ಎಸ್.ಯು(ಪಿಎಸ್) ಎಂಬ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಿ, ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದು ಬರುತ್ತಾರೆ.

ವಿದ್ಯಾರ್ಥಿಗಳು ಕೇವಲ ತನ್ನ ಸಮಸ್ಯೆಗಳಿಗಾಗಿ ಮಾತ್ರವಲ್ಲದೆ ರೈತರು, ದಲಿತ ದಮನಿತರ ಕಷ್ಟಗಳಿಗೆ ಬೀದಿಗಿಳಿಯುವಂತೆ ಜಾರ್ಜ್ ರೆಡ್ಡಿ ಪ್ರೇರೇಪಿಸುತ್ತಾನೆ. ಕೊನೆಗೆ ರಾಜಕಾರಣಿಗಳು, ಸ್ಥಳೀಯ ಪಟ್ಟಭದ್ರ ಸಂಘಟನೆಗಳ ಕೈಯಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿಯೇ ಕೊಲೆಯಾಗಿ ಜಾರ್ಜ್ ರೆಡ್ಡಿ ಹುತಾತ್ಮರಾಗುತ್ತಾರೆ.

ಯಾರು ಈ ಜಾರ್ಜ್ ರೆಡ್ಡಿ?

ಕೇರಳದ ಪಾಲಕ್ಕಾಡ್‌ನಲ್ಲಿ ಹುಟ್ಟಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಬಂದು ಭೌತಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ವಿದ್ಯಾರ್ಥಿ ಜಾರ್ಜ್ ರೆಡ್ಡಿ. ಬಾಕ್ಸಿಂಗ್‌ಪಟುವಾಗಿದ್ದ ಜಾರ್ಜ್ ರೆಡ್ಡಿ ಭಗತ್‌ಸಿಂಗ್, ಚೆಗುವೆರಾರಂತಹವರ ಹುತಾತ್ಮರ ಸ್ಫೂರ್ತಿಯಿಂದ ಉಸ್ಮಾನಿಯದಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸುವ ಹೋರಾಟಕ್ಕೆ ಧುಮುಕುತ್ತಾರೆ.

ಸಮಾನ ಓದುವ ಅವಕಾಶಗಳ ಸೃಷ್ಟಿಗಾಗಿ ವಿದ್ಯಾರ್ಥಿ ಸಂಘಟನೆಯನ್ನು ಸ್ಥಾಪಿಸಿ, ವಿದ್ಯಾರ್ಥಿಗಳನ್ನು ಜನಸಾಮಾನ್ಯರ ಸಮಸ್ಯೆಗಳಿಗಾಗಿ ದನಿ ಎತ್ತುವಂತೆ ಮಾಡಿದ್ದು ಆತನ ಸಾಧನೆ. ಆ ಕಾಲದಲ್ಲಿ ಎಷ್ಟೋ ಜನ ವಿದ್ಯಾರ್ಥಿ ಯುವಜನರಿಗೆ ಸ್ಪೂರ್ತಿದಾಯಕ. ಈತನನ್ನು ಸೆಳೆಯಲು ರಾಜಕೀಯ ಪಕ್ಷಗಳ ಮುಖಂಡರು ಸಹ ಪ್ರಯತ್ನಿಸಿದ್ದರು. ಆದರೆ ಯಾರ ಜೊತೆಗೆ ರಾಜಿ ಮಾಡಿಕೊಳ್ಳದೆ, ತಾನು ನಂಬಿದ್ದ ಸಿದ್ದಾಂತಕ್ಕಾಗಿ ಹೋರಾಟವನ್ನು ಮುನ್ನಡೆಸಿ, ಚರಿತ್ರೆ ಮರೆತರು ಜನ ಮರೆಯಾದ ನಾಯಕನಾದರು ಜಾರ್ಜ್ ರೆಡ್ಡಿ. ಈಗಲೂ ಸಹ ಆತ ಸ್ಥಾಪಿಸಿದ ಮತ್ತು ಆತನಿಂದ ಪ್ರಭಾವಿತವಾದ ವಿದ್ಯಾರ್ಥಿ ಸಂಘಟನೆಗಳು ಆಂಧ್ರ, ತೆಲಂಗಾಣದಲ್ಲಿ ಉತ್ತಮ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...