Homeಮುಖಪುಟಸೇತುಮಾನ್: ಫ್ಯೂಡಲ್ ಸಮುದಾಯದ ಒಣ ಪ್ರತಿಷ್ಠೆ, ಹೇಡಿತನ, ಕ್ರೌರ್ಯದ ಅನಾವರಣ

ಸೇತುಮಾನ್: ಫ್ಯೂಡಲ್ ಸಮುದಾಯದ ಒಣ ಪ್ರತಿಷ್ಠೆ, ಹೇಡಿತನ, ಕ್ರೌರ್ಯದ ಅನಾವರಣ

- Advertisement -
- Advertisement -

ಇದುವರೆಗೂ ನಾವು ನೋಡುತ್ತಾ ಬಂದಿರುವ ಬಹುಪಾಲು ಸಿನಿಮಾ, ಓದುತ್ತಾ ಬಂದಿರುವ ಸಾಹಿತ್ಯ ಹಾಗೂ ಇನ್ನಿತರ ಕಲಾ ಪ್ರಕಾರಗಳ ಸಾಂಗತ್ಯ, ಅವುಗಳಿಗೆ ಬಂದ ವಿಮರ್ಶೆ, ಚರ್ಚೆ, ಸಂವಾದಗಳು ಮತ್ತು ಇವುಗಳ ಪ್ರಭಾವದಿಂದ ನಮ್ಮಲ್ಲಿ ಆಳವಾಗಿ ಬೇರೂರಿವ ಅಭಿರುಚಿಗಳನ್ನು ಇವತ್ತಿಗೆ ಮತ್ತೊಮ್ಮೆ ಪರಾಮರ್ಶಿಸಿಕೊಳ್ಳಬೇಕಾದ ಜರೂರು ಇದೆ. ನಮ್ಮ ವಾಸ್ತವದ ಬದುಕು, ಸಮಾಜ, ವ್ಯವಸ್ಥೆ, ಪರಿಸರಗಳನ್ನ ಕಲಾ ಮಾಧ್ಯಮಗಳಲ್ಲಿ ಪ್ರತಿಬಿಂಬಿಸಿ, ಕಲಾರಸಿಕನ ಅಲೋಚನೆ ಮತ್ತು ಅಭಿರುಚಿಗಳನ್ನು ಬೆಳೆಸಬೇಕಾದ ಪ್ರಾಥಮಿಕ ಜವಾಬ್ದಾರಿ ಇವುಗಳ ನಿರ್ಮಾತೃಗಳಿಗಿದೆ. ಆದರೆ ಹೆಚ್ಚಿನ ಬಾರಿ ಈ ಕಲಾ ಮಾಧ್ಯಮಗಳು ಅಗ್ಗದ ಮನರಂಜನೆಗೆ ಸೀಮಿತವಾಗಿದ್ದು ಮಾತ್ರ ದುರಂತ. ನಮ್ಮ ವಾಸ್ತವದ ಬದುಕು, ವ್ಯವಸ್ಥೆಯಲ್ಲಿರುವ ಅಸಮಾನತೆ, ದೌರ್ಜನ್ಯಗಳನ್ನು ಇವುಗಳು ಒಳಗೊಳ್ಳಲೇ ಇಲ್ಲವೆಂದಲ್ಲ. ಆದರೆ, ಆಳದ ಪ್ರಜ್ಞೆಯಿಂದ ಕಾರ್ಯಕಾರಣಗಳ ಸಮೇತ ಸಮರ್ಪಕವಾಗಿ ಅದನ್ನು ನಿರ್ವಹಿಸಲಿಲ್ಲ ಮತ್ತು ಸಮಾಜದ ಎಲ್ಲಾ ಸಮುದಾಯವನ್ನು ಪ್ರತಿನಿಧಿಸಲು ಅವಕ್ಕೆ ಸಾಧ್ಯವಾಗಿಲ್ಲ. ಈ ಪರಂಪರೆಯಲ್ಲಿ ಯಜಮಾನಿಕೆ ಸಾಧಿಸಿದ್ದ ಒಂದು ಸಮುದಾಯ ಬಹುತೇಕ ಈ ಎಲ್ಲಾ ಕಲಾ ಪ್ರಕಾರಗಳು ಮತ್ತು ಅದರ ಸಂಪರ್ಕ ಸಾಧನಗಳನ್ನು ತನ್ನ ಕಪಿ ಮುಷ್ಠಿಯಲ್ಲಿಟ್ಟುಕೊಂಡಿದ್ದು, ಆ ಸಮುದಾಯದ ಪೂರ್ವಾಗ್ರಹ, ಸೀಮಿತ ತಿಳಿವಳಿಕೆ ಮತ್ತು ಹಿತಾಸಕ್ತಿಗೆ ಅನುಗುಣವಾಗಿ ಅಭಿರುಚಿಗಳು ಬೆಳೆದು ಅದೇ ಚೌಕಟ್ಟಿನಲ್ಲಿಯೇ ಸಿಲುಕಿಕೊಂಡಿವೆ.

ಕೆಲವು ಬಿಡಿ ಪ್ರಯತ್ನಗಳ ಹೊರತಾಗಿಯೂ ನಮ್ಮಲ್ಲಿ ಆಳವಾಗಿ ಬೇರೂರಿಸಿರುವ ಪೂರ್ವಾಗ್ರಹ ಪೀಡಿತ ಜಡತ್ವದ ಅಭಿರುಚಿಗಳನ್ನು ತೊಡೆದು ಹಾಕುವುದು ಕಷ್ಟದ ಕೆಲಸ. ಇದಕ್ಕೆ ಒಂದು ಸಂಘಟಿತ ಮತ್ತು ಸಾಮೂಹಿಕ ಪ್ರಯತ್ನ ಬೇಕು. ಈ ಪ್ರಯತ್ನದ ಹಾದಿಯಲ್ಲಿ ಸಿನಿಮಾ ರಂಗಕ್ಕೆ ಹೊಸ ಗ್ರಹಿಕೆ, ಹೊಸ ಕಣ್ಣೋಟ, ಹೊಸ ಸಾಧ್ಯತೆಗಳನ್ನು ತೋರಿಸುತ್ತಿರುವುದು ಪ. ರಂಜಿತ್ ಹುಟ್ಟು ಹಾಕಿರುವ ’ನೀಲಂ ಪ್ರೊಡಕ್ಷನ್’ ಎಂಬ ನಿರ್ಮಾಣ ಸಂಸ್ಥೆ. ಇದರ ಭಾಗವಾಗಿಯೇ ನಿರ್ಮಾಣಗೊಂಡ ಸಿನಿಮಾ ಸೇತುಮಾನ್.

ಸೇತುಮಾನ್ (The Pig)

ಸೇತುಮಾನ್ ವರುಗರಿ (Roasted Meat) ಮತ್ತು ಮಾಪು ಕೊಡುಕ್ಕನುನ್ಜ್ ಸಾಮಿ (Grant us pardon, Sami) ಎಂಬ ಪೆರುಮಾಳ್ ಮುರಗನ್ ಅವರ ಎರಡು ಸಣ್ಣ ಕಥೆಗಳನ್ನು ಆಧರಿಸಿದ ಸಿನಿಮಾ ಸೇತುಮಾನ್ ಮೇಲುನೋಟಕ್ಕೆ ತಾತ ಮತ್ತು ಮೊಮ್ಮಗನ ನಡುವಿನ ಪ್ರೀತಿ ಮತ್ತು ಅವಲಂಬನೆಯನ್ನು ಹೇಳುತ್ತದೆ ಅನಿಸಿದರೂ, ಅದು ಬಹಳ ಮುಖ್ಯವಾಗಿ ಅನಾವರಣಗೊಳಿಸುವುದು ಫ್ಯೂಡಲ್ ಸಮುದಾಯದ ಒಣಪ್ರತಿಷ್ಠೆ, ಸಣ್ಣತನ, ಪುಕ್ಕಲು ಸ್ವಭಾವಗಳನ್ನು. ಇಷ್ಟೆಲ್ಲ ಅಸಹ್ಯಗಳ ನಡುವೆ ಅವರಲ್ಲಿ ಇರುವ ಜಾತಿ ಕ್ರೌರ್ಯವನ್ನು ಸಣ್ಣಸಣ್ಣ ಸಂಗತಿಗಳ ಮೂಲಕ ಬಹಳ ವಿವರವಾಗಿ ನಿರ್ದೇಶಕ ’ತಮಿಳ’ ಕಟ್ಟಿಕೊಡುತ್ತಾರೆ. ಮಾಂಸದ ಸಲುವಾಗಿ ದನವನ್ನು ಕೊಂದಿದ್ದಾನೆ ಎಂಬ ಕಾರಣಕ್ಕಾಗಿ ಪೂಚ್ಚಿಯಪ್ಪನ ಮಗನನ್ನು ಊರಿನ ಮೇಲ್ಜಾತಿ ಎಂದು ಕರೆದುಕೊಳ್ಳುವ ಜನ ಕೊಂದಿದ್ದಾರೆ. ಸೊಸೆ ಇದೇ ಕೊರಗಿನಲ್ಲಿ ಮಗುವಿಗೆ ಜನ್ಮ ನೀಡುವಾಗ ಅಸುನೀಗಿದ್ದಾಳೆ. ಈಗ ಬದುಕಿನಲ್ಲಿ ಅವನಿಗೆ ಉಳಿದಿರುವುದು ಮೊಮ್ಮಗ ಕುಮರೇಸನ್ ಮಾತ್ರ. ಅವನ ಏಕೈಕ ಗುರಿ ಮೊಮ್ಮಗನನ್ನು ವಿದ್ಯಾವಂತನನ್ನಾಗಿ ಮಾಡುವುದು. ಆ ಮೂಲಕ ಈ ಜಾತಿ ದೌರ್ಜನ್ಯದಿಂದ ಮುಕ್ತನನ್ನಾಗಿಸಿದರೆ, ತನ್ನ ಮೊಮ್ಮಗ ಘನತೆಯಿಂದ ಬದುಕಲು ಸಾಧ್ಯ ಎಂಬುದು ಅವನ ನಂಬುಗೆ. ಈ ಕಾರಣಕ್ಕಾಗಿ ಅವನು ಪ್ರಬಲ ಜಾತಿಯ ವಲ್ಲೈಯಾನ್ ಹತ್ತಿರ ಕೆಲಸಕ್ಕೆ ಸೇರಿದ್ದಾನೆ.

ಪೂಚ್ಚಿಯ ಯಜಮಾನ ವಲ್ಲೈಯಾನ್‌ಗೆ ಹಂದಿ ಮಾಂಸ ತಿನ್ನುವ ಮಹದಾಸೆ. ಹಂದಿ ಮಾಂಸ ತಿಂದರೆ ದೇಹಕ್ಕೆ ಯಾವ ರೀತಿಯ ಅನುಕೂಲಗಳಿವೆ ಎಂಬುದನ್ನು ತನ್ನ ಸಂಗಡಿಗರಿಗೆ ಮನವರಿಕೆ ಮಾಡಿ ಹಂದಿ ಕಡಿದು ಮಾಂಸ ಪಾಲು ಮಾಡಿಕೊಳ್ಳಲು ಪುಸಲಾಯಿಸುತ್ತಾನೆ. ದರ್ಪ, ಪ್ರತಿಷ್ಠೆ, ಕ್ರೌರ್ಯವನ್ನೆ ಮೈದುಂಬಿಸಿಕೊಂಡಿರುವ ಈ ಫ್ಯೂಡಲ್ ಸಮುದಾಯದ ಜನ ತನ್ನ ಇಷ್ಟದ ಊಟ ಮಾಡುವುದಕ್ಕೆ ಹೇಗೆ ಹೇಡಿಗಳ ರೀತಿ ವರ್ತಿಸುತ್ತಾರೆ ಮತ್ತು ಅದೇ ಸಂದರ್ಭದಲ್ಲಿ ದಲಿತರು ತಿನ್ನುವ ಆಹಾರದ ಬಗ್ಗೆ ಅಪಹಾಸ್ಯ ಮಾಡುವ ಇವರ ಬೂಟಾಟಿಕೆ, ಒಂದು ಮರದ ರೆಂಬೆಯ ವಿಷಯವಾಗಿ ವಲ್ಲೈಯಾನ್ ಮತ್ತು ಅವನ ದಾಯಾದಿ ನಡುವೆ ನಡೆಯುವ ಜಗಳದ ದೃಶ್ಯಗಳು ಈ ಸಮುದಾಯದ ಒಣಪ್ರತಿಷ್ಠೆಯನ್ನು ಅನಾವರಣ ಮಾಡುತ್ತದೆ. ಒಂದು ಮರದ ರೆಂಬೆಗೆ ಬಡಿದಾಡಿಕೊಳ್ಳುವ ಈ ದಾಯಾದಿಗಳು, ವಲ್ಲೈಯಾನ್ ತೋಟದಲ್ಲಿ, ಹಂದಿ ಮಾಂಸದ ಪಾಲಿಗೋಸ್ಕರ ತನ್ನ ಪ್ರತಿಷ್ಠೆ ಬಿಟ್ಟು ನಿಲ್ಲುವುದಂತು ಹಾಸ್ಯದ ಜೊತೆಗೆ ಹೇಸಿಗೆ ಹುಟ್ಟಿಸುತ್ತದೆ. ಆದರೆ ಮಾಂಸಕ್ಕಾಗಿ ಈ ದಾಯಾದಿಗಳಿಬ್ಬರ ನಡುವಿನ ಜಗಳ ಮತ್ತೆ ಶುರುವಾಗುತ್ತದೆ. ಇದನ್ನು ಬಿಡಿಸಲು ಬಂದ ಪೂಚ್ಚಿ ಸಾವಿನಲ್ಲಿ ಜಗಳ ಕೊನೆಯಾಗುತ್ತದೆ. ಕೊನೆಗೆ ಕುಮರೇಸನ್ ಅನಾಥನಾಗುತ್ತಾನೆ. ಈ ರೀತಿ ಫ್ಯೂಡಲ್ ಸಮುದಾಯದ ಒಣಪ್ರತಿಷ್ಠೆ, ದರ್ಪ, ಕ್ರೌರ್ಯಕ್ಕೆ ಬಲಿಯಾಗಿರುವ ಅಸಂಖ್ಯಾತ ಪೂಚ್ಚಿಯಪ್ಪ ಮತ್ತು ಈ ಕಾರಣಗಳಿಗಾಗಿಯೇ ಅನಾಥರಾದ ಅಸಂಖ್ಯಾತ ಕುಮರೇಸನ್ ನಮ್ಮ ಕಣ್ಣು ಮುಂದೆ ಇದ್ದಾರೆ ಮತ್ತು ಇಂತ ಘಟನೆಗಳು ಪ್ರತಿ ದಿನ ಘಟಿಸುತ್ತಲೆ ಇವೆ. ಆದರೆ ಯಜಮಾನಿಕೆಯ ಸಮುದಾಯಗಳ ಕಲಾ ನಿರ್ಮಾತೃಗಳಿಗೆ ಅವೆಲ್ಲಾ ಕಾಣಿಸುವುದು ಇಲ್ಲವೇ ಇಲ್ಲವೆನ್ನುವಷ್ಟು ವಿರಳವಾದ ವಿದ್ಯಮಾನ.

ಪೂಚ್ಚಿ ತನ್ನ ಮೊಮ್ಮಗನನ್ನು ಶಾಲೆಗೆ ಬಿಡಲು ಬಂದಾಗ ಅಲ್ಲಿಯ ಶಿಕ್ಷಕ ಆತನನ್ನು ಮೂದಲಿಸುವ ದೃಶ್ಯ, ಪೂಚ್ಚಿಯ ಸಮುದಾಯ ಅಕ್ಷರ ಕಲಿಯುವುದರ ಬಗ್ಗೆ ಆ ಶಿಕ್ಷಕನಿಗೆ ಎಷ್ಟು ಅಸಹನೆ ಇದೆ ಎಂಬುದನ್ನು ತೋರಿಸುತ್ತದೆ. ಶಾಲೆಯಲ್ಲಿ ದಲಿತ ಮಕ್ಕಳ ಕೈಯಿಂದ ಖಾಸಗಿ ಕೆಲಸ ಮಾಡಿಸುವುದು; ಅವರು ತಿನ್ನುವ ಊಟವನ್ನು ಲೇವಡಿ ಮಾಡುವುದು; ಈ ತರದ ಸೂಕ್ಷ್ಮ ವಿಚಾರಗಳನ್ನು ತಮಿಳ ಮಧ್ಯೆಮಧ್ಯೆ ತರುತ್ತಾರೆ. ಶಾಲೆಯಲ್ಲಿ ಕುಮರೇಸನ್‌ನನ್ನು ನೀನು ಯಾವಯಾವ ಮಾಂಸ ತಿನ್ನುತ್ತೀಯ ಎಂದು ಪ್ರಶ್ನೆ ಕೇಳಿ ಹಾಸ್ಯ ಮಾಡುವ ಅದೇ ಫ್ಯೂಡಲ್ ಸಮುದಾಯದ ಶಿಕ್ಷಕ, ತಾನು ಹಂದಿ ಮಾಂಸ ತಿಂದ ಸಂಗತಿಯನ್ನು ಶಾಲೆಯಲ್ಲಿ ಯಾರಿಗೂ ಹೇಳಬೇಡ ಎಂದು ಅಂಗಲಾಚುತ್ತಾನೆ. ಈ ಶೂದ್ರ ಸಮುದಾಯದ ’ಬಲಿಷ್ಟ’ ಜಾತಿ ಜನರ ಬೂಟಾಟಿಕೆಯೆ ವೈದಿಕಶಾಹಿಗಳ ಬಂಡವಾಳ. ಈ ಬಲಿಷ್ಟ ಶೂದ್ರ ಸಮುದಾಯ ಪ್ರತಿದಿನ ತಾವು ವೈದಿಕರಾಗಲು ಹವಣಿಸುತ್ತಿದ್ದಾರೆ. ತಾವು ತಿನ್ನುವ ಆಹಾರದ ಬಗ್ಗೆ ಕೀಳರಿಮೆ ಇಟ್ಟುಕೊಂಡಿರುವುದು, ನಿರ್ದಿಷ್ಟ ವಾರಗಳಂದು ಮಾಂಸ ತಿನ್ನುವುದಿಲ್ಲ ಎನ್ನುವುದು, ತಮ್ಮ ಇಷ್ಟದ ಆಹಾರವನ್ನು ಕದ್ದು ಮುಚ್ಚಿ ತಿನ್ನುವ ಈ ಹೇಡಿತನದ ವಿಚಾರಗಳನ್ನು ಸಿನಿಮಾದ ದೃಶ್ಯಾವಳಿಗಳು ನೆನಪಿಸುತ್ತವೆ.

ಈ ರೀತಿಯ ಜಾತಿ ಅಸಮಾನತೆ, ದಬ್ಬಾಳಿಕೆ, ದೌರ್ಜನ್ಯಕ್ಕೆ ಪ್ರತಿರೋಧದ ಧ್ವನಿಯಾಗಿ ’ರಂಗ’ನ ಪಾತ್ರವನ್ನು ನಿರ್ದೇಶಕ ’ತಮಿಳ’ ಕಟ್ಟಿಕೊಡುತ್ತಾನೆ. ’ಈಗ ದಲಿತ ಸಮುದಾಯದ ಯುವಕರಲ್ಲಿ ಬೆಳೆಯುತ್ತಿರುವ ಪ್ರಜ್ಞೆಯ ಪ್ರತೀಕ ಈ ರಂಗ’ ಎಂದು ಈ ಪಾತ್ರದ ಬಗ್ಗೆ ನಿರ್ದೇಶಕ ಹೇಳುತ್ತಾರೆ. ಶಾಲೆಯಲ್ಲಿ ತನ್ನ ಮಗಳ ಕೈಯಲ್ಲಿ ಖಾಸಗಿ ಕೆಲಸ ಮಾಡುವುದನ್ನು, ಹೊಟೆಲ್‌ನಲ್ಲಿ ಇವನ ಜಾತಿ ನೋಡಿ ಪೇಪರ್ ಗ್ಲಾಸಿನಲ್ಲಿ ಟೀ ಕೊಡುವುದು, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ದೂರದೂರಿನ ಶಾಲೆಯ ಜೊತೆಗೆ ಅದನ್ನು ವಿಲೀನ ಮಾಡುವುದಕ್ಕೆ ಮುಂದಾಗುವುದನ್ನು ರಂಗ ಬಹಳ ಖಚಿತವಾಗಿ ವಿರೋಧಿಸುತ್ತಾನೆ. ನೇರವಾಗಿ ಟೀಕಿಸುತ್ತಾನೆ.

ಸೇತುಮಾನ್ ಸಿನಿಮಾ ಅದು ಚರ್ಚಿಸುವ ವಿಷಯದಿಂದಷ್ಟೆ ಮುಖ್ಯವಲ್ಲ, ಅದರ ಕಲಾತ್ಮಕತೆ, ಪಾತ್ರಾಭಿನಯಗಳಿಂದ ಕೂಡ ಪರಿಣಾಮಕಾರಿಯಾಗಿದೆ. ಇಷ್ಟಾಗಿಯೂ ಈ ಸಿನಿಮಾದ ಬಗ್ಗೆ ಯಾಕೆ ಹೆಚ್ಚು ಚರ್ಚೆಗಳು ನಡೆದಿಲ್ಲ ಎಂಬುದು ಸೋಜಿಗದ ಸಂಗತಿ. ಸಿನಿಮಾದಲ್ಲಿನ ಕೆಲವು ಲಾಂಗ್‌ಷಾಟ್‌ಗಳಲ್ಲಿ ತೋರುವ ಸ್ಥಿರ ದೃಶ್ಯಗಳು ಬಹಳ ಸಾವಯವಗಿ ಮೂಡಿವೆ. ಉದಾಹರಣೆಗೆ ಸಿನಿಮಾದ ಪ್ರಾರಂಭದಲ್ಲೆ, ವಿಸ್ತಾರವಾದ ಬಯಲಿನ ನಡುವೆ ಪೂಚ್ಚಿ ತನ್ನ ಮೊಮ್ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಡಲು ಹೋಗುತ್ತಿದ್ದಾನೆ. ತನ್ನ ತಾತನ ಹೆಗಲ ಮೇಲೆ ಕುಳಿತ ಕುಮರೇಸನ್ ಕೇಳುತ್ತಾನೆ: ’ನಾವ್ಯಾಕೆ ತಾತ ಊರಿನ ಹೊರಗೆ ಇರಬೇಕು, ಊರಿನ ಒಳಗೆ ಇದ್ದರೆ ನಾನು ಶಾಲೆಗೆ ಬೇಗ ಹೋಗಬಹುದಲ್ವಾ? ಈ ಪ್ರಶ್ನೆಯನ್ನು ಆ ದೃಶ್ಯ ಅದ್ಭುತವಾಗಿ ಕಟ್ಟಿಕೊಡುತ್ತದೆ. ಅದೇ ರೀತಿ ವಲ್ಲೈಯಾನ್ ತನ್ನ ಸಂಗಡಿಗರಿಗೆ ಹಂದಿ ಮಾಂಸದ ಮಹತ್ವವನ್ನು ವಿವರಿಸುವ ಮತ್ತು ಅವರ ನಡುವಿನ ಸಂಭಾಷಣೆಯ ದೃಶ್ಯ; ಸೇತುಮಾನ್‌ನಲ್ಲಿ ನಟಿಸಿರುವ ಕಲಾವಿದರನ್ನೂ ಈ ಹಿಂದೆ ಯಾವ ಸಿನಿಮಾಗಳಲ್ಲೂ ಹೆಚ್ಚು ಗಮನಿಸಿಲ್ಲ. ಇಡೀ ಸಿನಿಮಾ ಬಹಳ ತೀವ್ರವಾಗಿ ಪ್ರೇಕ್ಷಕನಿಗೆ ದಾಟುವುದಕ್ಕೆ ಈ ಪಾತ್ರಗಳ ಸಹಜ ಅಭಿನಯ ಮುಖ್ಯ ಕಾರಣ.

ಸೇತುಮಾನ್ ನೀಲಂ ಪ್ರೊಡಕ್ಷನ್‌ನಲ್ಲಿ ನಿರ್ಮಾಣಗೊಂಡಿರುವ ನಾಲ್ಕನೇ ಸಿನಿಮಾ. ಸಿನಿಮಾರಂಗಕ್ಕೆ ಹೊಸ ಗ್ರಹಿಕೆ, ಹೊಸ ಕಣ್ಣೋಟ, ಹೊಸ ಸಾಧ್ಯತೆಗಳನ್ನು ಕಟ್ಟಿಕೊಟ್ಟ ಮಾರಿ ಸೆಲ್ವರಾಜ್, ಫ್ರಾಂಕ್ಲಿನ್ ಜಾಕಬ್, ತಮಿಳರಂತಹ ಯುವ ನಿರ್ದೇಶಕರಿಗೆ ಅವಕಾಶ ನೀಡಿದ ಹೆಗ್ಗಳಿಕೆ ನೀಲಂ ಪ್ರೊಡಕ್ಷನ್‌ದು. ಈ ತರಹದ ಸೂಕ್ಷ್ಮತೆಯುಳ್ಳ ಅಸಂಖ್ಯಾತ ಯುವ ನಿರ್ದೇಶಕರು ನೀಲಂ ಪ್ರೊಡಕ್ಷನ್‌ನಿಂದ ಬೆಳಕಿಗೆ ಬರುವ ಸಾಧ್ಯತೆಗಳು ಈಗಾಗಲೇ ದಟ್ಟವಾಗಿ ಗೋಚರಿಸಿದೆ.

ಸೇತುಮಾನ್ ಸಿನಿಮಾದ ಭಾಗವಾದ ಎಲ್ಲರಿಗೂ ಅಭಿನಂದನೆಗಳು. ಈ ಸಿನಿಮಾ Sony Live ಒಟಿಟಿ ವೇದಿಕೆಯಲ್ಲಿ ಲಭ್ಯವಿದೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...

ಮೋದಿ, ಶಾ ವಿರುದ್ಧ ಘೋಷಣೆ ಆರೋಪ: ತನ್ನದೇ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ ಜೆಎನ್‌ಯು ಆಡಳಿತ ಮಂಡಳಿ

ಸೋಮವಾರ ರಾತ್ರಿ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಆ ಘೋಷಣೆಗಳು "ಪ್ರಚೋದನಕಾರಿ, ಪ್ರಚೋದನಕಾರಿ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ತನಿಖೆ ಪಕ್ಷಪಾತದಿಂದ ಕೂಡಿದೆ ಎಂಬ ವಿಪಕ್ಷಗಳ ಆರೋಪ ತಿರಸ್ಕರಿಸಿದ ಕೇರಳ ಹೈಕೋರ್ಟ್

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ಪಕ್ಷಪಾತದಿಂದ ಕೂಡಿದೆ ಅಥವಾ ಸರ್ಕಾರದ ಒತ್ತಡದಲ್ಲಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ...

ಆರ್‌ಎಸ್‌ಎಸ್ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ನಲಪಾಡ್‌ಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ...

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...