Homeಅಂಕಣಗಳುಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

- Advertisement -
- Advertisement -

ಪಿಕೆ ಟಾಕೀಸ್ 15/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಡಾರ್‌ಡೆನ್ ಸಹೋದರರು (Jean Pierre Dardenne & Luc Dardenne)

ಟು ನೈಟ್ಸ್, ಒನ್ ನೈಟ್ (2014, ಫ್ರೆಂಚ್, Two nights, One night): ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ ತಾಯಿ ಸ್ಯಾಂಡ್ರಾ. ಆಕೆ ಖಿನ್ನತೆಯಿಂದ ಪೂರ್ತಿಯಾಗಿ ಚೇತರಿಸಿಕೊಳ್ಳುವ ಮೊದಲೇ ಅವಳಿಗೆ ಆಘಾತಕಾರಿಯಾದ ಸುದ್ದಿ ಕಾದಿರುತ್ತದೆ.

ಅದು, ಆರ್ಥಿಕ ಹಿಂಜರಿತದ ಕಾರಣಕ್ಕೆ, ಶುಕ್ರವಾರದಂದು ಅವಳ ಫ್ಯಾಕ್ಟರಿಯಲ್ಲಿ ತೀರ್ಮಾನಿಸಿದಂತೆ, ಸ್ಯಾಂಡ್ರಾಳನ್ನು ಕೆಲಸದಿಂದ ಕಿತ್ತುಹಾಕಬೇಕಿರುತ್ತದೆ. ಅವಳ ಸಹೋದ್ಯೋಗಿಗಳು ಚಲಾಯಿಸುವ ಮತಗಳ ಮೇಲೆ ಸ್ಯಾಂಡ್ರಾಳ ಭವಿಷ್ಯವೇ ನಿರ್ಧಾರವಾಗಲಿರುತ್ತದೆ.

ಸ್ಯಾಂಡ್ರಾ ಮನೆಯಲ್ಲೂ ಆರ್ಥಿಕವಾಗಿ ಎಲ್ಲವೂ ಸರಿಯಿರುವುದಿಲ್ಲ. ಕೆಲಸವನ್ನು ಮರುಪಡೆಯಲು ಪ್ರಯತ್ನಿಸುವಂತೆ ಗಂಡ ಹೇಳುತ್ತಾನೆ. ಅದರಂತೆ ಸ್ಯಾಂಡ್ರಾ ತನಗೆ ಉಳಿದಿರುವ ಶನಿವಾರ ಮತ್ತು ಭಾನುವಾರದ ರಜಾದಿನಗಳಂದು ತನ್ನೆಲ್ಲ ಸಹೋದ್ಯೋಗಿಗಳನ್ನು ಒಬ್ಬೊಬ್ಬರಂತೆ ಭೇಟಿಯಾಗಿ, ತನ್ನ ಕೆಲಸ ಉಳಿಯುವ ಸಲುವಾಗಿ ತನ್ನ ಪರವಾಗಿ ಮತ ಚಲಾಯಿಸುವಂತೆ ವಿನಂತಿಸಿಕೊಳ್ಳುವುವೇ ಈ ಸಿನಿಮಾದ ಕಥಾನಕ.

ಸ್ಯಾಂಡ್ರಾಳ ಸಹೋದ್ಯೋಗಿಗಳಿಗೆ ತಲಾ ಸಾವಿರ ಯೂರೋ ಬೋನಸ್ ಹಣವನ್ನು ಗಳಿಸಿಕೊಳ್ಳುವ ಅವಕಾಶ, ತಾವು ಮತ ಚಲಾಯಿಸಿ ಸ್ಯಾಂಡ್ರಾ ಉದ್ಯೋಗ ಕಳೆದುಕೊಳ್ಳುವುದರಲ್ಲಿ ಅಡಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ಸಹೋದ್ಯೋಗಿಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗಲೂ ವಿವಿಧ ಬಗೆಯ ಸನ್ನಿವೇಶಗಳನ್ನು ಸ್ಯಾಂಡ್ರಾ ಎದುರಿಸಬೇಕಾಗುತ್ತದೆ.

ಕೆಲವರು ಸ್ಯಾಂಡ್ರಾಳ ಸ್ಥಿತಿಯನ್ನು ನೋಡಿ ಮರುಕಪಟ್ಟು, ಆಕೆ ಕೆಲಸಕ್ಕೆ ಹಿಂದಿರುಗಲು ಸಹಾಯವಾಗುವಂತೆ ಮತ ಚಲಾಯಿಸಲು ಒಪ್ಪಿಕೊಂಡರೆ, ಮತ್ತೆ ಕೆಲವರು ಸಾವಿರ ಯೂರೋಗಳನ್ನು ಕಳೆದುಕೊಳ್ಳಬೇಕಾಗುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಇನ್ನು ಕೆಲವರು ತಮ್ಮ ಸಾವಿರ ಯೂರೋಗಳನ್ನು ಕಿತ್ತುಕೊಳ್ಳುವ ಹುನ್ನಾರವಿದು ಎಂದುಕೊಂಡು ಸ್ಯಾಂಡ್ರಾಳ ಮೇಲೆ ಸಿಟ್ಟಾಗುತ್ತಾರೆ ಮತ್ತು ರೇಗಾಡುತ್ತಾರೆ.

ಟು ನೈಟ್ಸ್, ಒನ್ ನೈಟ್

ಫ್ಯಾಕ್ಟರಿಯಲ್ಲಿ ಸೋಮವಾರ ಬೆಳಿಗ್ಗೆ ಸ್ಯಾಂಡ್ರಾಳ ಸಹೋದ್ಯೋಗಿಗಳು ಮತ ಚಲಾಯಿಸುವುದರೊಂದಿಗೆ ಸ್ಯಾಂಡ್ರಾ ಹೊರಹೋಗುತ್ತಾಳೆ. ಸಿನಿಮಾ ಅಂತ್ಯವಾಗುತ್ತದೆ.

ಫ್ಯಾಕ್ಟರಿಗಳಲ್ಲಿ ವರ್ಷವೆಲ್ಲ ದುಡಿದು ನೌಕರರು ಬೋನಸ್ ಹಣಕ್ಕಾಗಿ ಕಾಯುತ್ತಿರುವಾಗ, ಸಹೋದ್ಯೋಗಿಯನ್ನು ಕೆಲಸದಿಂದ ವಜಾ ಮಾಡಲು ಮತ ಚಲಾಯಿಸಿದರೆ ಮಾತ್ರ ಬೋನಸ್ ಹಣವನ್ನು ನೀಡುವ ಷರತ್ತಿನಿಂದ, ಪರಸ್ಪರರಲ್ಲಿಯೇ ಭೇದ ಮೂಡಿಸಿ, ಮಾನವೀಯ ಕಾಳಜಿಗಳನ್ನು ಮರೆಯುವಂತೆ ಮಾಡುವ ಆಡಳಿತ ವರ್ಗದ ಕ್ರೌರ್ಯವನ್ನು ಸಿನಿಮಾ ಸಶಕ್ತವಾಗಿ ಹಿಡಿದಿಡುತ್ತದೆ. ಫ್ಯಾಕ್ಟರಿ ತನ್ನ ನೌಕರರನ್ನು ಕುರಿತು ತೋರಿಸುವ ನಿರ್ಲಕ್ಷ್ಯ ಮತ್ತು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಗುಣವನ್ನು ವೀಕ್ಷಕರಿಗೆ ಮನಮುಟ್ಟುವಂತೆ ಕಥಾನಕವನ್ನು ನಿರ್ದೇಶಕ ಹೆಣೆದಿದ್ದಾರೆ.

ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಿರುವ ಮಾರಿಯಾನ್ ಕೊಟಿಯಾಡ್ ಮುಖ್ಯವಾಹಿನಿ ಸಿನಿಮಾಗಳಲ್ಲಿ ಪ್ರಖ್ಯಾತಿ ಪಡೆದಿರುವವರು. ಈ ಸಿನಿಮಾದಲ್ಲಿ ಅವರು ಯಾವುದೇ ವಿಧವಾದ ಮೇಕಪ್ ಇಲ್ಲದೆ ಕಾಣಿಸಿಕೊಂಡು, ಅದ್ಬುತ ನಟನೆಯನ್ನು ನೀಡಿದ್ದಾರೆ.

ಖಿನ್ನತೆಯನ್ನು ನಿಜವಾದ ಕಾಯಿಲೆಯೆಂದು ಎಷ್ಟೋ ದೇಶಗಳಲ್ಲಿ ಗುರುತಿಸದೆ ಇರುವುದರ ಬಗ್ಗೆ ಕೂಡ ಈ ಸಿನಿಮಾ ದ್ವನಿ ಎತ್ತುತ್ತದೆ.

ಯಂಗ್ ಅಹ್ಮೆದ್ (2019, ಫ್ರೆಂಚ್, Young Ahmed): ತಂದೆಯನ್ನು ಕಳೆದುಕೊಂಡಿರುವ ಹದಿಮೂರು ವರ್ಷದ ಅಹ್ಮೆದ್ ತಾಯಿ ಮತ್ತು ಸಹೋದರಿಯ ಜೊತೆ ಬೆಲ್ಜಿಯಂನ ಹಳ್ಳಿಯೊಂದರಲ್ಲಿ ಬದುಕುತ್ತಿರುವ ಮುಸ್ಲಿಂ ಸಮುದಾಯದ ಹುಡುಗ.

ಅಹ್ಮೆದ್ ಅಲ್ಲಿನ ಹದಿಹರೆಯುದ ಹುಡುಗರು ತೊಡಗಿಸಿಕೊಳ್ಳುವಂತೆ ವಿಡಿಯೋ, ಮೊಬೈಲ್ ಆಟಗಳನ್ನು ಆಡುವುದನ್ನು ಬಿಟ್ಟು, ಇಸ್ಲಾಂ ಮೂಲಭೂತವಾದಕ್ಕೆ ತಿರುಗಿ ಅದರಂತೆಯೇ ವರ್ತಿಸುತ್ತಾನೆ. ತನ್ನ ತಾಯಿ ಮತ್ತು ಅಕ್ಕನಿಗೆ ಸರಿಯಾದ ಬಟ್ಟೆಗಳನ್ನು ಧರಿಸುವಂತೆ ಸಲಹೆ ನೀಡಲು ಪ್ರಾರಂಭಿಸುತ್ತಾನೆ. ಹೆಂಗಸರು
ಅಥವಾ ಹುಡುಗಿಯರನ್ನು ಮುಟ್ಟುವುದು ತಪ್ಪೆಂದು ಹೇಳುತ್ತಾನೆ.

ಶಾಲೆಯಲ್ಲಿ ಶಿಕ್ಷಕಿಯೊಬ್ಬರ ಪಾಠಗಳನ್ನು ಬೇಕಂತಲೇ ತಪ್ಪಿಸಿಕೊಳ್ಳುತ್ತಾನೆ. ಕಾರಣ ಶಿಕ್ಷಕಿಗೆ ’ಜ್ಯೂ’ ಬಾಯ್‌ಫ್ರೆಂಡ್ ಇರುವುದು. ಅದಕ್ಕಾಗಿ ಆಕೆಯನ್ನು ದ್ವೇಷಿಸುತ್ತಾನೆ.

ಅಹ್ಮೆದ್‌ನ ಸೋದರ ಸಂಬಂಧಿಯೊಬ್ಬ ಇಸ್ಲಾಂ ಜಿಹಾದಿಯಾಗಿರುತ್ತಾನೆ. ಅಲ್ಲದೆ ಅವನ ಹೆಸರಿನಲ್ಲಿರುವ ವೆಬ್‌ಸೈಟಿನಲ್ಲಿ ನಾಯಕನಂತೆ ರಂಜಿಸಿ ಬರೆದಿರುತ್ತಾರೆ. ಅದೇ ಊರಿನಲ್ಲಿ ಮೂಲಭೂತವಾದಿ ಇಮಾಮ್ ಜೊತೆಯಲ್ಲಿ ಅಹ್ಮೆದ್‌ನ ಗೆಳೆತನ. ’ಸೆಕ್ಯುಲರಿಸಂನಿಂದ ಇಸ್ಲಾಂ ದುರ್ಬಲಗೊಂಡು, ಇಸ್ಲಾಂ ಧರ್ಮವೇ ಮಾಯವಾಗುತ್ತದೆ. ಇದೇ ಕಾರಣದಿಂದ ಇಸ್ಲಾಂ ಧರ್ಮವನ್ನು ಉಳಿಸುವುದ್ದಕ್ಕಾಗಿ ಜವಾಬ್ದಾರಿಯನ್ನು ನಿರ್ವಹಿಸಿಬೇಕೆಂದು’ ಇಮಾಮ್ ಬ್ರೈನ್ ವಾಶ್ ಮಾಡುತ್ತಿರುತ್ತಾನೆ.

ಯಂಗ್ ಅಹ್ಮೆದ್

ಅದರಂತೆ ಅಹ್ಮೆದ್ ದಿನಚರಿ ಬದಲಾಗುತ್ತದೆ. ಒಂಟಿಯಾಗಿರುವುದು, ನಮಾಜ್ ಮಾಡುವುದು ಇಲ್ಲವೇ ಇಮಾಮ್‌ನ ಸಂಘದಲ್ಲಿ ಇರುವುದು ಅಷ್ಟೇ! ಇಸ್ಲಾಂಅನ್ನು ಉಳಿಸಬೇಕೆಂದು ’ಜ್ಯೂಯಿಶ್’ ಬಾಯ್‌ಫ್ರೆಂಡ್ ಇರುವ ಶಿಕ್ಷಕಿಯನ್ನು ಕೊಲ್ಲುವ ಪ್ರಯತ್ನಮಾಡುತ್ತಾನೆ. ಆದರೆ ಸಾಧ್ಯವಾಗುವುದಿಲ್ಲ. ಈ ಹಲ್ಲೆಗಾಗಿ ಬಾಲಾಪರಾಧ ಕೇಂದ್ರದಲ್ಲಿ ಬಂಧಿಯಾಗುತ್ತಾನೆ.

ಬಾಲಾಪರಾಧ ಕೇಂದ್ರದಲ್ಲಿಯೇ ಐದು ಬಾರಿ ನಮಾಜ್ ಮಾಡುತ್ತಾ, ತನ್ನಲ್ಲಿ ಪರಿವರ್ತನೆಯಾಗುತ್ತಿದೆ ಎಂದು
ತೋರಿಸಿಕೊಳ್ಳುತ್ತಾನೆ. ಆದರೆ ಅವನಲ್ಲಿ ಬಿತ್ತಲಾಗಿದ್ದ ವಿಷ ಹಾಗೆಯೇ ಉಳಿದುಕೊಂಡಿರುತ್ತದೆ. ಈ ಕೇಂದ್ರದಲ್ಲಿ ಮನೋಶಾಸ್ತ್ರಜ್ಞರ ಸಹಾಯದಿಂದ, ತೋಟದ ಕೆಲಸದ ನಿಮಿತ್ತ ಅಹ್ಮೆದ್‌ನನ್ನು ಹೊರಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಭೇಟಿಯಾಗುವ ಹುಡುಗಿಯಿಂದ ಅಹ್ಮೆದ್‌ನಲ್ಲಿ ಬದಲಾವಣೆಗಳಾಗುತ್ತಾ ಸಿನಿಮಾ ಕೊನೆಮುಟ್ಟುತ್ತದೆ.

ಹದಿಹರೆಯದವರ ದುರ್ಬಲ ಮನಸ್ಸುಗಳನ್ನು ಹೇಗೆ ಮೂಲಭೂತವಾದಿಗಳು ತಮ್ಮ ತಕ್ಕೆಗೆ ತೆಗೆದುಕೊಂಡು, ಅವರ ಬದುಕನ್ನೇ ಅಲ್ಲೋಲಕಲ್ಲೋಲಗೊಳಿಸುತ್ತಾರೆ ಎಂಬುದನ್ನು ಚಿತ್ರಿಸಿರುವ ಸಿನಿಮಾದಲ್ಲಿ ಮಹತ್ವದ ಪ್ರಶ್ನೆಗಳನ್ನೂ ಎತ್ತಲಾಗಿದೆ. ಮನಸ್ಸೆಲ್ಲ ವಿಷ ತುಂಬಿಕೊಂಡು ಮಾಡಿರುವ ತಪ್ಪುಗಳಿಗೆ ಶಿಕ್ಷಿಸಬೇಕಾ ಇಲ್ಲವಾ ಆಥವಾ ಪರಿವರ್ತನೆ ಸಾಧ್ಯವೇ ಎನ್ನುವ ಅತಿ ದೊಡ್ಡ ಪ್ರಶ್ನೆಯನ್ನು ನಿರ್ದೇಶಕರು ಪ್ರೇಕ್ಷಕರಿಗೆ ತೇಲಿಬಿಡುತ್ತಾರೆ.

ಡಾರ್‌ಡೆನ್ ಸಹೋದರರು (Jean Pierre Dardenne & Luc Dardenne): ಡಾರ್‌ಡೆನ್ ಸಹೋದರಿಗೆ ವಯಸ್ಸಿನಲ್ಲಿ ಮೂರು ವರ್ಷಗಳ ಅಂತರ. ಈ ಜೋಡಿ ನಿರ್ದೇಶಕರು ಮುಂದುವರೆದ ಸಮಾಜದಲ್ಲಿ ವಿವಿಧ ಕಾರಣಗಳಿಂದ ಒಂಟಿಯಾಗಿರುವ ಮನಸ್ಸುಗಳನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವ ಪ್ರಯತ್ನವನ್ನು ತಮ್ಮ ಸಿನಿಮಾಗಳಲ್ಲಿ ಶೋಧಿಸಿದ್ದಾರೆ.

ಇವರ ’ಕಿಡ್ ವಿತ್ ಅ ಬೈಕ್’ (2011), ’ದಿ ಚೈಡ್’ (2005) ಮತ್ತು ’ಯಂಗ್ ಅಹ್ಮೆದ್’ ಚಿತ್ರಗಳಲ್ಲಿ ಮಕ್ಕಳ ಮನೋಲೋಕವನ್ನು ಅನ್ವೇಷಿಸಿ ಹಿಡಿದಿಟ್ಟಿದ್ದಾರೆ.

ಇವರ ಸಿನಿಮಾಟೋಗ್ರಾಫಿಯ ಶೈಲಿ ಕೂಡ ವಿಭಿನ್ನವಾದದ್ದು. ಸಾಂಪ್ರದಾಯಿಕವಾಗಿ ಚಿತ್ರಿಸುವಂತೆ ಫುಲ್, ಮಿಡ್ ಮತ್ತು ಕ್ಲೋಸ್‌ಅಪ್ ಶಾಟ್‌ಗಳನ್ನು ಬಳಸದೆ, ಪಾತ್ರಗಳು ತಮ್ಮ ದಿನನಿತ್ಯದಲ್ಲಿ ವ್ಯವಹರಿಸುವಂತೆಯೇ ಅಥವಾ ಮತ್ತೊಂದು ಪಾತ್ರದೊಂದಿಗೆ ಸಂಭಾಷಿಸುತ್ತಿದ್ದಾಗ ಕ್ಯಾಮರಾ ಒಂದೇ ಕಡೆ ನಿಂತು, ಎಲ್ಲದಕ್ಕೂ ಸಾಕ್ಷಿಯೆಂಬಂತೆ ಗಮನಿಸುತ್ತದೆ.

ಡಾರ್‌ಡೆನ್ ಸಹೋದರರು

ಇವರ ಸಿನಿಮಾಗಳಲ್ಲಿ ಕ್ಯಾಮರಾ ಚಲನೆಯೂ ಗಮನಾರ್ಹವಾದದ್ದು. ಪಾತ್ರವೊಂದು ಎಡಬದಿಯಿಂದ ಬೇರೆಕಡೆಗೆ ಹೋಗುವ ಸನ್ನಿವೇಶದಲ್ಲಿ, ಮಧ್ಯೆದಲ್ಲಿ ನಿಂತು ಕ್ಯಾಮರಾವನ್ನು ಎಡಗಡೆಯಿಂದ ಪ್ಯಾನ್ ಮಾಡಿ ಬಲಭಾಗಕ್ಕೆ ತಿರುಗಿಸುತ್ತಾರೆ. ಮತ್ತು ದೃಶ್ಯಗಳನ್ನು ಪದೇ ಪದೇ ತುಂಡರಿಸದೆ, ನಿರಂತರವಾಗಿ ನಡೆವ ಸಂಭಾಷಣೆಗಳಲ್ಲಿ ಪ್ರೇಕ್ಷಕ ಮುಳುಗಿ, ಇದು ಸಿನಿಮಾ ಎಂಬುದನ್ನು ಮರೆತು, ನಿಜವಾಗಿ ನಡೆಯುತ್ತಿರುವ ಸನ್ನಿವೇಶಗಳೇನೋ ಎಂದು ಭಾಸವಾಗುವಂತೆ ಮಾಡಿ, ಪ್ರೇಕ್ಷಕನನ್ನು ಅದಕ್ಕೆ ಮೂಕಸಾಕ್ಷಿಯನ್ನಾಗಿಸುತ್ತಾರೆ.

ಡಾರ್‌ಡೆನ್ ಸಹೋದರರು ಹಲವಾರು ಸಾಕ್ಷ್ಯಚಿತ್ರಗಳನ್ನು ಕೂಡ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಇದೇ ಕಾರಣದಿಂದಲೇ ಇವರ ಸಿನಿಮಾಟೋಗ್ರಾಫಿಯ ಶೈಲಿ ಫೀಚರ್ ಫಿಲ್ಮ್‌ಗಳಲ್ಲಿ ಕೂಡ ನೈಜತೆಯನ್ನು ಸೆರೆಹಿಡಿಯಲು ಪ್ರಯತ್ನಿಸುತ್ತದೆ.


ಇದನ್ನೂ ಓದಿ: ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...