Homeಅಂಕಣಗಳುಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು.

- Advertisement -
- Advertisement -

ರೈತರ ಸಾಲಮನ್ನಾ ಪ್ರಹಸನಕ್ಕೆ ಇತಿಶ್ರೀ ಹಾಡಿ ಅವರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಗೊತ್ತು ಮಾಡಿ ಎಂದು ಸರ್ಕಾರಕ್ಕೆ ಆಗ್ರಹ ಪೂರ್ವಕವಾಗಿ ಹೇಳುತ್ತಿದ್ದೇನೆ.

ರೈತರ ಸಾಲಮನ್ನಾ ಶ್ರೀಮಂತ ರೈತರಿಗೆ ಒಂದು ವರದಾನ. ಪ್ರತಿವರ್ಷ ಈ ಶ್ರೀಮಂತ ರೈತರು ಒಂದು ಲಕ್ಷ, ಎರಡು ಲಕ್ಷ ಬ್ಯಾಂಕಿನಿಂದ ಸಾಲ ಪಡೆಯುವುದು ವರ್ಷದ ಕೊನೆಯಲ್ಲಿ ಆ ಸಾಲಮನ್ನಾ ಮಾಡಿಸುವುದು. ಹತ್ತಾರು ವರ್ಷಗಳಿಂದ ನಡೆದೇ ಇದೆ. ಶ್ರೀಮಂತ ರೈತರು ಸೈಟು ಕೊಳ್ಳುವುದು, ಕಂಪೆನಿ ಷೇರುಕೊಳ್ಳುವುದಕ್ಕೆ, ವ್ಯವಸಾಯದ ಜೊತೆಗೆ ಅಕ್ಕಿ ಗಿರಣಿ, ಕಿರಾಣಿ ವ್ಯಾಪಾರ ಮಳಿಗೆ ತೆರೆಯಲು ಈ ಸಾಲಮನ್ನಾ ಹಣ ಬಳಕೆಯಾಗುತ್ತಿದೆ.

ಎರಡು ನಾಲ್ಕು ಎಕರೆ ಜಮೀನು ಹೊಂದಿದವರು ರೈತಾಪಿಗಳಲ್ಲವೇ? ಇಂತಹವರು ಶೇ.60ರಷ್ಟು ಜನ ಇದ್ದಾರೆ. ಇವರಿಗೆ ಸಿಗುವ ಸಾಲ ಬಹಳ ಕಡಿಮೆ. ಇವರಿಗೆ ಸಾಲದ ಬದಲು ಪವರ್ ಟಿಲ್ಲರ್‍ನಲ್ಲಿ ಇವರ ಭೂಮಿಯನ್ನ ಉಚಿತವಾಗಿ ಉತ್ತಿ ಕೊಡಬೇಕು, ಕಟಾವು ಮಾಡುವ ಸಾಧನೆ ಡ್ರೈಯರ್ ಹಾರ್ವೆಸ್ಟರ್‍ಗಳನ್ನು ಸಕಾಲದಲ್ಲಿ ಉಚಿತವಾಗಿ ಒದಗಿಸಬೇಕು.

ಕಾರ್ಖಾನೆಯಲ್ಲಿ ತಯಾರಾದ ಪದಾರ್ಥಕ್ಕೆ ಬೆಲೆ ನಿರ್ಧರಿಸುವಾಗ ಅಲ್ಲಿ ಅನುಸರಿಸುವ ಎಲ್ಲ ನಿಯಮಗಳನ್ನೂ ವೈಜ್ಞಾನಿಕವಾಗಿ ರೈತನಿಗೂ ಅನುಸರಿಸಬೇಕು. ವೈಜ್ಞಾನಿಕವಾಗಿ ಬೆಳೆದ ಬೆಳೆಗೆ ಬೆಲೆ ನಿರ್ಧರಿಸಲು ಒಂದು ವ್ಯವಸ್ಥೆ ಮಾಡಲಾಗಿತ್ತು. ಆ ಸಮಿತಿ ತನ್ನ ಅಂತಿಮ ವರದಿ ನೀಡಿದೆ. ಅದನ್ನು ಸರ್ಕಾರ ಕೂಡಲೇ ಅಂಗೀಕರಿಸಿ ಚಾಲ್ತಿಗೆ ಕೊಡಬೇಕು. ಸಾಲಮನ್ನಾ ಹುನ್ನಾರವನ್ನು ಕೊನೆಗಾಣಿಸಬೇಕು.

ಸಣ್ಣ ರೈತರು ತಾವೇ ಹೊಲದಲ್ಲಿ ದುಡಿದು ವ್ಯವಸಾಯ ಮಾಡುತ್ತಾರೆ. 20 ಎಕರೆ ಮೇಲೆ ಜಮೀನುಳ್ಳವರು ಸಂಪೂರ್ಣವಾಗಿ ಕೂಲಿಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಈ ವ್ಯವಸಾಯ ಕೂಲಿ ದರ ದಿನಕ್ಕೆ 500ರೂ.ಗಳು. ಕೇರಳದಲ್ಲಿ 800ರೂ ಎಂದು ಕೇಳಲ್ಪಟ್ಟಿದ್ದೇನೆ. ಇಷ್ಟೊಂದು ಕೂಲಿ ಕೊಟ್ಟು ತಮ್ಮ ಎಲ್ಲ ಜಮೀನಿನಲ್ಲೂ ಆಹಾರ ಧಾನ್ಯ ಬೆಳೆಯಲು ಆಗುವುದಿಲ್ಲ. ಬೆಳೆದ ಬೆಳೆಯನ್ನೆಲ್ಲಾ ಮಾರಾಟ ಮಾಡಿದರೂ ಬೆಳೆದವನಿಗೆ ಶೇ.30ರಷ್ಟು ಲಾಭ ದೊರೆಯುವುದಿಲ್ಲ. ಆದ್ದರಿಂದ ಈ ದೊಡ್ಡ ಹಿಡುವಳಿದಾರರು ಸ್ವಲ್ಪ ಜಮೀನಿನಲ್ಲಿ ಆಹಾರ ಧಾನ್ಯ ಬೆಳೆದು ಉಳಿದ ಜಮೀನಿನಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವ ಶುಂಠಿ, ಕೊತ್ತಂಬರಿ, ತರ್ಕಾರಿ, ಹೂವು ಬೆಳೆಯುತ್ತಾರೆ. ಇನ್ನೂ ಹೆಚ್ಚು ಜಮೀನುಳ್ಳವರು ತೇಗ ಮೊದಲಾದ ಲಾಭ ತರುವ ಮರಗಳನ್ನು ಬೆಳೆಯುತ್ತಾರೆ. ಇದರಿಂದಾಗಿ ಭಾರತದಲ್ಲಿ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿದೆ. ಸಿ.ಸುಬ್ರಮಣ್ಯಂ ಅವರು ವ್ಯವಸಾಯ ಸಚಿವರಾಗಿದ್ದಾಗ ಆಹಾರ ಕ್ರಾಂತಿ ಒಂದನ್ನು ಮಾಡಿದ್ದರು. ಎಂದು ಇದನ್ನು ಕರೆದರು. ಭಾರತದಲ್ಲಿ ಆಹಾರ ಧಾನ್ಯಕ್ಕೆ ಕೊರತೆ ಉಂಟಾಗದಂತೆ ಅವರು ನೋಡಿಕೊಂಡರು. ಭಾರತ ವ್ಯವಸಾಯ ಪ್ರಧಾನ ದೇಶ ಭಾರತೀಯರು ಭಿಕ್ಷೆ ಪಾತ್ರೆ ಹಿಡಿದು ಅನ್ಯ ದೇಶಗಳ ಬಳಿ ಹೋಗಬಾರದು ಅದು ಅಪಮಾನಕರ ಎಂದು ಸಿ.ಸುಬ್ರಮಣ್ಯಂ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಅವರ ಕಾಲದಲ್ಲಿ ಅನೇಕ ದೊಡ್ಡ ನದಿಗಳಿಗೆ ಅಡ್ಡಗಟ್ಟಿ ಹಾಕಿ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿಸಿದರು. ಹೊಲಗದ್ದೆಗಳ ಬದುವಿಗೆ ಗೊಬ್ಬರದ ಗಿಡಗಳನ್ನು ಬೆಳೆಸಲಾಯಿತು. ಒಡ್ಡುಗಳನ್ನು ಹಾಕಲಾಯಿತು. ಆಗ ವ್ಯವಸಾಯದ ಕೂಲಿ ಇಷ್ಟೊಂದು ಇರಲಿಲ್ಲ. ಹೀಗಾಗಿ ಭಾರತವು ಆಹಾರದ ವಿಷಯದಲ್ಲಿ ಸ್ವಪರಿಪೂರ್ಣವಾಯಿತು. ಈಗ ನಾವು ಸಕ್ಕರೆ, ಗೋಧಿ, ಅಕ್ಕಿ ಮುಂತಾದುದನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ.

ಬಡವರನೇಕರ ಕೈಯಲ್ಲಿ ಭೂಮಿ ಇಲ್ಲ; ದುಡಿದು ತಿನ್ನುತ್ತೇವೆಂದರೆ ತಮ್ಮದಾಗಿ ನೆಲ ಇಲ್ಲ. ಈ ಭೂಮಿಹೀನರೂ ಭಾರತೀಯರೆ ಅಲ್ಲವೇ? ಅವರಿಗೆ ಓಟು ಕೊಟ್ಟಿದ್ದೇವೆ, ಊಟ ಕೊಟ್ಟಿಲ್ಲ, ಉದ್ಯೋಗ ಕೊಟ್ಟಿಲ್ಲ. ಸರ್ಕಾರ ಭೂಮಿಯ ಮರು ಹಂಚಿಕೆ ಮಾಡಬೇಕು. ಆದಾಗಬೇಕಾದರೆ ಸೀಲಿಂಗ್‍ಅನ್ನು ಇಳಿಸಬೇಕು. ಭೂಮಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ದುಡಿಯಲು ತಯಾರಿರುವ ಭೂಹೀನರಿಗೆ ತಲಾ 5 ಎಕರೆ ಖುಷ್ಕಿ ಅಥವಾ 3 ಎಕರೆ ತರಿ ಅಥವಾ ಒಂದು ಎಕರೆ ತೋಟದ ಜಮೀನನ್ನು ನೀಡಬೇಕು. ಹೀಗೆ ನೀಡಿದ ಜಮೀನನ್ನು ಖಾಸಗಿಯವರಿಗೆ ಮಾರಾಟ, ಭೋಗ್ಯ ಆಧಾರ ಮಾಡುವಂತಿಲ್ಲ ಎಂಬ ಕರಾರು ಹಾಕಿ ಭೂಮಿ ಹಂಚಬೇಕು. ಎರಡು ವರ್ಷ ಕಾಲ ಹೀಗೆ ನೀಡಿದ ಜಮೀನನ್ನು ಎರಡು ವರ್ಷ ಕಾಲ ಉಳುಮೆ ಮಾಡದಿದ್ದರೆ, ಆ ಜಮೀನನ್ನು ಅವರ ವಶದಿಂದ ಹಿಂಪಡೆದು ದುಡಿಮೆ ಮಾಡುವ ಬೇರೊಬ್ಬರಿಗೆ ಕೊಡಬೇಕು.

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು. ಮೋದಿ ಸರ್ಕಾರ ಭೂಮಿ ನೀಡಿ ರೈತರನ್ನ ಕಾಲ ಮೇಲೆ ನಿಲ್ಲುವ ಹಾಗೆ ಮಾಡಬೇಕೇ ಹೊರತು, ಸರ್ಕಾರದಿಂದ ಭಿಕ್ಷೆಗೆ ಕಾಯುವಂತೆ ಮಾಡುವುದು ಭಾರತೀಯರನ್ನು ಅಪಮಾನಗೊಳಿಸಿದಂತೆ ಎಂದು ತಿಳಿಯಬೇಕು.


ಇದನ್ನು ಓದಿ: ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ : ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ಬಿಡುಗಡೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...