Homeಅಂಕಣಗಳುಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು.

- Advertisement -
- Advertisement -

ರೈತರ ಸಾಲಮನ್ನಾ ಪ್ರಹಸನಕ್ಕೆ ಇತಿಶ್ರೀ ಹಾಡಿ ಅವರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಗೊತ್ತು ಮಾಡಿ ಎಂದು ಸರ್ಕಾರಕ್ಕೆ ಆಗ್ರಹ ಪೂರ್ವಕವಾಗಿ ಹೇಳುತ್ತಿದ್ದೇನೆ.

ರೈತರ ಸಾಲಮನ್ನಾ ಶ್ರೀಮಂತ ರೈತರಿಗೆ ಒಂದು ವರದಾನ. ಪ್ರತಿವರ್ಷ ಈ ಶ್ರೀಮಂತ ರೈತರು ಒಂದು ಲಕ್ಷ, ಎರಡು ಲಕ್ಷ ಬ್ಯಾಂಕಿನಿಂದ ಸಾಲ ಪಡೆಯುವುದು ವರ್ಷದ ಕೊನೆಯಲ್ಲಿ ಆ ಸಾಲಮನ್ನಾ ಮಾಡಿಸುವುದು. ಹತ್ತಾರು ವರ್ಷಗಳಿಂದ ನಡೆದೇ ಇದೆ. ಶ್ರೀಮಂತ ರೈತರು ಸೈಟು ಕೊಳ್ಳುವುದು, ಕಂಪೆನಿ ಷೇರುಕೊಳ್ಳುವುದಕ್ಕೆ, ವ್ಯವಸಾಯದ ಜೊತೆಗೆ ಅಕ್ಕಿ ಗಿರಣಿ, ಕಿರಾಣಿ ವ್ಯಾಪಾರ ಮಳಿಗೆ ತೆರೆಯಲು ಈ ಸಾಲಮನ್ನಾ ಹಣ ಬಳಕೆಯಾಗುತ್ತಿದೆ.

ಎರಡು ನಾಲ್ಕು ಎಕರೆ ಜಮೀನು ಹೊಂದಿದವರು ರೈತಾಪಿಗಳಲ್ಲವೇ? ಇಂತಹವರು ಶೇ.60ರಷ್ಟು ಜನ ಇದ್ದಾರೆ. ಇವರಿಗೆ ಸಿಗುವ ಸಾಲ ಬಹಳ ಕಡಿಮೆ. ಇವರಿಗೆ ಸಾಲದ ಬದಲು ಪವರ್ ಟಿಲ್ಲರ್‍ನಲ್ಲಿ ಇವರ ಭೂಮಿಯನ್ನ ಉಚಿತವಾಗಿ ಉತ್ತಿ ಕೊಡಬೇಕು, ಕಟಾವು ಮಾಡುವ ಸಾಧನೆ ಡ್ರೈಯರ್ ಹಾರ್ವೆಸ್ಟರ್‍ಗಳನ್ನು ಸಕಾಲದಲ್ಲಿ ಉಚಿತವಾಗಿ ಒದಗಿಸಬೇಕು.

ಕಾರ್ಖಾನೆಯಲ್ಲಿ ತಯಾರಾದ ಪದಾರ್ಥಕ್ಕೆ ಬೆಲೆ ನಿರ್ಧರಿಸುವಾಗ ಅಲ್ಲಿ ಅನುಸರಿಸುವ ಎಲ್ಲ ನಿಯಮಗಳನ್ನೂ ವೈಜ್ಞಾನಿಕವಾಗಿ ರೈತನಿಗೂ ಅನುಸರಿಸಬೇಕು. ವೈಜ್ಞಾನಿಕವಾಗಿ ಬೆಳೆದ ಬೆಳೆಗೆ ಬೆಲೆ ನಿರ್ಧರಿಸಲು ಒಂದು ವ್ಯವಸ್ಥೆ ಮಾಡಲಾಗಿತ್ತು. ಆ ಸಮಿತಿ ತನ್ನ ಅಂತಿಮ ವರದಿ ನೀಡಿದೆ. ಅದನ್ನು ಸರ್ಕಾರ ಕೂಡಲೇ ಅಂಗೀಕರಿಸಿ ಚಾಲ್ತಿಗೆ ಕೊಡಬೇಕು. ಸಾಲಮನ್ನಾ ಹುನ್ನಾರವನ್ನು ಕೊನೆಗಾಣಿಸಬೇಕು.

ಸಣ್ಣ ರೈತರು ತಾವೇ ಹೊಲದಲ್ಲಿ ದುಡಿದು ವ್ಯವಸಾಯ ಮಾಡುತ್ತಾರೆ. 20 ಎಕರೆ ಮೇಲೆ ಜಮೀನುಳ್ಳವರು ಸಂಪೂರ್ಣವಾಗಿ ಕೂಲಿಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಈ ವ್ಯವಸಾಯ ಕೂಲಿ ದರ ದಿನಕ್ಕೆ 500ರೂ.ಗಳು. ಕೇರಳದಲ್ಲಿ 800ರೂ ಎಂದು ಕೇಳಲ್ಪಟ್ಟಿದ್ದೇನೆ. ಇಷ್ಟೊಂದು ಕೂಲಿ ಕೊಟ್ಟು ತಮ್ಮ ಎಲ್ಲ ಜಮೀನಿನಲ್ಲೂ ಆಹಾರ ಧಾನ್ಯ ಬೆಳೆಯಲು ಆಗುವುದಿಲ್ಲ. ಬೆಳೆದ ಬೆಳೆಯನ್ನೆಲ್ಲಾ ಮಾರಾಟ ಮಾಡಿದರೂ ಬೆಳೆದವನಿಗೆ ಶೇ.30ರಷ್ಟು ಲಾಭ ದೊರೆಯುವುದಿಲ್ಲ. ಆದ್ದರಿಂದ ಈ ದೊಡ್ಡ ಹಿಡುವಳಿದಾರರು ಸ್ವಲ್ಪ ಜಮೀನಿನಲ್ಲಿ ಆಹಾರ ಧಾನ್ಯ ಬೆಳೆದು ಉಳಿದ ಜಮೀನಿನಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವ ಶುಂಠಿ, ಕೊತ್ತಂಬರಿ, ತರ್ಕಾರಿ, ಹೂವು ಬೆಳೆಯುತ್ತಾರೆ. ಇನ್ನೂ ಹೆಚ್ಚು ಜಮೀನುಳ್ಳವರು ತೇಗ ಮೊದಲಾದ ಲಾಭ ತರುವ ಮರಗಳನ್ನು ಬೆಳೆಯುತ್ತಾರೆ. ಇದರಿಂದಾಗಿ ಭಾರತದಲ್ಲಿ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿದೆ. ಸಿ.ಸುಬ್ರಮಣ್ಯಂ ಅವರು ವ್ಯವಸಾಯ ಸಚಿವರಾಗಿದ್ದಾಗ ಆಹಾರ ಕ್ರಾಂತಿ ಒಂದನ್ನು ಮಾಡಿದ್ದರು. ಎಂದು ಇದನ್ನು ಕರೆದರು. ಭಾರತದಲ್ಲಿ ಆಹಾರ ಧಾನ್ಯಕ್ಕೆ ಕೊರತೆ ಉಂಟಾಗದಂತೆ ಅವರು ನೋಡಿಕೊಂಡರು. ಭಾರತ ವ್ಯವಸಾಯ ಪ್ರಧಾನ ದೇಶ ಭಾರತೀಯರು ಭಿಕ್ಷೆ ಪಾತ್ರೆ ಹಿಡಿದು ಅನ್ಯ ದೇಶಗಳ ಬಳಿ ಹೋಗಬಾರದು ಅದು ಅಪಮಾನಕರ ಎಂದು ಸಿ.ಸುಬ್ರಮಣ್ಯಂ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಅವರ ಕಾಲದಲ್ಲಿ ಅನೇಕ ದೊಡ್ಡ ನದಿಗಳಿಗೆ ಅಡ್ಡಗಟ್ಟಿ ಹಾಕಿ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿಸಿದರು. ಹೊಲಗದ್ದೆಗಳ ಬದುವಿಗೆ ಗೊಬ್ಬರದ ಗಿಡಗಳನ್ನು ಬೆಳೆಸಲಾಯಿತು. ಒಡ್ಡುಗಳನ್ನು ಹಾಕಲಾಯಿತು. ಆಗ ವ್ಯವಸಾಯದ ಕೂಲಿ ಇಷ್ಟೊಂದು ಇರಲಿಲ್ಲ. ಹೀಗಾಗಿ ಭಾರತವು ಆಹಾರದ ವಿಷಯದಲ್ಲಿ ಸ್ವಪರಿಪೂರ್ಣವಾಯಿತು. ಈಗ ನಾವು ಸಕ್ಕರೆ, ಗೋಧಿ, ಅಕ್ಕಿ ಮುಂತಾದುದನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ.

ಬಡವರನೇಕರ ಕೈಯಲ್ಲಿ ಭೂಮಿ ಇಲ್ಲ; ದುಡಿದು ತಿನ್ನುತ್ತೇವೆಂದರೆ ತಮ್ಮದಾಗಿ ನೆಲ ಇಲ್ಲ. ಈ ಭೂಮಿಹೀನರೂ ಭಾರತೀಯರೆ ಅಲ್ಲವೇ? ಅವರಿಗೆ ಓಟು ಕೊಟ್ಟಿದ್ದೇವೆ, ಊಟ ಕೊಟ್ಟಿಲ್ಲ, ಉದ್ಯೋಗ ಕೊಟ್ಟಿಲ್ಲ. ಸರ್ಕಾರ ಭೂಮಿಯ ಮರು ಹಂಚಿಕೆ ಮಾಡಬೇಕು. ಆದಾಗಬೇಕಾದರೆ ಸೀಲಿಂಗ್‍ಅನ್ನು ಇಳಿಸಬೇಕು. ಭೂಮಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ದುಡಿಯಲು ತಯಾರಿರುವ ಭೂಹೀನರಿಗೆ ತಲಾ 5 ಎಕರೆ ಖುಷ್ಕಿ ಅಥವಾ 3 ಎಕರೆ ತರಿ ಅಥವಾ ಒಂದು ಎಕರೆ ತೋಟದ ಜಮೀನನ್ನು ನೀಡಬೇಕು. ಹೀಗೆ ನೀಡಿದ ಜಮೀನನ್ನು ಖಾಸಗಿಯವರಿಗೆ ಮಾರಾಟ, ಭೋಗ್ಯ ಆಧಾರ ಮಾಡುವಂತಿಲ್ಲ ಎಂಬ ಕರಾರು ಹಾಕಿ ಭೂಮಿ ಹಂಚಬೇಕು. ಎರಡು ವರ್ಷ ಕಾಲ ಹೀಗೆ ನೀಡಿದ ಜಮೀನನ್ನು ಎರಡು ವರ್ಷ ಕಾಲ ಉಳುಮೆ ಮಾಡದಿದ್ದರೆ, ಆ ಜಮೀನನ್ನು ಅವರ ವಶದಿಂದ ಹಿಂಪಡೆದು ದುಡಿಮೆ ಮಾಡುವ ಬೇರೊಬ್ಬರಿಗೆ ಕೊಡಬೇಕು.

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು. ಮೋದಿ ಸರ್ಕಾರ ಭೂಮಿ ನೀಡಿ ರೈತರನ್ನ ಕಾಲ ಮೇಲೆ ನಿಲ್ಲುವ ಹಾಗೆ ಮಾಡಬೇಕೇ ಹೊರತು, ಸರ್ಕಾರದಿಂದ ಭಿಕ್ಷೆಗೆ ಕಾಯುವಂತೆ ಮಾಡುವುದು ಭಾರತೀಯರನ್ನು ಅಪಮಾನಗೊಳಿಸಿದಂತೆ ಎಂದು ತಿಳಿಯಬೇಕು.


ಇದನ್ನು ಓದಿ: ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ : ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ಬಿಡುಗಡೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...