Homeಅಂಕಣಗಳುಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು.

- Advertisement -
- Advertisement -

ರೈತರ ಸಾಲಮನ್ನಾ ಪ್ರಹಸನಕ್ಕೆ ಇತಿಶ್ರೀ ಹಾಡಿ ಅವರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಗೊತ್ತು ಮಾಡಿ ಎಂದು ಸರ್ಕಾರಕ್ಕೆ ಆಗ್ರಹ ಪೂರ್ವಕವಾಗಿ ಹೇಳುತ್ತಿದ್ದೇನೆ.

ರೈತರ ಸಾಲಮನ್ನಾ ಶ್ರೀಮಂತ ರೈತರಿಗೆ ಒಂದು ವರದಾನ. ಪ್ರತಿವರ್ಷ ಈ ಶ್ರೀಮಂತ ರೈತರು ಒಂದು ಲಕ್ಷ, ಎರಡು ಲಕ್ಷ ಬ್ಯಾಂಕಿನಿಂದ ಸಾಲ ಪಡೆಯುವುದು ವರ್ಷದ ಕೊನೆಯಲ್ಲಿ ಆ ಸಾಲಮನ್ನಾ ಮಾಡಿಸುವುದು. ಹತ್ತಾರು ವರ್ಷಗಳಿಂದ ನಡೆದೇ ಇದೆ. ಶ್ರೀಮಂತ ರೈತರು ಸೈಟು ಕೊಳ್ಳುವುದು, ಕಂಪೆನಿ ಷೇರುಕೊಳ್ಳುವುದಕ್ಕೆ, ವ್ಯವಸಾಯದ ಜೊತೆಗೆ ಅಕ್ಕಿ ಗಿರಣಿ, ಕಿರಾಣಿ ವ್ಯಾಪಾರ ಮಳಿಗೆ ತೆರೆಯಲು ಈ ಸಾಲಮನ್ನಾ ಹಣ ಬಳಕೆಯಾಗುತ್ತಿದೆ.

ಎರಡು ನಾಲ್ಕು ಎಕರೆ ಜಮೀನು ಹೊಂದಿದವರು ರೈತಾಪಿಗಳಲ್ಲವೇ? ಇಂತಹವರು ಶೇ.60ರಷ್ಟು ಜನ ಇದ್ದಾರೆ. ಇವರಿಗೆ ಸಿಗುವ ಸಾಲ ಬಹಳ ಕಡಿಮೆ. ಇವರಿಗೆ ಸಾಲದ ಬದಲು ಪವರ್ ಟಿಲ್ಲರ್‍ನಲ್ಲಿ ಇವರ ಭೂಮಿಯನ್ನ ಉಚಿತವಾಗಿ ಉತ್ತಿ ಕೊಡಬೇಕು, ಕಟಾವು ಮಾಡುವ ಸಾಧನೆ ಡ್ರೈಯರ್ ಹಾರ್ವೆಸ್ಟರ್‍ಗಳನ್ನು ಸಕಾಲದಲ್ಲಿ ಉಚಿತವಾಗಿ ಒದಗಿಸಬೇಕು.

ಕಾರ್ಖಾನೆಯಲ್ಲಿ ತಯಾರಾದ ಪದಾರ್ಥಕ್ಕೆ ಬೆಲೆ ನಿರ್ಧರಿಸುವಾಗ ಅಲ್ಲಿ ಅನುಸರಿಸುವ ಎಲ್ಲ ನಿಯಮಗಳನ್ನೂ ವೈಜ್ಞಾನಿಕವಾಗಿ ರೈತನಿಗೂ ಅನುಸರಿಸಬೇಕು. ವೈಜ್ಞಾನಿಕವಾಗಿ ಬೆಳೆದ ಬೆಳೆಗೆ ಬೆಲೆ ನಿರ್ಧರಿಸಲು ಒಂದು ವ್ಯವಸ್ಥೆ ಮಾಡಲಾಗಿತ್ತು. ಆ ಸಮಿತಿ ತನ್ನ ಅಂತಿಮ ವರದಿ ನೀಡಿದೆ. ಅದನ್ನು ಸರ್ಕಾರ ಕೂಡಲೇ ಅಂಗೀಕರಿಸಿ ಚಾಲ್ತಿಗೆ ಕೊಡಬೇಕು. ಸಾಲಮನ್ನಾ ಹುನ್ನಾರವನ್ನು ಕೊನೆಗಾಣಿಸಬೇಕು.

ಸಣ್ಣ ರೈತರು ತಾವೇ ಹೊಲದಲ್ಲಿ ದುಡಿದು ವ್ಯವಸಾಯ ಮಾಡುತ್ತಾರೆ. 20 ಎಕರೆ ಮೇಲೆ ಜಮೀನುಳ್ಳವರು ಸಂಪೂರ್ಣವಾಗಿ ಕೂಲಿಕಾರ್ಮಿಕರನ್ನೇ ಅವಲಂಬಿಸಿದ್ದಾರೆ. ಈ ವ್ಯವಸಾಯ ಕೂಲಿ ದರ ದಿನಕ್ಕೆ 500ರೂ.ಗಳು. ಕೇರಳದಲ್ಲಿ 800ರೂ ಎಂದು ಕೇಳಲ್ಪಟ್ಟಿದ್ದೇನೆ. ಇಷ್ಟೊಂದು ಕೂಲಿ ಕೊಟ್ಟು ತಮ್ಮ ಎಲ್ಲ ಜಮೀನಿನಲ್ಲೂ ಆಹಾರ ಧಾನ್ಯ ಬೆಳೆಯಲು ಆಗುವುದಿಲ್ಲ. ಬೆಳೆದ ಬೆಳೆಯನ್ನೆಲ್ಲಾ ಮಾರಾಟ ಮಾಡಿದರೂ ಬೆಳೆದವನಿಗೆ ಶೇ.30ರಷ್ಟು ಲಾಭ ದೊರೆಯುವುದಿಲ್ಲ. ಆದ್ದರಿಂದ ಈ ದೊಡ್ಡ ಹಿಡುವಳಿದಾರರು ಸ್ವಲ್ಪ ಜಮೀನಿನಲ್ಲಿ ಆಹಾರ ಧಾನ್ಯ ಬೆಳೆದು ಉಳಿದ ಜಮೀನಿನಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವ ಶುಂಠಿ, ಕೊತ್ತಂಬರಿ, ತರ್ಕಾರಿ, ಹೂವು ಬೆಳೆಯುತ್ತಾರೆ. ಇನ್ನೂ ಹೆಚ್ಚು ಜಮೀನುಳ್ಳವರು ತೇಗ ಮೊದಲಾದ ಲಾಭ ತರುವ ಮರಗಳನ್ನು ಬೆಳೆಯುತ್ತಾರೆ. ಇದರಿಂದಾಗಿ ಭಾರತದಲ್ಲಿ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿದೆ. ಸಿ.ಸುಬ್ರಮಣ್ಯಂ ಅವರು ವ್ಯವಸಾಯ ಸಚಿವರಾಗಿದ್ದಾಗ ಆಹಾರ ಕ್ರಾಂತಿ ಒಂದನ್ನು ಮಾಡಿದ್ದರು. ಎಂದು ಇದನ್ನು ಕರೆದರು. ಭಾರತದಲ್ಲಿ ಆಹಾರ ಧಾನ್ಯಕ್ಕೆ ಕೊರತೆ ಉಂಟಾಗದಂತೆ ಅವರು ನೋಡಿಕೊಂಡರು. ಭಾರತ ವ್ಯವಸಾಯ ಪ್ರಧಾನ ದೇಶ ಭಾರತೀಯರು ಭಿಕ್ಷೆ ಪಾತ್ರೆ ಹಿಡಿದು ಅನ್ಯ ದೇಶಗಳ ಬಳಿ ಹೋಗಬಾರದು ಅದು ಅಪಮಾನಕರ ಎಂದು ಸಿ.ಸುಬ್ರಮಣ್ಯಂ ಅವರ ಧ್ಯೇಯವಾಗಿತ್ತು. ಅದಕ್ಕಾಗಿ ಅವರ ಕಾಲದಲ್ಲಿ ಅನೇಕ ದೊಡ್ಡ ನದಿಗಳಿಗೆ ಅಡ್ಡಗಟ್ಟಿ ಹಾಕಿ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿಸಿದರು. ಹೊಲಗದ್ದೆಗಳ ಬದುವಿಗೆ ಗೊಬ್ಬರದ ಗಿಡಗಳನ್ನು ಬೆಳೆಸಲಾಯಿತು. ಒಡ್ಡುಗಳನ್ನು ಹಾಕಲಾಯಿತು. ಆಗ ವ್ಯವಸಾಯದ ಕೂಲಿ ಇಷ್ಟೊಂದು ಇರಲಿಲ್ಲ. ಹೀಗಾಗಿ ಭಾರತವು ಆಹಾರದ ವಿಷಯದಲ್ಲಿ ಸ್ವಪರಿಪೂರ್ಣವಾಯಿತು. ಈಗ ನಾವು ಸಕ್ಕರೆ, ಗೋಧಿ, ಅಕ್ಕಿ ಮುಂತಾದುದನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ.

ಬಡವರನೇಕರ ಕೈಯಲ್ಲಿ ಭೂಮಿ ಇಲ್ಲ; ದುಡಿದು ತಿನ್ನುತ್ತೇವೆಂದರೆ ತಮ್ಮದಾಗಿ ನೆಲ ಇಲ್ಲ. ಈ ಭೂಮಿಹೀನರೂ ಭಾರತೀಯರೆ ಅಲ್ಲವೇ? ಅವರಿಗೆ ಓಟು ಕೊಟ್ಟಿದ್ದೇವೆ, ಊಟ ಕೊಟ್ಟಿಲ್ಲ, ಉದ್ಯೋಗ ಕೊಟ್ಟಿಲ್ಲ. ಸರ್ಕಾರ ಭೂಮಿಯ ಮರು ಹಂಚಿಕೆ ಮಾಡಬೇಕು. ಆದಾಗಬೇಕಾದರೆ ಸೀಲಿಂಗ್‍ಅನ್ನು ಇಳಿಸಬೇಕು. ಭೂಮಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ದುಡಿಯಲು ತಯಾರಿರುವ ಭೂಹೀನರಿಗೆ ತಲಾ 5 ಎಕರೆ ಖುಷ್ಕಿ ಅಥವಾ 3 ಎಕರೆ ತರಿ ಅಥವಾ ಒಂದು ಎಕರೆ ತೋಟದ ಜಮೀನನ್ನು ನೀಡಬೇಕು. ಹೀಗೆ ನೀಡಿದ ಜಮೀನನ್ನು ಖಾಸಗಿಯವರಿಗೆ ಮಾರಾಟ, ಭೋಗ್ಯ ಆಧಾರ ಮಾಡುವಂತಿಲ್ಲ ಎಂಬ ಕರಾರು ಹಾಕಿ ಭೂಮಿ ಹಂಚಬೇಕು. ಎರಡು ವರ್ಷ ಕಾಲ ಹೀಗೆ ನೀಡಿದ ಜಮೀನನ್ನು ಎರಡು ವರ್ಷ ಕಾಲ ಉಳುಮೆ ಮಾಡದಿದ್ದರೆ, ಆ ಜಮೀನನ್ನು ಅವರ ವಶದಿಂದ ಹಿಂಪಡೆದು ದುಡಿಮೆ ಮಾಡುವ ಬೇರೊಬ್ಬರಿಗೆ ಕೊಡಬೇಕು.

ಸರ್ಕಾರ ರೈತರ ಹೆಸರಿಗೆ 5000 ಹಾಕುವ ಬದಲು ವ್ಯವಸಾಯದಲ್ಲಿ ಕ್ರಾಂತಿ ತರುವ ಪಣ ತೊಡಬೇಕು. ಮೋದಿ ಸರ್ಕಾರ ಭೂಮಿ ನೀಡಿ ರೈತರನ್ನ ಕಾಲ ಮೇಲೆ ನಿಲ್ಲುವ ಹಾಗೆ ಮಾಡಬೇಕೇ ಹೊರತು, ಸರ್ಕಾರದಿಂದ ಭಿಕ್ಷೆಗೆ ಕಾಯುವಂತೆ ಮಾಡುವುದು ಭಾರತೀಯರನ್ನು ಅಪಮಾನಗೊಳಿಸಿದಂತೆ ಎಂದು ತಿಳಿಯಬೇಕು.


ಇದನ್ನು ಓದಿ: ಬಡವರಿಗೆ ನೇರ ನಗದು ವರ್ಗಾವಣೆಯಲ್ಲದೇ ಬೇರೆ ದಾರಿ ಇಲ್ಲ : ’ಶ್ರಮಜೀವಿಗಳಿಗೆ ಲಾಕ್ ಡೌನ್’ ಅಧ್ಯಯನ ವರದಿ ಬಿಡುಗಡೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...