Homeಮುಖಪುಟಗೋಹತ್ಯೆ ವದಂತಿಯಿಂದ ಮುಸ್ಲಿಂ ವ್ಯಾಪಾರಿಯ ಗುಂಪು ಹತ್ಯೆ: ಪೊಲೀಸರು ಕೂಡ ತಪ್ಪಿತಸ್ಥರೆಂದು ಕೋರ್ಟ್‌ ಹೇಳಿದ್ದೇಕೆ?

ಗೋಹತ್ಯೆ ವದಂತಿಯಿಂದ ಮುಸ್ಲಿಂ ವ್ಯಾಪಾರಿಯ ಗುಂಪು ಹತ್ಯೆ: ಪೊಲೀಸರು ಕೂಡ ತಪ್ಪಿತಸ್ಥರೆಂದು ಕೋರ್ಟ್‌ ಹೇಳಿದ್ದೇಕೆ?

- Advertisement -
- Advertisement -

ದಾದ್ರಿಯಲ್ಲಿ 2015ರಲ್ಲಿ ಮೊಹಮ್ಮದ್ ಅಖ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಗೋಹತ್ಯೆ ವದಂತಿಯಿಂದ  ಹೊಡೆದು ಕೊಂದ ನಂತರ ಯುಪಿಯಲ್ಲಿ ಗೋಹತ್ಯೆಯ ಹೆಸರಿನಲ್ಲಿ ದ್ವೇಷದ ಅಪರಾಧಗಳಿಗೆ ಬಲಿಯಾದವರಲ್ಲಿ ಖಾಸಿಮ್ ಕೂಡ ಒಬ್ಬರು. ಜೂನ್ 16, 2018ರಂದು ಹಾಪುರ್‌ನ ಪಿಲ್ಖುವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಜೇರಾ ಖುರ್ದ್ ಗ್ರಾಮದ ಹೊಲಗಳ ಬಳಿ ಖಾಸಿಮ್‌ಗೆ ಹೊಡೆದು ಕೊಲೆ ಮಾಡಲಾಗಿತ್ತು. ಎಲ್ಲಾ ಅಪರಾಧಿಗಳು ಬಜೇರಾ ಖುರ್ದ್ ಗ್ರಾಮಕ್ಕೆ ಸೇರಿದವರಾಗಿದ್ದು, ಖಾಸಿಂ ಮೇಕೆಗಳನ್ನು ಖರೀದಿಸಲು ಗ್ರಾಮೀಣ ಪ್ರದೇಶಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿತ್ತು. ಪ್ರಕರಣದಲ್ಲಿ ನ್ಯಾಯಕ್ಕೆ ಸಂತ್ರಸ್ತ ಕುಟುಂಬವು ಕಳೆದ 6 ವರ್ಷಗಳಿಂದ ಅಲೆದಾಡಿದ್ದು, ಪೊಲೀಸರು ಪಕ್ರರಣ ಮುಚ್ಚಿಹಾಕಲು ತಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು ಎಂದು ಕೋರ್ಟ್‌ ಗಮನಿಸಿದೆ.

ಖಾಸಿಮ್‌ ಗುಂಪು ಹತ್ಯೆ ನಡೆದಿದ್ದ 6 ವರ್ಷಗಳ ನಂತರ 10 ಮಂದಿ ಅಪರಾಧಿಗಳಿಗೆ ಉತ್ತರಪ್ರದೇಶದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ತನಿಖೆಯಲ್ಲಿ ನಿರ್ಲಕ್ಷ್ಯ ಮಾಡಿದ್ದಕ್ಕೆ ಕೋರ್ಟ್‌ ಉತ್ತರಪ್ರದೇಶ ರಾಜ್ಯ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣ ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ವೇತಾ ದೀಕ್ಷಿತ್ ಅವರು ತಮ್ಮ 157 ಪುಟಗಳ ತೀರ್ಪಿನಲ್ಲಿ, ಮೇಕೆ ವ್ಯಾಪಾರಿ ಖಾಸಿಂ (45) ಅವರ ಗುಂಪು ಹತ್ಯೆಯನ್ನು “ಘೋರ” ಅಪರಾಧ ಎಂದು ಉಲ್ಲೇಖಿಸಿದ್ದಾರೆ. ಹಾಪುರ್ ಪ್ರಕರಣದಲ್ಲಿ ಅಮಾಯಕ ವ್ಯಕ್ತಿಯನ್ನು ಹತ್ಯೆ ಮಾಡಿದ ಗುಂಪಿನ ವರ್ತನೆಯು ಇಡೀ ಸಮಾಜಕ್ಕೆ ಎಚ್ಚರಿಕೆ ಮತ್ತು ಬೆದರಿಕೆ ಎಂದು ಬಣ್ಣಿಸಿದ್ದಾರೆ.

ಈ ಬಗ್ಗೆ ಖಾಸಿಂ ಅವರ ಸಹೋದರ ಸಲೀಂ ಮಾತನಾಡುತ್ತಾ, ಈ ಪ್ರಕರಣದ ಶಿಕ್ಷೆಯು ದೇಶದಲ್ಲಿ ವಿಶೇಷವಾಗಿ ಹಸುವಿನ ಹೆಸರಿನಲ್ಲಿ ಗುಂಪು ಹತ್ಯೆಯ ಕೃತ್ಯಗಳನ್ನು ತಡೆಯುವಲ್ಲಿ ತೆಗೆದುಕೊಂಡ ಕ್ರಮ ಎಂದು ನಾನು  ಭಾವಿಸುತ್ತೇನೆ. ಇದಕ್ಕಾಗಿಯೇ ನಾವು ಅವರನ್ನು ಗಲ್ಲಿಗೇರಿಸಬೇಡಿ, ಜೀವಿತಾವಧಿಯಲ್ಲಿ ಜೈಲಿಗೆ ಹಾಕುವಂತೆ ನಾವು ನ್ಯಾಯಾಲಯವನ್ನು ಕೋರಿದ್ದೇವೆ. ಇದರಿಂದ ಅವರು ತಕ್ಕ ಪಾಠ ಕಲಿಯುತ್ತಾರೆ ಎಂದು ಹೇಳಿದ್ದಾರೆ.

ಪ್ರಕರಣ ಮುಚ್ಚಿಹಾಕಲು ಪೊಲೀಸರಿಂದ ಯತ್ನ:

ಮಾರ್ಚ್ 12ರಂದು ನ್ಯಾಯಾಲಯವು ಪ್ರಕರಣದಲ್ಲಿ ಭಾಗಿಯಾಗಿರುವ ತನಿಖಾಧಿಕಾರಿ ಮತ್ತು ಇತರ ಪೊಲೀಸ್ ಸಿಬ್ಬಂದಿಯ ನಿರ್ಲಕ್ಷ್ಯದ ನಾಲ್ಕು ಅಂಶಗಳನ್ನು ಗಮನಿಸಿದೆ. ಮೊದಲನೆಯದಾಗಿ, ಪ್ರಕರಣದ ತನಿಖೆಯನ್ನು ಹಿರಿಯ ಐಪಿಎಸ್ ಅಧಿಕಾರಿ, ಮೀರತ್ ರೇಂಜ್ ಪೊಲೀಸ್ ಮಹಾನಿರೀಕ್ಷಕರು ಮೇಲ್ವಿಚಾರಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನದ ಹೊರತಾಗಿಯೂ ಪ್ರಕರಣದ ತನಿಖಾಧಿಕಾರಿಯು ಆರೋಪಿಗಳ ಐಡೆಂಟಿಪಿಕೇಶನ್‌ ಪರೇಡ್‌ ನಡೆಸಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಹಿಂಸಾತ್ಮಕ ದಾಳಿಯಿಂದ ಬದುಕುಳಿದಿರುವ ಮತ್ತು ಪ್ರಮುಖ ಸಾಕ್ಷಿಯಾದ ಸಮಯದೀನ್ ಅವರು ಆರೋಪಿಗಳ ಐಡೆಂಟಿಪಿಕೇಶನ್‌ ಪರೇಡ್‌ಗೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ಎರಡನೆಯದಾಗಿ, ಟೆಲಿವಿಷನ್ ಚಾನೆಲ್ ಎನ್‌ಡಿಟಿವಿ ನಡೆಸಿದ ಚುಟುಕು ಕಾರ್ಯಾಚರಣೆಯಲ್ಲಿ ಪ್ರಮುಖ ಆರೋಪಿ ರಾಕೇಶ್ ಅಪರಾಧದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಸಿಡಿ ವೈರಲ್‌ ಆಗಿರುವುದನ್ನು ನ್ಯಾಯಾಲಯ ಗಮನಿಸಿದೆ. ಸಾಕ್ಷಿಯಾಗಿ ಸಲ್ಲಿಸಲಾದ ಈ ಸಿಡಿಯನ್ನು ಸುರಕ್ಷಿತವಾಗಿ ಇಡದಿರುವುದು ಅತ್ಯಂತ ಆಕ್ಷೇಪಾರ್ಹ ಎಂದು ನ್ಯಾಯಾಧೀಶೆ ದೀಕ್ಷಿತ್ ಹೇಳಿದ್ದಾರೆ. ಸಾಮೂಹಿಕ ಹತ್ಯೆಯ ಘಟನೆಯ ವೀಡಿಯೊವನ್ನು ಒಳಗೊಂಡಿರುವ ಸಿಡಿಯ ಅಗತ್ಯ ಪ್ರಮಾಣಪತ್ರವನ್ನು ಸಲ್ಲಿಸದಿದ್ದಕ್ಕಾಗಿ ತನಿಖಾಧಿಕಾರಿಯನ್ನು ನಿರ್ಲಕ್ಷ್ಯದ ಆರೋಪದಲ್ಲಿ ತಪ್ಪಿತಸ್ಥರೆಂದು ನ್ಯಾಯಾಧೀಶರು ಹೇಳಿದ್ದಾರೆ.

ಸಲೀಂ ತನ್ನ ಫೋನ್‌ನಲ್ಲಿ ತನ್ನ ಸಹೋದರನನ್ನು ಹತ್ಯೆಗೈದ ವಿಡಿಯೋವನ್ನು ಸ್ವೀಕರಿಸಿದ್ದ. ತನಿಖಾಧಿಕಾರಿ ಲಕ್ಷ್ಮಣ್ ವರ್ಮಾ, ಸಿಡಿ ವಿಚಾರದಲ್ಲಿ ನಿರ್ಲಕ್ಷ್ಯವನ್ನು ವಹಿಸಿರುವುದನ್ನು ಕೋರ್ಟ್ ಗಮನಿಸಿದೆ. ಆರೋಪಿ ಕರನ್‌ಪಾಲ್‌ನಿಂದ ವಶಕ್ಕೆ ಪಡೆದುಕೊಂಡ ಅಪರಾಧಕ್ಕೆ ಬಳಸಿದ ಲಾಠಿಯನ್ನು ಪೊಲೀಸರು ಬೆರಳಚ್ಚುಗಳ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ಇದಲ್ಲದೆ ಘಟನೆಯಲ್ಲಿ ಬದುಕುಳಿದ ಸಂತ್ರಸ್ತ ಸಮಯ್ದೀನ್ ಅವರ ಸಹೋದರನಲ್ಲಿ ಜೂನ್ 16, 2018ರಂದು ಪೊಲೀಸರು ಸುಳ್ಳು ಮಾಹಿತಿ ನೀಡಿದ ಎಫ್‌ಐಆರ್‌ಗೆ ಸಹಿ ಹಾಕುವಂತೆ ಒತ್ತಡ ಹೇರಿದ್ದಾರೆ ಎಂದು ಕೋರ್ಟ್‌ ಗಮನಿಸಿದೆ.

ಆರಂಭಿಕ ಎಫ್‌ಐಆರ್‌ನಲ್ಲಿ ಈ ಘಟನೆಯು ಮೋಟಾರ್‌ಬೈಕ್ ಅಪಘಾತದ ಪರಿಣಾಮವಾಗಿ ಸಂಭವಿಸಿದೆ ಎಂದು ಹೇಳಿದರೆ, ಯಾಸಿನ್ ಮತ್ತು ಸಮಯದೀನ್ ನಂತರ ಎಫ್‌ಐಆರ್‌ನ್ನು ಪೊಲೀಸರ ಒತ್ತಡದಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ ಮತ್ತು ಮೋಟಾರ್‌ಬೈಕ್ ಅಪಘಾತದ ಘಟನೆಯನ್ನು ಕಟ್ಟುಕಥೆ ಎಂದು ಹೇಳಿದ್ದಾರೆ. ಗೋಹತ್ಯೆಯ ಸುಳ್ಳು ವದಂತಿಗಳ ಮೇಲೆ ಖಾಸಿಂ ಮತ್ತು ಸಮಯದೀನ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಮತ್ತು ಮೋಟಾರು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಲ್ಲ ಎಂದು ಸಂತ್ರಸ್ತರು ಹೇಳಿದ್ದಾರೆ, ಇದನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿದೆ.

ಪ್ರಕರಣದ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸುವುದು ಅಗತ್ಯವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಧೀಶರಾದ ದೀಕ್ಷಿತ್ ಹೇಳಿದ್ದಾರೆ. ಈ ಬಗ್ಗೆ ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಮತ್ತು ತೀರ್ಪಿನ ಪ್ರತಿಯನ್ನು ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ಖಾಸಿಂ ಹತ್ಯೆಗೀಡಾದ ಆರು ವರ್ಷಗಳ ನಂತರ, ಮಾರ್ಚ್ 12ರಂದು ನ್ಯಾಯಾಲಯವು 10 ಜನ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದೆ ಮತ್ತು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಯುಧಿಷ್ಠಿರ್, ರಾಕೇಶ್, ಕಾನು, ಸೋನು, ಮಂಗೇರಾಮ್, ರಿಂಕು, ಹರಿಓಂ, ಮನೀಶ್, ಲಲಿತ್ ಮತ್ತು ಕರಣ್‌ಪಾಲ್ ಅಪರಾಧಕ್ಕೆ ಶಿಕ್ಷೆಗೊಳಗಾದವರು. ಕೃತ್ಯದ 11ನೇ ಆರೋಪಿ ಅಪ್ರಾಪ್ತನಾಗಿದ್ದಾನೆ. ಘಟನೆಯಲ್ಲಿ ಬದುಕುಳಿದ ಸಂತ್ರಸ್ತ ಸಮಯ್ದೀನ್ ಅವರ ಸಾಕ್ಷ್ಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ. ನ್ಯಾಯಾಧೀಶ ದೀಕ್ಷಿತ್ ಅವರು 10 ಮಂದಿಯನ್ನು ಕೊಲೆ, ಕೊಲೆಗೆ ಯತ್ನ, ಮಾರಕ ಆಯುಧಗಳಿಂದ ಗಲಭೆ ಮತ್ತು ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ  ಪ್ರಕರಣದಲ್ಲಿ ಅಪರಾಧಿಗಳು ಎಂದು ಘೋಷಿಸಿದ್ದರು ಮತ್ತು ಅವರಿಗೆ ತಲಾ 58,000ರೂ.ದಂಡ ಮತ್ತು ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದರು.

ಇದನ್ನು ಓದಿ: ಭಾರತದಲ್ಲಿ ಸಿಎಎ ಜಾರಿ: ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ, ಅಮೆರಿಕ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...