Homeಸಿನಿಮಾಕ್ರೀಡೆಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ: ಹೇಗೆ?

ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ: ಹೇಗೆ?

ಇದೆಲ್ಲವೂ ಘಟಿಸಲು ಭಾರತ ತಂಡವು ತನ್ನ ಉಳಿದ ಮೂರು ಪಂದ್ಯಗಳನ್ನು ಸಾಕಷ್ಟು ಭಾರೀ ಅಂತರದಲ್ಲಿ ಗೆಲ್ಲುವುದು ಪೂರ್ವ ಷರತ್ತಾಗಿದೆ.

- Advertisement -
- Advertisement -

ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ಭಾರತ ತಂಡವು ಸತತ ಎರಡು ಹೀನಾಯ ಸೋಲುಗಳಿಂದ ಕಂಗೆಟ್ಟಿದೆ. ಪಾಕ್ ವಿರುದ್ಧ 10 ವಿಕೆಟ್‌ಗಳ ಸೋಲುಂಡಿದ್ದ ಭಾರತ, ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಪರಾಭವಗೊಂಡಿತು. ಅಲ್ಲಿಗೆ ಸೆಮಿಫೈನಲ್ ಅವಕಾಶ ದೂರವಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. ಆದರೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ. ಹೇಗೆ ಎಂದು ನೋಡೋಣ.

ಸದ್ಯದ ಪಾಯಿಂಟ್ಸ್ ಪಟ್ಟಿ

ಈಗ ಗ್ರೂಪ್ 2 ರ ಪಾಯಿಂಟ್ ಪಟ್ಟಿಯಲ್ಲಿ ಸತತ ಮೂರು ಗೆಲವುಗಳೊಂದಿಗೆ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ. ಅದು ತನ್ನ ಉಳಿದ ಎರಡು ಪಂದ್ಯಗಳಲ್ಲಿ ನಮೀಬಿಯ ಮತ್ತು ಸ್ಕಾಟ್ಲ್ಯಾಂಡ್ ವಿರುದ್ದ ಸೆಣಸಲಿದೆ. ಒಂದು ಗೆಲುವು ಪಡೆದರೂ ಅದರ ಸೆಮಿಫೈನಲ್ ಸ್ಥಾನ ಭದ್ರವಾಗಲಿದೆ. ಗ್ರೂಪ್ 2 ರಲ್ಲಿ ಸೆಮಿಫೈನಲ್ ತಲುಪಲು ಇನ್ನೊಂದು ತಂಡಕ್ಕೆ ಮಾತ್ರ ಅವಕಾಶವಿದ್ದು ಆಫ್ಘಾನಿಸ್ತಾನ, ನ್ಯೂಜಿಲೆಂಡ್, ನಮೀಬಿಯಾ, ಭಾರತ ಮತ್ತು ಸ್ಕಾಟ್ಲ್ಯಾಂಡ್ ತಂಡಗಳು ಆ ಸ್ಥಾನದ ಮೇಲೆ ಕಣ್ಣಿಟ್ಟಿವೆ. ಇವುಗಳಲ್ಲಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್ ಮತ್ತು ಭಾರತ ತಂಡಕ್ಕೆ ಹೆಚ್ಚಿನ ಸಾಧ್ಯತೆಗಳಿವೆ.

ಭಾರತ ಹೇಗೆ ಸೆಮಿಫೈನಲ್ ತಲುಪಬಹುದು?

ಭಾರತದ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 3: ಆಫ್ಘಾನಿಸ್ತಾನ ಎದುರು ಅಬುದಾಬಿಯಲ್ಲಿ
ನವೆಂಬರ್ 5: ಸ್ಕಾಟ್ಲ್ಯಾಂಡ್ ಎದುರು ದುಬೈನಲ್ಲಿ
ನವೆಂಬ್ 8: ನಮೀಬಿಯಾ ಎದುರು ದುಬೈನಲ್ಲಿ

ನ್ಯೂಜಿಲೆಂಡ್‌ನ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 3: ಸ್ಕಾಟ್ಲ್ಯಾಂಡ್ ಎದುರು ದುಬೈನಲ್ಲಿ
ನವೆಂಬರ್ 5: ನಮೀಬಿಯಾ ಎದುರು ಶಾರ್ಜಾದಲ್ಲಿ
ನವೆಂಬರ್ 7: ಆಫ್ಘಾನಿಸ್ತಾನ ಎದುರು ಅಬುದಾಬಿಯಲ್ಲಿ

ಆಫ್ಘಾನಿಸ್ತಾನದ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 3: ಭಾರತದ ಎದುರು ಅಬುದಾಬಿಯಲ್ಲಿ
ನವೆಂಬರ್ 7: ನ್ಯೂಜಿಲೆಂಡ್‌ ಎದುರು ಅಬುದಾಬಿಯಲ್ಲಿ

ಭಾರತವು ತನ್ನ ಮುಂದಿನ ಮೂರು ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದಲ್ಲಿ 6 ಪಾಯಿಂಟ್‌ಗಳ ಜೊತೆಗೆ ಉತ್ತಮ ನೆಟ್ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ತಲುಪಬಹುದು. ಸದ್ಯಕ್ಕೆ -1.609 ರ ಕಡಿಮೆ ರನ್‌ರೇಟ್ ಭಾರತಕ್ಕಿದೆ. ಆದರೆ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಉಳಿದ ತಂಡಗಳ ಎದುರು ಸೋಲುವುದು ಕೂಡ ಭಾರತಕ್ಕೆ ಅತೀ ಅಗತ್ಯವಾಗಿದೆ.

ಭಾರತ 8 ಪಾಯಿಂಟ್‌ಗಳನ್ನು ಗಳಿಸುವುದು ಸಾಧ್ಯವಿಲ್ಲ. ಆದರೆ ಆ ಸಾಧ್ಯತೆ ಆಫ್ಘಾನಿಸ್ತಾನ ತಂಡಕ್ಕಿದೆ. ಏಕೆಂದರೆ ಅದು ಈಗಾಗಲೇ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು 4 ಪಾಯಿಂಟ್ ಗಳಿಸಿಕೊಂಡಿದೆ. ಉಳಿದ ಎರಡು ಪಂದ್ಯಗಳನ್ನು ಗೆದ್ದರೆ ಅದು 8 ಪಾಯಿಂಟ್ ಪಡೆದು ಸೆಮಿಫೈನಲ್ ತಲುಪಬಹುದು. ಅಥವಾ ಒಂದನ್ನು ಭಾರೀ ಅಂತರದಿಂದ ಗೆದ್ದು ಹೆಚ್ಚು ರನ್ ರೇಟ್ ಇದ್ದಲ್ಲಿ ಅದರ ಹಾದಿ ಸುಗಮ.

ನ್ಯೂಜಿಲೆಂಡ್‌ ತಂಡಕ್ಕೂ ಸಹ ಆ ಅವಕಾಶವಿದೆ. ಅದು ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು 2 ಪಾಯಿಂಟ್ ಗಳಿಸಿದೆ. ಉಳಿದ ಮೂರು ಪಂದ್ಯಗಳಲ್ಲಿ ಮೂರನ್ನು ಗೆದ್ದು 8 ಪಾಯಿಂಟ್ ಪಡೆದು ಸೆಮಿಫೈನಲ್ ತಲುಪಬಹುದು. ಅಥವಾ ಎರಡನ್ನು ಭಾರೀ ಅಂತರದಿಂದ ಗೆದ್ದು ಹೆಚ್ಚು ರನ್ ರೇಟ್ ಇದ್ದಲ್ಲಿ ಅದರ ಹಾದಿ ಸುಗಮ.

ಈ ಹಿನ್ನೆಲೆಯಲ್ಲಿ ನವೆಂಬರ್ 7ರಂದು ಅಬುದಾಬಿಯಲ್ಲಿ ನಡೆಯಲಿದರು ಆಫ್ಘಾನಿಸ್ತಾನ ಎದುರಿನ ನ್ಯೂಜಿಲೆಂಡ್ ಪಂದ್ಯಕ್ಕೆ ಭಾರೀ ಮಹತ್ವ ಬಂದಿದೆ.

ಸನ್ನಿವೇಶ 1

ಭಾರತವು ಭಾರೀ ಅಂತರದಿಂದ ಆಫ್ಘಾನಿಸ್ತಾನದ ಎದುರು ಗೆಲ್ಲುತ್ತದೆ. ಅದೇ ರೀತಿ ಆಫ್ಘಾನಿಸ್ತಾನವು ನ್ಯೂಜಿಲೆಂಡ್ ಎದರು ಭಾರೀ ಅಂತರದಿಂದ ಗೆದ್ದಲ್ಲಿ ಎರಡೂ ತಂಡಗಳು 6 ಪಾಯಿಂಟ್‌ಗೆ ಬಂದು ನಿಂತರೆ ನೆಟ್ ರನ್ ರೇಟ್ ಆಧಾರ ಮುಖ್ಯವಾಗುತ್ತದೆ.

ಸನ್ನಿವೇಶ 2

ಭಾರತವು ಭಾರೀ ಅಂತರದಿಂದ ಆಫ್ಘಾನಿಸ್ತಾನದ ಎದುರು ಗೆಲ್ಲುತ್ತದೆ. ನ್ಯೂಜಿಲೆಂಡ್ ಸಹ ಆಫ್ಘಾನಿಸ್ತಾನ ಎದುರು ಗೆದ್ದಲ್ಲಿ ಆಫ್ಘಾನಿಸ್ತಾನ ಕೇವಲ 04 ಪಾಯಿಂಟ್‌ಗಳಿಗೆ ಸೀಮಿತವಾಗುತ್ತದೆ. ಅದರ ಸೆಮಿಫೈನಲ್ ಹಾದಿ ಮುಚ್ಚಿಹೋಗುತ್ತದೆ. ಎರಡೂ ತಂಡಗಳು 6 ಪಾಯಿಂಟ್‌ಗೆ ಬಂದು ನಿಂತರೆ ನೆಟ್ ರನ್ ರೇಟ್ ಆಧಾರ ಮುಖ್ಯವಾಗುತ್ತದೆ. ಒಂದು ವೇಳೆ ನ್ಯೂಜಿಲೆಂಡ್ ತಂಡವು ನಮೀಬಿಯಾ ಅಥವಾ ಸ್ಕಾಟ್ಲ್ಯಾಂಡ್ ಎದುರಿನ ಒಂದು ಪಂದ್ಯ ಸೋತರೂ ಭಾರತದ ನೆಟ್‌ ರನ್ ರೇಟ್ ಉತ್ತಮವಾಗಿದ್ದಲ್ಲಿ ಭಾರತಕ್ಕೆ ಅವಕಾಶ ತೆರೆದುಕೊಳ್ಳುತ್ತದೆ.

ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ಭಾರತಕ್ಕೆ ಸಹಾಯ ಮಾಡಬಲ್ಲವೇ?

ಭಾರತಕ್ಕೆ ಸೆಮಿಫೈನಲ್ ತಲುಪಲು ಬೇರೆ ದಾರಿಗಳು ಸಹ ಇವೆ. ಭಾರತವು ಆಫ್ಘಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ಎದುರು ಗೆಲ್ಲಲೇಬೇಕು. ನಂತರ ಈ ಎರಡು ತಂಡಗಳು ಪಾಕಿಸ್ತಾನದ ಎದುರು ಸೆಣೆಸುತ್ತಿವೆ. ಅಲ್ಲಿ ಅವರೆಡೂ ಭಾರೀ ಅಂತರದಿಂದ ಗೆದ್ದಲ್ಲಿ ಪಾಕಿಸ್ತಾನವೇ ಹೊರಹೋಗುವ ಸಾಧ್ಯತೆ ಸಹ ಇದೆ. ಆದರೆ ಭಾರೀ ಅಂತರದಿಂದ ಗೆಲ್ಲಬೇಕು ಮತ್ತು ಭಾರತ ಪಾಕಿಸ್ತಾನಕ್ಕಿಂತ ಉತ್ತಮ ನೆಟ್‌ ರನ್ ರೇಟ್ ಹೊಂದಿರಬೇಕಾಗುತ್ತದೆ.

ಇನ್ನೊಂದು ರೀತಿಯಲ್ಲಿ ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ತಂಡಗಳು ನ್ಯೂಜಿಲೆಂಡ್ ವಿರುದ್ಧವೂ ದೊಡ್ಡ ಜಯ ಪಡೆದರೆ ಅದು ಭಾರತಕ್ಕೆ ವರದಾನವಾಗುತ್ತದೆ. ಆಗ ನ್ಯೂಜಿಲೆಂಡ್ ಆಫ್ಘಾನಿಸ್ತಾನದ ಎದುರು ಗೆದ್ದಿರಬೇಕು ಮತ್ತು ಭಾರತ ನಮೀಬಿಯಾಗಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರಬೇಕಾಗುತ್ತದೆ.. ಭಾರತದ ಪಾಲಿಗೆ ಅತಿ ದೊಡ್ಡ ಸವಾಲು ಇದಾಗಿದೆ. ಅದು ಪುಟಿದೆದ್ದು ಆಡಬೇಕಿದೆ ಮತ್ತು ಭಾರೀ ಅಂತರ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ. ಆಗಷ್ಟೇ ಉಳಿದ ಸನ್ನಿವೇಶಗಳಿಗೆ ಜೀವ ಬರುತ್ತದೆ. ಏನಾಗುತ್ತದೆ ಕಾದು ನೋಡೋಣ..


ಇದನ್ನೂ ಓದಿ: ಮೊಹಮ್ಮದ್ ಶಮಿ ಬೆನ್ನಿಗೆ ನಿಂತ ವಿರಾಟ್ ಕೊಹ್ಲಿ: ಕೋಮುವಾದಿ ದಾಳಿಗೆ ತೀವ್ರ ಖಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...