Homeಅಂಕಣಗಳುಮುರುಘಾ ಶರಣರ ಮರುಳು ಮಾತು ನಿಜವೆ?

ಮುರುಘಾ ಶರಣರ ಮರುಳು ಮಾತು ನಿಜವೆ?

- Advertisement -
- Advertisement -

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಹರಿದು ಬಂದ ಜನಸಾಗರ ನೋಡಿದ ಬಿಜೆಪಿಗಳು ಅದಕ್ಕೆ ಪ್ರತಿಯಾಗಿ ತಾವೂ ಸಾಗರೋಪಾದಿಯಲ್ಲಿ ಜನರನ್ನು ಸೇರಿಸುವ ಬಗ್ಗೆ ಗಾಢ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರಂತಲ್ಲಾ. ಸ್ವತಃ ಎಡೂರಪ್ಪನವರೇ ಇಡೀ ದಿನ ಟಿ.ವಿ. ಮುಂದೆ ಕುಳಿತು ಸಿದ್ದರಾಮೋತ್ಸವ ನೋಡಿ, ಏನೂ ಹೇಳಲಾಗದ ಏನೂ ಮಾಡಲಾಗದ ಅಸಹಾಯಕತೆ ಚಡಪಡಿಕೆ ಪ್ರದರ್ಶಿಸಿದರು. ಕಾರಣ ಅವರೀಗ ಮುಖ್ಯಮಂತ್ರಿಯಲ್ಲಿ. ವಿರೋಧಪಕ್ಷದ ನಾಯಕರೂ ಅಲ್ಲ. ತಮ್ಮ ಅಧಿಕಾರಾವಧಿಯ ಮಧ್ಯದಲ್ಲೇ ಅವರನ್ನು ಕೆಳಗಿಳಿಸಲಾಯ್ತು. ಇಳಿಯುವಾಗಲಾದರೂ ಇಂತಹದೊಂದು ಎಡೂರು ಜಾತ್ರೆ ಮಾಡಿಬಿಡಬಹುದಿತ್ತು. ಆ ಜಾತ್ರೆಗೆ ಸರಕಾರದಿಂದ ಭಿಕ್ಷೆ ಪಡೆದ ಹಲವು ಜಗತ್ತಿನ ಜಗದ್ಗುರುಗಳ ಪರಿಷೆಯೇ ನೆರೆಯುತ್ತಿತ್ತು. ಸಹಜವಾಗಿ ಆ ಮಠಗಳ ಭಕ್ತಾದಿಗಳು, ಸರಕಾರಿ ಮತ್ತು ಖಾಸಗಿಯವರ ಸುವಿಹಾರಿ ಬಸ್ಸಿನಲ್ಲಿ ಬಂದಿಳಿಯುತ್ತಿದ್ದರು. ಅವರಿಗೆಲ್ಲಾ ಹೋಳಿಗೆ ಶೀಖರಣೆ ಊಟ ಹಾಕಿಕಳಿಸಬಹುದಿತ್ತು. ಪೀಠ ಹಿಡಿದು ಕುಳಿತಿರುವ ಸಿರಿವಂತ ಸ್ವಾಮಿಗಳು, ತಮ್ಮ ಎಂದಿನ ನಿಷ್ಠುರ ಮಾತುಗಳನ್ನು ಝಳಪಿಸಿ ಎಡೂರಪ್ಪನವರು ಎಂದಿಗೂ ಸ್ಥಾನ ಬಿಟ್ಟುಕೊಡಬಾರದು, ನನ್ನನ್ನಾದರೂ ನೋಡಿ ಅವರು ಧೈರ್ಯ ತುಂಬಿಕೊಳ್ಳಬೇಕೆಂದು ಅಪ್ಪಣೆ ಕೊಡಿಸಿದರೆ, ಇನ್ನ ಮುರುಘಾ ಮಠದವರು ಎಡೂರಪ್ಪನವರು ಎದೆಗುಂದಬಾರದು, ಸುತ್ತ ಮುತ್ತ ಶತ್ರುಗಳಿರುವಾಗ ಧೈರ್ಯದಿಂದ ರಾಜ್ಯವನ್ನಾಳಬೇಕು ಎಂದು ಹೇಳೇ ಹೇಳುತ್ತಿದ್ದರಂತಲ್ಲಾ, ಥೂತ್ತೆರಿ.

****

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಬಂದಿದ್ದ ರಾಹುಲಗಾಂಧಿಯನ್ನು ಒಂದರ್ಥದಲ್ಲಿ ಹೈಜಾಕ್ ಮಾಡಿದ ಡಿ.ಕೆ. ಶಿವಕುಮಾರ್ ತಾವು ಮುಂದೆ ಮುಖ್ಯಮಂತ್ರಿಯಾಗಲು ಶರಣ ಸಮೂಹದ ಓಟು ಬೇಕಾದ್ದರಿಂದ, ತಂತ್ರಗಾರಿಕೆ ನಡೆಸಿ, ಅದರಂತೆ ಮುರುಘಾ ಶರಣರಿಂದ ರಾಹುಲಗಾಂಧಿಗೆ ಲಿಂಗದೀಕ್ಷೆ ಕೊಡಿಸೇಬಿಟ್ಟರಂತಲ್ಲಾ. ಮುಖ್ಯವಾಗಿ ದಯವೇ ಧರ್ಮದ ಮೂಲವೆಂದು ಒಪ್ಪಿದವರೆಲ್ಲಾ ಬಸವಣ್ಣನ ಅನುಯಾಯಿಗಳಾಗುತ್ತಾರೆ. ಅವರಿಗೆ ಲಿಂಗದೀಕ್ಷೆಯ ಅಗತ್ಯವೇ ಇರುವುದಿಲ್ಲ. ಇಂತಹ ಸೂಕ್ಷ್ಮ ವಿಚಾರ ಮುರುಘಾ ಶರಣರಿಗೆ ಹೊಳೆಯಬೇಕಿತ್ತು. ನಮ್ಮ ಮುರುಘಾ ಶರಣರು ಬೆಂಬಲಿಸಿದ ಎಡೂರಪ್ಪ ಶರಣ. ಬಸವ ತತ್ವಪ್ರತಿಪಾದಕರಾಗಬೇಕಿತ್ತು. ಆದರೇ ಮಾಡಿದ್ದೆಲ್ಲಾ ಪುರೋಹಿತ ಶಾಹಿಗಳು ಹೇಳಿದ ಕೆಲಸವನ್ನು. ಅವರ ನಂತರ ಮುಖ್ಯಮಂತ್ರಿಯಾದ ಸಾದಲಿಂಗಾಯಿತರ ಬಸವರಾಜ ಬೊಮ್ಮಾಯಿ ಮತ್ತೊಬ್ಬ ಶರಣ. ಲಿಂಗಕಟ್ಟಿಗೊಂಡು ಇವರು ಮಾಡಿದ ಆಡಳಿತವೆಲ್ಲಾ ಕೇಶವಕೃಪಾದ ಆಜ್ಞೆಯ ಪರಿಪಾಲನೆ; ಹಿಜಾಬು, ನಮಾಜು, ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ ಇತ್ಯಾದಿ ಕೇಶವ ಕೃಪದ ಮನೆಹಾಳು ಕೃತ್ಯಗಳ ಜಾರಿ ಮತ್ತು ಸಮರ್ಥನೆ; ಇದ ಒಬ್ಬ ಲಿಂಗದೀಕ್ಷೆಯ ಶರಣನ ಆಡಳಿತದಲ್ಲಿ ಜರುಗಿದ ದುಸ್ವಪ್ನ. ಸಿದ್ದರಾಮಯ್ಯ ಹುಟ್ಟಿನಿಂದ ಶರಣನಲ್ಲ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡಿದ್ದು ಬಸವ ಜಯಂತಿಯಂದು. ನಂತರ ಮಾಡಿದ್ದು ಶರಣರ ದಾಸೋಹ ಕಲ್ಪನೆಯ ಅನನಭಾಗ್ಯ ಮುಂತಾದ ಕೆಲಸ. ಹಾಗೆ ನೋಡಿದರೆ, ಲಿಂಗದೀಕ್ಷೆಗೂ ಶರಣ ತತ್ವ ಪ್ರತಿಪಾದನೆಗೂ ತಾಳಮೇಳವೇ ಇಲ್ಲವೆಂಬುದು ಮುರುಘಾ ಶರಣರಿಗೆ ಹೊಳೆಯಬೇಕಿತ್ತಂತಲ್ಲಾ, ಥೂತ್ತೆರಿ.

*****

ಚಿತ್ರದುರ್ಗದ ಮಠಕ್ಕೆ ಬಂದ ರಾಹುಲಗಾಂಧಿಯನ್ನ ಹಿಡಿದುಕೊಂಡ ಮುರುಘಾ ಶರಣರು, ಮೋದಿ ಒಬ್ಬ ಸಮರ್ಥನಾಯಕ, ಸದ್ಯ ನಮ್ಮ ಸುತ್ತಲೂ ಶತ್ರು ರಾಷ್ಟ್ರಗಳಿದ್ದು, ಅವುಗಳಿಂದ ದೇಶವನ್ನ ರಕ್ಷಿಸಬೇಕಾದರೆ ಮೋದಿಯಂತಹ ಸಮರ್ಥ ನಾಯಕ ಬೇಕೆಂದು ರಾಹುಲಗಾಂಧಿಗೇ ಹೇಳಿದರಂತಲ್ಲಾ. ಆಗ ಮುಗ್ದ ಬಾಲಕನಂತೆ ಮುರುಘಾ ಶರಣರ ಮುಖ ನೋಡಿದ ರಾಹುಲಗಾಂಧಿ, ಶರಣರ ಜ್ಞಾನಕ್ಕೆ ಮರುಕ ಪಟ್ಟಿರಬಹುದಲ್ಲವೆ. ಮುಖ್ಯವಾಗಿ ಕಾಮನ್ ಸೆನ್ಸ್ ಏಂಬುದೊಂದು ಮನಸ್ಥಿತಿ ಇದ್ದಿದ್ದರೆ, ಮೋದಿಯ ಸಮರ್ಥ ನಾಯಕತ್ವದ ಅರಿವಾಗಬೇಕಿತ್ತು. ಚೀನಾ ಅತಿಕ್ರಮಿಸಿರುವ ವಿಷಯವನ್ನು ದೇಶದ ಮುಂದೆ ಅವರು ಈವರೆಗೂ ಹೇಳಿಲ್ಲ. ಕೃಷಿ ಕಾಯ್ದೆ ಜಾರಿಮಾಡಿದ್ದಕ್ಕಾಗಿ ಒಂದು ವರ್ಷ ನಡೆದ ರೈತರ ಧರಣಿಯಲ್ಲಿ ಏಳುನೂರ ರೈತರು ಹತರಾದರು. ಆ ಬಗ್ಗೆ ಮೋದಿ ಈವರೆಗೂ ಪ್ರತಿಕ್ರಿಯಿಸಿಲ್ಲ. ಹೀಗಿರುವಾಗ, ಮೋದಿ ಒಬ್ಬ ಸಮರ್ಥ ಪ್ರಧಾನಿ ಎಂಬ ಅಭಿಪ್ರಾಯವನ್ನು ಹೊಂದಿರುವ ಮುರುಘಾ ಶರಣರು ಚಿತ್ರದುರ್ಗದಾಚೆಗೆ ದೇಶದ ಆಗುಹೋಗುಗಳನ್ನು ಕಣ್ಣುತೆರೆದು ನೋಡಿದರೆ ನಿಜದ ಅರಿವಾಗಬಹುದು ಎಂಬ ಅಭಿಪ್ರಾಯ ರಾಹುಲಗಾಂಧಿಗೆ ಹೊಳೆದಿರಬಹುದಂತಲ್ಲಾ, ಥೂತ್ತೆರಿ.

****

ಇನ್ನ ನಮ್ಮೂರ ಕೆರೆ ಕೋಡಿಯಲ್ಲಿ ಕುಳಿತಿರುವ ಕಾಲಜ್ಞಾನಿ ಸ್ವಾಮೀಜಿಗಳು ಎಂದಿನಂತೆ ಮತ್ತೆ ಜನಗಳನ್ನು ಹೆದರಿಸಿದ್ದಾರೆ. ದುರ್ದೈವವೆಂದರೆ ಅವರ ಮಾತುಗಳಿಗೆ ಯಾರೂ ಹೆದರಿದಂತೆ ಕಾಣದೇ ಇರುವುದರಿಂದ ಮತ್ತೆ ಗುಡಾಗಿದ್ದಾರಂತಲ್ಲಾ. ಆ ಗುಡುಗಿನ ಶಬ್ದ ಯಾವುದೆಂದರೆ ಕರ್ನಾಟಕ ಅತಿವೃಷ್ಠಿಯಿಂದ ಕಂಗೆಟ್ಟು ಹೋಗಲಿದೆ, ದಟ್ಟೈಸಿದ ಮೋಡದಿಂದ ಧಾರಾಕಾರ ಮಳೆಯಾಗುತ್ತದೆ. ಈ ಮಳೆ ದೆಸೆಯಿಂದ ಕೆರೆಕಟ್ಟಿ ತುಂಬಿ ಹರಿಯುತ್ತವೆ. ಆದಕಾರಣ ಕೆರೆಗೆ ಬಿಟ್ಟು ಸಾಕುತ್ತಿರುವ ಮೀನುಗಳು ಕೊಚ್ಚಿಕೊಂಡು ಹೋಗಿ ಕಂಡವರ ಪಾಲಾಗುತ್ತವೆ. ಕೆರೆ ಏರಿ ಹೊಡೆಯುತ್ತದೆ. ಮನೆಗಳ ಗೋಡೆ ಕುಸಿಯುತ್ತದೆ. ಗೋಡೆ ಕೆಳಗೆ ಸಿಕ್ಕವರು ಸತ್ತುಹೋಗುತ್ತಾರೆ. ಜಾನುವಾರುಗಳು ನೀರಲ್ಲಿ ತೇಲುತ್ತ ಹೋಗುತ್ತವೆ. ರಸ್ತೆಯ ಬದಿಯ ಮರಗಳು ರಸ್ತೆಗೇ ಉರುಳುತ್ತವೆ. ಸಂಚಾರಕ್ಕೆ ಅಡ್ಡಿಯಾಗುತ್ತದೆ. ದೇವಸ್ಥಾನ ಮಠಗಳಿಗೆ ಹೋಗುವ ಜನಗಳಿಗೆ ಅನಾನುಕೂಲವಾಗಿ ಪೂಜೆಪುನಸ್ಕಾರಗಳು ನಿಂತುಹೋಗುತ್ತವೆ. ಮಳೆಯಿಂದ ಬೆಳೆಗೆ ಹಾನಿಯಾಗುತ್ತದೆ. ಬೆಳೆಹಾನಿಯಿಂದ ಮಳೆ ಹೆಚ್ಚಾಗುತ್ತದೆ. ದಿನಕ್ಕೊಂದು ಕೊಲೆಯಾಗುತ್ತದೆ. ಕಳ್ಳತನ ಜಾಸ್ತಿಯಾಗುತ್ತದೆ. ಸರಕಾರದ ತನಿಖೆ ನಾಟಕವಾಗುತ್ತದೆ. ರಾಜ್ಯ ಆಳುವ ನಾಯಕನಿಗೆ ಅಪಾಯವಿದೆ. ಅವರಿಗೆ ಅನಾರೋಗ್ಯವುಂಟಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ಏನೇನೂ ಮಾತನಾಡುತ್ತಾರೆ, ಇದಕ್ಕೆ ಪರಿಹಾರವಿದೆ. ಈ ಆಷಾಢ ಮಾಸ ಮುಗಿದ ನಂತರ ಮಠಕ್ಕೆ ಒಂದುನೂರು ದೀಪ ಹಚ್ಚಿ ದಾಸೋಹನಡೆಸಿ ಗುರುವರ್ಯರ ಪಾದ ಹಿಡಿದರೆ ಎಲ್ಲವೂ ಸಾಂಗವಾಗಿ, ಅವರು ನಿರಾತಂಕವಾಗಿ ರಾಜ್ಯದಾಳಬಹುದೆಂಬ ಸಂದೇಶ ಹೊgಟಿದೆಯಂತಲ್ಲಾ, ಥೂಥೂ ಥೂತ್ತೆರಿ.


ಇದನ್ನೂ ಓದಿ: ಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...