ಶಿವಸೇನೆ ನಾಯಕ, ಮಹಾರಾಷ್ಟ್ರದ ಸಚಿವರಾದ ಆದಿತ್ಯ ಠಾಕ್ರೆ ಮತ್ತು ಅನಿಲ್ ಪರಬ್ ಅವರ ಆಪ್ತ ಸಹಾಯಕರ ಕಚೇರಿ ಮತ್ತು ನಿವಾಸಗಳ ಮೇಲೆ ಮಂಗಳವಾದ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸುತ್ತಿದೆ. ಇ
ಲಾಖೆಯು ಮುಂಬೈ ಮತ್ತು ಪುಣೆಯಲ್ಲಿ ದಾಳಿ ನಡೆಸುತ್ತಿದ್ದು, ಇದಕ್ಕೂ ಮೊದಲು ವಿವಿಧ ಬಿಎಂಸಿ ಗುತ್ತಿಗೆದಾರರು ಮತ್ತು ಶಿವಸೇನೆ ನಾಯಕರ ಕಚೇರಿಗಳ ಮೇಲೆ ದಾಳಿ ನಡೆಸಿತ್ತು ಎಂದು ವರದಿಯಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ ಸಂಸದ ಸಂಜಯ್ ರಾವತ್, “ಕೇಂದ್ರ ಏಜೆನ್ಸಿಗಳು ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಆಯ್ದ ಕೆಲವರನ್ನು ಮಾತ್ರ ಯಾಕೆ ಗುರಿಯಾಗಿಸಿಕೊಂಡಿವೆ. ಅವರಿಗೆ ಬೇರೆ ಯಾವುದೇ ರಾಜ್ಯಗಳ ಜನರು ಸಿಗುತ್ತಿಲ್ಲವೆ. ಇದು ಮಹಾ ವಿಕಾಸ್ ಅಘಾಡಿ ಸರ್ಕಾರದ ಮೇಲೆ ಒತ್ತಡ ಹೇರುವ ಮತ್ತು ಅಸ್ಥಿರಗೊಳಿಸುವ ತಂತ್ರವಾಗಿದೆ” ಎಂದು ಹೇಳಿದ್ದಾರೆ.
“ಮುಂಬೈ ಪೊಲೀಸರು ಇಡಿ ಅಧಿಕಾರಿಗಳ ಗುಂಪಿನ ವಿರುದ್ಧ ಕ್ರಿಮಿನಲ್ ಸಿಂಡಿಕೇಟ್ ಮತ್ತು ಸುಲಿಗೆ ದಂಧೆಯ ತನಿಖೆಯನ್ನು ಪ್ರಾರಂಭಿಸುತ್ತಾರೆ. ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ, ಈ ಕೆಲವು ಇಡಿ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ” ಎಂದು ಅವರು ಹೇಳಿದ್ದಾರೆ.
“ಕೆಲವು ಇಡಿ ಅಧಿಕಾರಿಗಳು ಬಿಜೆಪಿ ಟಿಕೆಟ್ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಡಿ ಬಿಜೆಪಿಯ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತಿದೆ. ಈ ಅಧಿಕಾರಿಗಳು ಸುಲಿಗೆ ಮಾಡಿದ ದಾಖಲೆಗಳನ್ನು ನಾನು ಪ್ರಧಾನಿಗೆ ನೀಡಿದ್ದೇನೆ. ಇಡಿ ಅಧಿಕಾರಿಗಳ ತಂಡವು ಗುತ್ತಿಗೆದಾರರು, ಡೆವಲಪರ್ಗಳು ಮತ್ತು ಬಿಲ್ಡರ್ಗಳನ್ನು ಸುಲಿಗೆ ಮಾಡುತ್ತಿದೆ” ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಇದನ್ನೂ ಓದಿ: ‘ಮಹಾರಾಷ್ಟ್ರ ಜುಕೆಹಾ ನಹೀ!’, BJP ನಾಯಕ & ಅವರ ಮಗ ಜೈಲು ಸೇರುತ್ತಾರೆ: ಶಿವಸೇನಾ ನಾಯಕ ಸಂಜಯ್ ರಾವತ್