Homeಅಂಕಣಗಳುಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

ಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

- Advertisement -
- Advertisement -

ಈನಾಡಿಗೆ ದುಃಖಕರವಾದ ಸಂಗತಿಯೊಂದು ಹೊರಬಿದ್ದಿದೆಯಲ್ಲಾ. ನಮ್ಮ ಧೀಮಂತ ನಾಯಕ ಎಡೂರಪ್ಪನವರು ವಿಧಾನಸಭಾ ಅಧಿವೇಶನದಲ್ಲಿ ತಮ್ಮ ಕಡೆಯ ಭಾಷಣವನ್ನು ಭಾವುಕವಾಗಿ ಮುಗಿಸಿ ದುಃಖತಪ್ತ ನಡಿಗೆಯಿಂದ ಹೊರನಡೆದಿದ್ದಾರೆ. ಅವರ ಜೊತೆ ಕರ್ನಾಟಕ ಕಂಡ ಅತ್ಯಂತ ದಕ್ಷ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಎಡೂರಪ್ಪನ ವಾಹನದವರೆಗೂ ಕಂಪನಿ ಕೊಟ್ಟಿರುವುದು ವಿಶೇಷ. ಎಡೂರಪ್ಪನವರ ಆಡಳಿತ ಅವಧಿಯ ದಾಖಲೆಗಳಲ್ಲಿ ಮೊದಲನೆಯದು ಯಾವುದೆಂದರೆ ತಾವು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಪಡೆದ ಚಿಲ್ಲರೆ ಕಾಣಿಕೆಯನ್ನು ಚೆಕ್ ಮುಖಾಂತರ ಪಡೆದ ಆರೋಪದಲ್ಲಿ ಜೈಲಿಗೆ ಹೋದದ್ದು ಮತ್ತು ಜೈಲಿನಿಂದ ಹೊರಬಂದದ್ದು; ಬಿಡುಗಡೆಯಾದಾಗ ಅವರ ಮನೆಯವರು ಚಪ್ಪಾಳೆ ಹೊಡೆದು ಕುಣಿದದ್ದು ಇದೇ ಬಿಜೆಪಿ ಜನರ ಸಂತಸವಾಗಿ ಪ್ರಕಟವಾಯ್ತು. ಏಕೆಂದರೆ ಎಡೂರಪ್ಪ ಮಾತ್ರ ನಮ್ಮನ್ನ ಗೆಲ್ಲಿಸಬಲ್ಲರು ಎಂದು ತಿಳಿದಿದ್ದ ಕುಲಬಾಂಧವರಿಗೆ ಅವರ ಬಿಡುಗಡೆ ಸಂಭ್ರಮವುಂಟು ಮಾಡಿದ್ದು ಸಹಜ. ಆದರೇನು ಎಡೂರಪ್ಪ ಬಿಜೆಪಿಯಿಂದ ಸಿಡಿದು ಕೆಜಿಪಿ ಮಾಡಿಕೊಂಡು ಬಿಜೆಪಿಯನ್ನ ಮಕಾಡೆ ಮಲಗಿಸಿದ್ದು ಈಗ ಇತಿಹಾಸ. ಎಡೂರಪ್ಪನವರ ಶಕ್ತಿಯರಿತ ಬಿಜೆಪಿಗಳು ಮತ್ತೆ ಪಾರ್ಟಿಗೆ ಸೇರಿಸಿಕೊಂಡು ಕಾಂಗೈ ಮತ್ತು ಜೆಡಿಎಸ್‌ನಿಂದ ಮಾರಿಕೊಂಡವರನ್ನು ಕೊಂಡು ಇತಿಹಾಸ ಕಂಡರಿಯದ ಆಡಳಿತ ನೀಡಿದ್ದು ಅಲ್ಲದೆ, ಬೊಮ್ಮಾಯಿಯವರನ್ನು ತಂದು ಕರ್ನಾಟಕದ ಮೇಲೆ ಹೇರಿದ್ದೂ ಒಂದು ದಾಖಲೆಯಂತಲ್ಲಾ, ಥೂತ್ತೇರಿ.

*****

ಹಾಗೆ ನೋಡಿದರೆ ಎಡೂರಪ್ಪನ ಚರಿತ್ರೆ ಇನ್ನೂ ಮುಗಿದಿಲ್ಲ. ’ನಾನು ಸಕ್ರಿಯನಾಗಿ ಈ ನಾಡನ್ನು ತಿರುಗಿ ಪಾರ್ಟಿಯನ್ನು ಪವರ್ರಿಗೆ ತರುತ್ತೇನೆ. ಅದಕ್ಕಾಗಿ ವಿರೋಧಪಕ್ಷದವರ ಸಹಕಾರ ಪಡೆಯುತ್ತೇನೆ’ ಎಂದಿದ್ದಾರೆ. ಎಡೂರಪ್ಪನ ಒಬ್ಬ ಮಗ ಸಂಸದ, ಮತ್ತೊಬ್ಬ ಕೇಸರಿ ಪಾರ್ಟಿಯ ಉಪಾಧ್ಯಕ್ಷ. ಅವರ ಭವಿಷ್ಯ ಬಹಳ ಮುಖ್ಯ ವಿಷಯ. ಇಂತಿರುವಾಗ ಬಿಜೆಪಿಗಳು ವಂಶಾಡಳಿತದ ಬಗ್ಗೆ ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಿಯೇ ಇಲ್ಲ. ಏಕೆಂದರೆ ಸತ್ಯ ಮರೆಮಾಚಿ ಸದಾ ಸುಳ್ಳು ಒದರುವಂತೆ ಆ ಪಾರ್ಟಿಯೇ ಟ್ರೇನಿಂಗ್ ಕೊಟ್ಟಿದೆ. ಆ ಪಾರ್ಟಿಯಿಂದ ಆಗಿರುವ ಪ್ರಧಾನಿಯೇ ಬಹಿರಂಗವಾಗಿ ಹೇಳಿರುವ ಸುಳ್ಳು ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದೆ. ದೆಹಲಿಯ ಕನ್ನಡ ಸಾಂಸ್ಕೃತಿಕ ವೇದಿಕೆಯೊಂದರಲ್ಲಿ, ಕರ್ನಾಟಕಕ್ಕೆ ಅತ್ಯಧಿಕ ಅನುದಾನ ಕೊಟ್ಟಿದ್ದೇನೆ ಎಂದುಬಿಟ್ಟಿದ್ದಾರೆ ಪ್ರಧಾನಿ. ಬೆಚ್ಚಿಬಿದ್ದ ದೆಹಲಿ ಕನ್ನಡಿಗರು ಪ್ರಧಾನಿಯನ್ನ ಮಿಕಮಿಕ ನೋಡಿದರಂತೆ. ಏಕೆಂದರೆ ಕರ್ನಾಟಕ ಇತಿಹಾಸದಲ್ಲೇ ಕಂಡುಕಾಣದಿದ್ದಂತಹ ಪ್ರವಾಹಕ್ಕೆ ಸಿಕ್ಕಿ ತತ್ತರಿಸಿದಾಗ ಇಲ್ಲಿನ ಸರಕಾರ ಕೇಳಿದ 35 ಸಾವಿರ ಕೋಟಿಯ ಬದಲು ಕೇಂದ್ರ ಸರ್ಕಾರ ಕೊಟ್ಟದ್ದು ಕೇವಲ ನಾಲ್ಕೈದು ಸಾವಿರ ಕೋಟಿ. ಇನ್ನು ಜಿಎಸ್‌ಟಿ ಬಾಬ್ತಿನ ದೊಡ್ಡ ಪಾಲನ್ನ ಕೊಟ್ಟೆ ಇಲ್ಲ. ಕರ್ನಾಟಕವನ್ನ ಕೊಳ್ಳೆ ಹೊಡೆದು ಇತರ ರಾಜ್ಯಗಳಿಗೆ ಹಂಚುವುದನ್ನು ವಿರೋಧಿಸಿ ಬಿಜೆಪಿಗಳೇ ಮಾತನಾಡುತ್ತಿರುವಾಗ ಸತ್ಯದ ತಲೆಮೇಲೆ ಹೊಡೆದಂತೆ ಸುಳ್ಳು ಹೇಳಿದ ಪ್ರಧಾನಿಯನ್ನು ನೋಡಿ ಬಿಜೆಪಿಗಳೇ ದಂಗುಬಡಿದು ತತ್ತರಿಸಿಹೋದರಂತಲ್ಲಾ. ಯಾರದ್ದೇನಾದರೂ ಅಗಲಿ, ನನಗೆ ನನ್ನದೇ ಚಿಂತೆ ಅಂತ, ವೇದಿಕೆ ಮೇಲೆ ಕರೆಯದಿದ್ದಕ್ಕೆ ಸಿಟ್ಟಾದ ಸಾಹಿತ್ಯ ಪರಿಷತ್ ಜೋಶಿಯ ಮಂತ್ರಿ ಸ್ಥಾನಮಾನ ವ್ಯರ್ಥವಾಗಿ ಹೋಯ್ತಂತಲ್ಲ, ಥೂತ್ತೇರಿ.

*****

ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಬಂತು. ನರೇಂದ್ರ ಮೋದಿಯವರು ನಿಲ್ದಾಣವನ್ನು ಉದ್ಘಾಟಿಸಿದರು. ಆದರೆ ಬಿಜೆಪಿಗಳಿಗೆ ಜನ ಸೇರುವ ಅನುಮಾನ ಮೊದಲೇ ಕಾಡಿದ್ದರಿಂದ ಶಿವಮೊಗ್ಗದ ಬಡಾವಣೆಗಳಿಗೆ ಬಸ್ಸು ಕಳಿಸಿದರು. ಹಳ್ಳಿಹಳ್ಳಿಗೆ ವಾಹನಗಳನ್ನು ಕಳಿಸಿದರು. ಜೊತೆಗೆ ಕೈಗೆ ಕಾಸು ಕೊಟ್ಟು ಊಟ ಕೊಟ್ಟರು. ಆದರೆ, ಶಾಲಾ ಮಕ್ಕಳನ್ನ ತಂದು ಕುರ್ಚಿಗೆ ಕಟ್ಟಿಹಾಕಿದಂತೆ ಕೂರಿಸಿದ್ದು ಮಾತ್ರ ಅಕ್ಷಮ್ಯ ಅಪರಾಧ. ಏಕೆಂದರೆ ಶಾಲೆಯ ಮಕ್ಕಳನ್ನ ಕಳುಹಿಸಲು ಹಿಂಜರಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕ್ರಮ ಜರುಗಿಸುವುದಾಗಿ ಬೆದರಿಸಿ ಮಕ್ಕಳನ್ನ ಹಿಂಸೆಗೆ ದೂಡಿದ್ದು ಮಕ್ಕಳ ದ್ವೇಷಿಗಳು ಮಾಡಿದ ಕೆಲಸ. ಏರೊಪ್ಲೇನ್ ನೋಡಿ ಊಟಮಾಡಿ ಬರುವ ಕೆಲಸ ಕೆಲವೇ ಕೆಲವು ಮಕ್ಕಳಿಗೆ ಸಂಭ್ರಮವಾಗಿ ಕಂಡರೂ ಈ ಬಿಜೆಪಿಗಳು ಮಕ್ಕಳ ಮನಸ್ಸನ್ನು ಕೆಡಿಸಲು ಕೈಹಾಕಿರುವುದು ಮಾತ್ರ ಅಕ್ಷಮ್ಯ. ವಾಸ್ತವ ಸ್ಥಿತಿ ಏನೆಂದರೆ ಶಿವಮೊಗ್ಗ ಜಿಲ್ಲೆಯ ಹಲವು ಹಳ್ಳಿಗಳ ಕಾಡುದಾರಿಯಲ್ಲಿ ಮಕ್ಕಳು ಶಾಲೆಗಾಗಿ ನಡೆಯುತ್ತಾರೆ, ಸರಿಯಾದ ರಸ್ತೆಗಳಿಲ್ಲ, ಸರಿಯಾದ ಸಮಯಕ್ಕೆ ಬರುವ ಬಸ್ಸುಗಳಿಲ್ಲ, ಮಲೆನಾಡಿನ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಕಳ್ಳರ ಕೈಗೆ ಸಿಕ್ಕ ಫಲವಾಗಿ ನೂರಾರು ಬಸ್ಸುಗಳು ನಿಂತುಹೋಗಿವೆ.

ಇದನ್ನೂ ಓದಿ: ಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

ಅವುಗಳ ಮೇಲೆ ಗಿಡ ಬೆಳೆದಿದೆ. ವಿಮಾನ ನಿಲ್ದಾಣದ ಉದ್ಘಾಟನೆಗೆ ಖರ್ಚು ಮಾಡಿದ ಕಾಲು ಭಾಗವನ್ನ ವ್ಯಯಿಸಿದ್ದರೆ ಸಹಕಾರ ಸಾರಿಗೆಗೆ ಜೀವ ಬರುತ್ತಿತ್ತು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಖರ್ಚಾದ ಅರ್ಧ ಹಣಕ್ಕೆ ವಿಐಎಸ್‌ಎಲ್ ಸ್ಟೀಲ್ ಫ್ಯಾಕ್ಟರಿ ನಡೆಯುತ್ತಿತ್ತು, ಅದರ ಕಾಲು ಭಾಗಕ್ಕೆ ಎಂಪಿಎಂ ಕಾಗದ ಕಾರ್ಖಾನೆ ಚಾಲು ಆಗುತ್ತಿತ್ತು, ಬಡವರನ್ನು ಕಂಡರಾಗದ ಬಿಜೆಪಿಗಳಿಗೆ ಇವೆಲ್ಲಾ ಹೊಳೆಯುವುದಿಲ್ಲ. ಇದೆಲ್ಲಾ ಏನಾದರಾಗಲಿ, ಇನ್ನುಮುಂದೆ ಎಡೂರಪ್ಪ, ರಾಘವೇಂದ್ರ, ವಿಜ್ಯೇಂದ್ರ, ಈಶ್ವರಪ್ಪ, ಆತನ ಮಗ ಇವರೆಲ್ಲಾ ವಿಮಾನದಲ್ಲೇ ಶಿವಮೊಗ್ಗಕ್ಕೆ ಹೋಗುವುದಂತಲ್ಲಾ, ಥೂತ್ತೇರಿ

*****

ಮುಸ್ಲಿಂ ವಿದ್ವಾಂಸರೊಬ್ಬರು ಬ್ರಾಹ್ಮಣರ ಆಳ್ವಿಕೆಯಲ್ಲಿ ಆ ದೇಶ ಬಲಿಷ್ಠವಾಗುತ್ತದೆ ಎಂದಿದ್ದಾರೆ. ಈ ಮುಸ್ಲಿಂ ವಿದ್ವಾಂಸರ ಅಭದ್ರತೆಯ ಮಾತು ಕನಿಕರವೆನಿಸುತ್ತದೆ. ಮುಸಲ್ಮಾನನೊಬ್ಬ ಬ್ರಾಹ್ಮಣನನ್ನ ಹೊಗಳುವುದು, ಬ್ರಾಹ್ಮಣನು ಮುಸ್ಲಿಮರು ಹೇಗಿರಬೇಕೆಂಬ ಸೂಚನೆ ಕೊಡುವುದೇ ಈ ದೇಶದ ದುರಂತ; ಎಂದಾದರೂ ಬ್ರಾಹ್ಮಣರ ಆಳ್ವಿಕೆಯಲ್ಲಿ ಈ ದೇಶ ಎಂದು ಬಲಿಷ್ಠವಾಗಿತ್ತೇ ಎಂಬ ಬಗ್ಗೆ ಸಾಕ್ಷ್ಯಾಧಾರ ತೋರಿದ್ದರೆ ಚೆನ್ನಾಗಿತ್ತು. ಶತಮಾನಗಳ ಕಾಲ ಜಾತಿಯ ಶ್ರೇಣಿಕರಣದಿಂದ ಬಹುಸಂಖ್ಯಾತ ಶೂದ್ರ-ದಲಿತ ಶಕ್ತಿಯ ಅಂತಃಸತ್ವವೇ ನಾಶವಾಗಿ ಅವರೆಲ್ಲಾ ಗುಲಾಮರಂತೆ ಬದುಕುವಂತಾದಾಗ ವಿದೇಶಿಯರು ಈ ದೇಶಕ್ಕೆ ದಾಳಿ ಮಾಡಿ ಆಳತೊಡಗಿದರು. ಆಗ ’ಬುದ್ಧಿವಂತ’ರಾದ ಬ್ರಾಹ್ಮಣರು ವಿದೇಶಿ ಜನರ ಆಸ್ಥಾನದಲ್ಲಿ ಮಂತ್ರಿಗಳಾಗಿ ಕರಣಿಕರಾಗಿ ಆಸ್ಥಾನದ ವಿದೂಶಕರಾಗಿ ಅರಾಮವಾಗಿರತೊಡಗಿದ್ದು ಈಗ ಇತಿಹಾಸ. ಇನ್ನು ಬ್ರಿಟಿಷರು ಬಂದಾಗ ಇಂಗ್ಲಿಷ್ ಕಲಿತುಕೊಂಡು ಡಿ.ಸಿಗಳಾಗಿ, ಎಸ್ಪಿಗಳಾಗಿ ಬ್ರಿಟಿಷರ ಆಜ್ಞೆಯಂತೆ ನಮ್ಮವರನ್ನೇ ಬಗ್ಗುಬಡಿದು ಸೆರೆವಾಸಕ್ಕೆ ದೂಡಿದವರೂ ಇವರಲ್ಲಿದ್ದರು; ಬ್ರಾಹ್ಮಣ್ಯ ಪ್ರತಿಪಾದಿಸಿದ ಧರ್ಮ, ಅಸ್ಪೃಶ್ಯತೆ ಆಚರಿಸಿದ್ದರಿಂದ, ಅದಕ್ಕೆ ಸಿಕ್ಕಿದ ಜನ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಮೀಸಲಾತಿಯಿಂದ ಅಂತಹವರನ್ನು ಮೇಲೆತ್ತಬೇಕೆಂಬ ಕಾರ್ಯಕ್ರಮಕ್ಕೆ ಕೂಡ ಬೆಂಕಿಹಚ್ಚಿ ಸದ್ದಿಲ್ಲದೆ ಹತ್ತು ಪರಸೆಂಟ್ ಮೀಸಲಾತಿಯನ್ನು ಲಪಟಾಯಿಸಿದ್ದಾರೆ; ದಲಿತರೆಂದೂ ಮೇಲೆ ಬರದಂತೆ ನೋಡಿಕೊಳ್ಳಬೇಕು, ಸರಕಾರದ ಸಹಾಯಧನ ಅಥವಾ ಮೀಸಲಾತಿ ಕೊಡಬಾರದು, ಅವರು ಮೇಲೇಳದಂತೆ ನಮ್ಮ ಪಾದ ನೋಡಿಕೊಂಡು ಬದುಕಬೇಕೆಂದು ಹೇಳಿಹೋಗಿರುವ ಆರೆಸ್ಸೆಸಿನ ಗೋಳವಲಕರ ಮುಸ್ಲಿಮರನ್ನ ಎರಡನೇ ದರ್ಜೆ ಪ್ರಜೆಗಳನ್ನಾಗಿಸಿ ಎಂದಿದ್ದಾನೆ. ನೀವು ವಿದ್ವಾಂಸರಾದರೂ ಅವರ ಭಾಗಕ್ಕೆ ಎರಡನೇ ದರ್ಜೆ ಪ್ರಜೆ ಎಂಬುದು ಗೊತ್ತಿರಲಿ. ಥೂಥೂ ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...

ಇರಾನ್ ‘ಭಯೋತ್ಪಾದಕ ಆಡಳಿತ’ ಎಂದು ಕರೆದ NDTV ಹಿರಿಯ ಸಂಪಾದಕ: ವ್ಯಾಪಕ ಟೀಕೆಯ ನಂತರ ಪೋಸ್ಟ್ ಡಿಲಿಟ್ 

ಹೊಸದಿಲ್ಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ಮಾಧ್ಯಮ ಸಂಸ್ಥೆ NDTV ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರು ಇರಾನ್ “ಭಯೋತ್ಪಾದಕ...

ಎಲ್‌ಪಿಜಿ ಬಿಕ್ಕಟ್ಟು: ಹೋಟೆಲ್ ಮಾಲೀಕರಿಗೆ ವಿದ್ಯುತ್ ಒಲೆಗಳನ್ನು ಬಳಸಲು ಸೂಚಿಸಿದ ಸಚಿವ ಕೆ.ಎಚ್. ​​ಮುನಿಯಪ್ಪ

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ಪ್ರಭಾವ ಭಾರತೀಯರ ಅಡುಗೆ ಮನೆಯನ್ನು ಪ್ರವೇಶಿಸಿದ್ದು, ಎಲ್‌ಪಿಜಿ  ಬಿಕ್ಕಟ್ಟಿನಿಂದ ನಾಗರೀಕರು, ಸೇರಿದಂತೆ ಹೋಟೆಲ್ ಉಧ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ನಡುವೆ ಯುದ್ಧದ ಪರಿಣಾಮ ಭಾರತದ ಮೇಲೆ...

ಹೋರಾಟಗಾರ ಸೋನಮ್ ವಾಂಗ್ಚುಕ್ ಬಂಧನ ರದ್ದುಗೊಳಿಸಿದ ಕೇಂದ್ರ

ಲಡಾಖ್‌ನಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ಮಾತುಕತೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಬಂಧನವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದು ವರದಿಯಾಗಿದೆ. ಸರ್ಕಾರ...