Homeಅಂಕಣಗಳುಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

ಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

- Advertisement -
- Advertisement -

ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಇಡೀ ದೇಶದ ತುಂಬ ಚರ್ಚೆಯಾಗುತ್ತಿರುವ ಸಮಯದಲ್ಲಿ, ಬಡವರ ಪಾಲಿಗೆ ಯಾವ ಬೆನಿಫಿಟ್ಟೂ ಬಜೆಟ್ಟಿನಲ್ಲಿ ಇಲ್ಲವಂತಲ್ಲಾ. ಇದೇನು ಆಶ್ಚರ್ಯಪಡುವ ಸಂಗತಿಯಲ್ಲ. ಬಿಜೆಪಿ ಹುಟ್ಟಿನಲ್ಲೇ ಬಡವರ ವಿರೋಧಿಯಾಗಿದೆ. ಬಡವರು ಬಡವರಾಗಿದ್ದರೆ ಮಾತ್ರ ನಾವು ಮೆರೆಯಬಹುದು; ಗರ್ಭಗುಡಿಯಲ್ಲಿ ಕುಳಿತು ಶಿಖೆ ನೀವುತ್ತಾ, ಬೆವರಿಳಿಯುವಂತೆ ಭೂರಿ ಭೋಜನ ಬಾರಿಸಬಹುದು ಎಂದು ನಂಬಿದವರ ಸರಕಾರದಿಂದ ಬಡವರಿಗೆ ಅನುಕೂಲವಾಗುವುದುಂಟೆ. ಎಂದಿನವರೆಗೆ ಬಡತನ ತಾಂಡವವಾಡುತ್ತಿರುತ್ತದೊ ಅಲ್ಲಿಯವರೆಗೆ ನಾವೂ ನೃತ್ಯ ಮಾಡಬಹುದೆಂದು ನಂಬಿರುವ ಜನ ನಡೆಸುವ ಸರಕಾರದಲ್ಲಿ ಬಡವರಿಗಾಗಿ ನಿರ್ಮಲಾ ಏನಾದರೂ ಕೊಡುವುದರ ಬದಲು ಹಿಂದೆ ಕೊಟ್ಟಿದೆಲ್ಲವನ್ನ ಕಿತ್ತುಕೊಂಡಿದ್ದಾರೆ. ಎಂದಿನಂತೆ ದೇಶದ ಭವಿಷ್ಯದ ದೃಷ್ಟಿಯಿಂದ ಯಾವ ಭರವಸೆಯೂ ಇಲ್ಲದ ಬಜೆಟ್ಟು ದೇಶವ್ಯಾಪ್ತಿ ಚರ್ಚೆಯಾಗದಂತೆ ಮಾಡಲು ಈಗಾಗಲೇ ವೈದಿಕ ಶಿಖಾಮಣಿಗಳು ರಾಮಮಂದಿರವನ್ನು ಉಡಾಯಿಸುವ ಬೆದರಿಕೆ ಕರೆಗಳು ಬರುತ್ತಿವೆಯೆಂದು ಹುಯಿಲೆಬ್ಬಿಸತೊಡಗಿದ್ದಾರೆ. ಇಂತಹ ನಾಟಕಗಳು ಈ ಹಿಂದಿನಿಂದಲೂ ನಡೆದುಬರುತ್ತಿರುವುದರಿಂದ ಸಂಘಿಗಳ ಚೇಷ್ಟೆಗೆ ಯಾರೂ ಗಮನಕೊಡದಿರುವುದನ್ನು ಕಂಡ ಅವುಗಳು ಭಾರತದ ಜನಕ್ಕೆ ಮನದಟ್ಟಾಗುವವರೆಗೂ ಹೇಳಲು ತಯಾರಾಗಿವೆಯಂತಲ್ಲಾ, ಥೂತ್ತೇರಿ.

*****

ರಾಜ್ಯದಲ್ಲಿ ಪಂಚರತ್ನ ಯಾತ್ರೆ, ಸಂಕಲ್ಪಯಾತ್ರೆ, ಬಿಜೆಪಿಗಳ ಪರಿಷೆ ನಡೆಯುತ್ತಿರುವಾಗ ಒಂದು ಜೀವ ಅತೃಪ್ತಿ, ಅಶಾಂತಿ, ಹಿಂಸೆ ಮತ್ತು ಅಸಹನೆಯಿಂದ ಕ್ರೋಧಗೊಂಡಿದೆಯಲ್ಲಾ. ಆ ಆಸಾಮಿಯ ಬಯಕೆ ಈಡೇರಿದ್ದೇ ಆದರೆ ಕರ್ನಾಟಕವನ್ನ ಕಿತ್ತು ತಿನ್ನುತ್ತಿರುವ ಸಮಸ್ಯೆಗಳೆಲ್ಲಾ ಜಾದೂ ಮಾಡಿದಂತೆ ಮಾಯವಾಗಲಿವೆಯಂತಲ್ಲಾ. ಈ ಆಸಾಮಿಯ ಬಯಕೆ ಈಡೇರಿಸುವ ಶಕ್ತಿಯಿರುವುದು ಬಸವರಾಜ ಬೊಮ್ಮಾಯಿಗೆ ಮಾತ್ರ. ಈ ಸಮಸ್ಯೆಗೆ ತುತ್ತಾದ ವ್ಯಕ್ತಿ ಈಶ್ವರಪ್ಪ. ಈ ಬಗ್ಗೆ ಅವರನ್ನೇ ಕೇಳಲೆಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ “ನಮಸ್ತೆ ಸಧಾ ವತ್ಸಲೇ ಮಾತೃ ಭೂಮಿ”.

“ಹಲೋ ಯಾರ್ರಿ?”

“ನಾನು ಸಾರ್ ಯಾಹೂ.”

“ಎಲ್ರಿ ಕಾಣ್ತನೆಯಿಲ್ಲಾ ನೀವು?”

“ಯಾತ್ರೆ, ಜಾತ್ರೆ, ಪರಿಷೆ ತಿರಗದೆ ಆಗಿದೆ ಸಾರ್ ಪುರಸತ್ತೆಯಿಲ್ಲ.”

“ಪುರಸತ್ತು ಮಾಡಿಕಂಡು ಬರಬೇಕಪ್ಪ, ಪತ್ರಕರ್ತರನ್ನ ನಾವು ಹ್ಯಂಗೆ ನೋಡಿಕಂಡಿದ್ದಿವಿ, ಸೈಟ್ ಕೊಟ್ಟಿದ್ದಿವಿ, ಮನೆಕೊಟ್ಟಿದ್ದಿವಿ, ಕೈಗೆ ದುಡ್ಡನ್ನೂ ಕೊಟ್ಟಿದ್ದಿವಿ. ಬಂಗ್ಲೆಲಿ ಆರಾಮವಾಗಿ ಇದ್ದುಬುಡೊದಲ್ಲ. ಬಂದು ನಮ್ಮ ಕಷ್ಟನೂ ಕೇಳಬೇಕು.”

“ಸಾರಿ ಸರ್, ಪತ್ರಕರ್ತರಿಂದ ಕೃತಜ್ಞತೆ ನಿರೀಕ್ಷೆ ಮಾಡಬೇಡ್ರಿ. ನೀವು ನಿಮ್ಮ ಕೆಲಸ ಮಾಡಿದ್ರೆ, ನಾವು ನಮ್ಮ ಕೆಲಸ ಮಾಡಿದೊ. ಕಾಲ ಹತ್ರ ಬರ್ತಾಯಿದೆ. ಮುಂದೆ ಯಾವ ಸರಕಾರ ಬರುತ್ತೊ ಏನೊ..”

“ಅದ್ಕೆ ಕಂಡ್ರಿ, ಕಡೇ ಅವಧಿಲಾರ ಮಂತ್ರಿಯಾಗನ ಅಂತ ಹೋರಾಡ್ತಯಿದ್ದಿನಿ, ಗೊತ್ತ?”

“ಸಾರ್ ನೀವು ಹೋರಾಡಬೇಕಾಗಿದ್ದುದ್ದು ಮಂತ್ರಿ ಪದವಿಗಲ್ಲ. ಶರಾವತಿ ಸಂತ್ರಸ್ತರ ಬಗ್ಗೆ, ಅಡಕೆ ತೋಟಕ್ಕೆ ಹಳದಿ ರೋಗ ಬಂದು ಅಟಗಾಯಿಸಿಗಂಡಿರದಕ್ಕೆ, ಮತ್ತೆ ವಿ.ಐ.ಎಸ್.ಎಲ್ ಮುಚ್ಚತಾಯಿರಕ್ಕೆ, ಹಿಂಗೆ ಜನರ ಬದುಕು ನಾಶವಾಗ್ತಯಿರದರ ವಿರುದ್ಧ ಹೋರಾಡಬೇಕು ಸಾರ್.”

“ಮಂತ್ರಿಯಾದ ಮೇಲೆ ಚೆನ್ನಾಗೆ ಹೋರಾಡಬಹುದಲ್ರೀ? ಅಧಿಕಾರನೂ ಇರತ್ತೆ, ಜನಗಳೂ ಮಾತ್ ಕೇಳ್ತರೆ.”

“ಯಲಕ್ಷನ್ ಕೆಲವೇ ತಿಂಗಳದೆ ಸಾರ್.”

“ಮೂರೆ ದಿನ ಇರ್ಲಿ ಕಂಡ್ರೀ, ಮತ್ತೆ ಮಂತ್ರಿಯಾದ್ರೆ ಕಳಂಕ ಯಲ್ಲ ಹೋಗಿ ನಾನು ನಿರ್ದೋಷಿ ಅಂತ ಸಾಬೀತಾಯ್ತದೆ.”

“ಯಾವ ವಿಷಯದಲ್ಲೀ?”

“ಗುತ್ತಿಗೆದಾರ ಸಂತೋಷನಿಂದ ನಲವತ್ತು ಪರಸೆಂಟು ಕಮಿಷನ್ ತಂಗಂಡೆ ಅನ್ನೋ ವಿಷಯದಲ್ಲಿ.”

“ನಿರ್ದೋಷಿ ಸರಿ, ಆದರೆ ಸಂತೋಷ ಆತ್ಮಹತ್ಯೆ ಮಾಡಿಕೊಂಡವರೆ ಸಾರ್.”

“ತನಿಖೆಲಿ ನಾನು ನಿರ್ದೋಷಿ ಅಂತ ಆಯ್ತಲ್ರೀ?”

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

“ಸಾರ್ ನಿಮ್ಮದೇ ಸರಕಾರ, ನೀವೇ ಮಂತ್ರಿ. ತನಿಖೆ ಮಾಡೋರು ಹ್ಯಂಗೆ ಮಾಡಿರಬಹುದು ಹೇಳಿ? ಹಂಗಂತ ನಿಮ್ಮವರೆ ಮಾತಾಡಿಕೊಳ್ತಾ ಅವುರೆ.”

“ಅವುರ್ಯಾರು ಅಂತ ನನಿಗ್ಗೊತ್ತು. ಅವುರ ಮಾತ ಕೇಳಕ್ಕೋಗಬ್ಯಾಡಿ. ನನ್ನ ಮ್ಯಾಲೆ ದೂರಿತ್ತು, ಅದು ನಿವಾರಣೆ ಆಯ್ತು. ಈಗ ಮಂತ್ರಿಯಾಗಬೇಕು, ಆಗಲಿಲ್ಲ ಕಳಂಕ ಅಂಗೇ ಉಳಿತದೆ”

“ನೀವು ಒಂದು ಕ್ಯಲಸ ಮಾಡಬಹುದು ಸಾರ್.”

“ಅದೇನೇಳ್ರಿ?”

“ಬೊಮ್ಮಾಯಿ ಅಳ್ಳಾಡಸೊ ಅಂತ ಯಾವುದಾದ್ರು ಗುಟ್ಟಿದ್ರೆ ಅದ ಪತ್ತೆ ಮಾಡಿ ಹಿಡಕಳಿ.”

“ಬೊಮ್ಮಾಯಿದೇನಾದ್ರು ಅಕ್ರಮ ಇದ್ರೆ, ಕೊಲೆ ಕೇಸಿದ್ರೆ, ಅಕ್ರಮ ಸಂಬಂಧ ಇದ್ರೆ ಪತ್ತೆ ಹಚ್ಚಿ ಸಾಕ್ಷಿ ಸಮೇತ ಅವರ ಮುಖಕ್ಕೆ ಹಿಡಿರಿ. ಮರುದಿನವೇ ನೀವು ವಿಧಾನಸೌಧದ ಎದುರು ಮಂತ್ರಿಯಾಗಿ ಪ್ರಮಾಣ ವಚನ ತಗೊಳ್ತೀರಿ.”

“ಬೊಮ್ಮಾಯಿ ವಿಷಯದಲ್ಲಿ ಅಂತವ್ಯಾವೂ ಇಲ್ಲ ಕಂಡ್ರಿ.”

“ಹೋಗ್ಲಿ ರೇಣುಕಾಚಾರಿ ಕೇಳಿ, ಏನಾದ್ರೂ ಹೇಳ್ತರೆ.”

“ಅವುನ್ಯಾಕೆ ಕೇಳಲಿ?”

“ಆತ ಎಡೂರಪ್ಪನ ಇದೇತರ ಹೆದರಿಸಿ ಮಂತ್ರಿಯಾದದ್ದು. ನಿಮಗೂ ಗೊತ್ತಲವೇನ್ರಿ?”

“ಹೌದು ಗೊತ್ತು. ಬೊಮ್ಮಾಯಿನ ಅಂಗೆ ಹೆದರಸಕ್ಕಾಗಲ್ಲ. ಆತ ಅಂತಹ ಯಾವ ತಪ್ಪನ್ನು ಮಾಡಿರಲಾರ.”

“ಸಿದ್ದರಾಮಯ್ಯರಿಂದ ಬೊಮ್ಮಾಯಿಗೇಳಸಕ್ಕಾಗಲವ.”

“ಹೇಳಸಬಹುದಿತ್ತು, ಆದ್ರೆ ಈಚೆಗೆ ಸಿದ್ದರಾಮಯ್ಯ ನನ್ನ ಹೆಣಾನೂ ಬಿಜೆಪಿಗೆ ಹೋಗಲ್ಲ ಅಂದಿದ್ಕೆ, ಸಿದ್ದರಾಮಯ್ಯನ ಹೆಣನ ನಾಯಿನೂ ತಿನ್ನಲ್ಲ ಅಂದುಬುಟ್ಟೆ ಕಂಡ್ರಿ.”

“ಓ ಅದಕೆ ಏನು ಸಾರ್? ಅದಕ್ಕೆ ಪ್ರತಿಯಾಗಿ ಅವುರ ಕಡೆಯ ಕೆಲವು ಕಿಡಿಗೇಡಿಗಳು ಹಂದಿನೂ ತಿನ್ನಲ್ಲ ನಿಮಿಗೇ ಹೇಳತಾ ಅವುರೆ.”

“ಹೇಳ್‌ಕಳ್ಳಿ ಬುಡ್ರಿ ಹಂದಿ ಹ್ಯಣ ತಿಂತವ?”

“ಐದು ನಿಮಿಷಕ್ಕೆ ತಿನ್ನಕತ್ತವೆ, ಅದರಲ್ಲೂ ಕಾಡಂದಿ ರಾಜಕಾರಣಿಗಳ ಹ್ಯಣನ ಹುಡಿಕ್ಕಂಡು ತಿರುಗ್ತವೆ.”

“ಹೋಗ್ಲಿ ಬಿಡ್ರಿ, ನಾನು ಮಂತ್ರಿಯಾಗಕ್ಕೆ ಒಂದು ಪ್ಲಾನೇಳಿ.”

“ಎಡೂರಪ್ಪನ ಕಾಲಿಗೆ ಬೀಳಕ್ಕಾಗಲ್ಲವಾ?”

“ಆಗಲ್ಲ.”

“ವಿಧಾನಸೌಧದ ಎದಿರೀಗೆ ಬಿದ್ದಿದ್ರಿ?”

“ಅದಾ? ಕಾಲ. ಈಗ ಬಿದ್ರು ಪ್ರಯೋಜನಯಿಲ್ಲ. ಬೊಮ್ಮಾಯಿ ಕಡೆ ಕೈ ತೋರತಾರೆ.”

“ಕುಮಾರಸ್ವಾಮಿಯಿಂದ ಹೇಳಿಸಿದರಾಗಲ್ಲವೆ?”

“ಹೇಳಸಬಹುದು, ಈಗ್ಯಾಕೆ ಬಿಡಿ ಈಶ್ವರಪ್ಪ, ಮುಂದೆ ನನ್ನದೇ ಸರಕಾರ ಬರುತ್ತೆ, ಆಗ ನನ್ನ ಸಂಪುಟದಲ್ಲೇ ಪಿ.ಡಬ್ಳು.ಡಿ ಮಂತ್ರಿಯಾಗಿ ಅಂದುಬುಡ್ತಾರೆ.”

“ಪಿ.ಡಬ್ಳು.ಡಿ ಖಾತೆಯ ರೇವಣ್ಣನಿಂದ ಕಿತಗಳಕ್ಕೆ ಯಾರಿಂದ್ಲೂ ಆಗಲ್ಲ ಸಾರ್. ನಿಂಬೆ ಹಣ್ಣಲ್ಲೆ ಹ್ವಡಿತರೆ.”

“ಅದೇನೊ, ಅವುರು ಮನೆ, ಅವುರ ಪಾರ್ಟಿ ನಮಗ್ಯಾಕೆ. ನಾನು ಮಂತ್ರಿಯಾಗೊ ಪ್ಲಾನೇಳಿ.”

“ಸಾರ್, ನಿಜಕ್ಕೂ ಅಸಾಧ್ಯವಾದದ್ದು ಯಾವುದೂ ಇಲ್ಲ ಸಾರ್, ಶಿವಮೊಗ್ಗದಲ್ಲಿ 144 ಸೆಕ್ಷನ್ ಹಾಕಿದ್ದಾಗ್ಲೂ ಮೆರವಣಿಗೆ ತಗದು ಎಸ್ಪಿ, ಡಿಸಿ ಮತ್ತೆ ಜಿಲ್ಲಾ ಆಡಳಿತನೆ ಮುಸ್ಲಿಂ ಕೇರಿಗೆ ನುಗ್ಗಿಸಿ ದೊಂಬಿ ಮಾಡಿಸಿದ್ರಿ, ಆಗ ಪಿಎಫ್‌ಐ ಜನ ಪರಾರಿಯಾದ್ರು. ಅಲ್ಲೆ ಇದ್ದ ಸಾಮಾನ್ಯರು ಮೆಗ್ಗಾನ್ ಆಸುಪತ್ರೆಗೆ ಅಡ್ಮಿಟ್ ಆದ್ರು, ಇಡೀ ಶಿವಮೊಗ್ಗನೆ ನಡುಗಿಸಿದ್ರಿ. ಅಂತಹ ಈಶ್ವರಪ್ಪನಿಗೆ ಜುಜುಬಿ ಒಂದು ಮಂತ್ರಿ ಖಾತೆ ಪಡಿಯಕ್ಕಾಗಲ್ಲವ ಸಾರ್. ಈಗ್ಲು ಒಂದು ಅವಾಜ್ ಹಾಕಿ, ಶಿವಮೊಗ್ಗದ ಜನಗಳೆ ಸೇರಿ, ಶಿವಮೊಗ್ಗ ತಣ್ಣಗಿರಬೇಕಾದ್ರೆ ಮೊದ್ಲು ಈಶ್ವರಪ್ಪನ್ನ ಮಂತ್ರಿ ಮಾಡಿಬಿಡಿ ಅಂತಾರೆ. ಆಗ ವಿಧಾನಸೌಧದ ಎದುರು ನೀವೊಬ್ಬರೆ ಮಂತ್ರಿಯಾಗಿ ಪ್ರಮಾಣ ವಚನ ತಗೋಳ್ತಿರಿ. ಲೇಟ್ ಮಾಡಬೇಡಿ”

“ಸರಕಾರ ನಡಸೋರೆ ತಿಳಕಬೇಕು ಕಂಡ್ರಿ. ನಲವತ್ತು ಪರಸೆಂಟ್ ವಿಷಯನ ಇಡೀ ಸರಕಾರ ಹೊರಬೇಕು. ಏನೊ ನಾನೊಬ್ನೆ ಪರಸೆಂಟೇಜ್ ತಗೊಂಡನೆ? ದೂರು ಹೊತ್ತಗಂಡೋನು ನಾನೊಬ್ಬನೆ ಕಂಡ್ರಿ. ಈಗ ಸಮಸ್ಯೆನ ಸರಕಾರವೇ ಪರಿಹಾರ ಮಾಡಬೇಕು.”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...