Homeಅಂಕಣಗಳುಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

ಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

- Advertisement -
- Advertisement -

ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಇಡೀ ದೇಶದ ತುಂಬ ಚರ್ಚೆಯಾಗುತ್ತಿರುವ ಸಮಯದಲ್ಲಿ, ಬಡವರ ಪಾಲಿಗೆ ಯಾವ ಬೆನಿಫಿಟ್ಟೂ ಬಜೆಟ್ಟಿನಲ್ಲಿ ಇಲ್ಲವಂತಲ್ಲಾ. ಇದೇನು ಆಶ್ಚರ್ಯಪಡುವ ಸಂಗತಿಯಲ್ಲ. ಬಿಜೆಪಿ ಹುಟ್ಟಿನಲ್ಲೇ ಬಡವರ ವಿರೋಧಿಯಾಗಿದೆ. ಬಡವರು ಬಡವರಾಗಿದ್ದರೆ ಮಾತ್ರ ನಾವು ಮೆರೆಯಬಹುದು; ಗರ್ಭಗುಡಿಯಲ್ಲಿ ಕುಳಿತು ಶಿಖೆ ನೀವುತ್ತಾ, ಬೆವರಿಳಿಯುವಂತೆ ಭೂರಿ ಭೋಜನ ಬಾರಿಸಬಹುದು ಎಂದು ನಂಬಿದವರ ಸರಕಾರದಿಂದ ಬಡವರಿಗೆ ಅನುಕೂಲವಾಗುವುದುಂಟೆ. ಎಂದಿನವರೆಗೆ ಬಡತನ ತಾಂಡವವಾಡುತ್ತಿರುತ್ತದೊ ಅಲ್ಲಿಯವರೆಗೆ ನಾವೂ ನೃತ್ಯ ಮಾಡಬಹುದೆಂದು ನಂಬಿರುವ ಜನ ನಡೆಸುವ ಸರಕಾರದಲ್ಲಿ ಬಡವರಿಗಾಗಿ ನಿರ್ಮಲಾ ಏನಾದರೂ ಕೊಡುವುದರ ಬದಲು ಹಿಂದೆ ಕೊಟ್ಟಿದೆಲ್ಲವನ್ನ ಕಿತ್ತುಕೊಂಡಿದ್ದಾರೆ. ಎಂದಿನಂತೆ ದೇಶದ ಭವಿಷ್ಯದ ದೃಷ್ಟಿಯಿಂದ ಯಾವ ಭರವಸೆಯೂ ಇಲ್ಲದ ಬಜೆಟ್ಟು ದೇಶವ್ಯಾಪ್ತಿ ಚರ್ಚೆಯಾಗದಂತೆ ಮಾಡಲು ಈಗಾಗಲೇ ವೈದಿಕ ಶಿಖಾಮಣಿಗಳು ರಾಮಮಂದಿರವನ್ನು ಉಡಾಯಿಸುವ ಬೆದರಿಕೆ ಕರೆಗಳು ಬರುತ್ತಿವೆಯೆಂದು ಹುಯಿಲೆಬ್ಬಿಸತೊಡಗಿದ್ದಾರೆ. ಇಂತಹ ನಾಟಕಗಳು ಈ ಹಿಂದಿನಿಂದಲೂ ನಡೆದುಬರುತ್ತಿರುವುದರಿಂದ ಸಂಘಿಗಳ ಚೇಷ್ಟೆಗೆ ಯಾರೂ ಗಮನಕೊಡದಿರುವುದನ್ನು ಕಂಡ ಅವುಗಳು ಭಾರತದ ಜನಕ್ಕೆ ಮನದಟ್ಟಾಗುವವರೆಗೂ ಹೇಳಲು ತಯಾರಾಗಿವೆಯಂತಲ್ಲಾ, ಥೂತ್ತೇರಿ.

*****

ರಾಜ್ಯದಲ್ಲಿ ಪಂಚರತ್ನ ಯಾತ್ರೆ, ಸಂಕಲ್ಪಯಾತ್ರೆ, ಬಿಜೆಪಿಗಳ ಪರಿಷೆ ನಡೆಯುತ್ತಿರುವಾಗ ಒಂದು ಜೀವ ಅತೃಪ್ತಿ, ಅಶಾಂತಿ, ಹಿಂಸೆ ಮತ್ತು ಅಸಹನೆಯಿಂದ ಕ್ರೋಧಗೊಂಡಿದೆಯಲ್ಲಾ. ಆ ಆಸಾಮಿಯ ಬಯಕೆ ಈಡೇರಿದ್ದೇ ಆದರೆ ಕರ್ನಾಟಕವನ್ನ ಕಿತ್ತು ತಿನ್ನುತ್ತಿರುವ ಸಮಸ್ಯೆಗಳೆಲ್ಲಾ ಜಾದೂ ಮಾಡಿದಂತೆ ಮಾಯವಾಗಲಿವೆಯಂತಲ್ಲಾ. ಈ ಆಸಾಮಿಯ ಬಯಕೆ ಈಡೇರಿಸುವ ಶಕ್ತಿಯಿರುವುದು ಬಸವರಾಜ ಬೊಮ್ಮಾಯಿಗೆ ಮಾತ್ರ. ಈ ಸಮಸ್ಯೆಗೆ ತುತ್ತಾದ ವ್ಯಕ್ತಿ ಈಶ್ವರಪ್ಪ. ಈ ಬಗ್ಗೆ ಅವರನ್ನೇ ಕೇಳಲೆಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ “ನಮಸ್ತೆ ಸಧಾ ವತ್ಸಲೇ ಮಾತೃ ಭೂಮಿ”.

“ಹಲೋ ಯಾರ್ರಿ?”

“ನಾನು ಸಾರ್ ಯಾಹೂ.”

“ಎಲ್ರಿ ಕಾಣ್ತನೆಯಿಲ್ಲಾ ನೀವು?”

“ಯಾತ್ರೆ, ಜಾತ್ರೆ, ಪರಿಷೆ ತಿರಗದೆ ಆಗಿದೆ ಸಾರ್ ಪುರಸತ್ತೆಯಿಲ್ಲ.”

“ಪುರಸತ್ತು ಮಾಡಿಕಂಡು ಬರಬೇಕಪ್ಪ, ಪತ್ರಕರ್ತರನ್ನ ನಾವು ಹ್ಯಂಗೆ ನೋಡಿಕಂಡಿದ್ದಿವಿ, ಸೈಟ್ ಕೊಟ್ಟಿದ್ದಿವಿ, ಮನೆಕೊಟ್ಟಿದ್ದಿವಿ, ಕೈಗೆ ದುಡ್ಡನ್ನೂ ಕೊಟ್ಟಿದ್ದಿವಿ. ಬಂಗ್ಲೆಲಿ ಆರಾಮವಾಗಿ ಇದ್ದುಬುಡೊದಲ್ಲ. ಬಂದು ನಮ್ಮ ಕಷ್ಟನೂ ಕೇಳಬೇಕು.”

“ಸಾರಿ ಸರ್, ಪತ್ರಕರ್ತರಿಂದ ಕೃತಜ್ಞತೆ ನಿರೀಕ್ಷೆ ಮಾಡಬೇಡ್ರಿ. ನೀವು ನಿಮ್ಮ ಕೆಲಸ ಮಾಡಿದ್ರೆ, ನಾವು ನಮ್ಮ ಕೆಲಸ ಮಾಡಿದೊ. ಕಾಲ ಹತ್ರ ಬರ್ತಾಯಿದೆ. ಮುಂದೆ ಯಾವ ಸರಕಾರ ಬರುತ್ತೊ ಏನೊ..”

“ಅದ್ಕೆ ಕಂಡ್ರಿ, ಕಡೇ ಅವಧಿಲಾರ ಮಂತ್ರಿಯಾಗನ ಅಂತ ಹೋರಾಡ್ತಯಿದ್ದಿನಿ, ಗೊತ್ತ?”

“ಸಾರ್ ನೀವು ಹೋರಾಡಬೇಕಾಗಿದ್ದುದ್ದು ಮಂತ್ರಿ ಪದವಿಗಲ್ಲ. ಶರಾವತಿ ಸಂತ್ರಸ್ತರ ಬಗ್ಗೆ, ಅಡಕೆ ತೋಟಕ್ಕೆ ಹಳದಿ ರೋಗ ಬಂದು ಅಟಗಾಯಿಸಿಗಂಡಿರದಕ್ಕೆ, ಮತ್ತೆ ವಿ.ಐ.ಎಸ್.ಎಲ್ ಮುಚ್ಚತಾಯಿರಕ್ಕೆ, ಹಿಂಗೆ ಜನರ ಬದುಕು ನಾಶವಾಗ್ತಯಿರದರ ವಿರುದ್ಧ ಹೋರಾಡಬೇಕು ಸಾರ್.”

“ಮಂತ್ರಿಯಾದ ಮೇಲೆ ಚೆನ್ನಾಗೆ ಹೋರಾಡಬಹುದಲ್ರೀ? ಅಧಿಕಾರನೂ ಇರತ್ತೆ, ಜನಗಳೂ ಮಾತ್ ಕೇಳ್ತರೆ.”

“ಯಲಕ್ಷನ್ ಕೆಲವೇ ತಿಂಗಳದೆ ಸಾರ್.”

“ಮೂರೆ ದಿನ ಇರ್ಲಿ ಕಂಡ್ರೀ, ಮತ್ತೆ ಮಂತ್ರಿಯಾದ್ರೆ ಕಳಂಕ ಯಲ್ಲ ಹೋಗಿ ನಾನು ನಿರ್ದೋಷಿ ಅಂತ ಸಾಬೀತಾಯ್ತದೆ.”

“ಯಾವ ವಿಷಯದಲ್ಲೀ?”

“ಗುತ್ತಿಗೆದಾರ ಸಂತೋಷನಿಂದ ನಲವತ್ತು ಪರಸೆಂಟು ಕಮಿಷನ್ ತಂಗಂಡೆ ಅನ್ನೋ ವಿಷಯದಲ್ಲಿ.”

“ನಿರ್ದೋಷಿ ಸರಿ, ಆದರೆ ಸಂತೋಷ ಆತ್ಮಹತ್ಯೆ ಮಾಡಿಕೊಂಡವರೆ ಸಾರ್.”

“ತನಿಖೆಲಿ ನಾನು ನಿರ್ದೋಷಿ ಅಂತ ಆಯ್ತಲ್ರೀ?”

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

“ಸಾರ್ ನಿಮ್ಮದೇ ಸರಕಾರ, ನೀವೇ ಮಂತ್ರಿ. ತನಿಖೆ ಮಾಡೋರು ಹ್ಯಂಗೆ ಮಾಡಿರಬಹುದು ಹೇಳಿ? ಹಂಗಂತ ನಿಮ್ಮವರೆ ಮಾತಾಡಿಕೊಳ್ತಾ ಅವುರೆ.”

“ಅವುರ್ಯಾರು ಅಂತ ನನಿಗ್ಗೊತ್ತು. ಅವುರ ಮಾತ ಕೇಳಕ್ಕೋಗಬ್ಯಾಡಿ. ನನ್ನ ಮ್ಯಾಲೆ ದೂರಿತ್ತು, ಅದು ನಿವಾರಣೆ ಆಯ್ತು. ಈಗ ಮಂತ್ರಿಯಾಗಬೇಕು, ಆಗಲಿಲ್ಲ ಕಳಂಕ ಅಂಗೇ ಉಳಿತದೆ”

“ನೀವು ಒಂದು ಕ್ಯಲಸ ಮಾಡಬಹುದು ಸಾರ್.”

“ಅದೇನೇಳ್ರಿ?”

“ಬೊಮ್ಮಾಯಿ ಅಳ್ಳಾಡಸೊ ಅಂತ ಯಾವುದಾದ್ರು ಗುಟ್ಟಿದ್ರೆ ಅದ ಪತ್ತೆ ಮಾಡಿ ಹಿಡಕಳಿ.”

“ಬೊಮ್ಮಾಯಿದೇನಾದ್ರು ಅಕ್ರಮ ಇದ್ರೆ, ಕೊಲೆ ಕೇಸಿದ್ರೆ, ಅಕ್ರಮ ಸಂಬಂಧ ಇದ್ರೆ ಪತ್ತೆ ಹಚ್ಚಿ ಸಾಕ್ಷಿ ಸಮೇತ ಅವರ ಮುಖಕ್ಕೆ ಹಿಡಿರಿ. ಮರುದಿನವೇ ನೀವು ವಿಧಾನಸೌಧದ ಎದುರು ಮಂತ್ರಿಯಾಗಿ ಪ್ರಮಾಣ ವಚನ ತಗೊಳ್ತೀರಿ.”

“ಬೊಮ್ಮಾಯಿ ವಿಷಯದಲ್ಲಿ ಅಂತವ್ಯಾವೂ ಇಲ್ಲ ಕಂಡ್ರಿ.”

“ಹೋಗ್ಲಿ ರೇಣುಕಾಚಾರಿ ಕೇಳಿ, ಏನಾದ್ರೂ ಹೇಳ್ತರೆ.”

“ಅವುನ್ಯಾಕೆ ಕೇಳಲಿ?”

“ಆತ ಎಡೂರಪ್ಪನ ಇದೇತರ ಹೆದರಿಸಿ ಮಂತ್ರಿಯಾದದ್ದು. ನಿಮಗೂ ಗೊತ್ತಲವೇನ್ರಿ?”

“ಹೌದು ಗೊತ್ತು. ಬೊಮ್ಮಾಯಿನ ಅಂಗೆ ಹೆದರಸಕ್ಕಾಗಲ್ಲ. ಆತ ಅಂತಹ ಯಾವ ತಪ್ಪನ್ನು ಮಾಡಿರಲಾರ.”

“ಸಿದ್ದರಾಮಯ್ಯರಿಂದ ಬೊಮ್ಮಾಯಿಗೇಳಸಕ್ಕಾಗಲವ.”

“ಹೇಳಸಬಹುದಿತ್ತು, ಆದ್ರೆ ಈಚೆಗೆ ಸಿದ್ದರಾಮಯ್ಯ ನನ್ನ ಹೆಣಾನೂ ಬಿಜೆಪಿಗೆ ಹೋಗಲ್ಲ ಅಂದಿದ್ಕೆ, ಸಿದ್ದರಾಮಯ್ಯನ ಹೆಣನ ನಾಯಿನೂ ತಿನ್ನಲ್ಲ ಅಂದುಬುಟ್ಟೆ ಕಂಡ್ರಿ.”

“ಓ ಅದಕೆ ಏನು ಸಾರ್? ಅದಕ್ಕೆ ಪ್ರತಿಯಾಗಿ ಅವುರ ಕಡೆಯ ಕೆಲವು ಕಿಡಿಗೇಡಿಗಳು ಹಂದಿನೂ ತಿನ್ನಲ್ಲ ನಿಮಿಗೇ ಹೇಳತಾ ಅವುರೆ.”

“ಹೇಳ್‌ಕಳ್ಳಿ ಬುಡ್ರಿ ಹಂದಿ ಹ್ಯಣ ತಿಂತವ?”

“ಐದು ನಿಮಿಷಕ್ಕೆ ತಿನ್ನಕತ್ತವೆ, ಅದರಲ್ಲೂ ಕಾಡಂದಿ ರಾಜಕಾರಣಿಗಳ ಹ್ಯಣನ ಹುಡಿಕ್ಕಂಡು ತಿರುಗ್ತವೆ.”

“ಹೋಗ್ಲಿ ಬಿಡ್ರಿ, ನಾನು ಮಂತ್ರಿಯಾಗಕ್ಕೆ ಒಂದು ಪ್ಲಾನೇಳಿ.”

“ಎಡೂರಪ್ಪನ ಕಾಲಿಗೆ ಬೀಳಕ್ಕಾಗಲ್ಲವಾ?”

“ಆಗಲ್ಲ.”

“ವಿಧಾನಸೌಧದ ಎದಿರೀಗೆ ಬಿದ್ದಿದ್ರಿ?”

“ಅದಾ? ಕಾಲ. ಈಗ ಬಿದ್ರು ಪ್ರಯೋಜನಯಿಲ್ಲ. ಬೊಮ್ಮಾಯಿ ಕಡೆ ಕೈ ತೋರತಾರೆ.”

“ಕುಮಾರಸ್ವಾಮಿಯಿಂದ ಹೇಳಿಸಿದರಾಗಲ್ಲವೆ?”

“ಹೇಳಸಬಹುದು, ಈಗ್ಯಾಕೆ ಬಿಡಿ ಈಶ್ವರಪ್ಪ, ಮುಂದೆ ನನ್ನದೇ ಸರಕಾರ ಬರುತ್ತೆ, ಆಗ ನನ್ನ ಸಂಪುಟದಲ್ಲೇ ಪಿ.ಡಬ್ಳು.ಡಿ ಮಂತ್ರಿಯಾಗಿ ಅಂದುಬುಡ್ತಾರೆ.”

“ಪಿ.ಡಬ್ಳು.ಡಿ ಖಾತೆಯ ರೇವಣ್ಣನಿಂದ ಕಿತಗಳಕ್ಕೆ ಯಾರಿಂದ್ಲೂ ಆಗಲ್ಲ ಸಾರ್. ನಿಂಬೆ ಹಣ್ಣಲ್ಲೆ ಹ್ವಡಿತರೆ.”

“ಅದೇನೊ, ಅವುರು ಮನೆ, ಅವುರ ಪಾರ್ಟಿ ನಮಗ್ಯಾಕೆ. ನಾನು ಮಂತ್ರಿಯಾಗೊ ಪ್ಲಾನೇಳಿ.”

“ಸಾರ್, ನಿಜಕ್ಕೂ ಅಸಾಧ್ಯವಾದದ್ದು ಯಾವುದೂ ಇಲ್ಲ ಸಾರ್, ಶಿವಮೊಗ್ಗದಲ್ಲಿ 144 ಸೆಕ್ಷನ್ ಹಾಕಿದ್ದಾಗ್ಲೂ ಮೆರವಣಿಗೆ ತಗದು ಎಸ್ಪಿ, ಡಿಸಿ ಮತ್ತೆ ಜಿಲ್ಲಾ ಆಡಳಿತನೆ ಮುಸ್ಲಿಂ ಕೇರಿಗೆ ನುಗ್ಗಿಸಿ ದೊಂಬಿ ಮಾಡಿಸಿದ್ರಿ, ಆಗ ಪಿಎಫ್‌ಐ ಜನ ಪರಾರಿಯಾದ್ರು. ಅಲ್ಲೆ ಇದ್ದ ಸಾಮಾನ್ಯರು ಮೆಗ್ಗಾನ್ ಆಸುಪತ್ರೆಗೆ ಅಡ್ಮಿಟ್ ಆದ್ರು, ಇಡೀ ಶಿವಮೊಗ್ಗನೆ ನಡುಗಿಸಿದ್ರಿ. ಅಂತಹ ಈಶ್ವರಪ್ಪನಿಗೆ ಜುಜುಬಿ ಒಂದು ಮಂತ್ರಿ ಖಾತೆ ಪಡಿಯಕ್ಕಾಗಲ್ಲವ ಸಾರ್. ಈಗ್ಲು ಒಂದು ಅವಾಜ್ ಹಾಕಿ, ಶಿವಮೊಗ್ಗದ ಜನಗಳೆ ಸೇರಿ, ಶಿವಮೊಗ್ಗ ತಣ್ಣಗಿರಬೇಕಾದ್ರೆ ಮೊದ್ಲು ಈಶ್ವರಪ್ಪನ್ನ ಮಂತ್ರಿ ಮಾಡಿಬಿಡಿ ಅಂತಾರೆ. ಆಗ ವಿಧಾನಸೌಧದ ಎದುರು ನೀವೊಬ್ಬರೆ ಮಂತ್ರಿಯಾಗಿ ಪ್ರಮಾಣ ವಚನ ತಗೋಳ್ತಿರಿ. ಲೇಟ್ ಮಾಡಬೇಡಿ”

“ಸರಕಾರ ನಡಸೋರೆ ತಿಳಕಬೇಕು ಕಂಡ್ರಿ. ನಲವತ್ತು ಪರಸೆಂಟ್ ವಿಷಯನ ಇಡೀ ಸರಕಾರ ಹೊರಬೇಕು. ಏನೊ ನಾನೊಬ್ನೆ ಪರಸೆಂಟೇಜ್ ತಗೊಂಡನೆ? ದೂರು ಹೊತ್ತಗಂಡೋನು ನಾನೊಬ್ಬನೆ ಕಂಡ್ರಿ. ಈಗ ಸಮಸ್ಯೆನ ಸರಕಾರವೇ ಪರಿಹಾರ ಮಾಡಬೇಕು.”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...