Homeಅಂಕಣಗಳುದಳ ಉದುರಿ ಕಮಲದ ದಳವಾಗಲಿದೆಯಂತಲ್ಲಾ!

ದಳ ಉದುರಿ ಕಮಲದ ದಳವಾಗಲಿದೆಯಂತಲ್ಲಾ!

- Advertisement -
- Advertisement -

ಜೆಡಿಎಸ್ ಎಂಬ ಪಿತೃ ಪಕ್ಷ ಮುಂದೆ ಏಕಾಂಗಿಯಾಗಿಯೇ ಹೋರಾಡಿ ಮಡಿಯಲಿದೆ ಎಂದು ದೇವೇಗೌಡರು ಖಚಿತವಾಗಿ ಹೇಳಿದ್ದಾರಲ್ಲಾ. ಆದರೂ ಜನಕ್ಕೆ ಡವುಟು ಬಂದಿರುವುದು ಇಲ್ಲೆ; ಏಕೆಂದರೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಈತರದ ಮನೋಲ್ಲಾಸದ ಕಡೆ ಮನಸ್ಸನ್ನು ಕಿಂಚಿತ್ತೂ ಹರಿಯಬಿಡದೆ ರಾಜಕಾರಣಕ್ಕೆ ಕೇಂದ್ರೀಕರಿಸಿರುವ ದೇವೇಗೌಡರು ದೇಶಕಂಡ ಅಪರೂಪದ ರಾಜಕಾರಣಿ. ಇದನ್ನಾಗಲೇ ಜೀವನ ಚರಿತ್ರೆಕಾರರು ದಾಖಲಿಸಿ ಪ್ರತಿಷ್ಠಿತ ಪ್ರಕಾಶಕರು ಪ್ರಕಟಿಸಿದ್ದಾರಂತಲ್ಲಾ. ತಮ್ಮ ಅಂಗೈನಲ್ಲಿಯೇ ಇನ್ನೂರ ಇಪ್ಪತ್ತ ನಾಲ್ಕು ಕ್ಷೇತ್ರಗಳ ಗೆರೆಗಳನ್ನ ನೋಡುವ ಗೌಡರು, ಹಿಂದೊಮ್ಮೆ ಮುಖ್ಯಮಂತ್ರಿ ಆಸೆ ತೋರಿಸಿ ಮಗನನ್ನು ಕಮಲದವರು ಅಪಹರಿಸಿದರೆಂದೂ, ಅದರಲ್ಲಿ ನನ್ನ ಪಾತ್ರವಿಲ್ಲ ಅದಕ್ಕೆ ನಾನು ಮುಂದಿನ ಇಪ್ಪತ್ತು ತಿಂಗಳನ್ನ ಎಡೂರಪ್ಪನಿಗೆ ಬಿಡದೆ ನನ್ನ ಜಾತ್ಯತೀತ ಕಾಯ್ದುಕೊಂಡೆ ಎಂದೂ ಲೋಕಸಭೆಯಲ್ಲಿ ನಂಬಿಸುವ ದನಿಯಲ್ಲಿ ಹೇಳಿದ್ದರು. ಲೋಕ ನಂಬಿತು, ಆದರೆ ಈಗ ಜನಕ್ಕೆ ಡವುಟಾಗುತ್ತಿರುವುದು ಏಕೆಂದರೆ 1983ರಲ್ಲಿ ಇದೇ ಸಿದ್ದರಾಮಯ್ಯ ಬಿಜೆಪಿ ಬೆಂಬಲಿತ ಜನತಾ ಸರಕಾರದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿರಲಿಲ್ಲವೆ ಎಂದು ಗೌಡರು ನೆನಪಿಸಿದ್ದಾರಲ್ಲಾ, ಥೂತ್ತೇರಿ.

*****

1983ರಲ್ಲಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದುದು ನಿಜ. ಏಕೆಂದರೆ ಪ್ರತಿಭಾವಂತನಂತೆ ಕಾಣುತ್ತಿದ್ದ ಅವರನ್ನು ಖಾಲಿ ಬಿಡಬಾರದೆಂದು ನಜೀರ್ ಸಾಬ್ ಮತ್ತು ರಾಚಯ್ಯ, ರಾಮಕೃಷ್ಣ ಹೆಗಡೆಯವರಿಗೆ ಶಿಫಾರಸ್ಸು ಮಾಡಿದ್ದರು. ಆ ಕಾರಣವಾಗಿ ಸಿದ್ದು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದರು. ಹೆಗಡೆ ಸರಕಾರಕ್ಕೆ ಬೆಂಬಲಕೊಟ್ಟಿದ್ದ ಬಿಜೆಪಿ ಇಂದಿನ ಬಿಜೆಪಿಯಾಗಿರಲಿಲ್ಲ. ಇವತ್ತಿನ ಬಿಜೆಪಿಗಳ ತರಹ ಅಂದಿನ ಕಾಂಗ್ರೆಸ್ಸಿಗರಿದ್ದರು. ಎ.ಕೆ ಸುಬ್ಬಯ್ಯನವರ ನೇತೃತ್ವದ ಬಿಜೆಪಿ ದೇವೇಗೌಡರ ವಿಶ್ವಾಸದಲ್ಲಿತ್ತು. ಅಂದಿನ ಬಿಜೆಪಿ ಬ್ರಾಹ್ಮಣರು ಹೆಗಡೆ ನೇತೃತ್ವಕ್ಕೆ ತಮ್ಮನ್ನ ಅರ್ಪಿಸಿಕೊಂಡಿದ್ದರಿಂದ ಮುಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಕ್ಕೆ ಇಳಿಯಿತು. ಹೆಗಡೆಯವರು ಸುಬ್ಬಯ್ಯರನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತರಾದಾಗ ದೇವೇಗೌಡರು ಸುಬ್ಬಯ್ಯನವರ ಪರವಿದ್ದರು. ತಮ್ಮ ಸರಳ ಸಜ್ಜನಿಕೆ ಸಿದ್ಧಾಂತದಿಂದ ದೇವೇಗೌಡರು ಅಂದು ಅವರ ಪಕ್ಷದಲ್ಲಿದ್ದ ಪಟೇಲ್, ಬೊಮ್ಮಾಯಿ, ಸಿಂಧ್ಯಾ, ಸಿದ್ದು, ಪ್ರಕಾಶ್ ಮತ್ತು ಆಳ್ವ ರಘುಪತಿ, ರಾಮಯ್ಯ ಇಂತಹ ಘಟಾನುಘಟಿ ರಾಜಕಾರಣಿಗಳ ಲೀಡರಾಗಿದ್ದರು. ಈಗ ಅವರಲ್ಲಿ ಕೆಲವರು ಭೌತಿಕವಾಗಿ ಇಲ್ಲ. ಮತ್ತೆ ಉಳಿದವರು ದೇವೇಗೌಡರ ಪಾರ್ಟಿಯಲ್ಲಿ ಇಲ್ಲ. ’ಹಾಳೂರಿಗೆ ಉಳಿದವನೇ ಗೌಡ’ ಎಂಬ ಗಾದೆಯಂತೆ ನಾನಿನ್ನೂ ಸೆಕ್ಯುಲರ್ ಮ್ಯಾನ್ ಎಂಬುವುದನ್ನ ತೋರಿಸಿಕೊಳ್ಳಲು ಇಬ್ರಾಹಿಂ ಎಂಬ ಮಾತಿನ ಮಲ್ಲರನ್ನ ಜೊತೆಗಿಟ್ಟುಕೊಂಡು ಮಗನನ್ನು ಆಟ ಆಡಲು ಬಿಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

 

ಮಗನನ್ನು ಆಟ ಆಡಲು ಬಿಟ್ಟಿದ್ದಾರೆ ಎಂಬ ನಮ್ಮ ಆಪಾದನೆಗೆ ಸಾಕ್ಷಿಯೊದಗಿಸಬೇಕಲ್ಲವೇ! ಕುಮಾರಣ್ಣ ಬಿಜೆಪಿ ಸಖ್ಯ ಬೆಳೆಸಿಕೊಂಡು ಮುಖ್ಯಮಂತ್ರಿಯಾದದ್ದು ದಿಢೀರ್ ಬೆಳವಣಿಗೆಯೇನಲ್ಲ; ದಿನ ಬೆಳಗಾಯ್ತೆಂದರೆ ಮಗನನ್ನ ಮನೆಗೆ ಕರೆಸಿಕೊಂಡು ಮುಂದೆ ನಡೆಯುವ ಮಹಾ ನಾಟಕಕ್ಕೆ ತಾಲೀಮು ಕೊಡುತ್ತಿದ್ದರು ದೇವೇಗೌಡರು. ಹೇಳಿದಂತೆ ಕೇಳುವ ಜೆಡಿಎಸ್ ಅಧ್ಯಕ್ಷನಿದ್ದ ಆ ಕಾಲದಲ್ಲಿ ತೋರಿದ್ದನ್ನು ತಲೆಯ ಮೇಲೆ ಹೊತ್ತು ಮಾಡುವ ಸ್ಪೀಕರ್ ಇದ್ದರು; ಹಾಗಾಗಿ ಗೌಡರು ಮನೆಯಲ್ಲೇ ಕುಳಿತು ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರಕಾರ ರಚನೆ ಮಾಡುವುದಾದರೆ ನನ್ನ ಹೆಣದ ಮೇಲಾಗಲಿ ಎಂದರು. ದಳದವರೆಲ್ಲಾ ಹೆದರಿ ಗೌಡರನ್ನ ಉಳಿಸಿಕೊಂಡರು. ಮುಂದೆ ಕೆಲವೇ ತಿಂಗಳಲ್ಲಿ ಗೌಡರು ಮಗನೊಂದಿಗೆ ಸೇರಿ, ಯಯಾತಿಯಂತಾಗಿ ಈ ನಾಡನ್ನ ಸುತ್ತತೊಡಗಿದರು; ಮಗನ ಸುತ್ತಲೂ ಇದ್ದ ಮಂತ್ರಿಗಳ ಖಾತೆಗಳ ಮೇಲೆ ಹಿಡಿತ ಸಾಧಿಸಿದರು. ಮುಂದೆ ಜೆಡಿಎಸ್‌ನ ಪ್ರಶ್ನಾತೀತ ನಾಯಕನಾಗಿ ಮಗನನ್ನು ಪ್ರತಿಷ್ಠಾಪಿಸಿದರು. ಆಗ ದಳದ ಪತನ ಆರಂಭವಾಗಿ ಸಿಂಧ್ಯಾ, ಪ್ರಕಾಶ್ ಇಂತವರೆಲ್ಲಾ ವಲಸಿಗರಾಗಿ ಕಾಂಗ್ರೆಸ್ ಸೇರಿಕೊಂಡರು. ಆದರೇನು ಗೌಡರು ಬಿಜೆಪಿ ಜನತೆಗಿನ ಸರಸವನ್ನ ಇನ್ನೂ ಬಿಟ್ಟಿಲ್ಲ. ಈಗ ಗೌಡರ ಪಾರ್ಟಿ ಕಚೆರಿಗೆ ಎರಡು ಬಾಗಿಲಂತಲ್ಲಾ. ಒಂದರ ಮುಖಾಂತರ ಬಿಜೆಪಿಗೆ ಹೋಗುವವರು ಹೋಗಬಹುದು, ಮತ್ತೊಂದರ ಮುಖಾಂತರ ಕಾಂಗ್ರೆಸ್ಸಿಗೆ ಹೋಗುವವರು ಹೋಗಬಹುದು; ಕುಮಾರಣ್ಣ ಸಿಂಗಪುರಕ್ಕೆ ಹೋಗಿರುವುದರಲ್ಲಿ ಈ ಸಂದೇಶವೂ ಅಡಗಿದೆಯಂತಲ್ಲಾ, ಥೂತ್ತೇರಿ.

*****

ಕುಮಾರಣ್ಣ ಸಿಂಗಪುರದಲ್ಲಿದ್ದರೂ ಅವರು ಬಿಜೆಪಿಗಳನ್ನೇ ಮೀರಿಸಿ ಬಿಜೆಪಿಯಾಗಿರುವುದು ಹಳೆ ಸುದ್ದಿಯಂತಲ್ಲಾ. ಬಿಜೆಪಿಯ ಬೃಹಸ್ಪತಿಗಳು ರೈತವಿರೋಧಿ ಕಾನೂನು ತಂದಾಗ ಗೌಡರು ಮತ್ತು ಕುಮಾರಣ್ಣ ಮೋದಿಗೆ ನೋವಾಗದಂತೆ ನಡೆದುಕೊಂಡಿದ್ದರು. ಮತಾಂತರ ನಿಷೇದಧ ಕಾಯ್ದೆ ಜಾರಿಯಾಗುವಾಗ ಉಸಿರೆತ್ತದೆ ಬೆಂಬಲಿಸಿದರು. ಹೆಚ್ಚು ಗೋಮಾಂಸ ರಫ್ತು ಮಾಡುವ ಬಿಜೆಪಿಗರ ವಿರುದ್ಧ ದನಿ ಎತ್ತಲಿಲ್ಲ. ಕಾರಿನವರೆಗೂ ಬಂದು ನನ್ನನ್ನ ಮೋದಿ ಬೀಳ್ಕೊಟ್ಟರು ಎಂದು ಗೌಡರು ಮೋದಿಯ ದೊಡ್ಡತನವನ್ನ ಕೊಂಡಾಡಿದರೆ, ಮೋದಿ ಮಾತನ್ನು ನಾನು ಕೇಳಿದ್ದರೆ ಮುಖ್ಯಮಂತ್ರಿಯಾಗಿ ತಾಜ್‌ವೆಸ್ಟ್‌ಎಂಡ್ ಹೋಟೆಲಿನಲ್ಲೇ ಅಧಿಕಾರ ಅನುಭವಿಸಿ ಅವಧಿ ಮುಗಿಸುತ್ತಿದ್ದೆ ಎನ್ನುವ ಕುಮಾರಣ್ಣ ಈಗ ಅಧಿಕೃತ ಬಿಜೆಪಿಯ ವಕ್ತಾರನಾಗಿರುವುದಲ್ಲದೆ, ವಿರೋಧ ಪಕ್ಷದ ಅನಧಿಕೃತ ನಾಯಕನೂ ಆಗಿದ್ದಾರಲ್ಲಾ. ಇದಕ್ಕೆ ಸಿಕ್ಕ ತಾಜಾ ಉದಾಹರಣೆಯೆಂದರೆ ಸಿದ್ದರಾಮಯ್ಯ ಸರಕಾರದ ವಿರುದ್ಧ ಪ್ರತಿಭಟಿಸುವ ಬಿಜೆಪಿ ಲೆಟರ್‌ಗೆ ಆ ಪಾರ್ಟಿಯ ಆಫೀಸಿಗೆ ಹೋಗಿ ಸಹಿಮಾಡಿದ್ದು ಮತ್ತು ಬೊಮ್ಮಾಯಿ ಆಡಬೇಕಾದ ಮಾತನ್ನ ತಾವೇ ಆಡುತ್ತಿರುವುದು. ಉದಾಹರಣೆಗೆ ಹಿಂದಿನ ಸರಕಾರ ಆರ್ಥಿಕ ಅಶಿಸ್ತಿನಿಂದ ನಡೆದುಕೊಂಡಿದೆ ಎಂದು ಸದರಿ ಸರ್ಕಾರ ಟೀಕಿಸಿದರೆ, ಕುಮಾರಸ್ವಾಮಿಯವರು ಶಿಸ್ತಿನಿಂದಲೇ ಆಡಳಿತ ನಡೆಸಿದ್ದಾರೆ ಎನ್ನುತ್ತಿದ್ದಾರಲ್ಲಾ. ಇದಲ್ಲವೆ ಬಿಜೆಪಿಯ ಕಾರ್ಯಕರ್ತನ ಮಾತು ಎಂದು ಬಿಜೆಪಿಗಳೇ ಹೇಳುತ್ತಿದ್ದಾರಲ್ಲಾ, ಥೂತ್ತೇರಿ.

*****

ಕುಮಾರಣ್ಣ ಬಿಜೆಪಿ ಬಾಗಿಲಲ್ಲಿ ನಿಂತು ಹೋಗಿ ಬರುವವರನ್ನ ನೋಡಿ “ಹಲೋ ಬ್ರದರ್” ಎಂಬುದನ್ನ ಕೇಳಿ ಶಿವಮೊಗ್ಗದ ಆಯನೂರ್ ಮಂಜುನಾಥ್ ಕಂಗಾಲಾಗಿದ್ದಾರಂತಲ್ಲಾ. ಏಕೆಂದರೆ ಶಿವಮೊಗ್ಗದ ಹರಕುಬಾಯಿ ಈಶ್ವರಪ್ಪನ ವಿರುದ್ದ ಸೆಡ್ಡು ಹೊಡೆದು ಫ್ಲೆಕ್ಸ್ ಹಾಕಿದ್ದರು. ಕಾಂಗ್ರೆಸ್ ಕಡೆ ಹೊರಟಾಗ ಕಾಂಗೈನ ಕೆಲವರು ತಡೆಯೊಡ್ಡಿದರು. ಆಗ ಆಯನೂರ್ ಅನಿವಾರ್ಯವಾಗಿ ದಳ ಸೇರಿ ಕ್ಯಾಂಡಿಡೇಟ್ ಆದರು. ಈಗತಾನೆ ಅವರ ಪಾರ್ಟಿಗೆ ಹೋಗಿ ಸೋತು ಸುಧಾರಿಸಿಕೊಳ್ಳುತ್ತಿರುವಾಗಲೇ ಕುಮಾರಣ್ಣ ಬಿಜೆಪಿಗೆ ಹೊರಟದ್ದು ನೋಡಿ ದಿಕ್ಕುತೋಚದಂತಾಗಿದ್ದಾರಂತಲ್ಲಾ. ಏಕೆಂದರೆ ಪುನಃ ಬಂದರೆ ಆಯನೂರರನ್ನು ಹಲ್ಲುಗಿಂಜಿ ಅಣುಕಿಸಲು ಈಶ್ವರಪ್ಪನ ಕಡೆಯವರು ಕಾಯುತ್ತಿದ್ದಾರಂತೆ. ಆಯನೂರ್ ಕತೆ ಹಿಂಗಾದರೆ ಇನ್ನ ನಾಡಿನ ತುಂಬ ಆಯನೂರ್‌ನಂತ ಆಸಾಮಿಗಳು ಎಷ್ಟಿದ್ದಾರೆಯೋ ಏನೋ, ಥೂತ್ತೇರಿ.

ಇದನ್ನೂ ಓದಿ: ಜೆಡಿಎಸ್ ಬಿಜೆಪಿ ಕೂಡಿಕೆ: ರಾಜಕೀಯ ಪಕ್ಷವಾಗಿ ಸತ್ತು ಅಸ್ತಿತ್ವ ಉಳಿಸಿಕೊಳ್ಳುವ ಬಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...