Homeಅಂಕಣಗಳುಕರ್ನಾಟಕದ ಸುವರ್ಣ ಯುಗ ಅಂದರೆ ಇದೆ ಅಂತಲ್ಲಾ..

ಕರ್ನಾಟಕದ ಸುವರ್ಣ ಯುಗ ಅಂದರೆ ಇದೆ ಅಂತಲ್ಲಾ..

- Advertisement -
- Advertisement -

ಕರ್ನಾಟಕದ ಸುವರ್ಣ ಯುಗ ಅಂದರೆ ಇದೇ ಅಂತಲ್ಲಾ. ವಿಧಾನಸಭೆಯ ಸ್ಪೀಕರ್ ಸ್ಥಾನದಲ್ಲಿ ಕುಳಿತ ಕಾಗೇರಿ ಎಂಬ ಆರೆಸ್ಸೆಸ್ ಕಾರ್ಯಕರ್ತ ಸ್ಪೀಕರ್ ಸ್ಥಾನದ ಜವಬ್ದಾರಿಯನ್ನೇ ಮರೆತು ನಮ್ಮ ಆರೆಸ್ಸೆಸ್ ಎನ್ನುತ್ತಾರೆ. ಪ್ರಜಾಪ್ರಭುತ್ವವಾದಿ ಪ್ರತಿನಿಧಿಗಳು ಪ್ರತಿಭಟಿಸಿದಾಗ ಮುಂದೆ ನೀವೂ ಆರೆಸ್ಸೆಸ್, ಇಡೀ ದೇಶವೇ ಆರೆಸ್ಸೆಸ್‌ಮಯವಾಗುತ್ತದೆ ಎಂದು ಹೆಮ್ಮೆಯಿಂದ ಉತ್ತರಿಸುತ್ತಾರೆ. ಇದಕ್ಕೆ ಪೂರಕವಾಗಿ ಉಗ್ರ ಹಿಂದೂ ಪ್ರತಿಪಾದಕ ಆದರೆ ಲಿಂಗಾಯತ ಸಮುದಾಯಕ್ಕೆ ಸೇರಿರುವ ರೇಣುಕಾಚಾರ್ಯ ತನ್ನ ಮಗಳಿಗೆ ಬೇಡಜಂಗಮ ಸರ್ಟಿಫಿಕೇಟ್ ಪಡೆದಿರುವುದನ್ನು ಯಾವ ಅಳುಕೂ ಇಲ್ಲದೆ ಸದನದಲ್ಲಿ ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಾರೆ. ಹೆಮ್ಮೆ ಏಕೆಂದರೆ ನಾವಿನ್ನೂ ಯಾವ ಸವಲತ್ತನ್ನು ಪಡೆದಿಲ್ಲ ಎಂಬುದು. ಅಷ್ಟೇ ಅಲ್ಲದೆ ಅವರ ಮಗ ಮತ್ತು ತಮ್ಮನೂ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರಂತಲ್ಲಾ. ರೇಣುಕಾಚಾರ್ಯ ಕೃತ್ಯದಿಂದ ದಲಿತರು ದಂಗುಬಡಿದುಹೋಗಿರುವಾಗ, ಅತ್ತ ಸದನದ ನ್ಯಾಯಸ್ಥಾನದಲ್ಲಿರುವ ಕಾಗೇರಿ ಯಾವ ಅಳುಕೂ ಇಲ್ಲದೆ ರೇಣುಕಾಚಾರ್ಯ ತಪ್ಪೊಪ್ಪಿಗೆಯನ್ನ ಮುಗುಳುನಗುತ್ತಲೇ ಗಮನಿಸುತ್ತಿದ್ದಾಗ, ಬೆಂಗಳೂರು ಜನತಾ ಬಜಾರಿನ ಮಾಜಿ ಉದ್ಯೋಗಿಯಾದ ಸೋಮಣ್ಣ ತನ್ನ ಅಕ್ರಮ ಆಸ್ತಿ ಸಂಬಂಧ ಕೋರ್ಟಿನಿಂದ ಬಂದ ನೋಟಿಸಿಗೆ ಕೇರ್ ಮಾಡದೆ ತನ್ನಂತೆ ಆಸ್ತಿ ಮಾಡಿದವರ ಪಟ್ಟಿ ತಯಾರಿಸುತ್ತಿದ್ದಾರಂತಲ್ಲಾ. ಥೂತ್ತೇರಿ.

*****

ಸೋಮಣ್ಣ ರೇವಣ್ಣನಂತೆ ಕೆಲಸಗಾರ, ತಿನ್ನುವವನು ಕೆಲಸ ಮಾಡುತ್ತಾನೆ ತಿನ್ನದವನು ಸುಮ್ಮನಿದ್ದು ಹೋಗುತ್ತಾನೆ ಎಂಬ ನಂಬಿಕೆ ಉಳ್ಳವರಂತಲ್ಲಾ. ರಾಜಕಾರಣದ ಸೋಮಣ್ಣನನ್ನು ಸದನದಲ್ಲೇ ರೇವಣ್ಣ ಸಮರ್ಥಿಸಿಕೊಂಡರಲ್ಲಾ. ಹಾಗೆ ನೋಡಿದರೆ ರೇವಣ್ಣನೂ ಪಡುವಲಹಿಪ್ಪೆ ತೋಟದಲ್ಲಿದ್ದು ಸಾಕಾಗಿ ಸದನಕ್ಕೆ ಬಂದವರು. ಒಳ್ಳೆ ಪಿಡಬ್ಲುಡಿ ಕೆಲಸಗಾರ. ಆದರೆ ಸೋಮಣ್ಣನಂತೆ ಸಿಕ್ಕಿ ಬಿದ್ದಿಲ್ಲ. ನುರಿತ ಅಧಿಕಾರಿಗಳ ಸಲಹೆ ತೆಗೆದುಕೊಂಡು ದೇವೇಗೌಡರ ಒಪ್ಪಿಗೆ ಪಡೆದು ಮುಂದುವರಿಯುವ ರೇವಣ್ಣ ಏನಾದರಾಗಲೀ ಎಂದು ಹಲವು ನಿಂಬೆಹಣ್ಣುಗಳನ್ನು ಜೇಬಲ್ಲಿ ಮಡಗಿಕೊಂಡೇ ಸದನಕ್ಕೆ ಬರುತ್ತಾರಂತಲ್ಲಾ. ಆದರೂ, ಸೋಮಣ್ಣನಿಗೆ ಬಂದ ನೋಟಿಸು ನನಗೆ ಬಂದರೆ ಗತಿಯೇನು ಎಂದು ಸೋಮಣ್ಣನ ಸಮರ್ಥನೆಗೆ ನಿಂತರಂತಲ್ಲಾ. ಬೆಂಗಳೂರಲ್ಲಿ ಯಾರಾದರೂ ಗೆಲ್ಲಲಿ, ಆ ಸೋಮಣ್ಣ ಗೆಲ್ಲಬಾರದೆಂದು ದೇವೇಗೌಡರು ಆಡಿದ ಮಾತನ್ನ ಕೇಳಿಸಿಕೊಂಡಾಗಿನಿಂದ ದೇವೇಗೌಡರ ಕುಟುಂಬವನ್ನೇ ದ್ವೇಷಿಸುತ್ತಿದ್ದ ಸೋಮಣ್ಣ ರೇವಣ್ಣನ ರಕ್ಷಣಾತ್ಮಕ ಮಾತಿನಿಂದ ಎಚ್ಚರಗೊಂಡು ಜೆಡಿಎಸ್ ಅಭಿಮಾನಿಯಾಗಿದ್ದಾರಂತಲ್ಲಾ. ಈ ನಡುವೆ ಕರ್ನಾಟಕದಲ್ಲಿ ನಡೆಯುತ್ತಿರುವ ಯಾವ ವಿದ್ಯಮಾನಕ್ಕೂ ಬಾಯಿ ಬಿಡದೆ ಕುಳಿತಿರುವ ಮಾಜಿ ಪ್ರಧಾನಿಗಳ ಮಗನಾದ ಕುಮಾರಣ್ಣ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಯ ಗಂಡಸ್ತನದ ಬಗ್ಗೆ ಹೇಳಿದ ಮಾತಿಗೆ ಜೆಡಿಎಸ್ ಗಂಡು ಹುಡುಗರೆಲ್ಲಾ ಎದ್ದು ನಿಂತು ಗುಟುರು ಹಾಕಿವೆಯಂತಲ್ಲಾ. ನಂತರ ಏನೋ ಭರದಲ್ಲಿ ಹಾಗಂದದ್ದು ಅಂದರಂತಲ್ಲಾ. ಇದನ್ನು ಕೇಳಿಸಿಕೊಂಡ ಕಾಂಗೈಗಳೂ ಕೂಡ ಎಚ್ಚರವಾದರಂತರಲ್ಲಾ. ಥೂತ್ತೇರಿ.

****

ಇದ್ದಕ್ಕಿದ್ದಂತೆ ಎಡೂರಪ್ಪನ ವಿರೋಧಿಗಳೂ ಕೂಡ ಏನೇ ಆಗಲಿ ಎಡೂರಪ್ಪನೇ ವಾಸಿ. ಅವರು ಯಂತದೇ ರಾಜಕಾರಣ ಮಾಡಿದರೂ ಕರ್ನಾಟಕವನ್ನು ಈ ಸ್ಥಿತಿಗೆ ದೂಡುತ್ತಿರಲಿಲ್ಲ ಎಂಬ ಉದ್ಘಾರ ತೆಗೆಯುತ್ತಿದ್ದಾರಲ್ಲಾ. ಹಾಗೆ ನೋಡಿದರೆ ಈ ಎಡೂರಪ್ಪ ಈಶ್ವರಪ್ಪನಂತೆ ಮುಸ್ಲಿಂ ದ್ವೇಷ ಮಾಡಿಕೊಂಡು ರಾಜಕಾರಣ ಮಾಡಿದವರಲ್ಲ. ಶಿಕಾರಿಪುರದಲ್ಲಿ ಮುಸ್ಲಿಮರು ಕೂಡ ಎಡೂರಪ್ಪನಿಗೆ ಓಟು ಮಾಡುತ್ತಾರೆ. ಅದಕ್ಕಿಂತ ಮುಖ್ಯವಾಗಿ ಒಮ್ಮೆ ಬಿಜೆಪಿಗೆ ಜಾಡಿಸಿ ಒದ್ದು ಕೆಜೆಪಿ ಪಕ್ಷ ಕಟ್ಟಿ ಕರ್ನಾಟಕವನ್ನ ಸುತ್ತಿ ಬಂದು ಬಿಜೆಪಿಗೆ ಮಣ್ಣು ಮುಕ್ಕಿಸಿದವರು ಅವರು. ಪ್ರಾಯವೇ ಇದ್ದಿದ್ದರೆ ಈಗಲೂ ಅಂತಹದೊಂದು ಸಾಹಸ ಮಾಡಿ ಬಿಜೆಪಿ ಬಾಯಿಗೆ ಬಿರುಡೆ ಇಕ್ಕುತ್ತಿದ್ದರು. ಆದರೇನು ಮಾಡೋದು, ವಯಸ್ಸು ಮತ್ತು ಮಕ್ಕಳ ಭವಿಷ್ಯ ಹಾಗೂ ಅಕ್ರಮ ಆಸ್ತಿ ಅವರನ್ನ ಬಿಜೆಪಿ ಗೊಂತಿನಲ್ಲೇ ಇರುವಂತೆ ಮಾಡಿದೆ. ನಾಗಪುರದ ಕಾರ್ಯಕ್ರಮಗಳನ್ನ
ಜಾರಿಮಾಡಬೇಕಾದರೆ ಎಡೂರಪ್ಪ ಹಿಂದೇಟು ಹಾಕಬಹುದೆಂದು ತೀರ್ಮಾನಿಸಿದ ಪರಿವಾರದವರು ಸಾದರ ಲಿಂಗಾಯತರ ಬೊಮ್ಮಾಯಿಯನ್ನ ಅಧಿಕಾರಕ್ಕೇರಿಸಿ, ತನ್ನ ಕಾರ್ಯಾಚರಣೆಯನ್ನು ಕಾರ್ಯಕರ್ತರಿಗೆ ವಹಿಸಿ ದೇಶದಲ್ಲೇ ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕಕ್ಕೆ ತನ್ನ ವಾನರ ಸೇನೆ ನುಗ್ಗಿಸಿ ಹಾಳು ಮಾಡುತ್ತಿವೆಯಲ್ಲಾ. ಇದನ್ನ ನೋಡುತ್ತ ಕುಳಿತಿರುವ ಕರ್ನಾಟಕದ ಮಠಮಾನ್ಯಗಳ ದಿಕ್ಕಿನಿಂದ ಭೋಜನದ ತೇಗಿನ ಶಬ್ದ ಬರುತ್ತಿದೆಯಂತಲ್ಲಾ. ಥೂತ್ತೇರಿ.

******

ಕರ್ನಾಟಕದಲ್ಲಿ ಜಾರಿಯಾಗುತ್ತಿರುವ ಮತೀಯ ಕ್ಷೋಭೆಯ ಕಾರ್ಯಕ್ರಮಗಳು ನಾಗಪುರದಲ್ಲಿ ತಯಾರಾಗಿ, ಮೊದಲ ಕಂತಾಗಿ ಉಡುಪಿ ಭಟ್ಟರ ಮುಖಾಂತರ ಕಾರ್ಯರೂಪಕ್ಕಿಳಿದವಂತಲ್ಲಾ. ಮೊದಲು ಹಿಜಾಬ್‌ನಿಂದ ಶುರುಮಾಡಿ, ಶಿವಮೊಗ್ಗದಲ್ಲೊಂದು ಹತ್ಯೆಯಾದ ನಂತರ ಅಲ್ಲಿ ಗಲಭೆಯೆಬ್ಬಿಸಿ, ನಂತರ ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿ ಹಾಕಬಾರದೆಂಬ ಗಲಾಟೆಯ ಜೊತೆಗೆ, ಹಲಾಲ್ ಮಾಂಸದ ಜಗಳ ಹಚ್ಚಿ ಈಗ ಮಸೀದಿಗಳಲ್ಲಿ ಧ್ವನಿವಧಕ ನಿರ್ಬಂಧಿಸಬೇಕೆಂಬ ದಾಂಧಲೆಗೆ ಬಂದು ನಿಂತಿವೆಯಲ್ಲಾ. ಆತ್ತ ಬೀದಿಯಲ್ಲಿ ಈ ಕತೆಯಾದರೆ ಇತ್ತ ಸರಕಾರದ ಮಟ್ಟದಲ್ಲಿ ಟಿಪ್ಪುಸುಲ್ತಾನನ ಸಾಹಸಗಳನ್ನ ಮರೆಮಾಚಿ ಸಾಧಾರಣ ಸೈನಿಕನಂತೆ ಮರೆಮಾಚಲು ಹವಣಿಸುತ್ತಿವೆಯೆಲ್ಲಾ. ಬಿಜೆಪಿ ಬೃಹಸ್ಪತಿಗಳು ಟಿಪ್ಪು ಇತಿಹಾಸ ಕೆದಕಿ ನೋಡಿದರೆ ಆತನ ಆಡಳಿತದಲ್ಲಿ ಏಳೆಂಟು ಸಚಿವರ ಪೈಕಿ ಐದು ಜನ ಬ್ರಾಹ್ಮಣ ಮಂತ್ರಿಗಳಿದ್ದರು; ದಿವಾನ್ ಪೂರ್ಣಯ್ಯನೇ ಬ್ರಾಹ್ಮಣ; ಆತ ನೇಮಿಸಿದ ಶ್ಯಾನುಭೋಗರ ಪೈಕಿ ಎಲ್ಲ ಬ್ರಾಹ್ಮಣರಿದ್ದರು; ಅವರೆಲ್ಲಾ ಕೆರೆ ಹಿಂದಿನ ಗದ್ದೆಯನ್ನ ತಮ್ಮ ಹೆಸರಿಗೆ ಕಾತೆ ಮಾಡಿಸಿಕೊಂಡರು; ಒಕ್ಕಲಿಗರಿಂದ ಗದ್ದೆ ಗೇಯಿಸಿಕೊಂಡರು ಬದಲಾದ ಕಾಲಕ್ಕೆ ಬಹುಬೆಲೆಗೆ ಅದನ್ನು ಮಾರಿ ಬೆಂಗಳೂರು, ದೆಹಲಿ, ನ್ಯೂಯಾರ್ಕ್ ಸೇರಿಕೊಂಡರು; ಅವರ ಮಕ್ಕಳು ಪೋಸ್ಟಾಫೀಸು, ಬ್ಯಾಂಕು, ಇನ್ಸೂರೆನ್ಸ್ ಆಫೀಸು, ರೇಡಿಯೊ, ಪೇಪರ್, ಸಿನಿಮಾ, ಟಿವಿಯೊಳಗೆ ಸೇರಿಕೊಂಡರು. ಈ ಇತಿಹಾಸವನ್ನು ಗಮನಿಸಿದರೆ ಟಿಪ್ಪುವಿನಿಂದಾದ ತೊಂದರೆ ಪೂರ್ಣಯ್ಯನ ಸಂತತಿಯಿಂದ ನಡೆಯುತ್ತಿರುವ ಅನಾಹುತದ ಮುಂದೇ ಏನೇನೂ ಅಲ್ಲ ಎಂದು ಎಲ್ಲರಿಗೂ ಗುರುತಾಗಲಿದೆಯಂತಲ್ಲಾ. ಥೂತ್ತೇರಿ

– ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಸಿದ್ದರಾಮಯ್ಯ ರಾವಣನಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...