Homeಅಂಕಣಗಳುಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

ಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

- Advertisement -
- Advertisement -

ನಮ್ಮ ಸಂತೆಶಿವರದ ಲಿಂಗಣ್ಣಯ್ಯ ಭೈರಪ್ಪ ಗೊತ್ತೆ ನಿಮಗೆ? ಅದೆ ಹಿಂದೂ ಧರ್ಮದ ಪುರೋಹಿತಶಾಹಿ ಪುನರುತ್ಥಾನದ ಕಾದಂಬರಿ ಕಾರ್ಖಾನೆ. ಈ ಕಾರ್ಖಾನೆ ಈಗ ಸ್ಥಗಿತಗೊಂಡಿದೆ ಏಕೆಂದರೆ ಅವರ ತೊಂಬತ್ತೆರೆಡು ವರ್ಷದಲ್ಲಿ ಸುಳ್ಳು ಸೃಜನಶೀಲತೆ ಕಷ್ಟವಾದ್ದರಿಂದ; ಬರವಣಿಗೆ ಬತ್ತಿ ಹೋಗಿದೆ. ಇದನ್ನು ಗ್ರಹಿಸಿದ ಮೋದಿ ಗವುರಮೆಂಟು ಭೈರಪ್ಪನವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟಿತು. ಜ್ಞಾನಪೀಠ ಸಿಗಲಿಲ್ಲ ಎಂದು ಕೊರಗುತ್ತಾ ವೃದ್ಧಾಪ್ಯ ಸಮೀಪಿಸಿದ ಭೈರಪ್ಪ ಈ ಸಮಯದಲ್ಲಿ ಧನಕನಕದ ಪ್ರಶಸ್ತಿಯನ್ನೇ ಎಡವಿಬಿದ್ದಂತೆ ಪದ್ಮಭೂಷಣ ದೊರೆತಿದೆ. ಈ ಸುದ್ದಿ ಕೇಳಿ ಬವಳಿ ಬಂದಂತಾದ ಭೈರಪ್ಪ ಈ ಪ್ರಶಸ್ತಿ ಕೊಟ್ಟ ಮೋದಿ 2024ರಲ್ಲಿ ಗೆದ್ದು ಪ್ರಧಾನಿಯಾಗಲಿ ಮತ್ತೆ 2029ರಲ್ಲೂ ಗೆದ್ದು ಪ್ರಧಾನಿಯಾಗಲಿ, ದುರ್ದೈವದಿಂದ ನಾನು ಅಲ್ಲಿಯವರೆಗೂ ಇರಲಾಗುವುದಿಲ್ಲ, ಆದರೂ ಅದೇನೂ ಬಹಳ ದೂರದ ಸಮಯವಲ್ಲ, ಕೇವಲ 8 ವರ್ಷ ಎಂದಿಲ್ಲವಲ್ಲ. ಮೋದಿ ಪರ ಇಂತಹ ವಕಾಲತ್ತು ವಹಿಸಿದ ಭೈರಪ್ಪ ಯಾರಾದರೂ ತಪ್ಪು ತಿಳಿದಾರೆಂದು ನಾನು ಯಾವ ಪಕ್ಷದ ಪಕ್ಷಪಾತಿಯಲ್ಲ, ಮೋದಿ ಭಕ್ತ ಅಷ್ಟೇ; ಇಂತಹ ಪ್ರಧಾನಿ ಈವರೆಗೆ ಬಂದಿರಲಿಲ್ಲ ಎಂದು ತಮ್ಮ ಅಜ್ಞಾನವನ್ನ ಅನಾವರಣ ಮಾಡಿದರಲ್ಲಾ. ಅಜ್ಞಾನ ಏಕೆಂದರೆ ನೆಹರೂ ನಂತರ ಈ ದೇಶದ ಪ್ರಧಾನಿಯಾಗಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿ ನಿಧನರಾದಾಗ ಶಾಸ್ತ್ರಿ ಕುಟುಂಬ ಬಡತನದಲ್ಲಿತ್ತು. ಅವರಿಗೆ ಏನಾದರೂ ಸಹಾಯ ಮಾಡಬೇಕೆಂಬ ಚರ್ಚೆ ಅಂದಿನ ಸಂಸತ್ತಿನಲ್ಲಿ ನಡೆದಿತ್ತು. ಇದು ಭೈರಪ್ಪನವರ ಮತಾಂಧ ಮೆದುಳಿಗೆ ಹೊಳೆಯದ ಸಂಗತಿಯಂತಲ್ಲಾ, ಥೂತ್ತೇರಿ.

*****

ಸಂತೆಶಿವರ ಎಂಬ ಹಳ್ಳಿಯಲ್ಲಿ ಒಕ್ಕಲಿಗರು ಮತ್ತು ಕುರುಬರ ಮನೆಗಳ ನಡುವೆ ಇದ್ದು ಅವರುಗಳ ಸಹಾಯದಿಂದ ಮೇಲೆ ಬಂದ ಭೈರಪ್ಪ ತನ್ನನ್ನು ಸಾಕಿ ಸಲಹಿದ ಈ ಜನರ ಬಗ್ಗೆ ಎಂದೂ ಮಾತನಾಡದೆ ಶ್ರಮಿಸಿದ್ದೆಲ್ಲಾ ತಮ್ಮ ಕೋಮಿನ ಬ್ರಾಹ್ಮಣರ ಉದ್ಧಾರಕ್ಕೆ ಮತ್ತು ಸಂಘ ಪರಿವಾರದ ಏಳ್ಗೆಗೆ. ಇನ್ನೊಂದು ಐತಿಹಾಸಿಕವಾದ ಸತ್ಯ ಯಾವುದೆಂದರೆ, ನಮ್ಮ ನೆಲದ ಯಾವ ಜಾತಿಗೇ ಆಗಲಿ ಭೈರಪ್ಪನವರ ಪರಿವಾರ ಎಂದೂ ಅಣ್ಣತಮ್ಮಂದಿರಾಗಿ ನಡೆದುಕೊಂಡಿಲ್ಲ, ಆ ಭಾವನೆಯೂ ಅವರಿಗೆ ಬರುವುದಿಲ್ಲ. ಹಾಗಾಗಿ ಸಂತೆಶಿವರದ ಜನಗಳೆಂದೂ ಭೈರಪ್ಪನವರಿಗೆ ಅಣ್ಣ ತಮ್ಮಂದಿರಾಗಿ ಗೋಚರವಾಗಲಿಲ್ಲ. ಬದಲಿಗೆ ಮೈಸೂರಲ್ಲಿ ಬೀಡು

ಭೈರಪ್ಪ

ಬಿಟ್ಟಿದ್ದ ಬ್ರಾಹ್ಮಣ ಸಮುದಾಯದವರಿಗೆ ಬಂಧುವಾದರು; ಅದ್ದರಿಂದ ದೈತ್ಯ ಬರಹಗಾರನಾದರೂ ಮಾನವತಾವಾದಿಯಾಗಲಿಲ್ಲ. ಇನ್ನು ಭೈರಪ್ಪನವರ ಬಾಯಲ್ಲಿ ಮೋದಿ ಜಪ ಆರಂಭವಾಗಿರುವಾಗಲೇ ಬಿಬಿಸಿ ಗುಜರಾತ್ ಗಲಭೆಗೆ ಸಂಬಂಧಿಸಿದ ಸಾಕ್ಷಚಿತ್ರ ಬಿಡುಗಡೆ ಮಾಡಿಬಿಟ್ಟಿದ್ದಾರಲ್ಲಾ. ಭೈರಪ್ಪನವರ ಉತ್ತರಕಾಂಡದ ಮಾತುಗಳನ್ನೇ ಜೋರು ದನಿಯಲ್ಲಿ ಮಾತನಾಡುತ್ತಿರುವ ಭಗವಾನ್ ಮತ್ತೆ ’ರಾಮ ದೇವರಲ್ಲ ನರಮನುಷ್ಯ’ ಇತ್ಯಾದಿ ಮಾತನಾಡಿ ಮಾಧ್ಯಮದ ಮೂರ್ಖರು ಮತ್ತು ಮತಾಂಧರಿಂದ ಉಗ್ರ ಟೀಕೆಗೆ ಒಳಗಾಗಿದ್ದಾರೆ. ಈ ಭಗವಾನ್ ತಮ್ಮ ಅಭಿಪ್ರಾಯ ಅದುಮಿಟ್ಟುಕೊಂಡು ಭೈರಪ್ಪ ಬರೆದ ಉತ್ತರಕಾಂಡ ಓದಲು ಹೇಳಿದರೆ ಎಷ್ಟು ಒಳ್ಳೆಯದಲ್ಲವೆ ಎಂಬುದು ಬುದ್ಧಿಜೀವಿಗಳ ಬುದ್ಧಿವಾದವಾಗಿದೆಯಲ್ಲಾ, ಥೂತ್ತೇರಿ.

*****

ಇತ್ತ ಬಿಜೆಪಿ ರಾಜಕಾರಣದ ಸಂಗತಿಗಳು ಶಾನೆ ದುಃಖಕರವಾಗಿವೆಯಲ್ಲಾ. ಆಸ್ತಿ ಮಾಡಲೆಂದೇ ಹೋರಾಟದ ರಾಜಕಾರಣ ಮಾಡುತ್ತಾ ಬಂದು, ಮಾರಿಕೊಂಡ ಮಾಧ್ಯಮದವರಿಂದ ರಾಜಾಹುಲಿ ಬಿರುದು ಪಡೆದ ಎಡೂರಪ್ಪನವರು ತಮ್ಮ ನಿಲುಗಡೆಯ ನಿಲ್ದಾಣವನ್ನು ಘೋಷಣೆ ಮಾಡಿದ್ದಾರೆ. ಎಡೂರಪ್ಪನನ್ನು ಇಳಿಸಲು ಸಾಕಷ್ಟು ಟೀಕೆ ಸಂಗ್ರಹ ಮಾಡಿಕೊಳ್ಳಲೆಂದೇ ನೇಮಿಸಿದ್ದ ಬಸವನಗೌಡ ಪಾಟೀಲರನ್ನು ಕರೆಸಿಕೊಂಡ ಹೈಕಮಾಂಡು, “ಅಪ್ನಾ ಎಡೂರಪ್ಪಾಕ ಟೀಕೆ ಬಂದ್ ಕರೊ ಬೈಯ್ಯಾ” ಎಂದು ಹೇಳಿ ಕಳಿಸಿರುವುದರಿಂದ ಯತ್ನಾಳ್ ಮುಂದೆ ಯಾರನ್ನು ಟೀಕಿಸಬೇಕೆಂದು ಚಿಂತಿಸುತ್ತಿರುವಾಗಲೇ, ಎಡೂರಪ್ಪ ನನಗೀಗ 80ವರ್ಷ, ಹಾಗೆಂದು ಮನೆಯಲ್ಲಿ ಕೂರಲಾಗುವುದಿಲ್ಲ, ಹಾಗಾಗಿ ಯಾವುದೇ ಸಭೆ ಸಮಾರಂಭ ಇರಲಿ ಅಲ್ಲಿಗೆ ಹೋಗಿ ಬೊಮ್ಮಾಯಿ ಜೊತೆ ನಿಂತುಕೊಳ್ಳುತ್ತೇನೆ ಎಂದಿದ್ದಾರಲ್ಲಾ. ಇದರಿಂದ ಒಳಗೊಳಗೇ ಮುಜುಗರಗೊಂಡಿರುವ ಬೊಮ್ಮಾಯಿ, ತಾನೆ ಮುಂದಾಳತ್ವ ವಹಿಸಲು ಚಿಂತಿಸುತ್ತಿದ್ದಾಗಲೇ, ಎಡೂರಪ್ಪ ಮುಂದಿನ ಚುನಾವಣೆಗೆ 140 ಸೀಟು ಗೆಲ್ಲಿಸುತ್ತೇನೆ ಎಂದುಬಿಟ್ಟಿದ್ದಾರಲ್ಲಾ. ಹಾಗೆ ನೋಡಿದರೆ ಮುಖ್ಯಮಂತ್ರಿಯೊಬ್ಬ ಆ ಪದವಿಯಿಂದ ಕೆಳಗಿಳಿದ ಮೇಲೆ ಹಾಲಿ ಮುಖ್ಯಮಂತ್ರಿ ಜೊತೆ ಕಾಣಿಸಿಕೊಂಡು ತಿರುಗುತ್ತಿರುವ ದಾಖಲೆ ಎಡೂರಪ್ಪನವರಿಗೆ ಮಾತ್ರ ಸೇರುವಂತದ್ದು. ಅಲ್ಲದೆ ಎಡೂರಪ್ಪನವರ ಜೋಳಿಗೆಯಲ್ಲಿ ಹಲವಾರು ಅಳಿಸಲಾಗದ ದಾಖಲೆಗಳಿವೆ; ಅವುಗಳನ್ನ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಆ ವಿಷಯದಲ್ಲವರು ಮಾಧ್ಯಮದವರು ಕೊಟ್ಟ ರಾಜಾಹುಲಿ ಬಿರುದಿಗೆ ಯೋಗ್ಯರಂತಲ್ಲಾ, ಥೂತ್ತೇರಿ.

****

ಇದನ್ನೂ ಓದಿ: ಎರಡು ದುಃಖದ ಸಂಗತಿ ಎದುರಾದವಲ್ಲಾ

ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಪ್ರವೇಶ ಮಾಡಿದ ಬಿಜೆಪಿ ಎಂಬ ಪಾರ್ಟಿ ಪ್ರಜಾಪ್ರಭುತ್ವದ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯಲು ನಾಗಮಂಗಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದೆಯಲ್ಲಾ. ಬಿಜೆಪಿಯಿಂದ ಸ್ಫರ್ಧಿಸಲು ಬಂದಾತ ಫೈಟರ್ ರವಿ ಎಂಬ ರೌಡಿ ಪಟ್ಟದವನು. ಚುನಾವಣೆಗೆ ನಾಗಮಂಗಲದ ಮತದಾರರನ್ನು ಕೊಳ್ಳಲು ತಂದಿರುವ ಹಣ ಎಪ್ಪತ್ತು ಕೋಟಿ ಇದೆಯಂತಲ್ಲಾ. ಇದರಲ್ಲಿ ತಾರತಮ್ಯವಿಲ್ಲದೆ ತಲೆಗೆ ಐದು ಸಾವಿರದಂತೆ ಹಂಚಿದರೆ ಆ ಮೊತ್ತ ಸರಿಯಾಗುತ್ತದಂತೆ. ಇನ್ನ ಹಂಚಲು ಬಿಟ್ಟ ಉಸ್ತುವಾರಿ ಜನರಿಗೆ ಲಕ್ಷವಂತೆ. ಈ ನಡುವೆ ಈಗಾಗಲೇ ಕಷ್ಟ ಹೇಳಿಕೊಂಡ ಜನರ ಕೈಗೆ ಹಣ ಸೇರುತ್ತಿದೆ, ಜೊತೆಗೆ ಈತ ಏರ್ಪಡಿಸುವ ಸಭೆಗೆ ಹೋದರೆ ತಲಾ 200 ರೂ. ಮತ್ತು ಬಿರಿಯಾನಿ ಊಟ. ಈಗಾಗಲೇ ಇಂತಹ ಮಾಂಸದ ಪರಿಶೆ ನೋಡಿದ ಪಕ್ಷೇತರ ಅಭ್ಯರ್ಥಿ

ಶಿವರಾಮೇಗೌಡ

ಶಿವರಾಮೇಗೌಡ ಹಾಗೂ ಜನತಾದಳದ ಸುರೇಶ್‌ಗೌಡ ಮತ್ತು ಕಾಂಗ್ರೆಸ್ಸಿನ ಚಲುವರಾಯಸ್ವಾಮಿ ದಂಗುಬಡಿದುಹೋಗಿದ್ದಾರಲ್ಲಾ. ಈ ಫೈಟರ್ ರವಿಗೆ ಫೈಟ್ ಕೊಡಲು ಈಗಾಗಲೇ ತಯಾರಾಗಿರುವ ಶಿವರಾಮೇಗೌಡ ಕೊಪ್ಪ ಹೋಬಳಿ ಮತ್ತು ಬಂಡಿಗನವಿಲೆ ಹೋಬಳಿಯಲ್ಲಿ ಮೂರು ಕಾರ್ಯಕ್ರಮಗಳನ್ನು ಮಾಡಿ ಬಾಡೂಟದ ಮಟ್ಟಿಗೆ ಫೈಟ್ ಕೊಡುತ್ತಿರಬೇಕಾದರೆ, ಅತ್ತ ಜೆಡಿಎಸ್‌ನ ಸುರೇಶ್‌ಗೌಡ ಕುಮಾರಣ್ಣ ಮತ್ತು ದ್ಯಾವೇಗೌಡರ ಬರುವಿಕೆಗಾಗಿ ಕಾಯುತಿದ್ದಾರಂತಲ್ಲಾ. ಇತ್ತ ಚಲುವರಾಯಸ್ವಾಮಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಕರೆಸಲು ಸಿದ್ಧತೆ ನಡೆಸುತ್ತ ಇರಬೇಕಾದರೆ ಇವರೂ ಮಾಂಸದೂಟವನ್ನೇನಾದರೂ ಏರ್ಪಡಿಸಿದರೇ ಆ ಪ್ರಾಂತ್ಯದ ಆಡು, ಕುರಿ, ಎಮ್ಮೆ, ದನಕರುಗಳು ಕಾಣೆಯಾಗಿ ಎಲ್ಲಿ ನೋಡಿದರೂ ಬರೀ ಮನುಷ್ಯರೆ ಕಾಣುವ ಕಾಲ ಬಹಳ ದೂರವಿಲ್ಲ ಎನ್ನುವಂತಾಗಿದೆಯಲ್ಲಾ, ಥೂ ಥೂ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....