Homeಅಂಕಣಗಳುಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

ಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

- Advertisement -
- Advertisement -

ನಮ್ಮ ಸಂತೆಶಿವರದ ಲಿಂಗಣ್ಣಯ್ಯ ಭೈರಪ್ಪ ಗೊತ್ತೆ ನಿಮಗೆ? ಅದೆ ಹಿಂದೂ ಧರ್ಮದ ಪುರೋಹಿತಶಾಹಿ ಪುನರುತ್ಥಾನದ ಕಾದಂಬರಿ ಕಾರ್ಖಾನೆ. ಈ ಕಾರ್ಖಾನೆ ಈಗ ಸ್ಥಗಿತಗೊಂಡಿದೆ ಏಕೆಂದರೆ ಅವರ ತೊಂಬತ್ತೆರೆಡು ವರ್ಷದಲ್ಲಿ ಸುಳ್ಳು ಸೃಜನಶೀಲತೆ ಕಷ್ಟವಾದ್ದರಿಂದ; ಬರವಣಿಗೆ ಬತ್ತಿ ಹೋಗಿದೆ. ಇದನ್ನು ಗ್ರಹಿಸಿದ ಮೋದಿ ಗವುರಮೆಂಟು ಭೈರಪ್ಪನವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟಿತು. ಜ್ಞಾನಪೀಠ ಸಿಗಲಿಲ್ಲ ಎಂದು ಕೊರಗುತ್ತಾ ವೃದ್ಧಾಪ್ಯ ಸಮೀಪಿಸಿದ ಭೈರಪ್ಪ ಈ ಸಮಯದಲ್ಲಿ ಧನಕನಕದ ಪ್ರಶಸ್ತಿಯನ್ನೇ ಎಡವಿಬಿದ್ದಂತೆ ಪದ್ಮಭೂಷಣ ದೊರೆತಿದೆ. ಈ ಸುದ್ದಿ ಕೇಳಿ ಬವಳಿ ಬಂದಂತಾದ ಭೈರಪ್ಪ ಈ ಪ್ರಶಸ್ತಿ ಕೊಟ್ಟ ಮೋದಿ 2024ರಲ್ಲಿ ಗೆದ್ದು ಪ್ರಧಾನಿಯಾಗಲಿ ಮತ್ತೆ 2029ರಲ್ಲೂ ಗೆದ್ದು ಪ್ರಧಾನಿಯಾಗಲಿ, ದುರ್ದೈವದಿಂದ ನಾನು ಅಲ್ಲಿಯವರೆಗೂ ಇರಲಾಗುವುದಿಲ್ಲ, ಆದರೂ ಅದೇನೂ ಬಹಳ ದೂರದ ಸಮಯವಲ್ಲ, ಕೇವಲ 8 ವರ್ಷ ಎಂದಿಲ್ಲವಲ್ಲ. ಮೋದಿ ಪರ ಇಂತಹ ವಕಾಲತ್ತು ವಹಿಸಿದ ಭೈರಪ್ಪ ಯಾರಾದರೂ ತಪ್ಪು ತಿಳಿದಾರೆಂದು ನಾನು ಯಾವ ಪಕ್ಷದ ಪಕ್ಷಪಾತಿಯಲ್ಲ, ಮೋದಿ ಭಕ್ತ ಅಷ್ಟೇ; ಇಂತಹ ಪ್ರಧಾನಿ ಈವರೆಗೆ ಬಂದಿರಲಿಲ್ಲ ಎಂದು ತಮ್ಮ ಅಜ್ಞಾನವನ್ನ ಅನಾವರಣ ಮಾಡಿದರಲ್ಲಾ. ಅಜ್ಞಾನ ಏಕೆಂದರೆ ನೆಹರೂ ನಂತರ ಈ ದೇಶದ ಪ್ರಧಾನಿಯಾಗಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿ ನಿಧನರಾದಾಗ ಶಾಸ್ತ್ರಿ ಕುಟುಂಬ ಬಡತನದಲ್ಲಿತ್ತು. ಅವರಿಗೆ ಏನಾದರೂ ಸಹಾಯ ಮಾಡಬೇಕೆಂಬ ಚರ್ಚೆ ಅಂದಿನ ಸಂಸತ್ತಿನಲ್ಲಿ ನಡೆದಿತ್ತು. ಇದು ಭೈರಪ್ಪನವರ ಮತಾಂಧ ಮೆದುಳಿಗೆ ಹೊಳೆಯದ ಸಂಗತಿಯಂತಲ್ಲಾ, ಥೂತ್ತೇರಿ.

*****

ಸಂತೆಶಿವರ ಎಂಬ ಹಳ್ಳಿಯಲ್ಲಿ ಒಕ್ಕಲಿಗರು ಮತ್ತು ಕುರುಬರ ಮನೆಗಳ ನಡುವೆ ಇದ್ದು ಅವರುಗಳ ಸಹಾಯದಿಂದ ಮೇಲೆ ಬಂದ ಭೈರಪ್ಪ ತನ್ನನ್ನು ಸಾಕಿ ಸಲಹಿದ ಈ ಜನರ ಬಗ್ಗೆ ಎಂದೂ ಮಾತನಾಡದೆ ಶ್ರಮಿಸಿದ್ದೆಲ್ಲಾ ತಮ್ಮ ಕೋಮಿನ ಬ್ರಾಹ್ಮಣರ ಉದ್ಧಾರಕ್ಕೆ ಮತ್ತು ಸಂಘ ಪರಿವಾರದ ಏಳ್ಗೆಗೆ. ಇನ್ನೊಂದು ಐತಿಹಾಸಿಕವಾದ ಸತ್ಯ ಯಾವುದೆಂದರೆ, ನಮ್ಮ ನೆಲದ ಯಾವ ಜಾತಿಗೇ ಆಗಲಿ ಭೈರಪ್ಪನವರ ಪರಿವಾರ ಎಂದೂ ಅಣ್ಣತಮ್ಮಂದಿರಾಗಿ ನಡೆದುಕೊಂಡಿಲ್ಲ, ಆ ಭಾವನೆಯೂ ಅವರಿಗೆ ಬರುವುದಿಲ್ಲ. ಹಾಗಾಗಿ ಸಂತೆಶಿವರದ ಜನಗಳೆಂದೂ ಭೈರಪ್ಪನವರಿಗೆ ಅಣ್ಣ ತಮ್ಮಂದಿರಾಗಿ ಗೋಚರವಾಗಲಿಲ್ಲ. ಬದಲಿಗೆ ಮೈಸೂರಲ್ಲಿ ಬೀಡು

ಭೈರಪ್ಪ

ಬಿಟ್ಟಿದ್ದ ಬ್ರಾಹ್ಮಣ ಸಮುದಾಯದವರಿಗೆ ಬಂಧುವಾದರು; ಅದ್ದರಿಂದ ದೈತ್ಯ ಬರಹಗಾರನಾದರೂ ಮಾನವತಾವಾದಿಯಾಗಲಿಲ್ಲ. ಇನ್ನು ಭೈರಪ್ಪನವರ ಬಾಯಲ್ಲಿ ಮೋದಿ ಜಪ ಆರಂಭವಾಗಿರುವಾಗಲೇ ಬಿಬಿಸಿ ಗುಜರಾತ್ ಗಲಭೆಗೆ ಸಂಬಂಧಿಸಿದ ಸಾಕ್ಷಚಿತ್ರ ಬಿಡುಗಡೆ ಮಾಡಿಬಿಟ್ಟಿದ್ದಾರಲ್ಲಾ. ಭೈರಪ್ಪನವರ ಉತ್ತರಕಾಂಡದ ಮಾತುಗಳನ್ನೇ ಜೋರು ದನಿಯಲ್ಲಿ ಮಾತನಾಡುತ್ತಿರುವ ಭಗವಾನ್ ಮತ್ತೆ ’ರಾಮ ದೇವರಲ್ಲ ನರಮನುಷ್ಯ’ ಇತ್ಯಾದಿ ಮಾತನಾಡಿ ಮಾಧ್ಯಮದ ಮೂರ್ಖರು ಮತ್ತು ಮತಾಂಧರಿಂದ ಉಗ್ರ ಟೀಕೆಗೆ ಒಳಗಾಗಿದ್ದಾರೆ. ಈ ಭಗವಾನ್ ತಮ್ಮ ಅಭಿಪ್ರಾಯ ಅದುಮಿಟ್ಟುಕೊಂಡು ಭೈರಪ್ಪ ಬರೆದ ಉತ್ತರಕಾಂಡ ಓದಲು ಹೇಳಿದರೆ ಎಷ್ಟು ಒಳ್ಳೆಯದಲ್ಲವೆ ಎಂಬುದು ಬುದ್ಧಿಜೀವಿಗಳ ಬುದ್ಧಿವಾದವಾಗಿದೆಯಲ್ಲಾ, ಥೂತ್ತೇರಿ.

*****

ಇತ್ತ ಬಿಜೆಪಿ ರಾಜಕಾರಣದ ಸಂಗತಿಗಳು ಶಾನೆ ದುಃಖಕರವಾಗಿವೆಯಲ್ಲಾ. ಆಸ್ತಿ ಮಾಡಲೆಂದೇ ಹೋರಾಟದ ರಾಜಕಾರಣ ಮಾಡುತ್ತಾ ಬಂದು, ಮಾರಿಕೊಂಡ ಮಾಧ್ಯಮದವರಿಂದ ರಾಜಾಹುಲಿ ಬಿರುದು ಪಡೆದ ಎಡೂರಪ್ಪನವರು ತಮ್ಮ ನಿಲುಗಡೆಯ ನಿಲ್ದಾಣವನ್ನು ಘೋಷಣೆ ಮಾಡಿದ್ದಾರೆ. ಎಡೂರಪ್ಪನನ್ನು ಇಳಿಸಲು ಸಾಕಷ್ಟು ಟೀಕೆ ಸಂಗ್ರಹ ಮಾಡಿಕೊಳ್ಳಲೆಂದೇ ನೇಮಿಸಿದ್ದ ಬಸವನಗೌಡ ಪಾಟೀಲರನ್ನು ಕರೆಸಿಕೊಂಡ ಹೈಕಮಾಂಡು, “ಅಪ್ನಾ ಎಡೂರಪ್ಪಾಕ ಟೀಕೆ ಬಂದ್ ಕರೊ ಬೈಯ್ಯಾ” ಎಂದು ಹೇಳಿ ಕಳಿಸಿರುವುದರಿಂದ ಯತ್ನಾಳ್ ಮುಂದೆ ಯಾರನ್ನು ಟೀಕಿಸಬೇಕೆಂದು ಚಿಂತಿಸುತ್ತಿರುವಾಗಲೇ, ಎಡೂರಪ್ಪ ನನಗೀಗ 80ವರ್ಷ, ಹಾಗೆಂದು ಮನೆಯಲ್ಲಿ ಕೂರಲಾಗುವುದಿಲ್ಲ, ಹಾಗಾಗಿ ಯಾವುದೇ ಸಭೆ ಸಮಾರಂಭ ಇರಲಿ ಅಲ್ಲಿಗೆ ಹೋಗಿ ಬೊಮ್ಮಾಯಿ ಜೊತೆ ನಿಂತುಕೊಳ್ಳುತ್ತೇನೆ ಎಂದಿದ್ದಾರಲ್ಲಾ. ಇದರಿಂದ ಒಳಗೊಳಗೇ ಮುಜುಗರಗೊಂಡಿರುವ ಬೊಮ್ಮಾಯಿ, ತಾನೆ ಮುಂದಾಳತ್ವ ವಹಿಸಲು ಚಿಂತಿಸುತ್ತಿದ್ದಾಗಲೇ, ಎಡೂರಪ್ಪ ಮುಂದಿನ ಚುನಾವಣೆಗೆ 140 ಸೀಟು ಗೆಲ್ಲಿಸುತ್ತೇನೆ ಎಂದುಬಿಟ್ಟಿದ್ದಾರಲ್ಲಾ. ಹಾಗೆ ನೋಡಿದರೆ ಮುಖ್ಯಮಂತ್ರಿಯೊಬ್ಬ ಆ ಪದವಿಯಿಂದ ಕೆಳಗಿಳಿದ ಮೇಲೆ ಹಾಲಿ ಮುಖ್ಯಮಂತ್ರಿ ಜೊತೆ ಕಾಣಿಸಿಕೊಂಡು ತಿರುಗುತ್ತಿರುವ ದಾಖಲೆ ಎಡೂರಪ್ಪನವರಿಗೆ ಮಾತ್ರ ಸೇರುವಂತದ್ದು. ಅಲ್ಲದೆ ಎಡೂರಪ್ಪನವರ ಜೋಳಿಗೆಯಲ್ಲಿ ಹಲವಾರು ಅಳಿಸಲಾಗದ ದಾಖಲೆಗಳಿವೆ; ಅವುಗಳನ್ನ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಆ ವಿಷಯದಲ್ಲವರು ಮಾಧ್ಯಮದವರು ಕೊಟ್ಟ ರಾಜಾಹುಲಿ ಬಿರುದಿಗೆ ಯೋಗ್ಯರಂತಲ್ಲಾ, ಥೂತ್ತೇರಿ.

****

ಇದನ್ನೂ ಓದಿ: ಎರಡು ದುಃಖದ ಸಂಗತಿ ಎದುರಾದವಲ್ಲಾ

ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಪ್ರವೇಶ ಮಾಡಿದ ಬಿಜೆಪಿ ಎಂಬ ಪಾರ್ಟಿ ಪ್ರಜಾಪ್ರಭುತ್ವದ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯಲು ನಾಗಮಂಗಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದೆಯಲ್ಲಾ. ಬಿಜೆಪಿಯಿಂದ ಸ್ಫರ್ಧಿಸಲು ಬಂದಾತ ಫೈಟರ್ ರವಿ ಎಂಬ ರೌಡಿ ಪಟ್ಟದವನು. ಚುನಾವಣೆಗೆ ನಾಗಮಂಗಲದ ಮತದಾರರನ್ನು ಕೊಳ್ಳಲು ತಂದಿರುವ ಹಣ ಎಪ್ಪತ್ತು ಕೋಟಿ ಇದೆಯಂತಲ್ಲಾ. ಇದರಲ್ಲಿ ತಾರತಮ್ಯವಿಲ್ಲದೆ ತಲೆಗೆ ಐದು ಸಾವಿರದಂತೆ ಹಂಚಿದರೆ ಆ ಮೊತ್ತ ಸರಿಯಾಗುತ್ತದಂತೆ. ಇನ್ನ ಹಂಚಲು ಬಿಟ್ಟ ಉಸ್ತುವಾರಿ ಜನರಿಗೆ ಲಕ್ಷವಂತೆ. ಈ ನಡುವೆ ಈಗಾಗಲೇ ಕಷ್ಟ ಹೇಳಿಕೊಂಡ ಜನರ ಕೈಗೆ ಹಣ ಸೇರುತ್ತಿದೆ, ಜೊತೆಗೆ ಈತ ಏರ್ಪಡಿಸುವ ಸಭೆಗೆ ಹೋದರೆ ತಲಾ 200 ರೂ. ಮತ್ತು ಬಿರಿಯಾನಿ ಊಟ. ಈಗಾಗಲೇ ಇಂತಹ ಮಾಂಸದ ಪರಿಶೆ ನೋಡಿದ ಪಕ್ಷೇತರ ಅಭ್ಯರ್ಥಿ

ಶಿವರಾಮೇಗೌಡ

ಶಿವರಾಮೇಗೌಡ ಹಾಗೂ ಜನತಾದಳದ ಸುರೇಶ್‌ಗೌಡ ಮತ್ತು ಕಾಂಗ್ರೆಸ್ಸಿನ ಚಲುವರಾಯಸ್ವಾಮಿ ದಂಗುಬಡಿದುಹೋಗಿದ್ದಾರಲ್ಲಾ. ಈ ಫೈಟರ್ ರವಿಗೆ ಫೈಟ್ ಕೊಡಲು ಈಗಾಗಲೇ ತಯಾರಾಗಿರುವ ಶಿವರಾಮೇಗೌಡ ಕೊಪ್ಪ ಹೋಬಳಿ ಮತ್ತು ಬಂಡಿಗನವಿಲೆ ಹೋಬಳಿಯಲ್ಲಿ ಮೂರು ಕಾರ್ಯಕ್ರಮಗಳನ್ನು ಮಾಡಿ ಬಾಡೂಟದ ಮಟ್ಟಿಗೆ ಫೈಟ್ ಕೊಡುತ್ತಿರಬೇಕಾದರೆ, ಅತ್ತ ಜೆಡಿಎಸ್‌ನ ಸುರೇಶ್‌ಗೌಡ ಕುಮಾರಣ್ಣ ಮತ್ತು ದ್ಯಾವೇಗೌಡರ ಬರುವಿಕೆಗಾಗಿ ಕಾಯುತಿದ್ದಾರಂತಲ್ಲಾ. ಇತ್ತ ಚಲುವರಾಯಸ್ವಾಮಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಕರೆಸಲು ಸಿದ್ಧತೆ ನಡೆಸುತ್ತ ಇರಬೇಕಾದರೆ ಇವರೂ ಮಾಂಸದೂಟವನ್ನೇನಾದರೂ ಏರ್ಪಡಿಸಿದರೇ ಆ ಪ್ರಾಂತ್ಯದ ಆಡು, ಕುರಿ, ಎಮ್ಮೆ, ದನಕರುಗಳು ಕಾಣೆಯಾಗಿ ಎಲ್ಲಿ ನೋಡಿದರೂ ಬರೀ ಮನುಷ್ಯರೆ ಕಾಣುವ ಕಾಲ ಬಹಳ ದೂರವಿಲ್ಲ ಎನ್ನುವಂತಾಗಿದೆಯಲ್ಲಾ, ಥೂ ಥೂ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...