Homeಅಂಕಣಗಳುಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

ಕೆಲವೇ ದಿನಗಳಲ್ಲಿ ಆಡು ಕುರಿ ಕರ ಕಾಣೆಯಾಗುತ್ತವಲ್ಲಾ!

- Advertisement -
- Advertisement -

ನಮ್ಮ ಸಂತೆಶಿವರದ ಲಿಂಗಣ್ಣಯ್ಯ ಭೈರಪ್ಪ ಗೊತ್ತೆ ನಿಮಗೆ? ಅದೆ ಹಿಂದೂ ಧರ್ಮದ ಪುರೋಹಿತಶಾಹಿ ಪುನರುತ್ಥಾನದ ಕಾದಂಬರಿ ಕಾರ್ಖಾನೆ. ಈ ಕಾರ್ಖಾನೆ ಈಗ ಸ್ಥಗಿತಗೊಂಡಿದೆ ಏಕೆಂದರೆ ಅವರ ತೊಂಬತ್ತೆರೆಡು ವರ್ಷದಲ್ಲಿ ಸುಳ್ಳು ಸೃಜನಶೀಲತೆ ಕಷ್ಟವಾದ್ದರಿಂದ; ಬರವಣಿಗೆ ಬತ್ತಿ ಹೋಗಿದೆ. ಇದನ್ನು ಗ್ರಹಿಸಿದ ಮೋದಿ ಗವುರಮೆಂಟು ಭೈರಪ್ಪನವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟಿತು. ಜ್ಞಾನಪೀಠ ಸಿಗಲಿಲ್ಲ ಎಂದು ಕೊರಗುತ್ತಾ ವೃದ್ಧಾಪ್ಯ ಸಮೀಪಿಸಿದ ಭೈರಪ್ಪ ಈ ಸಮಯದಲ್ಲಿ ಧನಕನಕದ ಪ್ರಶಸ್ತಿಯನ್ನೇ ಎಡವಿಬಿದ್ದಂತೆ ಪದ್ಮಭೂಷಣ ದೊರೆತಿದೆ. ಈ ಸುದ್ದಿ ಕೇಳಿ ಬವಳಿ ಬಂದಂತಾದ ಭೈರಪ್ಪ ಈ ಪ್ರಶಸ್ತಿ ಕೊಟ್ಟ ಮೋದಿ 2024ರಲ್ಲಿ ಗೆದ್ದು ಪ್ರಧಾನಿಯಾಗಲಿ ಮತ್ತೆ 2029ರಲ್ಲೂ ಗೆದ್ದು ಪ್ರಧಾನಿಯಾಗಲಿ, ದುರ್ದೈವದಿಂದ ನಾನು ಅಲ್ಲಿಯವರೆಗೂ ಇರಲಾಗುವುದಿಲ್ಲ, ಆದರೂ ಅದೇನೂ ಬಹಳ ದೂರದ ಸಮಯವಲ್ಲ, ಕೇವಲ 8 ವರ್ಷ ಎಂದಿಲ್ಲವಲ್ಲ. ಮೋದಿ ಪರ ಇಂತಹ ವಕಾಲತ್ತು ವಹಿಸಿದ ಭೈರಪ್ಪ ಯಾರಾದರೂ ತಪ್ಪು ತಿಳಿದಾರೆಂದು ನಾನು ಯಾವ ಪಕ್ಷದ ಪಕ್ಷಪಾತಿಯಲ್ಲ, ಮೋದಿ ಭಕ್ತ ಅಷ್ಟೇ; ಇಂತಹ ಪ್ರಧಾನಿ ಈವರೆಗೆ ಬಂದಿರಲಿಲ್ಲ ಎಂದು ತಮ್ಮ ಅಜ್ಞಾನವನ್ನ ಅನಾವರಣ ಮಾಡಿದರಲ್ಲಾ. ಅಜ್ಞಾನ ಏಕೆಂದರೆ ನೆಹರೂ ನಂತರ ಈ ದೇಶದ ಪ್ರಧಾನಿಯಾಗಿದ್ದ ಲಾಲ್‌ಬಹದ್ದೂರ್ ಶಾಸ್ತ್ರಿ ನಿಧನರಾದಾಗ ಶಾಸ್ತ್ರಿ ಕುಟುಂಬ ಬಡತನದಲ್ಲಿತ್ತು. ಅವರಿಗೆ ಏನಾದರೂ ಸಹಾಯ ಮಾಡಬೇಕೆಂಬ ಚರ್ಚೆ ಅಂದಿನ ಸಂಸತ್ತಿನಲ್ಲಿ ನಡೆದಿತ್ತು. ಇದು ಭೈರಪ್ಪನವರ ಮತಾಂಧ ಮೆದುಳಿಗೆ ಹೊಳೆಯದ ಸಂಗತಿಯಂತಲ್ಲಾ, ಥೂತ್ತೇರಿ.

*****

ಸಂತೆಶಿವರ ಎಂಬ ಹಳ್ಳಿಯಲ್ಲಿ ಒಕ್ಕಲಿಗರು ಮತ್ತು ಕುರುಬರ ಮನೆಗಳ ನಡುವೆ ಇದ್ದು ಅವರುಗಳ ಸಹಾಯದಿಂದ ಮೇಲೆ ಬಂದ ಭೈರಪ್ಪ ತನ್ನನ್ನು ಸಾಕಿ ಸಲಹಿದ ಈ ಜನರ ಬಗ್ಗೆ ಎಂದೂ ಮಾತನಾಡದೆ ಶ್ರಮಿಸಿದ್ದೆಲ್ಲಾ ತಮ್ಮ ಕೋಮಿನ ಬ್ರಾಹ್ಮಣರ ಉದ್ಧಾರಕ್ಕೆ ಮತ್ತು ಸಂಘ ಪರಿವಾರದ ಏಳ್ಗೆಗೆ. ಇನ್ನೊಂದು ಐತಿಹಾಸಿಕವಾದ ಸತ್ಯ ಯಾವುದೆಂದರೆ, ನಮ್ಮ ನೆಲದ ಯಾವ ಜಾತಿಗೇ ಆಗಲಿ ಭೈರಪ್ಪನವರ ಪರಿವಾರ ಎಂದೂ ಅಣ್ಣತಮ್ಮಂದಿರಾಗಿ ನಡೆದುಕೊಂಡಿಲ್ಲ, ಆ ಭಾವನೆಯೂ ಅವರಿಗೆ ಬರುವುದಿಲ್ಲ. ಹಾಗಾಗಿ ಸಂತೆಶಿವರದ ಜನಗಳೆಂದೂ ಭೈರಪ್ಪನವರಿಗೆ ಅಣ್ಣ ತಮ್ಮಂದಿರಾಗಿ ಗೋಚರವಾಗಲಿಲ್ಲ. ಬದಲಿಗೆ ಮೈಸೂರಲ್ಲಿ ಬೀಡು

ಭೈರಪ್ಪ

ಬಿಟ್ಟಿದ್ದ ಬ್ರಾಹ್ಮಣ ಸಮುದಾಯದವರಿಗೆ ಬಂಧುವಾದರು; ಅದ್ದರಿಂದ ದೈತ್ಯ ಬರಹಗಾರನಾದರೂ ಮಾನವತಾವಾದಿಯಾಗಲಿಲ್ಲ. ಇನ್ನು ಭೈರಪ್ಪನವರ ಬಾಯಲ್ಲಿ ಮೋದಿ ಜಪ ಆರಂಭವಾಗಿರುವಾಗಲೇ ಬಿಬಿಸಿ ಗುಜರಾತ್ ಗಲಭೆಗೆ ಸಂಬಂಧಿಸಿದ ಸಾಕ್ಷಚಿತ್ರ ಬಿಡುಗಡೆ ಮಾಡಿಬಿಟ್ಟಿದ್ದಾರಲ್ಲಾ. ಭೈರಪ್ಪನವರ ಉತ್ತರಕಾಂಡದ ಮಾತುಗಳನ್ನೇ ಜೋರು ದನಿಯಲ್ಲಿ ಮಾತನಾಡುತ್ತಿರುವ ಭಗವಾನ್ ಮತ್ತೆ ’ರಾಮ ದೇವರಲ್ಲ ನರಮನುಷ್ಯ’ ಇತ್ಯಾದಿ ಮಾತನಾಡಿ ಮಾಧ್ಯಮದ ಮೂರ್ಖರು ಮತ್ತು ಮತಾಂಧರಿಂದ ಉಗ್ರ ಟೀಕೆಗೆ ಒಳಗಾಗಿದ್ದಾರೆ. ಈ ಭಗವಾನ್ ತಮ್ಮ ಅಭಿಪ್ರಾಯ ಅದುಮಿಟ್ಟುಕೊಂಡು ಭೈರಪ್ಪ ಬರೆದ ಉತ್ತರಕಾಂಡ ಓದಲು ಹೇಳಿದರೆ ಎಷ್ಟು ಒಳ್ಳೆಯದಲ್ಲವೆ ಎಂಬುದು ಬುದ್ಧಿಜೀವಿಗಳ ಬುದ್ಧಿವಾದವಾಗಿದೆಯಲ್ಲಾ, ಥೂತ್ತೇರಿ.

*****

ಇತ್ತ ಬಿಜೆಪಿ ರಾಜಕಾರಣದ ಸಂಗತಿಗಳು ಶಾನೆ ದುಃಖಕರವಾಗಿವೆಯಲ್ಲಾ. ಆಸ್ತಿ ಮಾಡಲೆಂದೇ ಹೋರಾಟದ ರಾಜಕಾರಣ ಮಾಡುತ್ತಾ ಬಂದು, ಮಾರಿಕೊಂಡ ಮಾಧ್ಯಮದವರಿಂದ ರಾಜಾಹುಲಿ ಬಿರುದು ಪಡೆದ ಎಡೂರಪ್ಪನವರು ತಮ್ಮ ನಿಲುಗಡೆಯ ನಿಲ್ದಾಣವನ್ನು ಘೋಷಣೆ ಮಾಡಿದ್ದಾರೆ. ಎಡೂರಪ್ಪನನ್ನು ಇಳಿಸಲು ಸಾಕಷ್ಟು ಟೀಕೆ ಸಂಗ್ರಹ ಮಾಡಿಕೊಳ್ಳಲೆಂದೇ ನೇಮಿಸಿದ್ದ ಬಸವನಗೌಡ ಪಾಟೀಲರನ್ನು ಕರೆಸಿಕೊಂಡ ಹೈಕಮಾಂಡು, “ಅಪ್ನಾ ಎಡೂರಪ್ಪಾಕ ಟೀಕೆ ಬಂದ್ ಕರೊ ಬೈಯ್ಯಾ” ಎಂದು ಹೇಳಿ ಕಳಿಸಿರುವುದರಿಂದ ಯತ್ನಾಳ್ ಮುಂದೆ ಯಾರನ್ನು ಟೀಕಿಸಬೇಕೆಂದು ಚಿಂತಿಸುತ್ತಿರುವಾಗಲೇ, ಎಡೂರಪ್ಪ ನನಗೀಗ 80ವರ್ಷ, ಹಾಗೆಂದು ಮನೆಯಲ್ಲಿ ಕೂರಲಾಗುವುದಿಲ್ಲ, ಹಾಗಾಗಿ ಯಾವುದೇ ಸಭೆ ಸಮಾರಂಭ ಇರಲಿ ಅಲ್ಲಿಗೆ ಹೋಗಿ ಬೊಮ್ಮಾಯಿ ಜೊತೆ ನಿಂತುಕೊಳ್ಳುತ್ತೇನೆ ಎಂದಿದ್ದಾರಲ್ಲಾ. ಇದರಿಂದ ಒಳಗೊಳಗೇ ಮುಜುಗರಗೊಂಡಿರುವ ಬೊಮ್ಮಾಯಿ, ತಾನೆ ಮುಂದಾಳತ್ವ ವಹಿಸಲು ಚಿಂತಿಸುತ್ತಿದ್ದಾಗಲೇ, ಎಡೂರಪ್ಪ ಮುಂದಿನ ಚುನಾವಣೆಗೆ 140 ಸೀಟು ಗೆಲ್ಲಿಸುತ್ತೇನೆ ಎಂದುಬಿಟ್ಟಿದ್ದಾರಲ್ಲಾ. ಹಾಗೆ ನೋಡಿದರೆ ಮುಖ್ಯಮಂತ್ರಿಯೊಬ್ಬ ಆ ಪದವಿಯಿಂದ ಕೆಳಗಿಳಿದ ಮೇಲೆ ಹಾಲಿ ಮುಖ್ಯಮಂತ್ರಿ ಜೊತೆ ಕಾಣಿಸಿಕೊಂಡು ತಿರುಗುತ್ತಿರುವ ದಾಖಲೆ ಎಡೂರಪ್ಪನವರಿಗೆ ಮಾತ್ರ ಸೇರುವಂತದ್ದು. ಅಲ್ಲದೆ ಎಡೂರಪ್ಪನವರ ಜೋಳಿಗೆಯಲ್ಲಿ ಹಲವಾರು ಅಳಿಸಲಾಗದ ದಾಖಲೆಗಳಿವೆ; ಅವುಗಳನ್ನ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಆ ವಿಷಯದಲ್ಲವರು ಮಾಧ್ಯಮದವರು ಕೊಟ್ಟ ರಾಜಾಹುಲಿ ಬಿರುದಿಗೆ ಯೋಗ್ಯರಂತಲ್ಲಾ, ಥೂತ್ತೇರಿ.

****

ಇದನ್ನೂ ಓದಿ: ಎರಡು ದುಃಖದ ಸಂಗತಿ ಎದುರಾದವಲ್ಲಾ

ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ಪ್ರವೇಶ ಮಾಡಿದ ಬಿಜೆಪಿ ಎಂಬ ಪಾರ್ಟಿ ಪ್ರಜಾಪ್ರಭುತ್ವದ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯಲು ನಾಗಮಂಗಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದೆಯಲ್ಲಾ. ಬಿಜೆಪಿಯಿಂದ ಸ್ಫರ್ಧಿಸಲು ಬಂದಾತ ಫೈಟರ್ ರವಿ ಎಂಬ ರೌಡಿ ಪಟ್ಟದವನು. ಚುನಾವಣೆಗೆ ನಾಗಮಂಗಲದ ಮತದಾರರನ್ನು ಕೊಳ್ಳಲು ತಂದಿರುವ ಹಣ ಎಪ್ಪತ್ತು ಕೋಟಿ ಇದೆಯಂತಲ್ಲಾ. ಇದರಲ್ಲಿ ತಾರತಮ್ಯವಿಲ್ಲದೆ ತಲೆಗೆ ಐದು ಸಾವಿರದಂತೆ ಹಂಚಿದರೆ ಆ ಮೊತ್ತ ಸರಿಯಾಗುತ್ತದಂತೆ. ಇನ್ನ ಹಂಚಲು ಬಿಟ್ಟ ಉಸ್ತುವಾರಿ ಜನರಿಗೆ ಲಕ್ಷವಂತೆ. ಈ ನಡುವೆ ಈಗಾಗಲೇ ಕಷ್ಟ ಹೇಳಿಕೊಂಡ ಜನರ ಕೈಗೆ ಹಣ ಸೇರುತ್ತಿದೆ, ಜೊತೆಗೆ ಈತ ಏರ್ಪಡಿಸುವ ಸಭೆಗೆ ಹೋದರೆ ತಲಾ 200 ರೂ. ಮತ್ತು ಬಿರಿಯಾನಿ ಊಟ. ಈಗಾಗಲೇ ಇಂತಹ ಮಾಂಸದ ಪರಿಶೆ ನೋಡಿದ ಪಕ್ಷೇತರ ಅಭ್ಯರ್ಥಿ

ಶಿವರಾಮೇಗೌಡ

ಶಿವರಾಮೇಗೌಡ ಹಾಗೂ ಜನತಾದಳದ ಸುರೇಶ್‌ಗೌಡ ಮತ್ತು ಕಾಂಗ್ರೆಸ್ಸಿನ ಚಲುವರಾಯಸ್ವಾಮಿ ದಂಗುಬಡಿದುಹೋಗಿದ್ದಾರಲ್ಲಾ. ಈ ಫೈಟರ್ ರವಿಗೆ ಫೈಟ್ ಕೊಡಲು ಈಗಾಗಲೇ ತಯಾರಾಗಿರುವ ಶಿವರಾಮೇಗೌಡ ಕೊಪ್ಪ ಹೋಬಳಿ ಮತ್ತು ಬಂಡಿಗನವಿಲೆ ಹೋಬಳಿಯಲ್ಲಿ ಮೂರು ಕಾರ್ಯಕ್ರಮಗಳನ್ನು ಮಾಡಿ ಬಾಡೂಟದ ಮಟ್ಟಿಗೆ ಫೈಟ್ ಕೊಡುತ್ತಿರಬೇಕಾದರೆ, ಅತ್ತ ಜೆಡಿಎಸ್‌ನ ಸುರೇಶ್‌ಗೌಡ ಕುಮಾರಣ್ಣ ಮತ್ತು ದ್ಯಾವೇಗೌಡರ ಬರುವಿಕೆಗಾಗಿ ಕಾಯುತಿದ್ದಾರಂತಲ್ಲಾ. ಇತ್ತ ಚಲುವರಾಯಸ್ವಾಮಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಕರೆಸಲು ಸಿದ್ಧತೆ ನಡೆಸುತ್ತ ಇರಬೇಕಾದರೆ ಇವರೂ ಮಾಂಸದೂಟವನ್ನೇನಾದರೂ ಏರ್ಪಡಿಸಿದರೇ ಆ ಪ್ರಾಂತ್ಯದ ಆಡು, ಕುರಿ, ಎಮ್ಮೆ, ದನಕರುಗಳು ಕಾಣೆಯಾಗಿ ಎಲ್ಲಿ ನೋಡಿದರೂ ಬರೀ ಮನುಷ್ಯರೆ ಕಾಣುವ ಕಾಲ ಬಹಳ ದೂರವಿಲ್ಲ ಎನ್ನುವಂತಾಗಿದೆಯಲ್ಲಾ, ಥೂ ಥೂ ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...