Homeಕರ್ನಾಟಕಕಲ್ಯಾಣ ಕರ್ನಾಟಕ: ಹೆಸರು ಬದಲಿ ಮಾಡಿದ ಸರಕಾರವನ್ನೇ ಬದಲು ಮಾಡಿದ ಜನ

ಕಲ್ಯಾಣ ಕರ್ನಾಟಕ: ಹೆಸರು ಬದಲಿ ಮಾಡಿದ ಸರಕಾರವನ್ನೇ ಬದಲು ಮಾಡಿದ ಜನ

- Advertisement -
- Advertisement -

ಸೆಪ್ಟಂಬರ್ 2019ರಲ್ಲಿ ಕರ್ನಾಟಕ ಸರಕಾರ ಹೈದರಾಬಾದು ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿತು. ಆಗ ನಾನು ನನ್ನ ಸ್ನೇಹಿತರಲ್ಲಿ ಒಂದು ಸಂದೇಶ ಹಂಚಿಕೊಂಡಿದ್ದೆ- “ನಾಳೆ ಘನ ಸರಕಾರವು ತನ್ನೆಲ್ಲಾ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಮುಂತಾದವರನ್ನು ಈಶಾನ್ಯ ಭಾಗದ ಜಿಲ್ಲೆಗಳಿಗೆ ಕಳಿಸಲಿದೆ. ಅಲ್ಲಿನ ಎಲ್ಲಾ ಬಡವರನ್ನು ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿಸಲಿದ್ದಾರೆ. ಬಡವರೆಲ್ಲಾ ಸಾಲಾಗಿ ನಿಲ್ಲಲಿದ್ದಾರೆ. ಅವರ ಹೆಸರು, ವಿಳಾಸಗಳನ್ನು ಅಧಿಕಾರಿಗಳು ಬರೆದುಕೊಂಡು ದಾಖಲು ಮಾಡಲಿದ್ದಾರೆ. ಆ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಆ ಎಲ್ಲ ಬಡವರ ಹೆಸರುಗಳನ್ನು ಒಂದೊಂದಾಗಿ ಬದಲು ಮಾಡಿ ಎಲ್ಲರಿಗೂ ಲಕ್ಷ್ಮಿ ಪತಿ ಎಂದು ಹೊಸ ಹೆಸರು ಇಡಬೇಕು. ಈ ರೀತಿಯಿಂದ ಕಲ್ಯಾಣ ಕರ್ನಾಟಕದ ಉದ್ಘಾಟನೆ ಆಗಲಿದೆ” ಎಂದು. ಈ ರೀತಿ ಕರ್ನಾಟಕದ ಬಿಜೆಪಿ ಸರಕಾರ ಭಾರತದ ಅತಿ ಹಿಂದುಳಿದ ಭೂಪ್ರದೇಶದ ಕಲ್ಯಾಣ ಮಾಡಿಬಿಟ್ಟೆ ಎಂದು ತಿಳಿದುಕೊಂಡಿತು.

ಇದಕ್ಕೆ ಪ್ರತಿಕ್ರಿಯೆ ಭಿನ್ನವಾಗಿತ್ತು. ಬಹುತೇಕರು ಇದೊಂದು ‘ಗುಡ್ ಜೋಕ್’ ಅಂತ ನಕ್ಕರು. ಅಲ್ಲಿನ ನೆಲದ ಸಂಕಟ ಅರಿತವರು ನನ್ನೊಡನೆ ಮರುಗಿದರು. ಅಂದರೆ ಅಲ್ಲಿನ ಜನ ಮಾತ್ರ ನಗಲಿಲ್ಲ. ಅವರ ಪ್ರತಿಕ್ರಿಯೆ ರಚನಾತ್ಮಕವಾಗಿತ್ತು. ನಾಲ್ಕು ವರ್ಷದ ನಂತರ ಹೈದರಾಬಾದು ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿ ಮಾಡಿದ ಸರಕಾರವೆ ಬದಲಾಗಿಹೋಯಿತು.

ಈಶಾನ್ಯ ಕರ್ನಾಟಕದ ಇತಿಹಾಸದ ಭಾಗ ಆಗಿಹೋಗಿರುವ ನಿಜಾಮ ಸರಕಾರದ ಆಡಳಿತವನ್ನು ನೆನಪಿಸುವ ಹೆಸರು ಹೈದರಬಾದು ಕರ್ನಾಟಕ. ಅದನ್ನು ಅಳಿಸುವ ಪ್ರಯತ್ನ ಮಾಡಿದವರು ಕನಿಷ್ಟ ಪಕ್ಷ ನಿಜಾಮರಿಗಿಂತಲೂ ಒಳ್ಳೆಯ ಆಡಳಿತ ಕೊಡಬೇಕಾಗಿತ್ತು. ಅದನ್ನೂ ಕೊಡಲಿಲ್ಲ.

ಮಲ್ಲಿಕಾರ್ಜುನ್ ಖರ್ಗೆ

ಜಿಲ್ಲಾ ಹಾಗೂ ತಾಲೂಕು ಗಡಿ ಬದಲಾವಣೆಗಳು ಆಗಿದ್ದರಿಂದ 2018ರಲ್ಲಿ ಹೈದ್ರಾಬಾದು ಕರ್ನಾಟಕದಲ್ಲಿ ಇದ್ದ 40 ಸೀಟುಗಳು ಈಗ ಕಲ್ಯಾಣ ಕರ್ನಾಟಕದಲ್ಲಿ 41 ಆಗಿವೆ. ಜನರ ಮನಸ್ಸಿನಲ್ಲಿ ವಿವಿಧ ಪಕ್ಷಗಳ ಕಡೆ ಇದ್ದ ಒಲವೂ ಬದಲಾವಣೆ ಆಗಿದೆ. ಕೇವಲ ಐದು ವರ್ಷದ ಹಿಂದೆ 40ರಲ್ಲಿ 15 ಸೀಟು ಗೆದ್ದ ಆಳುವ ಪಕ್ಷ ಬಿಜೆಪಿ, 10ಕ್ಕೆ ಇಳಿಯಿತು. 21 ಸೀಟು ಗೆದ್ದಿದ್ದ ಕಾಂಗ್ರೆಸ್‌ನ ಬಲ 26ಕ್ಕೆ ಏರಿತು. ನಾಲ್ಕು ಸೀಟು ಗೆದ್ದಿದ್ದ ಜೆಡಿಎಸ್ ಒಂದೇ ಸೀಟು ಉಳಿಸಿಕೊಂಡಿತು. ಇಬ್ಬರು ಸ್ವತಂತ್ರರು ಗೆದ್ದರು.

2019ರಲ್ಲಿ ನಮ್ಮ ಕೆಲ ಪ್ರಜಾ ಪ್ರತಿನಿಧಿಗಳು ಪಕ್ಷ ಬದಲಾವಣೆ ಮಾಡಿದರು. ಅದು ಕೇವಲ ಪ್ರವಚನ-ಭಾಷಣ-ಸಭೆ-ಧ್ಯಾನಗಳಿಂದ ಆಗಲಿಲ್ಲ. ಅದಕ್ಕೆ ಒಂದು ಆಪರೇಷನ್ ಮಾಡಬೇಕಾಯಿತು. ಈ ಆಪರೇಷನ್ ಕಮಲವು ಯಾವುದೇ ಸ್ವಾರ್ಥಕ್ಕಾಗಿ ಅಲ್ಲದೆ, ಕೇವಲ ತಮ್ಮ ಮನ ಪರಿವರ್ತ ಯಿಂದ, ಸೈದ್ಧಾಂತಿಕ ಮರುಚಿಂತನೆಗಳಿಂದಾಗಿ ನಡೆಯಿತು ಎಂದು ಆ ಶಸ್ತ್ರ ಚಿಕಿತ್ಸೆಯಿಂದ ಗುಣವಾಗಿ ಹೊರಬಂದ ನಮ್ಮ ಪ್ರಜಾ ಹಿತರಕ್ಷಕರು ಹೇಳಿಕೊಂಡರು. ಆನಂತರ ಕಾಂಗ್ರೆಸ್ 18 ಸ್ಥಾನಕ್ಕೆ ಕುಸಿಯಿತು. ಬಿಜೆಪಿಯ ಸಂಖ್ಯಾಬಲ ಹೆಚ್ಚಿತು.

ಇದನ್ನೂ ಓದಿ: ನಾನು ಕಂಡಂತೆ ಸಿದ್ದರಾಮಯ್ಯ: ಲೇಖಕ ಕೆ. ಶ್ರೀನಾಥ್

ಈಗ ಸಾಕಷ್ಟು ಬದಲಾವಣೆ ಆಗಿದೆ. ಕಾಂಗ್ರೆಸ್‌ನ ಸಂಖ್ಯೆ 8ರಷ್ಟು ಹೆಚ್ಚಾಗಿದೆ. ಆ ಸೀಟುಗಳನ್ನು ಬಿಜೆಪಿ ಕಳೆದುಕೊಂಡಿದೆ. ಆದರೆ ಈ ಬದಲಾವಣೆ ಏಕರೂಪಿಯಾಗಿಲ್ಲ. ಬಳ್ಳಾರಿಯ ಎಲ್ಲಾ ಐದು ಸ್ಥಾನಗಳು ಕಾಂಗ್ರೆಸ್‌ಗೆ ಲಭಿಸಿದರೆ, ಬೀದರ್‌ನ ಆರು ಸ್ಥಾನಗಳಲ್ಲಿ ಕೇವಲ ಎರಡು ಕಾಂಗ್ರೆಸ್ ಹಾಗೂ ನಾಲ್ಕು ಬಿಜೆಪಿ ಗೆದ್ದುಕೊಂಡಿವೆ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆ ಕಲಬುರ್ಗಿಯಲ್ಲಿ 9ರಲ್ಲಿ 7ನ್ನು ಅವರ ಪಕ್ಷದ ಹುರಿಯಾಳುಗಳು ಗೆದ್ದರೆ, ಕೊಪ್ಪಳದಲ್ಲಿ ಮೂವರು ವಿಜಯಿಯಾಗಿದ್ದಾರೆ. ಹೊಸ ಜಿಲ್ಲೆ ವಿಜಯನಗರದಲ್ಲಿ ಎರಡರಲ್ಲಿ ಕಾಂಗ್ರೆಸ್ ಹುದ್ದರಿಗಳು ಗೆದ್ದರು. ಹಟ ಮಾಡಿ ಹೊಸ ಜಿಲ್ಲೆ ನಿರ್ಮಾಣ ಮಾಡಿದ ಆನಂದ್ ಸಿಂಗ್ ಅವರ ಜಾಗದಲ್ಲಿ ನಿಂತಿದ್ದ ಅವರ ಮಗ ಸಿದ್ಧಾರ್ಥನನ್ನು ಅಲ್ಲಿಯ ಜನ ಸೋಲಿಸಿದರು.

ಹಾಗೆ ಅಂತಹ ಎಲ್ಲ ಕಡೆಗಳ ಫಲಿತಾಂಶಗಳಿಗೆ ರಾಜ್ಯ ಅಥವಾ ಜಿಲ್ಲಾ ಮಟ್ಟದ ಕಾರಣಗಳೇ ಇರಬೇಕು ಅಂತ ಅಲ್ಲ; ಬೀದರ್ ಜಿಲ್ಲೆಯಲ್ಲಿ ಅತಿ ಸ್ಥಳೀಯ ಕಾರಣಗಳಿಂದಾಗಿ, ವಿಪರೀತ ಪರಿಣಾಮ ಬಂದಿದೆ. ಕಲ್ಯಾಣ ಕರ್ನಾಟಕದ ಎಲ್ಲ ಕಡೆ ಕಾಂಗ್ರೆಸ್ ಬಂದರೆ ಇಲ್ಲಿ ಮಾತ್ರ ಬಿಜೆಪಿ ಹೆಚ್ಚು ಸೀಟು ಗೆದ್ದಿದೆ. ರಾಜ್ಯದ ಟ್ರೆಂಡ್‌ಗೆ ಇದು ವಿರುದ್ಧವಾಗಿದೆ. ಇದು ಹೊಸದಲ್ಲ. 1999ರಲ್ಲಿಯೂ ಕೂಡ ಹೀಗೆಯೇ ಆಗಿತ್ತು. ಜಿಲ್ಲೆಗೆ ಒಂದು ಮಂತ್ರಿ ಮಾಡಲೇಬೇಕು ಎಂದುಕೊಂಡು ಬಸವರಾಜ ಪಾಟೀಲ್ ಹುಮ್ನಾಬಾದ್ ಅವರನ್ನು ಪರಿಷತ್ತಿನ ಸದಸ್ಯರನ್ನಾಗಿಸಿ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಲಾಯಿತು.

ಈಶ್ವರ ಸಿಂಗ್ ಠಾಕೂರ್

ಈಗಿನ ಬೀದರ ಫಲಿತಾಂಶಕ್ಕೂ ಅಲ್ಲಿನ ಸ್ಥಳೀಯ ವಿದ್ಯಮಾನಗಳೇ ಕಾರಣ. ಅಲ್ಲಿನ ಕೆಲವು ಬಿಜೆಪಿ ನಾಯಕರು ಕೆಲ ವಿಷಯಗಳ ಬಗ್ಗೆ ಪ್ರತಿಷ್ಟೆ ಬೆಳೆಸಿಕೊಂಡು, ಅವರ ಹಿಂಬಾಲಕರು ಒಗ್ಗೂಡಿ ಕೆಲಸ ಮಾಡದೆ ಇರುವ ಕಾರಣಕ್ಕಾಗಿ ಹಾಗೂ, ತ್ರಿಕೋನ ಸ್ಪರ್ಧೆಯ ಗದ್ದಲದಲ್ಲಿ ಒಬ್ಬರನ್ನು ಸೋಲಿಸಲು ಇನ್ನೊಬ್ಬರನ್ನು ಗೆಲ್ಲಿಸುವ ಆಟ ನಡೆದಿದ. ಅಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಬಜರಂಗ ದಳ ಕಾರ್ಯಕರ್ತ ಈಶ್ವರ ಸಿಂಗ್ ಠಾಕೂರ್ ಅವರು ತಮ್ಮನ್ನು ತಮ್ಮ ಪಕ್ಷದ ಕೆಲ ನಾಯಕರು ಸೋಲಿಸಿದರು ಎಂದು ಆರೋಪಿಸಿದ್ದಾರೆ. ಲೋಕಸಭಾ ಸದಸ್ಯ ಭಗವಂತ ಖೂಬಾ ಅವರು ಬಿಜೆಪಿಯನ್ನು ಏಕವ್ಯಕ್ತಿ ಸಂಸ್ಥೆಯಾಗಿ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ, ಅದರಿಂದ ಹಳೆಯ ಕಾರ್ಯಕರ್ತರು ದೂರ ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಈ ರೀತಿ ಗಾಳಿ ಬೀಸುತ್ತಿದ್ದಾಗ ನಮ್ಮ ಮಾಧ್ಯಮದವರು ತಲೆಗೊಂದು ತರತರ ವಿಚಾರ ಮಾಡಿದರು.

ಬುದ್ಧಿವಂತರ ಜಿಲ್ಲೆಯ ಮೂಲದವರಾದ ಅತಿ ಬುದ್ಧಿವಂತ ದೆಹಲಿ ವಾಸಿ ಪತ್ರಕರ್ತರೊಬ್ಬರು ನನಗೆ ಫೋನು ಮಾಡಿದ್ದರು: “ಬಿಜೆಪಿ- ಸಂಘ ಪರಿವಾರದವರ ಪ್ರಯೋಗ ಕರಾವಳಿಯಲ್ಲಿ ಯಶಸ್ವಿಯಾದಂತೆ ಹೈದರಬಾದು ಕರ್ನಾಟಕದಲ್ಲಿ ಆಗುತ್ತಿಲ್ಲವಲ್ಲಾ ಯಾಕೆ” ಎನ್ನುವುದು ಅವರ ಪ್ರಶ್ನೆ. “ಬಹುಶಃ ಕರಾವಳಿಯಲ್ಲಿ ಅವರ ಬಂಡವಾಳಕ್ಕೆ ತಕ್ಕ ಲಾಭ ಸಿಕ್ಕಷ್ಟು ಈಶಾನ್ಯ ಭಾಗದಲ್ಲಿ ಸಿಕ್ಕಿಲ್ಲ. ಅದಕ್ಕೆ ಅವರು ಅಲ್ಲಿ ಪ್ರಯತ್ನ ಕೈಬಿಟ್ಟಿದ್ದಾರೆ” ಎಂಬ ಅವರ ಸಿದ್ಧಾಂತವನ್ನೂ ಪ್ರತಿಪಾದಿಸಿದರು. ಅದಕ್ಕೆ ನನ್ನ ಪ್ರತಿಕ್ರಿಯೆ ಕೇಳಿದರು.

“ಅದು ಕೇವಲ ರಾಜಕಾರಣ ಇರಲಿಕ್ಕಿಲ್ಲ. ಅದಕ್ಕೆ ಐತಿಹಾಸಿಕ ಕಾರಣ ಇರಬಹುದು. ಕೇವಲ ರಾಜಕೀಯ ಪಕ್ಷ ಅಥವಾ ಸಂಘಟನೆಯ ಪ್ರಯತ್ನವಷ್ಟೆ ಅದಕ್ಕೆ ಕಾರಣ ಅಲ್ಲ ಎಂದು ನಾನು ಹೇಳಿದೆ. “ಈಶಾನ್ಯ ಭಾಗದ ಸಾಂಸ್ಕೃತಿಕ ಪರಂಪರೆ ಅದಕ್ಕೆ ಮುಖ್ಯ ಕಾರಣ. ಅಲ್ಲಿನ ಸೂಫಿ-ಶರಣ ಚಳವಳಿಗಳು ಹಾಗೂ ಎಲ್ಲರಿಗೂ ಬಾಗಿಲು ತೆರೆಯುವ ದರ್ಗಾ ಹಾಗೂ ಮಠಗಳ ಸಂಸ್ಕೃತಿ ಸಹ ಕಾರಣ” ಎಂದು ಸೇರಿಸಿದೆ. “ಅದನ್ನೆಲ್ಲ ನಾನು ನೋಡಿಯೇ ಬಂದಿದ್ದೇನೆ. ಆದೇನೂ ಕಾರಣ ಇರಲಿಕ್ಕಿಲ್ಲ ಎಂದು ಅವರು ತಮ್ಮದೇ ವಾದ ಮಂಡಿಸಿದರು. ರಾಜ್ಯದ ವಿವಿಧ ಭಾಗದ ವಿವಿಧ ಬದಲಾವಣೆಗಳಿಗೆ ಪಕ್ಷ ರಾಜಕೀಯವೆ ಕಾರಣ ಎನ್ನುವ ಅರ್ಥ ಬರುವ ದೊಡ್ಡ ಲೇಖನವೊಂದನ್ನು ಅವರು ದೊಡ್ಡ ಪತ್ರಿಕೆಯೊಂದರಲ್ಲಿ ಬರೆದರು.

‘ಹೇಗಿದೆ?’ ಅಂತ ಆಮೇಲೆ ಕೇಳಿದರು. ‘ಒಳ್ಳೆ ದೂರದರ್ಶನ ವರದಿ ಇದ್ದ ಹಾಗೆ ಇದೆ’ ಎಂದೆ. ಅವರಿಗೆ ಜೋಕು ಅರ್ಥ ಆಗಲಿಲ್ಲ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....