Homeಮುಖಪುಟಲಡಕ್‍ಗೆ ಹೋಗಲು ಅಧಿಕಾರಿಗಳು ಹೆದರೋದ್ಯಾಕೆ ಗೊತ್ತೇ?

ಲಡಕ್‍ಗೆ ಹೋಗಲು ಅಧಿಕಾರಿಗಳು ಹೆದರೋದ್ಯಾಕೆ ಗೊತ್ತೇ?

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರ ಇಬ್ಭಾಗವಾಗಿದೆ. ಒಂದು ಜಮ್ಮುಕಾಶ್ಮೀರ ಮತ್ತೊಂದು ಲಡಕ್.ಇವೆರೆಡು ಈಗ ಕೇಂದ್ರಾಡಳಿತಕ್ಕೆ ಒಳಪಟ್ಟ ಪ್ರದೇಶಗಳು. ಜಮ್ಮುಕಾಶ್ಮೀರದಲ್ಲಿ ವಿಧಾನಸಭೆ ಇದ್ದರೆ, ಲಡಕ್‍ನಲ್ಲಿ ಇಲ್ಲ. ಇಲ್ಲಿಗೆ ಇಬ್ಬರು ಲೆಫ್ಟಿನೆಂಟ್ ಗೌರ್ನರ್ ಗಳು ನೇಮಕ ಆಗಬೇಕು. ಆದರೆ ಇದುವರೆಗೆ ಆ ಪ್ರಕ್ರಿಯೆ ನಡೆದಿಲ್ಲ. ಕಣಿವೆ ರಾಜ್ಯ ಎರಡು ಭಾಗವಾದ ಮೇಲೆ ಗಡಿಗಳನ್ನು ಗುರುತಿಸಿದೆ. ಲಡಕ್‍ನಲ್ಲಿ ಎರಡು ಜಿಲ್ಲೆಗಳು ಇದ್ದರೆ, ಜಮ್ಮುಕಾಶ್ಮೀರದಲ್ಲಿ 20 ಜಿಲ್ಲೆಗಳು ಉಳಿದಿವೆ. ವಿಂಗಡಣೆಯೇನೋ ಆಯಿತು. ಆದರೆ ನೌಕರರ ನಿಯೋಜನೆ ಆಗಬೇಕಲ್ಲವೇ? ಹೊಸ ನೇಮಕಾತಿಯೂ ನಡೆಯಬೇಕಲ್ಲವೇ? ಇದು ಸರ್ಕಾರಕ್ಕೆ ತಲೆನೋವು ಸೃಷ್ಟಿಸಿದೆ.

ಜಮ್ಮು ವಿಭಾಗದಲ್ಲಿ ಹತ್ತು ಜಿಲ್ಲೆಗಳು ಮತ್ತು ಕಾಶ್ಮೀರ ವಿಭಾಗದಲ್ಲಿ ಹತ್ತು ಜಿಲ್ಲೆಗಳು ಬರುತ್ತವೆ. ಜಮ್ಮು ಉಪವಿಭಾಗ 26,293 ಚದರ ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇಲ್ಲಿ 53,50,811 ಮಂದಿ ಜನರು ವಾಸವಿದ್ದಾರೆ. ಅಂತೆಯೇ ಕಾಶ್ಮೀರ 15,948 ಚದರ ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಈ ವಿಭಾಗದಲ್ಲಿ 69,07,623 ಜನ ವಾಸಿಸುತ್ತಿದ್ದಾರೆ ಎಂಬ ಅಂಕಿ ಅಂಶಗಳು 2011 ಜನಗಣತಿಯಿಂದ ತಿಳಿಯುತ್ತದೆ. ಅಂದರೆ ಜಮ್ಮುಕಾಶ್ಮೀರ ಎರಡು ವಿಭಾಗಗಳಿಂದ ಸೇರಿದರೆ 1,22,58,434 ಜನ ನೆಲೆಸಿರುವ ಮಾಹಿತಿ ಲಭ್ಯವಾಗುತ್ತದೆ.

ಜಮ್ಮುಕಾಶ್ಮೀರದಲ್ಲಿ ಕೃಷಿ ಯೋಗ್ಯ ಭೂಮಿ ಇದ್ದು ಸೇಬು, ಕೇಸರಿ ಬೆಳೆಗೆ ಪ್ರಸಿದ್ದಿ ಪಡೆದಿದೆ. ಲಕ್ಷಾಂತರ ಮಂದಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಉತ್ತಮ ರಸ್ತೆಗಳು, ವಾಸ ಯೋಗ್ಯ ಮನೆಗಳು, ಹೋಟೆಲ್‍ಗಳು, ಸುಂದರವಾದ ಮರಗಿಡ, ಶುದ್ಧ ಕುಡಿಯುವ ನೀರು ಹೀಗೆ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ. ಐಶಾರಾಮಿ ರೆಸ್ಟೋರೆಂಟ್‍ಗಳಿಗೆ ಕೊರತೆ ಇಲ್ಲ. ಹೀಗಾಗಿ ಅಧಿಕಾರಿಗಳು ಇಲ್ಲಿರಲು ಇಷ್ಟಪಡುತ್ತಾರೆ.

ಲಡಕ್‍ನಲ್ಲಿ ಲೇಹ್ ಮತ್ತು ಕಾರ್ಗಿಲ್ ಎರಡು ಜಿಲ್ಲೆಗಳು ಬರುತ್ತವೆ. ಇದು ಶಿಖರ ಪ್ರದೇಶ. ಮರುಭೂಮಿ ಬಿಟ್ಟರೆ ಬೇರೆ ಏನನ್ನು ನೋಡಲು ಸಾಧ್ಯವಿಲ್ಲ. ಉತ್ತಮ ರಸ್ತೆ ಇಲ್ಲ. ಕಡಿದಾದ ದಾರಿಗಳು, ಸದಾ ಹಿಮ ಬೀಳುವ ಸ್ಥಳ. ಕುಡಿಯುವ ನೀರು ಸಿಗುವುದು ಕಷ್ಟ. ಮಂಜುಗಡ್ಡೆ ಕರಗಿಸಿ ನೀರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ವರ್ಷಪೂರ್ತಿ ಹಿಮ ಬೀಳುತ್ತಲೇ ಇರುತ್ತದೆ. ವಾಸ ಯೋಗ್ಯ ಮನೆಗಳ ಕೊರತೆ ಇದೆ. ಮರಗಿಡಗಳಿಲ್ಲದ ಪ್ರದೇಶ ಇದಾಗಿದೆ. ಏಪ್ರಿಲ್-ಜುಲೈ ತಿಂಗಳವರೆಗೆ ವ್ಯವಸಾಯ ಮಾಡಲು ಆಗುವುದೇ ಇಲ್ಲ. ಲಡಕ್ 59,146 ಚದರ ಕಿಲೋ ಮೀಟರ್ ವ್ಯಾಪ್ತಿ ಹೊಂದಿದ್ದು 2,90,000 ಜನ ಇಲ್ಲಿ ವಾಸಿಸುತ್ತಾರೆ. ಕಾರ್ಗಿಲ್ ಮುಸ್ಲಿಂ ಬಾಹುಳ್ಯ ಪ್ರದೇಶವಾಗಿದ್ದು 1,43,388 ಜನರಿದ್ದರೆ, ಲಡಕ್ ಬೌದ್ದರ ಪ್ರಾಬಲ್ಯವಿರುವ ಪ್ರದೇಶ. ಇಲ್ಲಿ ಬೌದ್ಧರ ಸಂಖ್ಯೆ 1,47,107 ಇದೆ. ಲಡಕ್‍ನಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ಹವಾಮಾನವಿರುತ್ತದೆ. ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು.

ಹೌದು, ಇದೇ ಕಾರಣಕ್ಕಾಗಿಯೇ ಜಮ್ಮುಕಾಶ್ಮೀರ ಬಿಟ್ಟು ಹೋಗಲು ಯಾವ ಅಧಿಕಾರಿಯೂ ಇಚ್ಚಿಸುತ್ತಿಲ್ಲ. ಇಲ್ಲಿನ ಹವಾಗುಣ, ಸೌಲಭ್ಯಗಳು, ರಸ್ತೆಗಳು, ಹೋಟೆಲ್‍ಗಳು, ಅಂಗಡಿಮುಂಗಟ್ಟುಗಳು, ವ್ಯವಸಾಯಯೋಗ್ಯ ಭೂಮಿ ಪ್ರಮುಖ ಕಾರಣ. ಜಮ್ಮುಕಾಶ್ಮೀರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನೌಕರರಿದ್ದಾರೆ. ಇವರ ಪೈಕಿ 80 ಸಾವಿರ ಮಂದಿ ನೌಕರರು ಸ್ವತಂತ್ರರಾಗಿ ಮತ್ತು ಅರೆ ಸ್ವತಂತ್ರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತವೆ. ಸರ್ಕಾರ ಈಗ 350 ಮಂದಿ ಪೊಲೀಸ್ ಅಧಿಕಾರಿಗಳನ್ನು ಲಡಕ್‍ಗೆ ನಿಯೋಜನೆ ಮಾಡಿದೆ. ಅವರ್ಯಾರೂ ಅಲ್ಲಿಗೆ ಹೋಗಲು ಸುತಾರಾಂ ಇಷ್ಟಪಡುತ್ತಿಲ್ಲ.

ಕೆಲವು ನೌಕರರು ಲಡಕ್ ತಮ್ಮ ಸ್ವಂತ ಸ್ಥಳವಾಗಿದ್ದರೂ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಲಡಕ್‍ಗೆ ನಿಯೋಜನೆ ಗೊಂಡಿರುವ ಅಧಿಕಾರಿಗಳು ಮೌನ ವಹಿಸಿದ್ದಾರೆ. ಬಹುತೇಕ ಅಧಿಕಾರಿಗಳು ಲಡಕ್ ಅನ್ನು ಆಯ್ಕೆ ಮಾಡಿಕೊಳ್ಳಲು ತಣ್ಣಗಿನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದರಿಂದ ಯಾವ ಕ್ರಮ ಕೈಗೊಳ್ಳಬೇಕು ಎಂಬ ಪ್ರಶ್ನೆ ಸರ್ಕಾರಕ್ಕೆ ಎದುರಾಗಿದೆ. ಕೆಲವು ನೌಕರರು ಲಡಕ್ ಆಯ್ಕೆಗೆ ಸರ್ಕಾರ ಸೂಚಿಸಿದರೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಪ್ರವಾಸಿಗರು ಲಡಕ್ ಕುರಿತು ಹೇಳುವ ಮಾತುಗಳು ಕೂಡ ಇಲ್ಲಿ ಗಮನಾರ್ಹ. ಲಡಕ್‍ನಲ್ಲಿ ಆಕ್ಸಿಜನ್ ಕಡಿಮೆ. ಒಣಭೂಮಿ ಮರಗಳಿಲ್ಲ. ದೈಹಿಕ ದೌರ್ಬಲ್ಯ ಇರುವವರು ಇಲ್ಲಿಗೆ ಭೇಟಿ ನೀಡುವುದೇ ಸರಿಯಲ್ಲ. ದೆಹಲಿಯಲ್ಲಿ ಮೂರು ಅಂತಸ್ತಿನ ಮಹಡಿ ಹತ್ತಿದಾಗ ಆಗುವಷ್ಟು ಸುಸ್ತು ಒಂದು ಮಹಿಡಿಯನ್ನು ಹತ್ತಿದಾಗ ಆಗುತ್ತದೆ. ಸಾಹಸ ಚಟುವಟಿಕೆ, ಚಾರಣ ನಡೆಸಲು ಪ್ರಶಸ್ತ ಸ್ಥಳ ಯುವಕರು ಇಲ್ಲಿ ಸಾಹಸ ಕಾರ್ಯಗಳನ್ನು ಕೈಗೊಳ್ಳಬಹುದು. ಲಡಕ್‍ನಿಂದ ಪ್ರತಿವರ್ಷ ಶೇಕಡ 45ರಷ್ಟು ಸ್ಥಳೀಯರು ದೆಹಲಿ ಮತ್ತು ಜಮ್ಮು ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಪ್ರತಿ ವರ್ಷ 100 ಜನ ವೃದ್ಧರಲ್ಲಿ 10 ಮಂದಿ ಸಾವನ್ನಪ್ಪುತ್ತಾರೆ. ಹೀಗೆ ಹಲವು ವಿಷಯಗಳ ಬಗ್ಗೆ ಅನುಭವದ ಮಾತುಗಳನ್ನು ದಾಖಲಿಸಿದ್ದಾರೆ.

ಲಡಕ್ ಪ್ರದೇಶದಲ್ಲಿ ಪದೇಪದೇ ಪ್ರವಾಹ ಎದುರಾಗುತ್ತದೆ. ಭೂಕುಸಿತ ಉಂಟಾಗುತ್ತದೆ. ಹಲವು ಮಂದಿ ಸಾವನ್ನಪ್ಪಿರುವ ಘಟನೆಗಳು ಕಣ್ಣಮುಂದಿವೆ. ಇಷ್ಟೆಲ್ಲಾ ಅನಾನುಕೂಲಗಳನ್ನು ಇಟ್ಟುಕೊಂಡು ಅಧಿಕಾರಿಗಳು ಲಡಕ್ ಹೋಗುವುದಾದರೂ ಹೇಗೆ? ಸರ್ಕಾರ ಸೂಕ್ತ ಸೌಲಭ್ಯ ಕಲ್ಪಿಸಿದರೆ ಅಧಿಕಾರಿಗಳು ಅಲ್ಲಿಗೆ ಹೋಗಿ ನಿಷ್ಟೆಯಿಂದ ಕೆಲಸ ಮಾಡಲು ಸಾಧ್ಯ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...