Homeಅಂಕಣಗಳುದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

- Advertisement -
- Advertisement -

ಈ ಸಂಚಿಕೆಯಲ್ಲಿ ಡಾ.ಕಫೀಲ್‌ ಖಾನ್‌ರವರ ಸಂದರ್ಶನವಿದೆ. ಇವರೊಂದು ಸೋಜಿಗ. ಜೆಎನ್‌ಯು ಕಾಣೆಯಾದ ವಿದ್ಯಾರ್ಥಿ ನಜೀಬ್‌ನ ತಾಯಿಯಂತೆ. ಇವರು ಕೆಲಕಾಲದ ಹಿಂದೆ ʼಸುತ್ತಲಿನ ನಾಲ್ಕು ಜನರಿಗೆ ಒಳ್ಳೆಯದುʼ ಮಾಡಿಕೊಂಡು ತಮ್ಮ ಪಾಡಿಗೆ ಇದ್ದವರು. ಆದರೆ ತಮ್ಮ ಬದುಕಿನಲ್ಲಾದ ʼಬೇರೆಯವರಾದರೆ ತತ್ತರಿಸಿ ಮೂಲೆಯಲ್ಲಿ ಕೂತುಬಿಡುವʼ ಭಯಾನಕ ಘಟನೆಗಳ ನಂತರ ಗಟ್ಟಿಯಾದವರು. ಕಫೀಲ್‌ ಖಾನ್‌ ಗೋರಖಪುರದ ತಾನು ಕೆಲಸ ಮಾಡುತ್ತಿದ್ದ ಬಿಆರ್‌ಡಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಮಕ್ಕಳ ಸರಣಿ ಸಾವುಗಳಾಗುತ್ತಿದ್ದಾಗ ಸ್ವಂತ ಖರ್ಚಿನಿಂದ ನೆರವಾಗಿದ್ದರು. ಆಕ್ಸಿಜನ್‌ ಕೊರತೆಗೆ ಕಾರಣವಾಗಿದ್ದ ಸರ್ಕಾರವು, ಅಂತಹ ವ್ಯಕ್ತಿಯನ್ನು ಅಮಾನತು ಮಾಡಿತು, ಬಂಧಿಸಿತು.

ಬಂಧನದ ನಂತರ ಹೊರಬಂದ ವ್ಯಕ್ತಿ ಮತ್ತಷ್ಟು ಜನರ ಸೇವೆಯಲ್ಲಿ ತೊಡಗಿದರು. ಶಾಂತಿ ಸಾರುವ ಮಾತುಗಳನ್ನಾಡುತ್ತಾ ಹೋದವರನ್ನು, ಗಲಭೆಗೆ ಪ್ರಚೋದನೆ ನೀಡಿದರು ಎಂದು ಮತ್ತೆ ಬಂಧಿಸಲಾಯಿತು. ಬಂಧನದಿಂದ ಮತ್ತೆ ಹೊರಬಂದ ಮೇಲೆ ʼನನಗೆ ದೇಶದ ಜನರ ಸೇವೆ ಮಾಡಲು ಅವಕಾಶ ಕೊಡಿʼ ಎಂದು ಕೇಳಿದರು. ಇಡೀ ವ್ಯವಸ್ಥೆಯ ಮೇಲೆ, ದೇಶದ ಜನರ ಮೇಲೆ ಸಿಟ್ಟು ಮಾಡಿಕೊಂಡು ʼಎಲ್ಲಾ ಹಾಳಾಗಲಿʼ ಎನ್ನಬೇಕು, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ವಾತಾವರಣವಿರುವೆಡೆ ಈ ಜೀವ ಪ್ರೀತಿ ಹೇಗೆ ಸಾಧ್ಯವಾಗಿದೆ?

ಡಾ.ಕಫೀಲ್ ಖಾನ್

ನಿನ್ನೆ ರಾತ್ರಿ ಹುಬ್ಬಳ್ಳಿಯಲ್ಲಿ ಒಬ್ಬರ ಭೇಟಿಯಾಯಿತು. ಮೂರು ಮಹಾನಗರಗಳಲ್ಲಿ ದೊಡ್ಡ ಹೋಟೆಲುಗಳ ಒಡೆಯರಾದ ಅಶ್ರಫ್‌ ಅಲಿಯವರು ಭಾರೀ ದೊಡ್ಡ ಕುಳ. ಅವರು ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಗೆ ಸೇರಲಾಗದ ಜನರಿಗೆ ಸರ್ಕಾರೀ ಆಸ್ಪತ್ರೆಯಲ್ಲಿ ದಾಖಲಿಸಲು ಒದ್ದಾಡುತ್ತಿದ್ದರು. ಆಕ್ಸಿಜನ್‌ ಇರುವ ಬೆಡ್‌ ಇಲ್ಲ ಎಂದು ವೈದ್ಯರು ಹೇಳಿದಾಗ, ತಾನೇ ವಾರ್ಡ್‌ ವಾರ್ಡ್‌ ಸುತ್ತಾಡಿ, ಅಲ್ಲೊಂದು ಬೆಡ್‌ ಹುಡುಕಿ ರೋಗಿಯನ್ನು ದಾಖಲಿಸಿ ನಂತರ ನಮ್ಮನ್ನು ನೋಡಲು ಬಂದರು. ಹೋಟೆಲ್‌ಗಳನ್ನು ಕೊರೊನಾ ಐಸೋಲೇಷನ್‌ ವಾರ್ಡುಗಳಾಗಿ ಮಾಡಿ ದುಡ್ಡು ಮಾಡುವ ಸಂದರ್ಭ ಬರುವ ಮುಂಚೆಯೇ ತಮ್ಮ ಹೋಟೆಲ್‌ಅನ್ನು ಉಚಿತವಾಗಿ ಅದಕ್ಕಾಗಿ ಬಿಟ್ಟುಕೊಟ್ಟಿದ್ದರು. ಇದೆಲ್ಲಾ ಮಾಡಲು ಪ್ರೇರಣೆ ಏನು?

ಕೊರೊನಾದಿಂದ ಗುಣಮುಖನಾಗಿ ಬಂದ ನಾನು ಪ್ಲಾಸ್ಮಾ ಕೊಡಬಹುದು. ಆದರೆ, ಸ್ವಲ್ಪ ಸಮಯವೂ ಇಲ್ಲದಂತಹ ಸುತ್ತಾಟ ಮತ್ತು ಪ್ಲಾಸ್ಮಾ ಥೆರಪಿ ಬಗ್ಗೆ ವಿಶ್ವಾಸ ಇಲ್ಲದಿರುವ ಕಾರಣದಿಂದ ಅಷ್ಟು ಗಮನ ಹರಿಸಲಿಲ್ಲ. ಆದರೆ, ಯಾವುದೋ ಆಸ್ಪತ್ರೆಯಲ್ಲಿ ಯಾರೋ ಬಡ ರೋಗಿಗೆ ಪ್ಲಾಸ್ಮಾ ಹೊಂದಿಸಲು ಪ್ರಯತ್ನಿಸುತ್ತಿರುವ ಮರ್ಸಿ ಮಿಷನ್‌ (ಸ್ವಯಂಸೇವಕ ಮುಸ್ಲಿಂ ಯುವಕರ ಗುಂಪು) ವಾಲಂಟಿಯರ್‌ಗಳು ನಾನು ಪ್ಲಾಸ್ಮಾ ಕೊಡುವತನಕ ಬಿಡುವಂತೆ ಕಾಣುತ್ತಿಲ್ಲ. ಆ ಕಡೆ ಇರುವ ರೋಗಿಯನ್ನು ಅವರು ಧರ್ಮ ನೋಡಿ ನೆರವು ಕೊಡುತ್ತಿಲ್ಲ ಎಂಬುದು ಮಾತ್ರ ಖಚಿತ. ಬೆಂಗಳೂರಿನಲ್ಲಿ ಕ್ರಿಶ್ಚಿಯನ್‌, ಹಿಂದೂ ಜನರ ಅಂತ್ಯ ಸಂಸ್ಕಾರವನ್ನೂ, ಸತ್ತವರ ನಂಬಿಕೆಗನುಗುಣವಾಗಿ ಮಾಡಿದವರು. ಇವರನ್ನು ಕೈ ಹಿಡಿದು ನಡೆಸುತ್ತಿರುವುದು ಏನು?

ಅವರ ಪ್ರಕಾರ ಅವರು ಧರ್ಮದ ಕಾರ್ಯ ಮಾಡುತ್ತಿದ್ದಾರೆ. ಈ ದೇಶದ ಸಹಮನುಷ್ಯರಿಗೆ ಸಹಾಯ ಮಾಡುವುದು, ಸಂವಿಧಾನದ ತತ್ವಗಳಿಗನುಗುಣವಾಗಿ ನಡೆದುಕೊಳ್ಳುವುದು ಎಲ್ಲವೂ ಧರ್ಮದ ಭಾಗವೇ. ಇದೇ ದೇಶದಲ್ಲಿ, ಅವರದ್ದೇ ದೇಶವಾದರೂ ಅವರನ್ನು ಸತತವಾಗಿ ಅನ್ಯರನ್ನಾಗಿಸುತ್ತಿರುವ ದೇಶದಲ್ಲಿ ಅವರ ನಂಬಿಕೆ ಅವರನ್ನು ಮನುಷ್ಯರನ್ನಾಗಿ ಉಳಿಸಿದೆ.

ಹೌದು ಬಾಂಬ್‌ ಕಟ್ಟಿಕೊಂಡು ಸ್ಫೋಟಿಸಿ ಅಮಾಯಕರನ್ನು ಕೊಂದವರೂ ಈ ಧರ್ಮದಲ್ಲಿದ್ದರು. ಆದರೆ ಅವರ ಸಂಖ್ಯೆ ಬಹಳ ಬಹಳ ಕಡಿಮೆ. ಈ ದೇಶದ ಶೇ.1ರಷ್ಟು ಜನ ಮುಸ್ಲಿಮರು ಹಾಗೆ ಮಾಡಿದ್ದರೂ, ದೇಶವೇ ಉಳಿಯುತ್ತಿರಲಿಲ್ಲ. ಸಾಯಲು ಸಿದ್ಧರಾದವರಿಗೆ ಯಾವ ಭಯ?

ಆದರೆ ಅದೇ ಧರ್ಮ ಅವರಲ್ಲಿ ಮನುಷ್ಯಪ್ರೀತಿಯನ್ನು ಅರಳಿಸಿದ್ದಿದೆಯಲ್ಲಾ ಅದಕ್ಕೇನು ಹೇಳುವುದು? ಈ ದೇಶದ ಮುಸ್ಲಿಮರನ್ನು ನೋಡಲು ಮುಸ್ಲಿಮೇತರರಿಗೆ ಇನ್ನೊಂದು ಕಣ್ಣೂ ಬೇಕಿದೆ. ಇಲ್ಲವಾದರೆ ಧರ್ಮವೂ ಉಳಿಯುವುದಿಲ್ಲ, ದೇಶವೂ.


ಇದನ್ನೂ ಓದಿ: ಸೇನಾ V/s ಕಂಗನಾ ವಿವಾದ: ದೂರ ಉಳಿಯಲು ಕಾಂಗ್ರೆಸ್ ಯತ್ನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...