Homeಎಚ್.ಎಸ್.ದೊರೆಸ್ವಾಮಿಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

ರಾಷ್ಟ್ರೀಯ ಕಾಂಗ್ರೆಸ್ ಪಟ್ಟಾಗಿ ದೇಶದ ಸ್ವಾತಂತ್ರ್ಯಕ್ಕೆ 100 ವರ್ಷಕ್ಕೂ ಮೇಲ್ಪಟ್ಟು ಹೋರಾಡಿತು. ಅಂಬೇಡ್ಕರರೂ ಅವಿಚ್ಛಿನ್ನವಾಗಿ ತಮ್ಮ ಜೀವಮಾನಪರ್ಯಂತ ಹಿಂದುಳಿದವರ, ಅಸ್ಪೃಶ್ಯರ, ಅರಣ್ಯವಾಸಿಗಳ ಸಂಘಟನೆ ಕೆಲಸದಲ್ಲಿ ತೊಡಗಿದ್ದರು.

- Advertisement -
- Advertisement -

ಕೆಲವು ಮೌಲ್ಯಗಳಿಗಾಗಿ ಅಂಬೇಡ್ಕರ್, ಮಹಾತ್ಮಾ ಗಾಂಧಿ ಮುಂತಾದ ಮಹಾನಾಯಕರನ್ನು ದೇಶದ ಜನ ಗೌರವಿಸುತ್ತಾರೆ. ಆದರೆ ನಮ್ಮ ಆಧುನಿಕ ಲೇಖಕರು, ಅಂಬೇಡ್ಕರ್ ಮತ್ತು ಗಾಂಧೀಜಿ ಇಬ್ಬರೂ ವಿರೋಧಿಗಳು ಎಂಬಂತೆ ಬಿಂಬಿಸಲು ಪಣತೊಟ್ಟಿದ್ದಾರೆ. ತಮ್ಮ ಜೀವಿತ ಕಾಲದಲ್ಲಿ ಈ ಮಹನೀಯರು ತುಂಬ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಗೌರವ ಸಲ್ಲಿಸಬೇಕೆ ಹೊರತು ಅವರನ್ನು ಕಡು ವಿರೋಧಿಗಳು ಎಂದು ಬಿಂಬಿಸಿ ಜನರ ಮನಸ್ಸಿನಲ್ಲಿ ವಿಷ ತುಂಬುವುದು ಶ್ರೇಯಸ್ಕರವಲ್ಲ. ಆ ಮಹನೀಯರಲ್ಲಿದ್ದ ವೈಚಾರಿಕ ವ್ಯತ್ಯಾಸವನ್ನು ನಾವು ಪರಿಗಣಿಸುವುದು ಸರಿ ಆದರೆ ಅವರನ್ನು ಕಡುವೈರಿಗಳು ಎಂಬಂತೆ ಚಿತ್ರಿಸುವುದು ಇತಿಹಾಸಕ್ಕೆ ಅಪಮಾನ ಮಾಡಿದಂತೆ.

ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಿದವರು ಆಲನ್ ಆಕ್ಟೇವಿಯನ್ ಹ್ಯೂಮ್ ಎಂಬ ಇಂಗ್ಲಿಷರು. ಅವರು ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು. ನಾವು ಬ್ರಿಟನ್‍ನಲ್ಲಿ ಇಷ್ಟೊಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ, ಭಾರತೀಯರಿಗೂ ಆ ಸ್ವಾತಂತ್ರ್ಯ ಸಿಗಬೇಕು ಎನ್ನುವ ದೃಷ್ಟಿಯಿಂದ ರಾಷ್ಟ್ರೀಯ ಕಾಂಗ್ರೆಸ್ಸನ್ನು ಅವರು ಸ್ಥಾಪಿಸಿದರು. ಅಂದಿನ ಭಾರತದ ಮಹಾದಿಗ್ಗಜರಾದ ದಾದಾಭಾಯ್ ನವರೋಜಿ, ಫಿರೊಜ್‍ಷಾ ಮೆಹ್ತಾ ಮುಂತಾದವರು ರಾಷ್ಟ್ರೀಯ ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಅವರೆಲ್ಲ ಕ್ಲಾಸ್ ಲೀಡರ್‌ಗಳು. ಈ ಭಾರತೀಯ ದಿಗ್ಗಜಗಳ ಬಗೆಗೆ ಬ್ರಿಟಿಷ್ ಆಡಳಿತಗಾರರಿಗೆ ಬಹಳ ಗೌರವ ಇತ್ತು.

ಇವರು ಮೆಮೊರಂಡಂಗಳನ್ನು ತಯಾರು ಮಾಡಿ ಕಾಲ ಕಾಲಕ್ಕೆ ಬ್ರಿಟಿಷ್ ಸರ್ಕಾರಕ್ಕೆ ಕಳುಹಿಸಿಕೊಡುತ್ತಿದ್ದರು. ಆ ಮೆಮೊರಂಡಂಗಳಲ್ಲಿ ಭಾರತೀಯರಿಗೆ ಸರ್ಕಾರದಲ್ಲಿ ಕೆಲಸಗಳನ್ನು ಕೊಡಬೇಕು, ಬ್ರಿಟಿಷ್ ಮಿಲಿಟರಿಯಲ್ಲಿ ಭಾರತೀಯರಿಗೆ ಹುದ್ದೆಗಳನ್ನು ನೀಡಬೇಕು ಎನ್ನುವಂತಹ ಹತ್ತಾರು ಮನವಿಗಳನ್ನು ಸಲ್ಲಿಸುವ ಮೂಲಕ ಈ ಎಲ್ಲ ಸವಲತ್ತುಗಳನ್ನು ಭಾರತೀಯರೂ ಪಡೆಯುವಂತೆ ಮಾಡಿದರು. ಮುಂದೆ ಅಂಬೇಡ್ಕರರು ವಿದ್ಯಾವಂತರಾದ ಮೇಲೆ ಅವರೂ ಕೂಡ ಶೂದ್ರರು, ಅಸ್ಪೃಶ್ಯರು, ಆದಿವಾಸಿಗಳು, ದಲಿತರಿಗೆ ಆಡಳಿತದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸುವ ಮೂಲಕ ಹಿಂದುಳಿದ ಜನಾಂಗದವರ ಮತ್ತು ಅಸ್ಪೃಶ್ಯರ ಹಕ್ಕು ಬಾಧ್ಯತೆಗಳನ್ನು ಪಡೆಯುವ ಅನೇಕ ಪ್ರಯತ್ನಗಳನ್ನು ಮಾಡಿದರು. ಕಾಂಗ್ರೆಸ್ ನಾಯಕರು ಭಾರತೀಯರೆಲ್ಲರ ಸಲುವಾಗಿ ಬೇಡಿಕೆಗಳನ್ನಿಟ್ಟರೆ ಅಂಬೇಡ್ಕರರು ಹಿಂದುಳಿದವರ, ದಲಿತರ ಪರವಾಗಿ ದನಿ ಎತ್ತುತ್ತಿದ್ದರು.

ಆ ನಂತರ ಗಾಂಧೀಜಿ ಭಾರತದ ರಾಜಕೀಯಕ್ಕೆ ಇಳಿದರು. ಅವರು 1916ರಲ್ಲೇ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಬಂದರಾದರೂ ಕಾಂಗ್ರೆಸ್ಸಿನಲ್ಲಿ ಕ್ರಿಯಾಶೀಲರಾದದ್ದು 1920ರ ನಂತರ.

ಗಾಂಧೀಜಿ ಭಾರತಕ್ಕೆ ಹಿಂದಿರುಗಿದ ಕೂಡಲೇ ಅವರು ತಮ್ಮ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರನ್ನು ಸಂದರ್ಶಿಸಿ ತಾವು ಭಾರತ ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿಯುವ ಇಂಗಿತವನ್ನು ತಮ್ಮ ಗುರುಗಳಲ್ಲಿ ನಿವೇದಿಸಿದರು. ಆಗ ಗೋಖಲೆಯವರು ‘ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿಯುವ ಮೊದಲು ಯಾರ ಸೇವೆ ಮಾಡಲು ನೀನು ನಿರ್ಧರಿಸಿದ್ದೀಯಾ ಆ ಜನರ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಬಾ. ಅದಕ್ಕಾಗಿ ಭಾರತವನ್ನೆಲ್ಲ ಒಂದು ಸಾರಿ ಸುತ್ತಿ ಬಾ’ ಎಂದರು. ಗಾಂಧೀಜಿ ಒಂದು ವರ್ಷ ಕಾಲ ಭಾರತವನ್ನು ಸುತ್ತಿಹಾಕಿದ್ದರಿಂದ ಅವರಿಗೆ ಭಾರತೀಯರನ್ನು ಬಡತನ ಕಿತ್ತು ತಿನ್ನುತ್ತಿದ್ದುರ ಅನುಭವವಾಯಿತು. ಬಡವರ ಸೇವೆಗೆ ತನ್ನ ಇಡೀ ಜೀವನವನ್ನು ಮುಡುಪಾಗಿಡುವುದಾಗಿ ನಿರ್ಧರಿಸಿದರು. ಸ್ವಾತಂತ್ರ್ಯದ ಗುರಿಯಾದರೂ. ಬಡತನವನ್ನು ನೀಗುವುದೇ ಆಗಿತ್ತು.

ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಗುರಿ ‘ಡೊಮಿನಿಯನ್ ಸ್ಟೇಟಸ್’ ಆಗಿತ್ತು. ಇಂಗ್ಲಿಷರ ಆಡಳಿತದಲ್ಲೇ ಇದ್ದುಕೊಂಡು ಡೊಮಿನಿಯನ್ ಸ್ಟೇಟಸ್ ಅನುಭವಿಸುವ ವಿಚಾರ ಕಾಂಗ್ರೆಸ್ಸಿನದಾಗಿತ್ತು. ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕಾರಕ್ಕೆ ಬಂದಮೇಲೂ ಭಾರತದ ಗುರಿ ಡೊಮಿನಿಯನ್ ಸ್ಟೇಟಸ್ ಪಡೆಯುವುದೇ ಆಗಿತ್ತು.

ಸುಭಾಷ್‍ಚಂದ್ರ ಬೋಸರು ಐಎಎಸ್‍ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರೂ ಅವರು ಬ್ರಿಟಿಷರ ಅಧೀನದಲ್ಲಿ ಕೆಲಸ ಮಾಡಲು ಇಚ್ಛಿಸದೆ ಭಾರತಕ್ಕೆ ಹಿಂದಿರುಗಿದರು. ಕಾಂಗ್ರೆಸ್ಸಿನ ಸದಸ್ಯರಾದರು. ಸೈಮನ್ ಕಮಿಷನ್ ಭಾರತ ಪ್ರವಾಸ ಮಾಡಿದಾಗ ಬಂಗಾಳದಲ್ಲಿ ‘ಸೈಮನ್ ಗೋ ಬ್ಯಾಕ್’ ಚಳುವಳಿ ಆರಂಭಿಸಿದರು. ದೊಡ್ಡ ಯುವ ಪಡೆ ಕಟ್ಟಿ ಸೈಮನ್ ಕಮಿಷನ್ ಕಲ್ಕತ್ತೆಗೆ ಬಂದಾಗ ಕಪ್ಪು ಬಾವುಟ ಪ್ರದರ್ಶನ ನಡೆಸಿ ಸೆರೆಮನೆಗೆ ಹೋದರು. ಅದೇ ವರ್ಷ ಮದ್ರಾಸಿನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಸುಭಾಷ್ ಹೋದರು. ಸಮ್ಮೇಳನದಲ್ಲಿ ಗಾಂಧಿಜಿ ರಾಷ್ಟ್ರೀಯ ಕಾಂಗ್ರೆಸ್ಸಿನ ಗುರಿ ಡೊಮಿನಿಯನ್ ಸ್ಟೇಟಸ್ ಎಂಬ ನಿರ್ಣಯವನ್ನು ಮಂಡಿಸಿದರು. ಸುಭಾಷ್‍ಚಂದ್ರ ಬೋಸ್ ರಾಷ್ಟ್ರೀಯ ಕಾಂಗ್ರೆಸ್ಸಿನ ಗುರಿ ‘ಪೂರ್ಣ ಸ್ವರಾಜ್ಯ’ ಎಂಬ ತಿದ್ದುಪಡಿಯನ್ನು ತಂದರು. ಕೆಲವೇ ಮತಗಳ ಅಂತರದಲ್ಲಿ ಗಾಂಧಿಯವರು ಮಂಡಿಸಿದ ನಿರ್ಣಯ ಅಂಗೀಕಾರವಾಯಿತು. ಆದರೆ ಗಾಂಧಿಜಿಗೆ ಅದರಿಂದ ಅರಿವಾಗಿ ಮುಂದಿನ ಅಧಿವೇಶನದಲ್ಲೇ ‘ಪೂರ್ಣ ಸ್ವರಾಜ್ಯ ರಾಷ್ಟ್ರೀಯ ಕಾಂಗ್ರೆಸ್ಸಿನ ಗುರಿ’ ಎಂಬ ನಿರ್ಣಯವನ್ನು ಮಂಡಿಸಿ ಅದಕ್ಕೆ ಮನ್ನಣೆ ಪಡೆದರು. ಇದು ಇತಿಹಾಸ.

Photo Courtesy: DailyO

ರಾಷ್ಟ್ರೀಯ ಕಾಂಗ್ರೆಸ್ ಪಟ್ಟಾಗಿ ದೇಶದ ಸ್ವಾತಂತ್ರ್ಯಕ್ಕೆ 100 ವರ್ಷಕ್ಕೂ ಮೇಲ್ಪಟ್ಟು ಹೋರಾಡಿತು. ಅಂಬೇಡ್ಕರರೂ ಅವಿಚ್ಛಿನ್ನವಾಗಿ ತಮ್ಮ ಜೀವಮಾನಪರ್ಯಂತ ಹಿಂದುಳಿದವರ, ಅಸ್ಪೃಶ್ಯರ, ಅರಣ್ಯವಾಸಿಗಳ ಸಂಘಟನೆ ಕೆಲಸದಲ್ಲಿ ತೊಡಗಿದ್ದರಿಂದ ಈಗ ದಲಿತರ ಸಂಘಟನೆ ಬಲಗೊಳ್ಳುತ್ತಿದೆ. ದಲಿತರಲ್ಲಿ ಜಾಗೃತಿ ಮೂಡಿದೆ.

ಕಾಂಗ್ರೆಸ್ ಅತಿ ದೀರ್ಘಕಾಲ ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಸಂಸ್ಥೆ. ಕಾಂಗ್ರೆಸ್ ಒಂದೇ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಸಂಸ್ಥೆ ಎಂಬುದನ್ನು ಕಾಂಗ್ರೆಸ್ ಎಂದೂ ಹೇಳಿಕೊಂಡಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಹಿಂದು- ಮುಸ್ಲಿಂ ರಾಜರಾಣಿಗಳು, ಮುಸ್ಲಿಮ್ ಮತದ ರಾಜರಾದ ಹೈದರ್ ಟಿಪ್ಪುಗಳು, ಭಾರತೀಯ ಸೈನಿಕರು, ಐಎನ್‍ಎ, ದಲಿತರು, ಬೇಡರು ಎಲ್ಲರೂ ಕೈಜೋಡಿಸಿದ್ದಾರೆ.

ನಮ್ಮ ಈ ತಲೆಮಾರಿನವರು ಗಾಂಧಿ ಏನು ಮಾಡಿದರು? ಅಂಬೇಡ್ಕರ್ ಏನು ಮಾಡಿದರು ಎಂದು ಪ್ರಶ್ನಿಸುವುದನ್ನು ನಿಲ್ಲಿಸಬೇಕು. ಗಾಂಧಿ ಅಂಬೇಡ್ಕರರ ಚಾರಿತ್ರ್ಯವಧೆ ಮಾಡುವ ಕೆಲಸ ಮಾಡಬಾರದು. ಹೀಗೆ ನಾವು ಕಿತ್ತಾಡುವುದರಿಂದ ಮೋದಿ ಅವರಿಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಾವು ಅವಕಾಶ ಮಾಡಿಕೊಟ್ಟಂತಾಗುತ್ತದೆ. ನೆಹರು ಅವರ ಮೇಲೆ ಸರ್ದಾರ್ ಪಟೇಲರನ್ನು ಎತ್ತಿ ಕಟ್ಟುವ ಮಟ್ಟಕ್ಕೆ ಅವರು ಹೋಗುತ್ತಾರೆ ಎಂಬ ಎಚ್ಚರಿಕೆ ನಮ್ಮ ಎಲ್ಲ ಸಂಘಟನೆಗಳಿಗೆ ಇರಲಿ ಎಂದು ನಾನು ಆಶಿಸುತ್ತೇನೆ.


ಇದನ್ನೂ ಓದಿ: ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...