Homeಎಚ್.ಎಸ್.ದೊರೆಸ್ವಾಮಿಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

ರಾಷ್ಟ್ರೀಯ ಕಾಂಗ್ರೆಸ್ ಪಟ್ಟಾಗಿ ದೇಶದ ಸ್ವಾತಂತ್ರ್ಯಕ್ಕೆ 100 ವರ್ಷಕ್ಕೂ ಮೇಲ್ಪಟ್ಟು ಹೋರಾಡಿತು. ಅಂಬೇಡ್ಕರರೂ ಅವಿಚ್ಛಿನ್ನವಾಗಿ ತಮ್ಮ ಜೀವಮಾನಪರ್ಯಂತ ಹಿಂದುಳಿದವರ, ಅಸ್ಪೃಶ್ಯರ, ಅರಣ್ಯವಾಸಿಗಳ ಸಂಘಟನೆ ಕೆಲಸದಲ್ಲಿ ತೊಡಗಿದ್ದರು.

- Advertisement -
- Advertisement -

ಕೆಲವು ಮೌಲ್ಯಗಳಿಗಾಗಿ ಅಂಬೇಡ್ಕರ್, ಮಹಾತ್ಮಾ ಗಾಂಧಿ ಮುಂತಾದ ಮಹಾನಾಯಕರನ್ನು ದೇಶದ ಜನ ಗೌರವಿಸುತ್ತಾರೆ. ಆದರೆ ನಮ್ಮ ಆಧುನಿಕ ಲೇಖಕರು, ಅಂಬೇಡ್ಕರ್ ಮತ್ತು ಗಾಂಧೀಜಿ ಇಬ್ಬರೂ ವಿರೋಧಿಗಳು ಎಂಬಂತೆ ಬಿಂಬಿಸಲು ಪಣತೊಟ್ಟಿದ್ದಾರೆ. ತಮ್ಮ ಜೀವಿತ ಕಾಲದಲ್ಲಿ ಈ ಮಹನೀಯರು ತುಂಬ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಗೌರವ ಸಲ್ಲಿಸಬೇಕೆ ಹೊರತು ಅವರನ್ನು ಕಡು ವಿರೋಧಿಗಳು ಎಂದು ಬಿಂಬಿಸಿ ಜನರ ಮನಸ್ಸಿನಲ್ಲಿ ವಿಷ ತುಂಬುವುದು ಶ್ರೇಯಸ್ಕರವಲ್ಲ. ಆ ಮಹನೀಯರಲ್ಲಿದ್ದ ವೈಚಾರಿಕ ವ್ಯತ್ಯಾಸವನ್ನು ನಾವು ಪರಿಗಣಿಸುವುದು ಸರಿ ಆದರೆ ಅವರನ್ನು ಕಡುವೈರಿಗಳು ಎಂಬಂತೆ ಚಿತ್ರಿಸುವುದು ಇತಿಹಾಸಕ್ಕೆ ಅಪಮಾನ ಮಾಡಿದಂತೆ.

ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಿದವರು ಆಲನ್ ಆಕ್ಟೇವಿಯನ್ ಹ್ಯೂಮ್ ಎಂಬ ಇಂಗ್ಲಿಷರು. ಅವರು ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು. ನಾವು ಬ್ರಿಟನ್‍ನಲ್ಲಿ ಇಷ್ಟೊಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ, ಭಾರತೀಯರಿಗೂ ಆ ಸ್ವಾತಂತ್ರ್ಯ ಸಿಗಬೇಕು ಎನ್ನುವ ದೃಷ್ಟಿಯಿಂದ ರಾಷ್ಟ್ರೀಯ ಕಾಂಗ್ರೆಸ್ಸನ್ನು ಅವರು ಸ್ಥಾಪಿಸಿದರು. ಅಂದಿನ ಭಾರತದ ಮಹಾದಿಗ್ಗಜರಾದ ದಾದಾಭಾಯ್ ನವರೋಜಿ, ಫಿರೊಜ್‍ಷಾ ಮೆಹ್ತಾ ಮುಂತಾದವರು ರಾಷ್ಟ್ರೀಯ ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಅವರೆಲ್ಲ ಕ್ಲಾಸ್ ಲೀಡರ್‌ಗಳು. ಈ ಭಾರತೀಯ ದಿಗ್ಗಜಗಳ ಬಗೆಗೆ ಬ್ರಿಟಿಷ್ ಆಡಳಿತಗಾರರಿಗೆ ಬಹಳ ಗೌರವ ಇತ್ತು.

ಇವರು ಮೆಮೊರಂಡಂಗಳನ್ನು ತಯಾರು ಮಾಡಿ ಕಾಲ ಕಾಲಕ್ಕೆ ಬ್ರಿಟಿಷ್ ಸರ್ಕಾರಕ್ಕೆ ಕಳುಹಿಸಿಕೊಡುತ್ತಿದ್ದರು. ಆ ಮೆಮೊರಂಡಂಗಳಲ್ಲಿ ಭಾರತೀಯರಿಗೆ ಸರ್ಕಾರದಲ್ಲಿ ಕೆಲಸಗಳನ್ನು ಕೊಡಬೇಕು, ಬ್ರಿಟಿಷ್ ಮಿಲಿಟರಿಯಲ್ಲಿ ಭಾರತೀಯರಿಗೆ ಹುದ್ದೆಗಳನ್ನು ನೀಡಬೇಕು ಎನ್ನುವಂತಹ ಹತ್ತಾರು ಮನವಿಗಳನ್ನು ಸಲ್ಲಿಸುವ ಮೂಲಕ ಈ ಎಲ್ಲ ಸವಲತ್ತುಗಳನ್ನು ಭಾರತೀಯರೂ ಪಡೆಯುವಂತೆ ಮಾಡಿದರು. ಮುಂದೆ ಅಂಬೇಡ್ಕರರು ವಿದ್ಯಾವಂತರಾದ ಮೇಲೆ ಅವರೂ ಕೂಡ ಶೂದ್ರರು, ಅಸ್ಪೃಶ್ಯರು, ಆದಿವಾಸಿಗಳು, ದಲಿತರಿಗೆ ಆಡಳಿತದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸುವ ಮೂಲಕ ಹಿಂದುಳಿದ ಜನಾಂಗದವರ ಮತ್ತು ಅಸ್ಪೃಶ್ಯರ ಹಕ್ಕು ಬಾಧ್ಯತೆಗಳನ್ನು ಪಡೆಯುವ ಅನೇಕ ಪ್ರಯತ್ನಗಳನ್ನು ಮಾಡಿದರು. ಕಾಂಗ್ರೆಸ್ ನಾಯಕರು ಭಾರತೀಯರೆಲ್ಲರ ಸಲುವಾಗಿ ಬೇಡಿಕೆಗಳನ್ನಿಟ್ಟರೆ ಅಂಬೇಡ್ಕರರು ಹಿಂದುಳಿದವರ, ದಲಿತರ ಪರವಾಗಿ ದನಿ ಎತ್ತುತ್ತಿದ್ದರು.

ಆ ನಂತರ ಗಾಂಧೀಜಿ ಭಾರತದ ರಾಜಕೀಯಕ್ಕೆ ಇಳಿದರು. ಅವರು 1916ರಲ್ಲೇ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಬಂದರಾದರೂ ಕಾಂಗ್ರೆಸ್ಸಿನಲ್ಲಿ ಕ್ರಿಯಾಶೀಲರಾದದ್ದು 1920ರ ನಂತರ.

ಗಾಂಧೀಜಿ ಭಾರತಕ್ಕೆ ಹಿಂದಿರುಗಿದ ಕೂಡಲೇ ಅವರು ತಮ್ಮ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರನ್ನು ಸಂದರ್ಶಿಸಿ ತಾವು ಭಾರತ ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿಯುವ ಇಂಗಿತವನ್ನು ತಮ್ಮ ಗುರುಗಳಲ್ಲಿ ನಿವೇದಿಸಿದರು. ಆಗ ಗೋಖಲೆಯವರು ‘ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿಯುವ ಮೊದಲು ಯಾರ ಸೇವೆ ಮಾಡಲು ನೀನು ನಿರ್ಧರಿಸಿದ್ದೀಯಾ ಆ ಜನರ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಬಾ. ಅದಕ್ಕಾಗಿ ಭಾರತವನ್ನೆಲ್ಲ ಒಂದು ಸಾರಿ ಸುತ್ತಿ ಬಾ’ ಎಂದರು. ಗಾಂಧೀಜಿ ಒಂದು ವರ್ಷ ಕಾಲ ಭಾರತವನ್ನು ಸುತ್ತಿಹಾಕಿದ್ದರಿಂದ ಅವರಿಗೆ ಭಾರತೀಯರನ್ನು ಬಡತನ ಕಿತ್ತು ತಿನ್ನುತ್ತಿದ್ದುರ ಅನುಭವವಾಯಿತು. ಬಡವರ ಸೇವೆಗೆ ತನ್ನ ಇಡೀ ಜೀವನವನ್ನು ಮುಡುಪಾಗಿಡುವುದಾಗಿ ನಿರ್ಧರಿಸಿದರು. ಸ್ವಾತಂತ್ರ್ಯದ ಗುರಿಯಾದರೂ. ಬಡತನವನ್ನು ನೀಗುವುದೇ ಆಗಿತ್ತು.

ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಗುರಿ ‘ಡೊಮಿನಿಯನ್ ಸ್ಟೇಟಸ್’ ಆಗಿತ್ತು. ಇಂಗ್ಲಿಷರ ಆಡಳಿತದಲ್ಲೇ ಇದ್ದುಕೊಂಡು ಡೊಮಿನಿಯನ್ ಸ್ಟೇಟಸ್ ಅನುಭವಿಸುವ ವಿಚಾರ ಕಾಂಗ್ರೆಸ್ಸಿನದಾಗಿತ್ತು. ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕಾರಕ್ಕೆ ಬಂದಮೇಲೂ ಭಾರತದ ಗುರಿ ಡೊಮಿನಿಯನ್ ಸ್ಟೇಟಸ್ ಪಡೆಯುವುದೇ ಆಗಿತ್ತು.

ಸುಭಾಷ್‍ಚಂದ್ರ ಬೋಸರು ಐಎಎಸ್‍ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರೂ ಅವರು ಬ್ರಿಟಿಷರ ಅಧೀನದಲ್ಲಿ ಕೆಲಸ ಮಾಡಲು ಇಚ್ಛಿಸದೆ ಭಾರತಕ್ಕೆ ಹಿಂದಿರುಗಿದರು. ಕಾಂಗ್ರೆಸ್ಸಿನ ಸದಸ್ಯರಾದರು. ಸೈಮನ್ ಕಮಿಷನ್ ಭಾರತ ಪ್ರವಾಸ ಮಾಡಿದಾಗ ಬಂಗಾಳದಲ್ಲಿ ‘ಸೈಮನ್ ಗೋ ಬ್ಯಾಕ್’ ಚಳುವಳಿ ಆರಂಭಿಸಿದರು. ದೊಡ್ಡ ಯುವ ಪಡೆ ಕಟ್ಟಿ ಸೈಮನ್ ಕಮಿಷನ್ ಕಲ್ಕತ್ತೆಗೆ ಬಂದಾಗ ಕಪ್ಪು ಬಾವುಟ ಪ್ರದರ್ಶನ ನಡೆಸಿ ಸೆರೆಮನೆಗೆ ಹೋದರು. ಅದೇ ವರ್ಷ ಮದ್ರಾಸಿನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಸುಭಾಷ್ ಹೋದರು. ಸಮ್ಮೇಳನದಲ್ಲಿ ಗಾಂಧಿಜಿ ರಾಷ್ಟ್ರೀಯ ಕಾಂಗ್ರೆಸ್ಸಿನ ಗುರಿ ಡೊಮಿನಿಯನ್ ಸ್ಟೇಟಸ್ ಎಂಬ ನಿರ್ಣಯವನ್ನು ಮಂಡಿಸಿದರು. ಸುಭಾಷ್‍ಚಂದ್ರ ಬೋಸ್ ರಾಷ್ಟ್ರೀಯ ಕಾಂಗ್ರೆಸ್ಸಿನ ಗುರಿ ‘ಪೂರ್ಣ ಸ್ವರಾಜ್ಯ’ ಎಂಬ ತಿದ್ದುಪಡಿಯನ್ನು ತಂದರು. ಕೆಲವೇ ಮತಗಳ ಅಂತರದಲ್ಲಿ ಗಾಂಧಿಯವರು ಮಂಡಿಸಿದ ನಿರ್ಣಯ ಅಂಗೀಕಾರವಾಯಿತು. ಆದರೆ ಗಾಂಧಿಜಿಗೆ ಅದರಿಂದ ಅರಿವಾಗಿ ಮುಂದಿನ ಅಧಿವೇಶನದಲ್ಲೇ ‘ಪೂರ್ಣ ಸ್ವರಾಜ್ಯ ರಾಷ್ಟ್ರೀಯ ಕಾಂಗ್ರೆಸ್ಸಿನ ಗುರಿ’ ಎಂಬ ನಿರ್ಣಯವನ್ನು ಮಂಡಿಸಿ ಅದಕ್ಕೆ ಮನ್ನಣೆ ಪಡೆದರು. ಇದು ಇತಿಹಾಸ.

Photo Courtesy: DailyO

ರಾಷ್ಟ್ರೀಯ ಕಾಂಗ್ರೆಸ್ ಪಟ್ಟಾಗಿ ದೇಶದ ಸ್ವಾತಂತ್ರ್ಯಕ್ಕೆ 100 ವರ್ಷಕ್ಕೂ ಮೇಲ್ಪಟ್ಟು ಹೋರಾಡಿತು. ಅಂಬೇಡ್ಕರರೂ ಅವಿಚ್ಛಿನ್ನವಾಗಿ ತಮ್ಮ ಜೀವಮಾನಪರ್ಯಂತ ಹಿಂದುಳಿದವರ, ಅಸ್ಪೃಶ್ಯರ, ಅರಣ್ಯವಾಸಿಗಳ ಸಂಘಟನೆ ಕೆಲಸದಲ್ಲಿ ತೊಡಗಿದ್ದರಿಂದ ಈಗ ದಲಿತರ ಸಂಘಟನೆ ಬಲಗೊಳ್ಳುತ್ತಿದೆ. ದಲಿತರಲ್ಲಿ ಜಾಗೃತಿ ಮೂಡಿದೆ.

ಕಾಂಗ್ರೆಸ್ ಅತಿ ದೀರ್ಘಕಾಲ ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಸಂಸ್ಥೆ. ಕಾಂಗ್ರೆಸ್ ಒಂದೇ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಸಂಸ್ಥೆ ಎಂಬುದನ್ನು ಕಾಂಗ್ರೆಸ್ ಎಂದೂ ಹೇಳಿಕೊಂಡಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಹಿಂದು- ಮುಸ್ಲಿಂ ರಾಜರಾಣಿಗಳು, ಮುಸ್ಲಿಮ್ ಮತದ ರಾಜರಾದ ಹೈದರ್ ಟಿಪ್ಪುಗಳು, ಭಾರತೀಯ ಸೈನಿಕರು, ಐಎನ್‍ಎ, ದಲಿತರು, ಬೇಡರು ಎಲ್ಲರೂ ಕೈಜೋಡಿಸಿದ್ದಾರೆ.

ನಮ್ಮ ಈ ತಲೆಮಾರಿನವರು ಗಾಂಧಿ ಏನು ಮಾಡಿದರು? ಅಂಬೇಡ್ಕರ್ ಏನು ಮಾಡಿದರು ಎಂದು ಪ್ರಶ್ನಿಸುವುದನ್ನು ನಿಲ್ಲಿಸಬೇಕು. ಗಾಂಧಿ ಅಂಬೇಡ್ಕರರ ಚಾರಿತ್ರ್ಯವಧೆ ಮಾಡುವ ಕೆಲಸ ಮಾಡಬಾರದು. ಹೀಗೆ ನಾವು ಕಿತ್ತಾಡುವುದರಿಂದ ಮೋದಿ ಅವರಿಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಾವು ಅವಕಾಶ ಮಾಡಿಕೊಟ್ಟಂತಾಗುತ್ತದೆ. ನೆಹರು ಅವರ ಮೇಲೆ ಸರ್ದಾರ್ ಪಟೇಲರನ್ನು ಎತ್ತಿ ಕಟ್ಟುವ ಮಟ್ಟಕ್ಕೆ ಅವರು ಹೋಗುತ್ತಾರೆ ಎಂಬ ಎಚ್ಚರಿಕೆ ನಮ್ಮ ಎಲ್ಲ ಸಂಘಟನೆಗಳಿಗೆ ಇರಲಿ ಎಂದು ನಾನು ಆಶಿಸುತ್ತೇನೆ.


ಇದನ್ನೂ ಓದಿ: ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...