Homeರಾಜಕೀಯಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಭಾರತೀಯ ಸೇನೆಯ ಲೆಫ್ಟಿನೆಂಟ್ ‘ವಿದೇಶಿ.. ಬಂಧನದಲ್ಲೀಗ ಅವರು ‘ಪರದೇಶಿ’...

- Advertisement -
- Advertisement -

ರಾಷ್ಟ್ರೀಯ ನಾಗರೀಕತ್ವ ನೋಂದಣಿ (ಎನ್‍ಆರ್‍ಸಿ) ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಬಿಜೆಪಿಯ ಮ್ರಮುಖ ಚುನಾವಣಾ ವಿಷಯವಾಗಿತ್ತು. ಈ ಹಿಂದೆಯೇ ಅಸ್ಸಾಂನಂತಹ ರಾಜ್ಯದಲ್ಲಿ ಈ ಪ್ರಯೋಗ ಆರಂಭವಾಗಿದೆ. ಇದರ ಅಡಿಯಲ್ಲಿ ಭಾರತೀಯ ಸೇನೆಯಲ್ಲಿ 30 ಬರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಲೆಫ್ಟಿನೆಂಟ್ ಒಬ್ಬರನ್ನು ವಿದೇಶಿ ಎಂದು ಗುರುತಿಸಿ ಬಂಧಿಸಲಾಗಿದೆ. ಅವರು ಮುಸ್ಲಿಂ ಎನ್ನುವುದು ಕಾಕತಾಳೀಯವಲ್ಲ…
ಎನ್‍ಆರ್‍ಸಿ ಮುಂದೆ ಸೃಷ್ಟಿಸಲಿರುವ ಅನಾಹುತಗಳಿಗೆ ಸಾಕ್ಷಿಯಾಗಿ ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಹಲವಾರು ಜನರನ್ನು ವಿದೇಶಿ ವಲಸಿಗರು ಎಂದು ಗುರುತಿಸುವ ಸಂಚು ಶುರುವಾಗಿದೆ. ಮೊನ್ನೆ ಮೇ 29ರಂದು ಅಸ್ಸಾಂ ಪೊಲೀಸರು ಮೊಹಮ್ಮದ್ ಸನಾವುಲ್ಲಾ ಎಂಬ ನಿವೃತ್ತ ಗೌರವಾನ್ವಿತ ಲೆಫ್ಟಿನೆಂಟ್‍ರನ್ನು ವಶಕ್ಕೆ ಪಡೆದಿದ್ದಾರೆ. ‘ಬೋಕೊ ಫಾರಿನರ್ಸ್ ಟ್ರಿಬ್ಯುನಲ್’ ಅವರನ್ನು ವಿದೇಶಿಯೆಂದು ಗುರುತಿಸಿದೆ.
ಇದೇನೂ ಮೊದಲಲ್ಲ. ಹಲವಾರು ನಿವೃತ್ತ ಸೇನಾಧಿಕಾರಿಗಳು ಈಗಾಗಲೇ ವಿಚಾರಣೆ ಹೆಸರಲ್ಲಿ ಕಿರುಕುಳ ಅನುಭವಿಸಿದ್ದಾರೆ. ದೇಶಕ್ಕೆ ಅವರು ನೀಡಿದ ಕೊಡುಗೆಯೂ ಈ ಭಯಾನಕ ಎನ್‍ಆರ್‍ಸಿ ಮುಂದೆ ನಗಣ್ಯ. ಹೀಗಾದರೆ ಅಲ್ಲಿನ ಜನಸಾಮಾನ್ಯರ ಪರಿಸ್ಥಿತಿಯನ್ನು ಊಹಿಸಿ.
ಈ ಸಲದ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಲವಾರು ಕಡೆ ಎನ್‍ಆರ್‍ಸಿ ವಿಷಯ ಪ್ರಸ್ತಾಪಿಸಿ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಎಲ್ಲ ಕಡೆ ಎನ್‍ಆರ್‍ಸಿ ಬಳಸಿ ನುಸುಳುಕೋರರನ್ನು ದೇಶದಿಂದ ಹೊರ ಹಾಕುತ್ತೇವೆ. ಇದರಲ್ಲಿ ಹಿಂದೂ ನಿರಾಶ್ರಿತರಿದ್ದರೆ ಅವರಿಗೆ ಇಲ್ಲಿಯ ನಾಗರಿಕತ್ವ ನೀಡುತ್ತೇವೆ. ಉಳಿದವರನ್ನು ಎತ್ತಿ ಬಿಸಾಡುತ್ತೇವೆ’ ಎಂದು ಪ್ರಚೊದನಾಜಾರ ಭಾಷಣಗಳನ್ನು ಮಾಡಿದ್ದರು. ಅವರ ಗುರಿ ಬಾಂಗ್ಲಾ ಮೂಲದ ಮುಸ್ಲಿಂರೇ ಎಂಬುದು ಸ್ಪಷ್ಟ. ಇದನ್ನು ದೇಶಾದ್ಯಂತ ವಿಸ್ರಿಸಿದರೆ ಘನಘೋರ ದೌರ್ಜನ್ಯಗಳಾಗುವುದಂತೂ ಸತ್ಯ. ಹಿಂದೊಮ್ಮೆ ಬಾಂಗ್ಲಾ ವಲಸಿಗರನ್ನು ಇದೇ ಶಾ ಕ್ರಿಮಿಕೀಟಗಳಿಗೆ ಹೋಲಿಸಿದ್ದರು. ಈ ಪುಣ್ಯಾತ್ಮನಿಗೆ ಗೃಹ ಖಾತೆ ನೀಡಿದರಂತೂ ಪರಿಸ್ಥಿತಿ ಅಧ್ವಾನವಾಗಲಿದೆ.
51 ವರ್ಷದ ಸನಾವುಲ್ಲಾ ಭಾರತೀಯ ಸೇನೆಗೆ ಸಾಮಾನ್ಯ ಸೈನಿಕನಾಗಿ ಸೇವೆಗೆ ಸೇರಿ, ಜಮ್ಮು-ಕಾಶ್ಮೀರ ಮತ್ತು ಮಣಿಪುರಗಳಲ್ಲಿ ಆಂತರಿಕ ಸಶಸ್ತ್ರ ಬಂಡಾಯಗಳ ವಿರುದ್ಧದ ಹೋರಾಟದಲ್ಲಿ ಪಾಲೊಂಡಿದ್ದಾರೆ. ಅವರ ಸೇವೆ ಮನ್ನಿಸಿ 2014ರಲ್ಲಿ ರಾಷ್ಟ್ಪತಿ ಅವರಿಗೆ ಜೂನಿಯರ್ ಕಮೀಚನ್ ಅಧಿಕಾರಿ ದರ್ಜಗೆ ಬಡ್ತಿ ನೀಡಿದ್ದಾರೆ.
ನಿವೃತ್ತಿ ನಂತರ ಅವರು ಅಸ್ಸಾಂ ಗಡಿ ಭದ್ರತಾ ಪಡೆಗೆ ಎಸ್‍ಐ ಎಂದು ನೇಮಕಗೊಂಡಿದ್ದರು. ಈಗ ಫಾರಿನರ್ಸ್ ಟ್ರಿಬ್ಯುನಲ್ (ಎಫ್‍ಟಿ) ಸೂಚನೆಯ ಮೇರೆಗೆ ಅದೇ ಪೊಲೀಸರೇ ಅವರನ್ನು ಅರೆಸ್ಟಟ ಮಾಡಿದ್ದಾರೆ. ಅವರನ್ನು ಈಗ ಗೋಲ್‍ಪಾರಾ ಡಿಟೆನ್ಸನ್ ಕೇಂದ್ರದಲ್ಲಿ ಇಡಲಾಗಿದೆ. ಸನಾವುಲ್ಲಾ ಬಂಧನದ ವಿರುದ್ಧ ಹೈಕೋರ್ಟಿಗೆ ಹೋಗಲಿರುವ ವಕೀಲ ಅಮಾನ್ ವಡುದ್ ‘ಕ್ವಿಂಟ್’ನೊಂದಿಗೆ ಮಾತನಾಡಿ, ಫಾರಿನರ್ಸ್ ಟ್ರಿಬ್ಯುನಲ್ ಸರಿಯಾದ ತನಿಖೆ ಮಾಡದೇ ಸನಾವುಲ್ಲಾ ಅವರನ್ನು ವಿದೇಶಿ ನಾಗರಿಕ ಎಂದು ಹೇಳಿರುವುದು ಅಕ್ಷಮ್ಯ, 30 ವರ್ಷ ಈ ದೇಶದ ಸೇನೆಯ ಭಾಗವಾಗಿದ್ದವರಿಗೇ ಈ ಸ್ಥಿತಿಯಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.
ಅಸ್ಸಾಂ ಗಡಿ ಭದ್ರತಾ ಪೊಲೀಸರ5ನ್ನೂ ದೂರಿರುವ ಅವರು, ವೆರಿಫಿಕೆಷನ್ ರಿಪೋರ್ಟಿನಲ್ಲಿ ಸನಾವುಲ್ಲಾ ಒಬ್ಬ ದಿನಗೂಲಿ ಕಾರ್ಮಿಕ ಎಂದು ಉಲ್ಲೇಖಿಸಿದ್ದಾರೆ ಎಂದೂ ತಿಳಿಸಿದ್ದಾರೆ. ಎಫ್‍ಟಿ ವರದಿಯಲ್ಲಿ ಸನಾವುಲ್ಲಾ ವಿದೇಶಿ ಎಂದು ನಿರ್ಧರಿಸಲು, ‘1986ರ ಮತದಾರರ ಪಟ್ಟಿಯಲ್ಲಿ 20 ವರ್ಷದವರಾಗಿದ್ದ ಅವರು ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ’ ಎಂಬ ವಿಚುತ್ರ ಕಾರಣವನ್ನೂ ನೀಡಲಾಗಿದೆ. ಆದರೆ, ಮತದಾನದ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು 1989ರಲ್ಲಿ ಎಂಬ ವಾಸ್ತವವನ್ನೂ ಕಡೆಗಣಿಸಲಾಗಿದೆ.
‘ಕೋರ್ಟಿನ ಆದೇಶದ ಮೇರೆಗೆ ಸನಾವುಲ್ಲಾ ಅವರನ್ನು ನಾವು ಬಂಧಿಸಿದ್ದೇವೆ. ಎಫ್‍ಟಿ ವರದಿಯೇ ನಮಗೆ ಫೈನಲ್/ ಸನಾವುಲ್ಲಾ ಅವರು ಕೋರ್ಟಿಗೆ ಹೋಗಲು ಅವಕಾಶಗಳಿವೆ’ ಎಂದು ಅನಿನ್‍ಗಾಂವ್‍ನ ಹೆಚ್ಚುವರಿ ಎಸ್‍ಪಿ ಸಂಜೀಬ್ ಸೈಕಿಯಾ ತಿಳಿಸಿದ್ದಾರೆ.
ಕಳೆದ ವರ್ಷವೇ ಈ ಬಗ್ಗೆ ನೋಟಿಸ್ ಬಂದಾದ ಮೇಲೆ ಸನಾವುಲ್ಲಾ ವಿವಿಧ ಪೊಲೀಸ್ ಠಾಣೆಗಳಿಗೆ ತೆರಳಿ ವಿವರ ಪರಿಶೀಲಿಸಿದ್ದಾರೆ. ಆದರೆ, ಬೋಕೊ ಎಫ್‍ಟಿ ವರದಿಯಲ್ಲಿ ಆಗಿಚ್ಯಾ ಗ್ರಾಮದ ಮೊಹಮ್ಮದ್ ಸಮಸ್ಯಲ್ ಹಕ್ ಎಂಬುವರ ಹೆಸರಿದ್ದು, ಅದನ್ನೇ ತಪ್ಪಾಗಿ ನನ್ನ ಮೇಲೆ ಕೇಸಉ ಹೂಡಲು ಎಫ್‍ಟಿ ಬಳಸಿಕೊಂಡಿದ್ದಾರೆ…. 30 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ನನಗೆ ವಿದೇಶಿ ಪಟ್ಟ ಕಟ್ಟಿ ಬಂಧನದಲ್ಲಿ ಇಡುವ ಉಡುಗೊರೆಯನ್ನು ನೀಡಲಾಗುತ್ತಿದೆ’ ಎಂದು ಸ್ವತ: ಸನಾವುಲ್ಲಾ ನ್ಯೂಸ್ 18 ಮಾಧ್ಯಮದ ಮುಂದೆ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....