Homeರಾಜಕೀಯಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಭಾರತೀಯ ಸೇನೆಯ ಲೆಫ್ಟಿನೆಂಟ್ ‘ವಿದೇಶಿ.. ಬಂಧನದಲ್ಲೀಗ ಅವರು ‘ಪರದೇಶಿ’...

- Advertisement -
- Advertisement -

ರಾಷ್ಟ್ರೀಯ ನಾಗರೀಕತ್ವ ನೋಂದಣಿ (ಎನ್‍ಆರ್‍ಸಿ) ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಬಿಜೆಪಿಯ ಮ್ರಮುಖ ಚುನಾವಣಾ ವಿಷಯವಾಗಿತ್ತು. ಈ ಹಿಂದೆಯೇ ಅಸ್ಸಾಂನಂತಹ ರಾಜ್ಯದಲ್ಲಿ ಈ ಪ್ರಯೋಗ ಆರಂಭವಾಗಿದೆ. ಇದರ ಅಡಿಯಲ್ಲಿ ಭಾರತೀಯ ಸೇನೆಯಲ್ಲಿ 30 ಬರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಲೆಫ್ಟಿನೆಂಟ್ ಒಬ್ಬರನ್ನು ವಿದೇಶಿ ಎಂದು ಗುರುತಿಸಿ ಬಂಧಿಸಲಾಗಿದೆ. ಅವರು ಮುಸ್ಲಿಂ ಎನ್ನುವುದು ಕಾಕತಾಳೀಯವಲ್ಲ…
ಎನ್‍ಆರ್‍ಸಿ ಮುಂದೆ ಸೃಷ್ಟಿಸಲಿರುವ ಅನಾಹುತಗಳಿಗೆ ಸಾಕ್ಷಿಯಾಗಿ ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಹಲವಾರು ಜನರನ್ನು ವಿದೇಶಿ ವಲಸಿಗರು ಎಂದು ಗುರುತಿಸುವ ಸಂಚು ಶುರುವಾಗಿದೆ. ಮೊನ್ನೆ ಮೇ 29ರಂದು ಅಸ್ಸಾಂ ಪೊಲೀಸರು ಮೊಹಮ್ಮದ್ ಸನಾವುಲ್ಲಾ ಎಂಬ ನಿವೃತ್ತ ಗೌರವಾನ್ವಿತ ಲೆಫ್ಟಿನೆಂಟ್‍ರನ್ನು ವಶಕ್ಕೆ ಪಡೆದಿದ್ದಾರೆ. ‘ಬೋಕೊ ಫಾರಿನರ್ಸ್ ಟ್ರಿಬ್ಯುನಲ್’ ಅವರನ್ನು ವಿದೇಶಿಯೆಂದು ಗುರುತಿಸಿದೆ.
ಇದೇನೂ ಮೊದಲಲ್ಲ. ಹಲವಾರು ನಿವೃತ್ತ ಸೇನಾಧಿಕಾರಿಗಳು ಈಗಾಗಲೇ ವಿಚಾರಣೆ ಹೆಸರಲ್ಲಿ ಕಿರುಕುಳ ಅನುಭವಿಸಿದ್ದಾರೆ. ದೇಶಕ್ಕೆ ಅವರು ನೀಡಿದ ಕೊಡುಗೆಯೂ ಈ ಭಯಾನಕ ಎನ್‍ಆರ್‍ಸಿ ಮುಂದೆ ನಗಣ್ಯ. ಹೀಗಾದರೆ ಅಲ್ಲಿನ ಜನಸಾಮಾನ್ಯರ ಪರಿಸ್ಥಿತಿಯನ್ನು ಊಹಿಸಿ.
ಈ ಸಲದ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಲವಾರು ಕಡೆ ಎನ್‍ಆರ್‍ಸಿ ವಿಷಯ ಪ್ರಸ್ತಾಪಿಸಿ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಎಲ್ಲ ಕಡೆ ಎನ್‍ಆರ್‍ಸಿ ಬಳಸಿ ನುಸುಳುಕೋರರನ್ನು ದೇಶದಿಂದ ಹೊರ ಹಾಕುತ್ತೇವೆ. ಇದರಲ್ಲಿ ಹಿಂದೂ ನಿರಾಶ್ರಿತರಿದ್ದರೆ ಅವರಿಗೆ ಇಲ್ಲಿಯ ನಾಗರಿಕತ್ವ ನೀಡುತ್ತೇವೆ. ಉಳಿದವರನ್ನು ಎತ್ತಿ ಬಿಸಾಡುತ್ತೇವೆ’ ಎಂದು ಪ್ರಚೊದನಾಜಾರ ಭಾಷಣಗಳನ್ನು ಮಾಡಿದ್ದರು. ಅವರ ಗುರಿ ಬಾಂಗ್ಲಾ ಮೂಲದ ಮುಸ್ಲಿಂರೇ ಎಂಬುದು ಸ್ಪಷ್ಟ. ಇದನ್ನು ದೇಶಾದ್ಯಂತ ವಿಸ್ರಿಸಿದರೆ ಘನಘೋರ ದೌರ್ಜನ್ಯಗಳಾಗುವುದಂತೂ ಸತ್ಯ. ಹಿಂದೊಮ್ಮೆ ಬಾಂಗ್ಲಾ ವಲಸಿಗರನ್ನು ಇದೇ ಶಾ ಕ್ರಿಮಿಕೀಟಗಳಿಗೆ ಹೋಲಿಸಿದ್ದರು. ಈ ಪುಣ್ಯಾತ್ಮನಿಗೆ ಗೃಹ ಖಾತೆ ನೀಡಿದರಂತೂ ಪರಿಸ್ಥಿತಿ ಅಧ್ವಾನವಾಗಲಿದೆ.
51 ವರ್ಷದ ಸನಾವುಲ್ಲಾ ಭಾರತೀಯ ಸೇನೆಗೆ ಸಾಮಾನ್ಯ ಸೈನಿಕನಾಗಿ ಸೇವೆಗೆ ಸೇರಿ, ಜಮ್ಮು-ಕಾಶ್ಮೀರ ಮತ್ತು ಮಣಿಪುರಗಳಲ್ಲಿ ಆಂತರಿಕ ಸಶಸ್ತ್ರ ಬಂಡಾಯಗಳ ವಿರುದ್ಧದ ಹೋರಾಟದಲ್ಲಿ ಪಾಲೊಂಡಿದ್ದಾರೆ. ಅವರ ಸೇವೆ ಮನ್ನಿಸಿ 2014ರಲ್ಲಿ ರಾಷ್ಟ್ಪತಿ ಅವರಿಗೆ ಜೂನಿಯರ್ ಕಮೀಚನ್ ಅಧಿಕಾರಿ ದರ್ಜಗೆ ಬಡ್ತಿ ನೀಡಿದ್ದಾರೆ.
ನಿವೃತ್ತಿ ನಂತರ ಅವರು ಅಸ್ಸಾಂ ಗಡಿ ಭದ್ರತಾ ಪಡೆಗೆ ಎಸ್‍ಐ ಎಂದು ನೇಮಕಗೊಂಡಿದ್ದರು. ಈಗ ಫಾರಿನರ್ಸ್ ಟ್ರಿಬ್ಯುನಲ್ (ಎಫ್‍ಟಿ) ಸೂಚನೆಯ ಮೇರೆಗೆ ಅದೇ ಪೊಲೀಸರೇ ಅವರನ್ನು ಅರೆಸ್ಟಟ ಮಾಡಿದ್ದಾರೆ. ಅವರನ್ನು ಈಗ ಗೋಲ್‍ಪಾರಾ ಡಿಟೆನ್ಸನ್ ಕೇಂದ್ರದಲ್ಲಿ ಇಡಲಾಗಿದೆ. ಸನಾವುಲ್ಲಾ ಬಂಧನದ ವಿರುದ್ಧ ಹೈಕೋರ್ಟಿಗೆ ಹೋಗಲಿರುವ ವಕೀಲ ಅಮಾನ್ ವಡುದ್ ‘ಕ್ವಿಂಟ್’ನೊಂದಿಗೆ ಮಾತನಾಡಿ, ಫಾರಿನರ್ಸ್ ಟ್ರಿಬ್ಯುನಲ್ ಸರಿಯಾದ ತನಿಖೆ ಮಾಡದೇ ಸನಾವುಲ್ಲಾ ಅವರನ್ನು ವಿದೇಶಿ ನಾಗರಿಕ ಎಂದು ಹೇಳಿರುವುದು ಅಕ್ಷಮ್ಯ, 30 ವರ್ಷ ಈ ದೇಶದ ಸೇನೆಯ ಭಾಗವಾಗಿದ್ದವರಿಗೇ ಈ ಸ್ಥಿತಿಯಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.
ಅಸ್ಸಾಂ ಗಡಿ ಭದ್ರತಾ ಪೊಲೀಸರ5ನ್ನೂ ದೂರಿರುವ ಅವರು, ವೆರಿಫಿಕೆಷನ್ ರಿಪೋರ್ಟಿನಲ್ಲಿ ಸನಾವುಲ್ಲಾ ಒಬ್ಬ ದಿನಗೂಲಿ ಕಾರ್ಮಿಕ ಎಂದು ಉಲ್ಲೇಖಿಸಿದ್ದಾರೆ ಎಂದೂ ತಿಳಿಸಿದ್ದಾರೆ. ಎಫ್‍ಟಿ ವರದಿಯಲ್ಲಿ ಸನಾವುಲ್ಲಾ ವಿದೇಶಿ ಎಂದು ನಿರ್ಧರಿಸಲು, ‘1986ರ ಮತದಾರರ ಪಟ್ಟಿಯಲ್ಲಿ 20 ವರ್ಷದವರಾಗಿದ್ದ ಅವರು ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ’ ಎಂಬ ವಿಚುತ್ರ ಕಾರಣವನ್ನೂ ನೀಡಲಾಗಿದೆ. ಆದರೆ, ಮತದಾನದ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು 1989ರಲ್ಲಿ ಎಂಬ ವಾಸ್ತವವನ್ನೂ ಕಡೆಗಣಿಸಲಾಗಿದೆ.
‘ಕೋರ್ಟಿನ ಆದೇಶದ ಮೇರೆಗೆ ಸನಾವುಲ್ಲಾ ಅವರನ್ನು ನಾವು ಬಂಧಿಸಿದ್ದೇವೆ. ಎಫ್‍ಟಿ ವರದಿಯೇ ನಮಗೆ ಫೈನಲ್/ ಸನಾವುಲ್ಲಾ ಅವರು ಕೋರ್ಟಿಗೆ ಹೋಗಲು ಅವಕಾಶಗಳಿವೆ’ ಎಂದು ಅನಿನ್‍ಗಾಂವ್‍ನ ಹೆಚ್ಚುವರಿ ಎಸ್‍ಪಿ ಸಂಜೀಬ್ ಸೈಕಿಯಾ ತಿಳಿಸಿದ್ದಾರೆ.
ಕಳೆದ ವರ್ಷವೇ ಈ ಬಗ್ಗೆ ನೋಟಿಸ್ ಬಂದಾದ ಮೇಲೆ ಸನಾವುಲ್ಲಾ ವಿವಿಧ ಪೊಲೀಸ್ ಠಾಣೆಗಳಿಗೆ ತೆರಳಿ ವಿವರ ಪರಿಶೀಲಿಸಿದ್ದಾರೆ. ಆದರೆ, ಬೋಕೊ ಎಫ್‍ಟಿ ವರದಿಯಲ್ಲಿ ಆಗಿಚ್ಯಾ ಗ್ರಾಮದ ಮೊಹಮ್ಮದ್ ಸಮಸ್ಯಲ್ ಹಕ್ ಎಂಬುವರ ಹೆಸರಿದ್ದು, ಅದನ್ನೇ ತಪ್ಪಾಗಿ ನನ್ನ ಮೇಲೆ ಕೇಸಉ ಹೂಡಲು ಎಫ್‍ಟಿ ಬಳಸಿಕೊಂಡಿದ್ದಾರೆ…. 30 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ನನಗೆ ವಿದೇಶಿ ಪಟ್ಟ ಕಟ್ಟಿ ಬಂಧನದಲ್ಲಿ ಇಡುವ ಉಡುಗೊರೆಯನ್ನು ನೀಡಲಾಗುತ್ತಿದೆ’ ಎಂದು ಸ್ವತ: ಸನಾವುಲ್ಲಾ ನ್ಯೂಸ್ 18 ಮಾಧ್ಯಮದ ಮುಂದೆ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...