Homeಮುಖಪುಟಮೋದಿ ಸರಕಾರದ ಗ್ರೇಟ್ ಇಂಡಿಯನ್ ಡಾಟಾ ಸರ್ಕಸ್!

ಮೋದಿ ಸರಕಾರದ ಗ್ರೇಟ್ ಇಂಡಿಯನ್ ಡಾಟಾ ಸರ್ಕಸ್!

- Advertisement -
- Advertisement -

| ಜಾಹ್ನವಿ ಸೇನ್ | (ಕೃಪೆ: ದಿ ಕ್ವಿಂಟ್)
| ಅನುವಾದ: ನಿಖಿಲ್ ಕೋಲ್ಪೆ |

ನರೇಂದ್ರ ಮೋದಿ ಸರಕಾರ ನಮ್ಮ ಕುರಿತು ಎಲ್ಲವನ್ನೂ ತಿಳಿಯಲು ಬಯಸುತ್ತಿದೆ- ನಾವು ಮತ್ತು ನಮ್ಮ ತಂದೆ-ತಾಯಿ ಹುಟ್ಟಿದ್ದು ಯಾವಾಗ, ಎಲ್ಲಿ, ನಾವು ವಾಸಿಸುತ್ತಿರುವುದು ಎಲ್ಲಿ, ನಾವು ಏನು ಮಾಡುತ್ತಿದ್ದೇವೆ, ನಮ್ಮ ಕುಟುಂಬದ ಸದಸ್ಯರ ವಿವರಗಳು, ನಮ್ಮ ಮೊಬೈಲ್ ನಂಬರ್… ಇತ್ಯಾದಿ ಇತ್ಯಾದಿ. 133 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಇದೊಂದು ಬೆಟ್ಟದಂತಹಾ, (ಬೆಟ್ಟದಷ್ಟು ಖರ್ಚಿನ) ಕಾರ್ಯಾಚರಣೆ. ಆದರೆ, ಈ ವೆಚ್ಚ ಅತ್ಯಂತ ಅಗತ್ಯ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್)ಯನ್ನು 2020ರಲ್ಲಿ ನವೀಕರಿಸಲೇಬೇಕು ಎಂದು ಕೇಂದ್ರವು ನಿರ್ಧರಿಸಿದೆ.

ರಾಷ್ಟ್ರವ್ಯಾಪಿ ಎನ್‍ಆರ್‍ಸಿಯನ್ನು 2024ರ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ “ಭಾರತೀಯ ಜನತೆ”ಗೆ “ಭರವಸೆ” ನೀಡಿದ್ದಾರೆ. ಎನ್‍ಪಿಆರ್ ಮತ್ತು ಅದಕ್ಕೆ ತಳಕು ಹಾಕಲಾಗಿರುವ ಯೋಜಿತ ಎನ್‍ಆರ್‍ಸಿಯು ಭಾರೀ ಪ್ರಮಾಣದಲ್ಲಿ ಮಾಹಿತಿಯನ್ನು ಕಲೆಹಾಕುವ ಭಾರೀ ಕಾರ್ಯಾಚರಣೆಯಾಗಿದೆ. ದೇಶದಲ್ಲಿ ವಾಸಿಸುವ ಎಲ್ಲರ ವೈಯಕ್ತಿಕ ಮಾಹಿತಿಯನ್ನು ಅದು ಸರಕಾರಕ್ಕೆ ಎಟಕುವಂತೆ ಮಾಡಲಿದೆ. ಈ ಮಾಹಿತಿಯನ್ನು ಸರಕಾರ (ಆ ಮೂಲಕ ಆಳುವ ಪಕ್ಷ) ತಾನು ಬಯಸಿದಂತೆ ಬಳಸುವ ಸಾಧ್ಯತೆ ಇರುತ್ತದೆ- ಅದು ಹಲವರು ಭಯಪಡುತ್ತಿರುವಂತೆ, ಜನರಿಗೆ ಪೌರತ್ವ ನಿರಾಕರಿಸಲು ಆಗಿರಬಹುದು ಆಥವಾ ಜನಸಂಖ್ಯಾಧರಿತ ವಿಶ್ಲೇಷಣೆಯ ಮೂಲಕ ವಿವಿಧ ಪ್ರದೇಶಗಳ ಮತದಾರರನ್ನು ಗುರಿಪಡಿಸಲು ಅಥವಾ ಬೆದರಿಸಲು ಆಗಿರಬಹುದು.

ಆದರೆ, ಆಳುವ ಸರಕಾರ ಇಷ್ಟಪಡದ ಧಾರಾಳ ಅಂಕಿಅಂಶಗಳಿವೆ. 2019ರಲ್ಲಿ ಉತ್ತಮವಾದ ಯೋಜನೆಗಳನ್ನು ರೂಪಿಸಲು ನೆರವಾಗಬಲ್ಲ ಮತ್ತು ಆರ್ಥಿಕತೆಯು ಯಾವ ರೀತಿಯ ಸಾಧನೆಯನ್ನು ಮಾಡುತ್ತಿದೆ (ಅಥವಾ ಮಾಡುತ್ತಿಲ್ಲ) ಎಂಬ ಬಗ್ಗೆ ಭಾರತೀಯರಿಗೆ ಸ್ಪಷ್ಟವಾದ ಚಿತ್ರಣ ನೀಡಬಹುದಾದ ಅತ್ಯಂತ ನಿರ್ಣಾಯಕವಾದ ಅಂಕಿಅಂಶಗಳನ್ನು ಮುಚ್ಚಿಹಾಕಿದ ಆರೋಪವನ್ನು ಮೋದಿ ಸರಕಾರ ಮತ್ತೆಮತ್ತೆ ಎದುರಿಸಿದೆ. ಸರಕಾರ ತನಗೆ ಕೆಲವು ಅಂಕಿಅಂಶಗಳು ಇಷ್ಟವಿಲ್ಲದೇಹೋದಾಗ, ನೇರವಾಗಿ ಅಂತಹಾ ಅಂಕಿಅಂಶಗಳು ಅಸ್ತಿತ್ವದಲ್ಲೇ ಇಲ್ಲ ಎಂದು ನಾಟಕವಾಡಲು ನಿರ್ಧರಿಸುತ್ತದೆ.

ಆದುದರಿಂದ, ಮೋದಿ ಮತ್ತು ಶಾ ಎನ್‍ಪಿಆರ್‍ನ ಮೇಲೆ ಗಮನ ಕೇಂದ್ರೀಕರಿಸುತ್ತಿರುವಾಗ, ಆ ಅಂಕಿಅಂಶಗಳನ್ನು ಅಪಾಯಕಾರಿ, ಬಹುಸಂಖ್ಯಾತ ಉದ್ದೇಶಗಳಿಗೆ ಬಳಸಲಾಗಬಹುದು ಎಂಬ ಭಯವನ್ನು ಹಲವರು ವ್ಯಕ್ತಪಡಿಸುತ್ತಿರುವಾಗ, ಅವುಗಳನ್ನು ಮುಖ್ಯವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮಾತ್ರ ಬಳಸಲಾಗುತ್ತದೆ ಎಂದು ಕೇಂದ್ರ ಸಚಿವರುಗಳು ಹೇಳಿಕೊಳ್ಳುತ್ತಿರುವಾಗ, ಸರಕಾರ ಗಮನಹರಿಸಲೇಬೇಕಾಗಿದ್ದ , ಆದರೆ ಕುರುಡಾಗಿರುವ ಇತರ ಕೆಲವು ಅಂಕಿಅಂಶಗಳ ಕುರಿತು ಇಲ್ಲಿ ಕಣ್ಣುಹಾಯಿಸಲಾಗಿದೆ.

ನಿರುದ್ಯೋಗ

ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‍ಎಸ್‍ಎಸ್‍ಓ) ತನ್ನ ಹೊಸ ನಿಯತಕಾಲಿಕ ಕಾರ್ಮಿಕ ಬಲದ ಸಮೀಕ್ಷೆಯನ್ನು 2017ರ ಜುಲೈ ಮತ್ತು 2018ರ ಜೂನ್ ನಡುವೆ ನಡೆಸಿತು. ಈ ಅವಧಿಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ ಏಕೆಂದರೆ, ಅದು ನೋಟು ಆಮಾನ್ಯೀಕರಣದ ಪರಿಣಾಮವು ಭಾರತದ ಕಾರ್ಮಿಕ ವರ್ಗದ ಮೇಲೆ ಏನಾಯಿತು ಎಂಬುದನ್ನು ತೋರಿಸಿಕೊಡುತ್ತಿತ್ತು. ಮೋದಿ ಸರಕಾರ ಈ ಆಂಕಿಅಂಶಗಳನ್ನು ಬಹಿರಂಗಪಡಿಸಲು ಹೆದರಿ ನಿರಾಕರಿಸಿದಾಗ, ರಾಷ್ಟ್ರೀಯ ಅಂಕಿಅಂಶ ಆಯೋಗದ ಇಬ್ಬರು ಸದಸ್ಯರು ರಾಜೀನಾಮೆ ನೀಡಿದರು. ಆದರೂ ಸರಕಾರ ಜಪ್ಪಯ್ಯ ಎನ್ನಲಿಲ್ಲ.

ಜನವರಿ 2019ರಲ್ಲಿ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆ ಈ ಸಮೀಕ್ಷೆಯ ಫಲಿತಾಂಶವನ್ನು ಸರಣಿ ಲೇಖನಗಳ ಮೂಲಕ ಸೋರಿಕೆ ಮಾಡಿತು. ನಿರುದ್ಯೋಗವು ಕಳೆದ 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಎನ್‍ಎಸ್‍ಎಸ್‍ಓ ಕಂಡುಕೊಂಡಿತ್ತು ಮತ್ತು ಯುವಜನರಲ್ಲಿ ನಿರುದ್ಯೋಗದ ಪ್ರಮಾಣವು ಹಿಂದಿನ ವರ್ಷಗಳಿಗಿಂತ ಗಣನೀಯವಾಗಿ ಹೆಚ್ಚಿತ್ತು.

ಕೇಂದ್ರವು ಕೊನೆಗೂ ಮೇ 2019ರಲ್ಲಿ, ಸಾರ್ವತ್ರಿಕ ಚುನಾವಣೆಗಳು ಮುಗಿದು, ನರೇಂದ್ರ ಮೋದಿ ಸರಕಾರ ಪುನರಾಯ್ಕೆಯಾದ ಬಳಿಕವಷ್ಟೇ ಈ ಅಂಕಿಅಂಶಗಳನ್ನು ಬಹಿರಂಗಗೊಳಿಸಿತು. ಆಗಲೂ ಸರಕಾರವು ಸಮೀಕ್ಷೆಯ ವಿಧಾನ ಬದಲಾಗಿರುವುದರಿಂದ ಅಂಕಿಅಂಶಗಳ ಹೋಲಿಕೆ ಮಾಡಲಾಗದು ಎಂಬ ಸಬೂಬು ನೀಡಿ, ವಿಷಯವನ್ನು ತಣ್ಣಗಾಗಿಸಿತು. ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಮೇಲೂ ಸರಕಾರದಲ್ಲಿ ಯಾರೂ ಈ ವಿಷಯದ ಬಗ್ಗೆ ಗಮನಹರಿಸಿಲ್ಲ ಆಥವಾ ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ತಾವೇನು ಮಾಡುತ್ತಿದ್ದೇವೆ ಎಂಬ ಬಗ್ಗೆ ತುಟಿ ಬಿಚ್ಚಿಲ್ಲ.

ಗ್ರಾಹಕ ಖರ್ಚುಗಳು

ತೀರಾ ಇತ್ತೀಚಿನ ವಿವಾದವು ಅಂಕಿಅಂಶಗಳ ಕುರಿತು ಮೋದಿ ಸರಕಾರದ ಪ್ರವೃತ್ತಿಯನ್ನು ಎತ್ತಿತೋರಿಸಿದ್ದು, ಗ್ರಾಹಕ ವೆಚ್ಚಗಳ ಕುರಿತು ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯ 2017-18ರ ಸಮೀಕ್ಷೆಯ ಮುಜುಗರ ಉಂಟುಮಾಡುವ ಅಂಕಿಅಂಶಗಳತ್ತ ಸರಕಾರ ಕುರುಡುಗಣ್ಣು ಬೀರಿದೆ. ಈ ಬಾರಿ ಕೂಡಾ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆಯೇ ವಿಷಯವನ್ನು ಬಹಿರಂಗಗೊಳಿಸಿದ್ದು, ಗ್ರಾಹಕರು ಮಾಡುವ ಖರ್ಚು ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದಿರುವುದನ್ನು ಅಂಕಿಅಂಶಗಳು ತೋರಿಸಿಕೊಡುತ್ತವೆ. ಇದಕ್ಕೆ ಕಾರಣ ಗ್ರಾಮೀಣ ಬೇಡಿಕೆ ಕುಸಿತವೆಂದು ಆಂಕಿಅಂಶಗಳು ಹೇಳುತ್ತವೆ.

ಇದನ್ನು ನಿಭಾಯಿಸಲು ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ಬದಲು ಸರಕಾರವು ಈ ಬಾರಿ, ದತ್ತಾಂಶಗಳ ಗುಣಮಟ್ಟ ಸರಿಯಿಲ್ಲವೆಂಬ ಸಬೂಬು ನೀಡಿ ಸಮೀಕ್ಷೆಯ ಫಲಿತಾಂಶವನ್ನು ತಿರಸ್ಕರಿಸಿದೆ. ಭಾರತದಲ್ಲಿ ಸರಕಾರವೊಂದು ರಾಷ್ಟ್ರೀಯ ಅಂಕಿಅಂಶ ಕಚೇರಿಯ ಸಮೀಕ್ಷೆಯನ್ನು ತಿರಸ್ಕರಿಸಿರುವುದು ಇದೇ ಮೊದಲ ಬಾರಿ.

ಜಿಡಿಪಿ ಬೆಳವಣಿಗೆ

ನಿಮಗೆ ಇಷ್ಟವಿಲ್ಲದ ಅಂಕಿಅಂಶಗಳನ್ನು ನಿಭಾಯಿಸುವ ಇನ್ನೊಂದು ವಿಧಾನವೆಂದರೆ ಅದನ್ನು ಸಂಪೂರ್ಣವಾಗಿ ಬದಲಿಸುವುದು ಎಂದು ಮೋದಿ ಸರಕಾರ ತೋರಿಸಿಕೊಟ್ಟಿದೆ. ಈ ರೀತಿ ಮಾಡುವುದರಿಂದ ನೀವು ಅಂಕಿಅಂಶಗಳನ್ನು ತಡೆಹಿಡಿದಿದ್ದೀರಿ ಎಂದು ಯಾರೂ ಆರೋಪಿಸುವಂತಿಲ್ಲ ಮತ್ತು ನಿಮ್ಮ ಸರಕಾರವು ಪರಿಸ್ಥಿತಿಯನ್ನು ಹದಗೆಡಿಸಿದೆ ಎಂಬ ಟೀಕೆಯನ್ನೂ ನಿಭಾಯಿಸುವ ಅಗತ್ಯವಿರುವುದಿಲ್ಲ!

2018ರ ಕೊನೆಯ ಭಾಗದಲ್ಲಿ ಸರಕಾರವು ಹೊಸ ‘ಹಿಂದಿನ ಸರಣಿ’ಯ ಜಿಡಿಪಿಯ ‘ಆಧಿಕೃತ’ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿತು. ಆದರ ಪ್ರಕಾರ, ಮನಮೋಹನ್ ಸಿಂಗ್ ಸರಕಾರದಲ್ಲಿ ಜಿಡಿಪಿ ಬೆಳವಣಿಗೆಯು ಹಿಂದೆಯೇ ದಾಖಲಿಸಲಾಗಿರುವುದಕ್ಕಿಂತ ಕಡಿಮೆಯಿತ್ತು! ಹಲವಾರು ತಜ್ಞರು ಈ ಅಂಕಿಅಂಶಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿದ್ದಾರೆ ಮಾತ್ರವಲ್ಲ; ಇದನ್ನು ಮೈಕ್ರೋ ಇಕನಾಮಿಕ್ಸ್‍ನ ಮೂಲಭೂತ ನಿಯಮಗಳನ್ನು ತಲೆಕೆಳಗೆ ಮಾಡಿ ನಿಲ್ಲಿಸುವುದು ಎಂದೂ ಟೀಕಿಸಿದ್ದಾರೆ.

ದೇಶದ ಜಿಡಿಪಿ ಬೆಳವಣಿಗೆ ಐದು ಶೇಕಡಾಕ್ಕಿಂತಲೂ ಕೆಳಮಟ್ಟಕ್ಕೆ ಇಳಿದಿರುವುದಕ್ಕೆ ಕಾರಣಗಳನ್ನು ಹುಡುಕುವ ಬದಲು, ಕೇಂದ್ರ ಸರಕಾರವು ಈ ಅಂಕಿಅಂಶಗಳು ಅಷ್ಟೊಂದು ಕೆಟ್ಟದಾಗಿ ಕಾಣದಂತೆ ಮಾಡಲು ಪ್ರಯತ್ನಿಸಿದಂತೆ ಕಾಣುತ್ತದೆ.

ಲಿಂಚಿಂಗ್

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‍ಸಿಅರ್‍ಬಿ) ತನ್ನ 2016ರ “ಭಾರತದಲ್ಲಿ ಅಪರಾಧ” ಎಂಬ ವರದಿಯನ್ನು ಬರೋಬ್ಬರಿ ಮೂರು ವರ್ಷ ತಡವಾಗಿ ಪ್ರಕಟಿಸಿತು. ಆದರೂ, ತಾನು ಸಂಗ್ರಹಿಸಿದ ಎಲ್ಲಾ ಮಾಹಿತಿಗಳನ್ನು ಪ್ರಕಟಿಸದಿರಲು ನಿರ್ಧರಿಸಿತು. ಗುಂಪಿನಿಂದ ಹಲ್ಲೆ/ಹತ್ಯೆ, ಪ್ರಭಾವಿ ಜನರಿಂದ ನಡೆದ ಕೊಲೆಗಳು, ಖಾಪ್ ಪಂಚಾಯತ್‍ಗಳು ಆದೇಶಿಸಿದ ಹತ್ಯೆಗಳು ಇತ್ಯಾದಿ ಕೆಲವು ನಿರ್ದಿಷ್ಟ ಉಪ ಶೀರ್ಷಿಕೆಗಳ ಅಡಿಯಲ್ಲಿ ಯಾವುದೇ ಅಂಕಿಅಂಶಗಳನ್ನು ಪ್ರಕಟಿಸಲಿಲ್ಲ.

ರೈತರ ಆತ್ಮಹತ್ಯೆಗಳು

ಮೇಲೆ ಉಲ್ಲೇಖಿಸಲಾಗಿರುವ ಎನ್‍ಸಿಅರ್‍ಬಿ ವರದಿಯಲ್ಲಿಯೇ ರೈತರ ಆತ್ಮಹತ್ಯೆ ಕುರಿತ ವಿಭಾಗವೊಂದಿದೆ. ವರದಿಯ ಉಳಿದ ಭಾಗಗಳಂತೆ, ಈ ವಿಭಾಗದ ಅಂಕಿಅಂಶಗಳು ಮೂರು ವರ್ಷಗಳ ಕಾಲ ತಡವಾಗಿರುವುದರ ಹೊರತಾಗಿಯೂ ಅಪೂರ್ಣವಾಗಿವೆ. 2016ರ ವರ್ಷಕ್ಕೆ ರೈತರ ಸಾವಿಗೆ ಕಾರಣಗಳ ವಿಭಾಗವನ್ನೇ ಎನ್‍ಸಿಅರ್‍ಬಿ ಕೈಬಿಟ್ಟಿದೆ. ಈ ಮಾಹಿತಿಯು ರೈತರ ಆತ್ಮಹತ್ಯೆಗಳು ಏಕೆ ಮುಂದುವರಿದಿವೆ ಮತ್ತು ರೈತರ ಸಂಕಷ್ಟಗಳ ನಿವಾರಣೆಗೆ ಏನು ಮಾಡಬಹುದು ಎಂಬ ಕುರಿತು ಒಳನೋಟವನ್ನು ಒದಗಿಸಬಹುದಾಗಿತ್ತು. ಈ ವರದಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಹೇಳಲಾಗಿದ್ದು, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಆತ್ಮಹತ್ಯೆ ಸೊನ್ನೆ ಎಂದು ಹೇಳಲಾಗಿದೆ. ಆದರೆ, ನೈಜ ವರದಿಗಳು ಇದಕ್ಕೆ ವ್ಯತಿರಿಕ್ತವಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...