Homeಅಂಕಣಗಳುಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

- Advertisement -
- Advertisement -

ಸದ್ಯದ ಬಿಜೆಪಿ ಪಾರ್ಟಿಯೊಳಗೆ ರೌಡಿಗಳ ನೂಕುನುಗ್ಗಲು ನೋಡಿದ ಪ್ರತಾಪ ಸಿಮ್ಮ, ರೌಡಿಗಳು ಹೆದರಿ ಬಿಜೆಪಿಯೊಳಕ್ಕೆ ಬರಲುಕಾರಣ ನಮ್ಮ ಮೋದಿಯವರೇ ಎಂದರಂತಲ್ಲಾ; ಮೋದಿ ಉಗ್ರರನ್ನೇ ಅಟ್ಟಾಡಿಸಿಕೊಂಡು ಲಾಠಿ ಬೀಸುತ್ತಿದ್ದಾರೆ, ಆ ಲಾಠಿಗೆ ಸಿಕ್ಕ ಉಗ್ರರ ಕೆನ್ನೆ ಸಿಗಿದು ಹಲ್ಲು ಮುರಿದಿವೆ, ಕಣ್ಣು ಗೋಲಿಯಂತೆ ಆಕಾಶಕ್ಕೆ ಹಾರಿವೆ, ಕಿವಿ ತೂತುಬಿದ್ದು ಕೋಳ ತೊಡಿಸುವಂತಾಗಿವೆ; ಇದನ್ನ ನೋಡಿದ ಕೇಳಿದ ಊರ ರೌಡಿಗಳು, ಸದ್ಯಕ್ಕೆ ನಮ್ಮ ಅಂಗಾಂಗಗಳು ಆರೋಗ್ಯವಾಗಿರಬೇಕಾದರೆ, ಇದ್ದಂತೆಯೇ ಇರಬೇಕಾದರೆ ಮೋದಿ ಪಾರ್ಟಿಗೆ ಹೋಗಿ ಜೈಕಾರ ಹಾಕುವುದು ಬಿಟ್ಟು ಬೇರೆ ದಾರಿಯೇ ಕಾಣುತ್ತಿಲ್ಲ ಆದ್ದರಿಂದ ಬಿಜೆಪಿ ದಾರಿಯೇ ನಮಗೆ ಸೂಕ್ತವೆಂದು ತೀರ್ಮಾನಿಸಿದ್ದಾರೆ ಎಂದರಂತಲ್ಲಾ. ಇದಕ್ಕೆ ಒಂದು ಕಾರಣ ಸೇರಿಸುವುದಾದರೇ ಮೋದಿ ಸರಕಾರದ ಸಮಯದಲ್ಲಿ ಸಾವಿರಾರು ಮುಸ್ಲಿಮರನ್ನು ಸದೆಬಡಿದವರು ದೊಡ್ಡದೊಡ್ಡ ಹುದ್ದೆಗೆ ಏರಿದರು; ಇನ್ನು ಅವರ ಪಾರ್ಟಿಯ ರಾಜಕಾರಣಿಯೊಬ್ಬ ಕೇಸೊಂದರಲ್ಲಿ ಗಡಿಪಾರಾಗಿ ಕೊನೆಗೆ ಗೃಹಮಂತ್ರಿಯಾಗಿ ತನಗಾಗದವರ ಪಟ್ಟಿ ತಯಾರಿಸುತ್ತ ಕುಳಿತಿದ್ದಾರಂತಲ್ಲ. ಇಂತಹ ಜನ ಮುಂದೆ ಏನಾದರೂ ಮಾಡಬಲ್ಲರಾದ್ದರಿಂದ, ಆಡಳಿತ ನಡೆಸುತ್ತಿರುವ ಪಾರ್ಟಿಗೆ ಹೋಗಿ ಅಡಗಿಕೊಳ್ಳುವುದು ಸೂಕ್ತ ಎಂದು ಆಲೋಚಿಸುತ್ತಿರುವಾಗ ಫೈಟರ್ ರವಿ ಎಂಬಾತ ನಾಗಮಂಗಲದ ಕಡೆ ಹೊರಟನಂತಲ್ಲಾ, ಥೂತ್ತೇರಿ.

*****

ಈ ನಾಗಮಂಗಲಕ್ಕೂ ರಾಜಕಾರಣ ಕುಖ್ಯಾತಿಗೂ ಒಂದು ಇತಿಹಾಸವಿದೆ. ಈ ಹಿಂದೆ ಇಲ್ಲಿ ಶಾಸಕ, ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಹೆಚ್.ಟಿ ಕೃಷ್ಣಪ್ಪನವರು, ಹಿಂದೆ ಬಂದರೆ ಒದೆಯದ ಮುಂದೆ ಬಂದರೆ ಹಾಯದ ಗೋವಿನ ರೀತಿಯ ವ್ಯಕ್ತಿ; ಇದನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿದ್ದ ಮತ್ತು ವಕೀಲರಾಗಿದ್ದ ಇವರು ರಾಜಕಾರಣಕ್ಕೆ ಬಂದಿದ್ದು ಕೊಲೆಗಾರ ಅಪರಾಧಿಗಳನ್ನು ಬಿಡಿಸಿದ ಕಾರಣಕ್ಕೆ. ಗುಳುಕಾಯಿ ಹೊಸಳ್ಳಿ ಜನ ಶಾನುಭೋಗರನ್ನೇ ಕೊಲೆ ಮಾಡಿ ಜೈಲಿಗೆ ಹೋದರು. ಅವರನ್ನೆಲ್ಲಾ ನಿರಪರಾಧಿಗಳೆಂದು ತಾಂತ್ರಿಕ ಕಾರಣಗಳ ಮುಖಾಂತರ ಖುಲಾಸೆಗೊಳಿಸಿದರು. ಕೊಲೆಗಾರರನ್ನು ಬಿಡಿಸಿದ ವ್ಯಕ್ತಿ ನಮ್ಮನ್ನ ರಕ್ಷಿಸುತ್ತಾನೆಂದು ಭಾವಿಸಿದ ಜನ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕನನ್ನಾಗಿ ಮಾಡಿದರು. ಇವರ ನಂತರ ಬಂದ ಶಿವರಾಮೇಗೌಡ, ಗಂಗಾಧರಮೂರ್ತಿಯ ಕೊಲೆ ಕೇಸಿನಲ್ಲಿ ಸಿಲುಕಿ ಅಂತೂ ಆರೋಪಮುಕ್ತರಾಗಿ ಬಚಾವಾದರು. ಇವರ ನಂತರ ಬಂದ ಚಲುವರಾಯಸ್ವಾಮಿ ಬಳಿಯಿದ್ದ ಕೆಲ ರೌಡಿಗಳು ನಿಷ್ಠಾವಂತ ನಾಯಿಗಳಂತೆ ಬಾಲ ಅಲ್ಲಾಡಿಸಿದರೆ ಹೊರತು ಯಾರ ಮೇಲೂ ದಾಳಿ ಮಾಡಲಿಲ್ಲ. ಇವರ ನಂತರ ಬಂದ ಸುರೇಶ್‌ಗೌಡ ಹೆಚ್‌ಎಎಲ್‌ನ ವಸತಿ ನಿರ್ಮಾಣದ ಸೊಸೈಟಿ ಹಣದ ಅವ್ಯವಹಾರದ ಜೊತೆಗೆ ರೌಡಿಗಳಿಂದಲೂ ಹಣ ಪಡೆದು ಅದನ್ನು ಹಿಂದಿರುಗಿಸದೇ ಇರುವುದರಿಂದ ಆತನನ್ನ ಸೋಲಿಸಲೆಂದೇ ಫೈಟರ್ ರವಿ ಎಂಬ ರೌಡಿ ಬಂದು ಇಡೀ ತಾಲೂಕಿನ ತುಂಬ ಕಟೌಟ್ ಹಾಕಿದ್ದನಂತಲ್ಲಾ. ಏನು ಮಾಡಿದರೂ ರೌಡಿಯಂತೆ ಕಾಣದೆ ಮಠದ ಮೃತ ಸ್ವಾಮಿಯಂತೆ ಕಾಣುತ್ತಿದ್ದಾನೆ ಎಂದು ಜನ ನಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಹಿಂದೆ ಹೆಚ್ಚು ಯುದ್ಧಗಳಾಗುತ್ತಿದ್ದವು; ದೈಹಿಕವಾಗಿ ಭಲಾಢ್ಯವಾಗಿದ್ದ ಮತ್ತು ತೋಳು ತಿಮಿರಿನ ಜನ ಸೈನ್ಯಕ್ಕೆ ಸೇರಿ ಹತರಾಗುತ್ತಿದ್ದರು. ಅವರ ಹೆಂಡತಿಯರು ಅನಿವಾರ್ಯವಾಗಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು. ಇವರೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಶೋಷಿತ ಸಮುದಾಯಗಳ ಜನ. ಸ್ವಾತಂತ್ರ್ಯಾನಂತರ ರಾಜಗುರುಗಳು ನಿರ್ನಾಮವಾಗಿ ಸೈನಿಕರು ಇಲ್ಲವಾದ ಕಾರಣ ಆ ಮನಸ್ಥಿತಿಯವರು ಊರುಗಳಲ್ಲೇ ರೌಡಿಗಳಾದರು; ಅವರು ಆ ತರಹ ಆಗಲು ಒಂದು ಸಣ್ಣ ಕಾರಣ ಸಾಕು, ಮುಂದೆ ಪೊಲೀಸರೇ ಬೆಳೆಸಿ ಭೂಗತಲೋಕ ಸೇರಿಸುತ್ತಾರೆ. ಈ ಭೂಗತ ಲೋಕದ ಕೃತ್ಯಗಳು ಭಯಾನಕ. ರೌಡಿಗಳ ಆಯಸ್ಸು ಮುಗಿದು ಸತ್ತ ಉದಾಹರಣೆ ವಿರಳ. ಭೂಗತ ಲೋಕದ ರಾಜ-ಡಾನ್ ದೈತ್ಯ ದೇಹಿಯಾಗಿರುತ್ತಾನೆ. ಜಯರಾಜ್, ಬಲರಾಮ್, ಫಯಾಜ್, ಕೊತ್ವಾಲ, ಶಿವರಾಂ, ಸುನಿಲ್ ಇತ್ಯಾದಿ ವ್ಯಕ್ತಿಗಳ ಆಕಾರ ನೋಡಿದರೆ ನಿಮಗೆ ತಿಳಿಯುತ್ತದೆ. ಆದರೆ ದೇಹಾಕೃತಿಯಲ್ಲ ದುರ್ಬಲವಾಗಿದ್ದ ಮುತ್ತಪ್ಪ ರೈ ಬುದ್ಧಿವಂತಿಕೆ ಉಪಯೋಗಿಸಿ ಭೂಗತಲೋಕಕ್ಕೆ ಪಿಸ್ತೂಲು ತಂದ ವ್ಯಕ್ತಿ. ಅದನ್ನ ಆತನೇ ಉಪಯೋಗಿಸಬೇಕಿಲ್ಲ; ಕಾಸುಕೊಟ್ಟು ನಿರ್ದೇಶನ ನೀಡಿದರೆ ಸಾಕು; ಯಾವ ಹುಡುಗನಾದರೂ ಆ ಕೆಲಸ ಮಾಡಿ ತಲೆಮರೆಸಿಕೊಳ್ಳಬಲ್ಲ. ಇಂತಹ ಕೆಲಸವನ್ನ ದುಬಾಯಿಯಲ್ಲಿ ಕುಳಿತು ಮಾಡಿ ಯಾವ ಕೇಸುಗಳನ್ನು ಕಡಿಮೆ ಅಂಟಿಸಿಕೊಂಡು ಬದುಕಿದವನು ಈ ಮುತ್ತಪ್ಪ ರೈ. ಅಂತಹ ರೈಗೂ ನಾಗಮಂಗಲದ ಕಡೆ ಚಿಲ್ಲರೆ ರಾಜಕಾರಣಿಯೊಬ್ಬ ಕೋಟ್ಯಂತರ ರೂಪಾಯಿಗಳ ನಾಮ ಎಳೆದು, ನಾಳೆ ಕೊಡುತ್ತೇನೆ ನಾಡಿದ್ದು ಗ್ಯಾರಂಟಿ ಎಂದು ಹೇಳುತ್ತಿರುವಾಗಲೇ ಮುತ್ತಪ್ಪ ರೈ ದೇಹ ತ್ಯಜಿಸಿದ. ಅಂತಹ ಮುತ್ತಪ್ಪನಿಗೆ ಮಣ್ಣು ತಿನ್ನಿಸಿದವರು ಈ ನಾಗಮಂಗಲದ ಮಣ್ಣಿನವನು ಅನ್ನುವುದಾದರೆ ಇನ್ನ ಬಿಜೆಪಿ ರೌಡಿಗಳು ಇಲ್ಲಿ ಉದ್ಧಾರವಾಗುವುದುಂಟೆ, ಥೂತ್ತೇರಿ.

*****

ಬೆಂಗಳೂರಿಂದ ಎರಡೂವರೆ ಗಂಟೆ ಪ್ರಯಾಣದಷ್ಟು ದೂರವಿರುವ ನಾಗಮಂಗಲ ಕೆಲ ರೌಡಿಗಳಿಗೆ ಸುರಕ್ಷಿತ ಜಾಗ. ದರೋಡೆ ಕೇಸೊಂದರಿಂದ ಪರಾರಿಯಾಗಿ ಎಲ್ಲಿ ಅಡಗಿಕೊಳ್ಳಬೇಕೆಂದು ರೌಡಿಗಳೆಲ್ಲಾ ಚರ್ಚಿಸುತ್ತಿರುವಾಗ ಇವರಿಗೆ ಕಾಫಿ, ಸಿಗರೇಟು ತಂದುಕೊಡುತ್ತಿದ್ದ ಹುಡುಗನೊಬ್ಬ ,”ಸಾರ್ ನಾಗಮಂಗಲದತ್ರ ಇರೋ ನಮ್ಮೂರಲ್ಲಿರಿ, ಅಲ್ಲಿಗೆ ಯಾರೂ ಬರಕ್ಕಾಗಲ್ಲ” ಎಂದ. ಮರು ಮಾತನಾಡದ ರೌಡಿಗಳು ಆ ಮುಗ್ದ ಹುಡುಗನ ಹಿಂದೆ ಬಂದು ಅವನ ಮನೆಯೊಳಗೆ ಇಸ್ಪಿಟ್ ಆಡುತ್ತ, ಮಾಂಸ ಮದ್ಯದ ಅಮಲಲ್ಲಿ ತೇಲಾಡುತ್ತಿರುವಾಗ ಹುಡುಗನ ಅಪ್ಪ “ಮಗ ಯಾರ್ಲ ಇವುರು” ಅಂದ. “ಇವುರ್‍ಯೆಲ್ಲ ಬೆಂಗಳೂರು ರೌಡಿಗಳು ಕಣಪ್ಪ, ಯಾವ ಕ್ಯಲಸ ಮಾಡಕ್ಕೂ ಹೇಸದಿಲ್ಲ. ಅದೇನೊ ಮಾಡಿ ಇಲ್ಲಿ ಬಂದವುರೆ ಯಾರಿಗೂ ಹೇಳಬ್ಯಾಡ” ಅಂದ. ಕೂಡಲೇ ಆ ಅಪ್ಪ ರೌಡಿಯೊಬ್ಬನ ಜುಬ್ಬ ಹಾಕಿಕೊಂಡ; ಅದಾಗಲೇ ರೌಡಿಗಳೇ ಕೊಟ್ಟ ವಿಸ್ಕಿ ಕುಡಿದಿದ್ದರಿಂದ, ಊರಮುಂದಿನ ಕಟ್ಟೆಮೇಲೆ ಕುಳಿತು “ಅದ್ಯಾವನನ್ನ ಮಗ ಬತ್ತಿರೋ ಬರ್ಲಿ, ಏನಂತ ತಿಳಕಂಡಿದ್ದಿರಿ ಈ ನನ್ನ? ಬಂದು ಮುಟ್ಟಿ ನೋಡಿ ನಿಮ್ಮ ಕತೆ ಏನಾಯ್ತದೆ ಅಂತ ಗೊತ್ತಾಯ್ತದೆ. ಯಂಥಾ ಜನ ತಂದು ನನ್ನ ಮನಿಲಿ ಮಡಿಕಂಡಿದ್ದಿನಿ ಗೊತ್ತೆ? ಕೊಲೆ ಮಾಡಿ ಜಯಿಸಿಗಂಡೋರು ನನ್ನ ಮನೇಲಿ ಇಸ್ಪೀಟ್ ಆಡ್ತಾ ಅವುರೆ ಗೊತ್ತೆ” ಎಂದು ಅವಾಜ್ ಹಾಕಿದ. ಆತನ ಎದುರು ಜನ ಸೇರತೊಡಗಿದರು. ಇತ್ತ ರೌಡಿಗಳು ಹಿತ್ತಲ ಬಾಗಿಲಿಂದ ಎದ್ದುಬಿದ್ದು ಓಡತೊಡಗಿದರು! ಎಂದಿನಂತೆ ಊರ ಜನಕ್ಕೆ ಆ ಕೊಚ್ಚಿಕೊಂಡ ವ್ಯಕ್ತಿ ಮತ್ತೊಂದು ಸುಳ್ಳು ಹೇಳಿದಂತಾಯ್ತು. ಈಗ ಅಂತಹ ಸ್ಥಿತಿಯಿಲ್ಲ. ಫೈಟರ್ ರವಿ ಕಾರಣಕ್ಕೆ ಬೆಂಗಳೂರು ಕೆಲ ಪುಡಿರೌಡಿಗಳು ಬಂದು ಇಲ್ಲಿನ ತೋಟ ತುಡಿಕೆಯಲ್ಲಿ ಬೇಯುತ್ತಿರುವ ಬಾಡಿಗಾಗಿ ಕಾಯಬಹುದು. ಅಂತೂ ಬಿಜೆಪಿ ಪಾಪದಕೊಡ ರೌಡಿಗಳಿಂದ ತುಂಬತೊಡಗಿದೆಯಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...