Homeಅಂಕಣಗಳುಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

- Advertisement -
- Advertisement -

ಸದ್ಯದ ಬಿಜೆಪಿ ಪಾರ್ಟಿಯೊಳಗೆ ರೌಡಿಗಳ ನೂಕುನುಗ್ಗಲು ನೋಡಿದ ಪ್ರತಾಪ ಸಿಮ್ಮ, ರೌಡಿಗಳು ಹೆದರಿ ಬಿಜೆಪಿಯೊಳಕ್ಕೆ ಬರಲುಕಾರಣ ನಮ್ಮ ಮೋದಿಯವರೇ ಎಂದರಂತಲ್ಲಾ; ಮೋದಿ ಉಗ್ರರನ್ನೇ ಅಟ್ಟಾಡಿಸಿಕೊಂಡು ಲಾಠಿ ಬೀಸುತ್ತಿದ್ದಾರೆ, ಆ ಲಾಠಿಗೆ ಸಿಕ್ಕ ಉಗ್ರರ ಕೆನ್ನೆ ಸಿಗಿದು ಹಲ್ಲು ಮುರಿದಿವೆ, ಕಣ್ಣು ಗೋಲಿಯಂತೆ ಆಕಾಶಕ್ಕೆ ಹಾರಿವೆ, ಕಿವಿ ತೂತುಬಿದ್ದು ಕೋಳ ತೊಡಿಸುವಂತಾಗಿವೆ; ಇದನ್ನ ನೋಡಿದ ಕೇಳಿದ ಊರ ರೌಡಿಗಳು, ಸದ್ಯಕ್ಕೆ ನಮ್ಮ ಅಂಗಾಂಗಗಳು ಆರೋಗ್ಯವಾಗಿರಬೇಕಾದರೆ, ಇದ್ದಂತೆಯೇ ಇರಬೇಕಾದರೆ ಮೋದಿ ಪಾರ್ಟಿಗೆ ಹೋಗಿ ಜೈಕಾರ ಹಾಕುವುದು ಬಿಟ್ಟು ಬೇರೆ ದಾರಿಯೇ ಕಾಣುತ್ತಿಲ್ಲ ಆದ್ದರಿಂದ ಬಿಜೆಪಿ ದಾರಿಯೇ ನಮಗೆ ಸೂಕ್ತವೆಂದು ತೀರ್ಮಾನಿಸಿದ್ದಾರೆ ಎಂದರಂತಲ್ಲಾ. ಇದಕ್ಕೆ ಒಂದು ಕಾರಣ ಸೇರಿಸುವುದಾದರೇ ಮೋದಿ ಸರಕಾರದ ಸಮಯದಲ್ಲಿ ಸಾವಿರಾರು ಮುಸ್ಲಿಮರನ್ನು ಸದೆಬಡಿದವರು ದೊಡ್ಡದೊಡ್ಡ ಹುದ್ದೆಗೆ ಏರಿದರು; ಇನ್ನು ಅವರ ಪಾರ್ಟಿಯ ರಾಜಕಾರಣಿಯೊಬ್ಬ ಕೇಸೊಂದರಲ್ಲಿ ಗಡಿಪಾರಾಗಿ ಕೊನೆಗೆ ಗೃಹಮಂತ್ರಿಯಾಗಿ ತನಗಾಗದವರ ಪಟ್ಟಿ ತಯಾರಿಸುತ್ತ ಕುಳಿತಿದ್ದಾರಂತಲ್ಲ. ಇಂತಹ ಜನ ಮುಂದೆ ಏನಾದರೂ ಮಾಡಬಲ್ಲರಾದ್ದರಿಂದ, ಆಡಳಿತ ನಡೆಸುತ್ತಿರುವ ಪಾರ್ಟಿಗೆ ಹೋಗಿ ಅಡಗಿಕೊಳ್ಳುವುದು ಸೂಕ್ತ ಎಂದು ಆಲೋಚಿಸುತ್ತಿರುವಾಗ ಫೈಟರ್ ರವಿ ಎಂಬಾತ ನಾಗಮಂಗಲದ ಕಡೆ ಹೊರಟನಂತಲ್ಲಾ, ಥೂತ್ತೇರಿ.

*****

ಈ ನಾಗಮಂಗಲಕ್ಕೂ ರಾಜಕಾರಣ ಕುಖ್ಯಾತಿಗೂ ಒಂದು ಇತಿಹಾಸವಿದೆ. ಈ ಹಿಂದೆ ಇಲ್ಲಿ ಶಾಸಕ, ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಹೆಚ್.ಟಿ ಕೃಷ್ಣಪ್ಪನವರು, ಹಿಂದೆ ಬಂದರೆ ಒದೆಯದ ಮುಂದೆ ಬಂದರೆ ಹಾಯದ ಗೋವಿನ ರೀತಿಯ ವ್ಯಕ್ತಿ; ಇದನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿದ್ದ ಮತ್ತು ವಕೀಲರಾಗಿದ್ದ ಇವರು ರಾಜಕಾರಣಕ್ಕೆ ಬಂದಿದ್ದು ಕೊಲೆಗಾರ ಅಪರಾಧಿಗಳನ್ನು ಬಿಡಿಸಿದ ಕಾರಣಕ್ಕೆ. ಗುಳುಕಾಯಿ ಹೊಸಳ್ಳಿ ಜನ ಶಾನುಭೋಗರನ್ನೇ ಕೊಲೆ ಮಾಡಿ ಜೈಲಿಗೆ ಹೋದರು. ಅವರನ್ನೆಲ್ಲಾ ನಿರಪರಾಧಿಗಳೆಂದು ತಾಂತ್ರಿಕ ಕಾರಣಗಳ ಮುಖಾಂತರ ಖುಲಾಸೆಗೊಳಿಸಿದರು. ಕೊಲೆಗಾರರನ್ನು ಬಿಡಿಸಿದ ವ್ಯಕ್ತಿ ನಮ್ಮನ್ನ ರಕ್ಷಿಸುತ್ತಾನೆಂದು ಭಾವಿಸಿದ ಜನ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕನನ್ನಾಗಿ ಮಾಡಿದರು. ಇವರ ನಂತರ ಬಂದ ಶಿವರಾಮೇಗೌಡ, ಗಂಗಾಧರಮೂರ್ತಿಯ ಕೊಲೆ ಕೇಸಿನಲ್ಲಿ ಸಿಲುಕಿ ಅಂತೂ ಆರೋಪಮುಕ್ತರಾಗಿ ಬಚಾವಾದರು. ಇವರ ನಂತರ ಬಂದ ಚಲುವರಾಯಸ್ವಾಮಿ ಬಳಿಯಿದ್ದ ಕೆಲ ರೌಡಿಗಳು ನಿಷ್ಠಾವಂತ ನಾಯಿಗಳಂತೆ ಬಾಲ ಅಲ್ಲಾಡಿಸಿದರೆ ಹೊರತು ಯಾರ ಮೇಲೂ ದಾಳಿ ಮಾಡಲಿಲ್ಲ. ಇವರ ನಂತರ ಬಂದ ಸುರೇಶ್‌ಗೌಡ ಹೆಚ್‌ಎಎಲ್‌ನ ವಸತಿ ನಿರ್ಮಾಣದ ಸೊಸೈಟಿ ಹಣದ ಅವ್ಯವಹಾರದ ಜೊತೆಗೆ ರೌಡಿಗಳಿಂದಲೂ ಹಣ ಪಡೆದು ಅದನ್ನು ಹಿಂದಿರುಗಿಸದೇ ಇರುವುದರಿಂದ ಆತನನ್ನ ಸೋಲಿಸಲೆಂದೇ ಫೈಟರ್ ರವಿ ಎಂಬ ರೌಡಿ ಬಂದು ಇಡೀ ತಾಲೂಕಿನ ತುಂಬ ಕಟೌಟ್ ಹಾಕಿದ್ದನಂತಲ್ಲಾ. ಏನು ಮಾಡಿದರೂ ರೌಡಿಯಂತೆ ಕಾಣದೆ ಮಠದ ಮೃತ ಸ್ವಾಮಿಯಂತೆ ಕಾಣುತ್ತಿದ್ದಾನೆ ಎಂದು ಜನ ನಗುತ್ತಿದ್ದಾರಲ್ಲಾ, ಥೂತ್ತೇರಿ.

*****

ಹಿಂದೆ ಹೆಚ್ಚು ಯುದ್ಧಗಳಾಗುತ್ತಿದ್ದವು; ದೈಹಿಕವಾಗಿ ಭಲಾಢ್ಯವಾಗಿದ್ದ ಮತ್ತು ತೋಳು ತಿಮಿರಿನ ಜನ ಸೈನ್ಯಕ್ಕೆ ಸೇರಿ ಹತರಾಗುತ್ತಿದ್ದರು. ಅವರ ಹೆಂಡತಿಯರು ಅನಿವಾರ್ಯವಾಗಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು. ಇವರೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಶೋಷಿತ ಸಮುದಾಯಗಳ ಜನ. ಸ್ವಾತಂತ್ರ್ಯಾನಂತರ ರಾಜಗುರುಗಳು ನಿರ್ನಾಮವಾಗಿ ಸೈನಿಕರು ಇಲ್ಲವಾದ ಕಾರಣ ಆ ಮನಸ್ಥಿತಿಯವರು ಊರುಗಳಲ್ಲೇ ರೌಡಿಗಳಾದರು; ಅವರು ಆ ತರಹ ಆಗಲು ಒಂದು ಸಣ್ಣ ಕಾರಣ ಸಾಕು, ಮುಂದೆ ಪೊಲೀಸರೇ ಬೆಳೆಸಿ ಭೂಗತಲೋಕ ಸೇರಿಸುತ್ತಾರೆ. ಈ ಭೂಗತ ಲೋಕದ ಕೃತ್ಯಗಳು ಭಯಾನಕ. ರೌಡಿಗಳ ಆಯಸ್ಸು ಮುಗಿದು ಸತ್ತ ಉದಾಹರಣೆ ವಿರಳ. ಭೂಗತ ಲೋಕದ ರಾಜ-ಡಾನ್ ದೈತ್ಯ ದೇಹಿಯಾಗಿರುತ್ತಾನೆ. ಜಯರಾಜ್, ಬಲರಾಮ್, ಫಯಾಜ್, ಕೊತ್ವಾಲ, ಶಿವರಾಂ, ಸುನಿಲ್ ಇತ್ಯಾದಿ ವ್ಯಕ್ತಿಗಳ ಆಕಾರ ನೋಡಿದರೆ ನಿಮಗೆ ತಿಳಿಯುತ್ತದೆ. ಆದರೆ ದೇಹಾಕೃತಿಯಲ್ಲ ದುರ್ಬಲವಾಗಿದ್ದ ಮುತ್ತಪ್ಪ ರೈ ಬುದ್ಧಿವಂತಿಕೆ ಉಪಯೋಗಿಸಿ ಭೂಗತಲೋಕಕ್ಕೆ ಪಿಸ್ತೂಲು ತಂದ ವ್ಯಕ್ತಿ. ಅದನ್ನ ಆತನೇ ಉಪಯೋಗಿಸಬೇಕಿಲ್ಲ; ಕಾಸುಕೊಟ್ಟು ನಿರ್ದೇಶನ ನೀಡಿದರೆ ಸಾಕು; ಯಾವ ಹುಡುಗನಾದರೂ ಆ ಕೆಲಸ ಮಾಡಿ ತಲೆಮರೆಸಿಕೊಳ್ಳಬಲ್ಲ. ಇಂತಹ ಕೆಲಸವನ್ನ ದುಬಾಯಿಯಲ್ಲಿ ಕುಳಿತು ಮಾಡಿ ಯಾವ ಕೇಸುಗಳನ್ನು ಕಡಿಮೆ ಅಂಟಿಸಿಕೊಂಡು ಬದುಕಿದವನು ಈ ಮುತ್ತಪ್ಪ ರೈ. ಅಂತಹ ರೈಗೂ ನಾಗಮಂಗಲದ ಕಡೆ ಚಿಲ್ಲರೆ ರಾಜಕಾರಣಿಯೊಬ್ಬ ಕೋಟ್ಯಂತರ ರೂಪಾಯಿಗಳ ನಾಮ ಎಳೆದು, ನಾಳೆ ಕೊಡುತ್ತೇನೆ ನಾಡಿದ್ದು ಗ್ಯಾರಂಟಿ ಎಂದು ಹೇಳುತ್ತಿರುವಾಗಲೇ ಮುತ್ತಪ್ಪ ರೈ ದೇಹ ತ್ಯಜಿಸಿದ. ಅಂತಹ ಮುತ್ತಪ್ಪನಿಗೆ ಮಣ್ಣು ತಿನ್ನಿಸಿದವರು ಈ ನಾಗಮಂಗಲದ ಮಣ್ಣಿನವನು ಅನ್ನುವುದಾದರೆ ಇನ್ನ ಬಿಜೆಪಿ ರೌಡಿಗಳು ಇಲ್ಲಿ ಉದ್ಧಾರವಾಗುವುದುಂಟೆ, ಥೂತ್ತೇರಿ.

*****

ಬೆಂಗಳೂರಿಂದ ಎರಡೂವರೆ ಗಂಟೆ ಪ್ರಯಾಣದಷ್ಟು ದೂರವಿರುವ ನಾಗಮಂಗಲ ಕೆಲ ರೌಡಿಗಳಿಗೆ ಸುರಕ್ಷಿತ ಜಾಗ. ದರೋಡೆ ಕೇಸೊಂದರಿಂದ ಪರಾರಿಯಾಗಿ ಎಲ್ಲಿ ಅಡಗಿಕೊಳ್ಳಬೇಕೆಂದು ರೌಡಿಗಳೆಲ್ಲಾ ಚರ್ಚಿಸುತ್ತಿರುವಾಗ ಇವರಿಗೆ ಕಾಫಿ, ಸಿಗರೇಟು ತಂದುಕೊಡುತ್ತಿದ್ದ ಹುಡುಗನೊಬ್ಬ ,”ಸಾರ್ ನಾಗಮಂಗಲದತ್ರ ಇರೋ ನಮ್ಮೂರಲ್ಲಿರಿ, ಅಲ್ಲಿಗೆ ಯಾರೂ ಬರಕ್ಕಾಗಲ್ಲ” ಎಂದ. ಮರು ಮಾತನಾಡದ ರೌಡಿಗಳು ಆ ಮುಗ್ದ ಹುಡುಗನ ಹಿಂದೆ ಬಂದು ಅವನ ಮನೆಯೊಳಗೆ ಇಸ್ಪಿಟ್ ಆಡುತ್ತ, ಮಾಂಸ ಮದ್ಯದ ಅಮಲಲ್ಲಿ ತೇಲಾಡುತ್ತಿರುವಾಗ ಹುಡುಗನ ಅಪ್ಪ “ಮಗ ಯಾರ್ಲ ಇವುರು” ಅಂದ. “ಇವುರ್‍ಯೆಲ್ಲ ಬೆಂಗಳೂರು ರೌಡಿಗಳು ಕಣಪ್ಪ, ಯಾವ ಕ್ಯಲಸ ಮಾಡಕ್ಕೂ ಹೇಸದಿಲ್ಲ. ಅದೇನೊ ಮಾಡಿ ಇಲ್ಲಿ ಬಂದವುರೆ ಯಾರಿಗೂ ಹೇಳಬ್ಯಾಡ” ಅಂದ. ಕೂಡಲೇ ಆ ಅಪ್ಪ ರೌಡಿಯೊಬ್ಬನ ಜುಬ್ಬ ಹಾಕಿಕೊಂಡ; ಅದಾಗಲೇ ರೌಡಿಗಳೇ ಕೊಟ್ಟ ವಿಸ್ಕಿ ಕುಡಿದಿದ್ದರಿಂದ, ಊರಮುಂದಿನ ಕಟ್ಟೆಮೇಲೆ ಕುಳಿತು “ಅದ್ಯಾವನನ್ನ ಮಗ ಬತ್ತಿರೋ ಬರ್ಲಿ, ಏನಂತ ತಿಳಕಂಡಿದ್ದಿರಿ ಈ ನನ್ನ? ಬಂದು ಮುಟ್ಟಿ ನೋಡಿ ನಿಮ್ಮ ಕತೆ ಏನಾಯ್ತದೆ ಅಂತ ಗೊತ್ತಾಯ್ತದೆ. ಯಂಥಾ ಜನ ತಂದು ನನ್ನ ಮನಿಲಿ ಮಡಿಕಂಡಿದ್ದಿನಿ ಗೊತ್ತೆ? ಕೊಲೆ ಮಾಡಿ ಜಯಿಸಿಗಂಡೋರು ನನ್ನ ಮನೇಲಿ ಇಸ್ಪೀಟ್ ಆಡ್ತಾ ಅವುರೆ ಗೊತ್ತೆ” ಎಂದು ಅವಾಜ್ ಹಾಕಿದ. ಆತನ ಎದುರು ಜನ ಸೇರತೊಡಗಿದರು. ಇತ್ತ ರೌಡಿಗಳು ಹಿತ್ತಲ ಬಾಗಿಲಿಂದ ಎದ್ದುಬಿದ್ದು ಓಡತೊಡಗಿದರು! ಎಂದಿನಂತೆ ಊರ ಜನಕ್ಕೆ ಆ ಕೊಚ್ಚಿಕೊಂಡ ವ್ಯಕ್ತಿ ಮತ್ತೊಂದು ಸುಳ್ಳು ಹೇಳಿದಂತಾಯ್ತು. ಈಗ ಅಂತಹ ಸ್ಥಿತಿಯಿಲ್ಲ. ಫೈಟರ್ ರವಿ ಕಾರಣಕ್ಕೆ ಬೆಂಗಳೂರು ಕೆಲ ಪುಡಿರೌಡಿಗಳು ಬಂದು ಇಲ್ಲಿನ ತೋಟ ತುಡಿಕೆಯಲ್ಲಿ ಬೇಯುತ್ತಿರುವ ಬಾಡಿಗಾಗಿ ಕಾಯಬಹುದು. ಅಂತೂ ಬಿಜೆಪಿ ಪಾಪದಕೊಡ ರೌಡಿಗಳಿಂದ ತುಂಬತೊಡಗಿದೆಯಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಅನಂತನಾಗ್ ಮೋದಿ ಮೆಚ್ಚಿದ್ದರಲ್ಲಿ ಅಚ್ಚರಿಯೇನಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...