Homeಮುಖಪುಟಮೋದಿ ಸರಕಾರದ ಗ್ರೇಟ್ ಇಂಡಿಯನ್ ಡಾಟಾ ಸರ್ಕಸ್!

ಮೋದಿ ಸರಕಾರದ ಗ್ರೇಟ್ ಇಂಡಿಯನ್ ಡಾಟಾ ಸರ್ಕಸ್!

- Advertisement -
- Advertisement -

| ಜಾಹ್ನವಿ ಸೇನ್ | (ಕೃಪೆ: ದಿ ಕ್ವಿಂಟ್)
| ಅನುವಾದ: ನಿಖಿಲ್ ಕೋಲ್ಪೆ |

ನರೇಂದ್ರ ಮೋದಿ ಸರಕಾರ ನಮ್ಮ ಕುರಿತು ಎಲ್ಲವನ್ನೂ ತಿಳಿಯಲು ಬಯಸುತ್ತಿದೆ- ನಾವು ಮತ್ತು ನಮ್ಮ ತಂದೆ-ತಾಯಿ ಹುಟ್ಟಿದ್ದು ಯಾವಾಗ, ಎಲ್ಲಿ, ನಾವು ವಾಸಿಸುತ್ತಿರುವುದು ಎಲ್ಲಿ, ನಾವು ಏನು ಮಾಡುತ್ತಿದ್ದೇವೆ, ನಮ್ಮ ಕುಟುಂಬದ ಸದಸ್ಯರ ವಿವರಗಳು, ನಮ್ಮ ಮೊಬೈಲ್ ನಂಬರ್… ಇತ್ಯಾದಿ ಇತ್ಯಾದಿ. 133 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಇದೊಂದು ಬೆಟ್ಟದಂತಹಾ, (ಬೆಟ್ಟದಷ್ಟು ಖರ್ಚಿನ) ಕಾರ್ಯಾಚರಣೆ. ಆದರೆ, ಈ ವೆಚ್ಚ ಅತ್ಯಂತ ಅಗತ್ಯ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್)ಯನ್ನು 2020ರಲ್ಲಿ ನವೀಕರಿಸಲೇಬೇಕು ಎಂದು ಕೇಂದ್ರವು ನಿರ್ಧರಿಸಿದೆ.

ರಾಷ್ಟ್ರವ್ಯಾಪಿ ಎನ್‍ಆರ್‍ಸಿಯನ್ನು 2024ರ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ “ಭಾರತೀಯ ಜನತೆ”ಗೆ “ಭರವಸೆ” ನೀಡಿದ್ದಾರೆ. ಎನ್‍ಪಿಆರ್ ಮತ್ತು ಅದಕ್ಕೆ ತಳಕು ಹಾಕಲಾಗಿರುವ ಯೋಜಿತ ಎನ್‍ಆರ್‍ಸಿಯು ಭಾರೀ ಪ್ರಮಾಣದಲ್ಲಿ ಮಾಹಿತಿಯನ್ನು ಕಲೆಹಾಕುವ ಭಾರೀ ಕಾರ್ಯಾಚರಣೆಯಾಗಿದೆ. ದೇಶದಲ್ಲಿ ವಾಸಿಸುವ ಎಲ್ಲರ ವೈಯಕ್ತಿಕ ಮಾಹಿತಿಯನ್ನು ಅದು ಸರಕಾರಕ್ಕೆ ಎಟಕುವಂತೆ ಮಾಡಲಿದೆ. ಈ ಮಾಹಿತಿಯನ್ನು ಸರಕಾರ (ಆ ಮೂಲಕ ಆಳುವ ಪಕ್ಷ) ತಾನು ಬಯಸಿದಂತೆ ಬಳಸುವ ಸಾಧ್ಯತೆ ಇರುತ್ತದೆ- ಅದು ಹಲವರು ಭಯಪಡುತ್ತಿರುವಂತೆ, ಜನರಿಗೆ ಪೌರತ್ವ ನಿರಾಕರಿಸಲು ಆಗಿರಬಹುದು ಆಥವಾ ಜನಸಂಖ್ಯಾಧರಿತ ವಿಶ್ಲೇಷಣೆಯ ಮೂಲಕ ವಿವಿಧ ಪ್ರದೇಶಗಳ ಮತದಾರರನ್ನು ಗುರಿಪಡಿಸಲು ಅಥವಾ ಬೆದರಿಸಲು ಆಗಿರಬಹುದು.

ಆದರೆ, ಆಳುವ ಸರಕಾರ ಇಷ್ಟಪಡದ ಧಾರಾಳ ಅಂಕಿಅಂಶಗಳಿವೆ. 2019ರಲ್ಲಿ ಉತ್ತಮವಾದ ಯೋಜನೆಗಳನ್ನು ರೂಪಿಸಲು ನೆರವಾಗಬಲ್ಲ ಮತ್ತು ಆರ್ಥಿಕತೆಯು ಯಾವ ರೀತಿಯ ಸಾಧನೆಯನ್ನು ಮಾಡುತ್ತಿದೆ (ಅಥವಾ ಮಾಡುತ್ತಿಲ್ಲ) ಎಂಬ ಬಗ್ಗೆ ಭಾರತೀಯರಿಗೆ ಸ್ಪಷ್ಟವಾದ ಚಿತ್ರಣ ನೀಡಬಹುದಾದ ಅತ್ಯಂತ ನಿರ್ಣಾಯಕವಾದ ಅಂಕಿಅಂಶಗಳನ್ನು ಮುಚ್ಚಿಹಾಕಿದ ಆರೋಪವನ್ನು ಮೋದಿ ಸರಕಾರ ಮತ್ತೆಮತ್ತೆ ಎದುರಿಸಿದೆ. ಸರಕಾರ ತನಗೆ ಕೆಲವು ಅಂಕಿಅಂಶಗಳು ಇಷ್ಟವಿಲ್ಲದೇಹೋದಾಗ, ನೇರವಾಗಿ ಅಂತಹಾ ಅಂಕಿಅಂಶಗಳು ಅಸ್ತಿತ್ವದಲ್ಲೇ ಇಲ್ಲ ಎಂದು ನಾಟಕವಾಡಲು ನಿರ್ಧರಿಸುತ್ತದೆ.

ಆದುದರಿಂದ, ಮೋದಿ ಮತ್ತು ಶಾ ಎನ್‍ಪಿಆರ್‍ನ ಮೇಲೆ ಗಮನ ಕೇಂದ್ರೀಕರಿಸುತ್ತಿರುವಾಗ, ಆ ಅಂಕಿಅಂಶಗಳನ್ನು ಅಪಾಯಕಾರಿ, ಬಹುಸಂಖ್ಯಾತ ಉದ್ದೇಶಗಳಿಗೆ ಬಳಸಲಾಗಬಹುದು ಎಂಬ ಭಯವನ್ನು ಹಲವರು ವ್ಯಕ್ತಪಡಿಸುತ್ತಿರುವಾಗ, ಅವುಗಳನ್ನು ಮುಖ್ಯವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮಾತ್ರ ಬಳಸಲಾಗುತ್ತದೆ ಎಂದು ಕೇಂದ್ರ ಸಚಿವರುಗಳು ಹೇಳಿಕೊಳ್ಳುತ್ತಿರುವಾಗ, ಸರಕಾರ ಗಮನಹರಿಸಲೇಬೇಕಾಗಿದ್ದ , ಆದರೆ ಕುರುಡಾಗಿರುವ ಇತರ ಕೆಲವು ಅಂಕಿಅಂಶಗಳ ಕುರಿತು ಇಲ್ಲಿ ಕಣ್ಣುಹಾಯಿಸಲಾಗಿದೆ.

ನಿರುದ್ಯೋಗ

ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‍ಎಸ್‍ಎಸ್‍ಓ) ತನ್ನ ಹೊಸ ನಿಯತಕಾಲಿಕ ಕಾರ್ಮಿಕ ಬಲದ ಸಮೀಕ್ಷೆಯನ್ನು 2017ರ ಜುಲೈ ಮತ್ತು 2018ರ ಜೂನ್ ನಡುವೆ ನಡೆಸಿತು. ಈ ಅವಧಿಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ ಏಕೆಂದರೆ, ಅದು ನೋಟು ಆಮಾನ್ಯೀಕರಣದ ಪರಿಣಾಮವು ಭಾರತದ ಕಾರ್ಮಿಕ ವರ್ಗದ ಮೇಲೆ ಏನಾಯಿತು ಎಂಬುದನ್ನು ತೋರಿಸಿಕೊಡುತ್ತಿತ್ತು. ಮೋದಿ ಸರಕಾರ ಈ ಆಂಕಿಅಂಶಗಳನ್ನು ಬಹಿರಂಗಪಡಿಸಲು ಹೆದರಿ ನಿರಾಕರಿಸಿದಾಗ, ರಾಷ್ಟ್ರೀಯ ಅಂಕಿಅಂಶ ಆಯೋಗದ ಇಬ್ಬರು ಸದಸ್ಯರು ರಾಜೀನಾಮೆ ನೀಡಿದರು. ಆದರೂ ಸರಕಾರ ಜಪ್ಪಯ್ಯ ಎನ್ನಲಿಲ್ಲ.

ಜನವರಿ 2019ರಲ್ಲಿ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆ ಈ ಸಮೀಕ್ಷೆಯ ಫಲಿತಾಂಶವನ್ನು ಸರಣಿ ಲೇಖನಗಳ ಮೂಲಕ ಸೋರಿಕೆ ಮಾಡಿತು. ನಿರುದ್ಯೋಗವು ಕಳೆದ 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಎನ್‍ಎಸ್‍ಎಸ್‍ಓ ಕಂಡುಕೊಂಡಿತ್ತು ಮತ್ತು ಯುವಜನರಲ್ಲಿ ನಿರುದ್ಯೋಗದ ಪ್ರಮಾಣವು ಹಿಂದಿನ ವರ್ಷಗಳಿಗಿಂತ ಗಣನೀಯವಾಗಿ ಹೆಚ್ಚಿತ್ತು.

ಕೇಂದ್ರವು ಕೊನೆಗೂ ಮೇ 2019ರಲ್ಲಿ, ಸಾರ್ವತ್ರಿಕ ಚುನಾವಣೆಗಳು ಮುಗಿದು, ನರೇಂದ್ರ ಮೋದಿ ಸರಕಾರ ಪುನರಾಯ್ಕೆಯಾದ ಬಳಿಕವಷ್ಟೇ ಈ ಅಂಕಿಅಂಶಗಳನ್ನು ಬಹಿರಂಗಗೊಳಿಸಿತು. ಆಗಲೂ ಸರಕಾರವು ಸಮೀಕ್ಷೆಯ ವಿಧಾನ ಬದಲಾಗಿರುವುದರಿಂದ ಅಂಕಿಅಂಶಗಳ ಹೋಲಿಕೆ ಮಾಡಲಾಗದು ಎಂಬ ಸಬೂಬು ನೀಡಿ, ವಿಷಯವನ್ನು ತಣ್ಣಗಾಗಿಸಿತು. ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಮೇಲೂ ಸರಕಾರದಲ್ಲಿ ಯಾರೂ ಈ ವಿಷಯದ ಬಗ್ಗೆ ಗಮನಹರಿಸಿಲ್ಲ ಆಥವಾ ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ತಾವೇನು ಮಾಡುತ್ತಿದ್ದೇವೆ ಎಂಬ ಬಗ್ಗೆ ತುಟಿ ಬಿಚ್ಚಿಲ್ಲ.

ಗ್ರಾಹಕ ಖರ್ಚುಗಳು

ತೀರಾ ಇತ್ತೀಚಿನ ವಿವಾದವು ಅಂಕಿಅಂಶಗಳ ಕುರಿತು ಮೋದಿ ಸರಕಾರದ ಪ್ರವೃತ್ತಿಯನ್ನು ಎತ್ತಿತೋರಿಸಿದ್ದು, ಗ್ರಾಹಕ ವೆಚ್ಚಗಳ ಕುರಿತು ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯ 2017-18ರ ಸಮೀಕ್ಷೆಯ ಮುಜುಗರ ಉಂಟುಮಾಡುವ ಅಂಕಿಅಂಶಗಳತ್ತ ಸರಕಾರ ಕುರುಡುಗಣ್ಣು ಬೀರಿದೆ. ಈ ಬಾರಿ ಕೂಡಾ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆಯೇ ವಿಷಯವನ್ನು ಬಹಿರಂಗಗೊಳಿಸಿದ್ದು, ಗ್ರಾಹಕರು ಮಾಡುವ ಖರ್ಚು ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದಿರುವುದನ್ನು ಅಂಕಿಅಂಶಗಳು ತೋರಿಸಿಕೊಡುತ್ತವೆ. ಇದಕ್ಕೆ ಕಾರಣ ಗ್ರಾಮೀಣ ಬೇಡಿಕೆ ಕುಸಿತವೆಂದು ಆಂಕಿಅಂಶಗಳು ಹೇಳುತ್ತವೆ.

ಇದನ್ನು ನಿಭಾಯಿಸಲು ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ಬದಲು ಸರಕಾರವು ಈ ಬಾರಿ, ದತ್ತಾಂಶಗಳ ಗುಣಮಟ್ಟ ಸರಿಯಿಲ್ಲವೆಂಬ ಸಬೂಬು ನೀಡಿ ಸಮೀಕ್ಷೆಯ ಫಲಿತಾಂಶವನ್ನು ತಿರಸ್ಕರಿಸಿದೆ. ಭಾರತದಲ್ಲಿ ಸರಕಾರವೊಂದು ರಾಷ್ಟ್ರೀಯ ಅಂಕಿಅಂಶ ಕಚೇರಿಯ ಸಮೀಕ್ಷೆಯನ್ನು ತಿರಸ್ಕರಿಸಿರುವುದು ಇದೇ ಮೊದಲ ಬಾರಿ.

ಜಿಡಿಪಿ ಬೆಳವಣಿಗೆ

ನಿಮಗೆ ಇಷ್ಟವಿಲ್ಲದ ಅಂಕಿಅಂಶಗಳನ್ನು ನಿಭಾಯಿಸುವ ಇನ್ನೊಂದು ವಿಧಾನವೆಂದರೆ ಅದನ್ನು ಸಂಪೂರ್ಣವಾಗಿ ಬದಲಿಸುವುದು ಎಂದು ಮೋದಿ ಸರಕಾರ ತೋರಿಸಿಕೊಟ್ಟಿದೆ. ಈ ರೀತಿ ಮಾಡುವುದರಿಂದ ನೀವು ಅಂಕಿಅಂಶಗಳನ್ನು ತಡೆಹಿಡಿದಿದ್ದೀರಿ ಎಂದು ಯಾರೂ ಆರೋಪಿಸುವಂತಿಲ್ಲ ಮತ್ತು ನಿಮ್ಮ ಸರಕಾರವು ಪರಿಸ್ಥಿತಿಯನ್ನು ಹದಗೆಡಿಸಿದೆ ಎಂಬ ಟೀಕೆಯನ್ನೂ ನಿಭಾಯಿಸುವ ಅಗತ್ಯವಿರುವುದಿಲ್ಲ!

2018ರ ಕೊನೆಯ ಭಾಗದಲ್ಲಿ ಸರಕಾರವು ಹೊಸ ‘ಹಿಂದಿನ ಸರಣಿ’ಯ ಜಿಡಿಪಿಯ ‘ಆಧಿಕೃತ’ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿತು. ಆದರ ಪ್ರಕಾರ, ಮನಮೋಹನ್ ಸಿಂಗ್ ಸರಕಾರದಲ್ಲಿ ಜಿಡಿಪಿ ಬೆಳವಣಿಗೆಯು ಹಿಂದೆಯೇ ದಾಖಲಿಸಲಾಗಿರುವುದಕ್ಕಿಂತ ಕಡಿಮೆಯಿತ್ತು! ಹಲವಾರು ತಜ್ಞರು ಈ ಅಂಕಿಅಂಶಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿದ್ದಾರೆ ಮಾತ್ರವಲ್ಲ; ಇದನ್ನು ಮೈಕ್ರೋ ಇಕನಾಮಿಕ್ಸ್‍ನ ಮೂಲಭೂತ ನಿಯಮಗಳನ್ನು ತಲೆಕೆಳಗೆ ಮಾಡಿ ನಿಲ್ಲಿಸುವುದು ಎಂದೂ ಟೀಕಿಸಿದ್ದಾರೆ.

ದೇಶದ ಜಿಡಿಪಿ ಬೆಳವಣಿಗೆ ಐದು ಶೇಕಡಾಕ್ಕಿಂತಲೂ ಕೆಳಮಟ್ಟಕ್ಕೆ ಇಳಿದಿರುವುದಕ್ಕೆ ಕಾರಣಗಳನ್ನು ಹುಡುಕುವ ಬದಲು, ಕೇಂದ್ರ ಸರಕಾರವು ಈ ಅಂಕಿಅಂಶಗಳು ಅಷ್ಟೊಂದು ಕೆಟ್ಟದಾಗಿ ಕಾಣದಂತೆ ಮಾಡಲು ಪ್ರಯತ್ನಿಸಿದಂತೆ ಕಾಣುತ್ತದೆ.

ಲಿಂಚಿಂಗ್

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‍ಸಿಅರ್‍ಬಿ) ತನ್ನ 2016ರ “ಭಾರತದಲ್ಲಿ ಅಪರಾಧ” ಎಂಬ ವರದಿಯನ್ನು ಬರೋಬ್ಬರಿ ಮೂರು ವರ್ಷ ತಡವಾಗಿ ಪ್ರಕಟಿಸಿತು. ಆದರೂ, ತಾನು ಸಂಗ್ರಹಿಸಿದ ಎಲ್ಲಾ ಮಾಹಿತಿಗಳನ್ನು ಪ್ರಕಟಿಸದಿರಲು ನಿರ್ಧರಿಸಿತು. ಗುಂಪಿನಿಂದ ಹಲ್ಲೆ/ಹತ್ಯೆ, ಪ್ರಭಾವಿ ಜನರಿಂದ ನಡೆದ ಕೊಲೆಗಳು, ಖಾಪ್ ಪಂಚಾಯತ್‍ಗಳು ಆದೇಶಿಸಿದ ಹತ್ಯೆಗಳು ಇತ್ಯಾದಿ ಕೆಲವು ನಿರ್ದಿಷ್ಟ ಉಪ ಶೀರ್ಷಿಕೆಗಳ ಅಡಿಯಲ್ಲಿ ಯಾವುದೇ ಅಂಕಿಅಂಶಗಳನ್ನು ಪ್ರಕಟಿಸಲಿಲ್ಲ.

ರೈತರ ಆತ್ಮಹತ್ಯೆಗಳು

ಮೇಲೆ ಉಲ್ಲೇಖಿಸಲಾಗಿರುವ ಎನ್‍ಸಿಅರ್‍ಬಿ ವರದಿಯಲ್ಲಿಯೇ ರೈತರ ಆತ್ಮಹತ್ಯೆ ಕುರಿತ ವಿಭಾಗವೊಂದಿದೆ. ವರದಿಯ ಉಳಿದ ಭಾಗಗಳಂತೆ, ಈ ವಿಭಾಗದ ಅಂಕಿಅಂಶಗಳು ಮೂರು ವರ್ಷಗಳ ಕಾಲ ತಡವಾಗಿರುವುದರ ಹೊರತಾಗಿಯೂ ಅಪೂರ್ಣವಾಗಿವೆ. 2016ರ ವರ್ಷಕ್ಕೆ ರೈತರ ಸಾವಿಗೆ ಕಾರಣಗಳ ವಿಭಾಗವನ್ನೇ ಎನ್‍ಸಿಅರ್‍ಬಿ ಕೈಬಿಟ್ಟಿದೆ. ಈ ಮಾಹಿತಿಯು ರೈತರ ಆತ್ಮಹತ್ಯೆಗಳು ಏಕೆ ಮುಂದುವರಿದಿವೆ ಮತ್ತು ರೈತರ ಸಂಕಷ್ಟಗಳ ನಿವಾರಣೆಗೆ ಏನು ಮಾಡಬಹುದು ಎಂಬ ಕುರಿತು ಒಳನೋಟವನ್ನು ಒದಗಿಸಬಹುದಾಗಿತ್ತು. ಈ ವರದಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಹೇಳಲಾಗಿದ್ದು, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಆತ್ಮಹತ್ಯೆ ಸೊನ್ನೆ ಎಂದು ಹೇಳಲಾಗಿದೆ. ಆದರೆ, ನೈಜ ವರದಿಗಳು ಇದಕ್ಕೆ ವ್ಯತಿರಿಕ್ತವಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಕದನ ವಿರಾಮಕ್ಕೆ 15 ಅಂಶಗಳ ಪ್ರಸ್ತಾಪ ಮುಂದಿಟ್ಟ ಟ್ರಂಪ್

ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭಗೊಂಡು ನಾಲ್ಕು ವಾರಗಳು ಪೂರ್ಣಗೊಳ್ಳುವಾಗ, ಈವರೆಗೆ ಸುಮಾರು 2000 ಜೀವಗಳನ್ನು ಬಲಿ ಪಡೆದ ಹಾಗೂ ಜಾಗತಿಕವಾಗಿ ಇಂಧನ ಸಮಸ್ಯೆಯನ್ನು ಹುಟ್ಟು ಹಾಕಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಇರಾನ್‌ ಮುಂದೆ...

ಗುಜರಾತ್: ತೀವ್ರ ವಿರೋಧದ ನಡುವೆಯೂ ಏಕರೂಪ ನಾಗರೀಕ ಸಂಹಿತೆ ಮಸೂದೆ ಅಂಗೀಕಾರ; ಇದು ‘ಮುಸ್ಲಿಂ ವಿರೋಧಿ’ ಎಂದ ಕಾಂಗ್ರೆಸ್

ಗುಜರಾತ್ ವಿಧಾನಸಭೆ ಮಂಗಳವಾರ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದೆ. ಇದು ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನು ಚೌಕಟ್ಟನ್ನು ರಚಿಸುವ ಗುರಿಯನ್ನು...

ಅಜಿತ್ ಪವಾರ್ ಸಾವಿನ ಕುರಿತು ಹಲವು ಅನುಮಾನ : ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಈ ಹಿಂದೆ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿದ್ದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಮಂಗಳವಾರ (ಮಾ.24) ಬೆಂಗಳೂರಿನ...

ಇಂಧನ ಕೊರತೆ ವದಂತಿ: ಆತಂಕದಿಂದ ಕುಕ್ಕರ್, ಹಾಲಿನ ಡಬ್ಬಿ, ನೀರಿನ ಬಕೆಟ್ ಗಳಲ್ಲಿ ಇಂಧನ ಸಂಗ್ರಹಣೆಗೆ ಮುಂದಾದ ಜನರು

ಇಂಧನ ಕೊರತೆಯ ವದಂತಿಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಜನರು ಕುಕ್ಕರ್, ಅಡುಗೆ ಪಾತ್ರೆ, ಹಾಲಿನ ಡಬ್ಬಿಗಳು, ನೀರಿನ ಟ್ಯಾಂಕರ್, ನೀರಿನ ಬಕೆಟ್ ಮತ್ತು ಬ್ಯಾರೆಲ್‌ಗಳಂತಹ ಅಡುಗೆ ಸಲಕರಣೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು...

ಪಂಜಾಬ್: ಮಹಿಳೆಗೆ ಲೈಂಗಿಕ ಶೋಷಣೆ, ಬೆದರಿಕೆ ಆರೋಪ; ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಬಂಧನ 

ಕಳೆದ ಸೆಪ್ಟೆಂಬರ್‌ನಿಂದ ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಅವರನ್ನು ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸನೂರ್‌ನಿಂದ ಮೊದಲ ಬಾರಿಗೆ ಶಾಸಕರಾಗಿರುವ ಪಠಣಮಜ್ರಾ...

ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ : ಕಾಂಗ್ರೆಸ್ ಆರೋಪ

ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಿರುವನಂತಪುರಂ ಜಿಲ್ಲೆಯ ನೇಮಮ್...

2026ರ ಮೊದಲ 74 ದಿನಗಳಲ್ಲಿ 170 ಕಸ್ಟಡಿ ಸಾವುಗಳು ವರದಿ; ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ 

2026 ರ ಮೊದಲ 74 ದಿನಗಳಲ್ಲಿ (ಜನವರಿ 1 ರಿಂದ ಮಾರ್ಚ್ 15 ರವರೆಗೆ) ಭಾರತದಾದ್ಯಂತ ಒಟ್ಟು 170 ಕಸ್ಟಡಿ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ. ಗೃಹ...

ಮುಸ್ಲಿಂ ಗ್ಯಾಸ್ ಏಜೆನ್ಸಿ ಮಾಲೀಕರನ್ನು ಬಾಂಗ್ಲಾದೇಶಿ ಎಂದು ನಿಂದನೆ; ಬುಲಂದ್‌ಶಹರ್‌ನಲ್ಲಿ ಹಿಂದೂ ರಕ್ಷಾ ದಳ ನಾಯಕನ ಬಂಧನ

ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಹಿಂದೂ ರಕ್ಷಾ ದಳದ ನಾಯಕನೊಬ್ಬ ಮುಸ್ಲಿಂ ಗ್ಯಾಸ್ ಏಜೆನ್ಸಿ ಮಾಲೀಕರನ್ನು "ಬಾಂಗ್ಲಾದೇಶಿ" ಎಂದು ಕರೆದು ಬೆದರಿಕೆ ಹಾಕುತ್ತಿರುವ ವೀಡಿಯೊ ಕಾಣಿಸಿಕೊಂಡ ನಂತರ ಆತನನ್ನು ಬಂಧಿಸಲಾಗಿದೆ. ಜಿಲ್ಲೆಯ ಖುರ್ಜಾ ನಗರದಲ್ಲಿ...

ಭಾರತ 6ನೇ ಅತ್ಯಂತ ಕಲುಷಿತ ರಾಷ್ಟ್ರ; ಉತ್ತರ ಪ್ರದೇಶದ ಲೋನಿ ವಿಶ್ವದ ಅತ್ಯಂತ ಕಲುಷಿತ ನಗರ: ವರದಿ

ಪ್ರಮುಖ ವಾಯು ಮಾಲಿನ್ಯಕಾರಕ ಸೂಕ್ಷ್ಮ ಕಣಗಳ ಮಟ್ಟದಲ್ಲಿ ಭಾರತ ಆರನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದ್ದರೆ, ಉತ್ತರ ಪ್ರದೇಶದ ಲೋನಿ ಜಗತ್ತಿನಾದ್ಯಂತ ಅತ್ಯಂತ ಕಲುಷಿತ ನಗರವಾಗಿದೆ. ದೆಹಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ವಿಶ್ವ ವಾಯು...

ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿ ಹರೀಶ್ ರಾಣಾ ದೆಹಲಿ ಏಮ್ಸ್‌ನಲ್ಲಿ ನಿಧನ

ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸಿ, ಅಂತಿಮವಾಗಿ 2026ರ ಮಾರ್ಚ್ 11ರಂದು ನಿಷ್ಕ್ರಿಯ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದ 32 ವರ್ಷದ ಯುವಕ ಹರೀಶ್ ರಾಣಾ, ಮಂಗಳವಾರ (ಮಾ.24)...